Shuru
Apke Nagar Ki App…
ಬೆಂಗಳೂರ ಪ್ರೀಡಮ್ ಪ್ರಾರ್ಕನಲ್ಲಿ ಕನಿಷ್ಠ ವೇತನ ಮರುಪರಿಶೀಲನೆ ರಾಜ್ಯ ಮಟ್ಟದ ಆಹೋರಾತ್ರಿ ಪ್ರತಿಬಟನಾ ದರಣಿ
Sharanugouda Patil
ಬೆಂಗಳೂರ ಪ್ರೀಡಮ್ ಪ್ರಾರ್ಕನಲ್ಲಿ ಕನಿಷ್ಠ ವೇತನ ಮರುಪರಿಶೀಲನೆ ರಾಜ್ಯ ಮಟ್ಟದ ಆಹೋರಾತ್ರಿ ಪ್ರತಿಬಟನಾ ದರಣಿ
More news from Vijayapura and nearby areas
- ಬೆಂಗಳೂರ ಪ್ರೀಡಮ್ ಪ್ರಾರ್ಕನಲ್ಲಿ ಕನಿಷ್ಠ ವೇತನ ಮರುಪರಿಶೀಲನೆ ರಾಜ್ಯ ಮಟ್ಟದ ಆಹೋರಾತ್ರಿ ಪ್ರತಿಬಟನಾ ದರಣಿ1
- ತಾಳಿಕೋಟಿ ತಾಲೂಕಿನ ಬಾವೂರ ಗ್ರಾಮದ ಶ್ರೀ ವೀರಭದ್ರೇಶ್ವರ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶಾಲಾ ಶಿಕ್ಷಣ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಮುದ್ದೇಬಿಹಾಳ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಾವೂರ ಇವರ ಸಂಯುಕ್ತ ಆಶ್ರಯದಲ್ಲಿ 2026-27ನೇಯ ಸಾಲಿನ ಮಡಿಕೇಶ್ವರ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಬುಧವಾರ ಅದ್ದೂರಿಯಾಗಿ ಜರುಗಿತು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಬಾವೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಸಿದ್ದು ಸಜ್ಜನ ಅವರು ವಹಿಸಿದ್ದರು. ಮುದ್ದೇಬಿಹಾಳ ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಆರ್. ಬಿ.ದಮ್ಮೂರಮಠ ಕ್ರೀಡಾ ಧ್ವಜಾರೋಹಣವನ್ನು ನೆರವೇರಿಸಿದರು. ತಾಳಿಕೋಟಿ ವರದಿ ಬಾವೂರ ಗ್ರಾಮದಲ್ಲಿ ಅದ್ದೂರಿಯಾಗಿ ಜರುಗಿದ ಕ್ಲಸ್ಟರ್ ಮಟ್ಟದ ಕ್ರೀಡಾಕೂಟ. ತಾಳಿಕೋಟಿ ಎಸ್. ಎಸ್.ವಿದ್ಯಾಸಂಸ್ಥೆ ಸಂಸ್ಥಾಪಕ ಅಧ್ಯಕ್ಷರಾದ ಎಚ್ ಎಸ್ ಪಾಟೀಲ ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿದರು. ದೈಹಿಕ ಶಿಕ್ಷಕ ರಮೇಶ ಮಠಪತಿ ಪ್ರತಿಜ್ಞಾವಿಧಿ ಬೋಧಿಸಿದರು. ಬಾವೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಗುರುಗಳಾದ ಬಿ.ಎಸ್. ಬಸರಕೋಡ ಸ್ವಾಗತಿಸಿದರು. ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಎಸ್ ಎಸ್ ಬಾಬಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿಯರಾದ ಶ್ರೀಮತಿ ವಿಜಯಲಕ್ಷ್ಮಿ ವಣರೊಟ್ಟಿ ಹಾಗೂ ಶ್ರೀಮತಿ ಮಂಜುಳಾ ಕೆ. ಅವರು ಕಾರ್ಯಕ್ರಮವನ್ನು ಸುಂದರವಾಗಿ ನಡೆಸಿಕೊಟ್ಟರು. ಮುಖ್ಯ ಅತಿಥಿಗಳಾಗಿ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಟಿ.ವಜ್ಜಲ್, ಸಂಘದ ಪ್ರಧಾನ ಕಾರ್ಯದರ್ಶಿ ಎಸ್ ಬಿ ಬೀರಗೊಂಡ, ಬಾವೂರು ಗ್ರಾಮ ಪಂಚಾಯತ್ ಪಿಡಿಓ ಬಸನಗೌಡ ಚೌಧರಿ, ಗಣ್ಯರಾದ ಶ್ರೀಶೈಲ್ ಸಜ್ಜನ, ವರ್ತಕರಾದ ಶಶಿಧರ ಪತ್ತಾರ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸಿದ್ದನಗೌಡ ಪಾಟೀಲ, ಎಸ್ ಡಿ ಎಂ ಸಿ ಸದಸ್ಯರು, ಗ್ರಾಮದ ಗಣ್ಯರು, ಎಲ್ಲಾ ಶಾಲೆಗಳ ಮುಖ್ಯ ಗುರುಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು. ಕ್ರೀಡಾಕೂಟದಲ್ಲಿ ಮಡಿಕೇಶ್ವರ್ ಕ್ಲಸ್ಟರ್ ವ್ಯಾಪ್ತಿಯ ಹದಿಮೂರು ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕ್ರೀಡಾಕೂಟದಲ್ಲಿ ಕೋಕೋ, ಕಬಡ್ಡಿ, ವಾಲಿಬಾಲ್ ತ್ರೋಬಾಲ್,ಓಟ, ಗುಂಡು ಎಸೆತ ಉದ್ದ ಜಿಗಿತ, ಚಕ್ರ ಎಸೆತ ಮುಂತಾದ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಅಂತಿಮವಾಗಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಸಲಾಯಿತು.1
- ಕರವೇಯಿಂದ ರಸ್ತೆ ತಡೆದು ತೀವ್ರ ಪ್ರತಿಭಟನೆ ವಾರದೊಳಗೆ ಬೇಡಿಕೆ ಈಡೇರದೇ ಇದ್ದಲ್ಲಿ ಉಪವಾಸ ಸತ್ಯಾಗ್ರಹ ಕರವೇ ತಾಲೂಕು ಅಧ್ಯಕ್ಷ ರಮೇಶ ಬಿರಾದಾರ ಎಚ್ಚರಿಕೆ ಹುಣಸಗಿ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕೊಡೇಕಲ್ ಗ್ರಾಮದಲ್ಲಿ ಕರವೇ ತಾಲೂಕು ಘಟಕದ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಪ್ರತಿಭಟನೆ.1
- ಸೋಮಲಾಪುರದ ಬಸವೇಶ್ವರ ಜಾತ್ರೆಯಲ್ಲಿ ; 2026 ನೇ ಸಾಲಿನ ಬಸವಸಿರಿ ಪ್ರಶಸ್ತಿ ಪ್ರಧಾನ ಪಾರ್ಶ್ವವಾಯು (ಲಕ್ವ) ರೋಗನಿವಾರಣಿಯ ಧನ್ವಂತರಿ ಸುಕ್ಷೇತ್ರ ಸೋಮಲಾಪುರ ಬಸವೇಶ್ವರ ಜಾತ್ರೆಯಲ್ಲಿ ಶ್ರೀ ಬಸವರಾಜ ಉಮಾರಾಣಿ ರವರಿಗೆ ಶ್ರೀ ಡಾ ಅಭಿನವ ಚನ್ನಬಸವ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಸೋಮಲಾಪುರದ ಶ್ರೀ ಬಸವೇಶ್ವರ ಜಾತ್ರಾ ಸಮಿತಿಯ ವತಿಯಿಂದ ಬಸವ ಸಿರಿ ಪ್ರಶಸ್ತಿ ನೀಡಿ ಗೌರವಿಸಿದರು.2
- ಶಾಲೆಯ ಮೇಲ್ಛಾವಣಿ ಕುಸಿತ: ಐವರು ವಿದ್ಯಾರ್ಥಿಗಳಿಗೆ ಗಾಯ, ಕೂಡಲೇ ಶಾಲಾ ಕಟ್ಟಡ ದುರಸ್ತಿಗೆ ಆಡಳಿತ ಮಂಡಳಿಗೆ ಸೂಚನೆ: ಸಿಇಓ ಗಜಾನನ ಬಾಲೆ1
- ಬಳ್ಳಾರಿ ಚಲೋ — ಜನರಿಗಾಗಿ, ನ್ಯಾಯಕ್ಕಾಗಿ, ಕರ್ನಾಟಕಕ್ಕಾಗಿ! ಬಳ್ಳಾರಿ ಚಲೋ — ಜನರಿಗಾಗಿ, ನ್ಯಾಯಕ್ಕಾಗಿ, ಕರ್ನಾಟಕಕ್ಕಾಗಿ! ಇಂದು ಬಳ್ಳಾರಿ ಚಲೋ ಯಾತ್ರೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ಬಿ.ವೈ. ವಿಜಯೇಂದ್ರ ಜಿ, ಶ್ರೀ ಎನ್. ರವಿಕುಮಾರ್ ಜಿ, ಶ್ರೀ ಸಿ.ಟಿ. ರವಿ ಜಿ, ಶ್ರೀ ಶ್ರೀರಾಮುಲು ಜಿ ಸೇರಿದಂತೆ ಅನೇಕ ಹಿರಿಯ ನಾಯಕರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಭಾಗವಹಿಸಿ, ಕಾಂಗ್ರೆಸ್ ಸರ್ಕಾರದ ವಿರುದ್ಧದ ಜನಾಂದೋಲನಕ್ಕೆ ಧ್ವನಿಗೂಡಿಸಿದೆ. ಕರ್ನಾಟಕದ ರೈತರು, ಮಹಿಳೆಯರು, ದಲಿತರು, ಯುವಕರು ಹಾಗೂ ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಕಾಂಗ್ರೆಸ್ ಸರ್ಕಾರ ಇಂದು ಆಡಳಿತ ನಡೆಸುವುದಕ್ಕಿಂತ ಭ್ರಷ್ಟಾಚಾರ ಮತ್ತು ಲೂಟಿಯಲ್ಲಿ ತೊಡಗಿದೆ ಎಂಬುದು ರಾಜ್ಯದ ಜನರ ಆರೋಪವಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ, ರೈತರ ಸಮಸ್ಯೆಗಳ ನಿರ್ಲಕ್ಷ್ಯ, ಮಹಿಳಾ ವಿರೋಧಿ ನೀತಿಗಳು, ದಲಿತ ವಿರೋಧಿ ನಡೆ, ಯುವಕರಿಗೆ ಉದ್ಯೋಗದ ಕೊರತೆ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿನ ವೈಫಲ್ಯ—ಇವೆಲ್ಲವೂ ಕಾಂಗ್ರೆಸ್ ಸರ್ಕಾರದ ಆಡಳಿತದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿವೆ. ರೈತರ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ, ಮಳೆಯ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಆದರೆ ರೈತರ ಕಣ್ಣೀರನ್ನು ಒರೆಸಬೇಕಾದ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲವಾಗಿದೆ. ಇದು ಕೇವಲ ಒಂದು ಯಾತ್ರೆಯಲ್ಲ; ಇದು ರೈತರ ಧ್ವನಿ, ಯುವಕರ ಧ್ವನಿ, ಮಹಿಳೆಯರ ಧ್ವನಿ, ದಲಿತರ ಧ್ವನಿ ಮತ್ತು ಕರ್ನಾಟಕದ ಸಾಮಾನ್ಯ ಜನರ ಧ್ವನಿ! ಜನವಿರೋಧಿ, ರೈತವಿರೋಧಿ ಮತ್ತು ಭ್ರಷ್ಟಾಚಾರದ ಆರೋಪಗಳಿಂದ ಕೂಡಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ನಮ್ಮ ಹೋರಾಟ ನಿರಂತರ. ಬಳ್ಳಾರಿ ಚಲೋ ಮೂಲಕ ಕಾಂಗ್ರೆಸ್ ಸರ್ಕಾರಕ್ಕೆ ಸ್ಪಷ್ಟ ಸಂದೇಶ — ಜನರ ಹಕ್ಕುಗಳಿಗಾಗಿ, ಕರ್ನಾಟಕದ ಅಭಿವೃದ್ಧಿಗಾಗಿ ಮತ್ತು ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಹೋರಾಟ ಸದಾ ಮುಂದುವರಿಯಲಿದೆ! ಬಳ್ಳಾರಿ ಚಲೋ — ಜನರಿಗಾಗಿ, ನ್ಯಾಯಕ್ಕಾಗಿ, ಕರ್ನಾಟಕಕ್ಕಾಗಿ!1
- “ಪರಿಹಾರ ಸಿಕ್ಕರೆ ಸಚಿವರ ಮನೆಯ ತೊಲೆಬಾಗಿಲಿಗೆ ಬಂದು ಸಾಷ್ಟಾಂಗ ನಮಸ್ಕಾರ ಹಾಕುವೆ” — ಸಂತ್ರಸ್ತ ವೃದ್ಧನ ಮಾತು! “ಪರಿಹಾರ ಸಿಕ್ಕರೆ ಸಚಿವರ ಮನೆಯ ತೊಲೆಬಾಗಿಲಿಗೆ ಬಂದು ಸಾಷ್ಟಾಂಗ ನಮಸ್ಕಾರ ಹಾಕುವೆ” — ಸಂತ್ರಸ್ತ ವೃದ್ಧನ ಮಾತು! ಬಾಗಲಕೋಟೆ: ಹುನಗುಂದ ತಾಲೂಕಿನ ಇದ್ದಲಗಿ ಗ್ರಾಮದಲ್ಲಿ ಹಿನ್ನೀರು ಮತ್ತು ಪ್ರವಾಹ ಸಂತ್ರಸ್ತರು ನಡೆಸುತ್ತಿರುವ ಹೋರಾಟದ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ್ ಭೇಟಿ ನೀಡಿದ ವೇಳೆ ಭಾವುಕ ಘಟನೆ ನಡೆಯಿತು. ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ, ವಸತಿ ಮತ್ತು ಪುನರ್ನಿರ್ಮಾಣ ಇಲಾಖೆಯ ಕಚೇರಿಗಳಿಗೆ ಅಲೆದಾಡಿ ಸುಸ್ತಾಗಿರುವುದಾಗಿ ವೃದ್ಧ ಸಂತ್ರಸ್ತ ಸಚಿವರ ಮುಂದೆ ಅಳಲು ತೋಡಿಕೊಂಡರು. “ಪ್ರತಿದಿನ ಹಣ ಖರ್ಚು ಮಾಡಿಕೊಂಡು ಬಾಗಲಕೋಟೆ ಕಚೇರಿಗೆ ಅಲೆದಾಡಬೇಕು. ನಮಗೆ ಸೂಕ್ತ ಪರಿಹಾರ ಕಲ್ಪಿಸಿಕೊಡಿ. ಅಧಿಕಾರಿಗಳಿಗೆ ನಮ್ಮ ಮುಂದೆಯೇ ಸೂಚನೆ ನೀಡಿ” ಎಂದು ಮನವಿ ಮಾಡಿದರು. ವೃದ್ಧನ ಅಳಲು ಆಲಿಸಿದ ಸಚಿವ ವಿಜಯಾನಂದ ಕಾಶಪ್ಪನವರ್, “ನೀವು ಇನ್ನು ಮುಂದೆ ಅಲೆದಾಡುವುದು ಬೇಕಾಗಿಲ್ಲ. ಅಧಿಕಾರಿಗಳೇ ಇಲ್ಲಿಗೆ ಬಂದು ಪರಿಹಾರ ಕಲ್ಪಿಸುತ್ತಾರೆ” ಎಂದು ಭರವಸೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ವೃದ್ಧ ಸಂತ್ರಸ್ತ, “ಆಗ ಹಾಗೇನಾದರೂ ಆದರೆ, ನಿನ್ನ ಮನೆಯ ತೊಲೆಬಾಗಿಲಿಗೆ ಬಂದು ಸಾಷ್ಟಾಂಗ ನಮಸ್ಕಾರ ಹಾಕುವೆ” ಎಂದು ಸಚಿವರಿಗೆ ಭಾವುಕವಾಗಿ ಹೇಳಿದರು. “ಇಲ್ಲವಾದರೆ ಮುಂದೆ ಅಧಿಕಾರಿಗಳನ್ನು ಪ್ರಶ್ನಿಸುತ್ತೇನೆ” ಎಂದು ಹೇಳಿ ವೃದ್ಧ ಸಂತ್ರಸ್ತ ಸುಮ್ಮನಾದರು. ಹುನಗುಂದ ತಾಲೂಕಿನ ಇದ್ದಲಗಿ ಗ್ರಾಮದಲ್ಲಿ ನಡೆದ ಈ ಘಟನೆ ಇದೀಗ ಗಮನ ಸೆಳೆದಿದೆ.1
- ಡಿ ಕೆ ಶಿ ಸರಕಾರ ದಲಿ ಗೃಹ ಮಂತ್ರಿ ಮರಿಖರ್ಗೆ (2)ನೆ ವಿಕೆಟ ಪತನ ಆಗಲು ರೆಡಿಯಾಗಿದೆ K P S C ಹಗರಣದಲ್ಲಿ ದುಡ್ಡು ಹೊಡೆದಿದ್ದಿಯಲ್ಲಾ1