Shuru
Apke Nagar Ki App…
ಕಲ್ಬುರ್ಗಿ ಬಿಜೆಪಿ ನಾಯಕರು ಉತ್ತರ ಕುಮಾರರು, ಮೋದಿ ಯೋಗಿ ನೋಡಿ ಬೆಂಬಲಿಸಿದ್ದೇವೆ
Kalyan karanataka news channel
ಕಲ್ಬುರ್ಗಿ ಬಿಜೆಪಿ ನಾಯಕರು ಉತ್ತರ ಕುಮಾರರು, ಮೋದಿ ಯೋಗಿ ನೋಡಿ ಬೆಂಬಲಿಸಿದ್ದೇವೆ
More news from Karnataka and nearby areas
- Post by Kalyan karanataka news channel1
- ಮಾಲೀಕಯ್ಯಾ ಗುತ್ತೇದಾರ ವಿರುದ್ಧ ನಾಟಿಕಾರ್ ಹೇಳಿಕೆಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ, 2028 ಕ್ಕೆ ಮಾಲೀಕಯ್ಯಾ ಶಾಸಕರಾಗೋದು ನಿಶ್ಚಿತ :ಬಸವರಾಜ ಜಮಾದಾರ. ಅಫಜಲಪೂರ : ತಾಲೂಕಿನಲ್ಲಿ ಹಾಲಿ ಹಾಗೂ ಮಾಜಿ ಶಾಸಕರು ಸೇರಿಕೊಂಡು ಅನೇಕರ ಮನೆಗಳನ್ನು ಒಡೆದಿದ್ದಾರೆ ಎಂದು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಶಿವಕುಮಾರ ನಾಟಿಕಾರ ನೀಡಿರುವ ಹೇಳಿಕೆ ಸಂಪೂರ್ಣ ಸುಳ್ಳು, ಆಧಾರರಹಿತ ಹಾಗೂ ರಾಜಕೀಯ ದಿವಾಳಿತನದ ಪ್ರತಿಬಿಂಬವಾಗಿದೆ ಎಂದು ಕಾಂಗ್ರೆಸ್ ಮುಖಂಡ ಬಸವರಾಜ ಜಮಾದಾರ ತೀವ್ರವಾಗಿ ವಾಗ್ದಾಳಿ ನಡೆಸಿದರು. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಜನರ ಗಮನ ಬೇರೆಡೆಗೆ ತಿರುಗಿಸಲು ಹಾಗೂ ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ನಾಟಿಕಾರ ಈ ರೀತಿಯ ಅಸಂಬದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ಯಾವುದೇ ದಾಖಲೆಗಳಿಲ್ಲದೆ, ಕೇವಲ ಸುದ್ದಿಯಾಗಲು ನೀಡಿರುವ ಈ ಹೇಳಿಕೆ ರಾಜಕೀಯ ನೈತಿಕತೆಗೆ ವಿರುದ್ಧವಾಗಿದೆ ಎಂದು ಕಿಡಿಕಾರಿದರು. ಮಾಲೀಕಯ್ಯಾ ಗುತ್ತೇದಾರ ಸೇರಿದಂತೆ ಕಾಂಗ್ರೆಸ್ ನಾಯಕರ ಮೇಲೆ ಇಂತಹ ಕಳಂಕಾರೋಪಣೆ ಮಾಡುವುದು ದುರದೃಷ್ಟಕರ. ಆರೋಪಗಳಿಗೆ ಸಾಕ್ಷ್ಯವಿದ್ದರೆ ಸಾರ್ವಜನಿಕವಾಗಿ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.ಆರು ಬಾರಿ ಶಾಸಕರಾಗಿ ಆಯ್ಕೆಯಾದ ಮಾನ್ಯ ಮಾಲೀಕಯ್ಯಾ ಗುತ್ತೇದಾರ ಅವರು 20 ಕ್ಕಿಂತ ಹೆಚ್ಚು ಬ್ರಿಡ್ಜ್ ಕಂ ಬ್ಯಾರೇಜ್ ಕಟ್ಟಿದ್ದಾರೆ, ಸೊನ್ನ ಬ್ಯಾರೇಜ್ ಸೇರಿದಂತೆ ಅನೇಕ ನೀರಾವರಿಗೆ ಕಾರ್ಯಗಳನ್ನು ಮಾಡಿ ಹಸಿರು ಕ್ರಾಂತಿ ಮಾಡಿದ್ದಾರೆ, ನೀರಾವರಿ ಮಾಡಿದ್ದರಿಂದ ಈ ಭಾಗದಲ್ಲಿ ಅತೀ ಹೆಚ್ಚು ಕಬ್ಬು ಬೆಳೆಯಲಾಗುತ್ತಿದೆ,ಅನೇಕ ಸಕ್ಕರೆ ಕಾರ್ಖಾನೆಗಳು ಈ ಭಾಗದಲ್ಲಿ ಆರಂಭವಾಗಿವೆ, ರಸ್ತೆಗಳ ಅಭಿವೃದ್ಧಿ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳು ಮಾಡಿದ್ದಾರೆ ಇದನ್ನೂ ಮಾನ್ಯ ನಾಟಿಕಾರ್ ಅವರಿಗೆ ಕಾಣಿಸುವದಿಲ್ಲವೇ ಎಂದು ಪ್ರಶ್ನಿಸಿದರು.ಅಷ್ಟೇ ಅಲ್ಲದೆ ಜನರು ಮತ್ತೊಮ್ಮೆ ಮಾಜಿ ಸಚಿವ ಮಾಲೀಕಯ್ಯಾ ಗುತ್ತೇದಾರ ಅವರನ್ನು ಶಾಸಕರಾಗಿ ಮಾಡುವಲ್ಲಿ ಯಾವುದೇ ಸಂಶಯವಿಲ್ಲ ಎಂದರು.ನಂತರ ಮಾತನಾಡಿದ ಜೆಡಿಎಸ್ ಮುಖಂಡ ಜಮೀಲ್ ಗೌಂಡಿ ತಾಲೂಕಿನಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸಿಕೊಳ್ಳಲಾಗದೆ ವಿರೋಧ ಪಕ್ಷದವರು ಅಸಹನೆಗೊಂಡು ಈ ರೀತಿಯ ಆರೋಪಗಳಿಗೆ ಇಳಿದಿದ್ದಾರೆ. ವೈಯುಕ್ತಿಕವಾಗಿ ಮಾಲೀಕಯ್ಯಾ ಗುತ್ತೇದಾರ ಅವರ ಕುಟುಂಬದ ಬಗ್ಗೆ ಹಾಗೂ ಅವರ ಬಗ್ಗೆ ಮಾತನಾಡುವದನ್ನು ನಾವು ಬಲವಾಗಿ ಖಂಡಿಸುತ್ತೇವೆ. ತಾಲೂಕಿನ ಜನತೆ ಮುಂದಿನ ದಿನಗಳಲ್ಲಿ ಮಾಲೀಕಯ್ಯಾ ಗುತ್ತೇದಾರ ಅವರ ಅಭಿವೃದ್ಧಿ ಕಾರ್ಯಗಳು ಮೆಚ್ಚಿ ಇನ್ನೊಮ್ಮೆ ತಾಲೂಕಿನಲ್ಲಿ ಅವರನ್ನೇ ಶಾಸಕರಾಗಿ ಕಾಣಲು ಬಯಸುತಿದ್ದಾರೆ ಎಂದರು.ಜನತೆ ಈ ರೀತಿಯ ಸುಳ್ಳು ರಾಜಕೀಯವನ್ನು ತಿರಸ್ಕರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.1
- Post by Jakkappa Hadari2
- ಮಾಲೀಕಯ್ಯಾ ಪರ ಜನಬೆಂಬಲ ಗಟ್ಟಿ: ಮತ್ತೆ ಶಾಸಕರಾಗೋದು ಖಚಿತ #ಅಫಜಲಪುರ #ಮಾಲೀಕಯ್ಯಾಗುತ್ತೇದಾರ #ಕಾಂಗ್ರೆಸ್ #ನಾಟಿಕಾರ್ #ರಾಜಕೀಯಆರೋಪ #ಅಭಿವೃದ್ಧಿ #ನೀರಾವರಿ #ಜನಬೆಂಬಲ #ರಾಜಕೀಯಸುದ್ದಿ #ಕನ್ನಡಸುದ್ದಿ #Afzalpur #MalikayyaGuttedar #Congress #Natikar #PoliticalNews #Development #Irrigation #KarnatakaPolitics #BreakingNews #NewsUpdate #neravaaninews neravaani1
- ನಗರದಲ್ಲಿ ಬಿಜೆಪಿ ಸಂಸ್ಥಾಪನಾ ದಿನ ಆಚರಣೆ; ಮಾಜಿ ಎಂಎಲ್ಸಿ ಅಮರನಾಥ ಪಾಟೀಲ್ ಸೇರಿದಂತೆ ಪ್ರಮುಖರು, ಗಣ್ಯರು ಪಾಲ್ಗೊಂಡಿದ್ದರು1
- ಯಾದಗಿರಿ ಜಿಲ್ಲೆಯ ಸುರಪುರ ನಗರದ ಕರವೇ ಕಾರ್ಯಾಲಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಘಟಕದ ಅಧ್ಯಕ್ಷರಾದ ವೆಂಕಟೇಶ್ ನಾಯಕ್ ಬರಿಮಟ್ಟಿ ಅವರ ನೇತೃತ್ವದಲ್ಲಿ ಕರವೇ ಕಾರ್ಯಕರ್ತರ ಸಭೆ ನಡೆಸಿ ಮಹಿಳಾ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ನೂತನ ಪದಾಧಿಕಾರಿಗಳಾಗಿ. ಗೌರವಾಧ್ಯಕ್ಷರು ಮರೆಮ್ಮ ಗೋ ಗಿ, ಅಧ್ಯಕ್ಷರಾಗಿ ದೇವಮ್ಮ ಬಿ ನಾಯಕ, ಉಪಾಧ್ಯಕ್ಷರೂಗಳಾಗಿ ಯಲ್ಲಮ್ಮ ಹಯ್ಯಾಳ ಮತ್ತು ನಾಗರತ್ನ ಯಾದವ, ಪ್ರಧಾನ ಕಾರ್ಯದರ್ಶಿಯಾಗಿ ಲಕ್ಷ್ಮೀ ಪಿ ಕಟ್ಟಿಮನಿ, ಸಹಕಾರ್ಯದರ್ಶಿಯಾಗಿ ಲಕ್ಷ್ಮೀ ಎಮ್ ಕಟ್ಟಿಮನಿ, ಸಂಘಟನಾ ಕಾರ್ಯದರ್ಶಿಯಾಗಿ ಮಲ್ಲಮ್ಮ ಕಟ್ಟಿಮನಿ, ಸಂಚಾಲಕರು ಭಾಗಮ್ಮ ಕಟ್ಟಿಮನಿ, ಖಜಾಂಚಿಯಾಗಿ ತಾಯಮ್ಮ ಅಡ್ಡೊಡಗಿ ಅವರನ್ನು ನೇಮಕ ಮಾಡಲಾಯಿತು. ಸಭೆಯಲ್ಲಿ ಮಲ್ಲು ವಿಷ್ಣುಸೇನಾ , ಲಾರಿ ಘಟಕದ ಅಧ್ಯಕ್ಷ ಅವಿನಾಶ ಹಸನಾಪುರ, ಪದಾಧಿಕಾರಿಗಳಾದ ಭೀಮಣ್ಣಗೌಡ , ಮೌನೇಶ ಬಡಿಗೇರ, ಮರೆಮ್ಮ ಹಯ್ಯಾಳ, ಶಿಲ್ಪ ದಿವಳಗುಡ್ಡ ಉಪಸ್ಥಿತರಿದ್ದರು.2
- ಒಂದು ಕುಟುಂಬದ ಸಲುವಾಗಿ ಪಕ್ಷಕ್ಕೆ ದ್ರೋಹ ಮಾಡೋದಿಲ್ಲ"ಯತ್ನಾಳ್ ಹೇಳಿಕೆ #bjp #congress #yatnal1
- Post by Kalyan karanataka news channel1