logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿ ಸ್ಥಳೀಯ ಸುದ್ದಿಗಳನ್ನು ಪ್ರಸಾರ ಮಾಡಲು ನೂತನವಾಗಿ 'ಒಂದು ಡಿ ಸಿ ನ್ಯೂಸ್ ಗುಂಡ್ಲುಪೇಟೆ' ಚಾನೆಲ್ ಆರಂಭಗೊಂಡಿದೆ. ದೇವರಹಳ್ಳಿ ಶಿವಕುಮಾರ್ ಅವರ ಸಾರಥ್ಯದಲ್ಲಿ ಶುರುವಾದ ಈ ಹೊಸ ಚಾನೆಲ್‌ಗೆ ಗಡಿನಾಡು ಅಕ್ಷರ ರಾಜ್ಯ ಅಧ್ಯಕ್ಷರಾದ ಮುನಿಲ್ ಪಾಷಾ, ಪಾಪಣ್ಣ ನವರು, ಪತ್ರಕರ್ತ ಮಿತ್ರರಾದ ಕಾಂತರಾಜ್, ವೇಣು, ಪ್ರಸಾದ್ ಸೇರಿದಂತೆ ಹಲವು ಗಣ್ಯರು ಹಾಗೂ ವಿವಿಧ ಸಂಘಟನೆಗಳ ಅಧ್ಯಕ್ಷರು ಶುಭಾಶಯಗಳನ್ನು ಕೋರಿದ್ದಾರೆ.

1 hr ago
user_Prasad Prasad
Prasad Prasad
TV News Anchor ಗುಂಡ್ಲುಪೇಟೆ, ಚಾಮರಾಜನಗರ, ಕರ್ನಾಟಕ•
1 hr ago
ce68c412-2423-44f9-9c53-a08069cc7101

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿ ಸ್ಥಳೀಯ ಸುದ್ದಿಗಳನ್ನು ಪ್ರಸಾರ ಮಾಡಲು ನೂತನವಾಗಿ 'ಒಂದು ಡಿ ಸಿ ನ್ಯೂಸ್ ಗುಂಡ್ಲುಪೇಟೆ' ಚಾನೆಲ್ ಆರಂಭಗೊಂಡಿದೆ. ದೇವರಹಳ್ಳಿ ಶಿವಕುಮಾರ್ ಅವರ ಸಾರಥ್ಯದಲ್ಲಿ ಶುರುವಾದ ಈ ಹೊಸ ಚಾನೆಲ್‌ಗೆ ಗಡಿನಾಡು ಅಕ್ಷರ ರಾಜ್ಯ ಅಧ್ಯಕ್ಷರಾದ ಮುನಿಲ್ ಪಾಷಾ, ಪಾಪಣ್ಣ ನವರು, ಪತ್ರಕರ್ತ ಮಿತ್ರರಾದ ಕಾಂತರಾಜ್, ವೇಣು, ಪ್ರಸಾದ್ ಸೇರಿದಂತೆ ಹಲವು ಗಣ್ಯರು ಹಾಗೂ ವಿವಿಧ ಸಂಘಟನೆಗಳ ಅಧ್ಯಕ್ಷರು ಶುಭಾಶಯಗಳನ್ನು ಕೋರಿದ್ದಾರೆ.

More news from ಕರ್ನಾಟಕ and nearby areas
  • ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿ ಸ್ಥಳೀಯ ಸುದ್ದಿಗಳನ್ನು ಪ್ರಸಾರ ಮಾಡಲು ನೂತನವಾಗಿ 'ಒಂದು ಡಿ ಸಿ ನ್ಯೂಸ್ ಗುಂಡ್ಲುಪೇಟೆ' ಚಾನೆಲ್ ಆರಂಭಗೊಂಡಿದೆ. ದೇವರಹಳ್ಳಿ ಶಿವಕುಮಾರ್ ಅವರ ಸಾರಥ್ಯದಲ್ಲಿ ಶುರುವಾದ ಈ ಹೊಸ ಚಾನೆಲ್‌ಗೆ ಗಡಿನಾಡು ಅಕ್ಷರ ರಾಜ್ಯ ಅಧ್ಯಕ್ಷರಾದ ಮುನಿಲ್ ಪಾಷಾ, ಪಾಪಣ್ಣ ನವರು, ಪತ್ರಕರ್ತ ಮಿತ್ರರಾದ ಕಾಂತರಾಜ್, ವೇಣು, ಪ್ರಸಾದ್ ಸೇರಿದಂತೆ ಹಲವು ಗಣ್ಯರು ಹಾಗೂ ವಿವಿಧ ಸಂಘಟನೆಗಳ ಅಧ್ಯಕ್ಷರು ಶುಭಾಶಯಗಳನ್ನು ಕೋರಿದ್ದಾರೆ.
    4
    ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿ ಸ್ಥಳೀಯ ಸುದ್ದಿಗಳನ್ನು ಪ್ರಸಾರ ಮಾಡಲು ನೂತನವಾಗಿ 'ಒಂದು ಡಿ ಸಿ ನ್ಯೂಸ್ ಗುಂಡ್ಲುಪೇಟೆ' ಚಾನೆಲ್ ಆರಂಭಗೊಂಡಿದೆ. ದೇವರಹಳ್ಳಿ ಶಿವಕುಮಾರ್ ಅವರ ಸಾರಥ್ಯದಲ್ಲಿ ಶುರುವಾದ ಈ ಹೊಸ ಚಾನೆಲ್‌ಗೆ ಗಡಿನಾಡು ಅಕ್ಷರ ರಾಜ್ಯ ಅಧ್ಯಕ್ಷರಾದ ಮುನಿಲ್ ಪಾಷಾ, ಪಾಪಣ್ಣ ನವರು, ಪತ್ರಕರ್ತ ಮಿತ್ರರಾದ ಕಾಂತರಾಜ್, ವೇಣು, ಪ್ರಸಾದ್ ಸೇರಿದಂತೆ ಹಲವು ಗಣ್ಯರು ಹಾಗೂ ವಿವಿಧ ಸಂಘಟನೆಗಳ ಅಧ್ಯಕ್ಷರು ಶುಭಾಶಯಗಳನ್ನು ಕೋರಿದ್ದಾರೆ.
    user_Prasad Prasad
    Prasad Prasad
    TV News Anchor ಗುಂಡ್ಲುಪೇಟೆ, ಚಾಮರಾಜನಗರ, ಕರ್ನಾಟಕ•
    1 hr ago
  • ಮೈಸೂರು ನಗರದ ಹೆಬ್ಬಾಳ ಪ್ರದೇಶದಲ್ಲಿರುವ ಸಿಐಟಿಬಿ ಛತ್ರದಲ್ಲಿ ಜೂನ್ 22ರಂದು ಆರಂಭಗೊಂಡಿರುವ ಅವನಿ ಸಿಲ್ಕ್ ಸೀರೆ ಎಕ್ಸ್‌ಪೋ ಮಹಿಳೆಯರ ಗಮನ ಸೆಳೆಯುತ್ತಿದೆ. ಜೂನ್ 26ರವರೆಗೆ ನಡೆಯುವ ಈ ವಿಶೇಷ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ವಿವಿಧ ರಾಜ್ಯಗಳ ಸಾಂಪ್ರದಾಯಿಕ ಮತ್ತು ಆಧುನಿಕ ವಿನ್ಯಾಸದ ಸೀರೆಗಳನ್ನು ಪ್ರದರ್ಶಿಸಿ ಮಾರಾಟ ಮಾಡಲಾಗುತ್ತಿದೆ. ಎಕ್ಸ್‌ಪೋದಲ್ಲಿ ₹400 ರಿಂದ ₹30,000 ವರೆಗಿನ ವಿವಿಧ ಬೆಲೆಯ ಸೀರೆಗಳು ಲಭ್ಯವಿದ್ದು, ಎಲ್ಲಾ ವರ್ಗದ ಗ್ರಾಹಕರಿಗೂ ಸೂಕ್ತವಾದ ಆಯ್ಕೆಗಳು ದೊರೆಯುತ್ತಿವೆ. ಗ್ರಾಹಕರನ್ನು ಆಕರ್ಷಿಸಲು “ಬೈ ಒನ್ ಗೆಟ್ ಒನ್” ವಿಶೇಷ ಆಫರ್ ಕೂಡ ನೀಡಲಾಗಿದೆ. ಇಲ್ಲಿ ಕಾಂಚೀಪುರಂ ಸಿಲ್ಕ್, ಮೈಸೂರು ಸಿಲ್ಕ್, ಬನಾರಸಿ ಸಿಲ್ಕ್, ಸಾಫ್ಟ್ ಸಿಲ್ಕ್, ಟಸ್ಸರ್ ಸಿಲ್ಕ್, ಪೈಠಾಣಿ, ಪಟೋಲಾ, ಲಿನನ್, ಕಾಟನ್, ಜಾರ್ಜೆಟ್, ಡಿಸೈನರ್, ಪಾರ್ಟಿ ವೇರ್, ಬ್ರೈಡಲ್ ಕಲೆಕ್ಷನ್, ಎಂಬ್ರಾಯ್ಡರಿ ವರ್ಕ್, ಹಾಗೂ ಡಿಜಿಟಲ್ ಪ್ರಿಂಟ್ ಸೀರೆ ಸೇರಿದಂತೆ ನೂರಾರು ಮಾದರಿಯ ಸೀರೆಗಳು ಲಭ್ಯವಿವೆ. ಮದುವೆ, ಹಬ್ಬ-ಹರಿದಿನ, ಗೃಹಪ್ರವೇಶ ಹಾಗೂ ಇತರ ಶುಭ ಸಮಾರಂಭಗಳಿಗೆ ಅಗತ್ಯವಿರುವ ವಿಶೇಷ ಸೀರೆ ಸಂಗ್ರಹಗಳು ಮಹಿಳೆಯರನ್ನು ಆಕರ್ಷಿಸುತ್ತಿವೆ. ಹೊಸ ವಿನ್ಯಾಸಗಳು, ಆಕರ್ಷಕ ಬಣ್ಣಗಳ ಸಂಯೋಜನೆ ಮತ್ತು ಉತ್ತಮ ಗುಣಮಟ್ಟದ ಬಟ್ಟೆಗಳಿಂದ ಸಿದ್ಧಪಡಿಸಲಾದ ಸೀರೆಗಳು ಖರೀದಿದಾರರನ್ನು ಸೆಳೆಯುತ್ತಿವೆ. ಆಯೋಜಕರ ಪ್ರಕಾರ, ಸೀರೆಗಳನ್ನು ನೇರ ಉತ್ಪಾದಕರಿಂದ ಗ್ರಾಹಕರಿಗೆ ಒದಗಿಸುತ್ತಿರುವುದರಿಂದ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಮೈಸೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಮಹಿಳೆಯರು ಕುಟುಂಬ ಸಮೇತರಾಗಿ ಭೇಟಿ ನೀಡಿ ಖರೀದಿ ಮಾಡುತ್ತಿದ್ದು, ಪ್ರದರ್ಶನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಜೂನ್ 26ರವರೆಗೆ ನಡೆಯಲಿರುವ ಈ ಅವನಿ ಸಿಲ್ಕ್ ಸೀರೆ ಎಕ್ಸ್‌ಪೋ, ಸೀರೆ ಪ್ರಿಯರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಹಾಗೂ ವೈವಿಧ್ಯಮಯ ಸೀರೆಗಳನ್ನು ಖರೀದಿಸಲು ಉತ್ತಮ ಅವಕಾಶ ಒದಗಿಸಿದೆ.
    3
    ಮೈಸೂರು ನಗರದ ಹೆಬ್ಬಾಳ ಪ್ರದೇಶದಲ್ಲಿರುವ ಸಿಐಟಿಬಿ ಛತ್ರದಲ್ಲಿ ಜೂನ್ 22ರಂದು ಆರಂಭಗೊಂಡಿರುವ ಅವನಿ ಸಿಲ್ಕ್ ಸೀರೆ ಎಕ್ಸ್‌ಪೋ ಮಹಿಳೆಯರ ಗಮನ ಸೆಳೆಯುತ್ತಿದೆ. ಜೂನ್ 26ರವರೆಗೆ ನಡೆಯುವ ಈ ವಿಶೇಷ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ವಿವಿಧ ರಾಜ್ಯಗಳ ಸಾಂಪ್ರದಾಯಿಕ ಮತ್ತು ಆಧುನಿಕ ವಿನ್ಯಾಸದ ಸೀರೆಗಳನ್ನು ಪ್ರದರ್ಶಿಸಿ ಮಾರಾಟ ಮಾಡಲಾಗುತ್ತಿದೆ.

ಎಕ್ಸ್‌ಪೋದಲ್ಲಿ ₹400 ರಿಂದ ₹30,000 ವರೆಗಿನ ವಿವಿಧ ಬೆಲೆಯ ಸೀರೆಗಳು ಲಭ್ಯವಿದ್ದು, ಎಲ್ಲಾ ವರ್ಗದ ಗ್ರಾಹಕರಿಗೂ ಸೂಕ್ತವಾದ ಆಯ್ಕೆಗಳು ದೊರೆಯುತ್ತಿವೆ. ಗ್ರಾಹಕರನ್ನು ಆಕರ್ಷಿಸಲು “ಬೈ ಒನ್ ಗೆಟ್ ಒನ್” ವಿಶೇಷ ಆಫರ್ ಕೂಡ ನೀಡಲಾಗಿದೆ. ಇಲ್ಲಿ ಕಾಂಚೀಪುರಂ ಸಿಲ್ಕ್, ಮೈಸೂರು ಸಿಲ್ಕ್, ಬನಾರಸಿ ಸಿಲ್ಕ್, ಸಾಫ್ಟ್ ಸಿಲ್ಕ್, ಟಸ್ಸರ್ ಸಿಲ್ಕ್, ಪೈಠಾಣಿ, ಪಟೋಲಾ, ಲಿನನ್, ಕಾಟನ್, ಜಾರ್ಜೆಟ್, ಡಿಸೈನರ್, ಪಾರ್ಟಿ ವೇರ್, ಬ್ರೈಡಲ್ ಕಲೆಕ್ಷನ್, ಎಂಬ್ರಾಯ್ಡರಿ ವರ್ಕ್, ಹಾಗೂ ಡಿಜಿಟಲ್ ಪ್ರಿಂಟ್ ಸೀರೆ ಸೇರಿದಂತೆ ನೂರಾರು ಮಾದರಿಯ ಸೀರೆಗಳು ಲಭ್ಯವಿವೆ.

ಮದುವೆ, ಹಬ್ಬ-ಹರಿದಿನ, ಗೃಹಪ್ರವೇಶ ಹಾಗೂ ಇತರ ಶುಭ ಸಮಾರಂಭಗಳಿಗೆ ಅಗತ್ಯವಿರುವ ವಿಶೇಷ ಸೀರೆ ಸಂಗ್ರಹಗಳು ಮಹಿಳೆಯರನ್ನು ಆಕರ್ಷಿಸುತ್ತಿವೆ. ಹೊಸ ವಿನ್ಯಾಸಗಳು, ಆಕರ್ಷಕ ಬಣ್ಣಗಳ ಸಂಯೋಜನೆ ಮತ್ತು ಉತ್ತಮ ಗುಣಮಟ್ಟದ ಬಟ್ಟೆಗಳಿಂದ ಸಿದ್ಧಪಡಿಸಲಾದ ಸೀರೆಗಳು ಖರೀದಿದಾರರನ್ನು ಸೆಳೆಯುತ್ತಿವೆ. ಆಯೋಜಕರ ಪ್ರಕಾರ, ಸೀರೆಗಳನ್ನು ನೇರ ಉತ್ಪಾದಕರಿಂದ ಗ್ರಾಹಕರಿಗೆ ಒದಗಿಸುತ್ತಿರುವುದರಿಂದ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.

ಮೈಸೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಮಹಿಳೆಯರು ಕುಟುಂಬ ಸಮೇತರಾಗಿ ಭೇಟಿ ನೀಡಿ ಖರೀದಿ ಮಾಡುತ್ತಿದ್ದು, ಪ್ರದರ್ಶನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಜೂನ್ 26ರವರೆಗೆ ನಡೆಯಲಿರುವ ಈ ಅವನಿ ಸಿಲ್ಕ್ ಸೀರೆ ಎಕ್ಸ್‌ಪೋ, ಸೀರೆ ಪ್ರಿಯರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಹಾಗೂ ವೈವಿಧ್ಯಮಯ ಸೀರೆಗಳನ್ನು ಖರೀದಿಸಲು ಉತ್ತಮ ಅವಕಾಶ ಒದಗಿಸಿದೆ.
    user_ಹೊಂಗಿರಣ ನ್ಯೂಸ್
    ಹೊಂಗಿರಣ ನ್ಯೂಸ್
    Photographer Nanjangud, Mysuru•
    2 hrs ago
  • ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ದೇವಾಲಯದ ರಾಜಗೋಪುರ ಮುಂಭಾಗದಲ್ಲಿ ನಿಲ್ಲಿಸಿದ್ದ ಒಂದು ಕಾರಿನ ಮೇಲೆ ಆನೆ ದಾಳಿ ಮಾಡಿದೆ. ಈ ಘಟನೆಯಿಂದ ಕಾರು ಸಂಪೂರ್ಣವಾಗಿ ಜಖಂಗೊಂಡಿದ್ದು, ಭಾರಿ ನಷ್ಟ ಉಂಟಾಗಿದೆ.
    1
    ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ದೇವಾಲಯದ ರಾಜಗೋಪುರ ಮುಂಭಾಗದಲ್ಲಿ ನಿಲ್ಲಿಸಿದ್ದ ಒಂದು ಕಾರಿನ ಮೇಲೆ ಆನೆ ದಾಳಿ ಮಾಡಿದೆ. ಈ ಘಟನೆಯಿಂದ ಕಾರು ಸಂಪೂರ್ಣವಾಗಿ ಜಖಂಗೊಂಡಿದ್ದು, ಭಾರಿ ನಷ್ಟ ಉಂಟಾಗಿದೆ.
    user_S.Puttaswamyhonnur
    S.Puttaswamyhonnur
    Press reporter ಯಳಂದೂರು, ಚಾಮರಾಜನಗರ, ಕರ್ನಾಟಕ•
    13 hrs ago
  • ಬೆಂಗಳೂರಿನ ಹೆಬ್ಬಾಳದಲ್ಲಿರುವ ಮಸೀದಿ-ಎ-ಆಜಂ ಹಾಗೂ ಮದರಸಾ-ಎ-ಶಮ್ಸುಲ್ ಉಲೂಮ್‌ಗೆ ಸಂಬಂಧಿಸಿದ ಅಕ್ರಮಗಳ ಬಗ್ಗೆ ವರದಿಯಾದ ಮಾಹಿತಿಯು ಭಾರತಾದ್ಯಂತ ವೈರಲ್ ಆಗಿದೆ. ಈ ಎರಡೂ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಹಲವು ಅಕ್ರಮಗಳು ನಡೆದಿವೆ ಎಂದು ವರದಿಯು ತಿಳಿಸಿದೆ.
    1
    ಬೆಂಗಳೂರಿನ ಹೆಬ್ಬಾಳದಲ್ಲಿರುವ ಮಸೀದಿ-ಎ-ಆಜಂ ಹಾಗೂ ಮದರಸಾ-ಎ-ಶಮ್ಸುಲ್ ಉಲೂಮ್‌ಗೆ ಸಂಬಂಧಿಸಿದ ಅಕ್ರಮಗಳ ಬಗ್ಗೆ ವರದಿಯಾದ ಮಾಹಿತಿಯು ಭಾರತಾದ್ಯಂತ ವೈರಲ್ ಆಗಿದೆ. ಈ ಎರಡೂ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಹಲವು ಅಕ್ರಮಗಳು ನಡೆದಿವೆ ಎಂದು ವರದಿಯು ತಿಳಿಸಿದೆ.
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    1 hr ago
  • ಹಲಗೂರಿನಲ್ಲಿ ಸಾರ್ವಜನಿಕ ಸೇವಾ ದಿನದ ಪ್ರಯುಕ್ತ, ಜೆ.ಜೆ. ಪಬ್ಲಿಕ್ ಶಾಲಾ ವಿದ್ಯಾರ್ಥಿಗಳು ಮಂಗಳವಾರ ವಿವಿಧ ಸಾರ್ವಜನಿಕ ಸೇವಾ ಕಚೇರಿಗಳಿಗೆ ಭೇಟಿ ನೀಡಿ ಅಧಿಕಾರಿಗಳ ಕಾರ್ಯವೈಖರಿ ಮತ್ತು ಕರ್ತವ್ಯಗಳ ಬಗ್ಗೆ ತಿಳಿದುಕೊಂಡರು. ಈ ಭೇಟಿಗಳ ಭಾಗವಾಗಿ, ವಿದ್ಯಾರ್ಥಿಗಳು ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ತೆರಳಿದಾಗ, ಅಲ್ಲಿನ ವ್ಯವಸ್ಥಾಪಕಿ ಪಿ. ಶಾಂತಲಾ ಅವರು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುವುದರ ಮಹತ್ವದ ಬಗ್ಗೆ ತಿಳಿಸಿದರು. ವ್ಯವಸ್ಥಾಪಕಿಯಾಗಿ ಕರ್ತವ್ಯ ನಿರ್ವಹಿಸುವಾಗ ಅಡೆತಡೆಗಳು ಸಾಮಾನ್ಯವಾದರೂ, ಸಾರ್ವಜನಿಕರೊಂದಿಗೆ ಸೌಹಾರ್ದಯುತವಾಗಿ ಮಾತನಾಡಿ ಅವರ ಸೇವೆ ಮಾಡುವುದು ತಮ್ಮ ಧ್ಯೇಯ ಎಂದು ಪಿ. ಶಾಂತಲಾ ವಿದ್ಯಾರ್ಥಿಗಳಿಗೆ ಸ್ಪಷ್ಟಪಡಿಸಿದರು. ಬ್ಯಾಂಕಿನಲ್ಲಿ ಕರ್ತವ್ಯ ನಿರ್ವಹಿಸುವ ಬಗ್ಗೆ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿದರು ಮತ್ತು ಎಲ್ಲ ವಿದ್ಯಾರ್ಥಿಗಳಿಗೂ ಶುಭ ಕೋರಿದರು. ಗ್ರಾಮ ಪಂಚಾಯತಿ, ಸರ್ಕಾರಿ ಆಸ್ಪತ್ರೆ, ಬ್ಯಾಂಕುಗಳು, ನಾಡಕಚೇರಿ ಸೇರಿದಂತೆ ಇತರೆ ಕಚೇರಿಗಳಿಗೆ ಭೇಟಿ ನೀಡಿದ ವಿದ್ಯಾರ್ಥಿಗಳು, ಅಲ್ಲಿನ ಅಧಿಕಾರಿಗಳಿಗೆ ಸಾರ್ವಜನಿಕ ಸೇವಾ ದಿನದ ಶುಭಾಶಯ ಕೋರಿ, ಅವರ ಕೆಲಸದ ಬಗ್ಗೆ ಮಾಹಿತಿ ಪಡೆದರು. ಇದೇ ಸಂದರ್ಭದಲ್ಲಿ ಬ್ಯಾಂಕಿನ ಸಿಬ್ಬಂದಿ ಬಿ.ಕೆ. ಲಿಂಗರಾಜು ಅವರು ಮಾತನಾಡಿ, ಇಂದಿನ ವಿದ್ಯಾರ್ಥಿಗಳೇ ಮುಂದಿನ ಭವಿಷ್ಯತ್ತಿನ ಪ್ರಜೆಗಳು ಎಂದು ಹೇಳಿದರು. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಜೊತೆಗೆ ನೈತಿಕ ಶಿಕ್ಷಣದ ಅವಶ್ಯಕತೆಯನ್ನು ಒತ್ತಿಹೇಳಿದ ಅವರು, ತಮ್ಮ ತಂದೆ-ತಾಯಿಗಳಿಗೆ, ಗುರು-ಹಿರಿಯರಿಗೆ ಗೌರವ ನೀಡುವುದನ್ನು ಕಲಿಯಬೇಕು ಎಂದರು. ತಂತ್ರಜ್ಞಾನ ಹೆಚ್ಚಿದಂತೆ ಮೊಬೈಲ್ ಬಳಕೆ ಸಾಮಾನ್ಯವಾಗಿದ್ದರೂ, ಮೊಬೈಲ್‌ಗಳನ್ನು ಕೇವಲ ಒಳ್ಳೆಯ ವಿಷಯಗಳನ್ನು ಅರಿಯಲು ಮತ್ತು ವಿದ್ಯಾಭ್ಯಾಸಕ್ಕೆ ಪೂರಕವಾಗಿ ಬಳಸಬೇಕೇ ಹೊರತು ಯಾವುದೇ ಕೆಟ್ಟ ಉದ್ದೇಶಗಳಿಗೆ ಬಳಸಬಾರದು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಸಿಬ್ಬಂದಿಗಳಾದ ಜೂನಿಯರ್ ಅಸಿಸ್ಟೆಂಟ್, ಎಚ್.ಎನ್. ಮಹದೇವಸ್ವಾಮಿ, ಸಿ. ಪ್ರಭಾಕರ, ದಾಕ್ಷಾಯಿಣಿ, ಬಿ.ಕೆ. ನಿಂಗರಾಜು, ಶಿವರಾಜು, ಸಹಾಯಕರು ತೋಳಸಮ್ಮ, ರಂಜಿತಾ, ಪಿಗ್ಮಿ ಸಂಗ್ರಹಕರಾದ ಎಚ್.ಎನ್. ಪ್ರಸಾದ್, ಎಚ್.ಎನ್. ಮಹದೇವಸ್ವಾಮಿ, ಹಾಗೂ ಜೆ.ಜೆ. ಪಬ್ಲಿಕ್ ಶಾಲೆಯ ಶಿಕ್ಷಕಿ ಹೇಮಾ ಮತ್ತು ಮೇಲ್ವಿಚಾರಕ ಎಸ್. ವಿಕಾಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
    1
    ಹಲಗೂರಿನಲ್ಲಿ ಸಾರ್ವಜನಿಕ ಸೇವಾ ದಿನದ ಪ್ರಯುಕ್ತ, ಜೆ.ಜೆ. ಪಬ್ಲಿಕ್ ಶಾಲಾ ವಿದ್ಯಾರ್ಥಿಗಳು ಮಂಗಳವಾರ ವಿವಿಧ ಸಾರ್ವಜನಿಕ ಸೇವಾ ಕಚೇರಿಗಳಿಗೆ ಭೇಟಿ ನೀಡಿ ಅಧಿಕಾರಿಗಳ ಕಾರ್ಯವೈಖರಿ ಮತ್ತು ಕರ್ತವ್ಯಗಳ ಬಗ್ಗೆ ತಿಳಿದುಕೊಂಡರು. ಈ ಭೇಟಿಗಳ ಭಾಗವಾಗಿ, ವಿದ್ಯಾರ್ಥಿಗಳು ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ತೆರಳಿದಾಗ, ಅಲ್ಲಿನ ವ್ಯವಸ್ಥಾಪಕಿ ಪಿ. ಶಾಂತಲಾ ಅವರು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುವುದರ ಮಹತ್ವದ ಬಗ್ಗೆ ತಿಳಿಸಿದರು.

ವ್ಯವಸ್ಥಾಪಕಿಯಾಗಿ ಕರ್ತವ್ಯ ನಿರ್ವಹಿಸುವಾಗ ಅಡೆತಡೆಗಳು ಸಾಮಾನ್ಯವಾದರೂ, ಸಾರ್ವಜನಿಕರೊಂದಿಗೆ ಸೌಹಾರ್ದಯುತವಾಗಿ ಮಾತನಾಡಿ ಅವರ ಸೇವೆ ಮಾಡುವುದು ತಮ್ಮ ಧ್ಯೇಯ ಎಂದು ಪಿ. ಶಾಂತಲಾ ವಿದ್ಯಾರ್ಥಿಗಳಿಗೆ ಸ್ಪಷ್ಟಪಡಿಸಿದರು. ಬ್ಯಾಂಕಿನಲ್ಲಿ ಕರ್ತವ್ಯ ನಿರ್ವಹಿಸುವ ಬಗ್ಗೆ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿದರು ಮತ್ತು ಎಲ್ಲ ವಿದ್ಯಾರ್ಥಿಗಳಿಗೂ ಶುಭ ಕೋರಿದರು. ಗ್ರಾಮ ಪಂಚಾಯತಿ, ಸರ್ಕಾರಿ ಆಸ್ಪತ್ರೆ, ಬ್ಯಾಂಕುಗಳು, ನಾಡಕಚೇರಿ ಸೇರಿದಂತೆ ಇತರೆ ಕಚೇರಿಗಳಿಗೆ ಭೇಟಿ ನೀಡಿದ ವಿದ್ಯಾರ್ಥಿಗಳು, ಅಲ್ಲಿನ ಅಧಿಕಾರಿಗಳಿಗೆ ಸಾರ್ವಜನಿಕ ಸೇವಾ ದಿನದ ಶುಭಾಶಯ ಕೋರಿ, ಅವರ ಕೆಲಸದ ಬಗ್ಗೆ ಮಾಹಿತಿ ಪಡೆದರು.

ಇದೇ ಸಂದರ್ಭದಲ್ಲಿ ಬ್ಯಾಂಕಿನ ಸಿಬ್ಬಂದಿ ಬಿ.ಕೆ. ಲಿಂಗರಾಜು ಅವರು ಮಾತನಾಡಿ, ಇಂದಿನ ವಿದ್ಯಾರ್ಥಿಗಳೇ ಮುಂದಿನ ಭವಿಷ್ಯತ್ತಿನ ಪ್ರಜೆಗಳು ಎಂದು ಹೇಳಿದರು. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಜೊತೆಗೆ ನೈತಿಕ ಶಿಕ್ಷಣದ ಅವಶ್ಯಕತೆಯನ್ನು ಒತ್ತಿಹೇಳಿದ ಅವರು, ತಮ್ಮ ತಂದೆ-ತಾಯಿಗಳಿಗೆ, ಗುರು-ಹಿರಿಯರಿಗೆ ಗೌರವ ನೀಡುವುದನ್ನು ಕಲಿಯಬೇಕು ಎಂದರು. ತಂತ್ರಜ್ಞಾನ ಹೆಚ್ಚಿದಂತೆ ಮೊಬೈಲ್ ಬಳಕೆ ಸಾಮಾನ್ಯವಾಗಿದ್ದರೂ, ಮೊಬೈಲ್‌ಗಳನ್ನು ಕೇವಲ ಒಳ್ಳೆಯ ವಿಷಯಗಳನ್ನು ಅರಿಯಲು ಮತ್ತು ವಿದ್ಯಾಭ್ಯಾಸಕ್ಕೆ ಪೂರಕವಾಗಿ ಬಳಸಬೇಕೇ ಹೊರತು ಯಾವುದೇ ಕೆಟ್ಟ ಉದ್ದೇಶಗಳಿಗೆ ಬಳಸಬಾರದು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಸಿಬ್ಬಂದಿಗಳಾದ ಜೂನಿಯರ್ ಅಸಿಸ್ಟೆಂಟ್, ಎಚ್.ಎನ್. ಮಹದೇವಸ್ವಾಮಿ, ಸಿ. ಪ್ರಭಾಕರ, ದಾಕ್ಷಾಯಿಣಿ, ಬಿ.ಕೆ. ನಿಂಗರಾಜು, ಶಿವರಾಜು, ಸಹಾಯಕರು ತೋಳಸಮ್ಮ, ರಂಜಿತಾ, ಪಿಗ್ಮಿ ಸಂಗ್ರಹಕರಾದ ಎಚ್.ಎನ್. ಪ್ರಸಾದ್, ಎಚ್.ಎನ್. ಮಹದೇವಸ್ವಾಮಿ, ಹಾಗೂ ಜೆ.ಜೆ. ಪಬ್ಲಿಕ್ ಶಾಲೆಯ ಶಿಕ್ಷಕಿ ಹೇಮಾ ಮತ್ತು ಮೇಲ್ವಿಚಾರಕ ಎಸ್. ವಿಕಾಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    Agriculture cooperative ಮಳವಳ್ಳಿ, ಮಂಡ್ಯ, ಕರ್ನಾಟಕ•
    13 min ago
  • ತಂದೆ-ತಾಯಿ ಹಾಗೂ ಮಕ್ಕಳ ನಡುವಿನ ಭಾವನಾತ್ಮಕ ಬಾಂಧವ್ಯದ ಕಥಾಹಂದರ ಹೊಂದಿರುವ ‘ಕಾಲಘಟ್ಟ’ ಚಿತ್ರವು ಮಳವಳ್ಳಿ ಪಟ್ಟಣದಲ್ಲಿ ಬಿಡುಗಡೆಯಾದ ಹಿನ್ನೆಲೆಯಲ್ಲಿ, ಚಿತ್ರತಂಡವು ಪ್ರಚಾರಕ್ಕಾಗಿ ಪಟ್ಟಣಕ್ಕೆ ಭೇಟಿ ನೀಡಿತು. ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಪಟ್ಟಣದ ಮಹಾಲಕ್ಷ್ಮಿ ಚಿತ್ರಮಂದಿರಕ್ಕೆ ಆಗಮಿಸಿದ ಚಿತ್ರದ ನಾಯಕ ನಟ ನಿತಿಲ್, ನಾಯಕಿ ಖುಷಿ ಹಾಗೂ ಮಳವಳ್ಳಿ ತಾಲ್ಲೂಕಿನ ತಳಗವಾದಿ ಗ್ರಾಮದವರಾದ ನಿರ್ಮಾಪಕ ಚಿಕ್ಕೇಗೌಡ ಅವರು ಪ್ರೇಕ್ಷಕರೊಂದಿಗೆ ಕುಳಿತು ಕೆಲಕಾಲ ಚಿತ್ರ ವೀಕ್ಷಿಸಿದರು. ಚಿತ್ರ ವೀಕ್ಷಿಸಿ ಹೊರಬಂದ ಹಲವು ಪ್ರೇಕ್ಷಕರು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿಶೇಷವಾಗಿ, ಪೋಷಕರು ಮತ್ತು ಮಕ್ಕಳ ನಡುವಿನ ಬಾಂಧವ್ಯ ಹಾಳಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ತಂದೆ-ತಾಯಿ ಮತ್ತು ಮಕ್ಕಳ ಸಂಬಂಧದ ಬಗ್ಗೆ ಸಿನಿಮಾ ಮನಮುಟ್ಟುವಂತೆ ಮೂಡಿಬಂದಿದೆ ಎಂದು ಪ್ರಶಂಸಿಸಿದರು. ಪ್ರತಿಯೊಬ್ಬ ಪೋಷಕರು ಮತ್ತು ಮಕ್ಕಳು ನೋಡಲೇಬೇಕಾದ ಚಿತ್ರ ಇದಾಗಿದೆ ಎಂದು ಶಿಫಾರಸು ಮಾಡಿದರು. ಈ ವೇಳೆ, ನಾಯಕ ನಟ ನಿತಿಲ್ ಮತ್ತು ನಾಯಕಿ ಖುಷಿ ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ನಾಯಕ ನಟ ನಿತಿಲ್, ಇದು ಭಾವನಾತ್ಮಕ ಕಥಾಹಂದರದ ಸಿನಿಮಾವಾಗಿದ್ದು, ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿದೆ ಎಂದರು. ಮಳವಳ್ಳಿ ಜನತೆ ಸಿನಿಮಾ ನೋಡಿ ತುಂಬಾ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರ ಪ್ರೀತಿಗೆ ತಾನು ಚಿರಋಣಿಯಾಗಿರುವುದಾಗಿ ತಿಳಿಸಿ, ಎಲ್ಲರೂ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು. ನಾಯಕಿ ಖುಷಿ ಮಾತನಾಡಿ, ಅತ್ಯುತ್ತಮ ಸೌಂಡ್ ಎಫೆಕ್ಟ್‌ನಲ್ಲಿ ಚಿತ್ರಮಂದಿರದಲ್ಲಿ ಕುಳಿತು ಸಿನಿಮಾ ವೀಕ್ಷಿಸಿದಾಗ ಮಾತ್ರ ಈ ಸಿನಿಮಾ ಹೃದಯಕ್ಕೆ ಸ್ಪರ್ಶಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಥಿಯೇಟರ್‌ಗೆ ಬಂದು ಸಿನಿಮಾ ವೀಕ್ಷಿಸಬೇಕು ಎಂದು ಮನವಿ ಮಾಡಿದರು. ಚಿತ್ರದ ನಿರ್ಮಾಪಕ ತಳಗವಾದಿ ಚಿಕ್ಕೇಗೌಡ ಅವರು ಮಾತನಾಡಿ, ಈ ಹಿಂದೆ ‘ಖಾಲಿಡಬ್ಬ’ ಚಿತ್ರದ ಸಹ ನಿರ್ಮಾಪಕನಾಗಿದ್ದ ತಾನು, ಇದೀಗ ಸ್ವಂತ ಬ್ಯಾನರ್‌ನಲ್ಲಿ ‘ಕಾಲಘಟ್ಟ’ ಚಿತ್ರವನ್ನು ನಿರ್ಮಿಸಿದ್ದು, ಚಿತ್ರದ ಕಥೆ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿದ್ದು ರಾಜ್ಯಾಧ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು. ಹೊಸ ಕಲಾವಿದರೊಂದಿಗೆ ನಿರ್ಮಿಸಿರುವ ಈ ಚಿತ್ರವನ್ನು ಪ್ರತಿಯೊಬ್ಬರೂ ಚಿತ್ರಮಂದಿರದಲ್ಲಿ ನೋಡಿ ಪ್ರೋತ್ಸಾಹಿಸಬೇಕು ಎಂದು ಕೋರಿದ ಅವರು, ಈ ಚಿತ್ರಕ್ಕೆ ಜನ ನೀಡುವ ಪ್ರೋತ್ಸಾಹದ ಮೇಲೆ ಮುಂದೆ ಇನ್ನಷ್ಟು ಚಿತ್ರಗಳನ್ನು ನಿರ್ಮಿಸುವುದಾಗಿ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಎಂ.ಕೆ. ಮನೋಹರ್, ಟಿ.ಎನ್. ರಮೇಶ್, ಆಕಾಶ್ ಹೀರೋ ಶೋರೂಂ ಮಾಲೀಕರಾದ ಟಿ.ಸಿ. ಪ್ರಕಾಶ್ ಮತ್ತಿತರರು ಹಾಜರಿದ್ದರು.
    1
    ತಂದೆ-ತಾಯಿ ಹಾಗೂ ಮಕ್ಕಳ ನಡುವಿನ ಭಾವನಾತ್ಮಕ ಬಾಂಧವ್ಯದ ಕಥಾಹಂದರ ಹೊಂದಿರುವ ‘ಕಾಲಘಟ್ಟ’ ಚಿತ್ರವು ಮಳವಳ್ಳಿ ಪಟ್ಟಣದಲ್ಲಿ ಬಿಡುಗಡೆಯಾದ ಹಿನ್ನೆಲೆಯಲ್ಲಿ, ಚಿತ್ರತಂಡವು ಪ್ರಚಾರಕ್ಕಾಗಿ ಪಟ್ಟಣಕ್ಕೆ ಭೇಟಿ ನೀಡಿತು. ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಪಟ್ಟಣದ ಮಹಾಲಕ್ಷ್ಮಿ ಚಿತ್ರಮಂದಿರಕ್ಕೆ ಆಗಮಿಸಿದ ಚಿತ್ರದ ನಾಯಕ ನಟ ನಿತಿಲ್, ನಾಯಕಿ ಖುಷಿ ಹಾಗೂ ಮಳವಳ್ಳಿ ತಾಲ್ಲೂಕಿನ ತಳಗವಾದಿ ಗ್ರಾಮದವರಾದ ನಿರ್ಮಾಪಕ ಚಿಕ್ಕೇಗೌಡ ಅವರು ಪ್ರೇಕ್ಷಕರೊಂದಿಗೆ ಕುಳಿತು ಕೆಲಕಾಲ ಚಿತ್ರ ವೀಕ್ಷಿಸಿದರು.

ಚಿತ್ರ ವೀಕ್ಷಿಸಿ ಹೊರಬಂದ ಹಲವು ಪ್ರೇಕ್ಷಕರು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿಶೇಷವಾಗಿ, ಪೋಷಕರು ಮತ್ತು ಮಕ್ಕಳ ನಡುವಿನ ಬಾಂಧವ್ಯ ಹಾಳಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ತಂದೆ-ತಾಯಿ ಮತ್ತು ಮಕ್ಕಳ ಸಂಬಂಧದ ಬಗ್ಗೆ ಸಿನಿಮಾ ಮನಮುಟ್ಟುವಂತೆ ಮೂಡಿಬಂದಿದೆ ಎಂದು ಪ್ರಶಂಸಿಸಿದರು. ಪ್ರತಿಯೊಬ್ಬ ಪೋಷಕರು ಮತ್ತು ಮಕ್ಕಳು ನೋಡಲೇಬೇಕಾದ ಚಿತ್ರ ಇದಾಗಿದೆ ಎಂದು ಶಿಫಾರಸು ಮಾಡಿದರು. ಈ ವೇಳೆ, ನಾಯಕ ನಟ ನಿತಿಲ್ ಮತ್ತು ನಾಯಕಿ ಖುಷಿ ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ನಾಯಕ ನಟ ನಿತಿಲ್, ಇದು ಭಾವನಾತ್ಮಕ ಕಥಾಹಂದರದ ಸಿನಿಮಾವಾಗಿದ್ದು, ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿದೆ ಎಂದರು. ಮಳವಳ್ಳಿ ಜನತೆ ಸಿನಿಮಾ ನೋಡಿ ತುಂಬಾ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರ ಪ್ರೀತಿಗೆ ತಾನು ಚಿರಋಣಿಯಾಗಿರುವುದಾಗಿ ತಿಳಿಸಿ, ಎಲ್ಲರೂ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು. ನಾಯಕಿ ಖುಷಿ ಮಾತನಾಡಿ, ಅತ್ಯುತ್ತಮ ಸೌಂಡ್ ಎಫೆಕ್ಟ್‌ನಲ್ಲಿ ಚಿತ್ರಮಂದಿರದಲ್ಲಿ ಕುಳಿತು ಸಿನಿಮಾ ವೀಕ್ಷಿಸಿದಾಗ ಮಾತ್ರ ಈ ಸಿನಿಮಾ ಹೃದಯಕ್ಕೆ ಸ್ಪರ್ಶಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಥಿಯೇಟರ್‌ಗೆ ಬಂದು ಸಿನಿಮಾ ವೀಕ್ಷಿಸಬೇಕು ಎಂದು ಮನವಿ ಮಾಡಿದರು. ಚಿತ್ರದ ನಿರ್ಮಾಪಕ ತಳಗವಾದಿ ಚಿಕ್ಕೇಗೌಡ ಅವರು ಮಾತನಾಡಿ, ಈ ಹಿಂದೆ ‘ಖಾಲಿಡಬ್ಬ’ ಚಿತ್ರದ ಸಹ ನಿರ್ಮಾಪಕನಾಗಿದ್ದ ತಾನು, ಇದೀಗ ಸ್ವಂತ ಬ್ಯಾನರ್‌ನಲ್ಲಿ ‘ಕಾಲಘಟ್ಟ’ ಚಿತ್ರವನ್ನು ನಿರ್ಮಿಸಿದ್ದು, ಚಿತ್ರದ ಕಥೆ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿದ್ದು ರಾಜ್ಯಾಧ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು. ಹೊಸ ಕಲಾವಿದರೊಂದಿಗೆ ನಿರ್ಮಿಸಿರುವ ಈ ಚಿತ್ರವನ್ನು ಪ್ರತಿಯೊಬ್ಬರೂ ಚಿತ್ರಮಂದಿರದಲ್ಲಿ ನೋಡಿ ಪ್ರೋತ್ಸಾಹಿಸಬೇಕು ಎಂದು ಕೋರಿದ ಅವರು, ಈ ಚಿತ್ರಕ್ಕೆ ಜನ ನೀಡುವ ಪ್ರೋತ್ಸಾಹದ ಮೇಲೆ ಮುಂದೆ ಇನ್ನಷ್ಟು ಚಿತ್ರಗಳನ್ನು ನಿರ್ಮಿಸುವುದಾಗಿ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಎಂ.ಕೆ. ಮನೋಹರ್, ಟಿ.ಎನ್. ರಮೇಶ್, ಆಕಾಶ್ ಹೀರೋ ಶೋರೂಂ ಮಾಲೀಕರಾದ ಟಿ.ಸಿ. ಪ್ರಕಾಶ್ ಮತ್ತಿತರರು ಹಾಜರಿದ್ದರು.
    user_B mallikarjunaswamy
    B mallikarjunaswamy
    ಮಳವಳ್ಳಿ, ಮಂಡ್ಯ, ಕರ್ನಾಟಕ•
    3 hrs ago
  • ಕೊಳ್ಳೇಗಾಲದ ಹಳೆ ನಗರಸಭೆ ರಸ್ತೆಯಲ್ಲಿರುವ ರವಿ ಬಾಬು ಅವರ ಪ್ರಿಂಟಿಂಗ್ ಅಂಗಡಿಯೊಳಗೆ ಸುಮಾರು 5 ಕೆಜಿ ತೂಕದ, 3 ಅಡಿ ಉದ್ದದ ದೈತ್ಯ ಉಡವೊಂದು ಕಾಣಿಸಿಕೊಂಡು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತ್ತು. ಈ ಪರಿಸ್ಥಿತಿಯಲ್ಲಿ, ಸಮಾಜ ಸೇವಕ ಹಾಗೂ ಉರಗ ರಕ್ಷಕ ಸ್ನೇಕ್ ಬಾಬು ಅವರು ಸಮಯಪ್ರಜ್ಞೆ ಮೆರೆದು, ಆತಂಕ ಸೃಷ್ಟಿಸಿದ್ದ ಉಡಕ್ಕೆ ಯಾವುದೇ ತೊಂದರೆಯಾಗದಂತೆ ಅದನ್ನು ಸುರಕ್ಷಿತವಾಗಿ ರಕ್ಷಿಸಿದರು. ರಕ್ಷಣಾ ಕಾರ್ಯಾಚರಣೆಯ ಬಳಿಕ, ಉಡವನ್ನು ಅರಣ್ಯ ಪ್ರದೇಶದಲ್ಲಿ ಸುರಕ್ಷಿತವಾಗಿ ಬಿಡಲಾಗಿದೆ. ಸಮಾಜ ಸೇವೆ ಹಾಗೂ ಪ್ರಾಣಿ-ಪಕ್ಷಿಗಳ ರಕ್ಷಣೆಯಲ್ಲಿ ಸದಾ ಮುಂದೆ ಇರುವ ಸ್ನೇಕ್ ಬಾಬು ಅವರ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಅಭಿನಂದನೆಗಳು ವ್ಯಕ್ತವಾಗಿವೆ. ಸಹಾಯ ಅಥವಾ ಉರಗಗಳ ರಕ್ಷಣೆಗಾಗಿ ಸ್ನೇಕ್ ಬಾಬು ಅವರನ್ನು 96633 03651 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.
    1
    ಕೊಳ್ಳೇಗಾಲದ ಹಳೆ ನಗರಸಭೆ ರಸ್ತೆಯಲ್ಲಿರುವ ರವಿ ಬಾಬು ಅವರ ಪ್ರಿಂಟಿಂಗ್ ಅಂಗಡಿಯೊಳಗೆ ಸುಮಾರು 5 ಕೆಜಿ ತೂಕದ, 3 ಅಡಿ ಉದ್ದದ ದೈತ್ಯ ಉಡವೊಂದು ಕಾಣಿಸಿಕೊಂಡು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತ್ತು.

ಈ ಪರಿಸ್ಥಿತಿಯಲ್ಲಿ, ಸಮಾಜ ಸೇವಕ ಹಾಗೂ ಉರಗ ರಕ್ಷಕ ಸ್ನೇಕ್ ಬಾಬು ಅವರು ಸಮಯಪ್ರಜ್ಞೆ ಮೆರೆದು, ಆತಂಕ ಸೃಷ್ಟಿಸಿದ್ದ ಉಡಕ್ಕೆ ಯಾವುದೇ ತೊಂದರೆಯಾಗದಂತೆ ಅದನ್ನು ಸುರಕ್ಷಿತವಾಗಿ ರಕ್ಷಿಸಿದರು. ರಕ್ಷಣಾ ಕಾರ್ಯಾಚರಣೆಯ ಬಳಿಕ, ಉಡವನ್ನು ಅರಣ್ಯ ಪ್ರದೇಶದಲ್ಲಿ ಸುರಕ್ಷಿತವಾಗಿ ಬಿಡಲಾಗಿದೆ.

ಸಮಾಜ ಸೇವೆ ಹಾಗೂ ಪ್ರಾಣಿ-ಪಕ್ಷಿಗಳ ರಕ್ಷಣೆಯಲ್ಲಿ ಸದಾ ಮುಂದೆ ಇರುವ ಸ್ನೇಕ್ ಬಾಬು ಅವರ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಅಭಿನಂದನೆಗಳು ವ್ಯಕ್ತವಾಗಿವೆ. ಸಹಾಯ ಅಥವಾ ಉರಗಗಳ ರಕ್ಷಣೆಗಾಗಿ ಸ್ನೇಕ್ ಬಾಬು ಅವರನ್ನು 96633 03651 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.
    user_ಉಸ್ಮಾನ್ ಖಾನ್
    ಉಸ್ಮಾನ್ ಖಾನ್
    Local News Reporter ಹನೂರು, ಚಾಮರಾಜನಗರ, ಕರ್ನಾಟಕ•
    4 hrs ago
  • ಕನಕಪುರ ದೇಗುಲ ಮಠಾಧ್ಯಕ್ಷರಾದ ಡಾ. ಶ್ರೀ ಶ್ರೀ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳ ಅಂತಿಮ ದರ್ಶನ ಕಾರ್ಯಕ್ರಮ ಮಂಗಳವಾರ ನಡೆಯಿತು. ಈ ದುಃಖದ ಸಂದರ್ಭದಲ್ಲಿ ರಾಜ್ಯಾದ್ಯಂತ ಸಹಸ್ರಾರು ಭಕ್ತರು, ಮಠಾಧೀಶರುಗಳು, ಹರಗುರು ಚರಮೂರ್ತಿಗಳು, ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳು, ವಿವಿಧ ರಾಜಕೀಯ ಪಕ್ಷಗಳ ಗಣ್ಯರು, ಹಾಲಿ ಮತ್ತು ಮಾಜಿ ಕೇಂದ್ರ ಹಾಗೂ ರಾಜ್ಯ ಸಚಿವರುಗಳು, ಮತ್ತು ಹಾಲಿ ಹಾಗೂ ಮಾಜಿ ಶಾಸಕರುಗಳು ಆಗಮಿಸಿ ಅಂತಿಮ ದರ್ಶನ ಪಡೆದು ಭಕ್ತಿಪೂರ್ವಕ ಪ್ರಾರ್ಥನೆ ಸಲ್ಲಿಸಿದರು. ಕನಕಪುರ ದೇಗುಲ ಮಠದ ಆವರಣದಲ್ಲಿ ಪೂಜ್ಯರ ಅಂತಿಮ ದರ್ಶನಕ್ಕಾಗಿ ಎಲ್ಲ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಭಕ್ತರು ಸರದಿ ಸಾಲಿನಲ್ಲಿ ನಿಂತು ತಮ್ಮ ನೆಚ್ಚಿನ ಶ್ರೀಗಳಿಗೆ ಪುಷ್ಪನಮನ ಸಲ್ಲಿಸಿ, ಪಾದಗಳಿಗೆ ಭಕ್ತಿಯ ಪ್ರಾರ್ಥನೆ ಸಲ್ಲಿಸಿ ತಮ್ಮ ದುಃಖವನ್ನು ವ್ಯಕ್ತಪಡಿಸಿದರು. ಸುತ್ತೂರಿನ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ರಂಭಾಪುರಿ ಶ್ರೀಗಳು ಸೇರಿದಂತೆ ನಾಡಿನ ಖ್ಯಾತ ಮಠಾಧೀಶರು, ಸಾವಿರಾರು ಹರಗುರು ಚರಮೂರ್ತಿಗಳು, ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳು, ಹಾಲಿ ಮತ್ತು ಮಾಜಿ ಕೇಂದ್ರ ಹಾಗೂ ರಾಜ್ಯ ಸಚಿವರುಗಳು, ಮಾಜಿ ಮತ್ತು ಹಾಲಿ ಶಾಸಕರುಗಳು, ವಿವಿಧ ರಾಜಕೀಯ ಪಕ್ಷಗಳ ಸಾವಿರಾರು ಮುಖಂಡರುಗಳು, ಜೆ.ಎಸ್.ಎಸ್. ವಿದ್ಯಾಪೀಠದ ಅಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸಹ ಪೂಜ್ಯರ ಅಂತಿಮ ದರ್ಶನ ಪಡೆದು ಭಕ್ತಿ ಸಮರ್ಪಿಸಿದರು. ನಂತರ, ಕನಕಪುರದ ಪ್ರಮುಖ ರಸ್ತೆಗಳಲ್ಲಿ ಪೂಜ್ಯರ ಅಂತಿಮ ದರ್ಶನದ ಮೆರವಣಿಗೆಯನ್ನು ನಡೆಸಲಾಯಿತು. ತದನಂತರ, ಶ್ರೀ ದೇಗುಲ ಮಠದ ಆವರಣದಲ್ಲಿ ಮಠಾಧೀಶರುಗಳು, ಹರಗುರು ಚರಮೂರ್ತಿಗಳ ದಿವ್ಯ ಸಮ್ಮುಖದಲ್ಲಿ ಹಾಗೂ ಶ್ರೀ ಮಠದ ಡಾ. ಶ್ರೀ ಚನ್ನಬಸವಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ, ಶ್ರೀಮಠದ ಸಂಪ್ರದಾಯಬದ್ಧ ವಿಧಿವಿಧಾನಗಳ ಪ್ರಕಾರ ಪೂಜ್ಯರ ಪಾರ್ಥಿವ ಶರೀರಕ್ಕೆ ಅಂತಿಮ ಪೂಜೆ ಸಲ್ಲಿಸಿ ಅಂತಿಮ ವಿದಾಯ ಹೇಳಲಾಯಿತು.
    1
    ಕನಕಪುರ ದೇಗುಲ ಮಠಾಧ್ಯಕ್ಷರಾದ ಡಾ. ಶ್ರೀ ಶ್ರೀ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳ ಅಂತಿಮ ದರ್ಶನ ಕಾರ್ಯಕ್ರಮ ಮಂಗಳವಾರ ನಡೆಯಿತು. ಈ ದುಃಖದ ಸಂದರ್ಭದಲ್ಲಿ ರಾಜ್ಯಾದ್ಯಂತ ಸಹಸ್ರಾರು ಭಕ್ತರು, ಮಠಾಧೀಶರುಗಳು, ಹರಗುರು ಚರಮೂರ್ತಿಗಳು, ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳು, ವಿವಿಧ ರಾಜಕೀಯ ಪಕ್ಷಗಳ ಗಣ್ಯರು, ಹಾಲಿ ಮತ್ತು ಮಾಜಿ ಕೇಂದ್ರ ಹಾಗೂ ರಾಜ್ಯ ಸಚಿವರುಗಳು, ಮತ್ತು ಹಾಲಿ ಹಾಗೂ ಮಾಜಿ ಶಾಸಕರುಗಳು ಆಗಮಿಸಿ ಅಂತಿಮ ದರ್ಶನ ಪಡೆದು ಭಕ್ತಿಪೂರ್ವಕ ಪ್ರಾರ್ಥನೆ ಸಲ್ಲಿಸಿದರು.

ಕನಕಪುರ ದೇಗುಲ ಮಠದ ಆವರಣದಲ್ಲಿ ಪೂಜ್ಯರ ಅಂತಿಮ ದರ್ಶನಕ್ಕಾಗಿ ಎಲ್ಲ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಭಕ್ತರು ಸರದಿ ಸಾಲಿನಲ್ಲಿ ನಿಂತು ತಮ್ಮ ನೆಚ್ಚಿನ ಶ್ರೀಗಳಿಗೆ ಪುಷ್ಪನಮನ ಸಲ್ಲಿಸಿ, ಪಾದಗಳಿಗೆ ಭಕ್ತಿಯ ಪ್ರಾರ್ಥನೆ ಸಲ್ಲಿಸಿ ತಮ್ಮ ದುಃಖವನ್ನು ವ್ಯಕ್ತಪಡಿಸಿದರು. ಸುತ್ತೂರಿನ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ರಂಭಾಪುರಿ ಶ್ರೀಗಳು ಸೇರಿದಂತೆ ನಾಡಿನ ಖ್ಯಾತ ಮಠಾಧೀಶರು, ಸಾವಿರಾರು ಹರಗುರು ಚರಮೂರ್ತಿಗಳು, ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳು, ಹಾಲಿ ಮತ್ತು ಮಾಜಿ ಕೇಂದ್ರ ಹಾಗೂ ರಾಜ್ಯ ಸಚಿವರುಗಳು, ಮಾಜಿ ಮತ್ತು ಹಾಲಿ ಶಾಸಕರುಗಳು, ವಿವಿಧ ರಾಜಕೀಯ ಪಕ್ಷಗಳ ಸಾವಿರಾರು ಮುಖಂಡರುಗಳು, ಜೆ.ಎಸ್.ಎಸ್. ವಿದ್ಯಾಪೀಠದ ಅಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸಹ ಪೂಜ್ಯರ ಅಂತಿಮ ದರ್ಶನ ಪಡೆದು ಭಕ್ತಿ ಸಮರ್ಪಿಸಿದರು.

ನಂತರ, ಕನಕಪುರದ ಪ್ರಮುಖ ರಸ್ತೆಗಳಲ್ಲಿ ಪೂಜ್ಯರ ಅಂತಿಮ ದರ್ಶನದ ಮೆರವಣಿಗೆಯನ್ನು ನಡೆಸಲಾಯಿತು. ತದನಂತರ, ಶ್ರೀ ದೇಗುಲ ಮಠದ ಆವರಣದಲ್ಲಿ ಮಠಾಧೀಶರುಗಳು, ಹರಗುರು ಚರಮೂರ್ತಿಗಳ ದಿವ್ಯ ಸಮ್ಮುಖದಲ್ಲಿ ಹಾಗೂ ಶ್ರೀ ಮಠದ ಡಾ. ಶ್ರೀ ಚನ್ನಬಸವಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ, ಶ್ರೀಮಠದ ಸಂಪ್ರದಾಯಬದ್ಧ ವಿಧಿವಿಧಾನಗಳ ಪ್ರಕಾರ ಪೂಜ್ಯರ ಪಾರ್ಥಿವ ಶರೀರಕ್ಕೆ ಅಂತಿಮ ಪೂಜೆ ಸಲ್ಲಿಸಿ ಅಂತಿಮ ವಿದಾಯ ಹೇಳಲಾಯಿತು.
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    Agriculture cooperative ಮಳವಳ್ಳಿ, ಮಂಡ್ಯ, ಕರ್ನಾಟಕ•
    2 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.