Shuru
Apke Nagar Ki App…
ಶಿಡ್ಲಘಟ್ಟ ತಾಲ್ಲೂಕು ಕೊತ್ತನೂರು ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬಚ್ಚಹಳ್ಳಿ ಗ್ರಾಮದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ನೇತೃತ್ವದಲ್ಲಿ ಕಲ್ಯಾಣಿ ಸ್ವಚ್ಚತಾ ಕಾರ್ಯಕ್ರಮ
Venu Gopal
ಶಿಡ್ಲಘಟ್ಟ ತಾಲ್ಲೂಕು ಕೊತ್ತನೂರು ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬಚ್ಚಹಳ್ಳಿ ಗ್ರಾಮದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ನೇತೃತ್ವದಲ್ಲಿ ಕಲ್ಯಾಣಿ ಸ್ವಚ್ಚತಾ ಕಾರ್ಯಕ್ರಮ
More news from ಕರ್ನಾಟಕ and nearby areas
- Post by Venu Gopal2
- *ಚಿಂತಾಮಣಿ:-ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಂದುಕೊರತೆ ಸಭೆಯಲ್ಲಿ ಹಲವು ಸಮಸ್ಯೆಗಳ ಸುರಿಮಳೆ...* *ಜ್ಞಾನಾರ್ಜನೆ ಮತ್ತು ಅರಿವಿನ ಮೂಲಕ ಹಲವು ಸಮಸ್ಯೆಗಳಿಗೆ ಪರಿಹಾರ ಸಾಧ್ಯ-ಡಿವೈಎಸ್ಪಿ ಪಿ.ಮುರಳೀಧರ್* ಚಿಂತಾಮಣಿ:ದಲಿತ ಕಾಲೋನಿಗಳಲ್ಲಿ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಿದಾಗ ಮಾತ್ರ ವಂಚನೆ ದೌರ್ಜನ್ಯ ದಬ್ಬಾಳಿಕೆಗೆ ಗುರಿಯಾಗುವುದನ್ನು ತಪ್ಪಿಸಬಹುದು ಎಂದು ಡಿವೈಎಸ್ಪಿ ಪಿ.ಮುರಳೀಧರ್ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಪೊಲೀಸ್ ಠಾಣಾ ಆವರಣದಲ್ಲಿ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದುಕೊರತೆ ಸಭೆಯಲ್ಲಿ ಚಿಂತಾಮಣಿ,ಶಿಡ್ಲಘಟ್ಟ ತಾಲ್ಲೂಕುಗಳ ಮುಖಂಡರುಗಳ ಉದ್ದೇಶಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿ ಪೋಕ್ಸೋ ಪ್ರಕರಣಗಳು ಸೇರಿದಂತೆ ಅನೇಕ ರೀತಿಯ ದೌರ್ಜನ ದಬ್ಬಾಳಿಕೆಗೆ ಒಳಗಾಗುವ ಪ್ರಕರಣಗಳು ದಲಿತ ಕೇರಿಗಳಲ್ಲಿನ ವಾಸಿಗಳು ತುತ್ತಾಗುತ್ತಿರುವುದು ಸರ್ವೇ ಸಾಮಾನ್ಯವಾಗಿದ್ದು,ಆ ನಿಟ್ಟಿನಲ್ಲಿ ಸಂಘಟನೆಗಳು ಸಂಘಟತರಾಗಿ ಮನೆ,ಗ್ರಾಮ,ಪಂಚಾಯತಿ ಸೇರಿದಂತೆ ವಿವಿಧೆಡೆ ಜಾಗೃತಿ ಮೂಡಿಸುವಂತಹ ಕೆಲಸವನ್ನು ಮಾಡಬೇಕಾಗಿದೆ ಎಂದರು. ಯಾರುಅವಿದ್ಯಾವಂತರಾಗಬಾರದು ಎಲ್ಲರೂ ಶಿಕ್ಷಣವನ್ನು ಪಡೆದುಕೊಂಡ ಶಿಕ್ಷಣ ಅಸ್ತ್ರದಿಂದ ಸಮಾಜದಲ್ಲಾಗುವ ಅನ್ಯಾಯ ದೌರ್ಜನ್ಯ ದಬ್ಬಾಳಿಕೆಗಳನ್ನು ತಡೆಗಟ್ಟಬೇಕಾಗಿದೆ. ಇಂತಹ ಕಾರ್ಯಗಳನ್ನು ಸಂಘಟನೆಗಳು ಕೈಗೊಳ್ಳಬೇಕೆಂದು ಇದರ ಮೂಲಕ ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆಂದರು. ಕಡ್ಡಾಯವಾಗಿ ಶಿಕ್ಷಣವನ್ನು ಪಡೆದು ದೌರ್ಜನ್ಯದ ಜಾಗೃತಿಯೊಂದಿಗೆ,ಜಾಗೃತಿಯೊಂದಿಗೆ,ಮುನ್ನು ಮುನ್ನುಗ್ಗಿದಾಗ ಮಾತ್ರ,ಹಲವಾರು ದೌರ್ಜನ್ಯದ ಬಳಕೆಗಳಿಂದ ದೂರ ಉಳಿಬಹುದೆಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಪೋಕ್ಸೋ ಕಾಯ್ದೆಯಡಿ ದಾಖಲಾಗುವ ಶೇಕಡ 70 ರಿಂದ 80 ರಷ್ಟು ಪ್ರಕರಣಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರೇ ಇರುತ್ತಾರೆ.ಇದಕ್ಕೆ ಮುಖ್ಯಕಾರಣ ವಿದ್ಯಾಭ್ಯಾಸದ ಕೊರತೆ ಎಂದು ಡಿವೈಎಸ್ಪಿ ಪಿ.ಮುರಳೀಧರ್ ನುಡಿದರು.ಜ್ಞಾನವೆಂಬುದೇ ಶಕ್ತಿ ಅದನ್ನು ಪ್ರತಿಕಾಲೋನಿಯ ಮನೆಮನೆಗಳಲ್ಲಿ ಪ್ರತಿಧ್ವನಿಸುವಂತೆ ಮಾಡಿದಾಗ ಜ್ಞಾನಾರ್ಜನೆ ಹೆಚ್ಚಾಗಿ ಉತ್ತಮ ಸಮಾಜ ರೂಪುಗೊಳ್ಳುತ್ತದೆಂದರು. ಪರಿಶಿಷ್ಟ ಜಾತಿ ಮತ್ತು ಪಂಗಡದ ಬಹುತೇಕ ಜನರು ಕಷ್ಟಜೀವಿಗಳು ಅವರು ಕೂಲಿ,ಹಮಾಲಿ ಇತ್ಯಾದಿ ಕಠಿಣ ಕೆಲಸಗ ಳಲ್ಲಿ ಭಾಗವಹಿಸಿ ದುಡಿದ ನಿರತರಾಗಿದ್ದು ಅವರು ತಮ್ಮ ಹಣ ದಲ್ಲಿ ಹಲವಾರು ದುಶ್ಚಟಗಳನ್ನು ಹವ್ಯಾಸಗಳನ್ನಾಗಿ ಮಾಡಿಕೊಂಡಿರು ತ್ತಾರೆ.ಅವುಗಳಿಗೆ ಸಂಘಟನೆಯ ಮೂಲಕ ಅರಿವು ಕಾರ್ಯಕ್ರಮ ಗಳನ್ನು ರೂಪಿಸುವ ಮೂಲಕ ಅವರನ್ನು ಜಾಗೃತಗೊಳಿಸಬೇಕಾಗಿದೆ. ಅರಿವಿನ ಕೊರತೆಯನ್ನು ನೀಗಿಸಲು ಶಿಕ್ಷಣ ಇಲಾಖೆ,ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ತಿಂಗಳಿನಲ್ಲಿ ಒಂದು ಗ್ರಾಮ ಪಂಚಾಯತಿಯನ್ನು ಆಯ್ಕೆ ಮಾಡಿಕೊಂಡು ಅರಿವು ಸಭೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ನುಡಿದರು. ಚಿಂತಾಮಣಿ ಶಿಡ್ಲಘಟ್ಟ ತಾಲೂಕುಗಳಲ್ಲಿ ನಡೆದಿರುವ ದೌರ್ಜನ ದಬಾಳಿಕೆಗಳ ಕುರಿತು ಸಭೆಯಲ್ಲಿ ನೀಡಿದ ಸಮಸ್ಯೆಗಳ ಪಟ್ಟಿಯನ್ನು ತರಸಿಕೊಂಡು ಅವುಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ನಿದ್ರಾಕ್ಷಣಕ್ರಮ ತೆಗೆದುಕೊಳ್ಳಲಾಗುವುದೆಂದರು. ಸಂಘಟನೆಗಳ ಮುಖಂಡರುಗಳು ಸಹಿತ ಆಯಾ ಸಮುದಾಯಗಳ ಜನತೆಯಲ್ಲಿ ಅರಿವು ಮೂಡಿಸುವ ಮೂಲಕ ಸಮಾಜದಲ್ಲಿ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳು ನಡೆಯದಂತೆ ಹಾಗೂ ಅಂತಹವರಿಗೆ ಸಂಪೂರ್ಣವಾಗಿ ಕಡಿವಾಣ ಹಾಕಲು ಪೊಲೀಸರು ಸಹಕಾರ ನೀಡಬೇಕೆಂದರು.ದಲಿತ ಮುಖಂಡ ವಿನೋಬಾ ಕಾಲೋನಿಯ ಜನಾರ್ಧನ್ ಬಾಬು ಮಾತನಾಡಿ ಧ್ವನಿ ಇಲ್ಲದ ದಮನಿರತ ದಲಿತರು ಹಲವು ರೀತಿಯಲ್ಲಿ ದೌರ್ಜನ ದಬ್ಬಾಳಿಕೆಗೆ ಒಳಗಾಗಿ ಪೊಲೀಸರ ರಕ್ಷಣೆಗಾಗಿ ಪೊಲೀಸ್ ಠಾಣೆಗೆ ತೆರಳಿದಲ್ಲಿ, ಸೌಜನ್ಯಕ್ಕಾದರೂ ಗೌರವ ಕೊಡದೆ, ದೌರ್ಜನ್ಯ ದಬ್ಬಾಳಿಕೆ ನಡೆಸಿದವರ ಪರವೇ ನಿಂತು,ಗಾಯದ ಮೇಲೆ ಬರೆ ಎಳೆದ ಹಾಗೆ ಪೊಲೀಸರಿಂದಲೂ ಕೂಡದಲಿತರ ಮೇಲೆ ದೌರ್ಜನ್ಯ ನಡೆಯುತ್ತದೆಯೆಂದು ಸಭೆಯಲ್ಲಿ ಗಂಭೀರ ಆರೋಪ ಮಾಡಿದರು. ಸಭೆಯಲ್ಲಿ ಚಿಂತಾಮಣಿ ತಾಲ್ಲೂಕಿನ ವಿವಿಧದಲಿತ ಪರ ಸಂಘಟನೆಗಳು ಮತ್ತು ಶಿಡ್ಲಘಟ್ಟ ತಾಲೂಕಿನ ದಲಿತಪರ ಸಂಘಟನೆಗಳ ಮುಖಂಡರುಗಳು ಹಲವಾರು ವಿಷಯಗಳನ್ನು ಮಂಡಿಸಿ ಹಲವುಸಮಸ್ಯೆಗಳ ಕುರಿತು ಮನವಿಗಳನ್ನು ಡಿವೈಎಸ್ ಪಿ ಗಮನಕ್ಕೆ ತಂದರು. ಈ ಸಂದರ್ಭದಲ್ಲಿ ನಗರ ಠಾಣೆ ಇನ್ಸ್ಪೆಕ್ಟರ್ ವಿಜಿಕುಮಾರ್,ಶಿಡ್ಲಘಟ್ಟ ನಗರಠಾಣೆ ಇನ್ಸ್ಪೆಕ್ಟರ್ ಆನಂದ್, ಕೆಂಚಾರಹಳ್ಳಿ ಇನ್ಸ್ ಪೆಕ್ಟರ್ ನಾರಾಯಣಸ್ವಾಮಿ,ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಶಿವರಾಜ್,ಬಟ್ಲಹಳ್ಳಿ ಸಹಾಯಕ ಇನ್ಸ್ಪೆಕ್ಟರ್ ಶ್ಯಾಮಾಲ, ಚಿಂತಾಮಣಿ ಗ್ರಾಮಾಂತರ ಠಾಣೆಯ ಸಹಾಯಕ ಇನ್ಸ್ಪೆಕ್ಟರ್ ನಾಗಮ್ಮ ಮತ್ತಿತರ ಠಾಣೆಯ ಪೊಲೀಸ್ ಸಿಬ್ಬಂದಿ ಮತ್ತು ದಲಿತ ಮುಖಂಡರು ಇದ್ದರು. ವರದಿ:-ಸೀನ. ಟಿ ಚಿಂತಾಮಣಿ4
- 80% ಬೆಳೆ ಹಾನಿ – ರೈತರ ಆಕ್ರಂದನ ಕಿಲೋಗೆ ₹2ಕ್ಕೂ ಬೆಲೆ ಇಲ್ಲ – ಮಾರುಕಟ್ಟೆ ಸಂಕಷ್ಟ ಸಂಸದ ಮಲ್ಲೇಶ್ ಬಾಬು, ಶಾಸಕ ವೆಂಕಟಶಿವಾರೆಡ್ಡಿ ಭೇಟಿ1
- KOLAR KI.AWAAZ KOUSAR NEWS1
- ಚಾಮರಾಜನಗರಮಾದಪ್ಪನ ಬೆಟ್ಟದ ಸಾಲೂರು ಮಠದ ಬಳಿ ಭೀಕರ ಅಪಘಾತ: ನಿಯಂತ್ರಣ ತಪ್ಪಿ ಉರುಳಿದ ಸಾರಿಗೆ ಬಸ್ಮಲೆ ಮಹದೇಶ್ವರ ಬೆಟ್ಟದಲ್ಲಿ ಕೆಎಸ್ಆರ್ಟಿಸಿ ಬಸ್ ಪಲ್ಟಿ: 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ1
- ಸಲೂನ್ನಲ್ಲಿ ಇಬ್ಬರು ಯುವತಿಯರು ಘರ್ಷಣೆ ಮಾಡಿಕೊಂಡರು, ಅವರ ನಡುವೆ ಮೌಖಿಕ ನಿಂದನೆ ಮತ್ತು ದೈಹಿಕ ಹಿಂಸೆ ನಡೆಯಿತು.1
- ಮುಖ್ಯ ಕಾರಣಗಳು:ಅನಿಯಮಿತ ಆಹಾರ: ಸಮಯಕ್ಕೆ ಸರಿಯಾಗಿ ಊಟ ಮಾಡದಿರುವುದು.ಅನಾರೋಗ್ಯಕರ ಆಹಾರ: ಅತಿಯಾದ ಮಸಾಲೆ, ಎಣ್ಣೆ ಪದಾರ್ಥ, ಸಂಸ್ಕರಿಸಿದ ಆಹಾರ (Processed food) ಸೇವನೆ.ಒತ್ತಡ (Stress): ಆತಂಕ ಮತ್ತು ಅತಿಯಾದ ಆಲೋಚನೆಯಿಂದ ಹೊಟ್ಟೆಯಲ್ಲಿ ಆಮ್ಲ (Acid) ಹೆಚ್ಚಾಗುತ್ತದೆ.ನೀರಿನ ಕೊರತೆ: ಸರಿಯಾಗಿ ನೀರು ಕುಡಿಯದಿರುವುದು.ಪ್ರಮುಖ ಲಕ್ಷಣಗಳು:ಹೊಟ್ಟೆ ಉಬ್ಬರ ಮತ್ತು ಹೊಟ್ಟೆಯಲ್ಲಿ ಗುಳು-ಗುಳು ಶಬ್ದ.ಎದೆಯುರಿ (Heartburn) ಮತ್ತು ಹುಳಿ ತೇಗು.ಹೊಟ್ಟೆ ನೋವು, ವಾಕರಿಕೆ ಅಥವಾ ವಾಂತಿ.ಮಲಬದ್ಧತೆ.ಮನೆಮದ್ದುಗಳು (Home Remedies):ಮಜ್ಜಿಗೆ: ಇಂಗು ಮಿಶ್ರಿತ ಮಜ್ಜಿಗೆ ಕುಡಿಯುವುದು ತಕ್ಷಣದ ಪರಿಹಾರ ನೀಡುತ್ತದೆ.ಓಂ ಕಾಳು/ಜೀರಿಗೆ: ಓಂ ಕಾಳು (Ajwain) ಅಥವಾ ಜೀರಿಗೆಯನ್ನು ಬಿಸಿ ನೀರಿನೊಂದಿಗೆ ಸೇವಿಸುವುದು.ಶುಂಠಿ: ಶುಂಠಿ ಚಹಾ ಅಥವಾ ಹಸಿ ಶುಂಠಿ ಜಗಿಯುವುದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.ಬೆಚ್ಚಗಿನ ನೀರು: ದಿನವಿಡೀ ಬೆಚ್ಚಗಿನ ನೀರು ಕುಡಿಯುವುದು.ತಡೆಗಟ್ಟುವ ಕ್ರಮಗಳು:ದಿನಕ್ಕೆ 3-4 ಲೀಟರ್ ನೀರು ಕುಡಿಯಿರಿ.ಊಟದ ನಂತರ ತಕ್ಷಣ ಮಲಗಬೇಡಿ.ಒತ್ತಡ ಕಡಿಮೆ ಮಾಡಲು ಯೋಗ/ಧ್ಯಾನ ಮಾಡಿ.ನಾರಿನಂಶವಿರುವ (Fiber) ಆಹಾರ ಸೇವಿಸಿ.1
- ಈ ಘಟನೆಯು ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದ್ದು, ಬಲವಾದ ಗಾಳಿ ಬೀಸುತ್ತಿದ್ದರೂ ಚಾಲಕನು ದೋಣಿಯನ್ನು ಸುರಕ್ಷಿತ ಸ್ಥಳಕ್ಕೆ ತಿರುಗಿಸದ ಕಾರಣ ಈ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕೇವಲ ಒಂದು ಲೈಫ್ ಜಾಕೆಟ್ ಕೂಡ ಇಲ್ಲದಿದ್ದುದು ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣವಾಯಿತು ಎಂಬುದು ಇಲ್ಲಿನ ಪ್ರಮುಖ ಅಂಶ.1