Shuru
Apke Nagar Ki App…
ವಿನಾಶತಾರಿ ಅಸ್ತ್ರಗಳು ದೇಶಕ್ಕೆ ಮಾರಕ
Onlinetv24x7
ವಿನಾಶತಾರಿ ಅಸ್ತ್ರಗಳು ದೇಶಕ್ಕೆ ಮಾರಕ
More news from ಕರ್ನಾಟಕ and nearby areas
- ವಿನಾಶತಾರಿ ಅಸ್ತ್ರಗಳು ದೇಶಕ್ಕೆ ಮಾರಕ1
- ಶಿಗ್ಗಾವಿ : ಶರಣರ ಸದ್ಗುಣಗಳು ಮನುಕುಲಕ್ಕೆ ಮಾರ್ಗದರ್ಶಿಯಾಗಿದ್ದು, ಅದರಿಂದ ಸದೃಢ ಸಮಾಜ ನಿರ್ಮಾಣವಾಗಲು ಸಾಧ್ಯವಾಗಿದೆ. ಹೀಗಾಗಿ ಶರಣರು ನುಡಿದಂತೆ ನಡೆದು ತೋರಿದ್ದಾರೆ ಆದ್ದರಿಂದ ಇಂತಹ ಶರಣ ಸಂಸ್ಕೃತಿ ಉತ್ಸವಗಳಲ್ಲಿ ಭಾಗವಹಿಸಿ ಅವರ ಮಾರ್ಗದಲ್ಲಿ ನಡೆಯಬೇಕು ಎಂದು ಹಾವೇರಿ ಹೊಸಮಠದ ಬಸವಲಿಂಗ ಸ್ವಾಮೀಜಿ ಹೇಳಿದರು. ಪಟ್ಟಣದ ವಿರಕ್ತಮಠದಲ್ಲಿ ಲಿಂಗೈಕ್ಯ ಸಂಗನಬಸವ ಸ್ವಾಮೀಜಿ ಹಾಗೂ ಲಿಂಗೈಕ್ಯ ಬಸವಲಿಂಗ ಸ್ವಾಮೀಜಿಗಳ ಪುಣ್ಯಾರಾಧನೆ ಅಂಗವಾಗಿ ನಡೆದ “33ನೇ ಶರಣ ಸಂಸ್ಕೃತಿ ಉತ್ಸವ-2026” ಮತ್ತು ಪಟ್ಟರಾಜ ಕವಿಗವಾಯಿಗಳ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಿಪಂ ಮಾಜಿ ಅಧ್ಯಕ್ಷ ಮಲ್ಲೇಶಪ್ಪ ಹರಿಜನ ಮಾತನಾಡಿ, ಶರಣು ಸಂಸ್ಕೃತಿಯಿಂದ ನಾಡಿನ ವಿವಿಧ ರಂಗದಲ್ಲಿ ಸಾಕಷ್ಟು ಬದಲಾವಣೆ ಕಂಡಿದೆ. ಆದರು ಅಧುನಿಕತೆ ಅಬ್ಬರದಲ್ಲಿ ವಿದೇಶಿ ಶಿಕ್ಷಣದ ಪ್ರಭಾವಕ್ಕೆ ಒಳಗಾಗಿ ಮೂಲ ಸಂಸ್ಕಾರಗಳನ್ನು ಮರೆಯುತ್ತಿದ್ದಾರೆ. ಅಂತಹ ಸಂದರ್ಭದಲ್ಲಿ ಶರಣ ಸಂಸ್ಕೃತಿ ಉತ್ಸವದ ಮೂಲಕ ಸಮಾಜಮುಖಿ ಕಾರ್ಯಗಳು ನಡೆಯುತ್ತಿವೆ. ಬದುಕು ಅರಿತು ನಡೆಯುವ ಕಡೆ ಮಾರ್ಗದರ್ಶಿಯಾಗಿದೆ ಎಂದರು. ಗದಗ ವೀರೇಶ್ವರ ಪುಣ್ಯಾಶ್ರಮದ ಪ್ರವಚನಕಾರ ಕುಮಾರಶಾಸ್ತ್ರಿ ವೆಂಕಟಾಪುರಮಠ ಅವರು " ಪುಟ್ಟರಾಜ ಕವಿ ಗವಾಯಿಗಳ ಜೀವನ ಚರಿತ್ರೆ " ಕುರಿತು ಮಾತನಾಡಿ, ಬಾಲ್ಯದ ಕಣ್ಣು ಕಳೆದು ಕಳೆದುಕೊಂಡ ಪುಟ್ಟರಾಜರು ಮುಂದೆ ಈಡೀ ನಾಡಿಗೆ ಬೆಳಕಾಗಿ ನಿಂತರು. ಸಮಾಜ ಸೇವಾ ಕಾರ್ಯದಲ್ಲಿ ನಿರತರಾದರು. ಸಂಗೀತ, ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದರು. ಶಿಕ್ಷಣ ಮತ್ತು ದಾಸೋಹಕ್ಕೆ ಮಹತ್ವ ನೀಡಿದ್ದಾರೆ ಎಂದರು. ಗುತ್ತಿಗೆದಾರ ಅರ್ಜುನ ಹಂಚಿನಮನಿ ಮಾತನಾಡಿ, ಗುರಿ ಇರಬೇಕು ಹಿಂದೆ ಗುರು ಇರಬೇಕು, ಮಠದಲ್ಲಿ ಶಕ್ತಿ ಇದೆ, ಭಕ್ತಿಯಿದ್ದಲೇ ಯಶಸ್ಸು ಇದೆ, ತಾಯಿ ಮಡಿಲು ತಂದೆ ಹೆಗಲು ಸ್ವರ್ಗಕ್ಕಿಂತ ಹೆಚ್ಚು, ತಂದೆ ತಾಯಿಗಿಂತ ದೊಡ್ಡವರಿಲ್ಲ, ಗೌರವದಿಂದ ಬಾಳಬೇಕಿದೆ ಎಂದರು. ವಿರಕ್ತಮಠದ ಬಸವಲಿಂಗ ದೇವರು ಹಾಗೂ ಸಾಹಿತಿ ಶಿವಾನಂದ ಮ್ಯಾಗೇರಿ ಮಾತನಾಡಿದರು, ವಿರಕ್ತಮಠದ ಸಂಗನಬಸವ ಮಹಾಸ್ವಾಮೀಗಳು ನೇತೃತ್ವ ವಹಿಸಿದ್ದರು, ಗುತ್ತಿಗೆದಾರ ಮಂಜುನಾಥ ಕಾರಡಗಿ, ಪಿಂಜಾರ ಸಮಾಜದ ಅದ್ಯಕ್ಷ ಶರೀಫ ನದಾಫ, ಮೌಲಾಸಾಬ ತಹಶೀಲ್ದಾರ, ಚಂದ್ರು ಕೊತಂಬ್ರಿ, ದೇವಪ್ಪ ಸೊರಟೂರ, ಪತ್ರಕರ್ತ ಸದಾಶಿವ ಹಿರೇಮಠ ಸೇರಿದಂತೆ ಪಂಡಿತ್ ಪಟ್ಟರಾಜ ಕವಿಗವಾಯಿಗಳ ಕಲಾ ಸಂಸ್ಥೆಯ ಸದಸ್ಯರು, ಸಮಿತಿ ಸದಸ್ಯರು ಇದ್ದರು, ಕಾರ್ಯಕ್ರಮದಲ್ಲಿ ಧರ್ಮಕಾರ್ಯದ ಹಾಗೂ ಪ್ರಸಾದ ಸೇವೆಯ ದಾನಿಗಳನ್ನ ಸನ್ಮಾನಿಸಲಾಯಿತು, ಪ್ರೋ. ಶಶಿಕಾಂತ ರಾಠೋಡ ಕಾರ್ಯಕ್ರಮ ನಿರ್ವಹಿಸಿದರು, ಶಸಾಪ ಅದ್ಯಕ್ಷ ಸಿ ಡಿ ಯತ್ನಳ್ಳಿ ಸ್ವಾಗತಿಸಿದರು4
- ಹಾವೇರಿ ತಾಲೂಕಿನ ನೆಗಳೂರ ಗ್ರಾಮದಲ್ಲಿ ಬುಧವಾರ ಸಂಭ್ರಮ ಸಡಗರದಿಂದ ಹೋಳಿ ಹಬ್ಬ ಆಚರಣೆಗೆ ಚಾಲನೆ ನೀಡಲಾಯಿತು. ಬೆಳಗಿನ ಜಾವ ಗ್ರಾಮದ ಆಂಜನೇಯ ದೇವಾಲಯದ ಮುಂಭಾಗದಲ್ಲಿ ಗ್ರಾಮಸ್ಥರು ಕಾಮದಹನ ಮಾಡುವುದರ ಮೂಲಕ ಹಬ್ಬಕ್ಕೆ ಚಾಲನೆ ನೀಡಿದರು. ಇನ್ನೂ ಕಾಮದಹನ ಅಗ್ನಿಯ ಕೆಂಡವನ್ನು ಮನೆಗೆ ತಂದು ಕಡಲೆಕಾಳುಗಳನ್ನು ಅದರಲ್ಲಿ ಹುರಿದುಕೊಂಡು ತಿನ್ನುವುದು ಸಂಪ್ರದಾಯವಿದೆ. ಇನ್ನೂ ರೖತಾಪಿ ವರ್ಗದವರು ಕುಸುಬಿ ಗಿಡವನ್ನು ಸುಟ್ಟು ಮನೆಯಲ್ಲಿ ಕಟ್ಟುವರು ಇದರಿಂದ ಮನೆಗೆ ಹಾಗೂ ಪಶುಗಳಿಗೆ ಯಾವದೇ ತರಹದ ದೃಷ್ಟಿ ಹಾಗೂ ಅನಾರೋಗ್ಯದ ಸಮಸ್ಯೆಗಳು ಆಗದು ಎಂಬ ನಂಬಿಕೆಯಿದೆ. ಗ್ರಾಮದ ಕಾಮನಕಟ್ಟೆ ಎಂಬಲ್ಲಿ ಶತಮಾನಗಳಿಂದ ರತಿಮನ್ಮಥರ ಪ್ರತಿಷ್ಠಾಪನೆ ಮಾಡುತ್ತಾ ಬಂದಿದ್ದು. ನಂತರ ಬಂಡಿ ಉತ್ಸವದ ಮೂಲಕ ರತಿಮನ್ಮಥರ ಮೇರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕಾಮನಕಟ್ಟೆಗೆ ತಲುಪಿ ಕಾಮದಹನ ಮಾಡಲಾಗುತ್ತದೆ. ಕಾಮದಹನ ವೇಳೆ ಕಾಮನ ಭಾವಚಿತ್ರದ ಕಾಗದಕ್ಕೆ ಆಗ್ನಿ ಸ್ಪರ್ಶ ಮಾಡಿದಾಗ ಅದು ಯಾವ ದಿಕ್ಕಿನ ಕಡೆಗೆ ಕಾಗದ ತುಂಡು ಬೀಳುತ್ತೂ ಆಕಡೆಗೆ ಹೆಚ್ಚು ಮಳೆ ಬೆಳೆ ಸಮೃದ್ಧಿ ಯಾಗುವುದು ಎಂಬದು ರೖತಾಪಿವರ್ಗದ ನಂಬುಗೆಯಾಗಿದೆ. ಒಟ್ಟಾರೆಯಾಗಿ ನೆಗಳೂರಿನಲ್ಲಿ ಹೋಳಿ ಹಬ್ಬ ಸಂಭ್ರಮವೂ ಮನೆ ಮನೆಗಳಲ್ಲಿ ತುಂಬಿದೆ. ಇನ್ನೂ ಮನೆಗಳಲ್ಲಿ ಹಬ್ಬದ ನಿಮಿತ್ಯ ಸಿಹಿ ಖಾದ್ಯಗಳ ತಯಾರಿಯಲ್ಲಿ ಮಹಿಳೆಯರು ಮಗ್ನರಾಗಿದ್ದಾರೆ.10
- ಬಾಗಲಕೋಟೆಯಲ್ಲಿ ಅಮಾಯಕ ಹಿಂದೂ ಕಾರ್ಯಕರ್ತರನ್ನು ಬಂಧಿಸಿದರೆ ಬಾಗಲಕೋಟ ಪ್ರವೇಶ ಮಾಡಬೇಕಾಗುತ್ತದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ ನಿಮ್ಮ ಪ್ರದೇಶದ ಎಲ್ಲಾ ವೈರಲ್ ವೀಡಿಯೋಗಳಿಗಾಗಿ ಶುರು ಆಪ್ (Shuru App) ಡೌನ್ಲೋಡ್ ಮಾಡಿ1
- Post by Sharanugouda Patil1
- ಇಳಕಲ್ ತಾಲೂಕಿನ ಹಿರೇ ಓತಗೇರಿ ಗ್ರಾಮದಲ್ಲಿ ಗೋರಬಾಳ ಗ್ರಾಮದಿಂದ ಆಗಮಿಸಿದ ಶ್ರೀಶೈಲ ಮಲ್ಲಯ್ಯನ ಕಂಬಿಗೆ, ಭಕ್ತಾದಿಗಳಿಗೆ ಭಕ್ತಿ ಭಾವದಿಂದ ಸ್ವಾಗತಿಸಿದರು. ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನ ದೇವಸ್ಥಾನದಲ್ಲಿ ಮಲ್ಲಯ್ಯನ ಕಂಬಿಗೆ ಗ್ರಾಮಸ್ಥರಿಂದ ವಿಶೇಷ ಪೂಜೆ ಸಲ್ಲಿಸಿದರು. ನಂತರ ಗ್ರಾಮಸ್ಥರಿಂದ ಮಲ್ಲಯ್ಯನ ಪಾದಯಾತ್ರೆಗಳಿಗೆ, ಹಣ್ಣುಗಳನ್ನು ಪಾನಕಗಳನ್ನು ನೀಡಿ ಭಕ್ತಿ ಮೆರೆದರು. ವರದಿಗಾರರು; ಶರಣಗೌಡ ಕಂದಕೂರ2
- ಗುಳೇದಗುಡ್ಡ: ಹೋಳಿ ಹಬ್ಬದ ಅಂಗವಾಗಿ ಬುಧವಾರ ಗುಳೇದಗುಡ್ಡ ಪಟ್ಟಣದಲ್ಲಿ ಯುವಕರು, ಮಹಿಳೆಯರು, ಮಕ್ಕಳ ಸೇರಿದಂತೆ ಒಬ್ಬರಿಗೊಬ್ಬರು ಪರಸ್ಪರ ಬಣ್ಣ ಎರಚುವ ಮೂಲಕ ಸಂಭ್ರಮದಿಂದ ಬಣ್ಣದೋಕುಳಿ ಆಚರಿಸಿ,ಬಣ್ಣದಲ್ಲಿ ಮಿಂದೆದ್ದು ಕುಣಿದು ಕುಪ್ಪಳಿಸಿದರು.1
- ತುಮಕೂರು ಎಪಿಎಂಸಿ ರೋಗದ ಕೇಂದ್ರವಾಗಿದೆ ಕಾರ್ಯದರ್ಶಿ ನಿರ್ಲಕ್ಷಕ್ಕೆ ತಲೆ ತಂಡ ಯಾವಾಗ ಸಚಿವರೆ?1