Shuru
Apke Nagar Ki App…
ತುಳಕು ಗ್ರಾಮದಲ್ಲಿ ಸರಣಿ ಕಳ್ಳತನ ಮಾಡಿದ್ದ ಆರೋಪಿಯನ್ನ ಬಂಧಿಸಿದ ಪೊಲೀಸರು. ಆರೋಪಿತನಿಂದ 13000 ಮೌಲ್ಯದ ಗುಟ್ಕ್ ಹಾಗೂ ಐದು ಸಾವಿರ ನಗದು ಹಣ ವಶಕ್ಕೆ.. ತುಳಕು ವೃತ್ತ ನಿರೀಕ್ಷಕ ಹನುಮಂತಪ್ಪ ಸಿರೇಹಳ್ಳಿ ಹಾಗೂ ಪಿಎಸ್ಐ ಶಿವಕುಮಾರ್ ನೇತೃತ್ವದಲ್ಲಿ ಆರೋಪಿ ಬಂಧನ.
Suresh Belagere
ತುಳಕು ಗ್ರಾಮದಲ್ಲಿ ಸರಣಿ ಕಳ್ಳತನ ಮಾಡಿದ್ದ ಆರೋಪಿಯನ್ನ ಬಂಧಿಸಿದ ಪೊಲೀಸರು. ಆರೋಪಿತನಿಂದ 13000 ಮೌಲ್ಯದ ಗುಟ್ಕ್ ಹಾಗೂ ಐದು ಸಾವಿರ ನಗದು ಹಣ ವಶಕ್ಕೆ.. ತುಳಕು ವೃತ್ತ ನಿರೀಕ್ಷಕ ಹನುಮಂತಪ್ಪ ಸಿರೇಹಳ್ಳಿ ಹಾಗೂ ಪಿಎಸ್ಐ ಶಿವಕುಮಾರ್ ನೇತೃತ್ವದಲ್ಲಿ ಆರೋಪಿ ಬಂಧನ.
- Raja venkateshaಬಾದಾಮಿ, ಬಾಗಲಕೋಟೆ, ಕರ್ನಾಟಕ💣on 18 January
More news from ಕರ್ನಾಟಕ and nearby areas
- ಡಾ. ಹೇಮಾವತಿ ವಿ ಹೆಗ್ಡೆ ಯವರ ಹುಟ್ಟುಹಬ್ಬದ ಪ್ರಯುಕ್ತ ಮಾಶಾಸನ ಪಡೆಯುವ ವಾತ್ಸಲ್ಯ ಸದಸ್ಯರಿಗೆ ಹಣ್ಣು ಹಂಪಲು ವಿತರಣೆ ಬಾಗೇಪಲ್ಲಿ:-ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ )ಬಾಗೇಪಲ್ಲಿ ತಾಲ್ಲೂಕು ಯೋಜನಾ ಕಚೇರಿ ವ್ಯಾಪ್ತಿಯ ವಾಸ್ತಲ್ಯ ಮಾಶಾಸನ ಪಡೆಯುತ್ತಿರುವ 71 ಫಲಾನುಭವಿ ಕುಟುಂಬಗಳಿಗೆ ಡಾ. ಹೇಮಾವತಿ ಹೆಗ್ಡೆಯವರ 75 ನೇ ಹುಟ್ಟುಹಬ್ಬದ ಪ್ರಯುಕ್ತ ಹಣ್ಣು ಹಂಪಲು ವಿತರಣೆ ಮಾಡಲಾಯಿತು. ಬಾಗೇಪಲ್ಲಿ ತಾಲ್ಲೂಕು ವಲಯದಲ್ಲಿ ಮಾಶಾಸನ ಪಡೆಯುವ ವಾತ್ಸಲ್ಯ ಸದಸ್ಯರಾದ ಅಂಜನಮ್ಮ,ನಾಗರತ್ನಮ್ಮ,ನಜರೀನಾ ಅವರಿಗೆ ಹಣ್ಣು ಹಂಪಲು ನೀಡಿ ಯೋಗ ಕ್ಷೇಮವನ್ನು ವಿಚಾರಿಸಿದ ಗ್ರಾಮಾಭಿವೃದ್ಧಿ ಯೋಜನಾಧಿಕಾರಿಗಳಾದ ಪ್ರವೀಣ್ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತದನಂತರ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ಜ್ಞಾನ ವಿಕಾಸ ಯೋಜನೆಯ ಅಧ್ಯಕ್ಷೆ ಹೇಮಾವತಿ ವಿ. ಹೆಗ್ಗಡೆ 75 ನೇ ಹುಟ್ಟಿದ ಹಬ್ಬದ ಪ್ರಯುಕ್ತ ಮಾಶಾಸನ ಪಡೆಯುವ ವಾತ್ಸಲ್ಯ ಸದಸ್ಯರಾದ ಬಾಗೇಪಲ್ಲಿ ತಾಲ್ಲೂಕು ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಬಿಸಿ ಟ್ರಸ್ಟ್ ಬಾಗೇಪಲ್ಲಿ ಕ್ಷೇತ್ರದ ವ್ಯಾಪ್ತಿಯ ಸುಮಾರು 71 ಸದಸ್ಯರಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು. ಹೇಮಾವತಿ ವಿ. ಹೆಗ್ಗಡೆ ಅವರು ಅಬಲೆಯರನ್ನು ಸಬಲರನ್ನಾಗಿ" ಸುವ, ಸೌಲಭ್ಯವಂಚಿತರಿಗಾಗಿ, ಬಡಮಹಿಳೆಯರಿಗಾಗಿ ಮನ ಮಿಡಿಯುವ, ದುರ್ಬಲ ವರ್ಗದ ಮಹಿಳೆಯರನ್ನು ಗುರುತಿಸಿ ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಹಲವಾರು ಸಂಘ-ಸಂಸ್ಥೆಗಳನ್ನು ರಚಿಸುವ ಮೂಲಕ ನಾಡಿನಾದ್ಯಂತ ಸಾಮಾಜಿಕ, ಸಾಂಸ್ಕೃತಿಕ,ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನ ಮನ್ನಣೆ ಗಳಿಸಿದ ಸಾಕಾರಮೂತಿ೯ ಶ್ರೀಮತಿ ಹೇಮಾವತಿ ಅಮ್ಮನವರ ಜನ್ಮದಿನ ಪ್ರಯುಕ್ತ ಇಂದು ಸುಮಾರು71 ಸದಸ್ಯರಿಗೆ ಹಣ್ಣು ಹಂಪಲು ನೀಡಿ ಅವರ ಹುಟ್ಟಿದ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು. ಎಂದು ಹೇಳಿದರು. ಈ ಸಂಧರ್ಭ ಜ್ಞಾನವಿಕಾಸ ಸಮನ್ವಯಧಿಕಾರಿ ಇಂದಿರಾ ಸೇವಾಪ್ರತಿನಿಧಿ ಲಕ್ಷ್ಮೀನರಸಮ್ಮ ರವರು ಉಪಸ್ಥಿತರಿದ್ದರು2
- ದೇವನಹಳ್ಳಿ ಗ್ಯಾಸ್ ಸಮಸ್ಯೆ ಕುರಿತು ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿಕೆ. ಯುದ್ಧ ನಡೆಯುತ್ತಲೇ ಇದೆ, ಇನ್ನೂ ನಿಂತಿಲ್ಲ. ಚುನಾವಣೆ ಇರುವುದರಿಂದ ಅಧಿಕಾರಿಗಳನ್ನ ಕರೆಸಿ ಮೀಟಿಂಗ್ ಮಾಡಲಿಕ್ಕೆ ಆಗಲಿಲ್ಲ. 5 ನೇ ತಾರೀಕು ಸಾಧ್ಯವಾದರೆ ಮೀಟಿಂಗ್ ಮಾಡುತ್ತೇನೆ. 25 ದಿನಕ್ಕೆ ನಗರದಲ್ಲಿ, 45 ದಿನಕ್ಕೆ ಹಳ್ಳಿಯಲ್ಲಿ ಸಿಲಿಂಡರ್ ಕೊಡಲಾಗುತ್ತದೆ. ಅದರಲ್ಲಿ ಏನೂ ತೊಂದರೆ ಇಲ್ಲ, ಇದರಲ್ಲಿ ವಿನಾ ಕಾರಣ ಗೊಂದಲ ಸೃಷ್ಟಿಯಾಗಿದೆ. ಆಟೋಗ್ಯಾಸ್ ನಲ್ಲಿ 3 ಸಾವಿರ ಸಿಲಿಂಡರ್ ದಿನ ಕೊಡುತ್ತಿದ್ದೇವೆ ಆಟೋದವರು ಪ್ರತಿ ನಿತ್ಯ ಖಾಸಗಿಯವರ ಬಳಿ ತೆಗೆದುಕೊಳ್ಳುತ್ತಿದ್ದರು. ಈಗ ರೇಟ್ ಹೆಚ್ಚಾಗಿದೆ ಎಂದು ಇಲ್ಲಿಗೆ ಬಂದಿದ್ದಾರೆ. ಸರ್ಕಾರಿ ಕಂಪನಿಗಳಲ್ಲಿ ತೆಗೆದುಕೊಳ್ಳುವವರಿಗೆ ಯಾವುದೇ ತೊಂದರೆ ಆಗಿಲ್ಲ. ಖಾಸಗಿ ಕಂಪನಿಯವರಿಗೂ ಹೇಳಿದ್ದೇವೆ. ಹೆಚ್ಚು ಹಣ ತೆಗೆದುಕೊಂಡರೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದೇವೆ ಇರೋದರಲ್ಲಿ ಮಿತವಾಗಿ ಬಳಕೆ ಮಾಡಿಕೊಳ್ಳಬೇಕು. ದೇವನಹಳ್ಳಿಯಲ್ಲಿ ಸಚಿವ ಕೆಹೆಚ್ ಮುನಿಯಪ್ಪ ಹೇಳಿಕೆ1
- ಶರಣರ ಕಾಲದಲ್ಲಿ ರಾಜ ವೈಭೋಗವನ್ನು ತ್ಯಜಿಸಿ ವೈರಾಗ್ಯ ತಾಳಿದ ವೀರವನಿತೆ ಅಕ್ಕಮಹಾದೇವಿ ಅವರು ಜಗತ್ತಿನ ಮಹಿಳಾ ಸಂಕುಲಕ್ಕೊಂದು ಮಾದರಿಯಾಗಿದ್ದಾರೆ ರೋಣ ತಾಲೂಕು ಬಣಜಿಗ ಸಮುದಾಯದ ಮುಖಂಡ ಎಂದು ವಿರಣ್ಣ ಶೆಟ್ಟರ ಹೇಳಿದರು ಅವರು ರೋಣ ತಹಶೀಲ್ದಾರರ ಕಚೇರಿಯಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಆಚರಿಸಿದ ಮಹಾಶರಣೆ ಅಕ್ಕ ಮಹಾದೇವಿ ಯವರ ಜಯಂತಿ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು, ಕನ್ನಡದ ಶ್ರೇಷ್ಠ ವಚನಕಾರ್ತಿ ಮಹಾಶರಣೆ ಅಕ್ಕಮಹಾದೇವಿಯವರು ಚಿಕ್ಕ ವಯಸ್ಸಿನಲ್ಲೆ ಸಕಲ ಸುಖವನ್ನು ತ್ಯಜಿಸಿದ ಮಹಾನ್ ಶರಣೆಯಾಗಿದ್ದಾರೆ , ಅವರು ಎದುರಿಸಿದ ಪರೀಕ್ಷೆಗಳು ಬಹಳಷ್ಟು, ಸಾಕ್ಷಾತ್ ಶಿವ ಮಲ್ಲಿಕಾರ್ಜುನ ನನ್ನು ಪತಿ ಎಂದು ಸ್ವೀಕರಿಸಿ, ಲೌಕಿಕ ಜಗತ್ತನ್ನು ಧಿಕ್ಕರಿಸಿ, ಕೇಶಾಂಬರೆಯಾಗಿ ಜೀವನ ನಡೆಸಿದರು ಇವರು ಈ ಮಾನವ ಕುಲಕ್ಕೆ ಮಾದರಿಯಾಗಿದ್ದಾರೆ ಅವರ ಗುಣಾದರ್ಶಗಳನ್ನು ನಾವೆಲ್ಲ ನಮ್ಮ್ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು, ಸೋಮು ಚರೆದ, ವಿರೇಶ್ ಬಳ್ಳೊಳ್ಳಿ, ರವಿ ಸಂಗನಬಶೆಟ್ಟರ,ಬಸವರಾಜಾ ಕೋಟಗಿ, ಶಿವಣ್ಣ ಯಾವಗಲ್ಲ, ಮುತ್ತಣ್ಣ ಗದಗ, ವಿರೂಪಾಕ್ಷಪ್ಪ ಬೂದಿಹಾಳ, ವೀರಣ್ಣ ನವಲಗುಂದ, ಉಮೇಶ್ ಚವಡಿ, ಶೇಖಣ್ಣ ಐಹೊಳ್ಳಿ,ಪ್ರವೀಣ್ ಅಂಗಡಿ, ಉಪತಹಸಿಲ್ದಾರ್ ಗಣೇಶ್ ಕೊಪ್ಪದ, ಶರೀಫ ನದಾಫ,ಸೇರಿದಂತೆ ಕಚೇರಿಯ ಅಧಿಕಾರಿಗಳು ಸಿಬ್ಬಂದಿಗಳು ಪಾಲ್ಗೊಂಡಿದ್ದರು1
- ಬಂಡಾಯ ಅಭ್ಯರ್ಥಿಗಳಿಗೆ ಪಠಾಣ್ ಶಾಕ್? ಸಮರ್ಥ್ ಶಾಮನೂರು ಗೆಲುವು ಫಿಕ್ಸ್? | Yasir Khan Pathan Speech in DavanagereKeywords (ಟ್ಯಾಗ್ಗಳು / ಕೀವರ್ಡ್ಗಳು) ಈ ಕೀವರ್ಡ್ಗಳನ್ನು ನಿಮ್ಮ ವೀಡಿಯೋ ಡಿಸ್ಕ್ರಿಪ್ಶನ್ ಮತ್ತು ಟ್ಯಾಗ್ ಸೆಕ್ಷನ್ನಲ್ಲಿ ಬಳಸಿ: ಪ್ರಮುಖ ವ್ಯಕ್ತಿಗಳು: Yasir Khan Pathan, Samarth Shamanur, Shamanur Shivashankarapur, SS Mallikarjun, Basavaraj Bommai. ಸ್ಥಳ ಮತ್ತು ಚುನಾವಣೆ: Davanagere South Byelection 2026, Davanagere Politics, Karnataka Byelection 2026, ದಾವಣಗೆರೆ ಉಪಚುನಾವಣೆ. ಪಕ್ಷಗಳು: Congress Campaign Davanagere, INC Karnataka, BJP vs Congress Davanagere. ವಿಷಯಗಳು: Yasir Pathan Speech, Muslim Votes in Davanagere, Samarth Shamanur Campaign, ಬಂಡಾಯ ಅಭ್ಯರ್ಥಿಗಳ ಮನವೊಲಿಕೆ. Video Description (ಸಣ್ಣ ವಿವರಣೆ) "ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಣ ರಂಗೇರಿದೆ. ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಮಲ್ಲಿಕಾರ್ಜುನ್ ಪರವಾಗಿ ಶಿಗ್ಗಾಂವಿ ಶಾಸಕ ಯಾಸೀರ್ ಖಾನ್ ಪಠಾಣ್ ಅವರು ಭರ್ಜರಿ ಪ್ರಚಾರ ನಡೆಸಿದ್ದಾರೆ. ಬಂಡಾಯ ಅಭ್ಯರ್ಥಿಗಳ ಮನವೊಲಿಕೆ ಮತ್ತು ಅಲ್ಪಸಂಖ್ಯಾತ ಮತಗಳ ಕ್ರೋಡೀಕರಣದ ಬಗ್ಗೆ ಅವರು ನೀಡಿದ ರೋಚಕ ಹೇಳಿಕೆಗಳು ಇಲ್ಲಿವೆ." Hashtags: #DavanagereByelection #YasirKhanPathan #SamarthShamanur #CongressKarnataka #DavanagerePolitics #KarnatakaNews #ByElection20262
- ನಗರದ ಆರ್ಟಿಒ ಕಚೇರಿಗೆ ಶುಕ್ರವಾರ ಹುಸಿ ಬಾಂಬ್ ಬೆದರಿಕೆ ಇಮೇಲ್ ಬಂದ ಹಿನ್ನೆಲೆಯಲ್ಲಿ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳವು ಶ್ವಾನಗಳೊಂದಿಗೆ ಕಚೇರಿಯಲ್ಲಿ ತೀವ್ರ ಪರಿಶೀಲನೆ ನಡೆಸಿತು. ಕಚೇರಿ ಆವರಣದ ಒಳಭಾಗದ ಜೊತೆಗೆ ಹೊರಗಡೆ ನಿಲ್ಲಿಸಿದ್ದ ವಾಹನಗಳನ್ನೂ ಸೂಕ್ಷ್ಮವಾಗಿ ತಪಾಸಣೆ ಮಾಡಲಾಗಿದೆ. ಅದೃಷ್ಟವಶಾತ್ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ. ದುಷ್ಕರ್ಮಿಗಳು ಇಮೇಲ್ ಮೂಲಕ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದರಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಮೂಲ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.1
- ಪೋಲೀಸರಿಂದ ಗುಂಪನ್ನು ಚದುರಿಸಲು ಲಾಠಿ ಚಾರ್ಜ್1
- ದೇವನಹಳ್ಳಿ ಕೆಂಪೇಗೌಡ ಏರ್ ಪೋರ್ಟಿನಲ್ಲಿ ಪ್ರಯಾಣಿಕರ ಪರದಾಟ. ನೆನ್ನೆ ಬೆಂಗಳೂರಿನಿಂದ ಚನೈಗೆ ತೆರಳಲು ಬಂದಿದ್ದ ಪ್ರಯಾಣಿಕರು ಅತಂತ್ರ. ಸ್ಪೈಸ್ ಜೆಟ್ ಸಂಸ್ಥೆಯ ಕೊರೆಂಡನ್ ಏರ್ ಲೈನ್ಸ್ ವಿಮಾನದಲ್ಲಿ ಅವ್ಯವಸ್ಥೆ. ಒಂದು ಗಂಟೆ ರನ್ ವೇ ನಲ್ಲಿ ಸುತ್ತಾಡಿಸಿ ಆಮೇಲೆ ಫ್ಲೈಟ್ ಕ್ಯಾನ್ಸಲ್ ಸಂದೇಶ. ವಿಮಾನ ಟೇಕ್ ಆಫ್ ಆಗಲು ಪರ್ಮಿಷನ್ ಸಿಗದ ಹಿನ್ನಲೆ ರನ್ ವೇನಲ್ಲೇ ಸುತ್ತಾಟ. ಫ್ಲೈಟ್ ಕ್ಯಾನ್ಸಲ್ ಹಿನ್ನೆಲೆ ಏರ್ಲೈನ್ಸ್ ಸಿಬ್ಬಂದಿ ನಡುವೆ ಪ್ರಯಾಣಿಕರ ವಾಗ್ವಾದ. ಬದಲಿ ವಿಮಾನ ಏರ್ಪಾಡು ಮಾಡುವಂತೆ ಸಿಬ್ಬಂದಿ ವಿರುದ್ಧ ಆಕ್ರೋಶ. ಏರ್ಲೈನ್ಸ್ ಸಿಬ್ಬಂದಿ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದ ಪ್ರಯಾಣಿಕರು. ಪೊಲೀಸರ ಮದ್ಯಪ್ರವೇಶದಿಂದ ತಿಳಿಯಾದ ಸಮಸ್ಯೆ. ಟಿಕೆಟ್ ಪ್ರೈಸ್ ಮರುಪಾವತಿ ಮಾಡಲು ಒಪ್ಪಿಕೊಂಡ ಕಾರಣ ಪ್ರಯಾಣಿಕರು ಕೂಲ್. ದೇವನಹಳ್ಳಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಘಟನೆ.4
- ಬೂದಿಕೋಟೆ ಹೋಬಳಿಯ ಭೀಮಗಾನಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಸುತ್ತಮುತ್ತ ಹಲವು ವರ್ಷಗಳಿಂದ ಸ್ವಚ್ಛತೆ ಕೊರತೆಯಿಂದ ಕಸದ ರಾಶಿ ತುಂಬಿಕೊಂಡಿದೆ. ಗ್ರಾಮಸ್ಥರು ಮನೆಗಳ ಕಸವನ್ನು ಶಾಲೆಯ ಬಳಿ ಎಸೆಯುತ್ತಿರುವುದರಿಂದ ದುರ್ನಾತ ವ್ಯಾಪಕವಾಗಿದ್ದು, ಹಾವುಗಳಂತಹ ವಿಷ ಜಂತುಗಳು ಶಾಲಾ ಕೊಠಡಿಗಳೊಳಗೆ ಪ್ರವೇಶಿಸುತ್ತಿವೆ ಎಂಬ ಆತಂಕ ವ್ಯಕ್ತವಾಗಿದೆ. ಇದರಿಂದ ವಿದ್ಯಾರ್ಥಿಗಳು ಭಯಭೀತರಾಗಿದ್ದು, ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಗಂಭೀರ ಸಮಸ್ಯೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.1
- Post by Nitin 9071795156 press reporte2