Shuru
Apke Nagar Ki App…
ಹಬ್ಬಗಳನ ಶಾಂತಿ ಸೌಹಾರ್ದತೆಯಿಂದ ಆಚರಣೆ ಮಾಡಬೇಕು. ಹಬ್ಬದನೇ ಪದದಲ್ಲಿ ಇಸ್ಪೀಟ್ ಆಡಿ ಕೈಗೆ ಸಿಕ್ಕರೆ ಕಠಿಣ ಕ್ರಮ..
Suresh Belagere
ಹಬ್ಬಗಳನ ಶಾಂತಿ ಸೌಹಾರ್ದತೆಯಿಂದ ಆಚರಣೆ ಮಾಡಬೇಕು. ಹಬ್ಬದನೇ ಪದದಲ್ಲಿ ಇಸ್ಪೀಟ್ ಆಡಿ ಕೈಗೆ ಸಿಕ್ಕರೆ ಕಠಿಣ ಕ್ರಮ..
More news from ಕರ್ನಾಟಕ and nearby areas
- Post by Suresh Belagere1
- ಬಾರಿ ಗಾಳಿ-ಮಳೆಗೆ ಸೂರನಹಳ್ಳಿ ಗ್ರಾಮದಲ್ಲಿ ಹಾಗಲಕಾಯಿ ಫಸಲು ನೆಲಕಚ್ಚಿ ರೈತನಿಗೆ ಅಪಾರ ನಷ್ಟ ಉಂಟಾಗಿದೆ. ಚಳ್ಳಕೆರೆ ತಾಲೂಕಿನ ಸೂರನಹಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಗಾಳಿ-ಮಳೆಯಿಂದ ರೈತ ನರಸಿಂಹಪ್ಪ ಅವರ ತೋಟದಲ್ಲಿ ಬೆಳೆದಿದ್ದ ಹಾಗಲಕಾಯಿ ಬೆಳೆ ಸಂಪೂರ್ಣವಾಗಿ ನೆಲಕಚ್ಚಿ ಅಪಾರ ನಷ್ಟ ಉಂಟಾಗಿದೆ.1
- ಸಾಣೀಕೆರೆ ಸರ್ಕಾರಿ ವಸತಿ ಗೃಹಗಳು ಪಾಳು! ಆರೋಗ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಜನರ ಆಕ್ರೋಶ ಹೌದು ಇದು ಚಳ್ಳಕೆರೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರಯವ ಸಾಣೀಕೆರೆ ಗ್ರಾಮದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ನಿರ್ಮಿಸಲಾಗಿದ್ದ ಸರ್ಕಾರಿ ವಸತಿ ಗೃಹಗಳು ನಿರ್ವಹಣೆ ಕೊರತೆಯಿಂದ ಪಾಳು ಬಿದ್ದಿವೆ. ಗಿಡಗಂಟೆಗಳ ಪೊದೆ ಬೆಳೆದಿದ್ದು, ಕಟ್ಟಡಗಳು ಹಾಳಾಗುತ್ತಿರುವ ದೃಶ್ಯಗಳು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿವೆ. ಹಲವು ವರ್ಷಗಳಿಂದ ಈ ಕಟ್ಟಡಗಳ ದುರಸ್ತಿ ಹಾಗೂ ಸಂರಕ್ಷಣೆ ಕಡೆ ಗಮನ ಹರಿಸದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಕ್ರಮ ಒತ್ತುವರಿ ಭೀತಿ ಕೂಡ ಎದುರಾಗಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇನ್ನೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೆಯೇ? ಸರಕಾರಿ ಆಸ್ತಿಯನ್ನು ರಕ್ಷಣೆಗೆ ಮುಂದಾಗುವರೇ ಕಾದು ನೋಡ ಬೇಕಿದೆ. #ಸಾಣೀಕೆರೆ #ಚಳ್ಳಕೆರೆ #ಸರ್ಕಾರಿವಸತಿಗೃಹ #ಆರೋಗ್ಯಇಲಾಖೆ #ನಿರ್ಲಕ್ಷ್ಯ #ಗ್ರಾಮಸ್ಥರಆಕ್ರೋಶ #ಸರ್ಕಾರಿಆಸ್ತಿ #KarnatakaNews #Challakere #PublicIssue #LocalNews1
- *ಯುಗಾದಿ–ರಂಜಾನ್: ಸೌಹಾರ್ದತೆಯ ಸುವರ್ಣ ಸಂಧಿ* ಭಾರತ ದೇಶದ ಸಾಂಸ್ಕೃತಿಕ ವೈವಿಧ್ಯತೆ ವಿಶ್ವದಲ್ಲೇ ಅಪರೂಪದದ್ದು. ಇಲ್ಲಿ ಹಬ್ಬಗಳು ಕೇವಲ ಆಚರಣೆಗಳಷ್ಟೇ ಅಲ್ಲ, ಅವು ಮಾನವೀಯ ಮೌಲ್ಯಗಳನ್ನು, ಪರಸ್ಪರ ಪ್ರೀತಿ ಮತ್ತು ಸೌಹಾರ್ದತೆಯನ್ನು ಪ್ರತಿಬಿಂಬಿಸುವ ಪವಿತ್ರ ಸಂದರ್ಭಗಳಾಗಿವೆ. ಈ ಸಂದರ್ಭದಲ್ಲಿ *“ಯುಗಾದಿ”ಯ ಹೊಸತನ ಮತ್ತು “ರಂಜಾನ್”ನ ಪವಿತ್ರತೆ* ಒಂದೇ ಸಮಯದಲ್ಲಿ ಆಗಮಿಸುವುದು ನಿಜಕ್ಕೂ ವಿಶೇಷವಾದ ಸಂಗತಿ. ಯುಗಾದಿ ಹೊಸ ವರ್ಷದ ಆರಂಭ. ಇದು ಹೊಸ ಕನಸುಗಳು, ಹೊಸ ನಿರೀಕ್ಷೆಗಳು ಮತ್ತು ಹೊಸ ದಾರಿಗಳ ಸಂಕೇತ. *ಬೇವು-ಬೆಲ್ಲದ* ರುಚಿಯಂತೆ ಜೀವನದ ಸುಖ-ದುಃಖಗಳನ್ನು ಸಮಬಾಳುವ ಪಾಠವನ್ನು ಇದು ನಮಗೆ ಕಲಿಸುತ್ತದೆ. ಮತ್ತೊಂದೆಡೆ *ರಂಜಾನ್ ತಿಂಗಳು ಶಾಂತಿ, ಸಹನೆ,* ನಿಯಮ ಮತ್ತು ದಾನಧರ್ಮದ ಮಹತ್ವವನ್ನು ಸಾರುತ್ತದೆ. ಉಪವಾಸದ ಮೂಲಕ ಮನಸ್ಸನ್ನು ಶುದ್ಧಗೊಳಿಸಿ, ಬಡವರ ಸಂಕಷ್ಟವನ್ನು ಅರಿಯುವ ಆತ್ಮಸಾಕ್ಷಾತ್ಕಾರವನ್ನು ನೀಡುತ್ತದೆ. ಈ ಎರಡು ಹಬ್ಬಗಳು ಒಂದೇ ಸಮಯದಲ್ಲಿ ಬಂದಾಗ, ಅದು ಕೇವಲ ಕಾಲಸಮ್ಮಿಲನವಲ್ಲ -ಅದು ಹೃದಯಗಳ ಏಕತೆಯ ಸಂಕೇತ. ಯುಗಾದಿ ನಮ್ಮ ಜೀವನದಲ್ಲಿ ಹೊಸ ಬೆಳಕನ್ನು ತರಲಿ, ರಂಜಾನ್ ನಮ್ಮ ಹೃದಯಗಳಲ್ಲಿ ಶಾಂತಿ ಮತ್ತು ಕರುಣೆಯ ದೀಪವನ್ನು ಬೆಳಗಲಿ. ಇವುಗಳು ಒಂದಾಗಿ ಬಂದಾಗ ಸಮಾಜದಲ್ಲಿ ಸೌಹಾರ್ದತೆ, ಸಹೋದರತ್ವ ಮತ್ತು ಪರಸ್ಪರ ಗೌರವದ ಸಂದೇಶವನ್ನು ಇನ್ನಷ್ಟು ಬಲಪಡಿಸುತ್ತವೆ. ಇಂತಹ ಪವಿತ್ರ ಸಂದರ್ಭದಲ್ಲಿ ನಾವು ಎಲ್ಲರೂ ಧರ್ಮ, ಜಾತಿ ಬೇಧಗಳನ್ನು ಮರೆತು, ಮಾನವೀಯತೆಯನ್ನು ಅಗ್ರಸ್ಥಾನದಲ್ಲಿ ಇಟ್ಟು ಬದುಕಬೇಕು. ನಮ್ಮ ಸುತ್ತಲಿನ ಜನರೊಂದಿಗೆ ಪ್ರೀತಿ ಹಂಚಿಕೊಂಡು, ಒಗ್ಗಟ್ಟಿನ ಜೀವನವನ್ನು ಸಾಗಿಸುವ ಸಂಕಲ್ಪ ಮಾಡೋಣ. *ಯುಗಾದಿ ಮತ್ತು ರಂಜಾನ್* ಹಬ್ಬಗಳ ಈ ಸುಸಂದರ್ಭವು ನಿಮ್ಮ ಜೀವನದಲ್ಲಿ ಶಾಂತಿ, ಸಂತೋಷ ಮತ್ತು ಸೌಹಾರ್ದತೆಯ ಶಿಖರದಂತೆ ಬೆಳೆಯಲಿ ಎಂಬ ಹಾರೈಕೆಗಳು. ಸಮಾಜಮುಖಿ ಸೇವೆಯಲ್ಲಿ *ಶ್ರೀಮತಿ ಡಾ. ಬಾನಮ್ಮ* ಅವರ ಪಾತ್ರ ವಿಜಯನಗರ ಜಿಲ್ಲೆಯ ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿರುವ *ಶ್ರೀಮತಿ ಡಾ. ಬಾನಮ್ಮ* ಅವರು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಮಹಿಳಾ ಸಬಲೀಕರಣ, ಬಡವರ ನೆರವು, ಆರೋಗ್ಯ ಜಾಗೃತಿ ಕಾರ್ಯಕ್ರಮಗಳು ಮತ್ತು ಶಿಕ್ಷಣದ ಉತ್ತೇಜನ -ಇವುಗಳ ಮೂಲಕ ಅವರು ಜನಮನ ಗೆದ್ದಿದ್ದಾರೆ. ಹಗರಿಬೊಮ್ಮನಹಳ್ಳಿ ಭಾಗದಲ್ಲಿ ಅನೇಕ ಸೇವಾ ಚಟುವಟಿಕೆಗಳನ್ನು ಕೈಗೊಂಡು, ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಅವರು ನಿಜವಾದ ಸಮಾಜ ಸೇವಕಿಯೆಂದು ಗುರುತಿಸಿಕೊಂಡಿದ್ದಾರೆ. ಅವರ ನಾಯಕತ್ವದಲ್ಲಿ ಹಲವಾರು ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ಅರಿವು ಪಡೆದು, ಆತ್ಮವಿಶ್ವಾಸದಿಂದ ಮುಂದೆ ಬರುತ್ತಿದ್ದಾರೆ. ಶುಭಾಶಯಗಳನ್ನು ಕೊರುವವರು: *ಶ್ರೀಮತಿ ಡಾ. ಬಾನಮ್ಮ* ಜಿಲ್ಲಾ ಅಧ್ಯಕ್ಷರು, ಕಾಂಗ್ರೆಸ್ ಮಹಿಳಾ ಘಟಕ, ವಿಜಯನಗರ ಜಿಲ್ಲೆ & ಸಮಾಜ ಸೇವಕರು *ಶ್ರೀಮತಿ ರೇಷ್ಮಾ ಸಿಖಂದರ್* ಪುರಸಭೆ ಸದಸ್ಯರು, ಹಗರಿಬೊಮ್ಮನಹಳ್ಳಿ ನಾಗರಾಜ್ ಕಲ್ಲಹಳ್ಳಿ ✒️1
- ಶಿವಮೊಗ್ಗ-ಬಿಸಿಲಿನ ತಾಪಕ್ಕೆ ಸೊರಗಿದ್ದ ಜನತೆಗೆ ತಂಪೆರೆದ ಆಲಿಕಲ್ಲಿನ ಮಳೆ2
- ಶಿವಮೊಗ್ಗ ಜಿಲ್ಲೆ ಸೇರಿದಂತೆ ವಿವಿದೆಡೆ ಬುಧವಾರ ಮಧ್ಯಾಹ್ನ ಭಾರಿ ಗಾಳಿ, ಗುಡುಗು ಸಹಿತ ಅಲಿಕಲ್ಲು ಮಳೆಯಾಗಿದೆ.1
- “ಕೊಪ್ಪಳ ತಾಲೂಕಿನ ಬಸಾಪುರ ಸಮೀಪ ತುಂಗಭದ್ರಾ ಎಡದಂಡೆ ಕಾಲುವೆ ಒಡೆದು ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಹರಿಯುತ್ತಿದೆ… ಈ ಘಟನೆದಿಂದ ನೂರಾರು ಎಕರೆ ಭತ್ತದ ಗದ್ದೆಗಳು ಮುಳುಗಿ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ… ಇದು ಹೊಸ ಸಮಸ್ಯೆಯಲ್ಲ… ದಶಕಗಳಿಂದ ಕಾಲುವೆಗಳ ನಿರ್ವಹಣೆ ಇಲ್ಲದ ಪರಿಣಾಮ… ಬೇಸಿಗೆಯಲ್ಲಿ ಒಂದು ಹನಿ ನೀರು ಕೂಡ ಅಮೂಲ್ಯ… ಆದರೆ ಇಲ್ಲಿ ಲಕ್ಷಾಂತರ ಲೀಟರ್ ನೀರು ಹೀಗೆ ಪೋಲಾಗುತ್ತಿದೆ… ನಾಳೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ರೆ ಯಾರು ಹೊಣೆ? ಜನರ ಆಗ್ರಹ ಒಂದೇ… ನೀರಾವರಿ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಹಾನಿಗೊಳಗಾದ ಪ್ರದೇಶಗಳಿಗೆ ಪರಿಹಾರ ಕೊಡಬೇಕು ಇದು ಕೇವಲ ಕಾಲುವೆ ಒಡೆದ ಘಟನೆ ಅಲ್ಲ… ಇದು ವ್ಯವಸ್ಥೆಯ ವೈಫಲ್ಯ!” 🔥1
- ಚಿತ್ರದುರ್ಗದ ಐಯ್ಯಣ್ಣನ ಪೇಟೆಯ ವಾಸವಿ ಶಾಲೆ ರಸ್ತೆ ಬಳಿ ಆಕಸ್ಮಿಕ ಬೆಂಕಿ ಬಿದ್ದು ವಿದ್ಯುತ್ ಕಂಬ ಹೊತ್ತಿ ಉರಿದಿದೆ. ಗುರುವಾರ ಬೆಳಗ್ಗೆ 11 ಗಂಟೆ ವೇಳೆ ಘಟನೆ ನಡೆಸಿದ್ದು ಸಾರ್ವಜನಿಕರು ಓಡಾಡಲು ಬಯ ಪಡುವ ಪರಿಸ್ಥಿತಿ ಉಂಟಾಗಿದೆ.1