Shuru
Apke Nagar Ki App…
ಗುಂಡ್ಲುಪೇಟೆ ಪಟ್ಟಣದ ಊಟಿ ಮೈಸೂರು ಮುಖ್ಯ ರಸ್ತೆಯ ಅಂಚೇ ಕಚೇರಿ ಎದುರು ಪ್ರಾಥಮಿಕ ಶಾಲೆಯ ಮುಂಭಾಗ ರಸ್ತೆ ಸಂಚಾರಿ ಸಿಗ್ನಲ್ ತುಂಡಾಗಿ ಬಿದ್ದಿದೆ ಹಾಗೂ ಪಾದಚಾರಿಗಳ ತೊಂದರೆಯಲ್ಲಿ... ಕಾವಲು ಪಡೆ ಅಧ್ಯಕ್ಷರಿಂದ ಸರಿ ಮಾಡುವಂತೆ ಸಂಬಂಧ ಪಟ್ಟ ಅಧಿಕಾರಿಗಳು ಗಮನಹರಿಸಬೇಕು ಎಂದು ಕರ್ನಾಟಕ ಕಾವಲು ಪಡೆ ಗುಂಡ್ಲುಪೇಟೆ ಅಧ್ಯಕ್ಷರು ಅಬ್ದುಲ್ ಮಾಲೀಕರವರು ತಿಳಿಸಿದ್ದಾರೆ ಗುಂಡ್ಲುಪೇಟೆ ಪಟ್ಟಣದ ಊಟಿ ಮೈಸೂರು ಮುಖ್ಯ ರಸ್ತೆಯ ಅಂಚೇ ಕಚೇರಿ ಎದುರು ಪ್ರಾಥಮಿಕ ಶಾಲೆಯ ಮುಂಭಾಗ ರಸ್ತೆ ಸಂಚಾರಿ ಸಿಗ್ನಲ್ ತುಂಡಾಗಿ ಬಿದ್ದಿದೆ ಹಾಗೂ ಪಾದಚಾರಿಗಳು ನಡೆದಾಡುವ ಸ್ಥಳದಲ್ಲಿ ಸ್ಲಾಬ್ ಗಳು ಕುಸಿದು ಬಿದ್ದಿರುವುದರಿಂದ ವಯಸ್ಸಾದವರು ಶಾಲಾ ಮಕ್ಕಳು ತಿರುಗಾಡಲು ತುಂಬಾ ತೊಂದರೆಯಾಗಿರುವುದರಿಂದ ಕೂಡಲೇ ಸಂಬಂಧಪಟ್ಟವರು ಸಮಸ್ಯೆಯನ್ನು ಬಗೆಹರಿಸಬೇಕೆಂದು ಕರ್ನಾಟಕ ಕಾವಲು ಪಡೆಯ ತಾಲ್ಲೂಕು ಅಧ್ಯಕ್ಷರಾದ ಎ.ಅಬ್ದುಲ್ ಮಾಲಿಕ್ ಒತ್ತಾಯಿಸಿದ್ದಾರೆ.
Prasad Prasad
ಗುಂಡ್ಲುಪೇಟೆ ಪಟ್ಟಣದ ಊಟಿ ಮೈಸೂರು ಮುಖ್ಯ ರಸ್ತೆಯ ಅಂಚೇ ಕಚೇರಿ ಎದುರು ಪ್ರಾಥಮಿಕ ಶಾಲೆಯ ಮುಂಭಾಗ ರಸ್ತೆ ಸಂಚಾರಿ ಸಿಗ್ನಲ್ ತುಂಡಾಗಿ ಬಿದ್ದಿದೆ ಹಾಗೂ ಪಾದಚಾರಿಗಳ ತೊಂದರೆಯಲ್ಲಿ... ಕಾವಲು ಪಡೆ ಅಧ್ಯಕ್ಷರಿಂದ ಸರಿ ಮಾಡುವಂತೆ ಸಂಬಂಧ ಪಟ್ಟ ಅಧಿಕಾರಿಗಳು ಗಮನಹರಿಸಬೇಕು ಎಂದು ಕರ್ನಾಟಕ ಕಾವಲು ಪಡೆ ಗುಂಡ್ಲುಪೇಟೆ ಅಧ್ಯಕ್ಷರು ಅಬ್ದುಲ್ ಮಾಲೀಕರವರು ತಿಳಿಸಿದ್ದಾರೆ ಗುಂಡ್ಲುಪೇಟೆ ಪಟ್ಟಣದ ಊಟಿ ಮೈಸೂರು ಮುಖ್ಯ ರಸ್ತೆಯ ಅಂಚೇ ಕಚೇರಿ ಎದುರು ಪ್ರಾಥಮಿಕ ಶಾಲೆಯ ಮುಂಭಾಗ ರಸ್ತೆ ಸಂಚಾರಿ ಸಿಗ್ನಲ್ ತುಂಡಾಗಿ ಬಿದ್ದಿದೆ ಹಾಗೂ ಪಾದಚಾರಿಗಳು ನಡೆದಾಡುವ ಸ್ಥಳದಲ್ಲಿ ಸ್ಲಾಬ್ ಗಳು ಕುಸಿದು ಬಿದ್ದಿರುವುದರಿಂದ ವಯಸ್ಸಾದವರು ಶಾಲಾ ಮಕ್ಕಳು ತಿರುಗಾಡಲು ತುಂಬಾ ತೊಂದರೆಯಾಗಿರುವುದರಿಂದ ಕೂಡಲೇ ಸಂಬಂಧಪಟ್ಟವರು ಸಮಸ್ಯೆಯನ್ನು ಬಗೆಹರಿಸಬೇಕೆಂದು ಕರ್ನಾಟಕ ಕಾವಲು ಪಡೆಯ ತಾಲ್ಲೂಕು ಅಧ್ಯಕ್ಷರಾದ ಎ.ಅಬ್ದುಲ್ ಮಾಲಿಕ್ ಒತ್ತಾಯಿಸಿದ್ದಾರೆ.
More news from ಕರ್ನಾಟಕ and nearby areas
- ಗುಂಡ್ಲುಪೇಟೆ ಪಟ್ಟಣದ ಊಟಿ ಮೈಸೂರು ಮುಖ್ಯ ರಸ್ತೆಯ ಅಂಚೇ ಕಚೇರಿ ಎದುರು ಪ್ರಾಥಮಿಕ ಶಾಲೆಯ ಮುಂಭಾಗ ರಸ್ತೆ ಸಂಚಾರಿ ಸಿಗ್ನಲ್ ತುಂಡಾಗಿ ಬಿದ್ದಿದೆ ಹಾಗೂ ಪಾದಚಾರಿಗಳು ನಡೆದಾಡುವ ಸ್ಥಳದಲ್ಲಿ ಸ್ಲಾಬ್ ಗಳು ಕುಸಿದು ಬಿದ್ದಿರುವುದರಿಂದ ವಯಸ್ಸಾದವರು ಶಾಲಾ ಮಕ್ಕಳು ತಿರುಗಾಡಲು ತುಂಬಾ ತೊಂದರೆಯಾಗಿರುವುದರಿಂದ ಕೂಡಲೇ ಸಂಬಂಧಪಟ್ಟವರು ಸಮಸ್ಯೆಯನ್ನು ಬಗೆಹರಿಸಬೇಕೆಂದು ಕರ್ನಾಟಕ ಕಾವಲು ಪಡೆಯ ತಾಲ್ಲೂಕು ಅಧ್ಯಕ್ಷರಾದ ಎ.ಅಬ್ದುಲ್ ಮಾಲಿಕ್ ಒತ್ತಾಯಿಸಿದ್ದಾರೆ.1
- ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ತಮಿಳುನಾಡಿಗೆ ಸಂಪರ್ಕಿಸುವ ಏಳನೇ ತಿರುವಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಯುವಕ ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಮಿಳುನಾಡಿನ ಸೇಲಂ ಜಿಲ್ಲೆಯ ಮೆಟ್ಟೂರು ಸಮೀಪದ ವನ್ನಿಯಾರ್ ಗ್ರಾಮದ ರಾಹುಲ್ (23) ಮೃತ ಯುವಕ. ಗಾಯಳುವನ್ನ ಮೆಟ್ಟೂರು ತಾಲೂಕಿನ ತೊಟ್ಟಿಲ್ ಪಟ್ಟಿ ಗ್ರಾಮದ ನಿವಾಸಿ ಗುಗನ್ (17), ಚಿನ್ನದೊರೈ ಅವರ ಪುತ್ರ ಎಂದು ತಿಳಿದು ಬಂದಿದೆ. ದ್ವಿಚಕ್ರ ವಾಹನದಲ್ಲಿ ತಮ್ಮ ಊರು ಮೆಟ್ಟೂರಿಗೆ ತೆರಳುತ್ತಿದ್ದ ಈ ಇಬ್ಬರು, ಮದೇಶ್ವರ ಬೆಟ್ಟದತ್ತ ಸರಕು ಸಾಗಿಸುತ್ತಿದ್ದ ಟೆಂಪೋ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತದ ತೀವ್ರತೆಯಿಂದ ರಾಹುಲ್ ಸ್ಥಳದಲ್ಲೇ ಮೃತಪಟ್ಟರೆ, ಗುಗನ್ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ತಕ್ಷಣ ಆಂಬ್ಯುಲೆನ್ಸ್ ಸೌಲಭ್ಯ ಸಿಗದಿದ್ದ ರಿಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ದ್ದಾರೆ. ಮಹದೇಶ್ವರಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.3
- ನಂಜನಗೂಡು: ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ರವರ ಜಯಂತೋತ್ಸವ ಹಾಗೂ ದಿ.ಆರ್ ಧ್ರುವನಾರಾಯಣ್ ರವರ 65ನೇ ಹುಟ್ಟು ಹಬ್ಬದ ಪ್ರಯುಕ್ತ ಶಂಕರಪುರ ಹತ್ತು ಜನಗಳ ಗರಡಿ ವತಿಯಿಂದ ರಾಜ್ಯಮಟ್ಟದ ಹೊನಲು ಬೆಳಕಿನ ನಾಡ ಕುಸ್ತಿ ಪಂದ್ಯಾವಳಿಗೆ ಶಾಸಕ ದರ್ಶನ್ ಧ್ರುವನಾರಾಯಣ್ ಚಾಲನೆ ನೀಡಿದರು. ದಿ.ಆರ್ ಧ್ರುವನಾರಾಯಣ್ ರವರ ಭಾವಚಿತ್ರಕ್ಕೆ ಜ್ಯೋತಿ ಬೆಳಗಿಸಿ, ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ಕುಸ್ತಿ ಪಂದ್ಯಾವಳಿ ಆಯೋಜನೆ ಮಾಡಿರುವುದು ಸಂತಸ ತಂದಿದೆ. ನಂಜನಗೂಡು ತಾಲ್ಲೂಕಿನಲ್ಲಿ ಅತಿ ಹೆಚ್ಚು ಕ್ರೀಡಾ ಚಟುವಟಿಕೆಗಳು ನಡೆಯುತ್ತಿದೆ. ನಂಜನಗೂಡು ಸಾಕಷ್ಟು ಯುವಕರಿಗೆ ಅವಕಾಶ ಮಾಡಿಕೊಡುತ್ತಿದೆ. ನಮ್ಮ ತಂದೆಯವರು ಕೂಡ ಕ್ರೀಡಾ ಪಟುವಾಗಿದ್ದರು. ಅವರು ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು. ನಮ್ಮ ಕ್ಷೇತ್ರದಲ್ಲಿ ಶಿಕ್ಷಣದ ಜೊತೆಗೆ ಕ್ರೀಡೆಗೂ ಹೆಚ್ಚು ಪ್ರೋತ್ಸಾಹ ನೀಡುತ್ತೇವೆ. ಇನ್ನೂ ಹಲವು ಕ್ರೀಡೆಗಳನ್ನು ಆಯೋಜಿಸುವ ಮೂಲಕ ಯುವ ಸಮುದಾಯಕ್ಕೆ ಪ್ರೋತ್ಸಾಹಿಸಿ ಅವರಿಗೆ ಅವಕಾಶ ಕಲ್ಪಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ ಬಸವರಾಜು, ಮಾಜಿ ನಗರಸಭಾ ಅಧ್ಯಕ್ಷ ಶ್ರೀಕಂಠಸ್ವಾಮಿ, ವಕೀಲರಾದ ಉಮೇಶ್, ಯುವ ಕಾಂಗ್ರೆಸ್ ಘಟಕದ ಜಿಲ್ಲಾಧ್ಯಕ್ಷ ಚಂದನ್ ಗೌಡ, ಕಾಂಗ್ರೆಸ್ ಮುಖಂಡ ಮಂಜುನಾಥ್, ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಕರಳಾಪುರ ವಿಜಯಕುಮಾರ್, ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ದೇಬೂರು ಅಶೋಕ್, ವಾಯುಪುತ್ರ ಡೆವಲಪರ್ಸ್ ಚೆಲುವರಾಜು, ಮಾಜಿ ಗ್ರಾಪಂ ಅಧ್ಯಕ್ಷ ಗಿರೀಶ್, ಹಲ್ಲರೆ ಮಹದೇವ್, ಕಳಲೆ ರಾಜೇಶ್, ರಘು, ಆಯೋಜಕರಾದ ಜಿಮ್ ರಘು, ಪೈಲ್ವಾನ್ ಚೇತನ್, ಪೈಲ್ವಾನ್ ನಟೇಶ್, ಪೈಲ್ವಾನ್ ಶಿವಕುಮಾರ್, ಮಹದೇವ್ ಭರ್ಜರಿ ಸೇರಿದಂತೆ ಕುಸ್ತಿಪಟುಗಳು ಭಾಗವಹಿಸಿದ್ದರು.1
- *ಭಾರತ ನಲ್ಲಿ ವೈರಲ್*1
- ಹನೂರು: ತಾಲೂಕಿನ ಶಾಗ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳ್ಳಿದೊಡ್ಡಿ ಗ್ರಾಮಸ್ಥರ ದಶಕಗಳ ಬೇಡಿಕೆಯಾಗಿದ್ದ ಸಮುದಾಯ ಭವನ ನಿರ್ಮಾಣಕ್ಕೆ ಕೊನೆಗೂ ಚಾಲನೆ ಸಿಕ್ಕಿದೆ. ಶಾಸಕರ ವಿಶೇಷ ಅನುದಾನದಡಿ 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ವಾಲ್ಮೀಕಿ ಸಮುದಾಯ ಭವನಕ್ಕೆ ಶಾಸಕ ಎಂ.ಆರ್. ಮಂಜುನಾಥ್ ಅವರು ಭೂಮಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಶಾಸಕರು, "ಗ್ರಾಮಸ್ಥರ ಸುದೀರ್ಘ ಕಾಲದ ಆಶಯದಂತೆ ಇಂದು ಭವನಕ್ಕೆ ಚಾಲನೆ ನೀಡಲಾಗಿದೆ. ಮುಂದಿನ ಒಂದು ವರ್ಷದೊಳಗೆ ಸುಸಜ್ಜಿತ ಕಟ್ಟಡ ಪೂರ್ಣಗೊಳ್ಳಲಿದೆ. ಇದರಿಂದ ಗ್ರಾಮದ ಶುಭ ಸಮಾರಂಭ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಅನುಕೂಲವಾಗಲಿದೆ," ಎಂದು ತಿಳಿಸಿದರು. ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಭರವಸೆ: ಇದೇ ಸಂದರ್ಭದಲ್ಲಿ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡುವಂತೆ ಗ್ರಾಮಸ್ಥರು ಮನವಿ ಮಾಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಶಾಸಕರು, ಶೀಘ್ರದಲ್ಲೇ ಟ್ಯಾಂಕ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಹಾಗೂ ಗ್ರಾಮದ ಇತರೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಮುಖಂಡರಾದ ಶಾಗ್ಯ ರವಿ ಅಣ್ಣ, ಸುಂದ್ರಣ್ಣ, ಮಂಜೇಶ್, ವಿಜಯ್ ಕುಮಾರ್, ವೆಂಕಟಚಲ ತಿರುಪತಿ, ಅನಿಲ್ ಕುಮಾರ್, ಡಿ.ಕೆ. ರಾಜು ಹಾಗೂ ಗ್ರಾಮದ ಯಜಮಾನರುಗಳು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು.2
- ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನಾ ಕಚೇರಿ ಕಟ್ಟಡ ಉದ್ಘಾಟನೆ ಮಳವಳ್ಳಿ: ಕಳೆದ 44 ವರ್ಷಗಳ ಹಿಂದೆ ಒಂದು ಪುಟ್ಟ ಗ್ರಾಮದಲ್ಲಿ ಡಾ.ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಅಮ್ಮನವರು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಯನ್ನು ಪ್ರಾರಂಭಿಸಿ ಇಂದು ಇಡೀ ಕರ್ನಾಟಕದಾದ್ಯಂತ ಎಲ್ಲಾ ವರ್ಗದ ಜನರು ಈ ಯೋಜನೆಯ ಉಪಯೋಗವನ್ನು ಪಡೆಯುತ್ತಿದ್ದಾರೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಯೋಗೇಶ್ ತಿಳಿಸಿದರು. ಪಟ್ಟಣದ ಮೈಸೂರು ರಸ್ತೆಯಲ್ಲಿರುವ ಶಾಂತಿಶಿಕ್ಷಣ ಸಂಸ್ಥೆಗೆ ಸೇರಿದ ಕಟ್ಟಡಕ್ಕೆ ಶ್ರೀ. ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಮಳವಳ್ಳಿ ಯೋಜನಾ ನೂತನ ಕಚೇರಿಯನ್ನು ಉದ್ಘಾಟಿಸಿ ಬಳಿಕ ಮಾತಾಡಿದ ಅವರು 2013ರಲ್ಲಿ ಮಳವಳ್ಳಿ ಪಟ್ಟಣದಲ್ಲಿ ಡಾ. ವೀರೇಂದ್ರ ಹೆಗಡೆ ಹಾಗೂ ಹೇಮಾವತಿ ಅಮ್ಮನವರು ಹಾಗೂ ಧರ್ಮಸ್ಥಳ ಮಂಜುನಾಥನವರ ಆಶೀರ್ವಾದದಿಂದ ಯೋಜನಾಧಿಕಾರಿ ಕಚೇರಿ ಉದ್ಘಾಟನೆ ಮಾಡಲಾಗಿತ್ತು ಆ ಕಟ್ಟಡ ದುರಸ್ತಿಯ ಹಿನ್ನೆಲೆಯಲ್ಲಿ ಶಾಂತಿ ಶಿಕ್ಷಣ ಸಂಸ್ಥೆಗೆ ಸೇರಿದ ಕಟ್ಟಡಕ್ಕೆ ಇಂದು ಸ್ಥಳಾಂತರ ಮಾಡಲಾಗಿದ್ದು ಅದರ ಉದ್ಘಾಟನೆಯು ನನ್ನ ಕೈಯಿಂದಲೇ ಮಾಡುತ್ತಿರುವುದು ನನ್ನ ಸೌಭಾಗ್ಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು, ಡಾ. ವೀರೇಂದ್ರ ಹೆಗ್ಗಡೆಯವರು ಸುಮಾರು 44 ವರ್ಷಗಳ ಹಿಂದೆ ಒಂದು ಸಣ್ಣ ಗ್ರಾಮದಲ್ಲಿ ಪ್ರಾರಂಭ ಮಾಡಲಾಗಿದ್ದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘವನ್ನು ಇಂದು ಇಡೀ ಕರ್ನಾಟಕದಲ್ಲಿ ಧರ್ಮಸ್ಥಳ ಗ್ರಾಮೀಣ ಯೋಜನೆ ಸಂಘಗಳು ಬಹಳಷ್ಟು ಯಶಸ್ವಿಯಾಗಿ ನಡೆಯುತ್ತಿದೆ ಸುಮಾರು 6.5 ಲಕ್ಷಕ್ಕೂ ಸ್ವಸಾಯ ಸಂಘಗಳು ಹಾಗೂ 55 ಲಕ್ಷಕ್ಕೂ ಹೆಚ್ಚು ಸ್ವಸಹಾಯ ಸಂಘಗಳ ಪಾಲುದಾರರಾಗಿ ಕಾರ್ಯನಿರ್ವಹಿಸುತ್ತಿದೆ,ಎಲ್ಲಾ ವರ್ಗದ ಜನರಿಗೂ ಧರ್ಮಸ್ಥಳ ಯೋಜನೆಯ ಸೇವೆ ಸಿಗಲಿ ಎಂದು ಶುಭ ಹಾರೈಸಿದರು, ಜನಜಾಗೃತಿ ವೇದಿಕೆಯ ಸದಸ್ಯರಾದ ಮಾಗನೂರು ಶಿವಕುಮಾರ್ ಮತ್ತು ಶಾಂತಿ ಶಿಕ್ಷಣಸಂಸ್ಥೆಯ ಕಾರ್ಯದರ್ಶಿ ಪುಟ್ಟರಾಜು ಇವರುಗಳು ಮಾತನಾಡಿ ದೂರದೃಷ್ಟಿಯಿಂದ ಡಾ. ವೀರೇಂದ್ರ ಹೆಗಡೆಯವರು ಸ್ಥಾಪಿಸಿದ ಧರ್ಮಸ್ಥಳ ಯೋಜನೆಯ ಎಲ್ಲಾ ಸವಲತ್ತುಗಳು ಎಲ್ಲಾ ವರ್ಗದ ಜನರಿಗೆ ದೊರೆಯುತ್ತಿದೆ ಇವರ ಈ ಸೇವೆ ಸದಾಕಾಲ ಹೀಗೆ ಮುಂದುವರೆಯಲಿ ಎಂದು ಶುಭಕೋರಿದರು, ಇದೇವೇಳೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಜಿಲ್ಲಾನಿರ್ದೇಶಕಿ ಚೇತನಾ, ತಾಲೂಕು ಯೋಜನಾಧಿಕಾರಿ ಎನ್.ಲೋಕೇಶ್, ಕಿರುಗಾವಲು ಕೆರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಮಹದೇವಸ್ವಾಮಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ನಿರ್ದೇಶಕ ಎಚ್.ಉಮೇಶ್ ಮಾಳಿಗೆ, ಎಂಐಎಸ್ ಜಿಲ್ಲಾ ಯೋಜನಾಧಿಕಾರಿ ಅಶೋಕ್, ಜನಜಾಗೃತಿ ವೇದಿಕೆಯ ಜಿಲ್ಲಾಸದಸ್ಯ ಸುಂದರಪ್ಪ, ರವಿ ಪೂಜಾರಿ, ಸತೀಶ್, ಬೀಜಿಪುರ ಒಕ್ಕೂಟದ ಅಧ್ಯಕ್ಷ ಶಿವಕುಮಾರ್, ಪೂರಿಗಾಲಿ ಮಂಟೇಸ್ವಾಮಿ, ಸೇರಿದಂತೆ ಬೆಳಕವಾಡಿ, ಪೂರಿಗಾಲಿ, ಕಿರಗಾವಲು, ಹಲಗೂರು,ಕಸಬಾ ಹೋಬಳಿಗಳ ವಲಯಗಳ ಮೇಲ್ವಿಚಾರಕರು, ಒಕ್ಕೂಟದ ಪ್ರತಿನಿಧಿಗಳು, ಸಿಬ್ಬಂದಿಗಳು ಹಾಜರಿದ್ದರು.1
- ರೀಲ್ಗಾಗಿ ಯುವಕರ ಹುಚ್ಚಾಟ.. ರಕ್ಷಣೆಗೆ IAF ಹೆಲಿಕಾಪ್ಟರ್ ಬರಬೇಕಾಯ್ತು.. ರೀಲ್ಗಾಗಿ ಯುವಕರು ಹುಚ್ಚಾಟ ಮೆರೆದಿದ್ದಾರೆ. ಉತ್ತರ ಪ್ರದೇಶದ 5 ಯುವಕರು ರೀಲ್ ಶೂಟ್ ಮಾಡಲು ನೀರಿನ ಟ್ಯಾಂಕ್ ಮೇಲೆ ಹತ್ತಿದರು. ಮೆಟ್ಟಿಲು ಕುಸಿದು ಮೂವರು ಕೆಳಗೆ ಬಿದ್ದರು, ಅವರಲ್ಲಿ ಒಬ್ಬ ಸಾವನ್ನಪ್ಪಿದ. ಇನ್ನಿಬ್ಬರಿಗೆ ಗಾಯಗಳಾಗಿವೆ. ಇನ್ನಿಬ್ಬರು ಮೇಲೆ ಸಿಕ್ಕಿಹಾಕಿಕೊಂಡು 16 ಗಂಟೆಗಳ ಕಾಲ ಅಲ್ಲೇ ಇದ್ದರು. ಅವರನ್ನು ರಕ್ಷಿಸುವುದು ಸಾಧ್ಯವಾಗದೇ ಇದ್ದ ಕಾರಣ, ಇಂಡಿಯನ್ ಏರ್ ಫೋರ್ಸ್ಗೆ ಸೇರಿದ Mi-17 V5 ಹೆಲಿಕಾಪ್ಟರ್ ಅನ್ನು ಸ್ಥಳಕ್ಕೆ ಕರೆಸಿ, ಏರ್ಲಿಫ್ಟ್ ಮಾಡಿ ರಕ್ಷಿಸಲಾಯಿತು.1
- ಕರ್ನಾಟಕ ಕಾವಲು ಪಡೆಯವತಿಯಿಂದ ವಿಶ್ವ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಪಟ್ಟಣದ ಪುರಸಭೆಯ ಆವರಣದಲ್ಲಿ ಹಿರಿಯ ಕಾರ್ಮಿಕರನ್ನು ಗುರುತಿಸಿ ಸಂಘಟನೆಯವತಿಯಿಂದ ಸನ್ಮಾನಿಸಲಾಯಿತು .ಈ ಸಂದರ್ಭದಲ್ಲಿ ಮಾತನಾಡಿದ ತಾ!!ಅಧ್ಯಕ್ಷರಾದ ಎ.ಅಬ್ದುಲ್ ಮಾಲಿಕ್ ಕಾರ್ಮಿಕರು ನಮ್ಮ ದೇಶದ ಬೆನ್ನೆಲುಬಾಗಿದ್ದು ಇವರಿಗೆ ಸಲ್ಲಿಸುತ್ತಿರುವ ಗೌರವ ನಮಗೆ ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು ಇದೇ ವೇಳೆ ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕರಾದ ಮಾಡ್ರಹಳ್ಳಿ ಸುಭಾಷ್ ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನದಿಂದ ಕಾರ್ಮಿಕರಿಗೆ ಸಮಾನತೆ ಲಭಿಸಿದೆ ಎಂದು ತಿಳಿಸಿದರು,ಕನ್ನಡಪರ ಹಿರಿಯ ಹೋರಾಟಗಾರರಾದ ಬ್ರಹ್ಮಾನಂದ್ ಮಾತನಾಡಿ ಕಾವಲು ಪಡೆಯ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು,ಕಾರ್ಯಕ್ರಮದ ನಿರೂಪಣೆಯನ್ನು ತಾ!!ಕಾರ್ಯದರ್ಶಿ ಎಸ್.ಮುಬಾರಕ್ ನೆರವೇರಿಸಿದರು,ಇದೇ ವೇಳೆ ಛಲವಾದಿ ಆರ್.ಸೋಮಣ್ಣ.ರಾಘವಾಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಉಲ್ಲಾಸ್.ಕಾವಲು ಪಡೆಯ ತಾ!!ಗೌರವಾಧ್ಯಕ್ಷರಾದ ರಾಮೇಗೌಡ.ತಾ!!ಉಪಾಧ್ಯಕ್ಷರಾದ ಶಿವಕುಮಾರ್.ತಾ!!ಸಂಚಾಲಕರಾದ ಕುಂಜುಟ್ಟಿ.ಟೌನ್ ಉಪಾಧ್ಯಕ್ಷರಾದ ಸಾದಿಕ್ ಪಾಷ.ಟೌನ್ ಗೌರವಾಧ್ಯಕ್ಷರಾದ ಶಕೀಲ್.ಸಂಚಾಲಕರಾದ ಮಿಮಿಕ್ರಿರಾಜು.ಮುಂಟೀಪರ ಮಾದಯ್ಯ.ದಲಿತ ಮುಖಂಡರಾದ ಮುತ್ತಣ್ಣ.ಶಂಕರ್.ಮದ್ದಯ್ಯನ ಹುಂಡಿ ನಾಗರಾಜು.ಎಲಕ್ಟ್ರಿಕ್ ಸಿದ್ದು.ಸೇರಿದಂತೆ ಇತರರು ಹಾಜರಿದ್ದರು.1