ಧಾರವಾಡ: ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರ ಸಾವು: ಧಾರವಾಡದಲ್ಲಿ ಹಿಟ್ ಆಂಡ್ ರನ್ ಧಾರವಾಡ: ರಮಜಾನ್ ಹಬ್ಬದ ಸಡಗರದಲ್ಲಿದ್ದ ಕುಟುಂಬವೊಂದರಲ್ಲಿ ವಿಧಿಯಾಟ ಬೇರೆಯೇ ಆಗಿತ್ತು. ಚಾಂದ್ ಸಲಾಮ್ ಮುಗಿಸಿ ಮರಳುತ್ತಿದ್ದ ಯುವಕರ ಬೈಕಿಗೆ ಅಪರಿಚಿತ ವಾಹನ ಡಿಕ್ಕಿಯಾದ ಪರಿಣಾಮ, ಇಬ್ಬರು ಯುವಕರು ಮೃತಪಟ್ಟ ಘಟನೆ ಕೆಲಗೇರಿ ಸೇತುವೆ ಬಳಿ ನಡೆದಿದೆ. ಲಕಮಾಪುರ ಗ್ರಾಮದ ಇಮಾಮಸಾಬ ಹೆಬ್ಬಳ್ಳಿ ಹಾಗೂ ಆತನ ಗೆಳೆಯ ಮೊಹ್ಮದಯೂನುಸ್ ಮುಲ್ಲಾನವರ ಮೃತ ದುರ್ದೈವಿಗಳು. ಇಮಾಮಸಾಬ ತನ್ನ ಅಣ್ಣನ ಮದುವೆ ನಿಶ್ಚಯವಾಗಿದ್ದ ಕಂಬಾರಗಣವಿಯ ಮನೆಗೆ ಹಬ್ಬದ ನಿಮಿತ್ತ ‘ಚಾಂದ್ ಸಲಾಮ್’ ನೀಡಲು ಗೆಳೆಯನೊಂದಿಗೆ ತೆರಳಿದ್ದನು. ಕೆಲಸ ಮುಗಿಸಿ ಮರಳಿ ಬರುವಾಗ ಅಪರಿಚಿತ ವಾಹನವೊಂದು ಇವರ ಬೈಕಿಗೆ ಜೋರಾಗಿ ಡಿಕ್ಕಿ ಹೊಡೆದು ಪರಾರಿಯಾಗಿದೆ. ಅಪಘಾತದ ತೀವ್ರತೆಗೆ ಇಮಾಮಸಾಬ ಸ್ಥಳದಲ್ಲೇ ಮೃತಪಟ್ಟರೆ, ತೀವ್ರವಾಗಿ ಗಾಯಗೊಂಡಿದ್ದ ಮೊಹ್ಮದಯೂನುಸ್ನನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಕೂಡ ಇಂದು ಕೊನೆಯುಸಿರೆಳೆದಿದ್ದಾನೆ.
ಧಾರವಾಡ: ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರ ಸಾವು: ಧಾರವಾಡದಲ್ಲಿ ಹಿಟ್ ಆಂಡ್ ರನ್ ಧಾರವಾಡ: ರಮಜಾನ್ ಹಬ್ಬದ ಸಡಗರದಲ್ಲಿದ್ದ ಕುಟುಂಬವೊಂದರಲ್ಲಿ ವಿಧಿಯಾಟ ಬೇರೆಯೇ ಆಗಿತ್ತು. ಚಾಂದ್ ಸಲಾಮ್ ಮುಗಿಸಿ ಮರಳುತ್ತಿದ್ದ ಯುವಕರ ಬೈಕಿಗೆ ಅಪರಿಚಿತ ವಾಹನ ಡಿಕ್ಕಿಯಾದ ಪರಿಣಾಮ, ಇಬ್ಬರು ಯುವಕರು ಮೃತಪಟ್ಟ ಘಟನೆ ಕೆಲಗೇರಿ ಸೇತುವೆ ಬಳಿ ನಡೆದಿದೆ. ಲಕಮಾಪುರ ಗ್ರಾಮದ ಇಮಾಮಸಾಬ ಹೆಬ್ಬಳ್ಳಿ ಹಾಗೂ ಆತನ ಗೆಳೆಯ ಮೊಹ್ಮದಯೂನುಸ್ ಮುಲ್ಲಾನವರ ಮೃತ ದುರ್ದೈವಿಗಳು. ಇಮಾಮಸಾಬ ತನ್ನ ಅಣ್ಣನ ಮದುವೆ ನಿಶ್ಚಯವಾಗಿದ್ದ ಕಂಬಾರಗಣವಿಯ ಮನೆಗೆ ಹಬ್ಬದ ನಿಮಿತ್ತ ‘ಚಾಂದ್ ಸಲಾಮ್’ ನೀಡಲು ಗೆಳೆಯನೊಂದಿಗೆ ತೆರಳಿದ್ದನು. ಕೆಲಸ ಮುಗಿಸಿ ಮರಳಿ ಬರುವಾಗ ಅಪರಿಚಿತ ವಾಹನವೊಂದು ಇವರ ಬೈಕಿಗೆ ಜೋರಾಗಿ ಡಿಕ್ಕಿ ಹೊಡೆದು ಪರಾರಿಯಾಗಿದೆ. ಅಪಘಾತದ ತೀವ್ರತೆಗೆ ಇಮಾಮಸಾಬ ಸ್ಥಳದಲ್ಲೇ ಮೃತಪಟ್ಟರೆ, ತೀವ್ರವಾಗಿ ಗಾಯಗೊಂಡಿದ್ದ ಮೊಹ್ಮದಯೂನುಸ್ನನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಕೂಡ ಇಂದು ಕೊನೆಯುಸಿರೆಳೆದಿದ್ದಾನೆ.
- ll ಸಾರ್ವಜನಿಕ ಹನುಮಾನ ಮಂದಿರ ಹಾಗೂ ಜಮಖಂಡಿ ರಸ್ತೆ, ಅಂಬೇಡ್ಕರ್ ನಗರ ಹಾಗೂ ವಿವಿಧ 9 ಹನುಮಾನ್ ಮಂದಿರಗಳಲ್ಲಿ ಹೂವು ತರಿಳು ತೋರಣಗಳಿಂದ ಅಲಂಕರಿಸಿ ಬಾಲ ಹನುಮನನ್ನು ತೊಟ್ಟಿಲಲ್ಲಿ ಹಾಕಿ ನಾಮಕರಣ ಮಾಡಿ ಆಚರಣೆ ಮಾಡಿದರು. ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ಭಕ್ತರು ದಿನಪೂರ್ತಿ ಹನುಮಂತನ ದರ್ಶನ ಪಡೆದು, ಸಕಲ ಜೀವಿಗಳ ಕಲ್ಯಾಣಕ್ಕಾಗಿ ವಿಶೇಷ ಪೂಜೆಗಳನ್ನು ಸಲ್ಲಿಸಿ, ವಿವಿಧ ಅರ್ಪಣೆಗಳನ್ನು ಮಾಡುವ ಮೂಲಕ ತಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಂಡರು. ಹೋಮ-ಹವನ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಜಮಖಂಡಿ ರಸ್ತೆಗಿರುವ ಹನುಮಾನ್ ಮಂದಿರದಲ್ಲಿ ಮಧ್ಯಾಹ್ನ ಸಹಸ್ರಾರು ಭಕ್ತರಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ 6ಗಂಟೆಗೆ ಎಲ್ಲ ಹನುಮಾನ್ ಮಂದಿರಗಳು ಹಾಗೂ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರು ಸಮಸ್ತ ಹನುಮ ಭಕ್ತರಿಂದ ಹನುಮಾನ್ ಮೂರ್ತಿ ಪಲ್ಲಕ್ಕಿ, ಹನುಮಾನ್ ಹಾಗೂ ಶ್ರೀರಾಮನ ಭವ್ಯ ಭೃಹತ್ ಪ್ರತಿಮೆಗಳನ್ನು ಜಮಖಂಡಿ ರಸ್ತೆಗಿರುವ ಹನುಮಾನ್ ಮಂದಿರದಿಂದ ಪೂಜೆ ಸಲ್ಲಿಸುವ ಮೂಲಕ ಸಾಂಸ್ಕೃತಿಕ ಸಂಭಳ ವಾದ್ಯ ಹಾಗೂ ಹಲಗೆ ಲೇಜೀಮ ವಾದ್ಯಗಳೊಂದಿಗೆ ಪವನಪುತ್ರ ಹನುಮಾನಕಿ, ಜೈ ಶ್ರೀರಾಮ್ ಘೋಷಣೆ ಕೂಗುತ್ತ ಕೇಸರಿ ಧ್ವಜಗಳನ್ನು ರಾರಾಜಿಸುತ್ತ, ಪಟಾಕಿಗಳನ್ನು ಸಿಡಿಸುತ್ತ ಮೆರವಣಿಗೆಯು ರೇಲ್ವೆ ಮೇಲ್ಸೆತುವೆ, ಕರ್ನಾಟಕ ವೃತ್ತ ಮಾಸಾಬಿ ವೃತ್ತ, ಡಿಸಿಸಿ ಬ್ಯಾಂಕ್ ರೈಲು ನಿಲ್ದಾಣ ಬೆಲ್ಲದ ಕಾರ್ನರ್ ಮೂಲಕ ಸಾರ್ವಜನಿಕ ಹನುಮಾನ ಮಂದಿರಕ್ಕೆ ತಲುಪಿತು. ಈ ಸಂದರ್ಭದಲ್ಲಿ ಸಾರ್ವಜನಿಕ ಹನುಮಾನ ಮಂದಿರ ಅರ್ಚಕರಾದ ದಯಾನಂದ ಮಠಪತಿ, ಲಕ್ಷಟ್ಟಿ ತೇಲಿ, ಸಿದ್ಧಾನಿ ಸಣ್ಣಕ್ಕಿ,ಜಯಕುಮಾರ ಸನದಿ, ಶ್ರೀಮಾನ್ ನಾಯಿಕ, ಸದಾಶಿವ ಗಿಣಿಮೂಗೆ, ಪ್ರದೀಪ್ ಭಾವಿ, ಶೇಖರ್ ದಳವಾಯಿ, ಶಿವಾನಂದ ಲಖ್ಖನಗಾವ, ಯಲ್ಲಪ್ಪ ವಡ್ಡರ, ಡಾ.ಸಚಿನ ಮನಗುತ್ತಿ, ಅಮೀತ ನಾಯಿಕ, ಪ್ರೇಮ ಗುಪ್ತೆ, ಜಗ್ಗು ಮಂಗಸೂಳಿ, ಶೀತಲ ಲೋಹಾರ,ಕಾರ್ತಿಕ ರಾಜಮಾನೆ, ಚೇತನ್ ಸುತಾರ, ವರ್ಧಮಾನ ಶೆಟ್ಟಿ, ಸಚೀನ ತೇಲಿ, ಆನಂದ ಸಣ್ಣಕ್ಕಿ, ಪ್ರಕಾಶ್ ದಾವಣೆ, ನಾಗೇಶ ಕೌಲಗುಡ್ಡ, ಕೃಷ್ಣಾ ರೆಡ್ಡಿ ಸರ್ವ ಹನುಮಾನ್ ಭಕ್ತರು ಭಾಗಿಯಾಗಿದ್ದರು. ಮೆರಣಿಗೆಗೆ ಪಿಎಸಐ ಪ್ರೀತಮ್ ನಾಯಿಕ ನೇತೃತ್ವದಲ್ಲಿ ಎಎಸಐ ಇಂಚಲ, ಬಾನಪ್ಪಾ ಖೋತ, ಪೈಗಂಬರ್ ಗಡ್ಡೇಕರ,ಎಂ.ಬಿ.ಪಾಟೀಲ ಸೂಕ್ತ ಬಂದುಬಸ್ತಿ ಒದಗಿಸಿದ್ದರು.2
- Post by @april14news1
- ಬಾಗಲಕೋಟೆ ಉಪಚುನಾವಣೆಯ ನಿಮಿತ್ಯ ಬಂಜಾರ ಸಮುದಾಯದ 50 ಕ್ಕೂ ಹೆಚ್ಚು ತಾಯಂದಿರು ಕಾಂಗ್ರೆಸ್ ಪಕ್ಷವನ್ನು ತೊರೆದು ಬಾಗಲಕೋಟೆ ಬಿಜೆಪಿ ಅಭ್ಯರ್ಥಿಯಾದ ವೀರಣ್ಣ ಚರಂತಿಮಠ ಅವರ ಕಾರ್ಯವನ್ನು ಮೆಚ್ಚಿ ಹುನಗುಂದ ವಿಧಾನಸಭಾ ಕ್ಷೇತ್ರದ ಜನಪ್ರಿಯ ಮಾಜಿ ಶಾಸಕರಾದ ದೊಡ್ಡನಗೌಡ ಜಿ ಪಾಟೀಲ್ ಅವರ ನೇತೃತ್ವದಲ್ಲಿ ಇಂದು ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು... ಈ ಸಂದರ್ಭದಲ್ಲಿ ಅಮಿನಗಡ ಪಟ್ಟಣದ ಬಿಜೆಪಿ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು...2
- ಮಾಜಿ ಸಚಿವರು ಗಂಗಾವತಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಗಾಲಿ ಜನಾರ್ದನ್ ರೆಡ್ಡಿ ಅವರನ್ನು ಇಳಕಲ್ ನಗರದಲ್ಲಿ ಸ್ವಾಗತಿಸಿದರು. ಚಿಕ್ಕ ಓತಗೇರಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಗ್ರಾಮಸ್ಥರಿಂದ ಸತ್ಕಾರ ಸ್ವೀಕರಿಸಿದರು.1
- ಬಾಗಲಕೋಟೆ ಉಪಚುನಾವಣೆ ಎಫೆಕ್ಟ್ ದಿನದಿನೇ ರಂಗೇರಿತಿದೆ. ಐಪಿಎಲ್ ಟಿಕೆಟ್ ವಿಚಾರವಾಗಿ ಶಾಸಕ ವಿಜಯಾನಂದ ಕಾಶಪ್ಪನವರ್ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ ಚುನಾವಣಾ ಪ್ರಚಾರದಲ್ಲಿ ವ್ಯಂಗ್ಯ ಹೇಳಿಕೆಗೆ ಶಾಸಕ ವಿಜಯಾನಂದ ಕಾಶಪ್ಪನವರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಯತ್ನಾಳ ಒಬ್ಬ ಕಾಮಿಡಿ ಪೀಸ್ ನಗೋದಕ್ಕೆ ಜನ ಸೇರ್ತಾರೆ ಎಂದು ಹೇಳಿದರು1
- ಮಹಾತಪಸ್ವಿ ಅಥಣಿಯ ಆರಾಧ್ಯ ದೈವ ಮುರುಘೇಂದ್ರ ಶಿವಯೋಗಿಗಳ ವಿಜೃಂಭಣೆಯ ರಥೋತ್ಸವ ಅಥಣಿ: ಇಲ್ಲಿನ ಗಚ್ಚಿನಮಠದ ಮಹಾತಪಶ್ವಿ ಭಕ್ತರ ಜೀವಾಳ ಅಥಣಿಯ ಆರಾಧ್ಯ ದೈವ ಮುರುಘೇಂದ್ರ ಶಿವಯೋಗಿಗಳ 105 ನೇ ಜಾತ್ರೆ ಅಂಗವಾಗಿ ಶುಕ್ರವಾರ ಸಂಜೆ 7 ಗಂಟೆಗೆ ರಥೋತ್ಸವ ವಿಜೃಂಭಣೆಯಿಂದ ಗಚ್ಚಿನ ಮಠದಿಂದ ಆರಂಭವಾಯಿತು ರಥೋತ್ಸವಕ್ಕೆ ಅಥಣಿ ಗಚ್ಚಿನ ಮಠದ ಶಿವಬಸವ ಸ್ವಾಮೀಜಿಯವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಗಚ್ಚಿನ ಮಠದ ಮುರುಘೇಂದ್ರ ಶಿವಯೋಗಿಗಳ ಜಾತ್ರೆ ಭಾವೈಕ್ಯತೆ ಸಾರುವ ಜಾತ್ರೆಯಾಗಿದೆ ಎಲ್ಲಾ ಧರ್ಮದವರು ಒಟ್ಟಾಗಿ ಆಚರಿಸುವ ಮೂಲಕ ತಮ್ಮ ಹೃದಯ ಶ್ರೀಮಂತಿಕೆಯನ್ನು ಮೆರೆಯುತ್ತಾರೆ ಈ ಮೂಲಕವಾಗಿ ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುನೀತರಾಗುತ್ತಾರೆ ಎಂದು ಹೇಳಿದರು .ನಗರದ ಪ್ರಮುಖ ಬೀದಿಗಳಲ್ಲಿ ರಥೋತ್ಸವ ಸಂಚರಿಸುತ್ತ ಆಗಮಿಸಿದಾಗ ಭಕ್ತರು ಮುರುಗೇಂದ್ರ ಶಿವಯೋಗಿಗಳ ಜೈ ಘೋಷದೊಂದಿಗೆ ಬೆಂಡು ಬತ್ತಾಸು ಉತ್ತತ್ತಿಗಳನ್ನು ರಥದ ಮೇಲೆ ಹಾರಿಸುವ ಮೂಲಕ ಮಹಿಳೆಯರು ಮಕ್ಕಳು ಪುರುಷರೆನ್ನದೆ ಎಲ್ಲರೂ ಭಕ್ತಿಭಾವದಿಂದ ದರ್ಶನ ಪಡೆದರು .ನಗರದ ಎಲ್ಲೆಡೆ ಸಂಚರಿಸಿ ರಥೋತ್ಸವ ಕಣ್ಮನ ಸೆಳೆಯಿತು ವಿವಿಧ ವಾದ್ಯ ಮೇಳಗಳೊಂದಿಗೆ ಭಜನೆ ಹಾಡುವವರು ಭಾವುಕರಾಗಿ ಭಜನೆಯಲ್ಲಿ ತೊಡಗಿದರೆ ,ಜಾಂಜ್ ಪತಾಕ್ ಮೇಳದೊಂದಿಗೆ ಯುವಕರು ವಿಶೇಷವಾಗಿ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ತಮ್ಮ ಭಕ್ತಿ ಭಾವ ಮೆರೆದರು ಸಂಗೀತದ ಮೇಳದೊಂದಿಗೆ ಹಾಡುಗಾರರ ಹಾಡುಗಳು ನೋಡುಗರ ಕಣ್ಮನ ಸೆಳೆದವು ನಗರದೆಲ್ಲೆಡೆಯಲ್ಲಿ ತಳಿರು ತೋರಣಗಳಿಂದ ರಥೋತ್ಸವ ಸಾಗುವ ಬೀದಿಗಳನ್ನು ಶೃಂಗಾರ ಮಾಡಲಾಗಿತ್ತು ಅಷ್ಟೇ ಅಲ್ಲದೆ ನಗರದಾದ್ಯಂತ ವಿದ್ಯುತ್ ದೀಪಗಳ ಅಲಂಕಾರ ಕಣ್ಮನ ಸೆಳೆಯುವಂತಿತ್ತು ,ಪುಷ್ಪಮಾಲೆ ಹಾಗೂ ವಿದ್ಯುದ್ದೀಪಗಳಿಂದ ಅಲಂಕರಿಸಲ್ಪಟ್ಟ ರಥ ಸಂಜೆ 7 ಗಂಟೆಗೆ ಶ್ರೀಮಠದಿಂದ ಹೊರಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ, ನಸುಕಿನ ಜಾವ ಶಿವಯೋಗಿಗಳು ಅನುಷ್ಠಾನಗೈದ ಪುರಾತನೇಶ್ವರ ದೇವಸ್ಥಾನ ತಲುಪಿತು. ವ್ಯಾಸನತೋಳ ಮೆರವಣಿಗೆ : ದೇಶದ ಖ್ಯಾತ ಕ್ಷೆತ್ರ ಕಾಶಿಯಲ್ಲಿ ನಡೆಯುವ ವ್ಯಾಸನ ತೋಳ ಮೆರವಣಿಗೆ ಈ ಸಂದರ್ಭದಲ್ಲಿ ಜರುಗಿತು . ಒಂದು ಕಾಶಿಯಲ್ಲಿ ಇನ್ನೊಂದು ಅಥಣಿ ಗಚ್ಚಿನ ಮಠದಲ್ಲಿ ವ್ಯಾಸನ ತೋಳ ಮೆರವಣಿಗೆ ಜರುಗುತ್ತದೆ ಎಂಬುದು ಹೆಮ್ಮೆಯ ಸಂಗತಿ. ಶುಕ್ರವಾರ ಬೆಳಗ್ಗೆ 8 ಗಂಟೆಗೆ ಶಿವಯೋಗಿಗಳ ಜನ್ಮಸ್ಥಳವಾದ ನದಿ ಇಂಗಳಗಾಂವಿಯಿಂದ ಭಕ್ತರು ಶಿವಯೋಗಿಗಳ ಬಾಲಮೂರ್ತಿ ಯನ್ನು ಉತ್ಸವದ ಮೂಲಕ ಗಚ್ಚಿನಮಠಕ್ಕೆ ತ೦ದರು. ಶ್ರೀಮಠದಲ್ಲಿ ಲಿಂ.ಚನ್ನಬಸವ ಸ್ವಾಮೀಜಿ 46 ನೇ ಸ್ಮರಣೋತ್ಸವ ಜರುಗಿತು . ನಂತರ ಪಂಚಕಲಶ, ವ್ಯಾಸನತೋಳ, ಸಕಲ ಬಿರುದಾವಳಿ ಸಹಿತ ಅಲಂಕರಿಸಿದ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಿತು .ಸುಮಾರು 150 ಕೆಜಿ ಬೆಳ್ಳಿ ಪಲ್ಲಕ್ಕಿಯಲ್ಲಿ ವಚನ ಸಾಹಿತ್ಯ ಶ್ರೀ ಶಿವಯೋಗಿ ಬೆಳ್ಳಿಯ ಭಾವಚಿತ್ರ ಇಟ್ಟುಕೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು . ಮಠಾಧೀಶರಾದ ಶಿವಬಸವ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಗಳು ಜರುಗುತ್ತಲಿವೆ. ಸಂಪ್ರದಾಯದಂತೆ ಬೆಳಗ್ಗೆ ಶಿವಯೋಗಿಗಳ ಭಾವಚಿತ್ರದ ಪಲ್ಲಕ್ಕಿ ಉತ್ಸವ ಸಕಲ ವಾದ್ಯಮೇಳದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು . ಮಧ್ಯಾಹ್ನ ಮಹಾಪ್ರಸಾದ ಜರುಗಿತು .ಹರಗುರು ಚರಮೂರ್ತಿಗಳ ಸಾನ್ನಿಧ್ಯದಲ್ಲಿ ಧರ್ಮಸಭೆ ಶ್ರೀಮಠದ ಅನುಭವ ಮಂಟಪದಲ್ಲಿ ಪುರಾಣ, ಪ್ರವಚನ, ಶಿವಾನುಭವ, ವಚನ ಸಂಗೀತ, ಶಿವಭಜನೆ ಹಾಗೂ ಬಯಲಾಟ ಪ್ರದರ್ಶನ,. ಜಾನುವಾರು ಪ್ರದರ್ಶನ ಜರುಗುತ್ತಿದೆ.ಕಾರ್ಯಕ್ರಮದಲ್ಲಿ ಇಂಗಳಗಾವಿ ಸಿದ್ದಲಿಂಗ ಸ್ವಾಮೀಜಿ, ಹಲ್ಯಾಳದ ಅಭಿನವ ಗುರುಸಿದ್ಧ ಸ್ವಾಮೀಜಿ,ಮೋಟಗಿ ಮಠದ ಚನ್ನಬಸವ ಮಹಾಸ್ವಾಮಿಗಳು, ಶೆಟ್ಟರ್ ಮಠದ ಮರುಳಸಿದ್ದ ಮಹಾಸ್ವಾಮಿಗಳು, ಮುಖಂಡರಾದ ಗಜಾನನ ಮಂಗಸೂಳಿ, ಚಿದಾನಂದ ಸವದಿ,ಶಿವಾನಂದ ದಿವಾನಮಳ ಪ್ರಕಾಶ ಮಹಾಜನ, ಸೇರಿದಂತೆ ಹಲವಾರು ಮುಖಂಡರು, ಸುತ್ತಮುತ್ತಲ ಹಾಗೂ ಅಥಣಿ ಪಟ್ಟಣ ಸೇರಿದಂತೆ ನೂರಾರು ಹಳ್ಳಿಗಳಿಂದ ಲಕ್ಷಾಂತರ ಭಕ್ತಾದಿಗಳು ಈ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು .2
- ಧಾರವಾಡದಲ್ಲಿ ಆಟೊ ಗ್ಯಾಸ್ ಬಂಕ್ ನಲ್ಲಿ ಗ್ಯಾಸ್ ಸಿಗದೇ ಆಟೋ ರಿಕ್ಷಾ ಚಾಲಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹೌದು... ಧಾರವಾಡ ನಗರದಲ್ಲಿ ಇರುವ ಎಲ್ಲ ಆಟೋ ಗ್ಯಾಸ್ ಬಂಕ್ಗಳು ಬಂದ್ ಆಗಿವೆ. ಇದರ ಮಧ್ಯೆ ರಾಯಾಪುರದಲ್ಲಿರುವ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ನಲ್ಲಿ ಮಾತ್ರ ಆಟೊ ಎಲ್.ಪಿ.ಜಿ ಗ್ಯಾಸ್ ಸಿಗುತ್ತಿದ್ದು, ಇದಕ್ಕಾಗಿ ಆಟೋ ಚಾಲಕರು ಬೆಳಿಗ್ಗೆಯಿಂದಲೇ ಕ್ಯೂ ನಿಂತಿದ್ದಾರೆ. ಧಾರವಾಡ ರಾಯಾಪುರದಲ್ಲಿರುವ ಇಂಡಿಯನ್ ಆಯಿಲ್ ಬಂಕ್ನಲ್ಲಿ ಆಟೋ ಎಲ್.ಪಿ.ಜಿ ಸಿಗುತ್ತಿದ್ದು, ಇದಕ್ಕಾಗಿ ಕಿಲೋ ಮೀಟರ್ಗಟ್ಟಲೇ ಆಟೊಗಳು ಕ್ಯೂ ನಿಂತಿವೆ. ಇಲ್ಲಿ 94 ರೂಪಾಯಿಗೆ ಒಂದು ಕೆಜಿ ಎಲ್.ಪಿ.ಜಿ ಗ್ಯಾಸ್ ಸಿಗುತ್ತಿದ್ದು, ಇದು ಆಟೊ ಚಾಲಕರಿಗೆ ಹೊರೆಯಾಗಿದೆ. ಈ ಬಂಕ್ನಲ್ಲೂ ಗ್ಯಾಸ್ ಖಾಲಿಯಾಗುತ್ತ ಬಂದಿದ್ದು, ಕೇವಲ 40 ಆಟೊಗಳಿಗೆ ಆಗುವಷ್ಟೇ ಗ್ಯಾಸ್ ಇದೆ. ಹೀಗಾಗಿ ಆಟೋ ಚಾಲಕರು ಗ್ಯಾಸ್ ತುಂಬಿಸಿಕೊಳ್ಳಲು ಮುಗಿಬಿದ್ದಿದ್ದು, ಸರ್ಕಾರ ಈ ಸಮಸ್ಯೆ ಬಗೆಹರಿಸಿಕೊಡಬೇಕು ಎಂದು ಆಟೊ ಚಾಲಕರು ಆಗ್ರಹಿಸುತ್ತಿದ್ದಾರೆ.1
- ಇಳಕಲ್ಲ : ಗ್ಯಾಸ್ ಸಿಲಿಂಡರಗಾಗಿ ೧ ಮೀಟರ್ ಉದಕ್ಕೂ ಸುಡು ಬಿಸಿಲಿನಲ್ಲಿ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ನಗರದ ಎಚ್.ಪಿ.ಗ್ಯಾಸ್ ಗೋಡಾನ್ ಮುಂದೆ ಶನಿವಾರ ಕಂಡು ಬಂದಿತು. ಅಮೇರಿಕಾ , ಇರಾನ್ , ಇಸ್ರೇಲ್ ದೇಶದಲ್ಲಿ ನಡೆಯುತ್ತಿರುವ ಯುದ್ದದಿಂದಾಗಿ ಎಲ್ಪಿಜಿ ಗ್ಯಾಸ್ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿರುವದ್ದರಿAದ ರಾಜ್ಯದ ಜನರು ಹೈರಾಣಾಗಿದ್ದಾರೆ. ಎಲ್ಪಿಜಿ ಗ್ಯಾಸ್ ಅಭಾವದಿಂದಾಗಿ ಜನರು ಗ್ಯಾಸ್ ಗೋಡಾನ್ ಹತ್ತಿರ ದಿನನಿತ್ಯ ಸುಡುವ ಬಿಸಲಿನಲ್ಲಿ ನಿಂತು ಗ್ಯಾಸ್ ಗಾಗಿ ಕಾಯುತ್ತಿರುವ ಸನ್ನಿವೇಶ ನೋಡಿದರೇ ಹೃದಯ ಚುರು ಎನ್ನುತ್ತಿದೆ, ಸುಡುವ ಬಿಸಿನಲಿನಲ್ಲಿಯೇ ವಯೋವೃದ್ಧರು, ಚಿಕ್ಕ ಮಕ್ಕಳು, ಮಹಿಳೆಯರು ಒಂದು ದಿನದ ಕೆಲಸವನ್ನು ಬಿಟ್ಟು ಸಿಲಿಂಡರ್ ಗಾಗಿಯೇ ಒಂದು ದಿನ ಕಾಯ್ದು ತೆಗೆದುಕೊಂಡು ಹೋಗುವಂತಹÀ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ಯಾಸ್ ಹೊಡೆತದಿಂದ ಮುಚ್ಚುತ್ತಿರುವ ಹೋಟೆಲ್: ನಗರದಲ್ಲಿನ ದೊಡ್ಡ ದೊಡ್ಡ ಹೋಟೆಲ್ಗಳಿಗು ಗ್ಯಾಸ್ ಬಿಸಿ ತಟ್ಟಿದ್ದರಿಂದ ಕೆಲವೊಂದಿಷ್ಟು ಹೋಟೇಲ್ಗಳಲ್ಲಿ ತಿಂಡಿಗಳು ಸಿಗುತ್ತಿಲ್ಲ, ಕೆಲವೊಂದಿಷ್ಟು ಹೋಟೆಲ್ ಗಳು ಬಂದಾದರೇ, ಇನ್ನೋ ಕೆಲವೊಂದಿಷ್ಟು ಹೋಟೆಲನಲ್ಲಿ ಗ್ಯಾಸ್ ತೆಗೆದು ಸೌದ ಒಲೆಯಿಂದ ಅಂಗಡಿಗಳನ್ನು ನಡೆಸುತ್ತಿದ್ದಾರೆ. * ಇಂತಹ ಸುಡುವ ಬಿಸಲಿನಲ್ಲಿಯೇ ಗ್ಯಾಸ್ ಗಾಗಿ ಕಾಯುತ್ತಿರುವ ಗ್ರಾಹಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಸಹ ಗ್ಯಾಸ್ ಏಜೆನ್ಸಿ ಮಾಲೀಕರು ಅಥವಾ ಸಿಬ್ಬಂದಿ ವರ್ಗದವರು ಮಾಡಿಲ್ಲ - ಮಹಾಂತೇಶ ವಕಲಕುಂಟಿ, ಕರವೇ ಗೌರವಾಧ್ಯಕ್ಷ ಇಳಕಲ್ಲ.1
- Post by Santa Dsouza2