logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಆಗಸ್ಟ್ 15 ರಂದು ನಡೆಯಲಿರುವ ಬೃಹತ್ ರಕ್ತದಾನ ಶಿಬಿರ ಹಿನ್ನಲೆ, ಮಳವಳ್ಳಿ‌ ಪಟ್ಟಣದಲ್ಲಿ ಶಿಬಿರದ ಪ್ರಚಾರ ರಥಕ್ಕೆ ಚಾಲನೆ ಮಳವಳ್ಳಿ : ಬರುವ ಆಗಸ್ಟ್ 15 ರಂದು ಪಟ್ಟಣದಲ್ಲಿ ಟೀಮ್ ಮಳವಳ್ಳಿ ಯುವಕ ಮಿತ್ರರ ಬಳಗದ ವತಿಯಿಂದ ಏರ್ಪಡಿಸಿ ರುವ ಐತಿಹಾಸಿಕ ಬೃಹತ್ ರಕ್ತದಾನ ಶಿಬಿರದ ಪ್ರಚಾರ ರಥಕ್ಕೆ ಚಾಲನೆ ನೀಡಲಾಯಿತು. ಮಂಗಳವಾರ ಬೆಳಿಗ್ಗೆ 11.30 ರ ಸಮಯದಲ್ಲಿ ಮಳವಳ್ಳಿ ಪಟ್ಟಣದ ಕೋಟೆ ಶ್ರೀ ಗಂಗಾಧರೇಶ್ವರಸ್ವಾಮಿ ದೇವಾಲಯದ ಬಳಿ ಪ್ರಚಾರ ರಥಕ್ಕೆ ಪೂಜೆ ಸಲ್ಲಿಸಿದ ನಂತರ ಅನ್ನದಾತ ರೈತರಾದ ಡಾ‌ ಕಪನೀಗೌಡ, ಚಿಕ್ಕಣ್ಣ ಶಿವಕುಮಾರ್ ನಾಗರಾಜು, ಮಹೇಶ್ ಹಾಗೂ ನೀವೃತ್ತ ಸೈನಿಕರಾದ ಸುರೇಶ್, ಪ್ರಕಾಶ್ ಮಾದೇಶ, ಬಿಎಸ್ ಎಫ್ ನ ಕೇಶವಮೂರ್ತಿ, ಅವರುಗಳು ಹಸಿರು ನಿಶಾನೆ ತೋರಿಸುವುದ ರೊಂದಿಗೆ ಚಾಲನೆ ನೀಡಿದರು. ಟೀಮ್ ಮಳವಳ್ಳಿ ಬಳಗದ ಪ್ರಮುಖರಾದ ಪೊಲೀಸ್ ಪ್ರಭು, ಶಿವಪ್ರಸಾದ್ ಹರ್ಷಿತ್ ಅಖಿಲ್, ಕಮಲ್ ಷರೀಫ್ ನಗು ಫೌಂಡೇಷನ್ ಡಾ. ಅರುಣ್ ಕುಮಾರ್ , ವಕೀಲ ರಾದ ಶ್ರೀಕಂಠಸ್ವಾಮಿ ಮತ್ತಿತರ ರು ಈ ವೇಳೆ ಹಾಜರಿದ್ದರು. ಸದರಿ ಪ್ರಚಾರ ವಾಹನ ತಾಲ್ಲೂಕಿನ ಎಲ್ಲಾ 200ಕ್ಕೂ ಗ್ರಾಮಗಳಲ್ಲಿ ಸಂಚರಿಸಿ ಪ್ರಚಾರ ನಡೆಸಲಿದ್ದು ಈ ವಾಹನ ತಮ್ಮ ಗ್ರಾಮಗಳಿಗೆ ಬಂದಾಗ ಗ್ರಾಮದ ಮುಖಂಡರು ಯುವಕರು ಜೊತೆಯಾಗಿ ಪ್ರಚಾರ ನಡೆಸುವುದರ ಜೊತೆಗೆ ಆಗಸ್ಟ್ 15 ರ ರಕ್ತದಾನ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂ ಡು ರಕ್ತದಾನ ಮಾಡುವ ಮೂಲಕ ಶಿಬಿರವನ್ನು ಯಶಸ್ವಿ ಗೊಳಿಸಬೇಕು ಎಂದು ಟೀಮ್ ಮಳವಳ್ಳಿ ಸದಸ್ಯರು ಕೋರಿದ್ದಾರೆ.

12 hrs ago
user_B mallikarjunaswamy
B mallikarjunaswamy
ಮಳವಳ್ಳಿ, ಮಂಡ್ಯ, ಕರ್ನಾಟಕ•
12 hrs ago

ಆಗಸ್ಟ್ 15 ರಂದು ನಡೆಯಲಿರುವ ಬೃಹತ್ ರಕ್ತದಾನ ಶಿಬಿರ ಹಿನ್ನಲೆ, ಮಳವಳ್ಳಿ‌ ಪಟ್ಟಣದಲ್ಲಿ ಶಿಬಿರದ ಪ್ರಚಾರ ರಥಕ್ಕೆ ಚಾಲನೆ ಮಳವಳ್ಳಿ : ಬರುವ ಆಗಸ್ಟ್ 15 ರಂದು ಪಟ್ಟಣದಲ್ಲಿ ಟೀಮ್ ಮಳವಳ್ಳಿ ಯುವಕ ಮಿತ್ರರ ಬಳಗದ ವತಿಯಿಂದ ಏರ್ಪಡಿಸಿ ರುವ ಐತಿಹಾಸಿಕ ಬೃಹತ್ ರಕ್ತದಾನ ಶಿಬಿರದ ಪ್ರಚಾರ ರಥಕ್ಕೆ ಚಾಲನೆ ನೀಡಲಾಯಿತು. ಮಂಗಳವಾರ ಬೆಳಿಗ್ಗೆ 11.30 ರ ಸಮಯದಲ್ಲಿ ಮಳವಳ್ಳಿ ಪಟ್ಟಣದ ಕೋಟೆ ಶ್ರೀ ಗಂಗಾಧರೇಶ್ವರಸ್ವಾಮಿ ದೇವಾಲಯದ ಬಳಿ ಪ್ರಚಾರ ರಥಕ್ಕೆ ಪೂಜೆ ಸಲ್ಲಿಸಿದ ನಂತರ ಅನ್ನದಾತ ರೈತರಾದ ಡಾ‌ ಕಪನೀಗೌಡ, ಚಿಕ್ಕಣ್ಣ ಶಿವಕುಮಾರ್ ನಾಗರಾಜು, ಮಹೇಶ್ ಹಾಗೂ ನೀವೃತ್ತ ಸೈನಿಕರಾದ ಸುರೇಶ್, ಪ್ರಕಾಶ್ ಮಾದೇಶ, ಬಿಎಸ್ ಎಫ್ ನ ಕೇಶವಮೂರ್ತಿ, ಅವರುಗಳು ಹಸಿರು ನಿಶಾನೆ ತೋರಿಸುವುದ ರೊಂದಿಗೆ ಚಾಲನೆ ನೀಡಿದರು. ಟೀಮ್ ಮಳವಳ್ಳಿ ಬಳಗದ ಪ್ರಮುಖರಾದ ಪೊಲೀಸ್ ಪ್ರಭು, ಶಿವಪ್ರಸಾದ್ ಹರ್ಷಿತ್ ಅಖಿಲ್, ಕಮಲ್ ಷರೀಫ್ ನಗು ಫೌಂಡೇಷನ್ ಡಾ. ಅರುಣ್ ಕುಮಾರ್ , ವಕೀಲ ರಾದ ಶ್ರೀಕಂಠಸ್ವಾಮಿ ಮತ್ತಿತರ ರು ಈ ವೇಳೆ ಹಾಜರಿದ್ದರು. ಸದರಿ ಪ್ರಚಾರ ವಾಹನ ತಾಲ್ಲೂಕಿನ ಎಲ್ಲಾ 200ಕ್ಕೂ ಗ್ರಾಮಗಳಲ್ಲಿ ಸಂಚರಿಸಿ ಪ್ರಚಾರ ನಡೆಸಲಿದ್ದು ಈ ವಾಹನ ತಮ್ಮ ಗ್ರಾಮಗಳಿಗೆ ಬಂದಾಗ ಗ್ರಾಮದ ಮುಖಂಡರು ಯುವಕರು ಜೊತೆಯಾಗಿ ಪ್ರಚಾರ ನಡೆಸುವುದರ ಜೊತೆಗೆ ಆಗಸ್ಟ್ 15 ರ ರಕ್ತದಾನ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂ ಡು ರಕ್ತದಾನ ಮಾಡುವ ಮೂಲಕ ಶಿಬಿರವನ್ನು ಯಶಸ್ವಿ ಗೊಳಿಸಬೇಕು ಎಂದು ಟೀಮ್ ಮಳವಳ್ಳಿ ಸದಸ್ಯರು ಕೋರಿದ್ದಾರೆ.

More news from ಕರ್ನಾಟಕ and nearby areas
  • ಕೋಡಿಪುರ ಗ್ರಾಮದಲ್ಲಿ ಕೇಂದ್ರ ರೇಷ್ಮೆ ಮಂಡಳಿ ಯವರ ಸಹಯೋಗ ದೊಂದಿಗೆ ಮೇರಾ ರೇಷಮ್ ಮೇರಾ ಅಭಿಯಾನ ಮತ್ತು ವಿಶೇಷ ಜಾಗೃತಿ ಅಭಿಯಾನ ಹಾಗೂ ಪ್ರಾತ್ಯಕ್ಷತೆ ರೈತರು ವ್ಯವಸಾಯಕ್ಕೆ ಹನಿ ನೀರಾವರಿಯನ್ನು ಬಳಸಿಕೊಳ್ಳುವುದು ಉತ್ತಮ- ಸುಂದರ್ ರಾಜ್. ಹಲಗೂರು:- ಇತ್ತೀಚಿನ ದಿನಗಳಲ್ಲಿ ಮಳೆಯ ಕೊರತೆಯಿಂದಾಗಿ ರೈತರು ವ್ಯವಸಾಯ ಮಾಡುವುದಕ್ಕೆ ಕಷ್ಟ ಆಗಿರುವುದರಿಂದ ನೀರಿನ ಸರಿಯಾದ ಬಳಕೆಗೆ ನಿಮ್ಮ ಜಮೀನಿನಲ್ಲಿ ವ್ಯವಸಾಯಕ್ಕಾಗಿಹನಿ ನೀರಾವರಿಯನ್ನು ಬಳಸಿಕೊಳ್ಳುವುದು ಉತ್ತಮ ವಾಗಿರುತ್ತದೆ, ಎಂದು ಮಂಡ್ಯಜಿಲ್ಲಾ ಪಂಚಾಯತ್ ರೇಷ್ಮೆ ಉಪ ನಿರ್ದೇಶಕರಾದ ಡಾ.ಸುಂದರ್ ರಾಜ್ ರೈತರಿಗೆ ಸಲಹೆ ನೀಡಿದರು. ತಾಂತ್ರಿಕ ಸೇವಾ ಕೇಂದ್ರ ಡಿ. ಹಲಸಹಳ್ಳಿ ವ್ಯಾಪ್ತಿಯ ಕೋಡಿಪುರ ಗ್ರಾಮದಲ್ಲಿ ಕೇಂದ್ರ ರೇಷ್ಮೆ ಮಂಡಳಿ ಯವರ ಸಹಯೋಗ ದೊಂದಿಗೆ ಮೇರಾ ರೇಷಮ್ ಮೇರಾ ಅಭಿಯಾನ ಮತ್ತು ವಿಶೇಷ ಜಾಗೃತಿ ಅಭಿಯಾನ ಹಾಗೂ ಪ್ರಾತ್ಯಕ್ಷತೆ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ, ಇಲಾಖಾ ಕಾರ್ಯಕ್ರಮಗಳ ಬಗ್ಗೆ ಹಾಗೂ ಮುಂದಿನ ಆಯೋಜನೆಗಳ ಬಗ್ಗೆ ಮತ್ತು ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿ ಎಲ್ಲ ರೀತಿಯಾದಂತಹ ಪರಿಹಾರವನ್ನು ನೀಡುವುದಲ್ಲದೆ ಸರ್ಕಾರಗಳಿಂದ ಹಾಗೂ ಇಲಾಖೆಯಿಂದ ಬರುವಂತಹ ಎಲ್ಲಾ ಅನುದಾನಗಳು ಸರಿಯಾದ ರೀತಿಯಲ್ಲಿ ಸಮಯಕ್ಕೆ ಸರಿಯಾಗಿ ಕೂಡಿಸಿ ಕೊಡುವುದಾಗಿ ರೈತರಿಗೆ ಭರವಸೆಯನ್ನು ನೀಡಿದರು. ಇತ್ತೀಚಿನ ತಂತ್ರಜ್ಞಾನಗಳನ್ನು ಬಳಸಿಕೊಂಡಲ್ಲಿ ಉಂಟಾಗುತ್ತಿರುವ ಹಲವಾರು ತೊಂದರೆಗಳಿಗೆ ಪರಿಹಾರವನ್ನು ನೀಡಬಹುದಾಗಿದೆ ಎಂದು ತಿಳಿಸಿ ಮತ್ತು ರೈತರ ಹಲವಾರು ಪ್ರಶ್ನೆಗಳಿಗೆ ರೈತರೊಂದಿಗೆ ಚರ್ಚಿಸಿ ಉತ್ತರವನ್ನು ನೀಡಿದರು. ಕೇಂದ್ರ ರೇಷ್ಮೆ ಮಂಡಳಿ ಹಾಗೂ ರೇಷ್ಮೆ ವಿಸ್ತರಣಾ ಉಪ ವಿಭಾಗ ಮದ್ದೂರಿನ ವಿಜ್ಞಾನಿ ಡಾ ಶಿವಕುಮಾರ್ ಮಾತನಾಡುತ್ತಾ, ರೈತರು ಬಳಸುತ್ತಿರುವ ರಾಸಾಯನಿಕ ಔಷಧಿಗಳ ಬಳಕೆ ಹಾಗೂ ಸರಿ ಪ್ರಮಾಣದ ಔಷಧಿ ಸಿಂಪಡಣೆ ಬಗ್ಗೆ ಮತ್ತು ರೈತರು ಮಾಡುತ್ತಿರುವ ತಪ್ಪುಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿ, ದ್ವಿತಳಿ ರೇಷ್ಮೆ ಬೆಳೆಯನ್ನು ಬೆಳೆಯುವುದರಿಂದ ನಮ್ಮ ಆರ್ಥಿಕ ಲಾಭವು ಹೆಚ್ಚಾಗುವುದಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೊರದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವ ರೇಷ್ಮೆಯನ್ನು ನಿಲ್ಲಿಸಿ, ನಮ್ಮಲ್ಲೇ ಬೆಳೆದ ದ್ವಿತಳಿ ರೇಷ್ಮೆ ಬೆಳೆಗೆ ಅತ್ಯುನ್ನತ ಮಟ್ಟದಲ್ಲಿ ಬೇಡಿಕೆ ಹೆಚ್ಚಾಗುತ್ತದೆ. ಈಗಿನ ದಿನಗಳಲ್ಲಿ ಹೊಸ ಹೊಸ ತಾಂತ್ರಿಕತೆಗಳಲ್ಲಿ ಟ್ರೆಂಚಿಂಗ್, ಮಲ್ಚಿಂಗ್ ಮಾಡುವುದು ಹಾಗೂ ಹಿಪ್ಪು ನೇರಳೆ ತೋಟದಲ್ಲಿ ಹನಿ ನೀರಾವರಿಯನ್ನು ಅಳವಡಿಸಿಕೊಳ್ಳುವುದು ಹಾಗೂ ವೈಜ್ಞಾನಿಕವಾಗಿ ಹೊಸ ತಾಂತ್ರಿಕತೆಗೆ ಬದಲಾಗುವುದು ತುಂಬಾ ಮುಖ್ಯವಾಗಿರುತ್ತದೆ. ಹಾಗೂ ಸಿ ಎಸ್ ಆರ್ ಅಂಡ್ ಟಿ ಐ ಮೈಸೂರು ರವರ ಹೊಸ ಅನ್ವೇಷಣೆಯ ಹಿಪ್ಪು ನೇರಳೆ ತಳಿಯಾದಂತಹ ಎಜಿಬಿ8 ಎಂಬುದು ಅತಿ ಹೆಚ್ಚು ಜನಪ್ರಿಯವಾಗಿ ಹಾಗೂ ಬೇರು ಕೊಳೆ ರೋಗಕ್ಕೆ ಪರ್ಯಾಯವಾಗಿ ಬೆಳೆಯಬಹುದಾಗಿದೆ, ಈ ತಳಿಯಲ್ಲಿ ನೀರನ್ನು ಅತಿ ಹೆಚ್ಚು ಗಂಟೆಗಳ ಕಾಲ ಹಿಡಿದಿಟ್ಟುಕೊಂಡು ಹಿಪ್ಪು ನೇರಳೆ ಸೊಪ್ಪು ಬೇಗ ಬಾಡಿ ಹೋಗದ ರೀತಿಯಲ್ಲಿ ಇರುವುದರಿಂದ ಹಾಗೂ ಅತಿ ಹೆಚ್ಚು ಇಳುವರಿಯನ್ನು ನೀಡುತ್ತಿರುವುದರಿಂದ ಈ ಒಂದು ಹಿಪ್ಪು ನೇರಳೆ ತಳಿಯು ಮುಂದಿನ ದಿನಗಳಲ್ಲಿ ಅತಿ ಹೆಚ್ಚು ಜನಪ್ರಿಯತೆಯನ್ನು ಹೊಂದುವ ನಿರೀಕ್ಷೆ ಇದೆ ಎಂದು ತಿಳಿಸಿದರು. ಮತ್ತು ಔಷಧಿ ಸಿಂಪಡಣೆಯ ಬಗ್ಗೆ ಇಲಾಖೆಯಿಂದ ಶಿಫಾರಸ್ಸು ಮಾಡಿರುವಂತಹ ಔಷಧಿಗಳನ್ನು ಮಾತ್ರ ಬಳಸುವುದು ಸೂಕ್ತ ಎಂದು ಹೇಳಿ ಹಿಪ್ಪು ನೇರಳೆ ತೋಟದಲ್ಲಿ ಔಷಧಿ ಸಿಂಪಡಣೆಯ ಬಗ್ಗೆ ರೈತರು ಮಾಡುತ್ತಿರುವ ತಪ್ಪುಗಳ ಬಗ್ಗೆ ವಿವರವಾಗಿ ಮನವರಿಕೆ ಮಾಡಿಕೊಟ್ಟು ತೋಟಕ್ಕೆ ಔಷಧಿ ಸಿಂಪಡಣೆಯ ಪ್ರಾತ್ಯಕ್ಷತೆಯ ಮುಖಾಂತರ ರೈತರಿಗೆ ಮನದಟ್ಟು ಮಾಡಿಸಿದರು. ಕೆ ಆರ್ ಪೇಟೆಯ ರೇಷ್ಮೆ ತರಬೇತಿ ಸಂಸ್ಥೆ ಪ್ರಾಚಾರ್ಯರಾದಂತಹ ಡಿ.ಸೋಮಣ್ಣ ಮಾತನಾಡಿ,ರಾಸಾಯನಿಕ ಗೊಬ್ಬರಗಳನ್ನು ಮಿತವಾಗಿ ಬಳಸಿ ಸಾವಯವ ಗೊಬ್ಬರ ವನ್ನು ಬಳಸಿ ಹಾಗೂ ಹಿಪ್ಪು ನೇರಳೆ ತೋಟದಲ್ಲಿ ಸರಿಯಾದ ರೀತಿಯ ಗಾಳಿ ಸಂಚಾರ ಹಾಗೂ ಬೆಳಕು ಅತ್ಯಾವಶ್ಯಕ. ಹಾಗೇನೇ ರೇಷ್ಮೆ ಹುಳು ಸಾಕಾಣಿಕೆ ಮನೆಯಲ್ಲಿ ಶೇಖರಣೆಯಾಗುವ ಹಾಸಿಗೆ ಕಸದಿಂದ ಉತ್ಕೃಷ್ಟವಾದ ಗೊಬ್ಬರವನ್ನು ತಯಾರಿಸಿ ಮಣ್ಣಿಗೆ ಸೇರಿಸುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುವುದಲ್ಲದೆ ರೇಷ್ಮೆ ಗೂಡಿನ ಇಳುವರಿಯು ಕೂಡ ಹೆಚ್ಚಾಗಿ ರೈತರಿಗೆ ಆರ್ಥಿಕವಾಗಿ ಲಾಭವನ್ನು ನೀಡುತ್ತದೆ. ಮಣ್ಣಿನ ಫಲವತ್ತತೆಯಿಂದ ನಮ್ಮ ಮುಂದಿನ ಪೀಳಿಗೆಗೆ ಈ ಒಂದು ಮಣ್ಣನ್ನು ವರದಾನವಾಗಿ ನಾವು ನೀಡಬೇಕಾಗಿದೆ. ಮಣ್ಣಿನಲ್ಲಿ ಪೋಷಕಾಂಶಗಳ ಕೊರತೆಯಿಂದಾಗಿ ಹಲವಾರು ರೀತಿಯ ರೇಷ್ಮೆ ಹಾಗೂ ಇನ್ನಿತರ ಕೃಷಿಯಲ್ಲಿ ಬೇರು ಕೊಳೆ ರೋಗ ಹಾಗೂ ಬೇರು ಗಂಟು ರೋಗ ಅದಲ್ಲದೆ ಹಿಪ್ಪು ನೇರಳೆ ಸೊಪ್ಪಿನ ಇಳುವರಿ ಕೂಡ ಕಡಿಮೆಯಾಗಿ ಹಲವಾರು ರೀತಿಯಾದಂತಹ ರೋಗಗಳಿಗೆ ಹಾಗೂ ಕೀಟ ಬಾದೆಗಳಿಗೆ ತುತ್ತಾಗುತ್ತದೆ ಎಂದು ರೇಷ್ಮೆ ಬೆಳೆಗಾರರಿಗೆ ಮಣ್ಣಿನ ಫಲವತ್ತತೆಯ ಬಗ್ಗೆ ಮನದಟ್ಟು ಮಾಡಿದರು. ನಂತರದಲ್ಲಿ ಕಾರ್ಯಕ್ರಮದಲ್ಲಿ ಮಳವಳ್ಳಿ ರೇಷ್ಮೆ ಸಹಾಯಕ ನಿರ್ದೇಶಕ ಎ. ಬಿ. ರವಿ, ರೇಷ್ಮೆ ವಿಸ್ತರಣಾಧಿಕಾರಿ ಎಸ್.ವಿ. ನರಸಿಂಹಮೂರ್ತಿ,ಆಶಾ, ಹೆಚ್.ಜಿ,ಕುಮಾರಿ , ಟಿ.ಆರ್. ಪೂಜಾ, ರೇಷ್ಮೆ ನಿರೀಕ್ಷಕ ಬಿ.ಆರ್ ಕಿರಣ್, ಎಂ.ನವೀನ್, ಉದಯಶಂಕರ್ ಹಾಗೂ ಕೋಡಿಪುರ ಗ್ರಾಮದ ಎಲ್ಲಾ ರೇಷ್ಮೆ ಬೆಳೆಗಾರರು ಇದ್ದರು. ಕೋಡಿಪುರ ಗ್ರಾಮದಲ್ಲಿ ರೇಷ್ಮೆ ಕೃಷಿಯಲ್ಲಿ ತಾಂತ್ರಿಕತೆ ಮತ್ತು ತರಬೇತಿ ಹಾಗೂ ಪ್ರಾತ್ಯಕ್ಷತೆ ಕಾರ್ಯಕ್ರಮದಲ್ಲಿ ರೈತರು ಮತ್ತು ಅಧಿಕಾರಿಗಳು ಇದ್ದಾರೆ.
    1
    ಕೋಡಿಪುರ ಗ್ರಾಮದಲ್ಲಿ ಕೇಂದ್ರ ರೇಷ್ಮೆ ಮಂಡಳಿ ಯವರ ಸಹಯೋಗ ದೊಂದಿಗೆ ಮೇರಾ ರೇಷಮ್ ಮೇರಾ ಅಭಿಯಾನ ಮತ್ತು ವಿಶೇಷ ಜಾಗೃತಿ ಅಭಿಯಾನ ಹಾಗೂ ಪ್ರಾತ್ಯಕ್ಷತೆ   
ರೈತರು ವ್ಯವಸಾಯಕ್ಕೆ ಹನಿ ನೀರಾವರಿಯನ್ನು ಬಳಸಿಕೊಳ್ಳುವುದು ಉತ್ತಮ- ಸುಂದರ್ ರಾಜ್.
ಹಲಗೂರು:- ಇತ್ತೀಚಿನ ದಿನಗಳಲ್ಲಿ ಮಳೆಯ ಕೊರತೆಯಿಂದಾಗಿ ರೈತರು ವ್ಯವಸಾಯ ಮಾಡುವುದಕ್ಕೆ ಕಷ್ಟ ಆಗಿರುವುದರಿಂದ
ನೀರಿನ ಸರಿಯಾದ ಬಳಕೆಗೆ  ನಿಮ್ಮ ಜಮೀನಿನಲ್ಲಿ ವ್ಯವಸಾಯಕ್ಕಾಗಿಹನಿ ನೀರಾವರಿಯನ್ನು ಬಳಸಿಕೊಳ್ಳುವುದು ಉತ್ತಮ ವಾಗಿರುತ್ತದೆ, ಎಂದು ಮಂಡ್ಯಜಿಲ್ಲಾ ಪಂಚಾಯತ್  ರೇಷ್ಮೆ ಉಪ ನಿರ್ದೇಶಕರಾದ ಡಾ.ಸುಂದರ್ ರಾಜ್ ರೈತರಿಗೆ ಸಲಹೆ ನೀಡಿದರು. ತಾಂತ್ರಿಕ ಸೇವಾ ಕೇಂದ್ರ ಡಿ. ಹಲಸಹಳ್ಳಿ ವ್ಯಾಪ್ತಿಯ ಕೋಡಿಪುರ ಗ್ರಾಮದಲ್ಲಿ ಕೇಂದ್ರ ರೇಷ್ಮೆ ಮಂಡಳಿ ಯವರ ಸಹಯೋಗ ದೊಂದಿಗೆ ಮೇರಾ ರೇಷಮ್ ಮೇರಾ ಅಭಿಯಾನ ಮತ್ತು ವಿಶೇಷ ಜಾಗೃತಿ ಅಭಿಯಾನ ಹಾಗೂ ಪ್ರಾತ್ಯಕ್ಷತೆ   ಕಾರ್ಯಕ್ರಮದಲ್ಲಿ
ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ,
ಇಲಾಖಾ ಕಾರ್ಯಕ್ರಮಗಳ ಬಗ್ಗೆ ಹಾಗೂ ಮುಂದಿನ ಆಯೋಜನೆಗಳ  ಬಗ್ಗೆ ಮತ್ತು ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿ ಎಲ್ಲ ರೀತಿಯಾದಂತಹ ಪರಿಹಾರವನ್ನು ನೀಡುವುದಲ್ಲದೆ ಸರ್ಕಾರಗಳಿಂದ ಹಾಗೂ ಇಲಾಖೆಯಿಂದ ಬರುವಂತಹ ಎಲ್ಲಾ ಅನುದಾನಗಳು ಸರಿಯಾದ ರೀತಿಯಲ್ಲಿ ಸಮಯಕ್ಕೆ ಸರಿಯಾಗಿ ಕೂಡಿಸಿ ಕೊಡುವುದಾಗಿ ರೈತರಿಗೆ ಭರವಸೆಯನ್ನು ನೀಡಿದರು.  ಇತ್ತೀಚಿನ ತಂತ್ರಜ್ಞಾನಗಳನ್ನು ಬಳಸಿಕೊಂಡಲ್ಲಿ ಉಂಟಾಗುತ್ತಿರುವ ಹಲವಾರು ತೊಂದರೆಗಳಿಗೆ ಪರಿಹಾರವನ್ನು ನೀಡಬಹುದಾಗಿದೆ ಎಂದು ತಿಳಿಸಿ ಮತ್ತು ರೈತರ ಹಲವಾರು ಪ್ರಶ್ನೆಗಳಿಗೆ ರೈತರೊಂದಿಗೆ ಚರ್ಚಿಸಿ ಉತ್ತರವನ್ನು ನೀಡಿದರು.
ಕೇಂದ್ರ ರೇಷ್ಮೆ ಮಂಡಳಿ ಹಾಗೂ ರೇಷ್ಮೆ ವಿಸ್ತರಣಾ ಉಪ ವಿಭಾಗ ಮದ್ದೂರಿನ ವಿಜ್ಞಾನಿ ಡಾ ಶಿವಕುಮಾರ್
ಮಾತನಾಡುತ್ತಾ,  ರೈತರು ಬಳಸುತ್ತಿರುವ ರಾಸಾಯನಿಕ ಔಷಧಿಗಳ ಬಳಕೆ ಹಾಗೂ ಸರಿ ಪ್ರಮಾಣದ ಔಷಧಿ ಸಿಂಪಡಣೆ ಬಗ್ಗೆ ಮತ್ತು ರೈತರು ಮಾಡುತ್ತಿರುವ ತಪ್ಪುಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿ,  ದ್ವಿತಳಿ ರೇಷ್ಮೆ ಬೆಳೆಯನ್ನು ಬೆಳೆಯುವುದರಿಂದ ನಮ್ಮ ಆರ್ಥಿಕ ಲಾಭವು ಹೆಚ್ಚಾಗುವುದಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೊರದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವ ರೇಷ್ಮೆಯನ್ನು ನಿಲ್ಲಿಸಿ, ನಮ್ಮಲ್ಲೇ ಬೆಳೆದ ದ್ವಿತಳಿ ರೇಷ್ಮೆ ಬೆಳೆಗೆ ಅತ್ಯುನ್ನತ ಮಟ್ಟದಲ್ಲಿ ಬೇಡಿಕೆ ಹೆಚ್ಚಾಗುತ್ತದೆ.  ಈಗಿನ ದಿನಗಳಲ್ಲಿ ಹೊಸ ಹೊಸ ತಾಂತ್ರಿಕತೆಗಳಲ್ಲಿ ಟ್ರೆಂಚಿಂಗ್, ಮಲ್ಚಿಂಗ್ ಮಾಡುವುದು ಹಾಗೂ ಹಿಪ್ಪು ನೇರಳೆ ತೋಟದಲ್ಲಿ ಹನಿ ನೀರಾವರಿಯನ್ನು ಅಳವಡಿಸಿಕೊಳ್ಳುವುದು ಹಾಗೂ ವೈಜ್ಞಾನಿಕವಾಗಿ ಹೊಸ ತಾಂತ್ರಿಕತೆಗೆ ಬದಲಾಗುವುದು ತುಂಬಾ ಮುಖ್ಯವಾಗಿರುತ್ತದೆ. 
ಹಾಗೂ ಸಿ ಎಸ್ ಆರ್ ಅಂಡ್ ಟಿ ಐ ಮೈಸೂರು ರವರ ಹೊಸ ಅನ್ವೇಷಣೆಯ ಹಿಪ್ಪು ನೇರಳೆ ತಳಿಯಾದಂತಹ ಎಜಿಬಿ8 ಎಂಬುದು ಅತಿ ಹೆಚ್ಚು ಜನಪ್ರಿಯವಾಗಿ ಹಾಗೂ ಬೇರು ಕೊಳೆ ರೋಗಕ್ಕೆ ಪರ್ಯಾಯವಾಗಿ ಬೆಳೆಯಬಹುದಾಗಿದೆ, ಈ ತಳಿಯಲ್ಲಿ ನೀರನ್ನು ಅತಿ ಹೆಚ್ಚು ಗಂಟೆಗಳ ಕಾಲ ಹಿಡಿದಿಟ್ಟುಕೊಂಡು ಹಿಪ್ಪು ನೇರಳೆ ಸೊಪ್ಪು ಬೇಗ ಬಾಡಿ ಹೋಗದ ರೀತಿಯಲ್ಲಿ ಇರುವುದರಿಂದ ಹಾಗೂ ಅತಿ ಹೆಚ್ಚು ಇಳುವರಿಯನ್ನು ನೀಡುತ್ತಿರುವುದರಿಂದ ಈ ಒಂದು ಹಿಪ್ಪು ನೇರಳೆ ತಳಿಯು ಮುಂದಿನ ದಿನಗಳಲ್ಲಿ ಅತಿ ಹೆಚ್ಚು ಜನಪ್ರಿಯತೆಯನ್ನು ಹೊಂದುವ ನಿರೀಕ್ಷೆ ಇದೆ ಎಂದು ತಿಳಿಸಿದರು. ಮತ್ತು ಔಷಧಿ ಸಿಂಪಡಣೆಯ ಬಗ್ಗೆ ಇಲಾಖೆಯಿಂದ ಶಿಫಾರಸ್ಸು ಮಾಡಿರುವಂತಹ ಔಷಧಿಗಳನ್ನು ಮಾತ್ರ ಬಳಸುವುದು ಸೂಕ್ತ ಎಂದು ಹೇಳಿ  ಹಿಪ್ಪು ನೇರಳೆ ತೋಟದಲ್ಲಿ ಔಷಧಿ ಸಿಂಪಡಣೆಯ ಬಗ್ಗೆ ರೈತರು ಮಾಡುತ್ತಿರುವ ತಪ್ಪುಗಳ ಬಗ್ಗೆ ವಿವರವಾಗಿ  ಮನವರಿಕೆ ಮಾಡಿಕೊಟ್ಟು ತೋಟಕ್ಕೆ ಔಷಧಿ ಸಿಂಪಡಣೆಯ ಪ್ರಾತ್ಯಕ್ಷತೆಯ ಮುಖಾಂತರ ರೈತರಿಗೆ ಮನದಟ್ಟು ಮಾಡಿಸಿದರು.
ಕೆ ಆರ್ ಪೇಟೆಯ ರೇಷ್ಮೆ ತರಬೇತಿ ಸಂಸ್ಥೆ ಪ್ರಾಚಾರ್ಯರಾದಂತಹ  ಡಿ.ಸೋಮಣ್ಣ  
ಮಾತನಾಡಿ,ರಾಸಾಯನಿಕ ಗೊಬ್ಬರಗಳನ್ನು ಮಿತವಾಗಿ ಬಳಸಿ ಸಾವಯವ ಗೊಬ್ಬರ ವನ್ನು ಬಳಸಿ ಹಾಗೂ ಹಿಪ್ಪು ನೇರಳೆ ತೋಟದಲ್ಲಿ ಸರಿಯಾದ ರೀತಿಯ ಗಾಳಿ ಸಂಚಾರ ಹಾಗೂ ಬೆಳಕು ಅತ್ಯಾವಶ್ಯಕ. ಹಾಗೇನೇ ರೇಷ್ಮೆ ಹುಳು ಸಾಕಾಣಿಕೆ ಮನೆಯಲ್ಲಿ ಶೇಖರಣೆಯಾಗುವ ಹಾಸಿಗೆ ಕಸದಿಂದ ಉತ್ಕೃಷ್ಟವಾದ ಗೊಬ್ಬರವನ್ನು ತಯಾರಿಸಿ ಮಣ್ಣಿಗೆ ಸೇರಿಸುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುವುದಲ್ಲದೆ ರೇಷ್ಮೆ ಗೂಡಿನ ಇಳುವರಿಯು ಕೂಡ ಹೆಚ್ಚಾಗಿ ರೈತರಿಗೆ ಆರ್ಥಿಕವಾಗಿ ಲಾಭವನ್ನು ನೀಡುತ್ತದೆ.  ಮಣ್ಣಿನ ಫಲವತ್ತತೆಯಿಂದ ನಮ್ಮ ಮುಂದಿನ ಪೀಳಿಗೆಗೆ ಈ ಒಂದು ಮಣ್ಣನ್ನು ವರದಾನವಾಗಿ ನಾವು ನೀಡಬೇಕಾಗಿದೆ.   ಮಣ್ಣಿನಲ್ಲಿ ಪೋಷಕಾಂಶಗಳ ಕೊರತೆಯಿಂದಾಗಿ ಹಲವಾರು ರೀತಿಯ ರೇಷ್ಮೆ ಹಾಗೂ ಇನ್ನಿತರ ಕೃಷಿಯಲ್ಲಿ ಬೇರು ಕೊಳೆ ರೋಗ ಹಾಗೂ ಬೇರು ಗಂಟು ರೋಗ ಅದಲ್ಲದೆ ಹಿಪ್ಪು ನೇರಳೆ ಸೊಪ್ಪಿನ ಇಳುವರಿ ಕೂಡ ಕಡಿಮೆಯಾಗಿ ಹಲವಾರು ರೀತಿಯಾದಂತಹ ರೋಗಗಳಿಗೆ ಹಾಗೂ ಕೀಟ ಬಾದೆಗಳಿಗೆ ತುತ್ತಾಗುತ್ತದೆ ಎಂದು ರೇಷ್ಮೆ ಬೆಳೆಗಾರರಿಗೆ ಮಣ್ಣಿನ ಫಲವತ್ತತೆಯ ಬಗ್ಗೆ ಮನದಟ್ಟು ಮಾಡಿದರು. ನಂತರದಲ್ಲಿ
ಕಾರ್ಯಕ್ರಮದಲ್ಲಿ  ಮಳವಳ್ಳಿ
ರೇಷ್ಮೆ ಸಹಾಯಕ ನಿರ್ದೇಶಕ 
ಎ. ಬಿ. ರವಿ,  ರೇಷ್ಮೆ ವಿಸ್ತರಣಾಧಿಕಾರಿ
ಎಸ್.ವಿ. ನರಸಿಂಹಮೂರ್ತಿ,ಆಶಾ, ಹೆಚ್.ಜಿ,ಕುಮಾರಿ ,
ಟಿ.ಆರ್. ಪೂಜಾ,  
ರೇಷ್ಮೆ ನಿರೀಕ್ಷಕ ಬಿ.ಆರ್ ಕಿರಣ್, ಎಂ.ನವೀನ್, ಉದಯಶಂಕರ್  ಹಾಗೂ ಕೋಡಿಪುರ ಗ್ರಾಮದ ಎಲ್ಲಾ ರೇಷ್ಮೆ ಬೆಳೆಗಾರರು ಇದ್ದರು.
ಕೋಡಿಪುರ ಗ್ರಾಮದಲ್ಲಿ
ರೇಷ್ಮೆ ಕೃಷಿಯಲ್ಲಿ ತಾಂತ್ರಿಕತೆ ಮತ್ತು ತರಬೇತಿ ಹಾಗೂ ಪ್ರಾತ್ಯಕ್ಷತೆ ಕಾರ್ಯಕ್ರಮದಲ್ಲಿ ರೈತರು ಮತ್ತು ಅಧಿಕಾರಿಗಳು ಇದ್ದಾರೆ.
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    Agriculture cooperative ಮಳವಳ್ಳಿ, ಮಂಡ್ಯ, ಕರ್ನಾಟಕ•
    3 hrs ago
  • ಆಗಸ್ಟ್ 15 ರಂದು ನಡೆಯಲಿರುವ ಬೃಹತ್ ರಕ್ತದಾನ ಶಿಬಿರ ಹಿನ್ನಲೆ, ಮಳವಳ್ಳಿ‌ ಪಟ್ಟಣದಲ್ಲಿ ಶಿಬಿರದ ಪ್ರಚಾರ ರಥಕ್ಕೆ ಚಾಲನೆ ಮಳವಳ್ಳಿ : ಬರುವ ಆಗಸ್ಟ್ 15 ರಂದು ಪಟ್ಟಣದಲ್ಲಿ ಟೀಮ್ ಮಳವಳ್ಳಿ ಯುವಕ ಮಿತ್ರರ ಬಳಗದ ವತಿಯಿಂದ ಏರ್ಪಡಿಸಿ ರುವ ಐತಿಹಾಸಿಕ ಬೃಹತ್ ರಕ್ತದಾನ ಶಿಬಿರದ ಪ್ರಚಾರ ರಥಕ್ಕೆ ಚಾಲನೆ ನೀಡಲಾಯಿತು. ಮಂಗಳವಾರ ಬೆಳಿಗ್ಗೆ 11.30 ರ ಸಮಯದಲ್ಲಿ ಮಳವಳ್ಳಿ ಪಟ್ಟಣದ ಕೋಟೆ ಶ್ರೀ ಗಂಗಾಧರೇಶ್ವರಸ್ವಾಮಿ ದೇವಾಲಯದ ಬಳಿ ಪ್ರಚಾರ ರಥಕ್ಕೆ ಪೂಜೆ ಸಲ್ಲಿಸಿದ ನಂತರ ಅನ್ನದಾತ ರೈತರಾದ ಡಾ‌ ಕಪನೀಗೌಡ, ಚಿಕ್ಕಣ್ಣ ಶಿವಕುಮಾರ್ ನಾಗರಾಜು, ಮಹೇಶ್ ಹಾಗೂ ನೀವೃತ್ತ ಸೈನಿಕರಾದ ಸುರೇಶ್, ಪ್ರಕಾಶ್ ಮಾದೇಶ, ಬಿಎಸ್ ಎಫ್ ನ ಕೇಶವಮೂರ್ತಿ, ಅವರುಗಳು ಹಸಿರು ನಿಶಾನೆ ತೋರಿಸುವುದ ರೊಂದಿಗೆ ಚಾಲನೆ ನೀಡಿದರು. ಟೀಮ್ ಮಳವಳ್ಳಿ ಬಳಗದ ಪ್ರಮುಖರಾದ ಪೊಲೀಸ್ ಪ್ರಭು, ಶಿವಪ್ರಸಾದ್ ಹರ್ಷಿತ್ ಅಖಿಲ್, ಕಮಲ್ ಷರೀಫ್ ನಗು ಫೌಂಡೇಷನ್ ಡಾ. ಅರುಣ್ ಕುಮಾರ್ , ವಕೀಲ ರಾದ ಶ್ರೀಕಂಠಸ್ವಾಮಿ ಮತ್ತಿತರ ರು ಈ ವೇಳೆ ಹಾಜರಿದ್ದರು. ಸದರಿ ಪ್ರಚಾರ ವಾಹನ ತಾಲ್ಲೂಕಿನ ಎಲ್ಲಾ 200ಕ್ಕೂ ಗ್ರಾಮಗಳಲ್ಲಿ ಸಂಚರಿಸಿ ಪ್ರಚಾರ ನಡೆಸಲಿದ್ದು ಈ ವಾಹನ ತಮ್ಮ ಗ್ರಾಮಗಳಿಗೆ ಬಂದಾಗ ಗ್ರಾಮದ ಮುಖಂಡರು ಯುವಕರು ಜೊತೆಯಾಗಿ ಪ್ರಚಾರ ನಡೆಸುವುದರ ಜೊತೆಗೆ ಆಗಸ್ಟ್ 15 ರ ರಕ್ತದಾನ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂ ಡು ರಕ್ತದಾನ ಮಾಡುವ ಮೂಲಕ ಶಿಬಿರವನ್ನು ಯಶಸ್ವಿ ಗೊಳಿಸಬೇಕು ಎಂದು ಟೀಮ್ ಮಳವಳ್ಳಿ ಸದಸ್ಯರು ಕೋರಿದ್ದಾರೆ.
    1
    ಆಗಸ್ಟ್ 15 ರಂದು ನಡೆಯಲಿರುವ ಬೃಹತ್ ರಕ್ತದಾನ ಶಿಬಿರ ಹಿನ್ನಲೆ, ಮಳವಳ್ಳಿ‌ ಪಟ್ಟಣದಲ್ಲಿ ಶಿಬಿರದ ಪ್ರಚಾರ ರಥಕ್ಕೆ ಚಾಲನೆ
ಮಳವಳ್ಳಿ : ಬರುವ ಆಗಸ್ಟ್ 15 ರಂದು ಪಟ್ಟಣದಲ್ಲಿ ಟೀಮ್ ಮಳವಳ್ಳಿ ಯುವಕ ಮಿತ್ರರ ಬಳಗದ ವತಿಯಿಂದ ಏರ್ಪಡಿಸಿ ರುವ ಐತಿಹಾಸಿಕ ಬೃಹತ್ ರಕ್ತದಾನ ಶಿಬಿರದ ಪ್ರಚಾರ ರಥಕ್ಕೆ ಚಾಲನೆ ನೀಡಲಾಯಿತು. ಮಂಗಳವಾರ ಬೆಳಿಗ್ಗೆ 11.30 ರ ಸಮಯದಲ್ಲಿ ಮಳವಳ್ಳಿ ಪಟ್ಟಣದ ಕೋಟೆ ಶ್ರೀ ಗಂಗಾಧರೇಶ್ವರಸ್ವಾಮಿ ದೇವಾಲಯದ ಬಳಿ ಪ್ರಚಾರ ರಥಕ್ಕೆ ಪೂಜೆ ಸಲ್ಲಿಸಿದ ನಂತರ ಅನ್ನದಾತ ರೈತರಾದ ಡಾ‌    ಕಪನೀಗೌಡ, ಚಿಕ್ಕಣ್ಣ ಶಿವಕುಮಾರ್ ನಾಗರಾಜು, ಮಹೇಶ್ ಹಾಗೂ ನೀವೃತ್ತ ಸೈನಿಕರಾದ  ಸುರೇಶ್, ಪ್ರಕಾಶ್ ಮಾದೇಶ, ಬಿಎಸ್ ಎಫ್ ನ ಕೇಶವಮೂರ್ತಿ, ಅವರುಗಳು ಹಸಿರು ನಿಶಾನೆ ತೋರಿಸುವುದ ರೊಂದಿಗೆ ಚಾಲನೆ ನೀಡಿದರು. ಟೀಮ್ ಮಳವಳ್ಳಿ ಬಳಗದ ಪ್ರಮುಖರಾದ ಪೊಲೀಸ್ ಪ್ರಭು,  ಶಿವಪ್ರಸಾದ್  ಹರ್ಷಿತ್ ಅಖಿಲ್, ಕಮಲ್ ಷರೀಫ್   ನಗು ಫೌಂಡೇಷನ್ ಡಾ.  ಅರುಣ್ ಕುಮಾರ್ , ವಕೀಲ ರಾದ ಶ್ರೀಕಂಠಸ್ವಾಮಿ ಮತ್ತಿತರ ರು ಈ ವೇಳೆ ಹಾಜರಿದ್ದರು. ಸದರಿ ಪ್ರಚಾರ ವಾಹನ ತಾಲ್ಲೂಕಿನ ಎಲ್ಲಾ 200ಕ್ಕೂ ಗ್ರಾಮಗಳಲ್ಲಿ ಸಂಚರಿಸಿ ಪ್ರಚಾರ ನಡೆಸಲಿದ್ದು ಈ ವಾಹನ ತಮ್ಮ ಗ್ರಾಮಗಳಿಗೆ ಬಂದಾಗ ಗ್ರಾಮದ ಮುಖಂಡರು ಯುವಕರು ಜೊತೆಯಾಗಿ ಪ್ರಚಾರ ನಡೆಸುವುದರ ಜೊತೆಗೆ ಆಗಸ್ಟ್ 15 ರ ರಕ್ತದಾನ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂ ಡು ರಕ್ತದಾನ ಮಾಡುವ ಮೂಲಕ ಶಿಬಿರವನ್ನು ಯಶಸ್ವಿ ಗೊಳಿಸಬೇಕು ಎಂದು ಟೀಮ್ ಮಳವಳ್ಳಿ ಸದಸ್ಯರು ಕೋರಿದ್ದಾರೆ.
    user_B mallikarjunaswamy
    B mallikarjunaswamy
    ಮಳವಳ್ಳಿ, ಮಂಡ್ಯ, ಕರ್ನಾಟಕ•
    12 hrs ago
  • ವಿದ್ಯಾಗಣಪತಿ ದೇವಾಲಯದಲ್ಲಿ ಚಾಮುಂಡೇಶ್ವರಿ ವರ್ಧಂತಿ, ಚಂಢಿಕಾ ಹೋಮ ಅಷ್ಟೋತ್ತರ ಪಾರಾಯಣ ಮಂಡ್ಯ ಆಷಾಢ ಮಾಸದ ಬಹುಳ ಷಷ್ಠಿ ದಿನವಾದ ಇಂದು ಚಾಮುಂಡೇಶ್ವರಿ ವರ್ದಂತಿ ಪ್ರಯುಕ್ತ ಮಂಡ್ಯದ ವಿದ್ಯಾನಗರದ ವಿದ್ಯಾಗಣಪತಿ ದೇವಸ್ಥಾನದಲ್ಲಿ ಮಾತ ಸೇವಾ ಟ್ರಸ್ಟ್ ನಿಂದ ಇಂದು ಚಂಡಿಕಾಯಾಗ,ಅಷ್ಟೋತ್ತರ ಪಾರಾಯಣ ಜರುಗಿತು. ಕಾರ್ಯಕ್ರಮದಲ್ಲಿ ಮಾತಾ ಟ್ರಸ್ಟ್ ನ ಪದಾದಿಕಾರಿ ಗಳಾದಪ್ರತಿಮಾರಮೇಶ್,ಮಾಲಾನಾಗೇಶ್,ಭಾರತೀಅಡಿಗ ಮತ್ತು ಟ್ರಸ್ಟಿಗಳು ಬಾಗವಹಿಸಿದ್ದರು. ದೇವಿಕೃಪೆಗೆ‌ಪಾತ್ರರಾಗಲು ಬಂದ ಭಕ್ತಾಧಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
    1
    ವಿದ್ಯಾಗಣಪತಿ ದೇವಾಲಯದಲ್ಲಿ ಚಾಮುಂಡೇಶ್ವರಿ ವರ್ಧಂತಿ, ಚಂಢಿಕಾ ಹೋಮ ಅಷ್ಟೋತ್ತರ ಪಾರಾಯಣ 
ಮಂಡ್ಯ ಆಷಾಢ ಮಾಸದ ಬಹುಳ ಷಷ್ಠಿ ದಿನವಾದ ಇಂದು ಚಾಮುಂಡೇಶ್ವರಿ ವರ್ದಂತಿ ಪ್ರಯುಕ್ತ ಮಂಡ್ಯದ ವಿದ್ಯಾನಗರದ ವಿದ್ಯಾಗಣಪತಿ ದೇವಸ್ಥಾನದಲ್ಲಿ ಮಾತ ಸೇವಾ ಟ್ರಸ್ಟ್ ನಿಂದ ಇಂದು ಚಂಡಿಕಾಯಾಗ,ಅಷ್ಟೋತ್ತರ ಪಾರಾಯಣ ಜರುಗಿತು.
ಕಾರ್ಯಕ್ರಮದಲ್ಲಿ ಮಾತಾ ಟ್ರಸ್ಟ್ ನ ಪದಾದಿಕಾರಿ ಗಳಾದಪ್ರತಿಮಾರಮೇಶ್,ಮಾಲಾನಾಗೇಶ್,ಭಾರತೀಅಡಿಗ ಮತ್ತು ಟ್ರಸ್ಟಿಗಳು ಬಾಗವಹಿಸಿದ್ದರು. ದೇವಿಕೃಪೆಗೆ‌ಪಾತ್ರರಾಗಲು ಬಂದ ಭಕ್ತಾಧಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
    user_Arunprasad G B
    Arunprasad G B
    Local News Reporter ಮಂಡ್ಯ, ಮಂಡ್ಯ, ಕರ್ನಾಟಕ•
    4 hrs ago
  • ಕೊಳ್ಳೇಗಾಲ.= ಕಾಂಗ್ರೆಸ್ ಸರ್ಕಾರವು ನನಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ನೀಡಿದ್ದಾರೆ ಆದರೆ ಇನ್ನೂ ಕೂಡ ಯಾವ ಖಾತೆಯನ್ನು ನೀಡಿಲ್ಲ ಆದರೆ ಸರ್ಕಾರವು ಯಾವ ಖಾತೆಯನ್ನು ಕೊಟ್ಟರೆ ಅದನ್ನು ನಿಭಾಯಿಸುವ ಶಕ್ತಿ ನನ್ನಲ್ಲಿದೆ ಎಂದು ನೂತನ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ರವರು ತಿಳಿಸಿದರು. ಇಂದು ಕೊಳ್ಳೇಗಾಲ ಪಟ್ಟಣಕ್ಕೆ ನೂತನವಾಗಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ್ದ ಸಿ.ಪುಟ್ಟರಂಗಶೆಟ್ಟಿ ಅವರು ಕೊಳ್ಳೇಗಾಲ ಪಟ್ಟಣದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರವು ನನಗೆ ಯಾವ ಖಾತೆಯನ್ನು ಕೊಟ್ಟರೆ ಅದನ್ನು ನಮ್ಮ ಜಿಲ್ಲೆಯ ಶಾಸಕರುಗಳ ಗಮನಕ್ಕೆ ತಂದು ಅನಂತರ ಖಾತೆಯನ್ನು ಸ್ವೀಕರಿಸುತ್ತೇನೆ ಎಂದು ತಿಳಿಸಿದರು. ನನ್ನ ಗುರಿ ಕೊಳ್ಳೇಗಾಲ ಮತ್ತು ಚಾಮರಾಜನಗರ ಹಾಗೂ ಗುಂಡ್ಲುಪೇಟೆ ಈ ಮೂರು ತಾಲೂಕುಗಳನ್ನು ಅಭಿವೃದ್ಧಿ ಮಾಡುವುದೇ ನನ್ನ ಗುರಿಯಾಗಿದೆ ಏನೇ ಅಭಿವೃದ್ಧಿ ಮಾಡಬೇಕಾದರೆ ನಮ್ಮ ಜಿಲ್ಲೆಯ ಸಂಬಂಧಪಟ್ಟ ಶಾಸಕರುಗಳನ್ನು ಒಟ್ಗೂಡಿ ತೀರ್ಮಾನ ಮಾಡಿಕೊಂಡು ಅಭಿವೃದ್ದಿ ಮಾಡುವುದಕ್ಕೆ ಮುಂದಾಗುತ್ತೇನೆ ಎಂದು ತಿಳಿಸಿದರು . ಈ ವೇಳೆ ನೂತನ ಸಚಿವ ಪುಟ್ಟರಂಗಶೆಟ್ಟಿ ರವರಿಗೆ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಹಾರ ಶಾಲು ಹಾಕಿ ಸನ್ಮಾನಿಸಿ ಗೌರವಿಸಿ ಅಭಿನಂದಿಸಿದರು ನಂತರ ಮಾತನಾಡಿದ ಅವರು ನಾನು ಕೂಡ ಈ ಭಾಗದಲ್ಲಿ ಸಚಿವ ಸ್ಥಾನ ಸಿಗುತ್ತೆ ಎಂದು ನಿರೀಕ್ಷೆಯಲ್ಲಿದ್ದೆ ಆದರೆ ನನ್ನಲ್ಲಿ ಸಚಿವ ಸಂಪುಟದಲ್ಲಿ ನನಗೂ ಕೊಡಿ ಮತ್ತು ಪುಟ್ಟರಂಗಶೆಟ್ಟಿ ಅವರಿಗೆ ಕೂಡ ಕೊಡಿ ಎಂದು ಸಚಿವ ಸಂಪುಟದಲ್ಲಿ ಕೇಳಿಕೊಂಡಿದೆ ಆದರೆ ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ಭಾಗ್ಯ ಸಿಕ್ಕಿದೆ ಆದರೆ ಅವರಿಗೆ ಸಿಕ್ಕಿರುವುದು ನಮ್ಮ ಜಿಲ್ಲೆಗೆ ಒಂದು ಭಾಗ್ಯ ಎಂದು ಶಾಸಕರಾದ ಎ. ಆರ್ ಕೃಷ್ಣ ಮೂರ್ತಿ ರವರು ತಿಳಿಸಿದರು. ಈ ಸಂದರ್ಭದಲ್ಲಿ ಚಾಮುಲ್ ಅಧ್ಯಕ್ಷರು ನಂಜುಂಡಸ್ವಾಮಿ, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ರಾಜೇಂದ್ರ, ಉಪ್ಪಾರ ನಿಗಮ ಮಾಜಿ ಅಧ್ಯಕ್ಷರು ಮಧುವನಹಳ್ಳಿ ಶಿವಕುಮಾರ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು ತೋಟೇಶ್, ಕಾರ್ಯದರ್ಶಿ ಬಸ್ತೀಪುರ ರವಿ, ಜಿ.ಪಂ ಮಾಜಿ ಸದಸ್ಯರು ಕೊಪ್ಪಾಳಿ ಮಹದೇವನಾಯಕ, ಹನೂರು ಬ್ಲಾಕ್ ಅಧ್ಯಕ್ಷರು ಮುಕುಂದವರ್ಮ, ಉಪ್ಪಾರ ಸಂಘ ಅಧ್ಯಕ್ಷ ರಮೇಶ್, ಲೋಕೇಶ್ ನಂಜುಂಡಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷರು ರೇಖಾ ರಮೇಶ್, ಬಸ್ತೀಪುರ ಶಾಂತರಾಜು, ಮಲ್ಲಿಕಾರ್ಜುನ, ಮಾಜಿ ಸದಸ್ಯರು ಮುಡಿಗುಂಡ ಶಾಂತರಾಜು ಧರಣೇಶ್, ಸುಮಾಸುಬ್ಬಣ್ಣ, ಅಂಬೇಡ್ಕರ್ ಸಂಘದ ಅಧ್ಯಕ್ಷ ಆನಂದಮೂರ್ತಿ, ಮುಖಂಡರು ಶೇಖರ್ ಬುದ್ದ ಹಾಗೂ ಇತರರು ಇದ್ದರು.
    2
    ಕೊಳ್ಳೇಗಾಲ.=  ಕಾಂಗ್ರೆಸ್ ಸರ್ಕಾರವು ನನಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ನೀಡಿದ್ದಾರೆ ಆದರೆ ಇನ್ನೂ ಕೂಡ ಯಾವ ಖಾತೆಯನ್ನು ನೀಡಿಲ್ಲ ಆದರೆ ಸರ್ಕಾರವು ಯಾವ ಖಾತೆಯನ್ನು ಕೊಟ್ಟರೆ ಅದನ್ನು ನಿಭಾಯಿಸುವ ಶಕ್ತಿ ನನ್ನಲ್ಲಿದೆ ಎಂದು ನೂತನ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ರವರು ತಿಳಿಸಿದರು.
ಇಂದು ಕೊಳ್ಳೇಗಾಲ ಪಟ್ಟಣಕ್ಕೆ ನೂತನವಾಗಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ್ದ ಸಿ.ಪುಟ್ಟರಂಗಶೆಟ್ಟಿ ಅವರು ಕೊಳ್ಳೇಗಾಲ ಪಟ್ಟಣದ  ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರವು ನನಗೆ ಯಾವ ಖಾತೆಯನ್ನು ಕೊಟ್ಟರೆ ಅದನ್ನು ನಮ್ಮ ಜಿಲ್ಲೆಯ  ಶಾಸಕರುಗಳ  ಗಮನಕ್ಕೆ ತಂದು ಅನಂತರ ಖಾತೆಯನ್ನು ಸ್ವೀಕರಿಸುತ್ತೇನೆ ಎಂದು ತಿಳಿಸಿದರು.
ನನ್ನ ಗುರಿ  ಕೊಳ್ಳೇಗಾಲ ಮತ್ತು ಚಾಮರಾಜನಗರ ಹಾಗೂ ಗುಂಡ್ಲುಪೇಟೆ ಈ ಮೂರು ತಾಲೂಕುಗಳನ್ನು ಅಭಿವೃದ್ಧಿ ಮಾಡುವುದೇ ನನ್ನ ಗುರಿಯಾಗಿದೆ ಏನೇ ಅಭಿವೃದ್ಧಿ ಮಾಡಬೇಕಾದರೆ ನಮ್ಮ ಜಿಲ್ಲೆಯ ಸಂಬಂಧಪಟ್ಟ ಶಾಸಕರುಗಳನ್ನು ಒಟ್ಗೂಡಿ ತೀರ್ಮಾನ ಮಾಡಿಕೊಂಡು ಅಭಿವೃದ್ದಿ ಮಾಡುವುದಕ್ಕೆ ಮುಂದಾಗುತ್ತೇನೆ ಎಂದು ತಿಳಿಸಿದರು .
ಈ ವೇಳೆ ನೂತನ ಸಚಿವ ಪುಟ್ಟರಂಗಶೆಟ್ಟಿ ರವರಿಗೆ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಹಾರ ಶಾಲು ಹಾಕಿ ಸನ್ಮಾನಿಸಿ ಗೌರವಿಸಿ ಅಭಿನಂದಿಸಿದರು ನಂತರ ಮಾತನಾಡಿದ ಅವರು ನಾನು ಕೂಡ ಈ ಭಾಗದಲ್ಲಿ ಸಚಿವ ಸ್ಥಾನ ಸಿಗುತ್ತೆ ಎಂದು ನಿರೀಕ್ಷೆಯಲ್ಲಿದ್ದೆ ಆದರೆ ನನ್ನಲ್ಲಿ ಸಚಿವ ಸಂಪುಟದಲ್ಲಿ ನನಗೂ ಕೊಡಿ ಮತ್ತು ಪುಟ್ಟರಂಗಶೆಟ್ಟಿ ಅವರಿಗೆ ಕೂಡ ಕೊಡಿ ಎಂದು ಸಚಿವ ಸಂಪುಟದಲ್ಲಿ ಕೇಳಿಕೊಂಡಿದೆ ಆದರೆ ಪುಟ್ಟರಂಗಶೆಟ್ಟಿ  ಅವರಿಗೆ ಸಚಿವ ಸ್ಥಾನ ಭಾಗ್ಯ ಸಿಕ್ಕಿದೆ ಆದರೆ ಅವರಿಗೆ ಸಿಕ್ಕಿರುವುದು ನಮ್ಮ ಜಿಲ್ಲೆಗೆ ಒಂದು ಭಾಗ್ಯ ಎಂದು ಶಾಸಕರಾದ ಎ. ಆರ್ ಕೃಷ್ಣ ಮೂರ್ತಿ ರವರು ತಿಳಿಸಿದರು.
ಈ ಸಂದರ್ಭದಲ್ಲಿ ಚಾಮುಲ್ ಅಧ್ಯಕ್ಷರು ನಂಜುಂಡಸ್ವಾಮಿ, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ರಾಜೇಂದ್ರ, ಉಪ್ಪಾರ ನಿಗಮ ಮಾಜಿ ಅಧ್ಯಕ್ಷರು ಮಧುವನಹಳ್ಳಿ ಶಿವಕುಮಾರ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು ತೋಟೇಶ್, ಕಾರ್ಯದರ್ಶಿ ಬಸ್ತೀಪುರ ರವಿ, ಜಿ.ಪಂ ಮಾಜಿ ಸದಸ್ಯರು ಕೊಪ್ಪಾಳಿ ಮಹದೇವನಾಯಕ, ಹನೂರು ಬ್ಲಾಕ್ ಅಧ್ಯಕ್ಷರು ಮುಕುಂದವರ್ಮ, ಉಪ್ಪಾರ ಸಂಘ ಅಧ್ಯಕ್ಷ ರಮೇಶ್, ಲೋಕೇಶ್ ನಂಜುಂಡಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷರು ರೇಖಾ ರಮೇಶ್, ಬಸ್ತೀಪುರ ಶಾಂತರಾಜು, ಮಲ್ಲಿಕಾರ್ಜುನ, ಮಾಜಿ ಸದಸ್ಯರು ಮುಡಿಗುಂಡ ಶಾಂತರಾಜು ಧರಣೇಶ್, ಸುಮಾಸುಬ್ಬಣ್ಣ, ಅಂಬೇಡ್ಕರ್ ಸಂಘದ ಅಧ್ಯಕ್ಷ ಆನಂದಮೂರ್ತಿ, ಮುಖಂಡರು ಶೇಖರ್ ಬುದ್ದ ಹಾಗೂ ಇತರರು ಇದ್ದರು.
    user_ಎನ್. ನಟರಾಜ್
    ಎನ್. ನಟರಾಜ್
    Kollegal, Chamarajanagara•
    7 hrs ago
  • ಹೊನ್ನೂರು ಗ್ರಾಮದಲ್ಲಿ ಶ್ರೀ ಚಾಮುಂಡೇಶ್ವರಿಗೆ ವಿಶೇಷ ಪೂಜಾ ಆಷಾಡ ಮಂಗಳವಾರ ಹಿನ್ನೆಲೆಯಲ್ಲಿ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ತಾಯಿಗೆ ವಿಶೇಷ ಅಲಂಕಾರ ವಿಶೇಷ ಪೂಜೆ ಹೊನ್ನೂರು ಗ್ರಾಮದಲ್ಲಿ ಶ್ರೀ ಚಾಮುಂಡೇಶ್ವರಿಗೆ ವಿಶೇಷ ಪೂಜಾ ಆಷಾಡ ಮಂಗಳವಾರ ಹಿನ್ನೆಲೆಯಲ್ಲಿ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ತಾಯಿಗೆ ವಿಶೇಷ ಅಲಂಕಾರ ವಿಶೇಷ ಪೂಜೆ ಮಾಡಲಾಗಿತ್ತು ಯಳಂದೂರು :ತಾಲೂಕಿನ ಹೊನ್ನೂರು ಗ್ರಾಮದಲ್ಲಿ ಆಷಾಡ ಮಂಗಳವಾರ ಚಾಮುಂಡೇಶ್ವರಿ ಹುಟ್ಟುಹಬ್ಬದ ಹಿನ್ನ್ನೆಲೆಯಲ್ಲಿ ಶ್ರೀ ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜಾ ಕಾರ್ಯಕ್ರಮ ಜರುಗಿದವು. ಮುಂಜಾನೆ ದೇವಿಗೆ ವಿಶೇಷ ದ್ರವ್ಯ ಅಭಿಷೇಕ, ವಿವಿಧ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು, ಬಳಿಕ ದೇವಾಲಯದ ಪ್ರಧಾನ ಅರ್ಚಕರಾದ ಶಿವಕುಮಾರ್ ದೀಕ್ಷಿತ್, ಮಂಜುನಾಥ್ ವಿಶೇ ಷ ಪೂಜಾ ಕೈಕಂರ್ಯಗಳು ನೆರವೇರಸಿ . ಬಳಿಕ ಮಹಾಮಂಗಳಾರತಿ ಜರುಗಿತು. ದೇವಾಲಯಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದ ವಿನಿಯೋಗ ನೇರವೇರಿತು. ಈ ವೇಳೆ ಮಹಿಳೆಯರು ತಾಯಿ ಚಾಮುಂಡೇಶ್ವರಿಗೆ ನಿಂಬೆಹಣ್ಣಿನ ಆರತಿ ಬೆಳಗಿದರು. ಆಷಾಡ ಮಂಗಳವಾರ ಅಂಗವಾಗಿ ದೇವಾಲಯದಲ್ಲಿ ಸಂಭ್ರಮದಲ್ಲಿ ಕ್ಷೇತ್ರದ ಶಾಸಕ ಎ ಆರ್. ಕೃಷ್ಣಮೂರ್ತಿ ಜಿಲ್ಲಾ ಗ್ಯಾರಂಟಿ ಯೋಜನೆ ಜಿಲ್ಲಾ ಅಧ್ಯಕ್ಷ ಚಂದ್ರು ದೇವಾಲಯಕ್ಕೆ ಆಗಮಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯಕ್ಕೆ ಅಸಂಖ್ಯಾತ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು. . ಈ ಸಂದರ್ಭದಲ್ಲಿ ಗ್ರಾಮದ ಗೌಡರಾದ ಮಹದೇವಸ್ವಾಮಿ ಗೌಡರು, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನಿರಂಜನ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರು ಗಳಾದ, ಗುರುಪ್ರಸಾದ್ ಮಹಾದೇವಸ್ವಾಮಿ, ಸಿದ್ದಪ್ಪ ಸ್ವಾಮಿ ಆರ್ ಪುಟ್ಟ ಬಸವಯ್ಯ, ಮುಖಂಡರಾದ ಬಿ ರೇವಣ್ಣ, ಹೆಚ್ ಸಿ ಸೋಮಣ್ಣ , ಗುರು ಮಲ್ಲೇಶ್, ಸಿದ್ದಶೆಟ್ಟಿ, ನಾಗರಾಜ್ ಶೆಟ್ಟಿ, ಸೇರಿದಂತೆ ಗ್ರಾಮದ ಎಲ್ಲಾ ವರ್ಗದ ಮುಖಂಡರು ಸಾರ್ವಜನಿಕರು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ವರದಿ. ಎಸ್. ಪುಟ್ಟಸ್ವಾಮಿಹೊನ್ನೂರು ಯಳಂದೂರು
    2
    ಹೊನ್ನೂರು ಗ್ರಾಮದಲ್ಲಿ 
ಶ್ರೀ ಚಾಮುಂಡೇಶ್ವರಿಗೆ ವಿಶೇಷ ಪೂಜಾ  
ಆಷಾಡ ಮಂಗಳವಾರ ಹಿನ್ನೆಲೆಯಲ್ಲಿ  ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ತಾಯಿಗೆ ವಿಶೇಷ ಅಲಂಕಾರ ವಿಶೇಷ ಪೂಜೆ 
ಹೊನ್ನೂರು ಗ್ರಾಮದಲ್ಲಿ 
ಶ್ರೀ ಚಾಮುಂಡೇಶ್ವರಿಗೆ ವಿಶೇಷ ಪೂಜಾ  
ಆಷಾಡ ಮಂಗಳವಾರ ಹಿನ್ನೆಲೆಯಲ್ಲಿ  ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ತಾಯಿಗೆ ವಿಶೇಷ ಅಲಂಕಾರ ವಿಶೇಷ ಪೂಜೆ ಮಾಡಲಾಗಿತ್ತು
ಯಳಂದೂರು :ತಾಲೂಕಿನ ಹೊನ್ನೂರು ಗ್ರಾಮದಲ್ಲಿ  ಆಷಾಡ ಮಂಗಳವಾರ ಚಾಮುಂಡೇಶ್ವರಿ ಹುಟ್ಟುಹಬ್ಬದ  ಹಿನ್ನ್ನೆಲೆಯಲ್ಲಿ  ಶ್ರೀ ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜಾ ಕಾರ್ಯಕ್ರಮ ಜರುಗಿದವು.
ಮುಂಜಾನೆ ದೇವಿಗೆ ವಿಶೇಷ ದ್ರವ್ಯ ಅಭಿಷೇಕ, ವಿವಿಧ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು, ಬಳಿಕ ದೇವಾಲಯದ ಪ್ರಧಾನ ಅರ್ಚಕರಾದ ಶಿವಕುಮಾರ್ ದೀಕ್ಷಿತ್, ಮಂಜುನಾಥ್ ವಿಶೇ ಷ ಪೂಜಾ ಕೈಕಂರ್ಯಗಳು ನೆರವೇರಸಿ . ಬಳಿಕ ಮಹಾಮಂಗಳಾರತಿ ಜರುಗಿತು. ದೇವಾಲಯಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದ ವಿನಿಯೋಗ ನೇರವೇರಿತು.
ಈ ವೇಳೆ ಮಹಿಳೆಯರು ತಾಯಿ ಚಾಮುಂಡೇಶ್ವರಿಗೆ ನಿಂಬೆಹಣ್ಣಿನ ಆರತಿ ಬೆಳಗಿದರು. 
ಆಷಾಡ ಮಂಗಳವಾರ ಅಂಗವಾಗಿ ದೇವಾಲಯದಲ್ಲಿ ಸಂಭ್ರಮದಲ್ಲಿ  ಕ್ಷೇತ್ರದ ಶಾಸಕ ಎ ಆರ್.  ಕೃಷ್ಣಮೂರ್ತಿ ಜಿಲ್ಲಾ ಗ್ಯಾರಂಟಿ ಯೋಜನೆ ಜಿಲ್ಲಾ ಅಧ್ಯಕ್ಷ ಚಂದ್ರು ದೇವಾಲಯಕ್ಕೆ ಆಗಮಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ದೇವಾಲಯಕ್ಕೆ ಅಸಂಖ್ಯಾತ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು. .
ಈ ಸಂದರ್ಭದಲ್ಲಿ ಗ್ರಾಮದ ಗೌಡರಾದ  ಮಹದೇವಸ್ವಾಮಿ ಗೌಡರು, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನಿರಂಜನ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರು ಗಳಾದ, ಗುರುಪ್ರಸಾದ್ ಮಹಾದೇವಸ್ವಾಮಿ, ಸಿದ್ದಪ್ಪ ಸ್ವಾಮಿ  ಆರ್ ಪುಟ್ಟ ಬಸವಯ್ಯ,  ಮುಖಂಡರಾದ ಬಿ ರೇವಣ್ಣ, ಹೆಚ್ ಸಿ ಸೋಮಣ್ಣ , ಗುರು ಮಲ್ಲೇಶ್, ಸಿದ್ದಶೆಟ್ಟಿ, ನಾಗರಾಜ್ ಶೆಟ್ಟಿ, ಸೇರಿದಂತೆ ಗ್ರಾಮದ ಎಲ್ಲಾ  ವರ್ಗದ ಮುಖಂಡರು ಸಾರ್ವಜನಿಕರು  ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ವರದಿ.
ಎಸ್. ಪುಟ್ಟಸ್ವಾಮಿಹೊನ್ನೂರು 
ಯಳಂದೂರು
    user_S.Puttaswamyhonnur
    S.Puttaswamyhonnur
    Press reporter ಯಳಂದೂರು, ಚಾಮರಾಜನಗರ, ಕರ್ನಾಟಕ•
    14 hrs ago
  • ಕಾಂಗ್ರೆಸ್ ಅಂಗಳದಲ್ಲಿ ತಾರಕಕ್ಕೇರಿದ ಅಸಮಾಧಾನ: ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕೈ ನಾಯಕರ ವಿರುದ್ಧ ತಿರುಗಿಬಿದ್ದ ಬೆಂಬಲಿಗರು, ಹೈಕಮಾಂಡ್‌ಗೆ ತಲೆನೋವಾದ ಅತೃಪ್ತರ ಬಂಡಾಯ. ಕಾಂಗ್ರೆಸ್ ಅಂಗಳದಲ್ಲಿ ತಾರಕಕ್ಕೇರಿದ ಅಸಮಾಧಾನ: ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕೈ ನಾಯಕರ ವಿರುದ್ಧ ತಿರುಗಿಬಿದ್ದ ಬೆಂಬಲಿಗರು, ಹೈಕಮಾಂಡ್‌ಗೆ ತಲೆನೋವಾದ ಅತೃಪ್ತರ ಬಂಡಾಯ.
    1
    ಕಾಂಗ್ರೆಸ್ ಅಂಗಳದಲ್ಲಿ ತಾರಕಕ್ಕೇರಿದ ಅಸಮಾಧಾನ: ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕೈ ನಾಯಕರ ವಿರುದ್ಧ ತಿರುಗಿಬಿದ್ದ ಬೆಂಬಲಿಗರು, ಹೈಕಮಾಂಡ್‌ಗೆ ತಲೆನೋವಾದ ಅತೃಪ್ತರ ಬಂಡಾಯ.
ಕಾಂಗ್ರೆಸ್ ಅಂಗಳದಲ್ಲಿ ತಾರಕಕ್ಕೇರಿದ ಅಸಮಾಧಾನ: ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕೈ ನಾಯಕರ ವಿರುದ್ಧ ತಿರುಗಿಬಿದ್ದ ಬೆಂಬಲಿಗರು, ಹೈಕಮಾಂಡ್‌ಗೆ ತಲೆನೋವಾದ ಅತೃಪ್ತರ ಬಂಡಾಯ.
    user_ಸೈಯದ್ ಅತೀಕ್
    ಸೈಯದ್ ಅತೀಕ್
    Furniture Manufacturer ಮೈಸೂರು, ಮೈಸೂರು, ಕರ್ನಾಟಕ•
    1 hr ago
  • ಮಳವಳ್ಳಿ:ಆಗಸ್ಟ್.15 ರಂದು ಬೃಹತ್ ರಕ್ತದಾನ ಶಿಬಿರ-ಪ್ರಚಾರ ರಥಕ್ಕೆ ವಿದ್ಯುಕ್ತ ಚಾಲನೆ ಮಳವಳ್ಳಿ:ಆಗಸ್ಟ್.೧೫ ರಂದು ಬೃಹತ್ ರಕ್ತದಾನ ಶಿಬಿರ-ಪ್ರಚಾರ ರಥಕ್ಕೆ ವಿದ್ಯುಕ್ತ ಚಾಲನೆ • ರಕ್ತದಾನ ಮಹಾದಾನ-ರಕ್ತದಾನ ಮಾಡೋಣ ಜೀವ ಉಳಿಸೋಣ-ಸರ್ಕಾರಿ ವಕೀಲ ಎಂ.ಎಸ್.ಶ್ರೀಕAಠಸ್ವಾಮಿ ಕರೆ ಮಳವಳ್ಳಿಯಲ್ಲಿ ಆಗಸ್ಟ್ ೧೫ ರಂದು ಗಡಿ ಕಾಯುವ ಯೋಧರ ಹಾಗೂ ಅನ್ನ ನೀಡುವ ರೈತರ ಸ್ಮರಣಾರ್ಥ ಯುವಕ ಮಿತ್ರರ ತಂಡ ಹಮ್ಮಿಕೊಂಡಿರುವ ಬೃಹತ್ ರಕ್ತದಾನ ಶಿಬಿರದ ಪ್ರಚಾರ ರಥಕ್ಕೆ ಮಂಗಳವಾರ ಚಾಲನೆ ನೀಡಲಾಯಿತು. ಪಟ್ಟಣದ ಇತಿಹಾಸ ಪ್ರಸಿದ್ದ ಶ್ರೀ ಗಂಗಾಧರೇಶ್ವರಸ್ವಾಮಿ ದೇವಸ್ಥಾನದ ಅವರಣದಲ್ಲಿ ಅಯೋಜಿಸಿದ್ದ ಕಾರ್ಯಕ್ರಮದಲ್ಲಿ ತಾಲೂಕಿನ ಪ್ರತಿ ಹಳ್ಳಿ ಹಳ್ಳಿಯಲ್ಲೂ ಸಂಚಾರ ನಡೆಸಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಲು ವಿಶೇಷವಾಗಿ ಸಿದ್ದಗೊಳಿಸಿರುವ ಪ್ರಚಾರ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ರೈತ ಮುಖಂಡರು,ಮಳವಳ್ಳಿ ಯುವಕ ತಂಡದ ಸ್ವಯಂ ಸೇವಕರು ಬಾವುಟ ತೋರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅಪರ ಸರ್ಕಾರಿ ವಕೀಲ ಎಂ.ಎಸ್.ಶ್ರೀಕAಠಸ್ವಾಮಿ ಮಾತನಾಡಿ, ಇದೊಂದು ಮಾನವೀಯತೆಯ ನೆಲೆಯಲ್ಲಿ ನಡೆಯುತ್ತಿರುವ ಬೃಹತ್ ರಕ್ತದಾನ ಶಿಬಿರವಾಗಿದೆ.ರಕ್ತದಾನ ಮಾಡುವುದರಿಂದ ಇನ್ನೊಂದು ಜೀವ ಉಳಿಸಿದ ಪುಣ್ಯ ರಕ್ತದಾನಿಗೆ ಸಿಗಲಿದೆ,ರಕ್ತದಾನದಿಂದ ಅವರ ಅರೋಗ್ಯ ಉತ್ತಮವಾಗಲಿದೆ,ಜನರು ಯಾವುದೆ ಅತಂಕ ವಿಲ್ಲದೆ ನಿರ್ಭಿತಿಯಿಂದ ರಕ್ತದಾನ ಮಾಡುವ ಮೂಲಕ ಆ.೧೫ ರ ೨೬ ಗಮಟೆಗಳ ನಿರಂತರ ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸುವಂತೆ ಹಾಗೂ ೨೦೨೬ ಕ್ಕೂ ಹೆಚ್ಚು ಜನರು ದಾಖಲೆ ರಕ್ತದಾನ ಮಾಡುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಾಣಕ್ಕೆ ಎಲ್ಲರೂ ಕಂಕಣಬದ್ದರಾಗೋಣವೆAದರು. ಈ ಸಮದರ್ಭದಲ್ಲಿ ಮಳವಳ್ಳಿ ತಂಡದ ನೂರಾರು ಸ್ವಯಂ ಸೇವಕರು,ರೈತರು,ಸಮಾಜ ಸೇವಕರು,ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಬಾಗವಹಿಸಿದ್ದರು.
    1
    ಮಳವಳ್ಳಿ:ಆಗಸ್ಟ್.15 ರಂದು ಬೃಹತ್ ರಕ್ತದಾನ ಶಿಬಿರ-ಪ್ರಚಾರ ರಥಕ್ಕೆ ವಿದ್ಯುಕ್ತ ಚಾಲನೆ
ಮಳವಳ್ಳಿ:ಆಗಸ್ಟ್.೧೫ ರಂದು ಬೃಹತ್ ರಕ್ತದಾನ ಶಿಬಿರ-ಪ್ರಚಾರ ರಥಕ್ಕೆ ವಿದ್ಯುಕ್ತ ಚಾಲನೆ
•	ರಕ್ತದಾನ ಮಹಾದಾನ-ರಕ್ತದಾನ ಮಾಡೋಣ ಜೀವ ಉಳಿಸೋಣ-ಸರ್ಕಾರಿ ವಕೀಲ ಎಂ.ಎಸ್.ಶ್ರೀಕAಠಸ್ವಾಮಿ ಕರೆ
ಮಳವಳ್ಳಿಯಲ್ಲಿ ಆಗಸ್ಟ್ ೧೫ ರಂದು ಗಡಿ ಕಾಯುವ ಯೋಧರ ಹಾಗೂ ಅನ್ನ ನೀಡುವ ರೈತರ ಸ್ಮರಣಾರ್ಥ ಯುವಕ ಮಿತ್ರರ ತಂಡ ಹಮ್ಮಿಕೊಂಡಿರುವ ಬೃಹತ್ ರಕ್ತದಾನ ಶಿಬಿರದ ಪ್ರಚಾರ ರಥಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.
ಪಟ್ಟಣದ ಇತಿಹಾಸ ಪ್ರಸಿದ್ದ ಶ್ರೀ ಗಂಗಾಧರೇಶ್ವರಸ್ವಾಮಿ ದೇವಸ್ಥಾನದ ಅವರಣದಲ್ಲಿ ಅಯೋಜಿಸಿದ್ದ ಕಾರ್ಯಕ್ರಮದಲ್ಲಿ  ತಾಲೂಕಿನ ಪ್ರತಿ ಹಳ್ಳಿ ಹಳ್ಳಿಯಲ್ಲೂ ಸಂಚಾರ ನಡೆಸಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಲು ವಿಶೇಷವಾಗಿ ಸಿದ್ದಗೊಳಿಸಿರುವ ಪ್ರಚಾರ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ  ರೈತ ಮುಖಂಡರು,ಮಳವಳ್ಳಿ ಯುವಕ ತಂಡದ ಸ್ವಯಂ ಸೇವಕರು ಬಾವುಟ ತೋರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ  ಅಪರ ಸರ್ಕಾರಿ ವಕೀಲ ಎಂ.ಎಸ್.ಶ್ರೀಕAಠಸ್ವಾಮಿ ಮಾತನಾಡಿ, ಇದೊಂದು ಮಾನವೀಯತೆಯ ನೆಲೆಯಲ್ಲಿ ನಡೆಯುತ್ತಿರುವ ಬೃಹತ್ ರಕ್ತದಾನ ಶಿಬಿರವಾಗಿದೆ.ರಕ್ತದಾನ ಮಾಡುವುದರಿಂದ ಇನ್ನೊಂದು ಜೀವ ಉಳಿಸಿದ ಪುಣ್ಯ ರಕ್ತದಾನಿಗೆ ಸಿಗಲಿದೆ,ರಕ್ತದಾನದಿಂದ ಅವರ ಅರೋಗ್ಯ ಉತ್ತಮವಾಗಲಿದೆ,ಜನರು ಯಾವುದೆ ಅತಂಕ ವಿಲ್ಲದೆ ನಿರ್ಭಿತಿಯಿಂದ ರಕ್ತದಾನ ಮಾಡುವ ಮೂಲಕ ಆ.೧೫ ರ ೨೬ ಗಮಟೆಗಳ ನಿರಂತರ ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸುವಂತೆ ಹಾಗೂ ೨೦೨೬ ಕ್ಕೂ ಹೆಚ್ಚು ಜನರು ದಾಖಲೆ ರಕ್ತದಾನ ಮಾಡುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಾಣಕ್ಕೆ ಎಲ್ಲರೂ ಕಂಕಣಬದ್ದರಾಗೋಣವೆAದರು.
ಈ ಸಮದರ್ಭದಲ್ಲಿ ಮಳವಳ್ಳಿ ತಂಡದ ನೂರಾರು ಸ್ವಯಂ ಸೇವಕರು,ರೈತರು,ಸಮಾಜ ಸೇವಕರು,ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಬಾಗವಹಿಸಿದ್ದರು.
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    Agriculture cooperative ಮಳವಳ್ಳಿ, ಮಂಡ್ಯ, ಕರ್ನಾಟಕ•
    7 hrs ago
  • ವಿದ್ಯುತ್ ಸಿಬ್ಬಂದಿಗಳ ರಕ್ಷಣೆ ಮತ್ತು ರೈತರಿಗೆ ಉತ್ತಮ ಸೇವೆ ಕೋರಿ ಚಾಮುಂಡೇಶ್ವರಿಗೆ ಪ್ರಾರ್ಥನೆ ಹನೂರು: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ - CESC ಹನೂರು ಉಪವಿಭಾಗ ಕಚೇರಿಯಲ್ಲಿ ಮಂಗಳವಾರ ಚಾಮುಂಡೇಶ್ವರಿ ಜಯಂತಿಯನ್ನು ಭಕ್ತಿಭಾವದಿಂದ ವಿಜೃಂಭಣೆಯಿಂದ ಆಚರಿಸಲಾಯಿತು. ಮಂಗಳವಾರ ಕಚೇರಿ ಆವರಣದಲ್ಲಿ ನಾಡಿನ ಅಧಿದೇವತೆ ತಾಯಿ ಶ್ರೀ ಚಾಮುಂಡೇಶ್ವರಿಯ ಭಾವಚಿತ್ರವನ್ನು ಹೂವು, ಹಣ್ಣು ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಬಿ. ರಂಗಸ್ವಾಮಿ ಅವರು ಪೂಜೆ ನೆರವೇರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಎಇಇ ರಂಗಸ್ವಾಮಿ ಮಾತನಾಡಿ ನಾಡದೇವತೆ ತಾಯಿ ಚಾಮುಂಡೇಶ್ವರಿಯ ವರ್ಧಂತ್ಯೋತ್ಸವ ಕಾರ್ಯಕ್ರಮವನ್ನು ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಕಚೇರಿಯಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ನಮ್ಮ CESC ಇಲಾಖೆಯ ಎಲ್ಲಾ ಸಿಬ್ಬಂದಿಗಳಿಗೆ ವಿದ್ಯುತ್ ಅವಘಡಗಳಾಗದಂತೆ ಕಾಪಾಡಲಿ. ಲೈನ್ ಕೆಲಸ, ಟ್ರಾನ್ಸ್‌ಫಾರ್ಮರ್ ದುರಸ್ತಿ ಮತ್ತು ರಾತ್ರಿ ವೇಳೆಯ ಸೇವೆಯಲ್ಲಿ ತೊಡಗಿರುವ ನಮ್ಮ ಫೀಲ್ಡ್ ಸಿಬ್ಬಂದಿಗಳಿಗೆ ಸುರಕ್ಷತೆ ಮತ್ತು ಆರೋಗ್ಯವನ್ನು ನೀಡಲಿ ಎಂದು ಬೇಡಿಕೊಂಡರು. ಕಾಲಕಾಲಕ್ಕೆ ಉತ್ತಮ ಮಳೆಯಾಗಿ ರೈತರ ಬೆಳೆಗಳು ಚೆನ್ನಾಗಿ ಬೆಳೆಯಲಿ. ರೈತರಿಗೆ ಕೃಷಿ ಪಂಪ್‌ಸೆಟ್‌ಗಳಿಗೆ ನಿಗದಿತ ವೇಳಾಪಟ್ಟಿಯ ಪ್ರಕಾರ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಹೊಸ ಕೃಷಿ ಸಂಪರ್ಕ, ಟ್ರಾನ್ಸ್‌ಫಾರ್ಮರ್ ದುರಸ್ತಿ ಹಾಗೂ ವಿದ್ಯುತ್ ಕಡಿತದ ಬಗ್ಗೆ ತಕ್ಷಣ ಮಾಹಿತಿ ನೀಡಲು 24x7 ದೂರು ನಿವಾರಣಾ ಕೇಂದ್ರ ಮತ್ತು 1912 ಸಹಾಯವಾಣಿ ಕಾರ್ಯನಿರ್ವಹಿಸುತ್ತಿವೆ. ರೈತರಿಗೆ ಯಾವುದೇ ವಿದ್ಯುತ್ ಸಮಸ್ಯೆ ಆಗದಂತೆ ನಮ್ಮ ಇಲಾಖೆ ನಿರಂತರವಾಗಿ ಸೇವೆ ಸಲ್ಲಿಸುತ್ತಿದೆ. ತಾಯಿಯ ಆಶೀರ್ವಾದದಿಂದ ನಾವೆಲ್ಲರೂ ಗ್ರಾಹಕರಿಗೆ, ವಿಶೇಷವಾಗಿ ರೈತರಿಗೆ ಉತ್ತಮ ಮತ್ತು ಸಮಯಕ್ಕೆ ಸರಿಯಾದ ಸೇವೆ ನೀಡುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸಿದರು. ಚಾಮುಂಡೇಶ್ವರಿ ವರ್ಧಂತ್ಯೋತ್ಸವದ ಹಿನ್ನೆಲೆಯಲ್ಲಿ ಶ್ರೀ ಚಾಮುಂಡೇಶ್ವರಿಯ ಭಾವಚಿತ್ರವನ್ನು ಪಲ್ಲಕ್ಕಿ ರಥದಲ್ಲಿ ಕುಳ್ಳಿರಿಸಿ ವಿಶೇಷವಾಗಿ ಅಲಂಕರಿಸಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ವಾದ್ಯಮೇಳಗಳ ಸದ್ದಿನೊಂದಿಗೆ ನೌಕರರು ಕುಣಿದು ಕುಪ್ಪಳಿಸಿದರು. ಪೂಜೆಯ ಬಳಿಕ ಆಗಮಿಸಿದ್ದ ಎಲ್ಲಾ ಸಿಬ್ಬಂದಿಗಳಿಗೆ ಪ್ರಸಾದ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕಿರಿಯ ಇಂಜಿನಿಯರ್‌ಗಳಾದ ಮಹದೇವಸ್ವಾಮಿ, ಎಸ್. ವೆಂಕಟೇಶಮೂರ್ತಿ, ಅಬ್ದುಲ್ ಖಯೂಮ್, ಮಹೇಶ್ ಪಿ, ನವೀನ್, ನಂಜುಂಡ, ವೀರಭದ್ರ ರವಿ,ರಘುನಂದನ್, ರಾಜು, ತಾಲ್ಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷರ ಪಾಳ್ಯ ರಾಚಪ್ಪ,ಸೇರಿದಂತೆ ಕಚೇರಿಯ ಎಲ್ಲಾ ಅಧಿಕಾರಿಗಳು, ಲೈನ್‌ಮೆನ್‌ಗಳು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
    4
    ವಿದ್ಯುತ್ ಸಿಬ್ಬಂದಿಗಳ ರಕ್ಷಣೆ ಮತ್ತು ರೈತರಿಗೆ ಉತ್ತಮ ಸೇವೆ ಕೋರಿ ಚಾಮುಂಡೇಶ್ವರಿಗೆ ಪ್ರಾರ್ಥನೆ
ಹನೂರು: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ - CESC ಹನೂರು ಉಪವಿಭಾಗ ಕಚೇರಿಯಲ್ಲಿ ಮಂಗಳವಾರ ಚಾಮುಂಡೇಶ್ವರಿ ಜಯಂತಿಯನ್ನು ಭಕ್ತಿಭಾವದಿಂದ ವಿಜೃಂಭಣೆಯಿಂದ ಆಚರಿಸಲಾಯಿತು.
ಮಂಗಳವಾರ ಕಚೇರಿ ಆವರಣದಲ್ಲಿ ನಾಡಿನ ಅಧಿದೇವತೆ ತಾಯಿ ಶ್ರೀ ಚಾಮುಂಡೇಶ್ವರಿಯ ಭಾವಚಿತ್ರವನ್ನು ಹೂವು, ಹಣ್ಣು ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಬಿ. ರಂಗಸ್ವಾಮಿ ಅವರು ಪೂಜೆ ನೆರವೇರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಎಇಇ ರಂಗಸ್ವಾಮಿ ಮಾತನಾಡಿ  ನಾಡದೇವತೆ ತಾಯಿ ಚಾಮುಂಡೇಶ್ವರಿಯ ವರ್ಧಂತ್ಯೋತ್ಸವ ಕಾರ್ಯಕ್ರಮವನ್ನು ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಕಚೇರಿಯಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ನಮ್ಮ CESC ಇಲಾಖೆಯ ಎಲ್ಲಾ ಸಿಬ್ಬಂದಿಗಳಿಗೆ ವಿದ್ಯುತ್ ಅವಘಡಗಳಾಗದಂತೆ ಕಾಪಾಡಲಿ. ಲೈನ್ ಕೆಲಸ, ಟ್ರಾನ್ಸ್‌ಫಾರ್ಮರ್ ದುರಸ್ತಿ ಮತ್ತು ರಾತ್ರಿ ವೇಳೆಯ ಸೇವೆಯಲ್ಲಿ ತೊಡಗಿರುವ ನಮ್ಮ ಫೀಲ್ಡ್ ಸಿಬ್ಬಂದಿಗಳಿಗೆ ಸುರಕ್ಷತೆ ಮತ್ತು ಆರೋಗ್ಯವನ್ನು ನೀಡಲಿ ಎಂದು ಬೇಡಿಕೊಂಡರು.
ಕಾಲಕಾಲಕ್ಕೆ ಉತ್ತಮ ಮಳೆಯಾಗಿ ರೈತರ ಬೆಳೆಗಳು ಚೆನ್ನಾಗಿ ಬೆಳೆಯಲಿ. ರೈತರಿಗೆ ಕೃಷಿ ಪಂಪ್‌ಸೆಟ್‌ಗಳಿಗೆ ನಿಗದಿತ ವೇಳಾಪಟ್ಟಿಯ ಪ್ರಕಾರ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಹೊಸ ಕೃಷಿ ಸಂಪರ್ಕ, ಟ್ರಾನ್ಸ್‌ಫಾರ್ಮರ್ ದುರಸ್ತಿ ಹಾಗೂ ವಿದ್ಯುತ್ ಕಡಿತದ ಬಗ್ಗೆ ತಕ್ಷಣ ಮಾಹಿತಿ ನೀಡಲು 24x7 ದೂರು ನಿವಾರಣಾ ಕೇಂದ್ರ ಮತ್ತು 1912 ಸಹಾಯವಾಣಿ ಕಾರ್ಯನಿರ್ವಹಿಸುತ್ತಿವೆ. ರೈತರಿಗೆ ಯಾವುದೇ ವಿದ್ಯುತ್ ಸಮಸ್ಯೆ ಆಗದಂತೆ ನಮ್ಮ ಇಲಾಖೆ ನಿರಂತರವಾಗಿ ಸೇವೆ ಸಲ್ಲಿಸುತ್ತಿದೆ. ತಾಯಿಯ ಆಶೀರ್ವಾದದಿಂದ ನಾವೆಲ್ಲರೂ ಗ್ರಾಹಕರಿಗೆ, ವಿಶೇಷವಾಗಿ ರೈತರಿಗೆ ಉತ್ತಮ ಮತ್ತು ಸಮಯಕ್ಕೆ ಸರಿಯಾದ ಸೇವೆ ನೀಡುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸಿದರು.
ಚಾಮುಂಡೇಶ್ವರಿ ವರ್ಧಂತ್ಯೋತ್ಸವದ ಹಿನ್ನೆಲೆಯಲ್ಲಿ ಶ್ರೀ ಚಾಮುಂಡೇಶ್ವರಿಯ ಭಾವಚಿತ್ರವನ್ನು ಪಲ್ಲಕ್ಕಿ ರಥದಲ್ಲಿ ಕುಳ್ಳಿರಿಸಿ ವಿಶೇಷವಾಗಿ ಅಲಂಕರಿಸಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ವಾದ್ಯಮೇಳಗಳ ಸದ್ದಿನೊಂದಿಗೆ ನೌಕರರು ಕುಣಿದು ಕುಪ್ಪಳಿಸಿದರು.
ಪೂಜೆಯ ಬಳಿಕ ಆಗಮಿಸಿದ್ದ ಎಲ್ಲಾ ಸಿಬ್ಬಂದಿಗಳಿಗೆ ಪ್ರಸಾದ ವಿತರಿಸಲಾಯಿತು. 
ಕಾರ್ಯಕ್ರಮದಲ್ಲಿ ಕಿರಿಯ ಇಂಜಿನಿಯರ್‌ಗಳಾದ ಮಹದೇವಸ್ವಾಮಿ, ಎಸ್. ವೆಂಕಟೇಶಮೂರ್ತಿ, ಅಬ್ದುಲ್ ಖಯೂಮ್, ಮಹೇಶ್ ಪಿ, ನವೀನ್, ನಂಜುಂಡ, ವೀರಭದ್ರ ರವಿ,ರಘುನಂದನ್, ರಾಜು, ತಾಲ್ಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷರ ಪಾಳ್ಯ ರಾಚಪ್ಪ,ಸೇರಿದಂತೆ ಕಚೇರಿಯ ಎಲ್ಲಾ ಅಧಿಕಾರಿಗಳು, ಲೈನ್‌ಮೆನ್‌ಗಳು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
    user_Vijay kumar
    Vijay kumar
    ಹನೂರು, ಚಾಮರಾಜನಗರ, ಕರ್ನಾಟಕ•
    8 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.