Shuru
Apke Nagar Ki App…
SUDHUR CHAULANI NEWS
More news from ಕರ್ನಾಟಕ and nearby areas
- Post by Gulam Muhammad1
- Post by ಅರವಿಂದ್ ರಾಜೀವ್1
- ಬೆಂಗಳೂರು : ಮತ್ತಿಕೆರೆಯ ಜೆ.ಪಿ.ಪಾರ್ಕ್ ಬಳಿಯ ಕ್ರೀಡಾಂಗಣದಲ್ಲಿ ಸಾಮಾಜಿಕ ಕಾರ್ಯಕರ್ತ ವೆಂಕಟೇಶಮೂರ್ತಿ, ಪಾಲಿಕೆ ಮಾಜಿ ಸದಸ್ಯ ವೇಲುನಾಯಕರ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಎಲ್ಲಿ ನೋಡಿದರೂ ಜನಸಾಗರ, ಸಹಸ್ರಾರು ಭಕ್ತಾಧಿಗಳ ಜಯಘೋಷಣೆಗಳ ಮುಗಿಲು ಮುಟ್ಟಿದವು. ಗೋವಿಂದಾ.... ಗೋವಿಂದಾ... ಶ್ರೀನಿವಾಸ... ವೆಂಕಟೇಶ್ವರ ಘೋಷಣೆಗಳು ಕೂಗುತ್ತಾ ದೇವರ ಸ್ಮರಣೆಯನ್ನು ಮಾಡಿದರೆ ಭಕ್ತಾಧಿಗಳು ದೇವರ ಸ್ಮರಣೆಯಲ್ಲಿ ತಲೆದೂಗಿದರು. ಶ್ರೀ ಲಕ್ಷ್ಮಿ ವೆಂಕಟೇಶ್ವರಸ್ವಾಮಿಯ ದೇವಾಲಯದಿಂದ ಶ್ರೀ ಲಕ್ಷ್ಮಿ ವೆಂಕಟೇಶ್ವರಸ್ವಾಮಿ ರಥೋತ್ಸವ, ಉತ್ಸವಮೂರ್ತಿಯ ಮೆರವಣಿಗೆ ಮತ್ತಿಕೆರೆ, ಯಶವಂತಪುರ ವ್ಯಾಪ್ತಿಯ ಪ್ರಮುಖ ರಸ್ತೆ ರಾಜ ಬೀದಿಗಳಲ್ಲಿ ಸಾಗಿಬಂದಾಗ ರಸ್ತೆಯ ಎರಡು ಬದಿಯಲ್ಲಿ ಭಕ್ತಾಧಿಗಳು ನಿಂತು ದೇವರ ದರ್ಶನ ಪಡೆದು ಪುನೀತರಾದರು ಹಾಗೂ ವಿವಿಧ ದೇವರುಗಳ ಪೂಜಾಕುಣಿತ, ಜಾನಪದ ಕಲೆಗಳ ಪ್ರದರ್ಶನ ನೋಡಿ ಕಣ್ತುಂಬಿಕೊಂಡರು. ರಥೋತ್ಸವ ಸಾಗಿ ಬಂದ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರ, ತಳಿರು-ತೋರಣ, ಬಣ್ಣಬಣ್ಣಗಳಿಂದ ಹೂವಿನ ಚಿತ್ತಾರ ಬಾಳೆಕಂದುಗಳನ್ನು ಕಂಬ-ಕಂಬಗಳಿಗೆ ಕಟ್ಟಿ ರಸ್ತೆಗಳನ್ನು ಶೃಂಗಾರ ಮಾಡಲಾಯಿತ್ತು. ಅದ್ದೂರಿ ಶ್ರೀನಿವಾಸ ಕಲ್ಯಾಣ ಮಹೋತ್ಸವಕ್ಕೆ ತಿರುಮಲ ದೇವಾಲಯದಿಂದ ಅರ್ಚಕರನ್ನು ಕರೆಯಿಸಲಾಯಿತು. ಶ್ರೀನಿವಾಸ ಕಲ್ಯಾಣೋತ್ಸವ ಪ್ರಾರಂಭವಾಗುತ್ತಿದ್ದಂತೆ ನೆರೆದಿದ್ದ ಭಕ್ತರು ಶ್ರೀನಿವಾಸನ ಸ್ಮರಣೆ ಮಾಡುತ್ತಾ ದೇವರ ಧ್ಯಾನ ಮಾಡಿದರು. ಈ ಕಾರ್ಯಕ್ರಮದಲ್ಲಿ ಹಿಂದೂಗಳ ಜೊತೆಗೆ ನೂರಾರು ಮುಸ್ಲೀಮರು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದರು. ನೆರೆದಿದ್ದ ಭಕ್ತಾಧಿಗಳಿಗೆ ತೊಂದರೆಯಾಂತೆ ಅವರಿದ್ದ ಸ್ಥಳಗಳಿಗೆ ತೆರಳಿ ಕುಡಿಯುವ ನೀರು ವಿತರಿಸಿದರು. ಅನ್ನಪ್ರಸಾದದ ಕೌಂಟರ್ನಲ್ಲಿ ಜನಸಂದಣಿ ಜಾಸ್ತಿಯಾಗುತ್ತಿದ್ದಂತೆ ಸ್ವಯಂ ಸೇವಕರಿಗೆ ಮುಸ್ಲೀಮರು ಸಾಥ್ ನೀಡಿದರು. ಮುಸ್ಲೀಂ ಮುಖಂಡ ಸೋಯಲ್ ಅಹಮ್ಮದ್ ಅವರು ವೈಯಕ್ತಿಕವಾಗಿ ನೀರಿನ ಬಾಟಲಿಗಳನ್ನು ಭಕ್ತರಿಗೆ ವಿತರಿಸಿದರು. ಸಾಮಾಜಿಕ ಕಾರ್ಯಕರ್ತ ವೆಂಕಟೇಶಮೂರ್ತಿ ಮಾತನಾಡಿ ಪ್ರತಿವರ್ಷ ಶ್ರೀನಿವಾಸ ಕಲ್ಯಾಣೋತ್ಸವ ನಡೆಸಿಕೊಂಡು ಬರಲಾಗುತ್ತಿದ್ದು, ಈ ವರ್ಷ ವೇಲುನಾಯಕರ್ ಮತ್ತು ಕೆಪಿಸಿಸಿ ವಕ್ತಾರೆ ಎಚ್.ಕುಸುಮಾ ಕುಸುಮಾ ಕುಟುಂಬ ಭಾಗಿಯಾಗಿ ಶ್ರೀನಿವಾಸ ಕಲ್ಯಾಣೋತ್ಸವ ಅದ್ದೂರಿಯಾಗಿ ನಡೆಯಲು ಸಹಕಾರ ನೀಡಿರುವುದರಿಂದ ಲಕ್ಷಾಂತರ ಭಕ್ತಾಧಿಗಳು ಪಾಲ್ಗೊಂಡಿದ್ದಾರೆ. ಎಲ್ಲರಿಗೂ ತಿರುಪತಿಯ ಲಡ್ಡು, ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಭಕ್ತರಿಗೆ ಭಗವಂತ ಒಳಿತು ಮಾಡಿ ಆರೋಗ್ಯ, ನೆಮ್ಮದಿ, ಶಾಂತಿಗೋಸ್ಕರ ಶ್ರೀನಿವಾಸಕಲ್ಯಾಣೋತ್ಸವ ನಡೆಸಲಾಗಿದೆ ಎಂದರು. ಕೆಪಿಸಿಸಿ ವಕ್ತಾರೆ ಕುಸುಮಾ ಮಾತನಾಡಿ ಧಾರ್ಮಿಕ ಕಾರ್ಯಕ್ರಮಗಳಿಂದ ಹಿಂದೂತ್ವ ಮತ್ತು ನಮ್ಮ ಧಾರ್ಮಿಕ ಪರಂಪರೆ ಮತ್ತಷ್ಟು ಗಟ್ಟಿಯಾಗಲು ನಾವೆಲ್ಲರೂ ಪ್ರೀತಿ ವಿಶ್ವಾಸ ನೆಮ್ಮದಿಯಿಂದ ಸಾಗಲು ದೇವರ ಉತ್ಸವಗಳು ಸಹಕಾರಿಯಾಗಿವೆ. ಬಿಬಿಎಂಪಿ ಮಾಜಿ ಸದಸ್ಯ ವೇಲುನಾಯರ್ ಕ್ಷೇತ್ರದ ಜನರು ಮತ್ತು ನಾಡಿನ ಜನರಿಗೆ ಭಗವಂತನ ಶ್ರೀರಕ್ಷೆ, ಒಳ್ಳೆಯದನ್ನು ಮಾಡಲಿ ಎಂದು ಕಾರ್ಯಕ್ರಮ ಆಯೋಜಿಸಲಾಗಿತು ಎಂದರು. ಎಲ್ಲಾ ಭಕ್ತಾಧಿಗಳಿಗೆ ಸೋಯಲ್ ಅಹಮ್ಮದ್ ಕುಡಿಯುವ ನೀರಿನ ಬಾಟಲ್ಗಳನ್ನು ವಿತರಿಸಿ ಮಾತನಾಡಿ, ಈ ಭಾಗದಲ್ಲಿ ಹಿಂದೂ, ಮುಸ್ಲೀಂಮರು ಅಣ್ಣ ತಮ್ಮಂದಿರಂತೆ ಜೀವನ ಸಾಗಿಸುತ್ತಿದ್ದು, ಶ್ರೀನಿವಾಸ ಕಲ್ಯಾಣೋತ್ಸವ ಯಶಸ್ವಿಯಾಗಿ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಭಾಗವಹಿಸಿದ್ದೇವೆ ಎಂದರು. ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್, ಶಾಸಕರಾದ ಎಸ್.ಟಿ.ಸೋಮಶೇಖರ್, ಡಾ.ಎಚ್.ಡಿ.ರಂಗನಾಥ್, ಪುಟ್ಟಣ್ಣ, ಕೆ.ಪಿ.ಸಿ.ಸಿ. ವಕ್ತಾರೆ ಎಚ್.ಕುಸುಮಾ, ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹನುಮಂತರಾಯಪ್ಪ, ಪಾಲಿಕೆಯ ಮಾಜಿ ಸದಸ್ಯರಾದ ಬಿ.ಆರ್.ನಂಜುಂಡಪ್ಪ, ರೂಪಲಿಂಗೇಶ್, ಲಗ್ಗೆರೆ ನಾರಾಯಣಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಕೃಷ್ಣ, ಬಿಎಂಐಸಿಪಿ ಅಧ್ಯಕ್ಷ ರಘುನಂದನ್ ರಾಮಣ್ಣ, ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ, ಮತ್ತಿಕೆರೆ ಮಸೀದಿ ಅಧ್ಯಕ್ಷ ಸಮೀವುಲ್ಲಾ ಖಾನ್, ಚಿತ್ರ ನಿರ್ಮಾಪಕ ಚಿನ್ನೇಗೌಡ ಕಾರ್ಯಕ್ರಮದ ಭಾಗವಹಿಸಿದ್ದರು.1
- ಶ್ರೀನಿವಾಸಪುರ: ದಲಿತ ಕುಟುಂಬದ ಮೇಲೆ ದೌರ್ಜನ್ಯ; ಮಹಿಳೆಯನ್ನು ಕಾರಿನಿಂದ ಗುದ್ದಿ ರಂಗನಾಥ್, ರಘು ನಾಥ್ ರೆಡ್ಡಿ,ಶಂಕರ ರೆಡ್ಡಿ,ಬಾಬುರೆಡ್ಡಿ,ಬೆಳ್ಳಮ್ ಶ್ರೀನಿವಾಸ್ ರೆಡ್ಡಿ, ಅನಿಲ್ ಕುಮಾರ್, ಕೊಲೆ ಯತ್ನ - ಸಂತ್ರಸ್ತರಿಗೆ ನ್ಯಾಯಕ್ಕಾಗಿ ಆಗ್ರಹ ಶ್ರೀನಿವಾಸಪುರ: ತಾಲೂಕಿನ ನೆಲವಂಕಿ ಹೋಬಳಿ, ಜೋಡಿ ಕೊತ್ತಪಲ್ಲಿ ಗ್ರಾಮದ ಕಡಪ ರಸ್ತೆಯಲ್ಲಿ ವಾಸವಾಗಿರುವ ದಲಿತ ಕುಟುಂಬವೊಂದರ ಮೇಲೆ ಭೂ ವಿವಾದದ ಹಿನ್ನೆಲೆಯಲ್ಲಿ ಮಾರಣಾಂತಿಕ ಹಲ್ಲೆ ಹಾಗೂ ದೌರ್ಜನ್ಯ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆಯ ವಿವರ: ಜೋಡಿ ಕೊತ್ತಪಲ್ಲಿ ಗ್ರಾಮದ ಸರ್ವೆ ನಂ. 58ರ ಜಮೀನು ದಲಿತ ನಾರಾಯಣಸ್ವಾಮಿ ಎಂಬುವವರಿಗೆ ಸೇರಿದ್ದು, ಕಳೆದ ಹಲವು ವರ್ಷಗಳಿಂದ ಪಕ್ಕದ ಜಮೀನಿನ ಮಾಲೀಕ ರಂಗನಾಥ್ ಎಂಬುವವರು ಅವರ ಕುಟುಂಬದವರು ಈ ಕುಟುಂಬದ ಮೇಲೆ ಇಲ್ಲಸಲ್ಲದ ಕಾರಣಕ್ಕೆ ಗಲಾಟೆ ಮಾಡುತ್ತಾ ದೌರ್ಜನ್ಯ ನಡೆಸುತ್ತಾ ಬಂದಿದ್ದಾರೆ ಎಂದು ಆರೋಪಿಸಲಾಗಿದೆ. ದಿನಾಂಕ 16-03-2026ರ ಸೋಮವಾರದಂದು, ಅಧಿಕಾರಿಗಳು ಹಾಗೂ ರಂಗನಾಥ್ ಎಂಬುವವರು ಯಾವುದೇ ಮುನ್ಸೂಚನೆ ಅಥವಾ ನೋಟಿಸ್ ನೀಡದೆ ಏಕಾಏಕಿ ಜೆಸಿಬಿ ಯೊಂದಿಗೆ ನಾರಾಯಣಸ್ವಾಮಿ ಅವರ ಜಮೀನಿಗೆ ನುಗ್ಗಿ ಗಲಾಟೆ ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ದಲಿತ ಕುಟುಂಬದ ಹೆಣ್ಣುಮಕ್ಕಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅಮಾನವೀಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. "ರಸ್ತೆಯ ವಿಚಾರವಾಗಿ ಉಭಯ ಕಡೆಯವರು ತಲಾ 10 ಅಡಿ ಜಾಗ ಬಿಡೋಣ" ಎಂದು ನಾರಾಯಣಸ್ವಾಮಿ ಮನವಿ ಮಾಡಿದರೂ ಸಹ, ಅದಕ್ಕೆ ಒಪ್ಪದ ರಂಗನಾಥ್ ಕುಟುಂಬ ವು , "ನಾವು ಒಂದು ಅಡಿ ಜಾಗವನ್ನೂ ಬಿಡುವುದಿಲ್ಲ" ಎಂದು ಹಠ ಹಿಡಿದು ಗಲಾಟೆ ಮಾಡಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಕೂಡ ರಂಗತ್ ಪರವಾಗಿ ನಿಂತು, ದಲಿತ ಕುಟುಂಬಕ್ಕೆ ರಕ್ಷಣೆ ನೀಡುವ ಬದಲು "ನಿಮ್ಮನ್ನು ಅರೆಸ್ಟ್ ಮಾಡುತ್ತೇವೆ" ಎಂದು ಬೆದರಿಸಿ, ಅವರ ಜಾಗದಲ್ಲೇ ರಸ್ತೆ ಮಾಡಲು ಕುಮ್ಮಕ್ಕು ನೀಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅದೇ ದಿನ ಸಂಜೆ, ರಂಗನಾಥ್ ಸಹಜರರು ದಲಿತ ಮಹಿಳೆಯ ಮೇಲೆ ಕಾರನ್ನು ಹರಿಸಿ ಕೊಲೆ ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಮಹಿಳೆ ಸದ್ಯ ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ, ತಹಶೀಲ್ದಾರ್ ಅವರು ಆದೇಶ ಮಾಡಿದ್ದಾರೆ ಎಂಬ ನಕಲಿ ಪತ್ರವನ್ನು ತೋರಿಸಿ, ಅಧಿಕಾರಿಗಳ ಹೆಸರಿನಲ್ಲಿ ದಲಿತ ಕುಟುಂಬವನ್ನು ಬೆದರಿಸಿ ದೌರ್ಜನ್ಯ ಎಸಗಿರುವುದು ಸಂತ್ರಸ್ತರ ಆಕ್ರೋಶಕ್ಕೆ ಕಾರಣವಾಗಿದೆ. ನ್ಯಾಯಕ್ಕಾಗಿ ಆಗ್ರಹ: "ನಮ್ಮ ಸ್ವಂತ ಜಮೀನಿನಲ್ಲಿ ನಮಗೆ ರಕ್ಷಣೆ ಇಲ್ಲವೇ? ದಲಿತರಿಗೆ ಈ ನಾಡಿನಲ್ಲಿ ಸಮಾನತೆ ಮತ್ತು ನ್ಯಾಯ ಸಿಗುವುದಿಲ್ಲವೇ?" ಎಂದು ಸಂತ್ರಸ್ತ ಕುಟುಂಬ ಪ್ರಶ್ನಿಸಿದೆ. ಸಂಬಂಧಪಟ್ಟ ಉನ್ನತ ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ತಕ್ಷಣ ಈ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಿ, ನಕಲಿ ದಾಖಲೆ ಸೃಷ್ಟಿಸಿ ದೌರ್ಜನ್ಯ ಎಸಗಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಗ್ರಾಮಸ್ಥರು ಹಾಗೂ ಜಾಂಭವ ಯುವ ಸೇನೆ ಸಂಘಟನೆ ಒತ್ತಾಯಿಸಿದೆ .1
- KOLAR KI.AWAAZ KOUSAR1
- ಒಡಿಶಾ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ: 10 ರೋಗಿಗಳ ಸಾವು #JB_News_Kannada1
- Facebook mein ek dusre ko support karna good night1
- ಮಧ್ಯಪ್ರದೇಶದ ಅದಾನಿ ಗ್ರೂಪಿನ ಕಾರ್ಖಾನೆಯಲ್ಲಿ ಕಾರ್ಮಿಕನೊಬ್ಬ ಮೇಲಿನಿಂದ ಬಿದ್ದು ಮರಣ ಹೊಂದಿರುತ್ತಾನೆ, ಈ ಸಂಬಂಧ ಕಾರ್ಮಿಕರು ನ್ಯಾಯ ಕೇಳಿದಾಗ ಉಡಾಫೆ ಮಾತನಾಡಿದ ಅಧಿಕಾರಿಗಳು, ಆತನ ಶವವನ್ನು ಮುಚ್ಚಿಡಲು ಪ್ರಯತ್ನಿಸಿದಾಗ ರೊಚ್ಚಿಗೆದ್ದ ಕಾರ್ಮಿಕರು ಪೊಲೀಸ್ ಜೀಪ್ ಸೇರಿದಂತೆ ವಾಹನಗಳು, ಕಾರ್ಖಾನೆಯನ್ನು ಉಡೀಸ್ ಮಾಡಿದ್ದಾರೆ ಎನ್ನಲಾಗಿದೆ...1
- KOLAR KI.AWAAZ KOUSAR NEWS1