logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಕೊಪ್ಪಳದ ಜಿಲ್ಲಾ ಆಡಳಿತದ ಮುಂಭಾಗದಲ್ಲಿ ರೈತ ಸಂಘಟನೆ ನೇತೃತ್ವದಲ್ಲಿ ಬೃಹತ್ ಚಳುವಳಿ ನಡೆಯಿತು. ಕೃಷಿ ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಿ ವಿದ್ಯುತ್ ಖಾಸಗೀಕರಣದ ಹುನ್ನಾರ ಮಾಡುತ್ತಿರುವುದರ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ, ಬಲ್ಡಟ್ ಕಂಪನಿ ಕೈಯಿಂದ ಬಸಾಪುರ ಕೆರೆ ವಿಮುಕ್ತಿಗಾಗಿ ಪ್ರತಿಭಟನೆ ನಡೆಸಲಾಯಿತು. ಈ ಚಳುವಳಿಯಲ್ಲಿ ಪಾಲ್ಗೊಂಡಿದ್ದ ಲಕ್ಷ್ಮಣ ಹೂಗಾರ ಅವರು ಮಾತನಾಡಿ, ಸರ್ಕಾರವು ವಿದ್ಯುತ್ ಖಾಸಗೀಕರಣವನ್ನು ಕೈಬಿಡಬೇಕು, ಜಿಲ್ಲೆಯನ್ನು ಬರಗಾಲ ಜಿಲ್ಲೆಯೆಂದು ಘೋಷಿಸಬೇಕು, ರಸಗೊಬ್ಬರದ ಅಭಾವವನ್ನು ತಡೆಗಟ್ಟಿ, ಕೃತಕ ಅಭಾವ ಸೃಷ್ಟಿಸುವ ಕಾಳದಂಧೆಕೋರರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಬಲ್ಡೋಟ ಕೆರೆಯನ್ನು ಜನ ಹಾಗೂ ಜಾನುವಾರುಗಳಿಗೆ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿದರು. ಈ ಎಲ್ಲಾ ಬೇಡಿಕೆಗಳನ್ನು ಸರ್ಕಾರ ತಕ್ಷಣವೇ ಈಡೇರಿಸಬೇಕೆಂದು ಅವರು ಆಗ್ರಹಿಸಿದರು. ರೈತರ ತಂಟೆಗೆ ಬಂದರೆ ಹುಷಾರ್ ಎಂದು ಎಚ್ಚರಿಸಿದ ಅವರು, ಸರ್ಕಾರವು ಈ ಬೇಡಿಕೆಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.

2 hrs ago
user_H M ಹರಕುಣಿ
H M ಹರಕುಣಿ
Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
2 hrs ago

ಕೊಪ್ಪಳದ ಜಿಲ್ಲಾ ಆಡಳಿತದ ಮುಂಭಾಗದಲ್ಲಿ ರೈತ ಸಂಘಟನೆ ನೇತೃತ್ವದಲ್ಲಿ ಬೃಹತ್ ಚಳುವಳಿ ನಡೆಯಿತು. ಕೃಷಿ ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಿ ವಿದ್ಯುತ್ ಖಾಸಗೀಕರಣದ ಹುನ್ನಾರ ಮಾಡುತ್ತಿರುವುದರ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ, ಬಲ್ಡಟ್ ಕಂಪನಿ ಕೈಯಿಂದ ಬಸಾಪುರ ಕೆರೆ ವಿಮುಕ್ತಿಗಾಗಿ ಪ್ರತಿಭಟನೆ ನಡೆಸಲಾಯಿತು. ಈ ಚಳುವಳಿಯಲ್ಲಿ ಪಾಲ್ಗೊಂಡಿದ್ದ ಲಕ್ಷ್ಮಣ ಹೂಗಾರ ಅವರು ಮಾತನಾಡಿ, ಸರ್ಕಾರವು ವಿದ್ಯುತ್ ಖಾಸಗೀಕರಣವನ್ನು ಕೈಬಿಡಬೇಕು, ಜಿಲ್ಲೆಯನ್ನು ಬರಗಾಲ ಜಿಲ್ಲೆಯೆಂದು ಘೋಷಿಸಬೇಕು, ರಸಗೊಬ್ಬರದ ಅಭಾವವನ್ನು ತಡೆಗಟ್ಟಿ, ಕೃತಕ ಅಭಾವ ಸೃಷ್ಟಿಸುವ ಕಾಳದಂಧೆಕೋರರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಬಲ್ಡೋಟ ಕೆರೆಯನ್ನು ಜನ ಹಾಗೂ ಜಾನುವಾರುಗಳಿಗೆ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿದರು. ಈ ಎಲ್ಲಾ ಬೇಡಿಕೆಗಳನ್ನು ಸರ್ಕಾರ ತಕ್ಷಣವೇ ಈಡೇರಿಸಬೇಕೆಂದು ಅವರು ಆಗ್ರಹಿಸಿದರು. ರೈತರ ತಂಟೆಗೆ ಬಂದರೆ ಹುಷಾರ್ ಎಂದು ಎಚ್ಚರಿಸಿದ ಅವರು, ಸರ್ಕಾರವು ಈ ಬೇಡಿಕೆಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.

More news from ಕರ್ನಾಟಕ and nearby areas
  • ಕೊಪ್ಪಳದ ಜಿಲ್ಲಾ ಆಡಳಿತದ ಮುಂಭಾಗದಲ್ಲಿ ರೈತ ಸಂಘಟನೆ ನೇತೃತ್ವದಲ್ಲಿ ಬೃಹತ್ ಚಳುವಳಿ ನಡೆಯಿತು. ಕೃಷಿ ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಿ ವಿದ್ಯುತ್ ಖಾಸಗೀಕರಣದ ಹುನ್ನಾರ ಮಾಡುತ್ತಿರುವುದರ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ, ಬಲ್ಡಟ್ ಕಂಪನಿ ಕೈಯಿಂದ ಬಸಾಪುರ ಕೆರೆ ವಿಮುಕ್ತಿಗಾಗಿ ಪ್ರತಿಭಟನೆ ನಡೆಸಲಾಯಿತು. ಈ ಚಳುವಳಿಯಲ್ಲಿ ಪಾಲ್ಗೊಂಡಿದ್ದ ಲಕ್ಷ್ಮಣ ಹೂಗಾರ ಅವರು ಮಾತನಾಡಿ, ಸರ್ಕಾರವು ವಿದ್ಯುತ್ ಖಾಸಗೀಕರಣವನ್ನು ಕೈಬಿಡಬೇಕು, ಜಿಲ್ಲೆಯನ್ನು ಬರಗಾಲ ಜಿಲ್ಲೆಯೆಂದು ಘೋಷಿಸಬೇಕು, ರಸಗೊಬ್ಬರದ ಅಭಾವವನ್ನು ತಡೆಗಟ್ಟಿ, ಕೃತಕ ಅಭಾವ ಸೃಷ್ಟಿಸುವ ಕಾಳದಂಧೆಕೋರರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಬಲ್ಡೋಟ ಕೆರೆಯನ್ನು ಜನ ಹಾಗೂ ಜಾನುವಾರುಗಳಿಗೆ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿದರು. ಈ ಎಲ್ಲಾ ಬೇಡಿಕೆಗಳನ್ನು ಸರ್ಕಾರ ತಕ್ಷಣವೇ ಈಡೇರಿಸಬೇಕೆಂದು ಅವರು ಆಗ್ರಹಿಸಿದರು. ರೈತರ ತಂಟೆಗೆ ಬಂದರೆ ಹುಷಾರ್ ಎಂದು ಎಚ್ಚರಿಸಿದ ಅವರು, ಸರ್ಕಾರವು ಈ ಬೇಡಿಕೆಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.
    1
    ಕೊಪ್ಪಳದ ಜಿಲ್ಲಾ ಆಡಳಿತದ ಮುಂಭಾಗದಲ್ಲಿ ರೈತ ಸಂಘಟನೆ ನೇತೃತ್ವದಲ್ಲಿ ಬೃಹತ್ ಚಳುವಳಿ ನಡೆಯಿತು. ಕೃಷಿ ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಿ ವಿದ್ಯುತ್ ಖಾಸಗೀಕರಣದ ಹುನ್ನಾರ ಮಾಡುತ್ತಿರುವುದರ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ, ಬಲ್ಡಟ್ ಕಂಪನಿ ಕೈಯಿಂದ ಬಸಾಪುರ ಕೆರೆ ವಿಮುಕ್ತಿಗಾಗಿ ಪ್ರತಿಭಟನೆ ನಡೆಸಲಾಯಿತು.

ಈ ಚಳುವಳಿಯಲ್ಲಿ ಪಾಲ್ಗೊಂಡಿದ್ದ ಲಕ್ಷ್ಮಣ ಹೂಗಾರ ಅವರು ಮಾತನಾಡಿ, ಸರ್ಕಾರವು ವಿದ್ಯುತ್ ಖಾಸಗೀಕರಣವನ್ನು ಕೈಬಿಡಬೇಕು, ಜಿಲ್ಲೆಯನ್ನು ಬರಗಾಲ ಜಿಲ್ಲೆಯೆಂದು ಘೋಷಿಸಬೇಕು, ರಸಗೊಬ್ಬರದ ಅಭಾವವನ್ನು ತಡೆಗಟ್ಟಿ, ಕೃತಕ ಅಭಾವ ಸೃಷ್ಟಿಸುವ ಕಾಳದಂಧೆಕೋರರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಬಲ್ಡೋಟ ಕೆರೆಯನ್ನು ಜನ ಹಾಗೂ ಜಾನುವಾರುಗಳಿಗೆ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿದರು. ಈ ಎಲ್ಲಾ ಬೇಡಿಕೆಗಳನ್ನು ಸರ್ಕಾರ ತಕ್ಷಣವೇ ಈಡೇರಿಸಬೇಕೆಂದು ಅವರು ಆಗ್ರಹಿಸಿದರು.

ರೈತರ ತಂಟೆಗೆ ಬಂದರೆ ಹುಷಾರ್ ಎಂದು ಎಚ್ಚರಿಸಿದ ಅವರು, ಸರ್ಕಾರವು ಈ ಬೇಡಿಕೆಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.
    user_H M ಹರಕುಣಿ
    H M ಹರಕುಣಿ
    Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
    2 hrs ago
  • ಎ.ಐ.ಡಿ.ಎಸ್.ಓ ಮತ್ತು ಎ.ಐ.ಡಿ.ವಾಯ್.ಓ ಸಂಘಟನೆಗಳ ಸದಸ್ಯರು ಧಾರವಾಡ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು, ಖಾಲಿಯಿರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವಂತೆ ಆಗ್ರಹಿಸಿದ್ದಾರೆ. ಸರ್ಕಾರ ತಕ್ಷಣವೇ ನೇಮಕಾತಿ ಅಧಿಸೂಚನೆಗಳನ್ನು ಹೊರಡಿಸಬೇಕು ಹಾಗೂ ಪರೀಕ್ಷಾ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಮತ್ತು ತ್ವರಿತವಾಗಿ ನಡೆಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಅಲ್ಲದೆ, ಎಲ್ಲಾ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯ ಕ್ಯಾಲೆಂಡರ್ ಬಿಡುಗಡೆಗೊಳಿಸಲು, ಕೆ.ಪಿ.ಎಸ್‌.ಸಿ ಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು, ಸರ್ವರ್ ಸಮಸ್ಯೆ ಹಾಗೂ ಇನ್ನಿತರ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕದ ಗಡುವನ್ನು ವಿಸ್ತರಿಸಲು ಸಂಘಟನೆಗಳು ಬೇಡಿಕೆ ಇಟ್ಟಿವೆ. ಈ ಪ್ರತಿಭಟನೆಯಲ್ಲಿ ಎ.ಐ.ಡಿ.ವೈ.ಓ ಜಿಲ್ಲಾಧ್ಯಕ್ಷ ಭವಾನಿ ಶಂಕರ್ ಗೌಡ, ಎ.ಐ.ಡಿ‌.ವೈ.ಓ ಜಿಲ್ಲಾ ಸಂಘಟನಾಕಾರ ಯಲ್ಲಪ್ಪ ದೊರೆ, ಅಮೃತ್ ಕೊಂಡಿಕೊಪ್ಪ, ಪುನೀತ್ ಹೊನ್ನಣ್ಣವರ, ಮಲ್ಲೇಶ್ ಚೌಹಾಣ್, ಸಿದ್ದರಾಮ ಬಿಜ್ಜರಗಿ ಮತ್ತು ನೌಮನ್ ನದಾಫ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
    1
    ಎ.ಐ.ಡಿ.ಎಸ್.ಓ ಮತ್ತು ಎ.ಐ.ಡಿ.ವಾಯ್.ಓ ಸಂಘಟನೆಗಳ ಸದಸ್ಯರು ಧಾರವಾಡ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು, ಖಾಲಿಯಿರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವಂತೆ ಆಗ್ರಹಿಸಿದ್ದಾರೆ. ಸರ್ಕಾರ ತಕ್ಷಣವೇ ನೇಮಕಾತಿ ಅಧಿಸೂಚನೆಗಳನ್ನು ಹೊರಡಿಸಬೇಕು ಹಾಗೂ ಪರೀಕ್ಷಾ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಮತ್ತು ತ್ವರಿತವಾಗಿ ನಡೆಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಅಲ್ಲದೆ, ಎಲ್ಲಾ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯ ಕ್ಯಾಲೆಂಡರ್ ಬಿಡುಗಡೆಗೊಳಿಸಲು, ಕೆ.ಪಿ.ಎಸ್‌.ಸಿ ಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು, ಸರ್ವರ್ ಸಮಸ್ಯೆ ಹಾಗೂ ಇನ್ನಿತರ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕದ ಗಡುವನ್ನು ವಿಸ್ತರಿಸಲು ಸಂಘಟನೆಗಳು ಬೇಡಿಕೆ ಇಟ್ಟಿವೆ.

ಈ ಪ್ರತಿಭಟನೆಯಲ್ಲಿ ಎ.ಐ.ಡಿ.ವೈ.ಓ ಜಿಲ್ಲಾಧ್ಯಕ್ಷ ಭವಾನಿ ಶಂಕರ್ ಗೌಡ, ಎ.ಐ.ಡಿ‌.ವೈ.ಓ ಜಿಲ್ಲಾ ಸಂಘಟನಾಕಾರ ಯಲ್ಲಪ್ಪ ದೊರೆ, ಅಮೃತ್ ಕೊಂಡಿಕೊಪ್ಪ, ಪುನೀತ್ ಹೊನ್ನಣ್ಣವರ, ಮಲ್ಲೇಶ್ ಚೌಹಾಣ್, ಸಿದ್ದರಾಮ ಬಿಜ್ಜರಗಿ ಮತ್ತು ನೌಮನ್ ನದಾಫ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
    user_Manjunath kavali
    Manjunath kavali
    Local News Reporter ಧಾರವಾಡ, ಧಾರವಾಡ, ಕರ್ನಾಟಕ•
    1 hr ago
  • ಹುಬ್ಬಳ್ಳಿಯ ಕೆಎಂಸಿಆರ್‌ಐ (ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ) ಆಸ್ಪತ್ರೆಯಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರು ಹಾಗೂ ಆಯಾಗಳಿಗೆ ಖಾಸಗಿ ಏಜೆನ್ಸಿಯಿಂದ ಪ್ರತಿ ತಿಂಗಳು ಸಕಾಲಕ್ಕೆ ವೇತನ ಪಾವತಿಯಾಗದೇ ತೀವ್ರ ತೊಂದರೆಯಾಗುತ್ತಿದೆ ಎಂದು ಅಂಬೇಡ್ಕರ್ ಸ್ವಾಭಿಮಾನ ದಲಿತ ರಾಜ್ಯ ಸಂಘರ್ಷ ಸಮಿತಿಯು ಆಸ್ಪತ್ರೆಯ ನಿರ್ದೇಶಕ ಡಾ. ಎನ್.ಎಫ್. ಕಮ್ಮಾರ ಅವರಿಗೆ ಮನವಿ ಸಲ್ಲಿಸಿದೆ. ವೇತನ ವಿಳಂಬದಿಂದ ಈ ಕಾರ್ಮಿಕರ ಕುಟುಂಬದ ಉಪಜೀವನ ಹಾಗೂ ಮಕ್ಕಳ ಶಿಕ್ಷಣಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ಸಂಘಟನೆ ಆರೋಪಿಸಿದೆ. ಮನವಿ ಸಲ್ಲಿಸಿ ಮಾತನಾಡಿದ ಸಂಘಟನೆಯ ರಾಜ್ಯಾಧ್ಯಕ್ಷ ಚಂದ್ರಶೇಖರ ಯಾತಗೇರಿ, ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರು ಮತ್ತು ಆಯಾಗಳು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗ, ನವದೆಹಲಿ ಹಾಗೂ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ನಿಗಮದ ವ್ಯಾಪ್ತಿಗೆ ಒಳಪಡುವ ಕಾರ್ಮಿಕರಾಗಿದ್ದಾರೆ ಎಂದು ತಿಳಿಸಿದರು. ಸಾಮಾಜಿಕ ನ್ಯಾಯದ ಅಡಿಯಲ್ಲಿ ರಾಜ್ಯ ಸರ್ಕಾರವು ಅವರಿಗೆ ಪೌರಕಾರ್ಮಿಕರ ಸ್ಥಾನಮಾನ ನೀಡಬೇಕು ಎಂದು ಅವರು ಆಗ್ರಹಿಸಿದರು. ನಗರಾಭಿವೃದ್ಧಿ ಇಲಾಖೆ ಹಾಗೂ ಪೌರಾಡಳಿತ ಇಲಾಖೆಯ ಮಾರ್ಗಸೂಚಿಗಳ ಅನುಸಾರ ಈ ಕಾರ್ಮಿಕರನ್ನು ಪೌರಕಾರ್ಮಿಕರೆಂದು ಪರಿಗಣಿಸಿ, ಈ ವಿಷಯವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಇಲಾಖೆಯ ಸಚಿವ ಯು.ಟಿ. ಖಾದರ್ ಅವರ ಗಮನಕ್ಕೆ ತಂದು, ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅನುಮೋದನೆ ನೀಡಬೇಕು ಎಂದು ಒತ್ತಾಯಿಸಿದರು. ಅಲ್ಲದೆ, ರಾಜ್ಯ ಸರ್ಕಾರವು ಅಧಿಸೂಚನೆ ಹೊರಡಿಸಿ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಇಲಾಖೆಯ ಆಯುಕ್ತರು ಹಾಗೂ ಕೆಎಂಸಿಆರ್‌ಐ ನಿರ್ದೇಶಕರಿಗೆ ಅಗತ್ಯ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಯುವ ದಲಿತ ಮುಖಂಡ ಯಾದವ ಈಟಿ, ಶಿವಪ್ಪ ಚಲವಾದಿ, ಮಹಿಳಾ ಮುಖಂಡರಾದ ಲಕ್ಷ್ಮೀ ಗೂರನವರ್, ದುರ್ಗಮ್ಮ ಡೊಂಬರ, ಸಾವಿತ್ರಿ ಕಿಳ್ಳಿ, ವಿಜಯಲಕ್ಷ್ಮೀ ಡೊಂಬರ, ಸೀತವ್ವ ಬೊಮ್ಮನಹಳ್ಳಿ, ಅಬೂಬಕರ್ ಸನ್ನಿ, ಪರಶುರಾಮ್ ಹೊನ್ನೂರ, ಮಹಮ್ಮದ್ ಸಾಬ್ ನದಾಫ್, ಹನುಮಂತ ಆದೋನಿ, ನರೇಂದ್ರ, ರವಿ ಹೊನ್ನೂರ, ತನ್ವೀರ್ ಅಥಣಿ, ಗುಡದಪ್ಪ ಚಲವಾದಿ, ಗೌಸ್ ಮೊದ್ದಿನ್ ಯಲಿಗಾರ, ಅಭಿಷೇಕ್ ಚಲವಾದಿ, ಎನ್. ಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
    1
    ಹುಬ್ಬಳ್ಳಿಯ ಕೆಎಂಸಿಆರ್‌ಐ (ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ) ಆಸ್ಪತ್ರೆಯಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರು ಹಾಗೂ ಆಯಾಗಳಿಗೆ ಖಾಸಗಿ ಏಜೆನ್ಸಿಯಿಂದ ಪ್ರತಿ ತಿಂಗಳು ಸಕಾಲಕ್ಕೆ ವೇತನ ಪಾವತಿಯಾಗದೇ ತೀವ್ರ ತೊಂದರೆಯಾಗುತ್ತಿದೆ ಎಂದು ಅಂಬೇಡ್ಕರ್ ಸ್ವಾಭಿಮಾನ ದಲಿತ ರಾಜ್ಯ ಸಂಘರ್ಷ ಸಮಿತಿಯು ಆಸ್ಪತ್ರೆಯ ನಿರ್ದೇಶಕ ಡಾ. ಎನ್.ಎಫ್. ಕಮ್ಮಾರ ಅವರಿಗೆ ಮನವಿ ಸಲ್ಲಿಸಿದೆ. ವೇತನ ವಿಳಂಬದಿಂದ ಈ ಕಾರ್ಮಿಕರ ಕುಟುಂಬದ ಉಪಜೀವನ ಹಾಗೂ ಮಕ್ಕಳ ಶಿಕ್ಷಣಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ಸಂಘಟನೆ ಆರೋಪಿಸಿದೆ.

ಮನವಿ ಸಲ್ಲಿಸಿ ಮಾತನಾಡಿದ ಸಂಘಟನೆಯ ರಾಜ್ಯಾಧ್ಯಕ್ಷ ಚಂದ್ರಶೇಖರ ಯಾತಗೇರಿ, ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರು ಮತ್ತು ಆಯಾಗಳು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗ, ನವದೆಹಲಿ ಹಾಗೂ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ನಿಗಮದ ವ್ಯಾಪ್ತಿಗೆ ಒಳಪಡುವ ಕಾರ್ಮಿಕರಾಗಿದ್ದಾರೆ ಎಂದು ತಿಳಿಸಿದರು. ಸಾಮಾಜಿಕ ನ್ಯಾಯದ ಅಡಿಯಲ್ಲಿ ರಾಜ್ಯ ಸರ್ಕಾರವು ಅವರಿಗೆ ಪೌರಕಾರ್ಮಿಕರ ಸ್ಥಾನಮಾನ ನೀಡಬೇಕು ಎಂದು ಅವರು ಆಗ್ರಹಿಸಿದರು. ನಗರಾಭಿವೃದ್ಧಿ ಇಲಾಖೆ ಹಾಗೂ ಪೌರಾಡಳಿತ ಇಲಾಖೆಯ ಮಾರ್ಗಸೂಚಿಗಳ ಅನುಸಾರ ಈ ಕಾರ್ಮಿಕರನ್ನು ಪೌರಕಾರ್ಮಿಕರೆಂದು ಪರಿಗಣಿಸಿ, ಈ ವಿಷಯವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಇಲಾಖೆಯ ಸಚಿವ ಯು.ಟಿ. ಖಾದರ್ ಅವರ ಗಮನಕ್ಕೆ ತಂದು, ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅನುಮೋದನೆ ನೀಡಬೇಕು ಎಂದು ಒತ್ತಾಯಿಸಿದರು. ಅಲ್ಲದೆ, ರಾಜ್ಯ ಸರ್ಕಾರವು ಅಧಿಸೂಚನೆ ಹೊರಡಿಸಿ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಇಲಾಖೆಯ ಆಯುಕ್ತರು ಹಾಗೂ ಕೆಎಂಸಿಆರ್‌ಐ ನಿರ್ದೇಶಕರಿಗೆ ಅಗತ್ಯ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಯುವ ದಲಿತ ಮುಖಂಡ ಯಾದವ ಈಟಿ, ಶಿವಪ್ಪ ಚಲವಾದಿ, ಮಹಿಳಾ ಮುಖಂಡರಾದ ಲಕ್ಷ್ಮೀ ಗೂರನವರ್, ದುರ್ಗಮ್ಮ ಡೊಂಬರ, ಸಾವಿತ್ರಿ ಕಿಳ್ಳಿ, ವಿಜಯಲಕ್ಷ್ಮೀ ಡೊಂಬರ, ಸೀತವ್ವ ಬೊಮ್ಮನಹಳ್ಳಿ, ಅಬೂಬಕರ್ ಸನ್ನಿ, ಪರಶುರಾಮ್ ಹೊನ್ನೂರ, ಮಹಮ್ಮದ್ ಸಾಬ್ ನದಾಫ್, ಹನುಮಂತ ಆದೋನಿ, ನರೇಂದ್ರ, ರವಿ ಹೊನ್ನೂರ, ತನ್ವೀರ್ ಅಥಣಿ, ಗುಡದಪ್ಪ ಚಲವಾದಿ, ಗೌಸ್ ಮೊದ್ದಿನ್ ಯಲಿಗಾರ, ಅಭಿಷೇಕ್ ಚಲವಾದಿ, ಎನ್. ಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
    user_Girish Ghatage
    Girish Ghatage
    Local News Reporter ಧಾರವಾಡ, ಧಾರವಾಡ, ಕರ್ನಾಟಕ•
    5 hrs ago
  • Post by Onlinetv24x7
    1
    Post by Onlinetv24x7
    user_Onlinetv24x7
    Onlinetv24x7
    ಹಾಸನ, ಹಾಸನ, ಕರ್ನಾಟಕ•
    13 hrs ago
  • ಶಿವಮೊಗ್ಗದ ಶಿಮುಲ್ ಹಾಲು ಒಕ್ಕೂಟಕ್ಕೆ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ (MD) ಡಾ. ಮಂಜೇಶ್ ಅವರನ್ನು ಸರ್ಕಾರ ನೇಮಕ ಮಾಡಿದೆ. ಅಧಿಕಾರ ವಹಿಸಿಕೊಂಡ ದಿನದಿಂದಲೇ ಶಿಮುಲ್‌ನಲ್ಲಿ ಬಿಗಿಯಾದ ಆಡಳಿತ ವ್ಯವಸ್ಥೆಯನ್ನು ಡಾ. ಮಂಜೇಶ್ ಜಾರಿಗೆ ತಂದಿದ್ದಾರೆ, ಇದು ಒಕ್ಕೂಟದಲ್ಲಿ ಹೊಸ ಬದಲಾವಣೆಯ ಪರ್ವಕ್ಕೆ ನಾಂದಿ ಹಾಡಿದೆ. ಡಾ. ಮಂಜೇಶ್ ಅವರು ಮಂಡ್ಯದಲ್ಲಿ ನಾಲ್ಕೂವರೆ ವರ್ಷ ಮತ್ತು ಬೆಂಗಳೂರು ಡೈರಿಯಲ್ಲಿ 24 ವರ್ಷಗಳ ಸುದೀರ್ಘ ಕೆಲಸದ ಅನುಭವವನ್ನು ಹೊಂದಿದ್ದಾರೆ. ಈ ಹಿಂದೆ ಶಿಮುಲ್‌ನ ಎಂಡಿಯಾಗಿದ್ದ ಶೇಖರ್ ಅವರು ಧಾರವಾಡಕ್ಕೆ ವರ್ಗಾವಣೆಗೊಂಡಿದ್ದಾರೆ. ನೂತನ ಎಂಡಿ ಡಾ. ಮಂಜೇಶ್ ಅವರು, ತಾನು ಹೊಸದಾಗಿ ಬಂದಿದ್ದು, ಇಲ್ಲಿನ ಆಡಳಿತ ವ್ಯವಸ್ಥೆಯನ್ನು ತಿಳಿದುಕೊಳ್ಳಬೇಕಿದೆ ಎಂದು ಹೇಳಿದ್ದಾರೆ. ಹೊಸ ಯೋಜನೆಗಳ ಕುರಿತು ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಅವುಗಳನ್ನು ಕಾರ್ಯರೂಪಕ್ಕೆ ತರುವುದಾಗಿ ತಿಳಿಸಿದ್ದಾರೆ. ಪ್ರಸ್ತುತ ಪ್ರತಿದಿನ ಒಂಭತ್ತೂವರೆ ಲಕ್ಷ ಲೀಟರ್ ಹಾಲು ಒಕ್ಕೂಟಕ್ಕೆ ಬರುತ್ತಿದ್ದು, ಇದನ್ನು ಸಮರ್ಪಕವಾಗಿ ವಿತರಿಸುವುದೇ ತಮ್ಮ ಪ್ರಮುಖ ಗುರಿ ಎಂದಿದ್ದಾರೆ. ಒಟ್ಟಾರೆ ರೈತರ ಅಭ್ಯುದಯವೇ ತಮ್ಮ ಮುಂದಿರುವ ಪ್ರಮುಖ ತೀರ್ಮಾನ ಎಂದು ಡಾ. ಮಂಜೇಶ್ ಸ್ಪಷ್ಟಪಡಿಸಿದ್ದಾರೆ.
    1
    ಶಿವಮೊಗ್ಗದ ಶಿಮುಲ್ ಹಾಲು ಒಕ್ಕೂಟಕ್ಕೆ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ (MD) ಡಾ. ಮಂಜೇಶ್ ಅವರನ್ನು ಸರ್ಕಾರ ನೇಮಕ ಮಾಡಿದೆ. ಅಧಿಕಾರ ವಹಿಸಿಕೊಂಡ ದಿನದಿಂದಲೇ ಶಿಮುಲ್‌ನಲ್ಲಿ ಬಿಗಿಯಾದ ಆಡಳಿತ ವ್ಯವಸ್ಥೆಯನ್ನು ಡಾ. ಮಂಜೇಶ್ ಜಾರಿಗೆ ತಂದಿದ್ದಾರೆ, ಇದು ಒಕ್ಕೂಟದಲ್ಲಿ ಹೊಸ ಬದಲಾವಣೆಯ ಪರ್ವಕ್ಕೆ ನಾಂದಿ ಹಾಡಿದೆ.

ಡಾ. ಮಂಜೇಶ್ ಅವರು ಮಂಡ್ಯದಲ್ಲಿ ನಾಲ್ಕೂವರೆ ವರ್ಷ ಮತ್ತು ಬೆಂಗಳೂರು ಡೈರಿಯಲ್ಲಿ 24 ವರ್ಷಗಳ ಸುದೀರ್ಘ ಕೆಲಸದ ಅನುಭವವನ್ನು ಹೊಂದಿದ್ದಾರೆ. ಈ ಹಿಂದೆ ಶಿಮುಲ್‌ನ ಎಂಡಿಯಾಗಿದ್ದ ಶೇಖರ್ ಅವರು ಧಾರವಾಡಕ್ಕೆ ವರ್ಗಾವಣೆಗೊಂಡಿದ್ದಾರೆ.

ನೂತನ ಎಂಡಿ ಡಾ. ಮಂಜೇಶ್ ಅವರು, ತಾನು ಹೊಸದಾಗಿ ಬಂದಿದ್ದು, ಇಲ್ಲಿನ ಆಡಳಿತ ವ್ಯವಸ್ಥೆಯನ್ನು ತಿಳಿದುಕೊಳ್ಳಬೇಕಿದೆ ಎಂದು ಹೇಳಿದ್ದಾರೆ. ಹೊಸ ಯೋಜನೆಗಳ ಕುರಿತು ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಅವುಗಳನ್ನು ಕಾರ್ಯರೂಪಕ್ಕೆ ತರುವುದಾಗಿ ತಿಳಿಸಿದ್ದಾರೆ. ಪ್ರಸ್ತುತ ಪ್ರತಿದಿನ ಒಂಭತ್ತೂವರೆ ಲಕ್ಷ ಲೀಟರ್ ಹಾಲು ಒಕ್ಕೂಟಕ್ಕೆ ಬರುತ್ತಿದ್ದು, ಇದನ್ನು ಸಮರ್ಪಕವಾಗಿ ವಿತರಿಸುವುದೇ ತಮ್ಮ ಪ್ರಮುಖ ಗುರಿ ಎಂದಿದ್ದಾರೆ. ಒಟ್ಟಾರೆ ರೈತರ ಅಭ್ಯುದಯವೇ ತಮ್ಮ ಮುಂದಿರುವ ಪ್ರಮುಖ ತೀರ್ಮಾನ ಎಂದು ಡಾ. ಮಂಜೇಶ್ ಸ್ಪಷ್ಟಪಡಿಸಿದ್ದಾರೆ.
    user_Nandheesh kumar ac
    Nandheesh kumar ac
    ದಾವಣಗೆರೆ, ದಾವಣಗೆರೆ, ಕರ್ನಾಟಕ•
    3 hrs ago
  • ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಬಾಚಿಗೊಂಡನಹಳ್ಳಿ ಪಂಚಾಯತಿ ವ್ಯಾಪ್ತಿಗೆ ಬರುವ ಚಿಲುಗೋಡು ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎದುರಾಗಿದೆ. ಗ್ರಾಮದ ಚರಂಡಿಗಳನ್ನು ಸುಮಾರು ಒಂದು ವರ್ಷದಿಂದ ಸ್ವಚ್ಛಗೊಳಿಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಇದೇ ರೀತಿ, ಚಿಲುಗೋಡಿನಲ್ಲಿರುವ ಬೀದಿ ಕಂಬಗಳಿಗೆ ಇದುವರೆಗೂ ದೀಪಗಳನ್ನು ಅಳವಡಿಸಿಲ್ಲ. ಈ ಸಮಸ್ಯೆಗಳ ಬಗ್ಗೆ ಪಂಚಾಯಿತಿ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಸಹ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
    4
    ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಬಾಚಿಗೊಂಡನಹಳ್ಳಿ ಪಂಚಾಯತಿ ವ್ಯಾಪ್ತಿಗೆ ಬರುವ ಚಿಲುಗೋಡು ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎದುರಾಗಿದೆ. ಗ್ರಾಮದ ಚರಂಡಿಗಳನ್ನು ಸುಮಾರು ಒಂದು ವರ್ಷದಿಂದ ಸ್ವಚ್ಛಗೊಳಿಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಇದೇ ರೀತಿ, ಚಿಲುಗೋಡಿನಲ್ಲಿರುವ ಬೀದಿ ಕಂಬಗಳಿಗೆ ಇದುವರೆಗೂ ದೀಪಗಳನ್ನು ಅಳವಡಿಸಿಲ್ಲ. ಈ ಸಮಸ್ಯೆಗಳ ಬಗ್ಗೆ ಪಂಚಾಯಿತಿ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಸಹ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
    user_K Santosha Ks
    K Santosha Ks
    ಹಗರಿಬೊಮ್ಮನಹಳ್ಳಿ, ವಿಜಯನಗರ, ಕರ್ನಾಟಕ•
    11 hrs ago
  • ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ಜೂನ್ 23ರಂದು ಮಳೆಗಾಗಿ ವಿಶೇಷ ಆಚರಣೆಗಳು ನಡೆದವು. ಗ್ರಾಮದೇವತೆ ಶ್ರೀ ಊರಮ್ಮ ದೇವಸ್ಥಾನದ ಆವರಣದಲ್ಲಿ ಮಳೆಗಂಗಮ್ಮ ಪ್ರೆಶ್ನೆ, ಬುಡ್ಡೆ ಕಲ್ಲಿಗೆ 101 ಕುಂಭ ಜಲಾಭಿಷೇಕ ಹಾಗೂ ಗ್ರಾಮದೇವತೆಗೆ ವಿಶೇಷ ಪೂಜೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮಂಗಳವಾರ ಬೆಳಿಗ್ಗೆ, ಶ್ರೀ ಊರಮ್ಮ ದೇವಸ್ಥಾನದ ದೈವಸ್ಥರು ಊರಮ್ಮ ಹೊಂಡಕ್ಕೆ ತೆರಳಿ, ಜಂಗಮ ಹಿರಿಯ ಪೌರೋಹಿತ್ಯರಾದ ಕೆ.ಹೆಚ್.ಎಂ. ಚಿದಾನಂದಸ್ವಾಮಿ ಅವರ ನೇತೃತ್ವದಲ್ಲಿ ಆಯಗಾರರು ಮತ್ತು ನಾಗರಿಕರೊಂದಿಗೆ ಗಂಗೆ ಪೂಜೆಯನ್ನು ವಿಧಿವಿಧಾನಗಳ ಪ್ರಕಾರ ನೆರವೇರಿಸಿದರು. ನಂತರ, ಪಟ್ಟಣದ ಹತ್ತಾರು ಯುವಕರ ತಂಡ ಊರಮ್ಮ ಹೊಂಡದಿಂದ 101 ಕುಂಭಗಳಲ್ಲಿ ಗಂಗೆಯನ್ನು ತಂದು, ಊರ ಬಾಗಿಲಲ್ಲಿರುವ ಬುಡ್ಡೆ ಕಲ್ಲನ್ನು ಶಾಸ್ತ್ರೋಕ್ತವಾಗಿ ಆರಾಧಿಸಿತು. ಪೂಜಾ ಕೈಂಕರ್ಯಗಳನ್ನು ನೆರವೇರಿಸಿ, ಮಳೆ ಕರುಣಿಸುವಂತೆ ಗಂಗಾಜಲವನ್ನು ಅರ್ಪಿಸಿ ಮಳೆ ಫಲವನ್ನು ಬೇಡಿಕೊಳ್ಳಲಾಯಿತು. ಇದೇ ವೇಳೆ, ಊರಮ್ಮ ಹೊಂಡದಿಂದ ಬಣಕಾರ ಮನೆತನದ ಕೋರಿ ಹುಡುಗನಿಗೆ ಗಂಗೆ ತುಂಬಿದ ಹೊಸ ಮಣ್ಣಿನ ಬಿಂದಿಗೆಯನ್ನು ಹೊರೆಸಿ ತಂದು, ಶ್ರೀ ಗ್ರಾಮದೇವತೆಯ ದೇವಸ್ಥಾನದ ಹೆಬ್ಬಾಗಿಲಲ್ಲಿ ವಿಧಿವತ್ತಾಗಿ ಗದ್ದುಗೆ ನಿರ್ಮಿಸಿ ಮಳೆಗಂಗಮ್ಮನನ್ನು ಪ್ರತಿಷ್ಠಾಪಿಸಲಾಯಿತು. ಮಳೆಗಂಗಮ್ಮನ ಮೇಲೆ ಬಣಕಾರ ಮನೆತನದ ಕೋರಿ ಹುಡುಗನನ್ನು ಕೂರಿಸಿ, ನಂತರ ದೈವಸ್ಥರೆಲ್ಲರೂ ಏಕಕಂಠದಿಂದ ಮಳೆಗಾಗಿ ಮಳೆಗಂಗಮ್ಮನಲ್ಲಿ ಪ್ರಾರ್ಥಿಸಿದರು. ಈ ಆಚರಣೆಯಲ್ಲಿ ಮಳೆಗಂಗಮ್ಮಳಿಗೆ (ಬಿಂದಿಗೆ ರೂಪದಲ್ಲಿರುವ) ಮಳೆ ಫಲ ನೀಡುವಂತೆ ಕೋರಿ, ಆಕೆ ಕೋರಿ ಹುಡುಗನನ್ನು ಹೊತ್ತು ತಿರುಗುವ ಮೂಲಕ ಮಳೆ ಫಲವನ್ನು ಸೂಚಿಸಬೇಕೆಂದು ಕೇಳಿಕೊಳ್ಳಲಾಗುತ್ತದೆ. ಬಾಲಕ ಕುಳಿತಿರುವ ನೀರಿನಿಂದ ತುಂಬಿದ ಮಣ್ಣಿನ ಕುಂಭ ರೂಪದ ಮಳೆಗಂಗಮ್ಮ ದೇವಿ ತಾನಾಗಿಯೇ ಎಡಭಾಗಕ್ಕೆ ತಿರುಗಿದರೆ ಮಳೆ ವಿಳಂಬವಾಗುತ್ತದೆ ಅಥವಾ ಸಮರ್ಪಕವಾಗಿ ಬರುವುದಿಲ್ಲ ಎಂಬ ಫಲ ದೊರೆಯುತ್ತದೆ. ಅದೇ ಬಲಭಾಗಕ್ಕೆ ತಿರುಗಿದಲ್ಲಿ ಅತಿ ಶೀಘ್ರದಲ್ಲಿ, ಮೂರ್ನಾಲ್ಕು ದಿನಗಳಲ್ಲಿ ಮಳೆ ಬರುತ್ತದೆ ಎಂಬ ನಂಬಿಕೆ ಇದೆ. ತಿರುಗುವಿಕೆಯ ವೇಗವೂ ಸಹ ಮಳೆಯ ಪ್ರಮಾಣವನ್ನು ಸೂಚಿಸುತ್ತದೆ; ನಿಧಾನವಾಗಿ ತಿರುಗಿದರೆ ಕಡಿಮೆ ಮಳೆ, ವೇಗವಾಗಿ ತಿರುಗಿದರೆ ರಭಸವಾಗಿ ಮತ್ತು ಸಕಾಲಕ್ಕೆ ಸಾಕಷ್ಟು ಪ್ರಮಾಣದಲ್ಲಿ ಮಳೆ ಬರುತ್ತದೆ ಎಂಬ ಮಾನದಂಡದ ಆಧಾರದ ಮೇಲೆ ಮಳೆಯ ಸ್ಥಿತಿಗತಿ ಅರಿಯಲಾಗುತ್ತದೆ. ಈ ದೇವರ ಮಳೆ ಹೇಳಿಕೆಯ ಫಲಾನುಫಲದ ಮೇಲೆ ನಾಗರಿಕರಲ್ಲಿ ಮತ್ತು ರೈತರಲ್ಲಿ ನಂಬಿಕೆ ಇದ್ದು, ಇದರ ಆಧಾರದ ಮೇಲೆ ರೈತರು ತಮ್ಮ ಬೇಸಾಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಅಗತ್ಯ ಪೂರ್ವ ತಯಾರಿ ಮಾಡಿಕೊಳ್ಳುತ್ತಾರೆ. ಈ ಬಾರಿಯ ಆಚರಣೆಯಲ್ಲಿ ಮಳೆಗಂಗಮ್ಮಳು, ಬೇಡಿಕೊಂಡ ಕ್ಷಣಮಾತ್ರದಲ್ಲಿಯೇ ಬಲಭಾಗಕ್ಕೆ ವೇಗವಾಗಿ ತಿರುಗುವ ಮೂಲಕ ನೆರೆದವರ ಬೇಡಿಕೆಗೆ ಶುಭ ಸಂಕೇತದ ಮಳೆ ಫಲವನ್ನು ನೀಡಿದರು. ಇದರಿಂದ ಹರ್ಷಗೊಂಡ ಎಲ್ಲರೂ ಶ್ರೀ ಊರಮ್ಮಳಿಗೆ ಹಾಗೂ ಮಳೆಗಂಗಮ್ಮಳಿಗೆ ಜಯಘೋಷ ಮೊಳಗಿಸಿದರು. ನಂತರ ದೇವರಿಗೆ ಮಹಾಪೂಜೆ ನೆರವೇರಿಸಿ, ಮಹಾಮಂಗಳಾರತಿ ಬೆಳಗಿ ಎಲ್ಲರೂ ಸಾಷ್ಟಾಂಗ ನಮಸ್ಕಾರ ಮಾಡಿ ನಮಿಸಿದರು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಕೂಡ್ಲಿಗಿ ಜೋಯಿಸ್ ಹವಧನ್, ಬಣಕಾರ ಮಂಜುನಾಥ, ಸೋಗಿ ಗುರುಸಿದ್ದಪ್ಪ, ಬಣಕಾರ ಶಿವಣ್ಣ, ಬಣಕಾರ ಸಿದ್ದಣ್ಣ, ಎ.ಎಂ. ಚನ್ನಯ್ಯ, ತುಪ್ಪಳ್ಳಿ ಕೊಟ್ರೇಶ್, ನಾಗೇಶ್, ಊರಮ್ಮ ಆರ್ಚಕ ಬಿ. ನಾಗರಾಜ, ಬಿ. ಈರಣ್ಣ, ಹನಸಿ ಶಿವಣ್ಣ, ಕಾಯಿಕೆಡವ ವಿಜಯಕುಮಾರ್, ಕೆ.ಬಿ. ಮಲ್ಲಿಕಾರ್ಜುನ, ತಳವಾರ ಸುರೇಶ್, ಮಡಿವಾಳ ತಿರುಕಪ್ಪ ಸೇರಿದಂತೆ ಪಟ್ಟಣದ ದೈವಸ್ಥರು, ಶ್ರೀ ಊರಮ್ಮದೇವಿಯ ಆಯಗಾರರು, ಶ್ರೀ ಪೇಟೆಬಸವೇಶ್ವರ ದೇವಸ್ಥಾನದ ಯುವಕರು, ನೂರಾರು ಭಕ್ತರು, ಮಹಿಳೆಯರು ಮತ್ತು ಶ್ರೀ ಮದಗಾಂಭಿಕ ದೇವಿ ಹಲಗೆ ವಾದ್ಯವೃಂದದವರು ಭಾಗವಹಿಸಿದ್ದರು.
    4
    ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ಜೂನ್ 23ರಂದು ಮಳೆಗಾಗಿ ವಿಶೇಷ ಆಚರಣೆಗಳು ನಡೆದವು. ಗ್ರಾಮದೇವತೆ ಶ್ರೀ ಊರಮ್ಮ ದೇವಸ್ಥಾನದ ಆವರಣದಲ್ಲಿ ಮಳೆಗಂಗಮ್ಮ ಪ್ರೆಶ್ನೆ, ಬುಡ್ಡೆ ಕಲ್ಲಿಗೆ 101 ಕುಂಭ ಜಲಾಭಿಷೇಕ ಹಾಗೂ ಗ್ರಾಮದೇವತೆಗೆ ವಿಶೇಷ ಪೂಜೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮಂಗಳವಾರ ಬೆಳಿಗ್ಗೆ, ಶ್ರೀ ಊರಮ್ಮ ದೇವಸ್ಥಾನದ ದೈವಸ್ಥರು ಊರಮ್ಮ ಹೊಂಡಕ್ಕೆ ತೆರಳಿ, ಜಂಗಮ ಹಿರಿಯ ಪೌರೋಹಿತ್ಯರಾದ ಕೆ.ಹೆಚ್.ಎಂ. ಚಿದಾನಂದಸ್ವಾಮಿ ಅವರ ನೇತೃತ್ವದಲ್ಲಿ ಆಯಗಾರರು ಮತ್ತು ನಾಗರಿಕರೊಂದಿಗೆ ಗಂಗೆ ಪೂಜೆಯನ್ನು ವಿಧಿವಿಧಾನಗಳ ಪ್ರಕಾರ ನೆರವೇರಿಸಿದರು. ನಂತರ, ಪಟ್ಟಣದ ಹತ್ತಾರು ಯುವಕರ ತಂಡ ಊರಮ್ಮ ಹೊಂಡದಿಂದ 101 ಕುಂಭಗಳಲ್ಲಿ ಗಂಗೆಯನ್ನು ತಂದು, ಊರ ಬಾಗಿಲಲ್ಲಿರುವ ಬುಡ್ಡೆ ಕಲ್ಲನ್ನು ಶಾಸ್ತ್ರೋಕ್ತವಾಗಿ ಆರಾಧಿಸಿತು. ಪೂಜಾ ಕೈಂಕರ್ಯಗಳನ್ನು ನೆರವೇರಿಸಿ, ಮಳೆ ಕರುಣಿಸುವಂತೆ ಗಂಗಾಜಲವನ್ನು ಅರ್ಪಿಸಿ ಮಳೆ ಫಲವನ್ನು ಬೇಡಿಕೊಳ್ಳಲಾಯಿತು.

ಇದೇ ವೇಳೆ, ಊರಮ್ಮ ಹೊಂಡದಿಂದ ಬಣಕಾರ ಮನೆತನದ ಕೋರಿ ಹುಡುಗನಿಗೆ ಗಂಗೆ ತುಂಬಿದ ಹೊಸ ಮಣ್ಣಿನ ಬಿಂದಿಗೆಯನ್ನು ಹೊರೆಸಿ ತಂದು, ಶ್ರೀ ಗ್ರಾಮದೇವತೆಯ ದೇವಸ್ಥಾನದ ಹೆಬ್ಬಾಗಿಲಲ್ಲಿ ವಿಧಿವತ್ತಾಗಿ ಗದ್ದುಗೆ ನಿರ್ಮಿಸಿ ಮಳೆಗಂಗಮ್ಮನನ್ನು ಪ್ರತಿಷ್ಠಾಪಿಸಲಾಯಿತು. ಮಳೆಗಂಗಮ್ಮನ ಮೇಲೆ ಬಣಕಾರ ಮನೆತನದ ಕೋರಿ ಹುಡುಗನನ್ನು ಕೂರಿಸಿ, ನಂತರ ದೈವಸ್ಥರೆಲ್ಲರೂ ಏಕಕಂಠದಿಂದ ಮಳೆಗಾಗಿ ಮಳೆಗಂಗಮ್ಮನಲ್ಲಿ ಪ್ರಾರ್ಥಿಸಿದರು. ಈ ಆಚರಣೆಯಲ್ಲಿ ಮಳೆಗಂಗಮ್ಮಳಿಗೆ (ಬಿಂದಿಗೆ ರೂಪದಲ್ಲಿರುವ) ಮಳೆ ಫಲ ನೀಡುವಂತೆ ಕೋರಿ, ಆಕೆ ಕೋರಿ ಹುಡುಗನನ್ನು ಹೊತ್ತು ತಿರುಗುವ ಮೂಲಕ ಮಳೆ ಫಲವನ್ನು ಸೂಚಿಸಬೇಕೆಂದು ಕೇಳಿಕೊಳ್ಳಲಾಗುತ್ತದೆ. ಬಾಲಕ ಕುಳಿತಿರುವ ನೀರಿನಿಂದ ತುಂಬಿದ ಮಣ್ಣಿನ ಕುಂಭ ರೂಪದ ಮಳೆಗಂಗಮ್ಮ ದೇವಿ ತಾನಾಗಿಯೇ ಎಡಭಾಗಕ್ಕೆ ತಿರುಗಿದರೆ ಮಳೆ ವಿಳಂಬವಾಗುತ್ತದೆ ಅಥವಾ ಸಮರ್ಪಕವಾಗಿ ಬರುವುದಿಲ್ಲ ಎಂಬ ಫಲ ದೊರೆಯುತ್ತದೆ. ಅದೇ ಬಲಭಾಗಕ್ಕೆ ತಿರುಗಿದಲ್ಲಿ ಅತಿ ಶೀಘ್ರದಲ್ಲಿ, ಮೂರ್ನಾಲ್ಕು ದಿನಗಳಲ್ಲಿ ಮಳೆ ಬರುತ್ತದೆ ಎಂಬ ನಂಬಿಕೆ ಇದೆ. ತಿರುಗುವಿಕೆಯ ವೇಗವೂ ಸಹ ಮಳೆಯ ಪ್ರಮಾಣವನ್ನು ಸೂಚಿಸುತ್ತದೆ; ನಿಧಾನವಾಗಿ ತಿರುಗಿದರೆ ಕಡಿಮೆ ಮಳೆ, ವೇಗವಾಗಿ ತಿರುಗಿದರೆ ರಭಸವಾಗಿ ಮತ್ತು ಸಕಾಲಕ್ಕೆ ಸಾಕಷ್ಟು ಪ್ರಮಾಣದಲ್ಲಿ ಮಳೆ ಬರುತ್ತದೆ ಎಂಬ ಮಾನದಂಡದ ಆಧಾರದ ಮೇಲೆ ಮಳೆಯ ಸ್ಥಿತಿಗತಿ ಅರಿಯಲಾಗುತ್ತದೆ. ಈ ದೇವರ ಮಳೆ ಹೇಳಿಕೆಯ ಫಲಾನುಫಲದ ಮೇಲೆ ನಾಗರಿಕರಲ್ಲಿ ಮತ್ತು ರೈತರಲ್ಲಿ ನಂಬಿಕೆ ಇದ್ದು, ಇದರ ಆಧಾರದ ಮೇಲೆ ರೈತರು ತಮ್ಮ ಬೇಸಾಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಅಗತ್ಯ ಪೂರ್ವ ತಯಾರಿ ಮಾಡಿಕೊಳ್ಳುತ್ತಾರೆ.

ಈ ಬಾರಿಯ ಆಚರಣೆಯಲ್ಲಿ ಮಳೆಗಂಗಮ್ಮಳು, ಬೇಡಿಕೊಂಡ ಕ್ಷಣಮಾತ್ರದಲ್ಲಿಯೇ ಬಲಭಾಗಕ್ಕೆ ವೇಗವಾಗಿ ತಿರುಗುವ ಮೂಲಕ ನೆರೆದವರ ಬೇಡಿಕೆಗೆ ಶುಭ ಸಂಕೇತದ ಮಳೆ ಫಲವನ್ನು ನೀಡಿದರು. ಇದರಿಂದ ಹರ್ಷಗೊಂಡ ಎಲ್ಲರೂ ಶ್ರೀ ಊರಮ್ಮಳಿಗೆ ಹಾಗೂ ಮಳೆಗಂಗಮ್ಮಳಿಗೆ ಜಯಘೋಷ ಮೊಳಗಿಸಿದರು. ನಂತರ ದೇವರಿಗೆ ಮಹಾಪೂಜೆ ನೆರವೇರಿಸಿ, ಮಹಾಮಂಗಳಾರತಿ ಬೆಳಗಿ ಎಲ್ಲರೂ ಸಾಷ್ಟಾಂಗ ನಮಸ್ಕಾರ ಮಾಡಿ ನಮಿಸಿದರು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಕೂಡ್ಲಿಗಿ ಜೋಯಿಸ್ ಹವಧನ್, ಬಣಕಾರ ಮಂಜುನಾಥ, ಸೋಗಿ ಗುರುಸಿದ್ದಪ್ಪ, ಬಣಕಾರ ಶಿವಣ್ಣ, ಬಣಕಾರ ಸಿದ್ದಣ್ಣ, ಎ.ಎಂ. ಚನ್ನಯ್ಯ, ತುಪ್ಪಳ್ಳಿ ಕೊಟ್ರೇಶ್, ನಾಗೇಶ್, ಊರಮ್ಮ ಆರ್ಚಕ ಬಿ. ನಾಗರಾಜ, ಬಿ. ಈರಣ್ಣ, ಹನಸಿ ಶಿವಣ್ಣ, ಕಾಯಿಕೆಡವ ವಿಜಯಕುಮಾರ್, ಕೆ.ಬಿ. ಮಲ್ಲಿಕಾರ್ಜುನ, ತಳವಾರ ಸುರೇಶ್, ಮಡಿವಾಳ ತಿರುಕಪ್ಪ ಸೇರಿದಂತೆ ಪಟ್ಟಣದ ದೈವಸ್ಥರು, ಶ್ರೀ ಊರಮ್ಮದೇವಿಯ ಆಯಗಾರರು, ಶ್ರೀ ಪೇಟೆಬಸವೇಶ್ವರ ದೇವಸ್ಥಾನದ ಯುವಕರು, ನೂರಾರು ಭಕ್ತರು, ಮಹಿಳೆಯರು ಮತ್ತು ಶ್ರೀ ಮದಗಾಂಭಿಕ ದೇವಿ ಹಲಗೆ ವಾದ್ಯವೃಂದದವರು ಭಾಗವಹಿಸಿದ್ದರು.
    user_ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
    ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
    ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    2 hrs ago
  • ಖಾಝಿ ಜನಾಝ ಯಾತ್ರೆಯ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಮತ್ತು ಟ್ರಾಫಿಕ್ ದಟ್ಟಣೆಯನ್ನು ನಿಯಂತ್ರಿಸಲು, ಸಚಿವ ಯು.ಟಿ. ಖಾದರ್ ಅವರ ನೇತೃತ್ವದಲ್ಲಿ ತುರ್ತು ಪೊಲೀಸ್ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ಯಾತ್ರೆಯ ಸುಗಮ ಸಂಚಾರಕ್ಕೆ ಅಗತ್ಯವಿರುವ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.
    1
    ಖಾಝಿ ಜನಾಝ ಯಾತ್ರೆಯ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಮತ್ತು ಟ್ರಾಫಿಕ್ ದಟ್ಟಣೆಯನ್ನು ನಿಯಂತ್ರಿಸಲು, ಸಚಿವ ಯು.ಟಿ. ಖಾದರ್ ಅವರ ನೇತೃತ್ವದಲ್ಲಿ ತುರ್ತು ಪೊಲೀಸ್ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ಯಾತ್ರೆಯ ಸುಗಮ ಸಂಚಾರಕ್ಕೆ ಅಗತ್ಯವಿರುವ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.
    user_H M ಹರಕುಣಿ
    H M ಹರಕುಣಿ
    Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
    2 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.