ಧಾರವಾಡ: ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಬೆಂಕಿ ತಗುಲಿ ವಿಷಯುಕ್ತ ಹೊಗೆ ಅವಾಂತರ ಖಂಡಿಸಿ ಪರಿಸರಕ್ಕಾಗಿ ನಾವು ಸಂಘಟನೆ ಪ್ರತಿಭಟನೆ ಧಾರವಾಡ ಹೊಸ ಯಲ್ಲಾಪೂರದ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಬೆಂಕಿ ಹೊತ್ತಿಕೊಂಡು ವಿಷಯುಕ್ತ ಹೊಗೆ ಧಾರವಾಡದಲ್ಲಿ ಆವರಿಸಿಕೊಂಡಿತ್ತು. ಈ ಪ್ರಕರಣ ಖಂಡಿಸಿ ಧಾರವಾಡ ನಗರದಲ್ಲಿ ಪರಿಸರಕ್ಕಾಗಿ ನಾವು ಸಂಘಟನೆ ಸದಸ್ಯರು ಧಾರವಾಡ ಜುಬಲಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ವಿದ್ಯಾಕಾಶಿ ಧಾರವಾಡದ ಕಸ ವಿಲೇವಾರಿ ಸಮಸ್ಯೆ ನಿವಾರಣೆಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಕ್ರಮ ಕೈಗೊಳ್ಳಬೇಕು. ಧಾರವಾಡ ಮಾಲಿನ್ಯ ಮುಕ್ತ ನಗರವಾಗಿ ನಿರ್ಮಾಣ ಮಾಡಲು ಎಲ್ಲರೂ ಸಹಕಾರ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಧಾರವಾಡ ಹೊಸ ಯಲ್ಲಾಪೂರದ ಕಸ ವಿಲೇವಾರಿ ಘಟಕದಿಂದ ಧಾರವಾಡ ಮಹಾನಗರ ಪಾಲಿಕೆ ಕಚೇರಿ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಪರಿಸರಕ್ಕಾಗಿ ನಾವು ಸಂಘಟನೆ ಸದಸ್ಯರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಧಾರವಾಡ: ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಬೆಂಕಿ ತಗುಲಿ ವಿಷಯುಕ್ತ ಹೊಗೆ ಅವಾಂತರ ಖಂಡಿಸಿ ಪರಿಸರಕ್ಕಾಗಿ ನಾವು ಸಂಘಟನೆ ಪ್ರತಿಭಟನೆ ಧಾರವಾಡ ಹೊಸ ಯಲ್ಲಾಪೂರದ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಬೆಂಕಿ ಹೊತ್ತಿಕೊಂಡು ವಿಷಯುಕ್ತ ಹೊಗೆ ಧಾರವಾಡದಲ್ಲಿ ಆವರಿಸಿಕೊಂಡಿತ್ತು. ಈ ಪ್ರಕರಣ ಖಂಡಿಸಿ ಧಾರವಾಡ ನಗರದಲ್ಲಿ ಪರಿಸರಕ್ಕಾಗಿ ನಾವು ಸಂಘಟನೆ ಸದಸ್ಯರು ಧಾರವಾಡ ಜುಬಲಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ವಿದ್ಯಾಕಾಶಿ ಧಾರವಾಡದ ಕಸ ವಿಲೇವಾರಿ ಸಮಸ್ಯೆ ನಿವಾರಣೆಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಕ್ರಮ ಕೈಗೊಳ್ಳಬೇಕು. ಧಾರವಾಡ ಮಾಲಿನ್ಯ ಮುಕ್ತ ನಗರವಾಗಿ ನಿರ್ಮಾಣ ಮಾಡಲು ಎಲ್ಲರೂ ಸಹಕಾರ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಧಾರವಾಡ ಹೊಸ ಯಲ್ಲಾಪೂರದ ಕಸ ವಿಲೇವಾರಿ ಘಟಕದಿಂದ ಧಾರವಾಡ ಮಹಾನಗರ ಪಾಲಿಕೆ ಕಚೇರಿ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಪರಿಸರಕ್ಕಾಗಿ ನಾವು ಸಂಘಟನೆ ಸದಸ್ಯರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.
- ಧಾರವಾಡ: ಆಶಾಗಳ ಸಂಖ್ಯೆಯನ್ನು ತರ್ಕಬದ್ಧಗೊಳಿಸುವ ಹೆಸರಿನಲ್ಲಿ ಆಶಾ ಕಾರ್ಯಕರ್ತೆಯರನ್ನು ಸೇವೆಯಿಂದ ವಜಾಗೊಳಿಸುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರ ಕೊಟ್ಟ ಭರವಸೆ ಈಡೇರಿಸಲು ವಿಫಲವಾಗಿದೆ. ಏನೇ ಬರಲಿ ಒಗ್ಗಟ್ಟಿರಲಿ ಎಂದು ರಾಜ್ಯ ಸರ್ಕಾರದ ವಿರುದ್ಧ ಆಶಾ ಕಾರ್ಯಕರ್ತೆಯರು ಘೋಷಣೆ ಕೂಗುತ್ತ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಭುವನಾ ಬಳ್ಳಾರಿ, ಮಂಜುಳಾ ಗಾಡಗೋಳಿ, ರಾಜೇಶ್ವರಿ ಕೋರಿ, ನಂದಾ ದೊಡ್ಡಮನಿ, ರೇಣುಕಾ ಹನಸಿ ಸೇರಿದಂತೆ ಇತರರಿದ್ದರು.1
- ಅಳ್ನಾವರ ತಾಲ್ಲೂಕಿನಲ್ಲಿ ಮಂಗಳವಾರ ಸಂಜೆ ಸುರಿದ ಮಳೆಯಲ್ಲಿ ಆಣಿಕಲ್ಲನ್ನು ಆರಿಸುವ ದೃಶ್ಯ ಅಳ್ನಾವರ ತಾಲ್ಲೂಕಿನಲ್ಲಿ ಉತ್ತಮ ಮಳೆ ಅಳ್ನಾವರ: ತಾಲ್ಲೂಕಿನ ಹೊನ್ನಾಪೂರ, ಬೆಣಚಿ, ಕುಂಬಾರಕೊಪ್ಪ, ಕಂಬಾರಗಣವಿ, ಅರವಟಗಿ, ಡೋರಿ ಮುಂತಾದ ಗ್ರಾಮಗಳಲ್ಲಿ ಮಂಗಳವಾರ ಸAಜೆ ಸುಮಾರು ಒಂದು ಗಂಟೆ ಧಾರಾಕಾರ ಮಳೆ ಸುರಿದು ವಾತಾವರಣ ತಂಪಾಗಿಸುವುದರ ಜೊತೆಗೆ ಯುಗಾದಿ ಹಬ್ಬಕ್ಕೆ ಉತ್ತಮ ಮುನ್ನುಡಿ ಬರೆದಿದೆ. ಪಟ್ಟಣದಲ್ಲಿ ಜೋರಾದ ಗಾಳಿ ಬೀಸಿದ ಪ್ರಯುಕ್ತ ಮಳೆ ಹಾರಿ ಹೋಯಿತು. ಆದರೂ ಒಂದು ತಾಸಿಗಿಂತ ಹೆಚ್ಚು ಸಾಧಾರಣ ಮಳೆ ಬಂತು. ಸಂಜೆ ಹೊತ್ತು ವಿದ್ಯುತ್ ಸಂಪರ್ಕ ಇರಲಿಲ್ಲ. ಮಂಗಳವಾರ ಸಂತೆಗೆ ಆಗಮಿಸಿದ ಜನ ಹಾಗೂ ಶಾಲೆ ಬಿಟ್ಟ ನಂತರ ವಿದ್ಯಾರ್ಥಿಗಳು ಮನೆ ಸೇರಲು ಪರದಾಡಿದರು. ಸಂತೆಗೆ ಬಂದ ಜನ ಅಲ್ಲಲ್ಲಿ ಆಶ್ರಯ ಪಡೆದರು. ಮುಖ್ಯ ರಸ್ತೆಯಲ್ಲಿ ಸಂಚಾರ ದಟ್ಟಣೆ ಸ್ಥಗಿತಗೊಂಡಿತ್ತು. ಅಲ್ಪ ಪ್ರಮಾಣದಲ್ಲಿ ಆಣೆಕಲ್ಲು ಬಿತ್ತು. ಮಕ್ಕಳು ಸೇರಿ ಮೊದಲು ಮಳೆಯಲ್ಲಿ ನೆನೆದು ಸಂತಸ ಪಟ್ಟರು. ಬಸ್ ನಿಲ್ದಾಣದ ಜನ ಮಳೆಯಿಂದ ಹೊರಗೆ ಹೋಗದೆ ನಿಲ್ದಾಣದ ಆವರಣದಲ್ಲಿ ಕಾಲ ಕಳೆದರು. ಗುಡುಗು ಮಿಂಚಿನ ಅರ್ಬಟ ಜೋರಾಗಿತ್ತು. ವಿವಿಧಡೆ ಯುಗಾದಿ ಹಬ್ಬದ ತಯಾರಿ ಬರದಿಂದ ನಡೆದಿದೆ. ಯುಗಾದಿಯಂದು ರೈತರು ತಮ್ಮ ಹೊಲದಲ್ಲಿ ಪೂಜೆ ಸಲ್ಲಿಸುವುದು ವಾಡಿಕೆ, ನಂತರ ಬಿತ್ತನೆಗೆ ಭೂಮಿ ಹದ ಮಾಡಲು ಈ ಮಳೆ ಸಹಕಾರಿಯಾಯಿತು ಎಂದು ಬೆಣಚಿ ಗ್ರಾಮದ ರೈತ ಮಲ್ಲನಗೌಡ ಪಾಟೀಲ ತಿಳಿಸಿದರು. ಕಬ್ಬು ಬೆಳೆಗೆ ಈ ಮಳೆ ಸಂಜೀವಿನಿಯAತೆ ಎಂದು ಕಂಬಾರಗಣವಿ ರೈತ ಅಶೋಕ ಜೋಡಟ್ಟಿ ಹೇಳಿದರು. ಇನ್ನೂ ಸನಿಹದ ಹೊನ್ನಾಪೂರ ಗ್ರಾಮದ ಹೊರ ವಲಯದ ಹಳ್ಳ ತುಂಬಿ ನೀರು ಹರಿದು ಹೋಗಿದೆ ಎಂದು ಶಂಕರ ಕಲಾಜ ತಿಳಿಸಿದರು.3
- gadag jilla Snake Raheman 99164034485
- ಕುಂದಾನಗರಿ ಬೆಳಗಾವಿ ಜಿಲ್ಲೆಯಲ್ಲಿ ಆಲಿಕಲ್ಲು ಮಳೆಯಾಗುತ್ತಿದೆ. ಶಿವಬಸವನಗರ, ನೆಹರು ನಗರ, ಎಸ್ ಪಿ ಕಚೇರಿ ಸುತ್ತಮುತ್ತ ಭಾರಿ ಆಲಿಕಲ್ಲು ಮಳೆಯಾಅಗುತ್ತಿದ್ದು, ಏಕಾಏಕಿ ಸುರಿದ ಮಳೆಗೆ ಜನರು ಕಂಗಾಲಾಗಿದ್ದಾರೆ.1
- Post by Mayur TV Hangal YouTube c1
- #onlinetv24x7 #tumkur #ಶ್ರೀಶನಿಮಹಾತ್ಮ #ಶ್ರೀಶನಿದೇವ #ಶನಿಮಹಾತ್ಮ #ಶ್ರೀಕ್ಷೇತ್ರದೊಂಬರಟ್ಟಿ #ಕುಣಿಗಲ್ #ಶ್ರೀಶನಿಮಹಾತ್ಮ1
- ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ಮಂಗಳವಾರ 2026 ರ ಪ್ರಥಮ ಆಲಿ ಕಲ್ಲಿನ ಮಳೆ ಸುರಿಯಿತು, ಮಿಂಚು ಗುಡುಗು ಗಾಳಿ ಸಹಿತ ಆಗಮಿಸಿದ ಮಳೆ ಚಟಪಟ ಆಲಿಕಲ್ಲಿನೊಂದಿಗೆ ಸುರಿಯಿತು, ಆಲಿಕಲ್ಲನ್ನು ಕಂಡ ಚಿನ್ನರು ಆಲಿಕಲ್ಲನ್ನು ಆರಿಸಿಕೊಂಡು ತಿಂದಿದ್ದು ಕಂಡುಬಂದಿತು.4
- ಧಾರವಾಡ ಹೊಸ ಯಲ್ಲಾಪೂರದ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಬೆಂಕಿ ಹೊತ್ತಿಕೊಂಡು ವಿಷಯುಕ್ತ ಹೊಗೆ ಧಾರವಾಡದಲ್ಲಿ ಆವರಿಸಿಕೊಂಡಿತ್ತು. ಈ ಪ್ರಕರಣ ಖಂಡಿಸಿ ಧಾರವಾಡ ನಗರದಲ್ಲಿ ಪರಿಸರಕ್ಕಾಗಿ ನಾವು ಸಂಘಟನೆ ಸದಸ್ಯರು ಧಾರವಾಡ ಜುಬಲಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ವಿದ್ಯಾಕಾಶಿ ಧಾರವಾಡದ ಕಸ ವಿಲೇವಾರಿ ಸಮಸ್ಯೆ ನಿವಾರಣೆಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಕ್ರಮ ಕೈಗೊಳ್ಳಬೇಕು. ಧಾರವಾಡ ಮಾಲಿನ್ಯ ಮುಕ್ತ ನಗರವಾಗಿ ನಿರ್ಮಾಣ ಮಾಡಲು ಎಲ್ಲರೂ ಸಹಕಾರ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಧಾರವಾಡ ಹೊಸ ಯಲ್ಲಾಪೂರದ ಕಸ ವಿಲೇವಾರಿ ಘಟಕದಿಂದ ಧಾರವಾಡ ಮಹಾನಗರ ಪಾಲಿಕೆ ಕಚೇರಿ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಪರಿಸರಕ್ಕಾಗಿ ನಾವು ಸಂಘಟನೆ ಸದಸ್ಯರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.1