Shuru
Apke Nagar Ki App…
ಕರ್ನಾಟಕ ರಕ್ಷಣಾ ವೇದಿಕೆ. ಕುಂದಾಪುರ ತಾಲೂಕು ಘಟಕದ. ನೂತನ ಅಧ್ಯಕ್ಷರ ಆಯ್ಕೆ. ಕಾರ್ಯಕ್ರಮ. ಜಿಲ್ಲಾಧ್ಯಕ್ಷರಾದ ಅ ರಾ ಪ್ರಭಾಕರ್ ಪೂಜಾರಿ. ನೇತೃತ್ವದಲ್ಲಿ ಸ್ಥಳೀಯ ಕನ್ನಡಪರ ನಾಯಕರ ಸಹಯೋಗದಲ್ಲಿ
ಪುರುಷೋತ್ತಮ್ ಪೂಜಾರಿ
ಕರ್ನಾಟಕ ರಕ್ಷಣಾ ವೇದಿಕೆ. ಕುಂದಾಪುರ ತಾಲೂಕು ಘಟಕದ. ನೂತನ ಅಧ್ಯಕ್ಷರ ಆಯ್ಕೆ. ಕಾರ್ಯಕ್ರಮ. ಜಿಲ್ಲಾಧ್ಯಕ್ಷರಾದ ಅ ರಾ ಪ್ರಭಾಕರ್ ಪೂಜಾರಿ. ನೇತೃತ್ವದಲ್ಲಿ ಸ್ಥಳೀಯ ಕನ್ನಡಪರ ನಾಯಕರ ಸಹಯೋಗದಲ್ಲಿ
More news from ಕರ್ನಾಟಕ and nearby areas
- ಕರ್ನಾಟಕ ರಕ್ಷಣಾ ವೇದಿಕೆ. ಕುಂದಾಪುರ ತಾಲೂಕು ಘಟಕದ. ನೂತನ ಅಧ್ಯಕ್ಷರ ಆಯ್ಕೆ. ಕಾರ್ಯಕ್ರಮ. ಜಿಲ್ಲಾಧ್ಯಕ್ಷರಾದ ಅ ರಾ ಪ್ರಭಾಕರ್ ಪೂಜಾರಿ. ನೇತೃತ್ವದಲ್ಲಿ ಸ್ಥಳೀಯ ಕನ್ನಡಪರ ನಾಯಕರ ಸಹಯೋಗದಲ್ಲಿ1
- ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಸಚಿವ ಹಾಗೂ ಶಿವಮೊಗ್ಗ ಜಿಲ್ಲೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಸೊರಬ ತಾಲೂಕಿನಲ್ಲಿ 97 ಕ್ಕಿಂತಲೂ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಗೆ ವಿಮಾನ ಪ್ರಯಾಣ ಸೌಭಾಗ್ಯ ಕಲ್ಪಿಸಿ, ಜೊತೆಗೆ ಶಿವಮೊಗ್ಗದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು1
- ಕಡೂರು: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಯಗಟಿಪುರ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ ಸೋಮವಾರ ಸಾವಿರಾರು ಜನ ಭಕ್ತರ ನಡುವೆ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಬೆಳಿಗ್ಗೆ ಗಜಾರೋಹಣೋತ್ಸವ, ಶ್ರೀ ಕೃಷ್ಣಗಂದೋತ್ಸವ ನಡೆದ ಸ್ವಾಮಿಯ ಮೂಲ ಸ್ಣಾನದಲ್ಲಿ ವಿಶೇಷ ಅಭಿಷೇಕ, ಪೂಜೆ ನೆರವೇರಿದವು. ನಂತರ ಸ್ವಾಮಿಯ ಉತ್ಸವ ವಿಗ್ರಹವನ್ನು ಮೆರವಣಿಗೆಯಲ್ಲಿ ಕರೆತಂದು ಆಲಂಕೃತ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಸಾಂಪ್ರದಾಯಿಕವಾಗಿ ವಾಡಿಕೆಯಂತೆ ಮುಜರಾಯಿ ಅಧಿಕಾರಿಯಾದ ತಹಶೀಲ್ದಾರ್ ಪೂರ್ಣಿಮಾ ತಾಲ್ಲೂಕಿನ ಜನತೆ ಪರವಾಗಿ ರಥ ಪೂಜೆ ಸಲ್ಲಿಸಿದ ನಂತರ ಸಾಂಕೇತಿಕ ಬಲಿಪೂಜೆ ನಡೆಯಿತು.ನೆರೆದ ಭಕ್ತರು ಉತ್ಸಾಹದಿಂದ ರಥವನ್ನೆಳೆದು ಸಂಭ್ರಮಿಸಿದರು. ತರೀಕೆರೆ ಉಪವಿಭಾಗಾಧಿಕಾರಿ ನಟೇಶ್ ರಥೋತ್ಸವದಲ್ಲಿ ಭಾಗಿಯಾಗಿದ್ದರು. ಪಿ.ಕೋಡಿಹಳ್ಳಿಯ ಮೂಲ್ವೀಕರು ಸಂಪ್ರದಾಯದಂತೆ ರಥೋತ್ಸವದ ನೇತೃತ್ವ ವಹಿಸಿದ್ದರು. ಆಗಮೀಕರಾದ ವೀರೇಶ್ ರಥೋತ್ಸವದ ವಿಧಿ ವಿಧಾನಗಳನ್ನು ನೆರವೇರಿಸಿದರು. ಬಯಲುನಾಡಿನ ಪ್ರಮುಖ ರಥೋತ್ಸವ ಇದಾಗಿದ್ದು, ಹೊರ ರಾಜ್ಯ,ಜಿಲ್ಲೆಗಳಿಂದಲೂ ಭಕ್ತರು ಆಗಮಿಸುತ್ತಾರೆ. ಈ ಭಾಗದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಮಲ್ಲಿಕಾರ್ಜುನ ಸ್ವಾಮಿ ಅತ್ಯಂತ ಆಪ್ತ ದೇವತೆಯಾಗಿದ್ದು, ಆಲಂಕೃತ ಬಂಡಿಗಳಲ್ಲಿ ಜಾತ್ರಾ ಮಹೋತ್ಸವಕ್ಕೆ ಆಗಮಿಸುತ್ತಾರೆ. ರಥೋತ್ಸವ ನಡೆದ ನಂತರ ರಥದ ಸುತ್ತ ಪಾನಕದ ಬಂಡಿಗಳನ್ನು ಓಡಿಸುತ್ತಾರೆ. ಈ ಸಂದರ್ಭ ವಾಹನ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ವಾಹನಗಳ ನಿಲುಗಡೆಗೆ ಯಗಟಿ ಪೊಲೀಸರು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭಧ್ರತೆ ಕಲ್ಪಿಸಿದ್ದರು. ವ್ಯವಸ್ಥಾಪನ ಸಮಿತಿಅಧ್ಯಕ್ಷ ಜಯಣ್ಣ,ಶಾಂತಪ್ಪ,ಲೋಕೇಶಪ್ಪ,ಜಡೆಯಪ್ಪ, ನಾಗರಾಜು,,ಚಂದ್ರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ, ಯಗಟಿಪುರ ಪ್ರಸನ್ನ ಮತ್ತಿತರರು ಇದ್ದರು.3
- ಶಿಗ್ಗಾಂವ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವಂತಹ ಕಡು ಬಡತನದ ಬಡವರ ಅಕ್ರಮ ಮನೆಗಳನ್ನು,ಸಕ್ರಮ ಮನೆಗಳನ್ನಾಗಿ ಪಟ್ಟಾ ನೀಡುವಂತೆ ಶಾಸಕರಿಗೆ ಸಾರ್ವಜನಿಕರು ಮನವಿ ಮಾಡಿದಾಗ ಶಾಸಕ ಯಾಸೀರ್ ಖಾನ್ ಪಠಾಣ ಈ ಹಿಂದೆ ಅಧಿಕಾರದಲ್ಲಿದ್ದವರು ಸುಮಾರ 4 ಸಾವಿರ ಅರ್ಜಿಗಳನ್ನು ತಿರಸ್ಕರಿಸಿದ್ದು ಅದರಲ್ಲಿ ತಾವು ಶಾಸಕರಾಗಿ ಆಯ್ಕೆಯಾದ ನಂತರ 41 ಫಲಾನುಭವಿಗಳಿಗೆ ಪಟ್ಟಾ ನೀಡಲು ಅರ್ಹರಾಗಿರುತ್ತಾರೆ ಎಂದು ಅಧಿಕಾರಿಗಳಿಗೆ ತಾಕಿತ್ತು ಮಾಡಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸರ್ಕಾರದ ಯೋಜನೆಗಳು ಜನಸಾಮಾನ್ಯರಿಗೆ ತಲುಪುವಂತೆ ಅಧಿಕಾರಿಗಳು ಪ್ರಾಮಾಣಿಕ ಕೆಲಸವನ್ನು ನಿರ್ವಹಿಸಬೇಕೆಂದು ಶಾಸಕರು ಅಧಿಕಾರಿ ವರ್ಗಕ್ಕೆ ಸೂಚನೆ ನೀಡಿದರು ಈ ಸಂದರ್ಭದಲ್ಲಿ ಉಭಯ ತಾಲೂಕಿನ ಕಾಂಗ್ರೆಸ್ ಪಕ್ಷದ ಮುಖಂಡರು ಫಲಾನುಭವಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು,1
- ಶಿಗ್ಗಾಂವಿ: ತಂತ್ರಜ್ಞಾನದ ಬೆಳವಣಿಗೆಯ ಜೊತೆಗೆ ನಾವು ನಮ್ಮ ಮಕ್ಕಳನ್ನ ತಯಾರಿ ಮಾಡಬೇಕಿದ್ದು ತಂತ್ರಜ್ಞಾನದ ಜ್ಞಾನವನ್ನ ನಮ್ಮ ಮಕ್ಕಳು ಅಳವಡಿಸಿಕೊಳ್ಳುವ ಅವಶ್ಯಕತೆಯಿದೆ ಎಂದು ಶಿಗ್ಗಾವಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಮಲ್ಲಿಕಾರ್ಜನಯ್ಯಾ ಎಂ ಎಚ್ ಹೇಳಿದರು.ಪಟ್ಟಣದ ಪೀನೀಕ್ಸ್ ಇಂಟರ್ ನ್ಯಾಷನಲ್ ಸಮೂಹ ಶಿಕ್ಷಣ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡ 2025-26 ರ ವಿಜ್ಞಾನದ ಕ್ರೀಯಾತ್ಮಕ ಚಟುವಟಿಕೆಗಳ ಕಾರ್ಯಾಗಾರವನ್ನ (ವಸ್ತು ಪ್ರದರ್ಶನ) ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿರುವ ಪ್ರತಿಭೆ ಮತ್ತು ಕೌಶಲ್ಯಗಳನ್ನ ಪ್ರೇರೇಪಿಸುವ ಮೂಲಕ ಇಂದಿನ ತಂತ್ರಜ್ಞಾನದ ಮಹತ್ವದ ಜ್ಞಾನ ನಮ್ಮ ಮಕ್ಕಳಿಗೆ ಅವಶ್ಯವಾಗಿದ್ದು ಪೀನೀಕ್ಸ್ ಶಾಲೆ ದಾಪುಗಾಲು ಇಟ್ಟಿದೆ. ದೇಶಾಭಿಮಾನ ಎಲ್ಲರಿಗೂ ಮುಖ್ಯ, ವಿಜ್ಞಾನ ನಮ್ಮ ದೈನಂದಿನ ಜೀವನದಲ್ಲಿ ಮುಖ್ಯವಾಗಿದೆ. ನಮ್ಮ ಆರೋಗ್ಯದ ದೃಷ್ಟಿಯಿಂದಲೂ ವಿಜ್ಞಾನ ಬಹಳಷ್ಟು ಸಹಕಾರಿಯಾಗಿದೆ. ನಮ್ಮ ವಿಜ್ಞಾನದ ಜ್ಞಾನ ನಮ್ಮ ಜೀವನಕ್ಕೆ ಪೂರಕವಾಗಿರಬೇಕೆ ಹೊರತು ಮಾರಕವಾಗಿರಬಾರದು. ಇಂತಹ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಪಾಲ್ಗೊಳ್ಳಬೇಕು ಎಂದರು. ಸಂಸ್ಥೆಯ ಕಾರ್ಯದರ್ಶಿ ಡಾ. ರಾಣಿ ತಿರ್ಲಾಪೂರ ಮಾತನಾಡಿ, ವಿಜ್ಞಾನ ವಸ್ತು ಪ್ರದರ್ಶನಗಳು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋ ಮನೋಭಾವ ಸೃಜನಶೀಲತೆ ಮತ್ತು ಕುತೂಹಲವನ್ನು ಬೆಳೆಸುವ ಒಂದು ಪ್ರಮುಖ ಶೈಕ್ಷಣಿಕ ಕಾರ್ಯಕ್ರಮವಾಗಿದೆ. ಇದು ಹೊಸ ಆವಿಷ್ಕಾರಗಳನ್ನು ಪ್ರದರ್ಶಿಸಲು ಪ್ರಾಯೋಗಿಕ ಸಮಸ್ಯೆಗಳನ್ನು ಪರಿಹರಿಸಲು ಮತ್ತು ತಂಡದ ಕೆಲಸದ ಮೌಲ್ಯವನ್ನು ಕಲಿಯಲು ವೇದಿಕೆ ಕಲ್ಪಿಸುತ್ತದೆ. ಶಾಲೆಗಳಲ್ಲಿ ಆಯೋಜಿಸಲಾಗುವ ಈ ಪ್ರದರ್ಶನಗಳು ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ವಿಜ್ಞಾನ ಮತ್ತು ತಂತ್ರಜ್ಞಾನದತ್ತ ಆಸಕ್ತಿ ಮೂಡಿಸುತ್ತವೆ ಎಂದರು. ಪ್ರಾಚಾರ್ಯ ಗಿರಿಧರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ನಡೆದ ಶಾಲೆಯ ವಿದ್ಯಾರ್ಥಿಗಳಿಂದ ರಚನೆಗೊಂಡ ವಿಜ್ಞಾನ ವಸ್ತುಪ್ರದರ್ಶನಗಳು ಎಲ್ಲರ ಗಮನ ಸೆಳೆದವು. ಸಂಸ್ಥೆಯ ಅದ್ಯಕ್ಷ ಡಾ. ಎಂ ಎಂ ತಿರ್ಲಾಪೂರ, ಉಪಾದ್ಯಕ್ಷ ನರಹರಿ ಕಟ್ಟಿ, ಕಾರ್ಯದರ್ಶಿ ಡಾ. ರಾಣಿ ತಿರ್ಲಾಪೂರ, ನಿರ್ದೇಶಕರಾದ ಸಿದ್ದನಗೌಡ ಪಾಟೀಲ, ಸುಮಿತ್ರಾ ಪಾಟೀಲ, ಲಕ್ಷ್ಮೀಬಾಯಿ ಕಟ್ಟಿ, ಸೇರಿದಂತೆ ಶಾಲೆಯ ಶಿಕ್ಷಕರು ಸಿಬ್ಬಂದಿಗಳು ಇದ್ದರು. ವಿದ್ಯಾರ್ಥಿಗಳಾದ ಹರ್ಷಿತಾ ಕಟ್ಟಿ ಸಂಗಡಿಗರು ಪ್ರಾರ್ಥಿಸಿದರು.4
- Post by ಮಂಜು ಪಾಟೀಲ1
- Post by ALTAF,❤️🙏1
- ಶಿಗ್ಗಾವಿ: ಪ್ರತಿಯೊಬ್ಬ ವಿದ್ಯಾರ್ಥಿಯೂ ಕನಿಷ್ಠ ಮಟ್ಟದ ಆತ್ಮರಕ್ಷಣಾ ಕಲೆಯನ್ನು ಕಲಿಯುವುದು ಇಂದಿನ ಕಾಲದ ಅವಶ್ಯಕತೆಯಾಗಿದೆ ಕರಾಟೆ ತರಬೇತಿಯು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಎಂದು ಕಾಂಗ್ರೆಸ್ ಮುಖಂಡ ಮುನ್ನಾ ಪಠಾಣ ಹೇಳಿದರು. ಪಟ್ಟಣದ ಡಾ| ಅಂಬೇಡ್ಕರ ಭವನದಲ್ಲಿ ಲಯನ್ ಮಾರ್ಷಲ್ ಆರ್ಟ್ಸ್ನ ಶಾಟೋಕಾನ್ ಕರಾಟೆ ಡೋ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬ್ಲ್ಯಾಕ್ ಬೆಲ್ಟ್ ಹಾಗೂ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕರಾಟೆ ಕೇವಲ ಹೊಡೆದಾಟದ ಕಲೆಯಲ್ಲ, ಅದೊಂದು ಶಿಸ್ತಿನ ಜೀವನ ಕ್ರಮ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ದೈಹಿಕ ಸದೃಢತೆಯ ಜೊತೆಗೆ ಮಾನಸಿಕ ಸ್ಥಿರತೆ ಬಹಳ ಮುಖ್ಯವಾಗಿರುವುದರಿಂದ ಪಾಲಕರು ಮಕ್ಕಳಿಗೆ ಇಂತಹ ಕಲೆಗಳನ್ನು ಕಲಿಸಲು ಮುಂದಾಗಬೇಕು ಎಂದು ಹೇಳಿದರು. ಗ್ಯಾರಂಟಿ ಸಮೀತಿಯ ಅಧ್ಯಕ್ಷ ಎಸ್.ಎಪ್ ಮಣಕಟ್ಟಿ ಮಾತನಾಡಿ, ಗ್ರಾಮೀಣ ಭಾಗದ ಪ್ರತಿಭಾನ್ವಿತ ಕರಾಟೆ ಪಟುಗಳಿಗೆ ಸೂಕ್ತ ವೇದಿಕೆ ಕಲ್ಪಿಸಿರುವ ಶಾಟೋಕಾನ್ ಕರಾಟೆ ಡೋ ಸಂಸ್ಥೆಯಯ ಕಾರ್ಯ ಸ್ಲಾಘನೀಯವಾಗಿದೆ. ಇಂದು ಬ್ಲ್ಯಾಕ್ ಬೆಲ್ಟ್ ಪಡೆದ ಸಾಧಕರು ಇಷ್ಟಕ್ಕೆ ತೃಪ್ತರಾಗದೆ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ನಾಡಿಗೆ ಕೀರ್ತಿ ತರಬೇಕು. ಪೋಷಕರು ತಮ್ಮ ಮಕ್ಕಳ ಕ್ರೀಡಾಸಕ್ತಿಗೆ ಪ್ರೋತ್ಸಾಹ ನೀಡಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ತರಬೇತಿ ಮುಗಿಸಿದ ಕರಾಟೆ ಪಟುಗಳಿಗೆ ಅಧಿಕೃತವಾಗಿ 'ಬ್ಲ್ಯಾಕ್ ಬೆಲ್ಟ್' ಹಾಗೂ ಸಾಧನಾ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಗುಡ್ಡಪ್ಪ ಜಲದಿ, ಗೌಸಖಾನ ಮುನಸಿ, ಮಂಜು ತಿಮ್ಮಾಪುರ, ಅಣ್ಣಪ್ಪ ಲಮಾಣಿ, ಮುನ್ನಾ ಲಕ್ಷಮೇಶ್ವರ, ಶಂಕರಗೌಡ ಪಾಟೀಲ, ಮಂಜುನಾಥ ಹಿರೂರ, ಬಾಬರ ಬಾವೋಜಿ, ಶಂಬು ನೆರ್ತಿ, ಈರಣ್ಣ ಬಳಿಗಾರ, ಕರಾಟೆ ತರಬೇತುದಾರರಾದ ಹನುಮಂತ ಗದಗ, ಬಸವರಾಜ ಕುಲಕರ್ಣಿ, ಶ್ರೇಯಸ್ ಕಲಾಲ, ಚಂದ್ರು ಕಲ್ಲಕಟ್ಟಿ ಮೊಹನ ಗದಗ, ಅರುಣ ಪ್ರಭಾಳಕರ, ಜಯಂಗೀರ ಬೇಗ್ ಮಿರ್ಜಾ ಸೇರಿದಂತೆ ಇತರರಿದ್ದರು.4