Shuru
Apke Nagar Ki App…
ALTAF,❤️🙏
More news from Mysuru and nearby areas
- *ಭಾರತ ನಲ್ಲಿ ವೈರಲ್*1
- ಮಳವಳ್ಳಿ ಅಖಂಡ ಬಾರತ ನಿರ್ಮಾಣದಲ್ಲಿ ಸುತ್ತೂರು ಗುರುಪರಂಪರೆಯ ಕೂಡುಗೆ ಅಪಾರ-ಶ್ರೀಗೌರಿಶಂಕರ ಸ್ವಾಮಿ ಹೇಳಿಕೆ • ಸುತ್ತೂರು ಶ್ರೀಗಳ ದಿವ್ಯಸಾದ್ಯದಲ್ಲಿ ದ್ವಜಾರೋಹಣ-ಮಂಟಪ-ವೇದಿಕೆ ಹಾಗೂ ದ್ವಾರಗಳ ಉದ್ಘಾಟನೆ • ಮಳವಳ್ಳಿ ಇತಿಹಾಸದಲ್ಲೆ ಮರೆಯಲಾಗದ ಸುತ್ತೂರು ಜಯಂತಿ ವೀಕ್ಷಣೆ ಹರಿದು ಬರುತ್ತಿರುವ ಭಕ್ತ ಸಾಗರ ಮಳವಳ್ಳಿ:ಅಖಂಡ ಬಾರತ ನಿರ್ಮಾಣದಲ್ಲಿ ಸುತ್ತೂರು ಗುರುಪರಂಪರೆಯ ಪಾತ್ರ ಮತ್ತು ಕೂಡುಗೆ ಅಪಾರವಾಗಿದೆ ಎಂದು ಮದ್ಲಾರಯ್ಯನಹುಂಡಿ ವಿರಕ್ತ ಮಠದ ಶ್ರೀ ಗೌರಿಶಂಕರ ಸ್ವಾಮಿಗಳು ಹೇಳಿದರು. ಪಟ್ಟಣದ ಶಾಂತಿ ಕಾಲೇಜಿನ ಮುಂಭಾಗದ ಪುರಸಭೆ ಜಾಗದಲ್ಲಿ ಸುತ್ತೂರಿನ ಶ್ರೀ ಶಿವರಾತ್ರಿ ದೆಶಿಕೇಂದ್ರ ಮಹಾಸ್ವಾಮಿಗಳ ದಿವ್ಯಸಾನಿದ್ಯದಲ್ಲಿ,ದೇಗುಲ ಮಠದ ಡಾ.ಶ್ರೀ ಚನ್ನಬಸ್ವಸ್ವಾಮಿಗಳ ದಿವ್ಯ ಸಮ್ಮುಖದಲ್ಲಿ ಅಯೋಜಿಸಿದ್ದ ಸುತ್ತೂರಿನ ಅದಿಜಗದ್ಗುರು ಶ್ರೀ ಶಿವರಾತ್ರಿಶ್ವರ ಶಿವಯೋಗಿಗಳರವರ ೧೦೬೬ನೇ ಜಯಂತಿ ಮಹೋತ್ಸವದ ದ್ವಜಾರೋಹಣ,ಮಂಟಪ,ವೇದಿಕೆ ಹಾಗೂ ದ್ವಾರಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಜಗದ್ಗುರು ಶ್ರೀ ಘನಲಿಂಗಶಿವಯೋಗಿ ವೇದಿಕೆ ಉದ್ಘಾಟಿಸಿ ಅವರು ಮಾತನಾಡಿದರು. ೧೦ ಶತಮಾನದಿಂದಲೂ ಅದಿಜಗದ್ಗರುಗಳು ಶೈಕ್ಷಣಿಕವಾಗಿ,ದಾರ್ಮಿಕವಾಗಿ,ಜ್ಞಾನಾದಾಸೋಹದ ಮೂಲಕ ಸರ್ವರಿಗೂ ಲೇಷನ್ನು ಬಯಸುತ್ತಾ,ದೇಶದ ಪ್ರಗತಿಯಲ್ಲಿ ತನ್ನದೆ ವಿಶೇಷ ಸ್ಥಾನವನ್ನು ಗಳಿಸಿದೆ,ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಒದಗಿಸಿ ಸರ್ವರನ್ನು ಮುಖ್ಯವಾಹಿನಿಗೆ ತರುವಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ ಎಂದ ಅವರು ಅಂತಹ ಮಹಾನ್ ಸಂತರ ಸ್ಮರಣೆ ಮಳವಳ್ಳಿಯಲ್ಲಿ ನಡೆಯುತ್ತಿರುವುದು ಅರ್ಶೀವಾದವೆನಿಸಿದೆ ಎಂದರು. ಸುತ್ತೂರಿನ ಅದಿಜಗದ್ಗರುಗಳ ಜಯಂತಿ ಮಳವಳ್ಳಿಯಲ್ಲಿ ಆಚರಣೆ ಅಗುತ್ತಿರುವುದು ,ಈ ಬಾಗದ ಜನರ ಪುಣ್ಯವಾಗಿದೆ,ಪರಮಪೂಜ್ಯರು ಒಂದು ವಾರ ಇದ್ದುಕೊಂಡು ಅಗಮಿಸುವ ಸರ್ವ ಭಕ್ತರಿಗೂ ದರ್ಶನ,ಅರ್ಶೀವಾದ ಬಾಗ್ಯ ಕ್ಷೇತ್ರಕ್ಕೆ ಜನರಿಗೆ ಸಿಗಲಿದೆ,ತಾಲೂಕಿನ ಎಲ್ಲರೂ ಜಯಂತಿ ಮಹೋತ್ಸವದ ಪ್ರತಿ ದಿನದ ಕಾರ್ಯಕ್ರಮಗಳಲ್ಲಿ ಬಾಗವಹಿಸುವ ಮೂಲಕ ಗುರು ಕೃಪೆಗೆ ಪಾತ್ರಾಗುವಂತೆ ತಿಳಿಸಿದರು. ಮೈಸೂರಿನ ವಿಶ್ವಮೈತ್ರಿ ಬೌಧ್ದವಿಹಾರದ ಡಾ.ಶ್ರೀ ಕಲ್ಯಾಣಸಿರಿ ಭಂತೇಜಿಯವರು ಸಿದ್ದಾಪ್ಪಾಜಿ ದ್ವಾರ ಉದ್ಘಾಟಿಸಿ ಮಾತನಾಡಿ, ಸರ್ವರಿಗೂ ಸಮಾನತೆಯ ಸಂದೇಶ ನೀಡಿದ ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠಕ್ಕೆ ಸಾವಿರಾರು ವರ್ಷಗಳ ಹೆಚ್ಚು ಇತಿಹಾಸವಿದ್ದು,ವಿಶ್ವದಲ್ಲೆ ಶ್ರೀಮಠವು ದಾರ್ಮಿಕ,ಅದ್ಯಾತ್ಮಿಕ,ಸಾಮಾಜಿಕ,ಸಾಂಸ್ಕೃತಿಕ ಇತಿಹಾಸದಲ್ಲೆ ಮಹತ್ತರ ಸ್ಥಾನ ಪಡೆದಿದೆ ಎಂದ ಅವರು ಸುತ್ತೂರು ಗುರುಪರಂಪರೆಯ ಜಯಂತಿ ಆಚರಣೆ ಪಟ್ಟಣದಲ್ಲಿ ನಡೆಯುತ್ತಿರುವುದು ಸಂತಸ ತಂದಿದೆ,ದೇಶದ ಪ್ರಥಮ ಪ್ರಜೆಗಳು ಕಾರ್ಯಕ್ರಮ ಉದ್ಗಾಟನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಬಸವತತ್ವಗಳನ್ನು ದೇಶದೆಲ್ಲೆಡೆ ಪಸರಿಸುತ್ತಾ,ಶರಣರಪರಂಪರೆಯನ್ನು ಮುಂದುವರೆಸಿಕೊAಡು ಬಂದಿರುವ ಸುತ್ತೂರು ಮಠದ ಕಾರ್ಯಗಳು,ಸೇವೆಗಳು ವಿಶ್ವಕ್ಕೆ ಮಾದರಿಯಾಗಿವೆ ಎಂದರು. ಕಾರ್ಯಕ್ರಮದಲ್ಲಿ ಮೈಸೂರಿನ ಹೊಸಮಠದ ಶ್ರೀ ಚಿದಾನಂದ ಸ್ವಾಮಿಗಳು ದ್ವಜಾರೋಹಣ ನೆರವೇರಿಸಿದರು,ಮೈಸೂರಿನ ನೀಲಕಂಠಸ್ವಾಮಿ ಮಠದ ಶ್ರೀ ಸಿದ್ದಮಲ್ಲಸ್ವಾಮಿಗಳು ಶ್ರೀ ಷಡಕ್ಷರದೇವ ಅನುಭವ ಮಂಟಪವನ್ನು,ಬೊಪ್ಪೆಗೌಡನ ಪುರದ ಧರೆಗೆ ದೊಡ್ಡವರು ಮಹಾಸಂಸ್ಥಾನ ಮಠದ ಮುಂದಿನ ನಿಯೋಜಿತ ಪೀಠಾಧಿಪತಿ ಶ್ರೀ ಹೀತೇಶ್ ಸಿದ್ದಲಿಂಗರಾಜೇ ಅರಸುರವರು ಶ್ರೀಮಂಟೆಸ್ವಾಮಿ ದ್ವಾರವನ್ನು ಉದ್ಘಾಟಿಸಿ ಸಂದೇಶ ನೀಡಿದರು. ಇತಿಹಾಸದಲ್ಲೆ ಮರೆಯಲಾಗದ ಸುತ್ತೂರು ಜಯಂತಿ ಮಹೋತ್ಸವಕ್ಕೆ ಭಕ್ತಸಾಗರ:ಪಟ್ಟಣದ ೩೩ ಎಕರೆ ಪುರಸಭೆ ಜಾಗದಲ್ಲಿ ಮಳವಳ್ಳಿ ಇತಿಹಾಸದಲ್ಲೆ ಪ್ರಪ್ರಥಮ ಬಾರಿಗೆ ಬೃಹತ್ ವಿಶಾಲವಾದ ವೇದಿಕೆಯಲ್ಲಿ ಅಯೋಜನೆಗೊಂಡಿರುವ ಅದಿಜಗದ್ಗರುಗಳು ಜಯಂತಿ ಮಹೋತ್ಸವದ ಕಾರ್ಯಕ್ರಮಗಳನ್ನು ಕಣ್ತುಂಬಿಕೊಳ್ಳಲು ರಾಜ್ಯದ ನಾನಾ ಭಾಗಗಳಿಂದ ಭಕ್ತ ಸಾಗರವೇ ಹರಿದು ಬರುತ್ತಿದೆ.ಬರುವಂತಹ ಲಕ್ಷಾಂತರ ಜನರಿಗೂ ಜಯಂತಿ ಮಹೋತ್ಸವ ಅಚರಣ ಸಮಿತಿ,ಕಾರ್ಯಕ್ರಮದ ವೀಕ್ಷಣೆಗೆ ಬೃಹದಾಕಾರದ ಎಲ್ ಇ ಡಿ ಸ್ಕಿçÃನ್,ಬೃಹತ್ ದಾಸೋಹ ವ್ಯವಸ್ಥೆ,ವಿಸ್ತಋವಾದ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿರುವುದರಿಂದ ಎಲ್ಲೆಡೆಯಿಂದ ಜನಸಾಗರ ಹರಿಉದ ಬರುತ್ತಿದೆ.ಕಾರ್ಯಕ್ರಮ ಯಶಸ್ವಿಗೆ ಜಿಲ್ಲಾ ಪೋಲಿಸ್ ಇಲಾಖೆ ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ,ಶಾಶಕರಾದ ಪಿ.ಎಂ.ನರೇAದ್ರಸ್ವಾಮಿ ,ಜಿಲ್ಲಾಧಿಕಾರಿ ಡಾ.ಕುಮಾರ್ ಅದಿಕಾರಿಗಳ ತಂಡ ಸುಲಲಿತ ಜಯಂತಿ ಆಚರಣೆಗೆ ಟೊಂಕಕಟ್ಟಿ ಹಗಳಿರುಳು ಸೇವೆ ನೀಡುತ್ತಿದೆ. ಕಾರ್ಯಕ್ರಮದಲ್ಲಿ ಮಂಟೆಸ್ವಾಮಿ ಮಠದ ಆಢಳಿತಾಧಿಕಾರಿ ಭರತ್ ರಾಜೇ ಅರಸು ಮಾತನಾಡಿದರು ಈ ಸಂದರ್ಭದಲ್ಲಿ ಸುತ್ತೂರು ಶ್ರೀಗಳು ಅಗಮಿಸಿದ ಶ್ರೀಗಳಿಗೆ ಗೌರವಿಸಲಾಯಿತು ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲ ಮಠದ ಶ್ರೀಗಳು,ಜಯಂತಿ ಮಹೋತ್ಸವ ಸಮಿತಿಯ ಪದಾಧಿಕಾರಿಗಳು,ವಿದ್ಯಾಪೀಠದ ಅದಿಕಾರಿಗಳು,ಸಾವಿರಾರು ಜನರು ಬಾಗವಹಿಸಿದ್ದರು.1