Shuru
Apke Nagar Ki App…
ಬೆಂಗಳೂರಿನ ಶ್ರೀರಾಂಪುರ ಸನ್ ರೈಸ್ ಸರ್ಕಲ್ ಬಳಿ ಡಾ. ಬಿ.ಆರ್. ಅಂಬೇಡ್ಕರ್ ಪುತ್ತಳಿಗೆ ದೀಪ ಬೆಳಗಿಸಿದ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ. ವೈ .ವಿಜಯೇಂದ್ರ ಶ್ರೇಷ್ಠ ಸಂವಿಧಾನದ ಮೂಲಕ ಸಮಾನತೆಯ ಹಾದಿ ತೋರಿದ ಮಹಾಚೇತನ, ನವ ಭಾರತದ ನಿರ್ಮಾಣಕ್ಕೆ ಸುಭದ್ರ ಅಡಿಪಾಯ ಹಾಕಿದ ಅಪ್ರತಿಮ ದಾರ್ಶನಿಕ, ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸಂಸ್ಮರಣೆ ಪ್ರತಿಯೊಬ್ಬ ಭಾರತೀಯನ ಸಹಜ ಕರ್ತವ್ಯ. ಬೆಂಗಳೂರಿನ ಶ್ರೀ ರಾಂಪುರ ಸನ್ ರೈಸ್ ಸರ್ಕಲ್ ಬಳಿ ಡಾ.ಅಂಬೇಡ್ಕರ್ ಜಯಂತಿ ಆಚರಣೆ ಅಂಗವಾಗಿ ಅವರ ಪುತ್ತಳಿ ಮುಂದೆ ದೀಪವನ್ನು ಹಚ್ಚಿದ ಯುಗಪುರುಷನಿಗೆ ಗೌರವ ಸಲ್ಲಿಸಿದ ಬಿಜೆಪಿ ರಾಜ್ಯಾಧ್ಯಕ್ಷರು ಬಿ ವೈ ವಿಜಯೇಂದ್ರ ರವರು. ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಹಾಗೂ ಸಂಸದರಾದ ಗೋವಿಂದ ಎಂ ಕಾರಜೋಳ, ಬೆಂಗಳೂರು ಕೇಂದ್ರ ಅಧ್ಯಕ್ಷ ಸಪ್ತಗಿರಿಗೌಡ, ಮುಖಂಡರಾದ ಶ್ರೀ ಜಗದೀಶ್ ಹಿರೇಮನಿ ಸೇರಿದಂತೆ ಹಲವಾರು ಪ್ರಮುಖರು, ಕಾರ್ಯಕರ್ತರು, ನಾಗರಿಕರು ಉಪಸ್ಥಿತರಿದ್ದರು.
Press Narashimha swamy SN
ಬೆಂಗಳೂರಿನ ಶ್ರೀರಾಂಪುರ ಸನ್ ರೈಸ್ ಸರ್ಕಲ್ ಬಳಿ ಡಾ. ಬಿ.ಆರ್. ಅಂಬೇಡ್ಕರ್ ಪುತ್ತಳಿಗೆ ದೀಪ ಬೆಳಗಿಸಿದ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ. ವೈ .ವಿಜಯೇಂದ್ರ ಶ್ರೇಷ್ಠ ಸಂವಿಧಾನದ ಮೂಲಕ ಸಮಾನತೆಯ ಹಾದಿ ತೋರಿದ ಮಹಾಚೇತನ, ನವ ಭಾರತದ ನಿರ್ಮಾಣಕ್ಕೆ ಸುಭದ್ರ ಅಡಿಪಾಯ ಹಾಕಿದ ಅಪ್ರತಿಮ ದಾರ್ಶನಿಕ, ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸಂಸ್ಮರಣೆ ಪ್ರತಿಯೊಬ್ಬ ಭಾರತೀಯನ ಸಹಜ ಕರ್ತವ್ಯ. ಬೆಂಗಳೂರಿನ ಶ್ರೀ ರಾಂಪುರ ಸನ್ ರೈಸ್ ಸರ್ಕಲ್ ಬಳಿ ಡಾ.ಅಂಬೇಡ್ಕರ್ ಜಯಂತಿ ಆಚರಣೆ ಅಂಗವಾಗಿ ಅವರ ಪುತ್ತಳಿ ಮುಂದೆ ದೀಪವನ್ನು ಹಚ್ಚಿದ ಯುಗಪುರುಷನಿಗೆ ಗೌರವ ಸಲ್ಲಿಸಿದ ಬಿಜೆಪಿ ರಾಜ್ಯಾಧ್ಯಕ್ಷರು ಬಿ ವೈ ವಿಜಯೇಂದ್ರ ರವರು. ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಹಾಗೂ ಸಂಸದರಾದ ಗೋವಿಂದ ಎಂ ಕಾರಜೋಳ, ಬೆಂಗಳೂರು ಕೇಂದ್ರ ಅಧ್ಯಕ್ಷ ಸಪ್ತಗಿರಿಗೌಡ, ಮುಖಂಡರಾದ ಶ್ರೀ ಜಗದೀಶ್ ಹಿರೇಮನಿ ಸೇರಿದಂತೆ ಹಲವಾರು ಪ್ರಮುಖರು, ಕಾರ್ಯಕರ್ತರು, ನಾಗರಿಕರು ಉಪಸ್ಥಿತರಿದ್ದರು.
More news from ಕರ್ನಾಟಕ and nearby areas
- Post by Suresh Belagere1
- *ಕಪ್ಪತ್ತ ಮಲ್ಲಣ್ಣನ ದರ್ಶನಕ್ಕೆ ಹಾದಿಯಿಲ್ಲ*.. ಭಕ್ತರ ಕಷ್ಟಕ್ಕೆ ಕೊನೆಯಿಲ್ಲ*! 🙏💔 *ಕಪ್ಪತ್ತಗುಡ್ಡದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಅಭಿವೃದ್ಧಿಗಾಗಿ ಭಕ್ತರ ಆಗ್ರಹ. ಸಚಿವ ಹೆಚ್.ಕೆ. ಪಾಟೀಲರ ಪುತ್ರನಿಗೆ ಮನವಿ1
- ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಸಚಿವ ಹೆಚ್ ಆಂಜನೇಯ ಅವರು ಮಾತನಾಡಿದ್ದು ದಲಿತರಿಗೆ ಅಗ್ರಸ್ಥಾನ ಕೊಟ್ಟ ಪಕ್ಷ ಅದು ಕಾಂಗ್ರೆಸ್ ಆಗಿದೆ. ಕೇಂದ್ರದ ನಾಯಕರು ದಲಿತರು, ರಾಜ್ಯಸಭಾ ವಿರೋಧ ಪಕ್ಷದ ನಾಯಕರು ಕೂಡ ದಲಿತರು, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೊಟ್ಟಿದ್ದಾರೆ.ರಾಜ್ಯದಲ್ಲೂ ಕೂಡ ದಲಿತರಿಗೆ ಅವಕಾಶ ಕೊಟ್ಟಿದ್ದಾರೆ. ಬಿಜೆಪಿಯವರು ಎಷ್ಟು ಬಾರಿ ರಾಜ್ಯ ಘಟಕದ ಅಧ್ಯಕ್ಷರನ್ನ ದಲಿತರಿಗೆ ಕೊಟ್ಟಿದ್ದಾರೆ ಮಿಸ್ಟರ್ ಕಾರಜೋಳ್ ಎಂದು ಹೆಚ್ ಆಂಜನೇಯ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಎಂದರೆ ಎಂದರೆ ಸಾಮಾಜಿಕ ನ್ಯಾಯ, ಸಾಮಾಜಿಕ ನ್ಯಾಯ ಎಂದರೆ ಕಾಂಗ್ರೆಸ್ ಆಗಿದೆ ಎಂದು ಹೆಚ್ ಆಂಜನೇಯ ಪ್ರತಿಕ್ರಿಯೆ ನೀಡಿದ್ದಾರೆ1
- ವಿಜಯನಗರ: ಔಷಧಿಗಳ ಅಂಗಡಿಗಳಿಗೆ ವಿಜಯನಗರ ಡಿಸಿ, ಎಸ್ಪಿ ದಿಡೀರ್ ಭೇಟಿ, ನೀಡಿ ಪರಿಶೀಲನೆ ನಡೆಸಿದರು. ವಿಜಯನಗರ ಡಿಸಿ ಕವಿತಾ ಮನ್ನಿಕೇರಿ, ಎಸ್ಪಿ ಜಾಹ್ನವಿ, ಡ್ರಗ್ ಕಂಟ್ರೋಲ್ ಆಫೀಸರ್ ಭೇಟಿ ನೀಡಿದರು. ಮಾದಕ ವ್ಯಸನಿಗಳು, ಡ್ರಗ್ ಅಡಿಕ್ಟರ್ ಔಷಧಿಗಳ ಬಳಕೆಗೆ ಮುಂದಾಗುತ್ತಿರೋ ಮಾಹಿತಿ ಮೇರೆಗೆ, ಔಷಧಿಗಳ ಅಂಗಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವೈದ್ಯರ ಬರೆದಿರೋ ಔಷಧಿಗಳ ರಸೀದಿ ಇಲ್ಲದೇ ಮಾತ್ರೆ, ಔಷಧಿಗಳನ್ನ ನೀಡದಂತೆ ತಾಕೀತು ಮಾಡಿದರು. ಔಷಧಿ ಅಂಗಡಿಗಳ ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಿದ ಡಿಸಿ, ಎಸ್ಪಿ, ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಬಸ್ ನಿಲ್ದಾಣದ ಬಳಿಯ ಮೆಡಿಕಲ್ ಶಾಪ್ ಗಳಿಗೆ ವಿಸಿಟ್ ಮಾಡಿ ಮಾಲೀಕರಿಗೆ ವಾರ್ನ್ ನೀಡಿದರು. ಔಷಧಿ ಅಂಗಡಿಗಳ ಮುಂದೆ ಕಡ್ಡಾಯವಾಗಿ ಇಲಾಖೆ ನೀಡಿರೋ ಸೂಚನಾ ಫಲಕ ಅಳವಡಿಸುವಂತೆ ಸೂಚನೆ ನೀಡಿದ ಎಸ್ಪಿ, ಔಷಧಿಗಳ ವಹಿವಾಟನ್ನ ಕಂಪ್ಯೂಟರ್ ಹಾಗೂ ರಿಜಿಸ್ಟರ್ ಬುಕ್ ನಲ್ಲಿ ಕಡ್ಡಾಯವಾಗಿ ದಾಖಲಿಸಬೇಕು, ವೈದ್ಯರ ರಸೀದಿಯಿಲ್ಲದೇ ಮಾತ್ರೆ, ಔಷಧಿಗಳನ್ನ ನೀಡಿವಂತಿಲ್ಲ, ಒಂದು ವೇಳೆ ವೈದ್ಯರ ರಸೀದಿ ಇಲ್ಲದೇ ಮಾತ್ರೆಗಳನ್ನ ನೀಡಿದ್ರೆ ಕಠಿಣ ಕ್ರಮ ಜರುಗಿಸಲಾಗುವದು ಎಂದರು.1
- ಬಾಯಿಗೆ ರುಚಿನೀಡುವ: ನಾಲಿಗೆಗೆ ರುಚಿ ನೀಡುವ ಅಥವಾ ರುಚಿಕರವಾದ (Tasty to the tongue). ತಂಪು ಪಾನೀಯ: ಕೋಲ್ಡ್ ಡ್ರಿಂಕ್ಸ್ ಅಥವಾ ತಂಪು ಪಾನೀಯಗಳು (Soft drinks/Cold drinks). ಕುಡಿಯೋ ಮುನ್ನ: ಕುಡಿಯುವ ಮೊದಲು (Before drinking). ಈ ವಿಡಿಯೋ ನೋಡಿ: ಈ ವಿಡಿಯೋವನ್ನು ವೀಕ್ಷಿಸಿ (Watch this video). ಸಂದರ್ಭ (Context) ಇದು ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಸುದ್ದಿ ವಾಹಿನಿಗಳಲ್ಲಿ ಕಂಡುಬರುವ 'ಎಚ್ಚರಿಕೆ' (Cautionary) ಸಂದೇಶವಾಗಿದೆ. ತಂಪು ಪಾನೀಯಗಳಲ್ಲಿರುವ1
- ಕುಷ್ಟಗಿ:- ಯಾವುದೇ ಅಸಂಘಟಿತ ಮತ್ತು ಸಂಘಟಿತ ಕಾರ್ಮಿಕ ಸಂಘಟನೆಗಳು ಇರಲಿ ತುಳಿತಕ್ಕೆ ಒಳಗಾಗಿರುವಂತಹ ಶೋಷಿತ ಸಮುದಾಯದ ಪರವಾಗಿ ಸಂಘಟನೆಗಳು ಧ್ವನಿ ಎತ್ತಿ ನಿಲ್ಲಬೇಕು ಅಂದಾಗ ಮಾತ್ರ ನಿಜವಾದ ಕಾರ್ಮಿಕನಿಗೆ ನ್ಯಾಯ ದೊರೆಯುತ್ತದೆ ಎಂದು ಗೌರವಾನ್ವಿತ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ತಾಲೂಕು ಕಾನೂನು ಸೇವಾ ಸಮಿತಿ ಎಮ್.ಎಲ್.ಪೂಜೇರಿ ಹೇಳಿದರು. ಇಲ್ಲಿನ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಗಳು ತಮ್ಮ ದೈನಂದಿನ ನಿತ್ಯ ಕೆಲಸ ಕಾರ್ಯದಲ್ಲಿ ಕಾನೂನಾತ್ಮಕವಾಗಿ ಕೆಲಸ ಕಾರ್ಯವನ್ನು ಮಾಡಿದ್ದೆ ಆದರೆ ಕಾರ್ಮಿಕನ ಬೆನ್ನಿಗೆ ಕಾನೂನು ಸಹಾಯವಾಗಿ ನಿಲ್ಲುತ್ತದೆ. ಆದರೆ ಈ ಜಗತ್ತಿನಲ್ಲಿ ಜಾತಿ ವ್ಯವಸ್ಥೆ ತಾಂಡವಾಡುತ್ತಿದ್ದ ಸಮಯದಲ್ಲಿ ಜಾತಿ ವ್ಯವಸ್ಥೆ ಹೋಗಲಾಡಿಸಲು ಗೌತಮ್ ಬುದ್ದ ಮತ್ತು ಕಾಯಕ ಹೋಗಿ ಬಸವಣ್ಣ ಕಾರ್ಯ ಯಶಸ್ವಿಯಾಗಿದೆ. ಕಾಯಕ ಯೋಗಿ ಬಸವಣ್ಣನವರು ಯಾವುದೇ ಕಾರ್ಮಿಕ ಇರಲಿ ಅವರ ಪರವಾಗಿ ನಿಂತು ಶೋಷಣೆ ಒಳಗಾದ ಸಮುದಾಯದ ಪರವಾಗಿ ನಿಂತು ನಮ್ಮ ರಾಜ್ಯ ಮತ್ತು ದೇಶದಲ್ಲಿ ನೆಡೆಯುತ್ತಿದ್ದ ಜಾತಿ ವ್ಯವಸ್ಥೆ ಹೋಗಲಾಡಿಸಿ ದುಡಿಯುವ ಕೈಗಳಿಗೆ ಕೆಲಸವನ್ನು ಬೆಂಬಲವಾಗಿ ನಿಂತುಕೊಂಡವರು ಆದ್ದರಿಂದ ಯಾವುದೇ ಕಾರ್ಮಿಕ ಸಂಘಟನೆಗಳು ಇರಲಿ ತುಳಿತಕ್ಕೆ ಒಳಗಾದ ಕಾರ್ಮಿಕ ಸಂಘಟನೆಗಳು ಧ್ವನಿ ಎತ್ತಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ AD ಗೀತಾ ಅಯ್ಯಪ್ಪ, ಡಿ.ಮಾರುತಿ ಪ್ಯಾನಲ್ ವಕೀಲರು ಕುಷ್ಟಗಿ, ಪಿ.ಆರ್.ಹುನಗುಂದ, ಪುರಸಭೆ ಮುಖ್ಯಾಧಿಕಾರಿ ವಿ.ಐ ಬಿಳಗಿ, H.R ನಾಯಕ, ರಾಯನಗೌಡ ಎಲ್, ಸರಕಾರಿ ವಕೀಲರಾದ ಪರಸಪ್ಪ ಗುಜಮಾಗಡಿ, ಶಶಿಧರ ಎಮ್.ಶಟ್ಟರ್, ಪ್ರಧಾನ ಕಾರ್ಯದರ್ಶಿಗಳು ತಾಲೂಕು ವಕೀಲರ ಸಂಘ ಕುಷ್ಟಗಿ, ಬಸವರಾಜ ಹಿರೇಗೌಡ್ರ ಯೋಜನಾ ನಿದೇರ್ಶಕರು ಬಾಲಕಾರ್ಮಿಕ ಯೋಜನೆ ಕೊಪ್ಪಳ, ಕುಮಾರಿ ನಿವೇದಿತಾ ಡಿ ಕಾರ್ಮಿಕ ಇಲಾಖೆ ಅಧಿಕಾರಿಗಳು ಕುಷ್ಟಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.3
- Post by Karibasava Balal1
- Post by Suresh Belagere1
- ಚಿತ್ರದುರ್ಗದ ಭೋವಿ ಅಭಿವೃದ್ಧಿ ನಿಗಮದ ಕಚೇರಿಗೆ ನಿಗಮದ ಅಧ್ಯಕ್ಷರಾದ ಎಂ.ರಾಮಪ್ಪ ಅನಿರೀಕ್ಷಿತ ಬೇಟಿ ನೀಡಿದ್ದಾರೆ. ಈ ವೇಳೆ ಅವರು ಕಚೇರಿಯ ಖಡತಗಳನ್ನ ಪರಿಶೀಲನೆ ನಡೆಸಿದ್ದು ಸಾರ್ವಜನಿಕರಿಗೆ ಸರ್ಕಾರದ ಯೋಜನೆಗಳನ್ನ ಸರೊಯಾದ ರೀತಿಯಲ್ಲಿ ತಲುಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.1