ಕಾಡುಗೊಲ್ಲರ ಸಾಂಸ್ಕೃತಿಕ ಆಚರಣೆಗಳ. ಕರಿಮಲೆಯಿಂದ ಕೊಂಕಿ ಜರಮಲೆವರೆಗೆ' ಕೃತಿ ಬಿಡುಗಡೆ .. ಸಾಹಿತ್ಯ ಯುವ ಸಮುದಾಯಕ್ಕೆ ಆಧಾರ. ಅಧ್ಯಯನ ಶೀಲ ಸಾಹಿತ್ಯ ಸಮಾಜದಲ್ಲಿ ಉಳಿದು ಕೊಳ್ಳುತ್ತದೆ..ಶಾಸಕ ಟಿ.ರಘುಮೂರ್ತಿ. ಚಳ್ಳಕೆರೆ:ಅಧ್ಯಯನ ಶೀಲತೆಯಿಂದ ರೂಪಗೊಳ್ಳುವ ಸಾಹಿತ್ಯ ಯುವ ಸಮುದಾಯಕ್ಕೆ ಆಧಾರ. ಅಧ್ಯಯನ ಶೀಲ ಸಾಹಿತ್ಯ ಸಮಾಜದಲ್ಲಿ ಉಳಿದು ಕೊಳ್ಳುತ್ತದೆ ಎಂದು ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಹೇಳಿದರು. ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಹುಣ್ಣುಮೆ ಪ್ರಕಾಶನ ಇವರ ವತಿಯಿಂದ ಹಮ್ಮಿಕೊಂಡಿದ್ದ ಡಾ.ಜಿ.ವಿ. ಆನಂದ ಮೂರ್ತಿ ಅವರ ' ಕರಿಮಲೆಯಿಂದ ಕೊಂಕಿ ಜರಮಲೆವರೆಗೆ' ಕೃತಿ ಬಿಡುಗಡೆ ಸಮಾರಂಭವನ್ನು ಉದ್ಟಾಟನೆ ಮಾಡಿ ಮಾತನಾಡಿದರು. ಜಿ.ವಿ. ಆನಂದ ಮೂರ್ತಿ ಅವರು ಸುಮಾರು ಹತ್ತು ವರ್ಷಗಳ ಕಾಲ ಗೊಲ್ಲ ಸಮುದಾಯದ ಜನಜೀವನದ ಪದ್ದತಿಗಳನ್ನು ಅಧ್ಯಯನ ನಡೆಸಿ, ಬರೆದಿರುವ ಕೃತಿ ಪ್ರತಿಯೊಬ್ಬ ಓದುಗರ ಮನ ತಲುಪಲಿ. ಗೊಲ್ಲರ ಮತ್ತು ಮ್ಯಾಸ ನಾಯಕರ ಆಚಾರ ಪದ್ದತಿಗಳು ಮತ್ತು ಮನೆತನದ ಗುಡಿಕಟ್ಟೆ ದೇವರ ಅನುಸರಣೆಯಲ್ಲಿ ಹೊಲಿಕೆ ಇದೆ. ಗೊಲ್ಲರ ಹಟ್ಟಿಗಳಲ್ಲಿ ಮುಗ್ದತೆ ಕಾಣುತ್ತೇವೆ. ದೇವತಾ ಆರಾಧನಾ ಪದ್ದತಿಗಳ ನಂಬಿಕೆವುಳ್ಳವರು. ಇಂತಹ ಕುರುಹುಗಳು ದಾಖಲೆಯಾಗಿ ಉಳಿಯುವಂತೆ ಸಾಹಿತ್ಯ ರಚನೆ ಆಗಬೇಕು ಎಂದು ಹೇಳಿದರು. ಕೊಂಕಿಜರಮಲೆವರೆಗೆ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್, ಬುಡಕಟ್ಟು ಸಂಸ್ಕೃತಿ ಪದ್ದತಿಯನ್ನು ವಿಶ್ಲೇಷಣೆ ದೃಷ್ಟಿಯಿಂದ ನೋಡಬೇಕೆ ಹೊರೆತು, ತನಿಖೆಯಾಗಿ,ಟೀಕಾಕಾರರಾಗಿ ಅಲ್ಲ. ಜಿ.ವಿ. ಆನಂದ ಮೂರ್ತಿ ಸ್ವತಃ ಗೊಲ್ಲ ಜನಾಂಗ ಅಲ್ಲ. ಆದರೂ, ವಿಶಿಷ್ಟ ಆಚರಣೆ ಪದ್ದತಿಗಳನ್ನು ಬದುಕಾಗಿಸಿಕೊಂಡ ಗೊಲ್ಲರ ಜನ ಜೀವನ ಸಂಸ್ಕೃತಿಯನ್ನು ಅಧ್ಯಯನದ ಮೂಲಕ ದಾಖಲು ಮಾಡಿದ್ದಾರೆ. ಕೃಷ್ಣ ನದಿ ತೀರದ ನಾಗರಿಕತೆಯಿಂದ ಗುಂಪಾಗಿ ಚದುರಿದ ಗೊಲ್ಲ ಜನಾಂಗ, ರಾಜ್ಯದ ಚಿತ್ರದುರ್ಗ, ಬಳ್ಳಾರಿ, ತುಮಕೂರು ಭಾಗ ಸೇರಿ ಆಂಧ್ರ ಮತ್ತು ತಮಿಳುನಾಡಿನಲ್ಲಿ ಹೆಚ್ಚಾಗಿ ಕಾಣುತ್ತೇವೆ. ಸಂಖ್ಯಾತವಾಗಿ ಕಡಿಮೆ ಅನಿಸಿದರೂ ಸಾಂಸ್ಕೃತಿಕ ಮತ್ತು ಚಾರಿತ್ರಿಕ ಹಿನ್ನೆಲೆಯಲ್ಲಿ ವಾಸ್ತವ ಬದಲಾವಣೆಗೆ ಅನುಸಂಧಾನ ನಡೆಸುವ ಪದ್ದತಿ ಈ ಜನಾಂಗದ ವಿಶೇಷ. ಮ್ಯಾಸ ನಾಯಕರ ಮತ್ತು ಗೊಲ್ಲರ ಮೂಲ ಶ್ರೀಶೈಲ ಎನ್ನುತ್ತೇವೆ. ಬೆಡಗು ಮತ್ತು ಜಾತ್ರಾ ಉತ್ಸವ ಆಚರಣೆಗಳಲ್ಲೂ ಸಾಮ್ಯತೆ ಕಾಣುತ್ತೇವೆ. ಹುಲ್ಲುಗಾವಲು ಪ್ರಾಂತ್ಯ ಮ್ಯಾಸ ನಾಯಕರ ಅಧಿಪತ್ಯ. ಪಶುಪಾಲನೆ ವೃತ್ತಿಯ ಗೊಲ್ಲರಿಗೆ ಬೇಕಾದ ಹುಲ್ಲುಗಾವಲಿಗೆ ಯುದ್ದಗಳಾಗಿವೆ.ಜನಾಂಗದ ಈರಗಾರರನ್ನು ಹೋರಾಟಗಾರಾಗಿ ಕಾಣುತ್ತೇವೆ ಎಂದು ಹೇಳಿದರು. ಕೃತಿಕಾರ ಡಾ.ಜಿ.ವಿ. ಆನಂದ ಮೂರ್ತಿ, ಪ್ರಕಾಶಕ ಡಾ.ಎನ್. ಆರ್. ತಿಪ್ಪೇಸ್ವಾಮಿ, ಡಾ. ಕಲಮರಹಳ್ಳಿ ಮಲ್ಲಿಕಾರ್ಜುನ್ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಸಾಹಿತ ತಿಪ್ಪಣ್ಣ ಮರಿಕುಂಟೆ ತಾಲೂಕು ಕಾಡು ಗೊಲ್ಲರ ಸಂಘದ ಅಧ್ಯಕ್ಷ ಬೂದಿಹಳ್ಳಿ ರಾಜಣ್ಣ, ಸಾಹಿತಿ ಡಾ. ಸಿ. ಶಿವಲಿಂಗಪ್ಪ, ನಾಟಕ ಅಕಡಾಮಿ ಮಾಜಿ ಸದಸ್ಯ ಪಿ. ತಿಪ್ಪೇಸ್ವಾಮಿ ಇಓ ಎಚ್ ಶಶಿಧರ್ ,ಗದ್ದಿಗೆ ತಿಪ್ಪೇಸ್ವಾಮಿ, ನಿಸರ್ಗ ಗೋವಿಂದ್ ರಾಜ್, ಕೋಲಾಟ ಜಾನಪದ ಕಲಾವಿದ ನರಸಜ್ಜ ಹಾಗೂ ಜಾನಪದ ಕಲಾವಿದೆ ಸಿರಿಯಮ್ಮ ಸೇರಿದಂತೆ ಸಾಹಿತ್ಯಾಸಕ್ತರು ಇದ್ದರು..
ಕಾಡುಗೊಲ್ಲರ ಸಾಂಸ್ಕೃತಿಕ ಆಚರಣೆಗಳ. ಕರಿಮಲೆಯಿಂದ ಕೊಂಕಿ ಜರಮಲೆವರೆಗೆ' ಕೃತಿ ಬಿಡುಗಡೆ .. ಸಾಹಿತ್ಯ ಯುವ ಸಮುದಾಯಕ್ಕೆ ಆಧಾರ. ಅಧ್ಯಯನ ಶೀಲ ಸಾಹಿತ್ಯ ಸಮಾಜದಲ್ಲಿ ಉಳಿದು ಕೊಳ್ಳುತ್ತದೆ..ಶಾಸಕ ಟಿ.ರಘುಮೂರ್ತಿ. ಚಳ್ಳಕೆರೆ:ಅಧ್ಯಯನ ಶೀಲತೆಯಿಂದ ರೂಪಗೊಳ್ಳುವ ಸಾಹಿತ್ಯ ಯುವ ಸಮುದಾಯಕ್ಕೆ ಆಧಾರ. ಅಧ್ಯಯನ ಶೀಲ ಸಾಹಿತ್ಯ ಸಮಾಜದಲ್ಲಿ ಉಳಿದು ಕೊಳ್ಳುತ್ತದೆ ಎಂದು ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಹೇಳಿದರು. ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಹುಣ್ಣುಮೆ ಪ್ರಕಾಶನ ಇವರ ವತಿಯಿಂದ ಹಮ್ಮಿಕೊಂಡಿದ್ದ ಡಾ.ಜಿ.ವಿ. ಆನಂದ ಮೂರ್ತಿ ಅವರ ' ಕರಿಮಲೆಯಿಂದ ಕೊಂಕಿ ಜರಮಲೆವರೆಗೆ' ಕೃತಿ ಬಿಡುಗಡೆ ಸಮಾರಂಭವನ್ನು ಉದ್ಟಾಟನೆ ಮಾಡಿ ಮಾತನಾಡಿದರು. ಜಿ.ವಿ. ಆನಂದ ಮೂರ್ತಿ ಅವರು ಸುಮಾರು ಹತ್ತು ವರ್ಷಗಳ ಕಾಲ ಗೊಲ್ಲ ಸಮುದಾಯದ ಜನಜೀವನದ ಪದ್ದತಿಗಳನ್ನು ಅಧ್ಯಯನ ನಡೆಸಿ, ಬರೆದಿರುವ ಕೃತಿ ಪ್ರತಿಯೊಬ್ಬ ಓದುಗರ ಮನ ತಲುಪಲಿ. ಗೊಲ್ಲರ ಮತ್ತು ಮ್ಯಾಸ ನಾಯಕರ ಆಚಾರ ಪದ್ದತಿಗಳು ಮತ್ತು ಮನೆತನದ ಗುಡಿಕಟ್ಟೆ ದೇವರ ಅನುಸರಣೆಯಲ್ಲಿ ಹೊಲಿಕೆ ಇದೆ. ಗೊಲ್ಲರ ಹಟ್ಟಿಗಳಲ್ಲಿ ಮುಗ್ದತೆ ಕಾಣುತ್ತೇವೆ. ದೇವತಾ ಆರಾಧನಾ ಪದ್ದತಿಗಳ ನಂಬಿಕೆವುಳ್ಳವರು. ಇಂತಹ ಕುರುಹುಗಳು ದಾಖಲೆಯಾಗಿ ಉಳಿಯುವಂತೆ ಸಾಹಿತ್ಯ ರಚನೆ ಆಗಬೇಕು ಎಂದು ಹೇಳಿದರು. ಕೊಂಕಿಜರಮಲೆವರೆಗೆ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್, ಬುಡಕಟ್ಟು ಸಂಸ್ಕೃತಿ ಪದ್ದತಿಯನ್ನು ವಿಶ್ಲೇಷಣೆ ದೃಷ್ಟಿಯಿಂದ ನೋಡಬೇಕೆ ಹೊರೆತು, ತನಿಖೆಯಾಗಿ,ಟೀಕಾಕಾರರಾಗಿ ಅಲ್ಲ. ಜಿ.ವಿ. ಆನಂದ ಮೂರ್ತಿ ಸ್ವತಃ ಗೊಲ್ಲ ಜನಾಂಗ ಅಲ್ಲ. ಆದರೂ, ವಿಶಿಷ್ಟ ಆಚರಣೆ ಪದ್ದತಿಗಳನ್ನು ಬದುಕಾಗಿಸಿಕೊಂಡ ಗೊಲ್ಲರ ಜನ ಜೀವನ ಸಂಸ್ಕೃತಿಯನ್ನು ಅಧ್ಯಯನದ ಮೂಲಕ ದಾಖಲು ಮಾಡಿದ್ದಾರೆ. ಕೃಷ್ಣ ನದಿ ತೀರದ ನಾಗರಿಕತೆಯಿಂದ ಗುಂಪಾಗಿ ಚದುರಿದ ಗೊಲ್ಲ ಜನಾಂಗ, ರಾಜ್ಯದ ಚಿತ್ರದುರ್ಗ, ಬಳ್ಳಾರಿ, ತುಮಕೂರು ಭಾಗ ಸೇರಿ ಆಂಧ್ರ ಮತ್ತು ತಮಿಳುನಾಡಿನಲ್ಲಿ ಹೆಚ್ಚಾಗಿ ಕಾಣುತ್ತೇವೆ. ಸಂಖ್ಯಾತವಾಗಿ ಕಡಿಮೆ ಅನಿಸಿದರೂ ಸಾಂಸ್ಕೃತಿಕ ಮತ್ತು ಚಾರಿತ್ರಿಕ ಹಿನ್ನೆಲೆಯಲ್ಲಿ ವಾಸ್ತವ ಬದಲಾವಣೆಗೆ ಅನುಸಂಧಾನ ನಡೆಸುವ ಪದ್ದತಿ ಈ ಜನಾಂಗದ ವಿಶೇಷ. ಮ್ಯಾಸ ನಾಯಕರ ಮತ್ತು ಗೊಲ್ಲರ ಮೂಲ ಶ್ರೀಶೈಲ ಎನ್ನುತ್ತೇವೆ. ಬೆಡಗು ಮತ್ತು ಜಾತ್ರಾ ಉತ್ಸವ ಆಚರಣೆಗಳಲ್ಲೂ ಸಾಮ್ಯತೆ ಕಾಣುತ್ತೇವೆ. ಹುಲ್ಲುಗಾವಲು ಪ್ರಾಂತ್ಯ ಮ್ಯಾಸ ನಾಯಕರ ಅಧಿಪತ್ಯ. ಪಶುಪಾಲನೆ ವೃತ್ತಿಯ ಗೊಲ್ಲರಿಗೆ ಬೇಕಾದ ಹುಲ್ಲುಗಾವಲಿಗೆ ಯುದ್ದಗಳಾಗಿವೆ.ಜನಾಂಗದ ಈರಗಾರರನ್ನು ಹೋರಾಟಗಾರಾಗಿ ಕಾಣುತ್ತೇವೆ ಎಂದು ಹೇಳಿದರು. ಕೃತಿಕಾರ ಡಾ.ಜಿ.ವಿ. ಆನಂದ ಮೂರ್ತಿ, ಪ್ರಕಾಶಕ ಡಾ.ಎನ್. ಆರ್. ತಿಪ್ಪೇಸ್ವಾಮಿ, ಡಾ. ಕಲಮರಹಳ್ಳಿ ಮಲ್ಲಿಕಾರ್ಜುನ್ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಸಾಹಿತ ತಿಪ್ಪಣ್ಣ ಮರಿಕುಂಟೆ ತಾಲೂಕು ಕಾಡು ಗೊಲ್ಲರ ಸಂಘದ ಅಧ್ಯಕ್ಷ ಬೂದಿಹಳ್ಳಿ ರಾಜಣ್ಣ, ಸಾಹಿತಿ ಡಾ. ಸಿ. ಶಿವಲಿಂಗಪ್ಪ, ನಾಟಕ ಅಕಡಾಮಿ ಮಾಜಿ ಸದಸ್ಯ ಪಿ. ತಿಪ್ಪೇಸ್ವಾಮಿ ಇಓ ಎಚ್ ಶಶಿಧರ್ ,ಗದ್ದಿಗೆ ತಿಪ್ಪೇಸ್ವಾಮಿ, ನಿಸರ್ಗ ಗೋವಿಂದ್ ರಾಜ್, ಕೋಲಾಟ ಜಾನಪದ ಕಲಾವಿದ ನರಸಜ್ಜ ಹಾಗೂ ಜಾನಪದ ಕಲಾವಿದೆ ಸಿರಿಯಮ್ಮ ಸೇರಿದಂತೆ ಸಾಹಿತ್ಯಾಸಕ್ತರು ಇದ್ದರು..
- ಸಾಹಿತ್ಯ ಯುವ ಸಮುದಾಯಕ್ಕೆ ಆಧಾರ. ಅಧ್ಯಯನ ಶೀಲ ಸಾಹಿತ್ಯ ಸಮಾಜದಲ್ಲಿ ಉಳಿದು ಕೊಳ್ಳುತ್ತದೆ..ಶಾಸಕ ಟಿ.ರಘುಮೂರ್ತಿ. ಚಳ್ಳಕೆರೆ:ಅಧ್ಯಯನ ಶೀಲತೆಯಿಂದ ರೂಪಗೊಳ್ಳುವ ಸಾಹಿತ್ಯ ಯುವ ಸಮುದಾಯಕ್ಕೆ ಆಧಾರ. ಅಧ್ಯಯನ ಶೀಲ ಸಾಹಿತ್ಯ ಸಮಾಜದಲ್ಲಿ ಉಳಿದು ಕೊಳ್ಳುತ್ತದೆ ಎಂದು ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಹೇಳಿದರು. ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಹುಣ್ಣುಮೆ ಪ್ರಕಾಶನ ಇವರ ವತಿಯಿಂದ ಹಮ್ಮಿಕೊಂಡಿದ್ದ ಡಾ.ಜಿ.ವಿ. ಆನಂದ ಮೂರ್ತಿ ಅವರ ' ಕರಿಮಲೆಯಿಂದ ಕೊಂಕಿ ಜರಮಲೆವರೆಗೆ' ಕೃತಿ ಬಿಡುಗಡೆ ಸಮಾರಂಭವನ್ನು ಉದ್ಟಾಟನೆ ಮಾಡಿ ಮಾತನಾಡಿದರು. ಜಿ.ವಿ. ಆನಂದ ಮೂರ್ತಿ ಅವರು ಸುಮಾರು ಹತ್ತು ವರ್ಷಗಳ ಕಾಲ ಗೊಲ್ಲ ಸಮುದಾಯದ ಜನಜೀವನದ ಪದ್ದತಿಗಳನ್ನು ಅಧ್ಯಯನ ನಡೆಸಿ, ಬರೆದಿರುವ ಕೃತಿ ಪ್ರತಿಯೊಬ್ಬ ಓದುಗರ ಮನ ತಲುಪಲಿ. ಗೊಲ್ಲರ ಮತ್ತು ಮ್ಯಾಸ ನಾಯಕರ ಆಚಾರ ಪದ್ದತಿಗಳು ಮತ್ತು ಮನೆತನದ ಗುಡಿಕಟ್ಟೆ ದೇವರ ಅನುಸರಣೆಯಲ್ಲಿ ಹೊಲಿಕೆ ಇದೆ. ಗೊಲ್ಲರ ಹಟ್ಟಿಗಳಲ್ಲಿ ಮುಗ್ದತೆ ಕಾಣುತ್ತೇವೆ. ದೇವತಾ ಆರಾಧನಾ ಪದ್ದತಿಗಳ ನಂಬಿಕೆವುಳ್ಳವರು. ಇಂತಹ ಕುರುಹುಗಳು ದಾಖಲೆಯಾಗಿ ಉಳಿಯುವಂತೆ ಸಾಹಿತ್ಯ ರಚನೆ ಆಗಬೇಕು ಎಂದು ಹೇಳಿದರು. ಕೊಂಕಿಜರಮಲೆವರೆಗೆ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್, ಬುಡಕಟ್ಟು ಸಂಸ್ಕೃತಿ ಪದ್ದತಿಯನ್ನು ವಿಶ್ಲೇಷಣೆ ದೃಷ್ಟಿಯಿಂದ ನೋಡಬೇಕೆ ಹೊರೆತು, ತನಿಖೆಯಾಗಿ,ಟೀಕಾಕಾರರಾಗಿ ಅಲ್ಲ. ಜಿ.ವಿ. ಆನಂದ ಮೂರ್ತಿ ಸ್ವತಃ ಗೊಲ್ಲ ಜನಾಂಗ ಅಲ್ಲ. ಆದರೂ, ವಿಶಿಷ್ಟ ಆಚರಣೆ ಪದ್ದತಿಗಳನ್ನು ಬದುಕಾಗಿಸಿಕೊಂಡ ಗೊಲ್ಲರ ಜನ ಜೀವನ ಸಂಸ್ಕೃತಿಯನ್ನು ಅಧ್ಯಯನದ ಮೂಲಕ ದಾಖಲು ಮಾಡಿದ್ದಾರೆ. ಕೃಷ್ಣ ನದಿ ತೀರದ ನಾಗರಿಕತೆಯಿಂದ ಗುಂಪಾಗಿ ಚದುರಿದ ಗೊಲ್ಲ ಜನಾಂಗ, ರಾಜ್ಯದ ಚಿತ್ರದುರ್ಗ, ಬಳ್ಳಾರಿ, ತುಮಕೂರು ಭಾಗ ಸೇರಿ ಆಂಧ್ರ ಮತ್ತು ತಮಿಳುನಾಡಿನಲ್ಲಿ ಹೆಚ್ಚಾಗಿ ಕಾಣುತ್ತೇವೆ. ಸಂಖ್ಯಾತವಾಗಿ ಕಡಿಮೆ ಅನಿಸಿದರೂ ಸಾಂಸ್ಕೃತಿಕ ಮತ್ತು ಚಾರಿತ್ರಿಕ ಹಿನ್ನೆಲೆಯಲ್ಲಿ ವಾಸ್ತವ ಬದಲಾವಣೆಗೆ ಅನುಸಂಧಾನ ನಡೆಸುವ ಪದ್ದತಿ ಈ ಜನಾಂಗದ ವಿಶೇಷ. ಮ್ಯಾಸ ನಾಯಕರ ಮತ್ತು ಗೊಲ್ಲರ ಮೂಲ ಶ್ರೀಶೈಲ ಎನ್ನುತ್ತೇವೆ. ಬೆಡಗು ಮತ್ತು ಜಾತ್ರಾ ಉತ್ಸವ ಆಚರಣೆಗಳಲ್ಲೂ ಸಾಮ್ಯತೆ ಕಾಣುತ್ತೇವೆ. ಹುಲ್ಲುಗಾವಲು ಪ್ರಾಂತ್ಯ ಮ್ಯಾಸ ನಾಯಕರ ಅಧಿಪತ್ಯ. ಪಶುಪಾಲನೆ ವೃತ್ತಿಯ ಗೊಲ್ಲರಿಗೆ ಬೇಕಾದ ಹುಲ್ಲುಗಾವಲಿಗೆ ಯುದ್ದಗಳಾಗಿವೆ.ಜನಾಂಗದ ಈರಗಾರರನ್ನು ಹೋರಾಟಗಾರಾಗಿ ಕಾಣುತ್ತೇವೆ ಎಂದು ಹೇಳಿದರು. ಕೃತಿಕಾರ ಡಾ.ಜಿ.ವಿ. ಆನಂದ ಮೂರ್ತಿ, ಪ್ರಕಾಶಕ ಡಾ.ಎನ್. ಆರ್. ತಿಪ್ಪೇಸ್ವಾಮಿ, ಡಾ. ಕಲಮರಹಳ್ಳಿ ಮಲ್ಲಿಕಾರ್ಜುನ್ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಸಾಹಿತ ತಿಪ್ಪಣ್ಣ ಮರಿಕುಂಟೆ ತಾಲೂಕು ಕಾಡು ಗೊಲ್ಲರ ಸಂಘದ ಅಧ್ಯಕ್ಷ ಬೂದಿಹಳ್ಳಿ ರಾಜಣ್ಣ, ಸಾಹಿತಿ ಡಾ. ಸಿ. ಶಿವಲಿಂಗಪ್ಪ, ನಾಟಕ ಅಕಡಾಮಿ ಮಾಜಿ ಸದಸ್ಯ ಪಿ. ತಿಪ್ಪೇಸ್ವಾಮಿ ಇಓ ಎಚ್ ಶಶಿಧರ್ ,ಗದ್ದಿಗೆ ತಿಪ್ಪೇಸ್ವಾಮಿ, ನಿಸರ್ಗ ಗೋವಿಂದ್ ರಾಜ್, ಕೋಲಾಟ ಜಾನಪದ ಕಲಾವಿದ ನರಸಜ್ಜ ಹಾಗೂ ಜಾನಪದ ಕಲಾವಿದೆ ಸಿರಿಯಮ್ಮ ಸೇರಿದಂತೆ ಸಾಹಿತ್ಯಾಸಕ್ತರು ಇದ್ದರು..1
- ವಿವರಗಳು: ಹುಂಜನಾಳು ಗ್ರಾಮ, ಸರ್ವೇ ನಂ. 69/1ರಲ್ಲಿ 3 ಎಕರೆ 25 ಗುಂಟೆ ಜಮೀನು ನಮ್ಮ ಕುಟುಂಬದ ಅಸ್ತಿ, ಪಹಣಿಯಲ್ಲಿ ರಂಗತಾಯಿ ಶಿಬಿ ಮತ್ತು ಶಿಬಿತಾಯಿ ಶಿಬಿ ಜಂಟಿ ಮಾಲಿಕರಾಗಿದ್ದಾರೆ.ನಕಲಿ ಭೂ ಪರಿಹಾರ ಪಡೆದ ಫಲಾನುಭವಿ ಯು ನೀಡಿದ ನಕಲಿ ವಂಶ ವೃಕ್ಷಕ್ಕೆ ಅಧಿಕಾರಿಗಳು ಬೆಂಬಸಿ ಪರಿಹಾರ ನೀಡಿದ್ದಾರೆ. ಆದರೆ (ಕಂದಾಯ ಇಲಾಖೆ ನೀಡಿದ ವಂಶವೃಕ್ಷದಲ್ಲಿ ನಮ್ಮ ಹೆಸರುಗಳು ಇವೆ.ಡಿಜಿಟಲ್ ರೂಪದ ವಂಶ ವೃಕ್ಷ ನೀಡಿದ್ದೇವೆ.) ಇಲಾಖೆ ಅಧಿಕಾರಿಗಳು ನೈಜಿ ಪಲಾನುಭವಿಗಳಾದ ನಮನೆಗೆ ಪರಿಹಾರ ನೀಡಲು ಮುಂದಾದರೆ ಕಾನೂನು ಶಿಕ್ಷೆಗೆ ಒಳಗಾಗುತ್ತೇವೆ ಎನ್ನುವ ಆತಂಕದಿಂದ ನಮ್ಮನ್ನು ದಾರಿ ತಪ್ಪಿಸಲು ಇದೀಗ ಇಲಾಖೆ ಅಧಿಕಾರಿಗಳು ಖುದ್ದು ಬೆಂಬಲಿಸಿದ ನಕಲಿ ಫಲಾನುಭವಿಗೆ ರಾಜಿ ಮಾಡಿಕೊಳ್ಳುವಂತೆ ರೆಜಿಲೆಶನ್ (ನಡಾವಳಿ ಪುಸ್ತಕ) ದಲ್ಲಿ ಸಹಿ ಮಾಡಿಸಿ ರಾಜಿ ಸಂಧಾನಕ್ಕೆ ಒಪ್ಪಿಸಿ ಇದೀಗ ನಕಲಿ ವ್ಯಕ್ತಿ ಯನ್ನು ಬೆಂಬಲಿಸಿ ತಪ್ಪಿಸಿಕೊಂಡು ಓಡಿ ಹೋಗುವಂತೆ ಮಾಡಿದ್ದಾರೆ. ಹಾಗೂ ಅಧಿಕಾರಿಗಳ ತಪ್ಪನ್ನು ಮರೆಮಾಚಿಕೊಳ್ಳಲು ನಕಲಿ ವ್ಯಕ್ತಿಯ ಮೇಲೆ ಮಾತ್ರವೇ ಕ್ರಮ ಜರುಗಿಸುತ್ತೇವೆ ಎಂದು ತಿಳಿಸಿದ್ದಾರೆ. ಒಂದು ವೇಳೆ ನಕಲಿ ವ್ಯಕ್ತಿಯು ಪರಿಹಾರದ ಹಣ ದುರುಪಯೋಗಿಸಿಕೊಂಡು ನೈಜ ಫಲನು ಭವಿಗಳಾದ ನಮಗೆ ಹಣ ನೀಡದೆ ತಪ್ಪಿಸಿಕೊಂಡಲ್ಲಿ ಇಲಾಖೆ ಯವರೇ ನೇರ ಹೊಣೆ ಗೆ ಕಾರಣಿಭೂತರಾಗಿರುತ್ತಾರೆ ಈ ಬಗ್ಗೆ ದಿನಾಂಕ 03-04-2026 ರಂದು ವ್ಯಾಪ್ತಿ ಪೊಲೀಸ್ ಠಾಣೆ ಯಲ್ಲಿ ನಕಲಿ ದಾಖಲೆ ಸೃಷ್ಟಿಸಿದ & ಈ ದಾಖಲೆಗೆ ಬೆಂಬಲಿಸಿದ ಸಂಗಟಿತರ ವಿರುದ್ಧ ಶಿಸ್ತು ಕ್ರಮಕ್ಕೆ ದೂರು ಧಾಖಲಿಸಿರುತ್ತೇನೆ. KIADB ಭೂಸ್ವಾಧೀನ ನೋಟಿನ್ನಲ್ಲಿ ಎಕರೆಗೆ ₹40 ಲಕ್ಷ ಪರಿಹಾರ ದ ನೋಟಿಸ್ ನೀಡಿದ್ದು ನೈಜ ಜಂಟಿ ಮಾಲೀಕತ್ವದಾರರದ ನಮಗೆ ನೀಡಿದ ಅಧಿಕಾರಿಗಳು ನಮಗೆ ಮೋಸ ಎಸಾಗಿರುತ್ತಾರೆ. ಆದರೆ ಗೋಪಾಲಯ್ಯ (ಸಂಬಂಧಿ. ಸಂ ಲೇಟ್ ರಂಗಯ್ಯ) ನಕಲಿ ದಾಖಲೆಗಳೊಂದಿಗೆ (ದಿನಾಂಕ 27.11.209) ₹1.45 ಕೋಟಿ ಪರಿಹಾರವನ್ನು 27.11.2025ರಂದು ಐಕೋ ಬ್ಯಾಂಕ್ RTGS ಮೂಲಕ ಪಡೆದಿದ್ದಾರೆ. ನಾವು 18.03.2026ರಂದು KIADB ಕಚೇರಿಗೆ ಭೇಟಿ ನೀಡಿ ವಿಚಾರಿಸಿದಾಗ ಇಲಾಖೆಯವರು ಇದನ್ನು ದೃಢಪಡಿಸಿದರು. ಭೂಸ್ವಾಧೀನಾಧಿಕಾರಿಗಳು ಜಂಟಿ ಮಾಲಕರನ್ನು ಪರಿಗಣಿಸದೆ ಒಬ್ಬರಿಗೆ ಮಾತ್ರ ಪಾವತಿ ಮಾಡಿದ್ದಾರೆ ಎಂಬುದನ್ನು ಭೂ ಸ್ವಧೀನಾಧಿಕಾರಿಗಳ ಅರಿವಿಗೆ ತಂದಾಗ, ದಾಖಲೆಗಳನ್ನು ಪರಿಶೀಲಿಸಿ ನೈಜ ಫಲಾನುಭವಿಗಳಾದ ನಾವು ಮೋಸ ಹೋಗಿರುವುದು ಸ್ಪಷ್ಟವಾಗಿ ಕಂಡುಬದಿರುತ್ತದೆ. (25.03.2026), ಅಧಿಕಾರಿಗಳು ಗೋಪಾಲಯ್ಯ ಮತ್ತು ನಮ್ಮನ್ನು ಕರೆಸಿ ಒಳ-ಒಪ್ಪಂದಕ್ಕೆ ಒತ್ತಾಯ ಮಾಡಿದರು. ಯಾವುದೇ ಕ್ರಮ ಜರುಗಿಸಲಿಲ್ಲ. ಇದೀಗ ಅಧಿಕಾರಿಗಳು ಗೋಪಾಲಯ್ಯ ವಿರುದ್ಧ ದೂರು ನೀಡುವುದಾಗಿ ಹೇಳುತ್ತ, ತಮ್ಮ ತಪ್ಪನ್ನು ಮರೆಮಾಚಲು ಮುಂದಾಗಿದ್ದಾರೆ. ಅಧಿಕಾರಿಗಳ ತಪ್ಪುಗಳು (Points): (Karnataka Land Revenue Act ಸೆಕ್ಷನ್ 95 ರ ನಿಯಮದಂತೆ ಜಂಟಿ ಪಹಣಿ/ವಂಶವೃಕ್ಷ ಪರಿಶೀಲಿಸದೆ ನಕಲಿ ದಾಖಲೆಗಳನ್ನು (KIADB Rules, 1969 ರೂಲ್ 6 ಮತ್ತು LARR Act ಸೆಕ್ಷನ್ 11 ನಿಯಮದಂತೆ ದಾಖಲೆ ಸತ್ಯಾಪನ ಕಡ್ಡಾಯ); ಒಪ್ಪಿಕೊಂಡರು.ಪರಿಹಾರ ನೀಡಿ ಇತರ ಜಂಟಿ ಮಾಲೀಕತ್ವದಾರರಿಗೆ ಮೋಸ ಎಸಾಗಿರುವುದು ಏಕ ಮಾತ್ರ ವ್ಯಕ್ತಿಗೆ RTGS ಮಾಡಿರುವುದು ಸ್ಪಷ್ಟ ಉಲ್ಲೇವಾಗಿದೆ.ಭೂಪರಿಹಾರ ಕಾನೂನು ಪ್ರಕಾರ ( (LARR Act ಸೆಕ್ಷನ್ 23)) ಜಂಟಿ ಖಾತೆಗೆ ಪಾವತಿ ಮಾಡದ ಒಬ್ಬರಿಗೆ ಮಾತ್ರ RTGS ಮಾಡಲಾಗಿದೆ. ನಕಲಿ ದಾಖಲೆಗಳನ್ನು ಸಹ್ಯಾಪಿಸದೆ ₹1.45 ಕೋಟಿ ನೀಡಲಾಗಿದೆ (KIADB Act ಸೆಕ್ಷನ್ 29(1) ಪ್ರಕಾರ ಪರಿಹಾರ ನ್ಯಾಯಪರವಾಗಿ ವಿಂಗಡಿಸಬೇಕು). Indian Evidence Act, 1872 - ಸೆಕ್ಷನ್: 61-66 ನಿಯಮದ ವಿರುದ್ಧವಾಗಿ( 3 ತಿಂಗಳ ಕಾಲವಧಿಯವರೆಗೆ ನಕಲಿ ಫಲನುಭವಿಯ ಒಬ್ಬನ ಬಳಿಯೇ ಹಣ ಇರಿಸಲಾಗಿದೆ.) ಮನವಿದಾರ( ಜಂಟಿ ಮಾಲೀಕತ್ವ ದಾರ)/ಫಲನಭವಿ ದೂರು ತಿಳಿಸಿದ ನಂತರ ತನಿಖೆಯ ಬದಲು ಒಳ-ಒಪ್ಪಂದಕ್ಕೆ ಒತ್ತಡ ಹೇರದೇ(KIADB Regulations) ರಲ್ಲಿ ಕಡ್ಡಾಯ ತನಿಖೆಗೆ ನಿರ್ದೇಶಿಸಬೇಕು. ಇಲಾಖೆಯ ಕಾನೂನು ಸಲಹೆಗಾರ/ವಕೀಲರು ಮತ್ತು ವ್ಯವಸ್ಥಾಪಕ ರವರು ದಾಖಲೆಗಳನ್ನು ಪರಿಶೀಲಿಸದೇ ತಪ್ಪುಗಳನ್ನು ಮರೆಮಾಚಲು ಯತ್ನಿಸಲಾಗಿದೆ. ಸದರಿ ಇಲಾಖೆಯ ಕಾನೂನು ಸಲಹೆಗಾರ & ವ್ಯವಸ್ಥಾಪಕರು ಅಂತಿಮ ಅನುಮೋದನೆ ನೀಡಿದ ಸದರಿ ಇಲಾಖೆಯಲ್ಲಿ ಇಂತಹ ಎಲ್ಲ ಜಂಟಿ ಮಾಲೀಕತ್ವದ ಸರ್ವೇ ನಂಬರ್ಗಳಲ್ಲಿ ನಕಲಿ ಪರಿಹಾರಗಳ ತನಿಖೆ ನಡೆಸದಿರುವುದು ಮನವಿ: 1. ಗೋಪಾಲಯ್ಯ, KIADB ಅಧಿಕಾರಿಗಳು, ಮತ್ತು ಭೂಸ್ವಾಧೀನಾಧಿಕಾರಿಗಳ ವಿರುದ್ಧ IPC 420 (ಮೋಸ), 467 (ನಕಲಿ ದಾಖಲೆ), 120B ಅಡಿಯಲ್ಲಿ ಸಂಬಂಧ ರಾಜ್ಯ ಪ್ರಾಧಿಕಾರ ದೂರು ಧಾಖಲಿಸಿ ತನಿಖೆ ನಡೆಸಿ ಎಂದು ಮನವಿ. 2. ನಮಗೆ ಸೇರಿದ ಪಾಲು ಪರಿಹಾರ (ಜಂಟಿ ಜಮೀನಿನ ಪ್ರಮಾಣದಂತೆ) (LARR Act ಸೆಕ್ಷನ್ 26 ನಿಯಮದಂತೆ) ತಕ್ಷಣ ಪಾವತಿ ಮಾಡಿ. 3. ಸದರಿ ತುಮಕೂರು KIADB ಇಲಾಖೆಯಲ್ಲಿ ಇಂತಹ ಎಲ್ಲಾ ಸರ್ವೇ ನಂಬರ್ಗಳ ತನಿಖೆ ನಡೆಸಿ. (KIADB Act ಸೆಕ್ಷನ್ 31). ರಡಿಯಲ್ಲಿ ಕ್ರಮ ಕ್ಕೆ ಮುಂದಾಗಬೇಕಾಗಿ ಮನವಿ. 4. ತಪ್ಪು ಮಾಡಿದ ಅಧಿಕಾರಿಗಳನ್ನು ಶಿಕ್ಷಿಸಿ (/ದಂಡ).ವಿಧಿಸಿ ಕಾನೂನು ಕ್ರಮಕ್ಕೆ ಒಪ್ಪಿಸಿವುದು.(KIADB Rules ರೂಲ್ 12). ನಿಯಮವನ್ನು ಅನುಸರಿಸುವಂತೆ ಮನವಿ. 5. ನಕಲಿ ದಾಖಲೆ ನೀಡಿದ ಗೋಪಾಲಯ್ಯ, ಹಾಗೂ ನಕಲಿ ದಾಖಲೆ ಗಳನ್ನು ಪರಿಶೀಲಿಸದೇ ಬೆಂಬಲಿಸಿದ KIADB ... 2 IPC 420, 467, 120B + CrPC 154 Indian Evidence Act 73 + Prevention of Corruption Act 13 ಅಡಿಯಲ್ಲಿ ದೂರು ಧಾಖಲಿಸಿ ತನಿಖೆ ನಡೆಸಿ. ನಮಗೆ ಸೇರಿದ ಹಣದಪಾಲುಹಣ ಮುಂಗಡ/ನೇರವಾಗಿ ಪಡೆದ ನಕಲಿ ಫಲನುಭವಿಯ ಬಳಿ 3 ತಿಂಗಳಿಗೂ ಅಧಿಕ ಇರಿಸಿದ್ದು. ನ್ಯಾಯುತ ಬಡ್ಡಿ ಕ ಆತನು ಪಡೆದ ಲಾಭವನ್ನು ನಮ್ಮ ಪಾಲು ಹಣದೊಂದಿಗೆ RTGS ಮೂಲಕ ತಕ್ಷಣ ಪಾವತಿ ಮಾಡಿ." ಎಂದು ಈ ಮೂಲಕ ಮನವಿ ಮಾಡುತ್ತೇನೆ.4
- ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ತಾಲೂಕು ಆಡಳಿತದ ನಿರ್ಲಕ್ಷ್ಯ ಹಾಗೂ ಅಸಂವೇದನಶೀಲ ನಡೆಗೆ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ರಾಷ್ಟ್ರ ನಾಯಕ, ದಲಿತ ಸಮುದಾಯದ ಧ್ವನಿ, ಸ್ವಾತಂತ್ರ್ಯ ಹೋರಾಟಗಾರರಾದ ಡಾಕ್ಟರ್ ಬಾಬು ಜಗಜೀವನ್ ರಾಮ್ ಅವರಂತಹ ಮಹಾನ್ ವ್ಯಕ್ತಿಯ ಜಯಂತಿಯನ್ನು ಆಚರಿಸುವ ಸಂದರ್ಭದಲ್ಲಿ ತೋರಿಸಲಾದ ಅಸಹ್ಯಕರ ವರ್ತನೆ ಜನಮನಗಳಲ್ಲಿ ಆಕ್ರೋಶವನ್ನುಂಟುಮಾಡಿದೆ. ತಾಲೂಕು ದಂಡಾಧಿಕಾರಿಗಳ ಕಚೇರಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಅವರ ಭಾವಚಿತ್ರವನ್ನು ಗೌರವದಿಂದ ಅಲಂಕರಿಸಿ ಪೂಜಿಸುವ ಬದಲು ಕಾಲಡಿಯಲ್ಲಿ ಬಿಸಾಕಿರುವುದು ಕೇವಲ ನಿರ್ಲಕ್ಷ್ಯವಲ್ಲ - ಇದು ದೇಶದ ಸಂವಿಧಾನಾತ್ಮಕ ಮೌಲ್ಯಗಳಿಗೆ, ಸಾಮಾಜಿಕ ನ್ಯಾಯಕ್ಕೆ ಮತ್ತು ಸಮಾನತೆಗೆ ನೀಡಿದ ಅಪಮಾನವಾಗಿದೆ. ಇಂತಹ ಘಟನೆ ಒಂದು ಸರ್ಕಾರಿ ಕಚೇರಿಯಲ್ಲಿ ನಡೆದಿರುವುದು ಅತ್ಯಂತ ಖೇದಕರ ಮತ್ತು ನಾಚಿಕೆಗೆಡಿಸುವ ವಿಷಯ. ಡಾ. ಬಾಬು ಜಗಜೀವನ್ ರಾಮ್ ಅವರು ತಮ್ಮ ಜೀವನವನ್ನೇ ಅಸ್ಪೃಶ್ಯತೆ, ವರ್ಣ ವ್ಯವಸ್ಥೆ ಮತ್ತು ಸಾಮಾಜಿಕ ಅಸಮಾನತೆ ವಿರುದ್ಧ ಹೋರಾಟಕ್ಕೆ ಅರ್ಪಿಸಿದ ಮಹಾನ್ ನಾಯಕರು. ಅಂತಹ ಮಹಾನ್ ವ್ಯಕ್ತಿಯ ಭಾವಚಿತ್ರವನ್ನು ಕಾಲಡಿಯಲ್ಲಿ ಇಡುವ ಮೂಲಕ ತಾಲೂಕು ಆಡಳಿತವೇ ಮತ್ತೆ ಅಸ್ಪೃಶ್ಯತೆಯ ಕಪ್ಪು ನೆರಳನ್ನು ಪ್ರದರ್ಶಿಸಿರುವುದು ವಿಷಾದನೀಯ. ಈ ಘಟನೆ ಕೇವಲ ಒಂದು ತಪ್ಪು ಎಂದು ನಿರ್ಲಕ್ಷಿಸಲು ಸಾಧ್ಯವಿಲ್ಲ. ಇದು ಆಡಳಿತದ ನಿರ್ಲಕ್ಷ್ಯ, ಅಜಾಗರೂಕತೆ ಹಾಗೂ ದಲಿತ ಸಮುದಾಯದ ಭಾವನೆಗಳ ಬಗ್ಗೆ ಇರುವ ಅಸಮ್ಮಾನದ ಸ್ಪಷ್ಟ ಉದಾಹರಣೆ. ಸಾರ್ವಜನಿಕ ಕಚೇರಿಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದರೆ, ಸಾಮಾನ್ಯ ಜನತೆಗೆ ಯಾವ ರೀತಿಯ ಸಂದೇಶ ಹೋಗುತ್ತದೆ ಎಂಬುದನ್ನು ಅಧಿಕಾರಿಗಳು ಅರಿತುಕೊಳ್ಳಬೇಕು. ತಾಲೂಕು ದಲಿತ ಸಂಘಟನೆಗಳು ವ್ಯಕ್ತಪಡಿಸಿರುವ ಆಕ್ರೋಶ ನ್ಯಾಯಸಮ್ಮತವಾಗಿದೆ. ಈ ಘಟನೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ತಕ್ಷಣವೇ ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕು. ಜೊತೆಗೆ, ಇಂತಹ ಘಟನೆಗಳು ಪುನರಾವರ್ತನೆ ಆಗದಂತೆ ಸೂಕ್ತ ಮಾರ್ಗಸೂಚಿಗಳು ಹಾಗೂ ಸಂವೇದನಾಶೀಲತಾ ತರಬೇತಿಗಳನ್ನು ಸರ್ಕಾರ ಜಾರಿಗೊಳಿಸಬೇಕು. ರಾಷ್ಟ್ರ ನಾಯಕರಿಗೆ ಗೌರವ ನೀಡುವುದು ನಮ್ಮ ಕರ್ತವ್ಯ - ಅದನ್ನು ಕಾಪಾಡುವುದು ಆಡಳಿತದ ಹೊಣೆಗಾರಿಕೆ. ನಾಗರಾಜ್ ಕಲ್ಲಹಳ್ಳಿ3
- ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಯೂನಿಟೆಡ್ ಕ್ರಿಶ್ಚಿಯನ್ ಅಸೋಸಿ ಯೇಷನ್ ವತಿಯಿಂದ ಶುಭ ಶುಕ್ರವಾರ (ಗುಡ್ ಫ್ರೈಡೆ) ಮತ್ತು ಭಾನುವಾರ ಪುನರುತ್ಥಾನ (ಈಸ್ಟರ್) ಪ್ರಯುಕ್ತ ಪ್ರತಿ ವರ್ಷದಂತೆ ಈ ಬಾರಿ ಸಹ ಶಾಂತಿ ಮತ್ತು ಸೌಹಾರ್ದತೆಗಾಗಿ ನಗರದಲ್ಲಿ ಆಯೋಜಿಸ ಲಾಗಿದ್ದ `ರನ್ ಫಾರ್ ಜೀಸಸ್' ಕಾರ್ಯಕ್ರಮಕ್ಕೆ ತಾಲೂಕಿನ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ರೈಟ್ ರೆವೆರೆಂಡ್ ಡಾ. ಜೋಸೆಫ್ ಅರಮಚ್ಚಾದತ್ ಚಾಲನೆ ನೀಡಿದರು. ಆರಂಭದಲ್ಲಿ ನಗರದ ಬಿ.ಎಚ್ ರಸ್ತೆ, ಅಂಬೇಡ್ಕರ್ ವೃತ್ತದಲ್ಲಿ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾನವ ಕುಲಕ್ಕೆ ಯೇಸು ಕ್ರಿಸ್ತರ ತ್ಯಾಗ, ಬಲಿದಾನ ಸ್ಮರಿಸಲಾಯಿತು. ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ ಮತ್ತು ರಂಗಪ್ಪ ವೃತ್ತ ಮೂಲಕ ಕನಕಮಂಟಪ ಮೈದಾನದವರೆಗೂ `ರನ್ ಫಾರ್ ಜೀಸಸ್' ನಡೆಯಿತು. ಪ್ರಮುಖ ವೃತ್ತಗಳಲ್ಲಿ ಯೇಸು ಕ್ರಿಸ್ತರ ಜೀವನ ಚರಿತ್ರೆ ಹಾಗು ಮರಣದ ಕೊನೆಯ ಕ್ಷಣಗಳ ದೃಶ್ಯಗಳನ್ನು ನಾಟಕದ ಮೂಲಕ ಪ್ರದರ್ಶಿಸಲಾಯಿತು. ಅಲ್ಲದೆ ಮಧ್ಯಪ್ರಾಚ್ಯ ರಾಷ್ಟ್ರ(ಕೊಲ್ಲಿ ರಾಷ್ಟ್ರಗಳು)ಗಳಲ್ಲಿ ನಡೆಯುತ್ತಿರುವ ಯುದ್ಧ ಅಂತ್ಯಗೊಂಡು ಶಾಂತಿ ನೆಲೆಗೊಳ್ಳುವಂತೆ ಧರ್ಮಗುರುಗಳ ನೇತೃತ್ವದಲ್ಲಿ ಪ್ರಾರ್ಥಿಸ ಲಾಯಿತು.ಯೂನಿಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ಅಧ್ಯಕ್ಷ ಸೆಲ್ವರಾಜ್ ಮತ್ತು ವೈಎಂಸಿಎ ಅಧ್ಯಕ್ಷ ಆರ್. ಮೋಸಸ್ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಲಾಗಿತ್ತು.1
- ಜಾತ್ರೆಯಲ್ಲಿ ಭೀಕರ ದುರಂತ: 60 ಅಡಿ ಎತ್ತರದ ದೈತ್ಯ ಚಕ್ರ ಕುಸಿದು 40ಕ್ಕೂ ಹೆಚ್ಚು ಜನರಿಗೆ ಗಾಯ! #JB_News_Kannada ಉತ್ತರ ಪ್ರದೇಶದಲ್ಲಿ1
- 2026 ರ ಏಪ್ರಿಲ್ 1 ರಿಂದ 15 2026 ರ ಏಪ್ರಿಲ್ 1 ರಿಂದ 15 ರವರೆಗೆ ಎಲ್ಲಾ ನಾಗರಿಕರು ಅಧಿಕೃತ ಪೋರ್ಟಲ್1
- ಬಾಬು ಜಗಜೀವನರಾಂ ಜಯಂತಿ: ಸಮಾನತೆಗೆ ಶ್ರಮಿಸಿದ್ದ ರಾಜಕೀಯ ಮುತ್ಸದ್ದಿ :-ಶಾಸಕ ಎಸ್. ಎನ್.ಸುಬ್ಬಾರೆಡ್ಡಿ ಬಾಗೇಪಲ್ಲಿ:-ಉಪ ಪ್ರಧಾನಿ ದಿ.ಬಾಬು ಜಗಜೀವನರಾಂ ಅವರು ಸತತ ಮೂವತ್ತು ವರ್ಷಗಳು ಸಂಪುಟ ದರ್ಜೆ ಸಚಿವರಾಗಿ ದೇಶದ ಅಭಿವೃದ್ಧಿಗಾಗಿ ಶ್ರಮಿಸಿದ ಮಹಾನ್ ನಾಯಕ. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ, ಶಿಕ್ಷಣದಿಂದ ಪ್ರತಿಯೊಬ್ಬ ವ್ಯಕ್ತಿಯೂ ಜೀವನದಲ್ಲಿ ಬದಲಾವಣೆ ಕಾಣಲು ಸಾಧ್ಯವಿದೆ ಎಂದು ಶಾಸಕ ಎಸ್. ಎನ್.ಸುಬ್ಬಾರೆಡ್ಡಿ ಹೇಳಿದರು. ಅವರು ಪಟ್ಟಣದ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯ್ತಿ,ಜಿಲ್ಲಾ ಪಂಚಾಯತಿ, ಪುರಸಭೆ, ಹಾಗೂ ಸಮಾಜಕಲ್ಯಾಣ ಇಲಾಖೆ ಸಹಯೋಗದಲ್ಲಿ ಭಾನುವಾರ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಿದ್ದ ಮಾಜಿ ಉಪ ಪ್ರಧಾನಿ ದಿ.ಬಾಬು ಜಗಜೀವನರಾಂ ಅವರ 119ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಬಾಬು ಜಗಜೀವನರಾಂ ಚಿತ್ರಪಟಕ್ಕೆ ಪುಷ್ಪ ನಮನ ಹಾಗೂ ದೀಪಾ ಬೆಳಗಿಸಿ ಮಾತನಾಡಿದರು. ಮಾಜಿ ಉಪಪ್ರಧಾನಿ, ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನರಾಮ್ ಅವರು ಜನರ ಒಳಿತಾಗಿ ಕ್ರಾಂತಿಕಾರಿ ನಿಲುವು ಮತ್ತು ಅಭಿವೃದ್ಧಿಗಾಗಿ ಒಲವು ಎರಡನ್ನೂ ಮೈಗೂಡಿಸಿಕೊಂಡಿದ್ದ ಅಪ್ರತಿಮ ನಾಯಕ ಎಂದು ಅವರು ತಿಳಿಸಿದರು. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡಿದ್ದಾಗ ಮಾತ್ರ ಒಳ್ಳೆಯ ಉದ್ಯೋಗ ಅಧಿಕಾರ ಪಡೆಯಲು ಸಾಧ್ಯವಿದೆ. ಎಲ್ಲಾ ಸಮಾಜದವರು ಒಗ್ಗೂಡಿ ಇಂತಹ ಮಹಾನ್ ವ್ಯಕ್ತಿಗಳ ಜೀವನ ಕುರಿತು ಅರಿತುಕೊಳ್ಳಬೇಕು. ಅವರ ಸಾಧನೆ ಇಂದಿನ ಜನಾಂಗಕ್ಕೆ ಪ್ರೇರಣೆ ಆಗಬೇಕು’ ಎಂದರು. ತಹಸೀಲ್ದಾರ್ ಮನೀಷಾ ಮಹೇಶ ಪತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ ಭಾರತದಲ್ಲಿ ದೀರ್ಘ ಕಾಲದಿಂದ ಬೆಳೆದುಕೊಂಡು ಬಂದಿದ್ದ ಮೇಲು-ಕೀಳು ತಾರತಮ್ಯ, ಜಾತಿ ಪದ್ಧತಿ, ಅಸ್ಪೃಶ್ಯ ಎಂಬ ಮನೋಭಾವಗಳನ್ನು ತೊಡೆದು ಹಾಕಲು ಸಾಮಾಜಿಕ ನೆಲೆಗಟ್ಟಿನಲ್ಲಿ ಹೋರಾಡಿದವರು ಅನೇಕರು. ಆದರೆ ಅವರ ಏಳಿಗೆಗೆ ಹೆಚ್ಚಿನ ಚುರುಕು ನೀಡಿ ಒಂದು ಸ್ಪಷ್ಟ ರೂಪ ಕೊಟ್ಟ ಕೆಲವೇ ಕೆಲವು ನಾಯಕರಲ್ಲಿ ಬಾಬು ಜಗಜೀವನ ರಾಮ್ ಒಬ್ಬರು. ಸಮಾಜದಲ್ಲಿನ ಅಸ್ಪೃಶ್ಯತೆಯನ್ನು ಹೋಗಲಾಡಿಸುವಲ್ಲಿ ಬಾಬೂಜಿ ಕೊಡುಗೆ ಅಪಾರವಾಗಿದೆ. ಜಾತಿ ವ್ಯವಸ್ಥೆಯನ್ನು ತೊಡೆದುಹಾಕಿ ಎಲ್ಲರಲ್ಲೂ ಸಮಾನತೆ ತರುವುದು ಅವರ ಮುಖ್ಯ ಉದ್ದೇಶವಾಗಿತ್ತು. ದೇಶದಲ್ಲಿ ಸಮರ್ಪಕವಾಗಿ ಎಲ್ಲರಿಗೂ ಆಹಾರ ದೊರೆಯದೇ ಇದ್ದಾಗ ಕೇಂದ್ರದಲ್ಲಿ ಕೃಷಿ ಸಚಿವರಾಗಿ ಕೃಷಿಯಲ್ಲಿ ಗಣನೀಯ ಬದಲಾವಣೆ ತಂದರು. ಹಸಿರು ಕ್ರಾಂತಿ ರೂಪಿಸಿ ರೈತರನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸಿದರು. ಆಹಾರ ಉತ್ಪಾದನೆ ಹೆಚ್ಚಿಸಿದರು’ ಎಂದು ಬಣ್ಣಿಸಿದರು. ಈ ಸಂದರ್ಭದಲ್ಲಿ ಬಿಇಓ ಎನ್ ವೆಂಕಟೇಶಪ್ಪ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕೆ.ರಾಮಚಂದ್ರ, ಕೈಗಾರಿಕಾ ವಿಸ್ತರ್ಣಾಧಿಕಾರಿಗಳಾದ ಮೆಹಬೂಬ್ ಬಾಷಾ ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕಿ ಜಿ.ಸಿ. ಮಂಜುಳಾ ಆರ್.ಹನುಮಂತ ರೆಡ್ಡಿ, ತೋಟಗಾರಿಕೆ ಇಲಾಖೆ ಲಲಿತ, ಕೃಷಿ ಸಹಾಯಕ ನಿರ್ದೇಶಕ ಶ್ರೀನಿವಾಸ್, ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್,ಮಾಜಿ ತಾಲ್ಲೂಕು ಪಂಚಾಯತಿ ಮಾಜಿ ಅದ್ಯಕ್ಷ ಕೆ.ಆರ್.ನರೇಂದ್ರ ಬಾಬು,ಎಪಿಎಂಸಿ ನಾಮ ನಿರ್ಧೇಶಕ ನಾರಾಯಣ ಸ್ವಾಮಿ, ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.2
- ಚಳ್ಳಕೆರೆ:ಭಾರತದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕ ಮತ್ತು ದಲಿತ ನಾಯಕ. 'ಬಾಬೂಜಿ' ಎಂದೇ ಜನಪ್ರಿಯರಾಗಿದ್ದ ಇವರು, ಭಾರತದ ಮೊದಲ ಸಂಪುಟದಲ್ಲಿ ಕಾರ್ಮಿಕ ಸಚಿವರಾಗಿ, ನಂತರ ರಕ್ಷಣಾ ಸಚಿವರಾಗಿ (1971ರ ಯುದ್ಧದ ಸಮಯದಲ್ಲಿ) ಮತ್ತು ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಹಸಿರು ಕ್ರಾಂತಿಯ ಹರಿಕಾರರಾಗಿ ಮತ್ತು ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಮಹಾನ್ ನಾಯಕ ಬಾಬು ಜವಜೀವನ್ ರಾಮ್ ರವರ ಜನ್ನ ದಿನದ ಶುಭಾಷಯಗಳು ಎಲ್ಲರೂ ಇಂಥ ಮಹನಾಯಕರ ಆದರ್ಶಗಳನ್ನು ಪಾಲಿಸಬೇಕು ಎಂದು ಶಾಸಕ ಟಿ ರಘುಮೂರ್ತಿ ಹೇಳಿದರು. ಕೆರೆ ನಗರದಲ್ಲಿ ರಾಷ್ಟ್ರೀಯ ಹಬ್ಬಗಳ ಆಚನ ಸಮಿತಿ ಸಮಾಜ ಕಲ್ಯಾಣ ಇಲಾಖೆ ವಿವಿಧ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಬಾಬು ಜಗಜೀವನ್ ರಾಮ್ ರವರ ಜನ್ಮ ದಿನಾಚರಣೆ ಪ್ರಯುಕ್ತ ಬಾಬು ಜಗಜೀವನ್ ರಾಮ್ ಪುತ್ತಳಿಗೆ ಪುಷ್ಪ ಮಾಲೆ ಸಲ್ಲಿಸಿ ನಂತರ ಡಾ. ಬಿ ಆರ್ ಅಂಬೇಡ್ಕರ್ ರವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿ ನಂತರ ಅವರು ಮಾತನಾಡಿದರು..1