Shuru
Apke Nagar Ki App…
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮೊಗರ್ಪಣೆಯಲ್ಲಿ ರಸ್ತೆಬದಿಯ ತಡೆಬೇಲಿಗೆ ಗುದ್ದಿ ರಿಕ್ಷಾ ಜಖಂ ಪುತ್ತೂರಿನಿಂದ ಸುಳ್ಯದ ಕಡೆಗೆ ಬರುತ್ತಿದ್ದ ರಿಕ್ಷಾವೊಂದು ಮೊಗರ್ಪಣೆಯಲ್ಲಿ ರಸ್ತೆಬದಿಯ ತಡೆಬೇಲಿಗೆ ಗುದ್ದಿ ಜಖಂಗೊಂಡ ಹಾಗೂ ಚಾಲಕ ಗಾಯಗೊಂಡು ಆಸ್ಪತ್ರೆಗೆ ಸೇರಿರುವ ಘಟನೆ ಇಂದು ನಡೆದಿದೆ. ಸುದೇಶ್ ಎಂಬುವವರು ತಮ್ಮ ಮಗು ಮತ್ತು ಅರಂಬೂರಿನ ಪರಮೇಶ್ವರ ಎಂಬವರೊಂದಿಗೆ ತಮ್ಮ ರಿಕ್ಷಾದಲ್ಲಿ ಪುತ್ತೂರಿನ ಜಾತ್ರೆಗೆ ಹೋಗಿ ಮುಂಜಾನೆಯ ನಾಲ್ಕು ಗಂಟೆ ವೇಳೆಗೆ ಹಿಂದಿರುಗುತ್ತಿದ್ದಾಗ ಸುಳ್ಯ ಸಮೀಪ ಮೊಗರ್ಪಣೆಯಲ್ಲಿ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಸರಿದ ರಿಕ್ಷಾ ರಸ್ತೆಬದಿಯ ತಡೆ ಬೇಲಿಗೆ ಗುದ್ದಿತು. ಪರಿಣಾಮವಾಗಿ ರಿಕ್ಷಾ ಜಖಂ ಗೊಂಡದ್ದಲ್ಲದೆ ಸುದೇಶ್ ರವರ ಮುಖಕ್ಕೆ ಗಾಯವಾಗಿದೆ ಎನ್ನಲಾಗಿದೆ. ಅವರನ್ನು ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಬಳಿಕ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
Shamsheer Budoli
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮೊಗರ್ಪಣೆಯಲ್ಲಿ ರಸ್ತೆಬದಿಯ ತಡೆಬೇಲಿಗೆ ಗುದ್ದಿ ರಿಕ್ಷಾ ಜಖಂ ಪುತ್ತೂರಿನಿಂದ ಸುಳ್ಯದ ಕಡೆಗೆ ಬರುತ್ತಿದ್ದ ರಿಕ್ಷಾವೊಂದು ಮೊಗರ್ಪಣೆಯಲ್ಲಿ ರಸ್ತೆಬದಿಯ ತಡೆಬೇಲಿಗೆ ಗುದ್ದಿ ಜಖಂಗೊಂಡ ಹಾಗೂ ಚಾಲಕ ಗಾಯಗೊಂಡು ಆಸ್ಪತ್ರೆಗೆ ಸೇರಿರುವ ಘಟನೆ ಇಂದು ನಡೆದಿದೆ. ಸುದೇಶ್ ಎಂಬುವವರು ತಮ್ಮ ಮಗು ಮತ್ತು ಅರಂಬೂರಿನ ಪರಮೇಶ್ವರ ಎಂಬವರೊಂದಿಗೆ ತಮ್ಮ ರಿಕ್ಷಾದಲ್ಲಿ ಪುತ್ತೂರಿನ ಜಾತ್ರೆಗೆ ಹೋಗಿ ಮುಂಜಾನೆಯ ನಾಲ್ಕು ಗಂಟೆ ವೇಳೆಗೆ ಹಿಂದಿರುಗುತ್ತಿದ್ದಾಗ ಸುಳ್ಯ ಸಮೀಪ ಮೊಗರ್ಪಣೆಯಲ್ಲಿ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಸರಿದ ರಿಕ್ಷಾ ರಸ್ತೆಬದಿಯ ತಡೆ ಬೇಲಿಗೆ ಗುದ್ದಿತು. ಪರಿಣಾಮವಾಗಿ ರಿಕ್ಷಾ ಜಖಂ ಗೊಂಡದ್ದಲ್ಲದೆ ಸುದೇಶ್ ರವರ ಮುಖಕ್ಕೆ ಗಾಯವಾಗಿದೆ ಎನ್ನಲಾಗಿದೆ. ಅವರನ್ನು ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಬಳಿಕ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
More news from ಕರ್ನಾಟಕ and nearby areas
- ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಕಂಚಿನಬಾಗಿಲ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಥೆನಾಲ್ ತುಂಬಿದ್ದ ಟ್ಯಾಂಕರ್ ಸ್ಫೋಟಗೊಂಡ . ಸ್ಪೋಟದ ತೀವ್ರತೆಗೆ ಜನ ಬೆಚ್ಚಿ ಬಿದ್ದಿದ್ದಾರೆ.. ಬೆಂಕಿ ಹೋತ್ತಿಉರಿಯುತ್ತಿರುವ ದೃಶ್ಯ ಜನರ ಎದೆ ಝಲ್ಲೆನ್ನುವಂತೆ ಮಾಡಿದೆ.. ಸುಮಾರು ಗಂಟೆಗಳ ಕಾಲ ಈ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.1
- ಮಲೆ ಮಹದೇಶ್ವರ ಬೆಟ್ಟ ‘ಹಸಿರು ನಾಳೆ-ಎಂ.ಎಂ. ಹಿಲ್ಸ್' (Green Tomorrow – MM Hills) ಅಭಿಯಾನದ ಅಂಗವಾಗಿ ಜಿಲ್ಲಾಧಿಕಾರಿ ಶ್ರೀರೂಪ ಅವರು ಬುಧವಾರ (ಏ.15) ಮಲೆ ಮಹದೇಶ್ವರ ಬೆಟ್ಟದಲ್ಲಿ ಘನ ತ್ಯಾಜ್ಯ ನಿರ್ವಹಣೆಯ ನೂತನ ಯಂತ್ರೋಪಕರಣಗಳನ್ನು ಅಧಿಕೃತವಾಗಿ ಉದ್ಘಾಟಿಸಿದರು. ಪವಿತ್ರ ಯಾತ್ರಾ ಸ್ಥಳದಲ್ಲಿ ಹೆಚ್ಚುತ್ತಿರುವ ಪರಿಸರ ಸವಾಲುಗಳನ್ನು ಎದುರಿಸಲು ಮತ್ತು ವೈಜ್ಞಾನಿಕ ಮಾದರಿಯಲ್ಲಿ ತ್ಯಾಜ್ಯ ಸಂಸ್ಕರಣೆ ಮಾಡಲು ಅಭಿಯಾನ ಹಮ್ಮಿಕೊಳ್ಳಲಾಗಿದೆ. ನೂತನವಾಗಿ ಅಳವಡಿಸಲಾದ ಯಂತ್ರಗಳು ಕಸವನ್ನು ಸಮರ್ಪಕವಾಗಿ ವಿಂಗಡಿಸಲು ಮತ್ತು ವಿಲೇವಾರಿ ಮಾಡಲು ಸಹಕಾರಿಯಾಗಲಿದ್ದು, ಬೆಟ್ಟವನ್ನು ಪ್ಲಾಸ್ಟಿಕ್ ಮುಕ್ತ ಹಾಗೂ ಪರಿಸರ ಸ್ನೇಹಿ ತಾಣವನ್ನಾಗಿ ಮಾಡುವ ಗುರಿಯನ್ನು ಹೊಂದಿವೆ. ಯೋಜನೆಯ ಯಶಸ್ಸಿನ ಹಿಂದಿರುವ ಪೌರಕಾರ್ಮಿಕರು ಹಾಗೂ ಸ್ತ್ರೀ ಶಕ್ತಿ ಸಂಘದ ಸದಸ್ಯರು ಈ ಸಮಾರಂಭಕ್ಕೆ ಸಾಕ್ಷಿಯಾದರು. ಈ ಸಾಮೂಹಿಕ ಪ್ರಯತ್ನವು ಬೆಟ್ಟದ ನೈಸರ್ಗಿಕ ಸೌಂದರ್ಯವನ್ನು ಕಾಪಾಡುವಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಈ ಸಂದರ್ಭದಲ್ಲಿ ಮಲೆ ಮಹದೇಶ್ವರ ಬೆಟ್ಟ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಎ.ಇ. ರಘು, ಉಪಕಾರ್ಯದರ್ಶಿ ಚಂದ್ರಶೇಖರ್, ಮೈಕಾಪ್ಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಅಶ್ರಫುಲ್ ಹಸನ್, ಗ್ರಾಮ ಪಂಚಾಯಿತಿ ಪಿಡಿಒ ಕಿರಣ್, ಜಾಗೃತ್ ಟೆಕ್ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕರು, ಮಂಗಳೂರಿನ ಮಿನಿ ಟೆಕ್ ಸಂಸ್ಥೆಯ ಪ್ರತಿನಿಧಿಗಳು, ಇತರರು ಉಪಸ್ಥಿತರಿದ್ದರು.4
- ನರಗುಂದದಲ್ಲಿ ಭಿಕರ ರಸ್ತೆ ಅಪಘಾತ ವ್ಯಕ್ತಿ ಓರ್ವನ ಮೇಲೆ ಹತ್ತಿ ಇಳಿದ ಲಾರಿ1
- ಗದಗ ಜಿಲ್ಲಾ ಮುಂಡರಗಿ ತಾಲೂಕಿನಲ್ಲಿ ತುಂಗಭದ್ರಾ ನದಿ ತಾಯಿಯ ಒಡಲು ಬಗೆಯುತ್ತಿರುವ ದಂದೆ ಕೊರರು ರಾಜಾರೋಷವಾಗಿ ಅಕ್ರಮ ಮರಳು ಸಾಗಾಟ ಗಣಿಗಾರಿಕೆ ಮೇಲೆ ದಾಳಿ ನಡೆಸಿ ಸುಮಾರು ಆರಕ್ಕು ಹೆಚ್ಚು ಮರಳು ತುಂಬಿದ ಟ್ರ್ಯಾಕ್ಟರ್ ವಶ ಪಡಿಸಿಕೊಂಡಿದ್ದಾರೆ ಸದ್ಯ ಮುಂಡರಗಿ ಪೊಲೀಸ ಠಾಣಾ ದಲ್ಲಿ ವಾಹನಗಳು ಇವೆ1
- Post by ✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊1
- ಹೆಬ್ಬಳ್ಳಿ ಜಿಲ್ಲಾ ಪಂಚಾಯತ ಸದಸ್ಯ ಯೋಗೇಶಗೌಡ ಹತ್ಯೆ ಪ್ರಕರಣದ ಹೋರಾಟದಲ್ಲಿ ಪಾಲ್ಗೊಂಡು ಜಯಗಳಿಸಿದ ಹೆಮ್ಮೆ ನನಗಿದೆ ಎಂದು ಜನ ಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಹೇಳಿದರು. ಧಾರವಾಡದಲ್ಲಿ ಶುಕ್ರವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಗ ವಿನಯ್ ಕುಲಕರ್ಣಿ ಸೇರಿದಂತೆ 16 ಜನರಿಗೆ ಶಿಕ್ಷೆಯಾಗಿದೆ. ಇದು ಮುಂದೆ ಹೈಕೋರ್ಟ್, ಸುಪ್ರೀಂ ಕೋರ್ಟ್ವರೆಗೂ ಹೋಗುವ ಪ್ರಕ್ರಿಯೆ. ಆದರೆ, ಐತಿಹಾಸಿಕ ಹೋರಾಟದಲ್ಲಿ ಪಾಲ್ಗೊಂಡ ಹೆಮ್ಮೆ ನನಗಿದೆ ಎಂದರು. ನಾನು ಈ ಕೊಲೆ ಬಗ್ಗೆ ಮೊದಲ ಪತ್ರಿಕಾಗೋಷ್ಠಿ ನಡೆಸಿದಾಗಿನಿಂದಲೂ ನನಗೆ ಪ್ರತ್ಯಕ್ಷ ಮತ್ತು ಪರೋಕ್ಷ ಬೆದರಿಕೆ ಇದ್ದೇ ಇವೆ. ಈಗಲೂ ಇವೆ. ಮುಂದೆಯೂ ಇರಲಿವೆ. ಇದು ನನಗೆ ಗೊತ್ತು. ಇಂತಹ ದೊಡ್ಡ ಕೊಲೆ ಪ್ರಕರಣದಲ್ಲಿ ಹೋರಾಟ ಮಾಡಿದವರಿಗೆ ಈ ರೀತಿಯ ಬೆದರಿಕೆ ಇದ್ದೇ ಇರುತ್ತವೆ. ನಾನು ಸೆಕ್ಯುರಿಟಿಯನ್ನೂ ಕೇಳಿಲ್ಲ. ಅದರ ಅವಶ್ಯಕತೆಯೂ ಇಲ್ಲ. ಎಲ್ಲಿಯವರೆಗೂ ನನ್ನ ಹಣೆಬರಹ ಗಟ್ಟಿ ಇದೆಯೋ ಅಲ್ಲಿಯವರೆಗೂ ನಾನು ಇರಲಿದ್ದೇನೆ. ಹಣೆಬರಹ ಮುಗಿದ ಮೇಲೆ ಸಾಯುತ್ತೇನೆ. ಹೀಗಾಗಿ ನನಗೆ ಸೆಕ್ಯುರಿಟಿ ಅವಶ್ಯಕತೆ ಇಲ್ಲ. ಈ ಹೋರಾಟ ನಿರಂತರವಾಗಿರಲಿದೆ ಎಂದು ತಿಳಿಸಿದರು.1
- ದಿನಾಂಕ 18.04.2026 ರಂದು ಬೆಳಿಗ್ಗೆ 10.00 ರಿಂದ ಸಂಜೆ 04:00 ಗಂಟೆಯವರೆಗೆ 33/11ಕೆವಿ ಕಂಕನಾಡಿ ಉಪಕೇಂದ್ರದಿಂದ ಹೊರಡುವ 11ಕೆವಿ ಅತ್ತಾವರ, 11 ಕೆವಿ ಬೆಂದೂರು, 11ಕೆವಿ ಫಳ್ನೀರ್, 11ಕೆವಿ ಫಾದರ್ ಮುಲ್ಲರ್ ರೋಡ್ ಫೀಡರ್, 11ಕೆವಿ ಮಿಷನ್ ಕಂಪೌಂಡ್, 11 ಕೆವಿ ಕರಾವಳಿ ಫೀಡರ್ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ, ಕಂಕನಾಡಿ, ವೆಲೆನ್ಸಿಯ, ಸೈಂಟ್ ಜೋಸೆಫ್ ನಗರ, ಬಿ.ವಿ ರೋಡ್, ಗೋರಿಗುಡ್ಡ, ಉಜ್ಜೋಡಿ, ಲೋವರ್ ಬೆಂದೂರು ರಾಧ ಮೆಡಿಕಲ್, ಕಂಕನಾಡಿ ಮಾರ್ಕೆಟ್, ಹೈಲ್ಯಾಂಡ್, ಫಳ್ನೀರ್, ಯುನಿಟಿ, ವಾಸ್ಲೇನ್, ಸೈಂಟ್ ಮೇರಿಸ್ ಸ್ಕೂಲ್, ಬಲ್ಮಠ ಮಿಷನ್ ಕಂಪೌಂಡ್ , ಬಲ್ಮಠ ನ್ಯೂ ರೋಡ್, ಅಥೆನಾ ಹಾಸ್ಪಿಟಲ್, ಫಾದರ್ ಮುಲ್ಲರ್ ಹಾಸ್ಪಿಟಲ್, ಹೆಬಿಕ್ ಸ್ಕೂಲ್, ಎವಿ ಜಂಕ್ಷನ್, ಶಾಂತಿನಿಲಯ, ಕಂಕನಾಡಿ ಬೈಪಾಸ್ ರೋಡ್, ಕಲ್ಪನಾ ರೋಡ್, ಬೆಂದೂರುವೆಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.1
- Post by Suresh Belagere1
- ಗದಗ ಜಿಲ್ಲಾ ಮುಂಡರಗಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿರುವ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಪ್ರತಿ ದಿನ ಬೆಳಿಗ್ಗೆಯಿಂದ ಸಂಜೆಯವರೆಗೆ ಇಸ್ಪೀಟ್ ಆಟದಲ್ಲಿ ನಿರತರಾಗಿದ್ದು ದೇವಸ್ಥಾನದಲ್ಲಿ ತುಂಬಾ ಗಲಿಜು ಮತ್ತು ದುಶ್ಚಟಗಳ ತಾಣವಾಗಿದೆ ಇದನ್ನು ಅಧಿಕಾರಿಗಳು ತಡೆಯಬೇಕು ಎಂದು ಮೈಲಾರಪ್ಪ ಕಲಕೇರಿ ಅವರು ಆಗ್ರಹಿಸಿದರು3