Shuru
Apke Nagar Ki App…
ಧಾರವಾಡ: ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಅಗತ್ಯವಿಲ್ಲ ಎಂಬ ಠರಾವು ಪಾಸು ಮಾಡಿದ ವಿರೋಧ ಪಕ್ಷದ ಗದ್ದಲ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಅಗತ್ಯವಿಲ್ಲ ಎಂಬ ಠರಾವು ಪಾಸು ಮಾಡಿದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವಿರೋಧ ಪಕ್ಷದ ಪಾಲಿಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಈ ಹಿಂದೆ ಬಿಜೆಪಿ ಧಾರವಾಡ ಪ್ರತ್ಯೇಕ ಪಾಲಿಕೆ ನಿರ್ಧಾರ ಕೈಗೊಂಡು ಈಗ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಅಗತ್ಯವಿಲ್ಲ ಎಂದು ಠರಾವು ಪಾಸು ಮಾಡಿರುವ ಕ್ರಮ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಮಹಾನಗರ ಪಾಲಿಕೆ ಮಹಾಪೌರರು ಈ ಠರಾವು ಕೈಬಿಡಬೇಕು ಇಲ್ಲವೇ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
Manjunath kavali
ಧಾರವಾಡ: ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಅಗತ್ಯವಿಲ್ಲ ಎಂಬ ಠರಾವು ಪಾಸು ಮಾಡಿದ ವಿರೋಧ ಪಕ್ಷದ ಗದ್ದಲ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಅಗತ್ಯವಿಲ್ಲ ಎಂಬ ಠರಾವು ಪಾಸು ಮಾಡಿದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವಿರೋಧ ಪಕ್ಷದ ಪಾಲಿಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಈ ಹಿಂದೆ ಬಿಜೆಪಿ ಧಾರವಾಡ ಪ್ರತ್ಯೇಕ ಪಾಲಿಕೆ ನಿರ್ಧಾರ ಕೈಗೊಂಡು ಈಗ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಅಗತ್ಯವಿಲ್ಲ ಎಂದು ಠರಾವು ಪಾಸು ಮಾಡಿರುವ ಕ್ರಮ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಮಹಾನಗರ ಪಾಲಿಕೆ ಮಹಾಪೌರರು ಈ ಠರಾವು ಕೈಬಿಡಬೇಕು ಇಲ್ಲವೇ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
More news from ಕರ್ನಾಟಕ and nearby areas
- 1824ರ ನಂತರದ ಕಿತ್ತೂರು ಸಂಸ್ಥಾನದ ಹೊಸ ಸಂಶೋಧನೆಗಳು ಹಾಗೂ ವಂಶಜರು ವಿಷಯವಾಗಿ ಮೇ 3ರಂದು ಕಿತ್ತೂರು ಸಂಸ್ಥಾನದ ವಂಶಜರು ರಾ.ಹ. ದೇಶಪಾಂಡೆ ಭವನದಲ್ಲಿ ವಿಶೇಷ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಸಾಹಿತಿ ಬಾಳಣ್ಣ ಶೀಗಿಹಳ್ಳಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಿತ್ತೂರು ಸಂಸ್ಥಾನ ಕುರಿತು ಸಾಕಷ್ಟು ಕೃತಿಗಳು, ಸಂಶೋಧನೆಗಳು ಈಗಾಗಲೇ ನಡೆದಿವೆ. ಜೊತೆಗೆ ಸಂಸ್ಥಾನದ ವಂಶಜರ ಬಗ್ಗೆ ಕನ್ನಡಿಗರಿಗೆ ಅಷ್ಟೊಂದು ಮಾಹಿತಿಯೂ ಇಲ್ಲ. ಈ ಹಿನ್ನಲೆಯಲ್ಲಿ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಮೇ 3ರ ಬೆಳಗ್ಗೆ 10.30ಕ್ಕೆ ಪಾಲಿಕೆ ಮಾಜಿ ಸದಸ್ಯ ಸಿ.ಎಸ್. ಪಾಟೀಲ ಉದ್ಘಾಟಿಸುವರು. ಮಾಜಿ ಶಾಸಕ ಎ.ಬಿ. ದೇಸಾಯಿ ಅಧ್ಯಕ್ಷತೆ, ಡಾ.ಅರವಿಂದ ಯಾಳಗಿ ಆಶಯ ನುಡಿ ಹೇಳಲಿದ್ದಾರೆ ಎಂದರು.1
- ಮುಧೋಳ: ಚುನಾವಣೆಯಲ್ಲಿ ಹಣ ನೀಡಿ ಮತ ಪಡೆಯುವ ಸಂಸ್ಕೃತಿ ಪ್ರಜಾಪ್ರಭುತ್ವದ ಅಧಃಪತನಕ್ಕೆ ನಾಂದಿಯಾಗುತ್ತಿದೆ. ಇದರ ಜೊತೆಗೆ ಶಿಕ್ಷಣ ಇಲಾಖೆಯು ಗುಣಮಟ್ಟದ ಬದಲು ಅನಗತ್ಯ ವಿವಾದಗಳ ಕೇಂದ್ರವಾಗುತ್ತಿರುವುದು ದೇಶದ ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತೀವ್ರ ಕಳವಳ ವ್ಯಕ್ತಪಡಿಸಿದರು. ನಗರದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜಕೀಯ ಮತ್ತು ಶೈಕ್ಷಣಿಕ ವ್ಯವಸ್ಥೆಯ ಕುಸಿತದ ಬಗ್ಗೆ ಸರ್ಕಾರಕ್ಕೆ ಚಾಟಿ ಬೀಸಿದರು. ಇಂದು ಶಾಲೆಗಳು ಜ್ಞಾನ ದೇಗುಲಗಳಾಗುವ ಬದಲು ಹಿಜಾಬ್, ಜನಿವಾರ, ಕುಂಕುಮದಂತಹ ಅನಗತ್ಯ ವಿವಾದಗಳ ಕೇಂದ್ರವಾಗುತ್ತಿವೆ. ಸರ್ಕಾರಗಳು ಇಂತಹ ಭಾವನಾತ್ಮಕ ವಿಷಯಗಳಿಗೆ ನೀಡುವ ಆದ್ಯತೆಯನ್ನು ಶಿಕ್ಷಣದ ಗುಣಮಟ್ಟಕ್ಕೆ ನೀಡುತ್ತಿಲ್ಲ. ಇಡೀ ರಾಜ್ಯದ ಸರ್ಕಾರಿ ಪಿಯು ಕಾಲೇಜುಗಳಲ್ಲಿ ಕೇವಲ ಇಬ್ಬರೇ ದೈಹಿಕ ಶಿಕ್ಷಕರಿದ್ದಾರೆ ಎಂದರೆ ನಮ್ಮ ವ್ಯವಸ್ಥೆ ಎತ್ತ ಸಾಗುತ್ತಿದೆ ಎಂದು ಅವರು ಪ್ರಶ್ನಿಸಿದರು. ತಾಯ್ನುಡಿ ಕನ್ನಡ ಪತ್ರಿಕೆಯಲ್ಲೇ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅನುತ್ತೀರ್ಣರಾಗುತ್ತಿರುವುದು ಶೋಚನೀಯ. 80 ಅಂಕಗಳ ಪರೀಕ್ಷೆಯಲ್ಲಿ ಕೇವಲ 13 ಅಂಕ ಪಡೆದವರನ್ನು ಪಾಸ್ ಮಾಡುವ ಇಂದಿನ ಸಿಸ್ಟಮ್ನಿಂದ ಗುಣಮಟ್ಟದ ಶಿಕ್ಷಣ ನಿರೀಕ್ಷಿಸಲು ಸಾಧ್ಯವಿಲ್ಲ. ಶಿಕ್ಷಕರಿಲ್ಲದ ಶಾಲೆಗಳಲ್ಲಿ ಮಕ್ಕಳ ಭವಿಷ್ಯದ ಜೊತೆ ಆಟವಾಡಲಾಗುತ್ತಿದೆ ಎಂದು ಅವರು ಕಿಡಿ ಕಾರಿದರು. ಹಣ ನೀಡಿ ಮತ ಪಡೆಯುವ ಪ್ರವೃತ್ತಿ ಹೆಚ್ಚುತ್ತಿರುವುದು ಪ್ರಜಾಪ್ರಭುತ್ವದ ಪವಿತ್ರತೆಯನ್ನು ಹಾಳುಮಾಡುತ್ತಿದೆ. ಜನರು ಮತ್ತು ರಾಜಕಾರಣಿಗಳು ಈ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ವ್ಯವಸ್ಥೆ ಬುಡಮೇಲಾಗುವುದು ಖಚಿತ ಎಂದು ಎಚ್ಚರಿಸಿದರು. ಹಿಂದಿನ ಸರ್ಕಾರಗಳಲ್ಲಿ ಶಿಕ್ಷಣಕ್ಕೆ ಸಿಗುತ್ತಿದ್ದ ಮಹತ್ವ ಈಗ ಕಾಣುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಕೂಡಲೇ ಸರ್ಕಾರ ಶಿಕ್ಷಕರ ನೇಮಕಾತಿ ಮತ್ತು ಮೂಲಸೌಕರ್ಯದತ್ತ ಗಮನಹರಿಸಬೇಕು ಎಂದು ಆಗ್ರಹಿಸಿದರು.1
- "ಜನರಿಗೆ ನೀರಿಗಾಗಿ ಪರದಾಟ ಇವರಿಗೆ ನೀರಿನ ಟ್ಯಾಂಕಿ ತುಂಬುವ ಚೆಲ್ಲಾಟ" ಬಾಗಲಕೋಟೆ:ಬಾಗಲಕೋಟೆ ಜಿಲ್ಲೆಯ ಶಿಗಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರತಕ್ಕಂತ ಕದಾoಪೂರ ಆರ್. ಸಿ. ಗ್ರಾಮದಲ್ಲಿ ಕುಡಿಯಲಿಕ್ಕೆ ನೀರು ಇಲ್ಲದೆ ಪರದಾಡುವಂತಾಗಿದೆ ಬೇಸಿಗೆ ಕಾಲದಲ್ಲಿ ಜನರು ನೀರು ಇಲ್ಲ ಅನ್ನುತ್ತಾರೆ ಆದರೆ ಇವರಿಗೆ ' ಕದಾಂಪೂರ. ಆರ್ ಸಿ. ಗ್ರಾಮದ ನಿವಾಸಿ ಮನೆಯ ಮುಂದೆ ಮುತ್ತಪ್ಪ ಕಟಗೇರಿ ಅವರ ಮನೆಯ ಮುಂದೆ ಕುಡಿಯುವ ನೀರು ಇವರು ತುಂಬುತ್ತಾರೆ ತಮ್ಮ ಸ್ವಾರ್ಥಕ್ಕಾಗಿ ಕುಡಿಯುವ ನೀರು ತಮ್ಮ ಜೀವನಕ್ಕೆ ಮಾರಾಟ ಮಾಡುತ್ತಾರೆ ನೀರಿನ ಟ್ಯಾಂಕಿನ ನೀರು ತುಂಬಿ ಜನರಿಗೆ ತೊಂದರೆ ಉಂಟಾಗುತ್ತಿದೆ ಈ ಕೂಡಲೇ ಶಿಗಿಕೇರಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಗಮನ ಹರಿಸಬೇಕು.1
- ನಡು ರಸ್ತೆಯಲ್ಲಿ ಕಾರಲ್ಲಿ ಕುಳಿತು ಕಚೇರಿ ಕಡತಗಳಿಗೆ ಸಹಿ ಮಾಡಿದ ಬಾಗಲಕೋಟೆ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರವಿ ಇದ್ದಲಗಿ,ಕಚೇರಿ ಸಿಬ್ಬಂದಿಯಿಂದ ಕಡತಗಳನ್ನು ತರಿಸಿ ಸಹಿ ಮಾಡಿದ ಆರೋಪ,ಪ್ರಶ್ನೆಗೆ ಉತ್ತರ ಕೊಡದೆ ತಬ್ಬಿಬ್ಬಾಗಿ ಸ್ಥಳದಿಂದ ಕಾಲ್ಕಿತ್ತ ಅಧಿಕಾರಿ, ಕಾರಲ್ಲಿ ಕುಳಿತು ಸಹಿ ಮಾಡಿದ ಅಧಿಕಾರಿ ವಿಡಿಯೋ ವೈರಲ್ ಬಾಗಲಕೋಟೆ ನವನಗರದಲ್ಲಿ ನಡೆದ ಘಟನೆ.1
- Post by Kumar sam @Basavaraj S R1
- Post by @april14news1
- ಇಳಕಲ್ಲ : ರಸ್ತೆಯಲ್ಲಿ ಸಿಕ್ಕ ೧೦ ರೂಪಾಯಿ ಹಣವನ್ನು ಬೇಗನೆ ಎತ್ತಿಕೊಂಡು ಜೇಬಿನಲ್ಲಿ ಹಾಕಿಕೊಳ್ಳುವ ಈ ಯುಗದಲ್ಲಿ ವ್ಯಕ್ತಿಯೋರ್ವ ಪಾಕೇಟ್ ಕಳೆದುಕೊಂಡಿದ್ದ ಪಾಕೇಟ್ದಲ್ಲಿ ೧೫ ಸಾವಿರ ಹಣ, ಹಾಗೂ ಪಾನ್ ಕಾರ್ಡ ಯುವಕರಿಗೆ ಸಿಕ್ಕಾಗ ಅದನ್ನು ಮರಳಿ ವಾರಸುದಾರರನ್ನು ಪತ್ತೆ ಮಾಡಿ ಹಣವನ್ನು ಮರಳಿಸಿ ಪ್ರಾಮಾಣಿಕತೆ ಮೆರೆದ ಘಟನೆ ಇಳಕಲ್ಲ ನಗರದಲ್ಲಿ ನಡೆದಿದೆ.1
- ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಅಗತ್ಯವಿಲ್ಲ ಎಂಬ ಠರಾವು ಪಾಸು ಮಾಡಿದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವಿರೋಧ ಪಕ್ಷದ ಪಾಲಿಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಈ ಹಿಂದೆ ಬಿಜೆಪಿ ಧಾರವಾಡ ಪ್ರತ್ಯೇಕ ಪಾಲಿಕೆ ನಿರ್ಧಾರ ಕೈಗೊಂಡು ಈಗ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಅಗತ್ಯವಿಲ್ಲ ಎಂದು ಠರಾವು ಪಾಸು ಮಾಡಿರುವ ಕ್ರಮ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಮಹಾನಗರ ಪಾಲಿಕೆ ಮಹಾಪೌರರು ಈ ಠರಾವು ಕೈಬಿಡಬೇಕು ಇಲ್ಲವೇ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.1