ಮಳವಳ್ಳಿ ಅಖಂಡ ಬಾರತ ನಿರ್ಮಾಣದಲ್ಲಿ ಸುತ್ತೂರು ಗುರುಪರಂಪರೆಯ ಕೂಡುಗೆ ಅಪಾರ-ಶ್ರೀಗೌರಿಶಂಕರ ಸ್ವಾಮಿ ಹೇಳಿಕೆ • ಸುತ್ತೂರು ಶ್ರೀಗಳ ದಿವ್ಯಸಾದ್ಯದಲ್ಲಿ ದ್ವಜಾರೋಹಣ-ಮಂಟಪ-ವೇದಿಕೆ ಹಾಗೂ ದ್ವಾರಗಳ ಉದ್ಘಾಟನೆ • ಮಳವಳ್ಳಿ ಇತಿಹಾಸದಲ್ಲೆ ಮರೆಯಲಾಗದ ಸುತ್ತೂರು ಜಯಂತಿ ವೀಕ್ಷಣೆ ಹರಿದು ಬರುತ್ತಿರುವ ಭಕ್ತ ಸಾಗರ ಮಳವಳ್ಳಿ:ಅಖಂಡ ಬಾರತ ನಿರ್ಮಾಣದಲ್ಲಿ ಸುತ್ತೂರು ಗುರುಪರಂಪರೆಯ ಪಾತ್ರ ಮತ್ತು ಕೂಡುಗೆ ಅಪಾರವಾಗಿದೆ ಎಂದು ಮದ್ಲಾರಯ್ಯನಹುಂಡಿ ವಿರಕ್ತ ಮಠದ ಶ್ರೀ ಗೌರಿಶಂಕರ ಸ್ವಾಮಿಗಳು ಹೇಳಿದರು. ಪಟ್ಟಣದ ಶಾಂತಿ ಕಾಲೇಜಿನ ಮುಂಭಾಗದ ಪುರಸಭೆ ಜಾಗದಲ್ಲಿ ಸುತ್ತೂರಿನ ಶ್ರೀ ಶಿವರಾತ್ರಿ ದೆಶಿಕೇಂದ್ರ ಮಹಾಸ್ವಾಮಿಗಳ ದಿವ್ಯಸಾನಿದ್ಯದಲ್ಲಿ,ದೇಗುಲ ಮಠದ ಡಾ.ಶ್ರೀ ಚನ್ನಬಸ್ವಸ್ವಾಮಿಗಳ ದಿವ್ಯ ಸಮ್ಮುಖದಲ್ಲಿ ಅಯೋಜಿಸಿದ್ದ ಸುತ್ತೂರಿನ ಅದಿಜಗದ್ಗುರು ಶ್ರೀ ಶಿವರಾತ್ರಿಶ್ವರ ಶಿವಯೋಗಿಗಳರವರ ೧೦೬೬ನೇ ಜಯಂತಿ ಮಹೋತ್ಸವದ ದ್ವಜಾರೋಹಣ,ಮಂಟಪ,ವೇದಿಕೆ ಹಾಗೂ ದ್ವಾರಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಜಗದ್ಗುರು ಶ್ರೀ ಘನಲಿಂಗಶಿವಯೋಗಿ ವೇದಿಕೆ ಉದ್ಘಾಟಿಸಿ ಅವರು ಮಾತನಾಡಿದರು. ೧೦ ಶತಮಾನದಿಂದಲೂ ಅದಿಜಗದ್ಗರುಗಳು ಶೈಕ್ಷಣಿಕವಾಗಿ,ದಾರ್ಮಿಕವಾಗಿ,ಜ್ಞಾನಾದಾಸೋಹದ ಮೂಲಕ ಸರ್ವರಿಗೂ ಲೇಷನ್ನು ಬಯಸುತ್ತಾ,ದೇಶದ ಪ್ರಗತಿಯಲ್ಲಿ ತನ್ನದೆ ವಿಶೇಷ ಸ್ಥಾನವನ್ನು ಗಳಿಸಿದೆ,ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಒದಗಿಸಿ ಸರ್ವರನ್ನು ಮುಖ್ಯವಾಹಿನಿಗೆ ತರುವಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ ಎಂದ ಅವರು ಅಂತಹ ಮಹಾನ್ ಸಂತರ ಸ್ಮರಣೆ ಮಳವಳ್ಳಿಯಲ್ಲಿ ನಡೆಯುತ್ತಿರುವುದು ಅರ್ಶೀವಾದವೆನಿಸಿದೆ ಎಂದರು. ಸುತ್ತೂರಿನ ಅದಿಜಗದ್ಗರುಗಳ ಜಯಂತಿ ಮಳವಳ್ಳಿಯಲ್ಲಿ ಆಚರಣೆ ಅಗುತ್ತಿರುವುದು ,ಈ ಬಾಗದ ಜನರ ಪುಣ್ಯವಾಗಿದೆ,ಪರಮಪೂಜ್ಯರು ಒಂದು ವಾರ ಇದ್ದುಕೊಂಡು ಅಗಮಿಸುವ ಸರ್ವ ಭಕ್ತರಿಗೂ ದರ್ಶನ,ಅರ್ಶೀವಾದ ಬಾಗ್ಯ ಕ್ಷೇತ್ರಕ್ಕೆ ಜನರಿಗೆ ಸಿಗಲಿದೆ,ತಾಲೂಕಿನ ಎಲ್ಲರೂ ಜಯಂತಿ ಮಹೋತ್ಸವದ ಪ್ರತಿ ದಿನದ ಕಾರ್ಯಕ್ರಮಗಳಲ್ಲಿ ಬಾಗವಹಿಸುವ ಮೂಲಕ ಗುರು ಕೃಪೆಗೆ ಪಾತ್ರಾಗುವಂತೆ ತಿಳಿಸಿದರು. ಮೈಸೂರಿನ ವಿಶ್ವಮೈತ್ರಿ ಬೌಧ್ದವಿಹಾರದ ಡಾ.ಶ್ರೀ ಕಲ್ಯಾಣಸಿರಿ ಭಂತೇಜಿಯವರು ಸಿದ್ದಾಪ್ಪಾಜಿ ದ್ವಾರ ಉದ್ಘಾಟಿಸಿ ಮಾತನಾಡಿ, ಸರ್ವರಿಗೂ ಸಮಾನತೆಯ ಸಂದೇಶ ನೀಡಿದ ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠಕ್ಕೆ ಸಾವಿರಾರು ವರ್ಷಗಳ ಹೆಚ್ಚು ಇತಿಹಾಸವಿದ್ದು,ವಿಶ್ವದಲ್ಲೆ ಶ್ರೀಮಠವು ದಾರ್ಮಿಕ,ಅದ್ಯಾತ್ಮಿಕ,ಸಾಮಾಜಿಕ,ಸಾಂಸ್ಕೃತಿಕ ಇತಿಹಾಸದಲ್ಲೆ ಮಹತ್ತರ ಸ್ಥಾನ ಪಡೆದಿದೆ ಎಂದ ಅವರು ಸುತ್ತೂರು ಗುರುಪರಂಪರೆಯ ಜಯಂತಿ ಆಚರಣೆ ಪಟ್ಟಣದಲ್ಲಿ ನಡೆಯುತ್ತಿರುವುದು ಸಂತಸ ತಂದಿದೆ,ದೇಶದ ಪ್ರಥಮ ಪ್ರಜೆಗಳು ಕಾರ್ಯಕ್ರಮ ಉದ್ಗಾಟನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಬಸವತತ್ವಗಳನ್ನು ದೇಶದೆಲ್ಲೆಡೆ ಪಸರಿಸುತ್ತಾ,ಶರಣರಪರಂಪರೆಯನ್ನು ಮುಂದುವರೆಸಿಕೊAಡು ಬಂದಿರುವ ಸುತ್ತೂರು ಮಠದ ಕಾರ್ಯಗಳು,ಸೇವೆಗಳು ವಿಶ್ವಕ್ಕೆ ಮಾದರಿಯಾಗಿವೆ ಎಂದರು. ಕಾರ್ಯಕ್ರಮದಲ್ಲಿ ಮೈಸೂರಿನ ಹೊಸಮಠದ ಶ್ರೀ ಚಿದಾನಂದ ಸ್ವಾಮಿಗಳು ದ್ವಜಾರೋಹಣ ನೆರವೇರಿಸಿದರು,ಮೈಸೂರಿನ ನೀಲಕಂಠಸ್ವಾಮಿ ಮಠದ ಶ್ರೀ ಸಿದ್ದಮಲ್ಲಸ್ವಾಮಿಗಳು ಶ್ರೀ ಷಡಕ್ಷರದೇವ ಅನುಭವ ಮಂಟಪವನ್ನು,ಬೊಪ್ಪೆಗೌಡನ ಪುರದ ಧರೆಗೆ ದೊಡ್ಡವರು ಮಹಾಸಂಸ್ಥಾನ ಮಠದ ಮುಂದಿನ ನಿಯೋಜಿತ ಪೀಠಾಧಿಪತಿ ಶ್ರೀ ಹೀತೇಶ್ ಸಿದ್ದಲಿಂಗರಾಜೇ ಅರಸುರವರು ಶ್ರೀಮಂಟೆಸ್ವಾಮಿ ದ್ವಾರವನ್ನು ಉದ್ಘಾಟಿಸಿ ಸಂದೇಶ ನೀಡಿದರು. ಇತಿಹಾಸದಲ್ಲೆ ಮರೆಯಲಾಗದ ಸುತ್ತೂರು ಜಯಂತಿ ಮಹೋತ್ಸವಕ್ಕೆ ಭಕ್ತಸಾಗರ:ಪಟ್ಟಣದ ೩೩ ಎಕರೆ ಪುರಸಭೆ ಜಾಗದಲ್ಲಿ ಮಳವಳ್ಳಿ ಇತಿಹಾಸದಲ್ಲೆ ಪ್ರಪ್ರಥಮ ಬಾರಿಗೆ ಬೃಹತ್ ವಿಶಾಲವಾದ ವೇದಿಕೆಯಲ್ಲಿ ಅಯೋಜನೆಗೊಂಡಿರುವ ಅದಿಜಗದ್ಗರುಗಳು ಜಯಂತಿ ಮಹೋತ್ಸವದ ಕಾರ್ಯಕ್ರಮಗಳನ್ನು ಕಣ್ತುಂಬಿಕೊಳ್ಳಲು ರಾಜ್ಯದ ನಾನಾ ಭಾಗಗಳಿಂದ ಭಕ್ತ ಸಾಗರವೇ ಹರಿದು ಬರುತ್ತಿದೆ.ಬರುವಂತಹ ಲಕ್ಷಾಂತರ ಜನರಿಗೂ ಜಯಂತಿ ಮಹೋತ್ಸವ ಅಚರಣ ಸಮಿತಿ,ಕಾರ್ಯಕ್ರಮದ ವೀಕ್ಷಣೆಗೆ ಬೃಹದಾಕಾರದ ಎಲ್ ಇ ಡಿ ಸ್ಕಿçÃನ್,ಬೃಹತ್ ದಾಸೋಹ ವ್ಯವಸ್ಥೆ,ವಿಸ್ತಋವಾದ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿರುವುದರಿಂದ ಎಲ್ಲೆಡೆಯಿಂದ ಜನಸಾಗರ ಹರಿಉದ ಬರುತ್ತಿದೆ.ಕಾರ್ಯಕ್ರಮ ಯಶಸ್ವಿಗೆ ಜಿಲ್ಲಾ ಪೋಲಿಸ್ ಇಲಾಖೆ ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ,ಶಾಶಕರಾದ ಪಿ.ಎಂ.ನರೇAದ್ರಸ್ವಾಮಿ ,ಜಿಲ್ಲಾಧಿಕಾರಿ ಡಾ.ಕುಮಾರ್ ಅದಿಕಾರಿಗಳ ತಂಡ ಸುಲಲಿತ ಜಯಂತಿ ಆಚರಣೆಗೆ ಟೊಂಕಕಟ್ಟಿ ಹಗಳಿರುಳು ಸೇವೆ ನೀಡುತ್ತಿದೆ. ಕಾರ್ಯಕ್ರಮದಲ್ಲಿ ಮಂಟೆಸ್ವಾಮಿ ಮಠದ ಆಢಳಿತಾಧಿಕಾರಿ ಭರತ್ ರಾಜೇ ಅರಸು ಮಾತನಾಡಿದರು ಈ ಸಂದರ್ಭದಲ್ಲಿ ಸುತ್ತೂರು ಶ್ರೀಗಳು ಅಗಮಿಸಿದ ಶ್ರೀಗಳಿಗೆ ಗೌರವಿಸಲಾಯಿತು ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲ ಮಠದ ಶ್ರೀಗಳು,ಜಯಂತಿ ಮಹೋತ್ಸವ ಸಮಿತಿಯ ಪದಾಧಿಕಾರಿಗಳು,ವಿದ್ಯಾಪೀಠದ ಅದಿಕಾರಿಗಳು,ಸಾವಿರಾರು ಜನರು ಬಾಗವಹಿಸಿದ್ದರು.
ಮಳವಳ್ಳಿ ಅಖಂಡ ಬಾರತ ನಿರ್ಮಾಣದಲ್ಲಿ ಸುತ್ತೂರು ಗುರುಪರಂಪರೆಯ ಕೂಡುಗೆ ಅಪಾರ-ಶ್ರೀಗೌರಿಶಂಕರ ಸ್ವಾಮಿ ಹೇಳಿಕೆ • ಸುತ್ತೂರು ಶ್ರೀಗಳ ದಿವ್ಯಸಾದ್ಯದಲ್ಲಿ ದ್ವಜಾರೋಹಣ-ಮಂಟಪ-ವೇದಿಕೆ ಹಾಗೂ ದ್ವಾರಗಳ ಉದ್ಘಾಟನೆ • ಮಳವಳ್ಳಿ ಇತಿಹಾಸದಲ್ಲೆ ಮರೆಯಲಾಗದ ಸುತ್ತೂರು ಜಯಂತಿ ವೀಕ್ಷಣೆ ಹರಿದು ಬರುತ್ತಿರುವ ಭಕ್ತ ಸಾಗರ ಮಳವಳ್ಳಿ:ಅಖಂಡ ಬಾರತ ನಿರ್ಮಾಣದಲ್ಲಿ ಸುತ್ತೂರು ಗುರುಪರಂಪರೆಯ ಪಾತ್ರ ಮತ್ತು ಕೂಡುಗೆ ಅಪಾರವಾಗಿದೆ ಎಂದು ಮದ್ಲಾರಯ್ಯನಹುಂಡಿ ವಿರಕ್ತ ಮಠದ ಶ್ರೀ ಗೌರಿಶಂಕರ ಸ್ವಾಮಿಗಳು ಹೇಳಿದರು. ಪಟ್ಟಣದ ಶಾಂತಿ ಕಾಲೇಜಿನ ಮುಂಭಾಗದ ಪುರಸಭೆ ಜಾಗದಲ್ಲಿ ಸುತ್ತೂರಿನ ಶ್ರೀ ಶಿವರಾತ್ರಿ ದೆಶಿಕೇಂದ್ರ ಮಹಾಸ್ವಾಮಿಗಳ ದಿವ್ಯಸಾನಿದ್ಯದಲ್ಲಿ,ದೇಗುಲ ಮಠದ ಡಾ.ಶ್ರೀ ಚನ್ನಬಸ್ವಸ್ವಾಮಿಗಳ ದಿವ್ಯ ಸಮ್ಮುಖದಲ್ಲಿ ಅಯೋಜಿಸಿದ್ದ ಸುತ್ತೂರಿನ ಅದಿಜಗದ್ಗುರು ಶ್ರೀ ಶಿವರಾತ್ರಿಶ್ವರ ಶಿವಯೋಗಿಗಳರವರ ೧೦೬೬ನೇ ಜಯಂತಿ ಮಹೋತ್ಸವದ ದ್ವಜಾರೋಹಣ,ಮಂಟಪ,ವೇದಿಕೆ ಹಾಗೂ ದ್ವಾರಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಜಗದ್ಗುರು ಶ್ರೀ ಘನಲಿಂಗಶಿವಯೋಗಿ ವೇದಿಕೆ ಉದ್ಘಾಟಿಸಿ ಅವರು ಮಾತನಾಡಿದರು. ೧೦ ಶತಮಾನದಿಂದಲೂ ಅದಿಜಗದ್ಗರುಗಳು ಶೈಕ್ಷಣಿಕವಾಗಿ,ದಾರ್ಮಿಕವಾಗಿ,ಜ್ಞಾನಾದಾಸೋಹದ ಮೂಲಕ ಸರ್ವರಿಗೂ ಲೇಷನ್ನು ಬಯಸುತ್ತಾ,ದೇಶದ ಪ್ರಗತಿಯಲ್ಲಿ ತನ್ನದೆ ವಿಶೇಷ ಸ್ಥಾನವನ್ನು ಗಳಿಸಿದೆ,ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಒದಗಿಸಿ ಸರ್ವರನ್ನು ಮುಖ್ಯವಾಹಿನಿಗೆ ತರುವಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ ಎಂದ ಅವರು ಅಂತಹ ಮಹಾನ್ ಸಂತರ ಸ್ಮರಣೆ ಮಳವಳ್ಳಿಯಲ್ಲಿ ನಡೆಯುತ್ತಿರುವುದು ಅರ್ಶೀವಾದವೆನಿಸಿದೆ ಎಂದರು. ಸುತ್ತೂರಿನ ಅದಿಜಗದ್ಗರುಗಳ ಜಯಂತಿ ಮಳವಳ್ಳಿಯಲ್ಲಿ ಆಚರಣೆ ಅಗುತ್ತಿರುವುದು ,ಈ ಬಾಗದ ಜನರ ಪುಣ್ಯವಾಗಿದೆ,ಪರಮಪೂಜ್ಯರು ಒಂದು ವಾರ ಇದ್ದುಕೊಂಡು ಅಗಮಿಸುವ ಸರ್ವ ಭಕ್ತರಿಗೂ ದರ್ಶನ,ಅರ್ಶೀವಾದ ಬಾಗ್ಯ ಕ್ಷೇತ್ರಕ್ಕೆ ಜನರಿಗೆ ಸಿಗಲಿದೆ,ತಾಲೂಕಿನ ಎಲ್ಲರೂ ಜಯಂತಿ ಮಹೋತ್ಸವದ ಪ್ರತಿ ದಿನದ ಕಾರ್ಯಕ್ರಮಗಳಲ್ಲಿ ಬಾಗವಹಿಸುವ ಮೂಲಕ ಗುರು ಕೃಪೆಗೆ ಪಾತ್ರಾಗುವಂತೆ ತಿಳಿಸಿದರು. ಮೈಸೂರಿನ ವಿಶ್ವಮೈತ್ರಿ ಬೌಧ್ದವಿಹಾರದ ಡಾ.ಶ್ರೀ ಕಲ್ಯಾಣಸಿರಿ ಭಂತೇಜಿಯವರು ಸಿದ್ದಾಪ್ಪಾಜಿ ದ್ವಾರ ಉದ್ಘಾಟಿಸಿ ಮಾತನಾಡಿ, ಸರ್ವರಿಗೂ ಸಮಾನತೆಯ ಸಂದೇಶ ನೀಡಿದ ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠಕ್ಕೆ ಸಾವಿರಾರು ವರ್ಷಗಳ ಹೆಚ್ಚು ಇತಿಹಾಸವಿದ್ದು,ವಿಶ್ವದಲ್ಲೆ ಶ್ರೀಮಠವು ದಾರ್ಮಿಕ,ಅದ್ಯಾತ್ಮಿಕ,ಸಾಮಾಜಿಕ,ಸಾಂಸ್ಕೃತಿಕ ಇತಿಹಾಸದಲ್ಲೆ ಮಹತ್ತರ ಸ್ಥಾನ ಪಡೆದಿದೆ ಎಂದ ಅವರು ಸುತ್ತೂರು ಗುರುಪರಂಪರೆಯ ಜಯಂತಿ ಆಚರಣೆ ಪಟ್ಟಣದಲ್ಲಿ ನಡೆಯುತ್ತಿರುವುದು ಸಂತಸ ತಂದಿದೆ,ದೇಶದ ಪ್ರಥಮ ಪ್ರಜೆಗಳು ಕಾರ್ಯಕ್ರಮ ಉದ್ಗಾಟನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಬಸವತತ್ವಗಳನ್ನು ದೇಶದೆಲ್ಲೆಡೆ ಪಸರಿಸುತ್ತಾ,ಶರಣರಪರಂಪರೆಯನ್ನು ಮುಂದುವರೆಸಿಕೊAಡು ಬಂದಿರುವ ಸುತ್ತೂರು ಮಠದ ಕಾರ್ಯಗಳು,ಸೇವೆಗಳು ವಿಶ್ವಕ್ಕೆ ಮಾದರಿಯಾಗಿವೆ ಎಂದರು. ಕಾರ್ಯಕ್ರಮದಲ್ಲಿ ಮೈಸೂರಿನ ಹೊಸಮಠದ ಶ್ರೀ ಚಿದಾನಂದ ಸ್ವಾಮಿಗಳು ದ್ವಜಾರೋಹಣ ನೆರವೇರಿಸಿದರು,ಮೈಸೂರಿನ ನೀಲಕಂಠಸ್ವಾಮಿ ಮಠದ ಶ್ರೀ ಸಿದ್ದಮಲ್ಲಸ್ವಾಮಿಗಳು ಶ್ರೀ ಷಡಕ್ಷರದೇವ ಅನುಭವ ಮಂಟಪವನ್ನು,ಬೊಪ್ಪೆಗೌಡನ ಪುರದ ಧರೆಗೆ ದೊಡ್ಡವರು ಮಹಾಸಂಸ್ಥಾನ ಮಠದ ಮುಂದಿನ ನಿಯೋಜಿತ ಪೀಠಾಧಿಪತಿ ಶ್ರೀ ಹೀತೇಶ್ ಸಿದ್ದಲಿಂಗರಾಜೇ ಅರಸುರವರು ಶ್ರೀಮಂಟೆಸ್ವಾಮಿ ದ್ವಾರವನ್ನು ಉದ್ಘಾಟಿಸಿ ಸಂದೇಶ ನೀಡಿದರು. ಇತಿಹಾಸದಲ್ಲೆ ಮರೆಯಲಾಗದ ಸುತ್ತೂರು ಜಯಂತಿ ಮಹೋತ್ಸವಕ್ಕೆ ಭಕ್ತಸಾಗರ:ಪಟ್ಟಣದ ೩೩ ಎಕರೆ ಪುರಸಭೆ ಜಾಗದಲ್ಲಿ ಮಳವಳ್ಳಿ ಇತಿಹಾಸದಲ್ಲೆ ಪ್ರಪ್ರಥಮ ಬಾರಿಗೆ ಬೃಹತ್ ವಿಶಾಲವಾದ ವೇದಿಕೆಯಲ್ಲಿ ಅಯೋಜನೆಗೊಂಡಿರುವ ಅದಿಜಗದ್ಗರುಗಳು ಜಯಂತಿ ಮಹೋತ್ಸವದ ಕಾರ್ಯಕ್ರಮಗಳನ್ನು ಕಣ್ತುಂಬಿಕೊಳ್ಳಲು ರಾಜ್ಯದ ನಾನಾ ಭಾಗಗಳಿಂದ ಭಕ್ತ ಸಾಗರವೇ ಹರಿದು ಬರುತ್ತಿದೆ.ಬರುವಂತಹ ಲಕ್ಷಾಂತರ ಜನರಿಗೂ ಜಯಂತಿ ಮಹೋತ್ಸವ ಅಚರಣ ಸಮಿತಿ,ಕಾರ್ಯಕ್ರಮದ ವೀಕ್ಷಣೆಗೆ ಬೃಹದಾಕಾರದ ಎಲ್ ಇ ಡಿ ಸ್ಕಿçÃನ್,ಬೃಹತ್ ದಾಸೋಹ ವ್ಯವಸ್ಥೆ,ವಿಸ್ತಋವಾದ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿರುವುದರಿಂದ ಎಲ್ಲೆಡೆಯಿಂದ ಜನಸಾಗರ ಹರಿಉದ ಬರುತ್ತಿದೆ.ಕಾರ್ಯಕ್ರಮ ಯಶಸ್ವಿಗೆ ಜಿಲ್ಲಾ ಪೋಲಿಸ್ ಇಲಾಖೆ ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ,ಶಾಶಕರಾದ ಪಿ.ಎಂ.ನರೇAದ್ರಸ್ವಾಮಿ ,ಜಿಲ್ಲಾಧಿಕಾರಿ ಡಾ.ಕುಮಾರ್ ಅದಿಕಾರಿಗಳ ತಂಡ ಸುಲಲಿತ ಜಯಂತಿ ಆಚರಣೆಗೆ ಟೊಂಕಕಟ್ಟಿ ಹಗಳಿರುಳು ಸೇವೆ ನೀಡುತ್ತಿದೆ. ಕಾರ್ಯಕ್ರಮದಲ್ಲಿ ಮಂಟೆಸ್ವಾಮಿ ಮಠದ ಆಢಳಿತಾಧಿಕಾರಿ ಭರತ್ ರಾಜೇ ಅರಸು ಮಾತನಾಡಿದರು ಈ ಸಂದರ್ಭದಲ್ಲಿ ಸುತ್ತೂರು ಶ್ರೀಗಳು ಅಗಮಿಸಿದ ಶ್ರೀಗಳಿಗೆ ಗೌರವಿಸಲಾಯಿತು ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲ ಮಠದ ಶ್ರೀಗಳು,ಜಯಂತಿ ಮಹೋತ್ಸವ ಸಮಿತಿಯ ಪದಾಧಿಕಾರಿಗಳು,ವಿದ್ಯಾಪೀಠದ ಅದಿಕಾರಿಗಳು,ಸಾವಿರಾರು ಜನರು ಬಾಗವಹಿಸಿದ್ದರು.
- Mhamhod rafiq SavanurHubballi, Dharwad🙏on 22 December
- Nararaj NararajKoppal, Karnataka🙏on 19 December
- ಹನೂರು: ಒಳಮೀಸಲಾತಿ ಕುರಿತಾಗಿ ನಾಗಮೋಹನ್ ದಾಸ್ ಸಮಿತಿ ನೀಡಿರುವ ವರದಿ ಅವೈಜ್ಞಾನಿಕವಾಗಿದ್ದು, ರೋಸ್ಟರ್ ಬಿಂದುಗಳ ಹಂಚಿಕೆಯಲ್ಲಿ ಬಲಗೈ ಹೊಲಯ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಸೋಮವಾರ ಹನೂರು ಪಟ್ಟಣದಲ್ಲಿ ಬಲಗೈ ಸಮುದಾಯದವರು ಪ್ರತಿಭಟನೆ ನಡೆಸಿದರು. ಹನೂರು ತಾಲೂಕು ಹಾಗೂ ಚಾಮರಾಜನಗರ ಜಿಲ್ಲಾ ಬಲಗೈ ಸಮುದಾಯದ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಹನೂರು ಮತ್ತು ಕೊಳ್ಳೇಗಾಲ ತಾಲೂಕಿನ ವಿವಿಧ ಗ್ರಾಮಗಳಿಂದ ಸಂಘಟನೆಗಳು, ಮುಖಂಡರು ಹಾಗೂ ಮಹಿಳೆಯರು ಭಾಗವಹಿಸಿದರು. ಪ್ರತಿಭಟನಾಕಾರರು ಮಹದೇಶ್ವರ ಕ್ರೀಡಾಂಗಣದಿಂದ ಮೆರವಣಿಗೆ ನಡೆಸಿ ಕೆಂಪೇಗೌಡ ವೃತ್ತ, ಖಾಸಗಿ ಬಸ್ ನಿಲ್ದಾಣ, ಡಾ. ಬಿ.ಆರ್. ಅಂಬೇಡ್ಕರ್ ಸರ್ಕಲ್ ಮೂಲಕ ತಹಶೀಲ್ದಾರ್ ಕಚೇರಿಗೆ ತೆರಳಿ ತಹಶೀಲ್ದಾರ್ ಚೈತ್ರ ಅವರಿಗೆ ಮನವಿ ಪತ್ರ ಸಲ್ಲಿಸಿದರು. ನಾಗಮೋಹನ್ ದಾಸ್ ವರದಿಯನ್ನು ತಕ್ಷಣವೇ ರದ್ದುಪಡಿಸಿ ಸಮುದಾಯಕ್ಕೆ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಹೋರಾಟಗಾರರು ಎಚ್ಚರಿಸಿದರು. ಈ ಸಂದರ್ಭದಲ್ಲಿ ಹಲವು ಮುಖಂಡರು ಉಪಸ್ಥಿತರಿದ್ದರು.2
- ಇಂದು ರಾಜ್ಯಾದ್ಯಂತ ಎಲ್ಲಾ ರೈಲ್ವೆ ನಿಲ್ದಾಣ ಮುಂದೆ ಕರವೇ ಪ್ರತಿಭಟನೆ ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಮುಂಭಾಗ & MDDTI ಟ್ರೈನಿಂಗ್ ಸೆಂಟರ್ ಮುಂದೆ ಪ್ರತಿಭಟನೆ ಪ್ರತಿಭಟನೆ ಹಿನ್ನಲ್ಲೆ ರೈಲ್ವೆ ನಿಲ್ದಾಣ ಮುಂಭಾಗ ಬೀಗಿ ಪೊಲೀಸ್ ಬಂದೋಬಸ್ತ್ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ರೈಲ್ವೆ ನಿಲ್ದಾಣ ಮುಂಭಾಗ ಐವತ್ತಕ್ಕೂ ಹೆಚ್ಚು ಪೋಲೀಸ್ ಸಿಬ್ಬಂದಿ ನಿಯೋಜನೆ ಎರಡು ಬಿಎಂಟಿಸಿ ಬಸ್ ಗಳನ್ನ ನೀಯೋಜನೆ ಮಾಡಲಾಗಿದೆ. ಡಿವಿಜನಲ್ ರೈಲ್ವೆ ಮ್ಯಾನೇಜರ್ ಕಛೇರಿ ಮುಂದೆ ಕರವೇ ಕಾರ್ಯಕರ್ತರು ಪ್ರತಿಭಟನೆ.*ರಾಜ್ಯದ ಕೇಂದ್ರ ಮಂತ್ರಿಗಳ ವಿರುದ್ದ ಘೋಷಣೆ ಕೂಗಿ ಪ್ರತಿಭಟನೆ ಕೇಂದ್ರ ಸರ್ಕಾರ ಕನ್ನಡಗರಿಗೆ ಅನ್ಯಾಯ ಮಾಡುತ್ತಿದೆ ಎಂದು ಆಕ್ರೋಶ..ಬೇಕೆ ಬೇಕೆ ನ್ಯಾಯ ಬೇಕು ಎನ್ನುತ್ತಿರುವ ಕಾರ್ಯಕರ್ತರು ರೈಲ್ವೆ ಇಲಾಖೆಗೆ ದಿಕ್ಕಾರ ಕೂಗಿದ ಪ್ರತಿಭಟನೆಕಾರರು.* ಮುಂಬಡ್ತಿಯ ನಡ್ಸತಿರೋ ಪರೀಕ್ಷೆ ಬರಿ ಹಿಂದಿ ಇಂಗ್ಲಿಷ್ ಅಲ್ಲಿ ಮಾಡ್ತಿದ್ದಾರೆ ಕನ್ನಡ ವಿದ್ಯಾರ್ಥಿಗಳ ಬಾಯಿಗೆ ಮಣ್ಣು ಹಾಕುವ ಕೆಲಸ ಮಾಡ್ತಿದ್ದಾರೆ ಕುಮಾರಸ್ವಾಮಿ, ಶೋಬಾ ಕರಂದ್ಲಾಜ್,ಪ್ರಹ್ಲಾದ ಜೋಶಿ, ಯಾಕೆ ಈ ಬಗ್ಗೆ ಮಾತಾಡ್ತಿಲ್ಲ ರಾಜ್ಯ ಸಚಿವರ ಮನೆ ಮುಂದೆ ಹೋರಾಟ ಮಾಡ್ತಾರೆ ರೈಲ್ವೆಯಲ್ಲಿ ಕೆಲಸ ಮಾಡ್ತಿರುವ ಕನ್ನಡಿಗರಿಗೆ ಹಿಂದಿ ಬರೋದಿಲ್ಲ ಉತ್ತರ ಭಾರತದವರಿಗೆ ಮಾತ್ರ ಅನುಕೂಲ ಆಗುವಂತೆ ಹಿಂದಿ ಇಂಗ್ಲಿಷ್ ಅಲ್ಲಿ ಪರೀಕ್ಷೆ ಕನ್ನಡ ಅಭ್ಯರ್ಥಿಗಳಿಗೆ ಮೋಸ ಆಗಲು ಬಿಡಲ್ಲ ಮುಂದಿನ ದಿನಗಳಲ್ಲಿ ಉಗ್ರವಾದ ಪ್ರತಿಭಟನೆ ಮಾಡುತ್ತೇವೆ ಬೈಟ್ : ಸಣ್ಣೀರಪ್ಪ, ಕನ್ನಡಪರ ಹೋರಟಗಾರ1
- Post by ಅರವಿಂದ್ ರಾಜೀವ್1
- ಬೆಂಗಳೂರು : ಮತ್ತಿಕೆರೆಯ ಜೆ.ಪಿ.ಪಾರ್ಕ್ ಬಳಿಯ ಕ್ರೀಡಾಂಗಣದಲ್ಲಿ ಸಾಮಾಜಿಕ ಕಾರ್ಯಕರ್ತ ವೆಂಕಟೇಶಮೂರ್ತಿ, ಪಾಲಿಕೆ ಮಾಜಿ ಸದಸ್ಯ ವೇಲುನಾಯಕರ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಎಲ್ಲಿ ನೋಡಿದರೂ ಜನಸಾಗರ, ಸಹಸ್ರಾರು ಭಕ್ತಾಧಿಗಳ ಜಯಘೋಷಣೆಗಳ ಮುಗಿಲು ಮುಟ್ಟಿದವು. ಗೋವಿಂದಾ.... ಗೋವಿಂದಾ... ಶ್ರೀನಿವಾಸ... ವೆಂಕಟೇಶ್ವರ ಘೋಷಣೆಗಳು ಕೂಗುತ್ತಾ ದೇವರ ಸ್ಮರಣೆಯನ್ನು ಮಾಡಿದರೆ ಭಕ್ತಾಧಿಗಳು ದೇವರ ಸ್ಮರಣೆಯಲ್ಲಿ ತಲೆದೂಗಿದರು. ಶ್ರೀ ಲಕ್ಷ್ಮಿ ವೆಂಕಟೇಶ್ವರಸ್ವಾಮಿಯ ದೇವಾಲಯದಿಂದ ಶ್ರೀ ಲಕ್ಷ್ಮಿ ವೆಂಕಟೇಶ್ವರಸ್ವಾಮಿ ರಥೋತ್ಸವ, ಉತ್ಸವಮೂರ್ತಿಯ ಮೆರವಣಿಗೆ ಮತ್ತಿಕೆರೆ, ಯಶವಂತಪುರ ವ್ಯಾಪ್ತಿಯ ಪ್ರಮುಖ ರಸ್ತೆ ರಾಜ ಬೀದಿಗಳಲ್ಲಿ ಸಾಗಿಬಂದಾಗ ರಸ್ತೆಯ ಎರಡು ಬದಿಯಲ್ಲಿ ಭಕ್ತಾಧಿಗಳು ನಿಂತು ದೇವರ ದರ್ಶನ ಪಡೆದು ಪುನೀತರಾದರು ಹಾಗೂ ವಿವಿಧ ದೇವರುಗಳ ಪೂಜಾಕುಣಿತ, ಜಾನಪದ ಕಲೆಗಳ ಪ್ರದರ್ಶನ ನೋಡಿ ಕಣ್ತುಂಬಿಕೊಂಡರು. ರಥೋತ್ಸವ ಸಾಗಿ ಬಂದ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರ, ತಳಿರು-ತೋರಣ, ಬಣ್ಣಬಣ್ಣಗಳಿಂದ ಹೂವಿನ ಚಿತ್ತಾರ ಬಾಳೆಕಂದುಗಳನ್ನು ಕಂಬ-ಕಂಬಗಳಿಗೆ ಕಟ್ಟಿ ರಸ್ತೆಗಳನ್ನು ಶೃಂಗಾರ ಮಾಡಲಾಯಿತ್ತು. ಅದ್ದೂರಿ ಶ್ರೀನಿವಾಸ ಕಲ್ಯಾಣ ಮಹೋತ್ಸವಕ್ಕೆ ತಿರುಮಲ ದೇವಾಲಯದಿಂದ ಅರ್ಚಕರನ್ನು ಕರೆಯಿಸಲಾಯಿತು. ಶ್ರೀನಿವಾಸ ಕಲ್ಯಾಣೋತ್ಸವ ಪ್ರಾರಂಭವಾಗುತ್ತಿದ್ದಂತೆ ನೆರೆದಿದ್ದ ಭಕ್ತರು ಶ್ರೀನಿವಾಸನ ಸ್ಮರಣೆ ಮಾಡುತ್ತಾ ದೇವರ ಧ್ಯಾನ ಮಾಡಿದರು. ಈ ಕಾರ್ಯಕ್ರಮದಲ್ಲಿ ಹಿಂದೂಗಳ ಜೊತೆಗೆ ನೂರಾರು ಮುಸ್ಲೀಮರು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದರು. ನೆರೆದಿದ್ದ ಭಕ್ತಾಧಿಗಳಿಗೆ ತೊಂದರೆಯಾಂತೆ ಅವರಿದ್ದ ಸ್ಥಳಗಳಿಗೆ ತೆರಳಿ ಕುಡಿಯುವ ನೀರು ವಿತರಿಸಿದರು. ಅನ್ನಪ್ರಸಾದದ ಕೌಂಟರ್ನಲ್ಲಿ ಜನಸಂದಣಿ ಜಾಸ್ತಿಯಾಗುತ್ತಿದ್ದಂತೆ ಸ್ವಯಂ ಸೇವಕರಿಗೆ ಮುಸ್ಲೀಮರು ಸಾಥ್ ನೀಡಿದರು. ಮುಸ್ಲೀಂ ಮುಖಂಡ ಸೋಯಲ್ ಅಹಮ್ಮದ್ ಅವರು ವೈಯಕ್ತಿಕವಾಗಿ ನೀರಿನ ಬಾಟಲಿಗಳನ್ನು ಭಕ್ತರಿಗೆ ವಿತರಿಸಿದರು. ಸಾಮಾಜಿಕ ಕಾರ್ಯಕರ್ತ ವೆಂಕಟೇಶಮೂರ್ತಿ ಮಾತನಾಡಿ ಪ್ರತಿವರ್ಷ ಶ್ರೀನಿವಾಸ ಕಲ್ಯಾಣೋತ್ಸವ ನಡೆಸಿಕೊಂಡು ಬರಲಾಗುತ್ತಿದ್ದು, ಈ ವರ್ಷ ವೇಲುನಾಯಕರ್ ಮತ್ತು ಕೆಪಿಸಿಸಿ ವಕ್ತಾರೆ ಎಚ್.ಕುಸುಮಾ ಕುಸುಮಾ ಕುಟುಂಬ ಭಾಗಿಯಾಗಿ ಶ್ರೀನಿವಾಸ ಕಲ್ಯಾಣೋತ್ಸವ ಅದ್ದೂರಿಯಾಗಿ ನಡೆಯಲು ಸಹಕಾರ ನೀಡಿರುವುದರಿಂದ ಲಕ್ಷಾಂತರ ಭಕ್ತಾಧಿಗಳು ಪಾಲ್ಗೊಂಡಿದ್ದಾರೆ. ಎಲ್ಲರಿಗೂ ತಿರುಪತಿಯ ಲಡ್ಡು, ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಭಕ್ತರಿಗೆ ಭಗವಂತ ಒಳಿತು ಮಾಡಿ ಆರೋಗ್ಯ, ನೆಮ್ಮದಿ, ಶಾಂತಿಗೋಸ್ಕರ ಶ್ರೀನಿವಾಸಕಲ್ಯಾಣೋತ್ಸವ ನಡೆಸಲಾಗಿದೆ ಎಂದರು. ಕೆಪಿಸಿಸಿ ವಕ್ತಾರೆ ಕುಸುಮಾ ಮಾತನಾಡಿ ಧಾರ್ಮಿಕ ಕಾರ್ಯಕ್ರಮಗಳಿಂದ ಹಿಂದೂತ್ವ ಮತ್ತು ನಮ್ಮ ಧಾರ್ಮಿಕ ಪರಂಪರೆ ಮತ್ತಷ್ಟು ಗಟ್ಟಿಯಾಗಲು ನಾವೆಲ್ಲರೂ ಪ್ರೀತಿ ವಿಶ್ವಾಸ ನೆಮ್ಮದಿಯಿಂದ ಸಾಗಲು ದೇವರ ಉತ್ಸವಗಳು ಸಹಕಾರಿಯಾಗಿವೆ. ಬಿಬಿಎಂಪಿ ಮಾಜಿ ಸದಸ್ಯ ವೇಲುನಾಯರ್ ಕ್ಷೇತ್ರದ ಜನರು ಮತ್ತು ನಾಡಿನ ಜನರಿಗೆ ಭಗವಂತನ ಶ್ರೀರಕ್ಷೆ, ಒಳ್ಳೆಯದನ್ನು ಮಾಡಲಿ ಎಂದು ಕಾರ್ಯಕ್ರಮ ಆಯೋಜಿಸಲಾಗಿತು ಎಂದರು. ಎಲ್ಲಾ ಭಕ್ತಾಧಿಗಳಿಗೆ ಸೋಯಲ್ ಅಹಮ್ಮದ್ ಕುಡಿಯುವ ನೀರಿನ ಬಾಟಲ್ಗಳನ್ನು ವಿತರಿಸಿ ಮಾತನಾಡಿ, ಈ ಭಾಗದಲ್ಲಿ ಹಿಂದೂ, ಮುಸ್ಲೀಂಮರು ಅಣ್ಣ ತಮ್ಮಂದಿರಂತೆ ಜೀವನ ಸಾಗಿಸುತ್ತಿದ್ದು, ಶ್ರೀನಿವಾಸ ಕಲ್ಯಾಣೋತ್ಸವ ಯಶಸ್ವಿಯಾಗಿ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಭಾಗವಹಿಸಿದ್ದೇವೆ ಎಂದರು. ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್, ಶಾಸಕರಾದ ಎಸ್.ಟಿ.ಸೋಮಶೇಖರ್, ಡಾ.ಎಚ್.ಡಿ.ರಂಗನಾಥ್, ಪುಟ್ಟಣ್ಣ, ಕೆ.ಪಿ.ಸಿ.ಸಿ. ವಕ್ತಾರೆ ಎಚ್.ಕುಸುಮಾ, ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹನುಮಂತರಾಯಪ್ಪ, ಪಾಲಿಕೆಯ ಮಾಜಿ ಸದಸ್ಯರಾದ ಬಿ.ಆರ್.ನಂಜುಂಡಪ್ಪ, ರೂಪಲಿಂಗೇಶ್, ಲಗ್ಗೆರೆ ನಾರಾಯಣಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಕೃಷ್ಣ, ಬಿಎಂಐಸಿಪಿ ಅಧ್ಯಕ್ಷ ರಘುನಂದನ್ ರಾಮಣ್ಣ, ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ, ಮತ್ತಿಕೆರೆ ಮಸೀದಿ ಅಧ್ಯಕ್ಷ ಸಮೀವುಲ್ಲಾ ಖಾನ್, ಚಿತ್ರ ನಿರ್ಮಾಪಕ ಚಿನ್ನೇಗೌಡ ಕಾರ್ಯಕ್ರಮದ ಭಾಗವಹಿಸಿದ್ದರು.1
- ತುಮಕೂರು : ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಹನುಮನಹಳ್ಳಿ ಯಲ್ಲಿ ಆರೋಗ್ಯ ವೆ ಭಾಗ್ಯ ಎನ್ನುವಂಥ ಕ್ರಿಯೇಟಿವ್ ಅಸೋಸಿಯೇಷನ್ ನ ವತಿಯಿಂದ ಸಪ್ತಗಿರಿ ವೈದ್ಯಕೀಯ ಮಹಾವಿದ್ಯಾಲಯ, ಎಂಎಸ್ ರಾಮಯ್ಯ ಮೆಮೋರಿಯಲ್ ಹಾಸ್ಪಿಟಲ್, ವಾಸನ್ ಐ ಕೇರ್, ಆರ್ ಆರ್ ಕಾಲೇಜ್ ಆಫ್ ಫಾರ್ಮಸಿ ಬೆಂಗಳೂರು ಇವರ ಸಹಕಾರದೊಂದಿಗೆ ಭಾನುವಾರ ಬೆಳಿಗ್ಗೆ 9:00 ರಿಂದ 3:30ರ ವರೆಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿದ್ದು ನುರಿತ ವೈಧ್ಯರಿಂದ ಕಣ್ಣು ತಪಾಸಣೆ ,ಕಿವಿ ,ಚರ್ಮ ರೋಗ, ಸ್ತ್ರೀ ರೋಗ, ಹೃದಯ ಸಂಬಂಧಿತ ಕಾಯಿಲೆ, ECG ECO BP , ಸಕ್ಕರೆ ಕಾಯಿಲೆ ದಂತ ಚಿಕಿತ್ಸೆ ಹೀಗೆ ಹಲವಾರು ಕಾಯಿಲೆ ಗೆ ಚಿಕಿತ್ಸೆ ನೀಡಿ ಔಷಧ ನೀಡಿ ಉಚಿತ ವಾಗಿ ಸೇವೆಯನ್ನು ನೀಡಲಾಗಿದೆ ಈ ಬೃಹತ್ ಆರೋಗ್ಯ ತಪಾಸಣಾ ಶಿಬಿರದಲ್ಲಿ ಹನುಮನಹಳ್ಳಿ ಸುತ್ತ ಮುತ್ತಲಿನ ಗ್ರಾಮದ ಜನರು ತಮ್ಮ ತಮ್ಮ ಆರೋಗ್ಯ ವನ್ನು ತಪಾಸಣೆ ಮಾಡಿಸಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯದಲ್ಲಿ ಏನಾದರೂ ಸಮಸ್ಯೆ ಇದ್ದರೆ ಅದಕ್ಕೆ ಉಚಿತ ಮಾತ್ರೆ,ಕನ್ನಡಕ, ಶಸ್ತ್ರ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತದೆ, ಶಸ್ತ್ರ ಚಿಕಿತ್ಸೆ ಏನಾದರೂ ಅವಶ್ಯಕತೆ ಇದ್ದರೆ ನಾವೇ ಕರೆದುಕೊಂಡು ಹೋಗಿ ಶಸ್ತ್ರ ಚಿಕಿತ್ಸೆ ಮಾಡಿಸಿ ಕರೆದುಕೊಂಡುಬಿಡುತ್ತೇವೆ ಎಂದು ಆಶಯ ಕೊಟ್ಟವರು ಕ್ರಿಯೇಟಿವ್ ಅಸೋಸಿಯೇಷನ್ ನ Dr ರಾಮರಾಜು ರವರು ಅಷ್ಟೇ ಅಲ್ಲದೆ ಈ ಆರೋಗ್ಯ ತಪಾಸಣೆ ಶಿಬಿರಕ್ಕೆ ಬಂದ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿಕೊಟ್ಟ ಕ್ರಿಯೇಟಿವ್ ಅಸೋಸಿಯೇಷನ್ ಈ ಬೃಹತ ಆರೋಗ್ಯ ತಪಾಸಣೆ ಶಿಬಿರಕ್ಕೆ ಈ ಗ್ರಾಮದ ನಿವಾಸಿ ಹಾಗೂ ಈ ಊರಿನ ಗೌರವ ಹೈಕೋರ್ಟ್ ನ ನ್ಯಾಯಾಧೀಶ ರಾದ ನಟರಾಜು ರಂಗಸ್ವಾಮಿ ಭೇಟಿ ನೀಡಿದ್ದು ಈ ಭಾಗದ ಜನರಿಗೆ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಕರುಣಿಸಿದ್ದಕ್ಕೆ ಕ್ರಿಯೇಟಿವ್ ಅಸೋಸಿಯೇಷನ್ ಗೆ ಧನ್ಯವಾದ ಸಲ್ಲಿಸಿದ್ದಾರೆ. ಈ ಬೃಹತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಉತ್ತಮ ವಾದ ಸೇವೆ ನೀಡಿದ ಪ್ರತಿಯೊಬ್ಬ ವೈದ್ಯ ರಿಗೂ ಕ್ರಿಯೇಟಿವ್ ಅಸೋಸಿಯೇಷನ್ ವತಿಯಿಂದ ಗೌರವ ನೀಡಲಾಯಿತು ಈ ಕಾರ್ಯ ಕ್ರಮ ಮಾಡಲು ಅವಕಾಶ ಮಾಡಿಕೊಟ್ಟ ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕರಿಗೂ ಧನ್ಯವಾದ ತಿಳಿಸಿದ ಕ್ರಿಯೇಟಿವ್ ಅಸೋಸಿಯೇಷನ್.4
- Post by SUDHUR CHAULANI NEWS1
- *ಭಾರತ ನಲ್ಲಿ ವೈರಲ್*1
- *ವಿವಿಧ ಹೂಗಳಿಂದ ಅಲಂಕೃತಗೊಂಡ ಅಪ್ಪು ಸಮಾಧಿ...*ಅಪ್ಪು ಸ್ಮಾರಕದತ್ತ ಅಪ್ಪು ಅಭಿಮಾನಿಗಳು ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿರುವ ಅಭಿಮಾನಿಗಳು ಕೈಯಲ್ಲಿ ಗುಲಾಬಿ ಹೂ ಹಿಡಿದು ಅಪ್ಪುಗೆ ನಮನ *ಅಪ್ಪು ಹುಟ್ಟುಹಬ್ಬದ ಪ್ರಯುಕ್ತ ವಿವಿಧ ಸಮಾಜಮುಖಿ ಕಾರ್ಯಕ್ರಮ* *ರಕ್ತದಾನ, ಅನ್ನದಾನ, ಹಾಗೂ ಉಚಿತವಾಗಿ ಸಸಿಗಳ ದಾನ ಮಾಡುವ ಕಾರ್ಯಗಳು ನಡೆಯುತ್ತಿವೆ.* ಪ್ರತಿವರ್ಷದಂತೆ ಈ ವರ್ಷವೂ ಹುಟ್ಟುಹಬ್ಬಕ್ಕೆ ವಿಶೇಷ ಕಾರ್ಯಕ್ರಮ ಅಪ್ಪು ಸಮಾಧಿಗೆ ಕುಟುಂಬಸ್ಥರಿಂದ ಪೂಜೆ ಪೂಜೆಯಲ್ಲಿ ರಾಘವೇಂದ್ರ ರಾಜ್ ಕುಮಾರ್, ರಾಘಣ್ಣ ಪತ್ನಿ ಮಂಗಳಾ, ವಿನಯ್ ರಾಜ್ ಕುಮಾರ್, ಯುವ ರಾಜ್ ಕುಮಾರ್ ಸೇರಿ ಮುಂತಾದವ್ರು ಭಾಗಿ1
- ಮಧ್ಯಪ್ರದೇಶದ ಅದಾನಿ ಗ್ರೂಪಿನ ಕಾರ್ಖಾನೆಯಲ್ಲಿ ಕಾರ್ಮಿಕನೊಬ್ಬ ಮೇಲಿನಿಂದ ಬಿದ್ದು ಮರಣ ಹೊಂದಿರುತ್ತಾನೆ, ಈ ಸಂಬಂಧ ಕಾರ್ಮಿಕರು ನ್ಯಾಯ ಕೇಳಿದಾಗ ಉಡಾಫೆ ಮಾತನಾಡಿದ ಅಧಿಕಾರಿಗಳು, ಆತನ ಶವವನ್ನು ಮುಚ್ಚಿಡಲು ಪ್ರಯತ್ನಿಸಿದಾಗ ರೊಚ್ಚಿಗೆದ್ದ ಕಾರ್ಮಿಕರು ಪೊಲೀಸ್ ಜೀಪ್ ಸೇರಿದಂತೆ ವಾಹನಗಳು, ಕಾರ್ಖಾನೆಯನ್ನು ಉಡೀಸ್ ಮಾಡಿದ್ದಾರೆ ಎನ್ನಲಾಗಿದೆ...1