ನೀರಾವರಿ ಯೋಜನೆಗೆ ಒತ್ತಾಯಿಸಿ ಬೆಂಗಳೂರಿಗೆ ಅನ್ನದಾತರ ಪಾದಯಾತ್ರೆ ಉಡುತೊರೆ ಹಳ್ಳ ಜಲಾಶಯ ಸೇರಿದಂತೆ ಹನೂರು ತಾಲ್ಲೂಕಿನ ಪ್ರಮುಖ ಕೆರೆಗಳಿಗೆ ನೀರು ತುಂಬಿಸಲು 491 ಕೋಟಿ ರೂ. ವೆಚ್ಚದ ಡಿಪಿಆರ್ಗೆ ಅನುಮೋದನೆ ನೀಡಬೇಕು ಮತ್ತು ಬಜೆಟ್ನಲ್ಲಿ ಅನುದಾನ ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯಿಸಿದೆ. ರಾಜ್ಯಾಧ್ಯಕ್ಷ ಬಡಗಲುಪುರ ನಾಗೇಂದ್ರ ತಿಳಿಸಿದ್ದಾರೆ, ಫೆಬ್ರವರಿ 25ರಂದು ಅಜ್ಜಿಪುರ ಗ್ರಾಮದಿಂದ ಬೆಂಗಳೂರು ವಿಧಾನಸೌಧದ ವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಆರಂಭದಲ್ಲಿ ಸಾವಿರಕ್ಕೂ ಹೆಚ್ಚು ರೈತರು ಭಾಗವಹಿಸಿ, ನಂತರ 300ಕ್ಕೂ ಹೆಚ್ಚು ನಿರಂತರ ಪ್ರತಿಭಟನೆ ನಡೆಸಲಿದ್ದಾರೆ. ಸಂಕಷ್ಟದಲ್ಲಿ ಇರುವ ಗ್ರಾಮಗಳಿಗೆ ಕುಡಿಯುವ ನೀರು, ಕೃಷಿ ನೀರಾವರಿ ವ್ಯವಸ್ಥೆ ಕಲ್ಪಿಸುವಂತೆ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಸಂಘ ಮುನ್ಸೂಚನೆ ನೀಡಿದ್ದು, ಅಗತ್ಯವೆನಿಸಿದರೆ ಮುಖ್ಯಮಂತ್ರಿಗಳು, ಅರಣ್ಯ ಮತ್ತು ನೀರಾವರಿ ಸಚಿವರ ಮನೆಗಳಿಗೆ ನೀರಿನ ಸರಬರಾಜು ಬಂದ್ ಮಾಡುವ ಮೂಲಕ ತೀವ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಲಾಗಿದೆ.
ನೀರಾವರಿ ಯೋಜನೆಗೆ ಒತ್ತಾಯಿಸಿ ಬೆಂಗಳೂರಿಗೆ ಅನ್ನದಾತರ ಪಾದಯಾತ್ರೆ ಉಡುತೊರೆ ಹಳ್ಳ ಜಲಾಶಯ ಸೇರಿದಂತೆ ಹನೂರು ತಾಲ್ಲೂಕಿನ ಪ್ರಮುಖ ಕೆರೆಗಳಿಗೆ ನೀರು ತುಂಬಿಸಲು 491 ಕೋಟಿ ರೂ. ವೆಚ್ಚದ ಡಿಪಿಆರ್ಗೆ ಅನುಮೋದನೆ ನೀಡಬೇಕು ಮತ್ತು ಬಜೆಟ್ನಲ್ಲಿ ಅನುದಾನ ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯಿಸಿದೆ. ರಾಜ್ಯಾಧ್ಯಕ್ಷ ಬಡಗಲುಪುರ ನಾಗೇಂದ್ರ ತಿಳಿಸಿದ್ದಾರೆ, ಫೆಬ್ರವರಿ 25ರಂದು ಅಜ್ಜಿಪುರ ಗ್ರಾಮದಿಂದ ಬೆಂಗಳೂರು ವಿಧಾನಸೌಧದ ವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಆರಂಭದಲ್ಲಿ ಸಾವಿರಕ್ಕೂ ಹೆಚ್ಚು ರೈತರು ಭಾಗವಹಿಸಿ, ನಂತರ 300ಕ್ಕೂ ಹೆಚ್ಚು ನಿರಂತರ ಪ್ರತಿಭಟನೆ ನಡೆಸಲಿದ್ದಾರೆ. ಸಂಕಷ್ಟದಲ್ಲಿ ಇರುವ ಗ್ರಾಮಗಳಿಗೆ ಕುಡಿಯುವ ನೀರು, ಕೃಷಿ ನೀರಾವರಿ ವ್ಯವಸ್ಥೆ ಕಲ್ಪಿಸುವಂತೆ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಸಂಘ ಮುನ್ಸೂಚನೆ ನೀಡಿದ್ದು, ಅಗತ್ಯವೆನಿಸಿದರೆ ಮುಖ್ಯಮಂತ್ರಿಗಳು, ಅರಣ್ಯ ಮತ್ತು ನೀರಾವರಿ ಸಚಿವರ ಮನೆಗಳಿಗೆ ನೀರಿನ ಸರಬರಾಜು ಬಂದ್ ಮಾಡುವ ಮೂಲಕ ತೀವ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಲಾಗಿದೆ.
- ಉಡುತೊರೆ ಹಳ್ಳ ಜಲಾಶಯ ಸೇರಿದಂತೆ ಹನೂರು ತಾಲ್ಲೂಕಿನ ಪ್ರಮುಖ ಕೆರೆಗಳಿಗೆ ನೀರು ತುಂಬಿಸಲು 491 ಕೋಟಿ ರೂ. ವೆಚ್ಚದ ಡಿಪಿಆರ್ಗೆ ಅನುಮೋದನೆ ನೀಡಬೇಕು ಮತ್ತು ಬಜೆಟ್ನಲ್ಲಿ ಅನುದಾನ ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯಿಸಿದೆ. ರಾಜ್ಯಾಧ್ಯಕ್ಷ ಬಡಗಲುಪುರ ನಾಗೇಂದ್ರ ತಿಳಿಸಿದ್ದಾರೆ, ಫೆಬ್ರವರಿ 25ರಂದು ಅಜ್ಜಿಪುರ ಗ್ರಾಮದಿಂದ ಬೆಂಗಳೂರು ವಿಧಾನಸೌಧದ ವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಆರಂಭದಲ್ಲಿ ಸಾವಿರಕ್ಕೂ ಹೆಚ್ಚು ರೈತರು ಭಾಗವಹಿಸಿ, ನಂತರ 300ಕ್ಕೂ ಹೆಚ್ಚು ನಿರಂತರ ಪ್ರತಿಭಟನೆ ನಡೆಸಲಿದ್ದಾರೆ. ಸಂಕಷ್ಟದಲ್ಲಿ ಇರುವ ಗ್ರಾಮಗಳಿಗೆ ಕುಡಿಯುವ ನೀರು, ಕೃಷಿ ನೀರಾವರಿ ವ್ಯವಸ್ಥೆ ಕಲ್ಪಿಸುವಂತೆ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಸಂಘ ಮುನ್ಸೂಚನೆ ನೀಡಿದ್ದು, ಅಗತ್ಯವೆನಿಸಿದರೆ ಮುಖ್ಯಮಂತ್ರಿಗಳು, ಅರಣ್ಯ ಮತ್ತು ನೀರಾವರಿ ಸಚಿವರ ಮನೆಗಳಿಗೆ ನೀರಿನ ಸರಬರಾಜು ಬಂದ್ ಮಾಡುವ ಮೂಲಕ ತೀವ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಲಾಗಿದೆ.1
- ಕೊಳ್ಳೇಗಾಲ :ಹನೂರುವಿಧಾನಸಭಾ ಕ್ಷೇತ್ರ ಬಲಗೈ ಸಮಾಜ ಒಕ್ಕೂಟದ ವತಿಯಿಂದ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿಯಲ್ಲಿ ಬಲಗೈ ಸಮಾಜಕ್ಕೆ ಅನ್ಯಾಯ ಮಾಡಿದೆ ಎಂಬ ಆರೋಪದಲ್ಲಿ ಕೊಳ್ಳೇಗಾಲ ಪಟ್ಟಣದಲ್ಲಿ ಬೃಹ ಪ್ರತಿಭಟನೆ ನಡೆಸಲಾಯಿತು ಕೊಳ್ಳೇಗಾಲ ಎಂ ಜಿ ಎಸ್ ವಿ ಮೈದಾನದಿಂದ ಹೊರಟ ಬೃಹತ್ ಮೆರವಣಿಗೆ ಡಾಕ್ಟರ್ ಪುನೀತ್ ರಾಜಕುಮಾರ್ ರಸ್ತೆ ಡಾಕ್ಟರ್ ವಿಷ್ಣುವರ್ಧನ್ ರಸ್ತೆ ಡಾಕ್ಟರ್ ರಾಜಕುಮಾರ್ ರಸ್ತೆ ಅಂಬೇಡ್ಕರ್ ರಸ್ತೆ ಅಂಬೇಡ್ಕರ್ ವೃತ್ತದ ಮೂಲಕ ಘೋಷಣೆಗಳನ್ನು ಕೂಗುತ್ತಾಮೆರವಣಿಗೆ ಕೊಳ್ಳೇಗಾಲ ತಾಲೂಕು ಕಚೇರಿಗೆ ಸೇರಿತು ಕೆಲವು ಕಾಲ ಬೃಹತ್ ಪ್ರತಿಭಟನೆ ಯಲಿ ರಸ್ತೆ ತಡೆ ನಡೆಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಖ್ಯಮಂತ್ರಿಗಳು ಸೇರಿದಂತೆಸಚಿವರು ಶಾಸಕರ ವಿರುದ್ಧ ಬಾರಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬಲಗೈ ಸಮಾಜದ ಪ್ರಮುಖರು ಮುಖಂಡರುಗಳು ಯುವಕರು ಮಹಿಳೆಯರು ವಿವಿಧ ಗ್ರಾಮಗಳಿಂದ ಬಂದಿದ್ದ ಯಜಮಾನರುಗಳು ಸಮಾಜದ ಗಣ್ಯರು ಹೋರಾಟಗಾರರು ಮಾಜಿ ಚುನಾಯಿತ ಪ್ರತಿನಿಧಿಗಳುಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.4
- ಕೊಳ್ಳೇಗಾಲ. ತಾಲ್ಲೂಕು ಬಲಗೈ ಸಮುದಾಯಗಳ ಒಕ್ಕೂಟ ವತಿಯಿಂದ ಒಳ ಮೀಸಲಾತಿ ಅನ್ಯಾಯವನ್ನು ಖಂಡಿಸಿ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಗುರುವಾರ ಹಮ್ಮಿಕೊಂಡಿದ್ದರು. ಪಟ್ಟಣದ ಎಂ.ಜಿ.ಎಸ್.ವಿ ಮೈದಾನದಲ್ಲಿ ಜಮಾಯಿಸಿದ್ದ ಹೋರಾಟಗಾರರು ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆ ಕೂಗುವ ಬಸ್ ನಿಲ್ದಾಣದ ರಸ್ತೆ, ಡಾ.ವಿಷ್ಣು ರಸ್ತೆ, ಡಾ.ರಾಜ್ ರಸ್ತೆ, ಡಾ.ಅಂಬೇಡ್ಕರ್ ರಸ್ತೆ ಮೂಲಕ ಪ್ರತಿಭಟನೆ ನಡೆಸಿದರು. ಮೆರವಣಿಗೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರು ಹೆಚ್.ಸಿ ಮಹದೇವಪ್ಪ, ಪರಮೇಶ್ವರ್ ಹಾಗೂ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರ ಪೋಟೋಗಳಿಗೆ ಚಪ್ಪಲಿಯಲ್ಲಿ ಹೊಡೆಯುವ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪ್ರತಿಭಟನಾಕಾರರು ಮಾತನಾಡಿ, ದೇಶದ ಬಹುಸಂಖ್ಯಾತ ಪರಿಶಿಷ್ಟ ಜಾತಿಯ ಬಲಗೈ ಸಂಬಂಧಿತ ಜಾತಿಗಳು ಶತಮಾನಗಳಿಂದ ಶಿಕ್ಷಣ, ಉದ್ಯೋಗ ಮತ್ತು ಅಧಿಕಾರಗಳಿಂದ ವಂಚಿತರಾಗಿದ್ದವು. ಬಿ.ಆರ್. ಅಂಬೇಡ್ಕರ್ ಅವರ ನಿರಂತರ ಹೋರಾಟದ ಫಲವಾಗಿ ದೊರೆತ ಮೀಸಲಾತಿಯಿಂದ ಈಗಷ್ಟೇ ಒಂದು-ಎರಡು ತಲೆಮಾರುಗಳಿಂದ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸೀಮಿತ ಪ್ರಗತಿ ಸಾಧ್ಯವಾಗಿದೆ ಎಂದು ತಿಳಿಸಿದರು. ಆದರೆ, ಜಾತಿವಾದ ಮತ್ತು ಕೋಮುವಾದ ಮನೋಭಾವದವರು ಒಳಮೀಸಲಾತಿಯ ಹೆಸರಿನಲ್ಲಿ ಬಲಗೈ ಸಂಬಂಧಿತ ಜಾತಿಗಳನ್ನು ಮೀಸಲಾತಿಯಿಂದ ಹೊರಗಿಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಈ ರಾಜ್ಯವನ್ನು ಆಡಳಿತ ನಡೆಸಿದ ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರಗಳು ಇಂದಿನ ಪರಿಸ್ಥಿತಿಗೆ ಕಾರಣವಾಗಿವೆ ಎಂದು ವಾಗ್ದಾಳಿ ನಡೆಸಿದರು. ಹಲವಾರು ಹಕ್ಕೊತ್ತಾಯಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಸರ್ಕಾರಕ್ಕೆ ತಲುಪಿಸುವಂತೆ ಉಪವಿಭಾಗ ಅಧಿಕಾರಿ ದಿನೇಶ್ ಕುಮಾರ್ ಮೀನಾ ರವರಿಗೆ ಮನವಿ ಪತ್ರ ನೀಡಿದರು. ಈ ಸಂಧರ್ಭದಲ್ಲಿ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಮತ್ತು ನಿವೃತ್ತ ಪೊಲೀಸ್ ಅಧಿಕಾರಿ ಬಿ.ಪುಟ್ಟಸ್ವಾಮಿ, ಹೆಚ್.ಕೆ ಟ್ರಸ್ಟ್ ಕಾರ್ಯದರ್ಶಿ ಪ್ರೇಮಲತಾ, ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷರು ಆನಂದಮೂರ್ತಿ, ಉಪಾಧ್ಯಕ್ಷ ಕಿರಣ್, ಕಾರ್ಯದರ್ಶಿ ಪಾಪಣ್ಣ, ಸಹಕಾರ್ಯದರ್ಶಿ ಶಶಿಧರ್, ಖಜಾಂಚಿ ರಾಜೇಶ್, ಮುಖಂಡರು ಅಣಗಳ್ಳಿ ಬಸವರಾಜು, ಕೂಡ್ಲೂರು ಶ್ರೀಧರ್ ಮೂರ್ತಿ, ನಟರಾಜು ಮಾಳಿಗೆ, ಶೇಖರ್ ಬುದ್ಧ, ಸಿದ್ದಪ್ಪಾಜಿ, ಶಂಕರ್ ಚೇತನ್, ದಿಲೀಪ್ ಸಿದ್ದಪ್ಪಾಜಿ, ಮುಳ್ಳೂರು ಕಮಲ್, ವಕೀಲರ ಸಂಘದ ಅಧ್ಯಕ್ಷರು ಬಸವರಾಜು, ಮುಳ್ಳೂರು ಶಿವಮಲ್ಲು, ಚೇತನ್ ದೊರೆ, ವರದರಾಜು, ಗುರುಮೂರ್ತಿ, ಮಹಿಳಾ ಸಂಘಟನೆಯ ಶಿವಮ್ಮ, ಸಿದ್ದಯ್ಯನಪುರ ಗ್ರಾ.ಪಂ ಮಾಜಿ ಅಧ್ಯಕ್ಷರು ಶಶಿಕುಮಾರಿ, ಕನ್ನಡ ಸಂರಕ್ಷಣಾ ಪಡೆ ಜಿಲ್ಲಾಧ್ಯಕ್ಷ ಮಾಂಬಳ್ಳಿ ರಾಜೇಶ್ ಮಹಾಜನ್, ಜಗದೀಶ್ ಶಂಕನಪುರ, ಮಹದೇವ ಶಂಕನಪುರ, ತಾಲ್ಲೂಕಿನ ಮಾಜಿ ಜನಪ್ರತಿನಿಧಿಗಳು ಹಾಗೂ ಇತರರು ಇದ್ದರು.1
- ಹಲಗೂರಿನಲ್ಲಿ ಇಂದು ವೀರಭದ್ರೇಶ್ವರ ಸ್ವಾಮಿ ಯವರ15ನೇ ವಾರ್ಷಿಕೋತ್ಸವ ಸಮಾರಂಭ. ಹಲಗೂರು :- ಇಲ್ಲಿನ ಶ್ರೀ ನಡುಕೇರಿ ವೀರಭದ್ರೇಶ್ವರ ಸ್ವಾಮಿಯವರ 15ನೇ ವರ್ಷದ ವಾರ್ಷಿಕೋತ್ಸವ ಹಾಗೂ ಮಹಾ ಕುಂಭಾಭಿಷೇಕ ಮಹೋತ್ಸವ ಶುಕ್ರವಾರ ಬೆಳಗ್ಗೆ ಗುರುವಿನ ಪುರ ಮಠದ ಶ್ರೀ ಜಗದೀಶ ಶಿವಾಚಾರ್ಯ ಸ್ವಾಮಿಗಳು, ಧನಗೂರು ಮಠದ ಶ್ರೀ ಮುಮ್ಮಡಿ ದೇಶಿ ಕೇಂದ್ರ ಸ್ವಾಮಿಗಳು ಮತ್ತು ಪುರಿಗಾಲಿ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಇವರ ದಿವ್ಯ ಸಮ್ಮುಖದಲ್ಲಿ ವೀರಭದ್ರ ಸ್ವಾಮಿ ದೇವಾಲಯದ ಪ್ರಧಾನ್ ಅರ್ಚಕರಾದ ಶ್ರೀ ವಿದ್ವಾನ್ ಪ್ರಸಾದ್ ಸಹಯೋಗದೊಂದಿಗೆ ಕಾರ್ಯಕ್ರಮಗಳು ಜರುಗಲಿವೆ. 19ರ ಗುರುವಾರ ಸಂಜೆ 5 ಸಮಯದಲ್ಲಿ ಹಲಗೂರಿನ ಬೃಹನ್ಮಠದಿಂದ ಕುಂಭಮೇಳದೊಡನೆ ಜಗದೀಶ ಶಿವಾಚಾರ್ಯ ಸ್ವಾಮಿಗಳು ಹಾಗೂ ಧನಗೂರು ಮಠದ ಷಡಕ್ಷರ ಸ್ವಾಮೀಜಿ ಅವರನ್ನು ಮೆರವಣಿಗೆ ಮುಖಾಂತರ ವೀರಭದ್ರ ದೇವಸ್ಥಾನಕ್ಕೆ ಕರೆದೊಯ್ಯಲಾಯಿತು,ನಂತರ ಜಗದೀಶ ಶಿವಾಚಾರ್ಯ ಸ್ವಾಮೀಜಿ ಮಾತನಾಡುತ್ತಾ ಗುರುವಾರ ಸಂಜೆಯಿಂದ ಸ್ವಾಮಿಯ ಅನುಜ್ಞೆ ಆಗ್ರೋದಕ ಪುಣ್ಯಾಹ, ಪಂಚಗವ್ಯ ಸಾಧನ, ದೇವನಾಂಧಿ ರಕ್ಷಾಬಂಧನ, ಋತ್ವಿಜಾಧಿಕಾರ ಸ್ವೀಕಾರ, ಗಣಪತಿ ಪೂಜೆ, ಪರಿವಾರ ದೇವತಾ ಪೂಜೆ ,ನವಗ್ರಹ ಪೂಜೆ ,ವಾಸ್ತು ರಾಕ್ಷೋಜ್ಞ ಪೂಜೆ ,ಲಘು ಪೂರ್ಣಾಹುತಿ, ಮಹಾ ಮಂಗಳಾರತಿ ,ತೀರ್ಥ ಪ್ರಸಾದ ವಿನಿಯೋಗ ನಡೆಸಲಾಯಿತು 20ರ ಶುಕ್ರವಾರ ತೃತೀಯ ಉತ್ತರಭಾದ್ರ ನಕ್ಷತ್ರ ಪ್ರಧಾನ ಕಳಶ ಸ್ಥಾಪನ, ಏಕದಶ ರುದ್ರ ಕಳಶ ಸ್ಥಾಪನ ,ಪಂಚ ವಿಶಂತಿ ಕಳಶ ಸ್ಥಾಪನೆ, ಪಂಚಬ್ರಹ್ಮ ಕಳಶ ಸ್ಥಾಪನೆ ,ಮಹಾ ರುದ್ರ ಅಭಿಷೇಕ, ರುದ್ರಪಾರಾಯಣ ಜಯಾದಿ ಹೋಮ, ಕಳಾ ಹೋಮ ,ಪ್ರಧಾನ ಹೋಮ, ಮಹಾಪೂರ್ಣಾಹುತಿ, ಕುಂಭಾಭಿಷೇಕ, ಅಲಂಕಾರ, ಮಹಾಮಂಗಳಾರತಿ ರಜೋಪಚಾರ ಪೂಜೆ, ತೀರ್ಥ ಪ್ರಸಾದ ವಿನಿಯೋಗ ಇರುತ್ತದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ಸ್ವಾಮೀಜಿ ವೀರಭದ್ರೇಶ್ವರ ಭಕ್ತ ಮಂಡಳಿ ಭಕ್ತರಿಗೆ ಕರೆ ನೀಡಿದರು. ಈ ಸಂದರ್ಭದಲ್ಲಿ ವೀರಶೈವ ಸಮಾಜದ ಪಾಲಾಕ್ಷಪ್ಪ, ಶೆಟ್ರು ಸರ್ವೇಶ ಮಹದೇವಸ್ವಾಮಿ (ರವಿ ನಾಗೇಶ ,ಶಿವಕುಮಾರ್ (ಪುಟ್ಟ )ಪ್ರಧಾನ ಅರ್ಚಕರಾದ ನಾಗರಾಜಪ್ಪ ಮತ್ತು ಮುಖಂಡರಾದ ವಿರೂಪಾಕ್ಷಪ್ಪ, ನಾಗೇಂದ್ರ, ಅಶೋಕ ,ಕೆ.ಎಂ. ಮಧು ,ಎಚ್. ಆರ್. ವಿಶ್ವ, ಕೆ. ಪಿ .ರವಿ, ಅಭಿ, ಅಡ್ಡೆ ಪ್ರಕಾಶ, ಸತೀಶ ಸೇರಿದಂತೆ ಇತರರು ಪಾಲ್ಗೊಂಡಿದ್ದರು. 19hgr1 ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ಜಗದೀಶ ಸ್ವಾಮೀಜಿ ಮಾತನಾಡುತ್ತಿರುವುದು.1
- ಹನೂರು: ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಮಲೆಮಾದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಕೊನೆಯ ದಿನ ಕೊಂಡೋತ್ಸವ ನಂತರ ಜಾತ್ರೆಗೆ ತೆರೆ ಬಿದ್ದಿತ್ತು. ಕೊಂಡೋತ್ಸವವು ಮಹಾಶಿವರಾತ್ರಿಯ ಪವಿತ್ರ ರಾತ್ರಿ, ಬೇಡಗಂಪಣ ಸಮುದಾಯದ ಪಾರಂಪರಿಕ ವೈಭವವು ಮತ್ತೆ ಒಂದು ಬಾರಿ ಜೀವಂತವಾಗಿ ಮೂಡಿಬಂತು. ರಾತ್ರಿ 8:30ಕ್ಕೆ ಸರದಿ ಅರ್ಚಕರು ಭಕ್ತಿಪೂರ್ಣ ಮನೋಭಾವದಿಂದ ವಿಶೇಷ ಪೂಜೆಯನ್ನು ನೆರವೇರಿಸಿದ ಕ್ಷಣದಿಂದಲೇ ದೇವಸ್ಥಾನದ ವಾತಾವರಣ ದಿವ್ಯ ಭಾವದಿಂದ ತುಂಬಿತು. ಪೂಜೆ ಬಳಿಕ ಮುದ್ದು ಮಾದಪ್ಪನ ಕೊಂಡೋತ್ಸವ ಪ್ರಾರಂಭವಾಗುತ್ತಿದ್ದಂತೆ ಭಕ್ತರ ಹೃದಯಗಳಲ್ಲಿ ಭಕ್ತಿ ಮತ್ತು ಆನಂದದ ಹೊಳೆ ಹರಿದಿತು. ಜಯಘೋಷಗಳು, ದೀಪಾಲಂಕಾರದ ಕಂಗೊಳ್ ಮತ್ತು ಭಕ್ತರ ಉತ್ಸಾಹದ ನಡುವೆ ಕೊಂಡೋತ್ಸವವು ಅದ್ದೂರಿಯಾಗಿ ನಡೆಯಿತು. ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಅವರು ಹಾಗೂ ಸಾವಿರಾರು ಭಕ್ತರು ಈ ಪುಣ್ಯ ಕ್ಷಣಗಳಿಗೆ ಸಾಕ್ಷಿಯಾಗಿ, ಮುದ್ದು ಮಾದಪ್ಪನ ದರ್ಶನದಿಂದ ಕೃಪೆಗೆ ಪಾತ್ರರಾದರು. ಈ ಕೊಂಡೋತ್ಸವವು ಕೇವಲ ಸಂಪ್ರದಾಯದ ಆಚರಣೆ ಮಾತ್ರವಲ್ಲ; ಅದು ಭಕ್ತಿ, ಸಂಸ್ಕೃತಿ ಮತ್ತು ಸಮುದಾಯದ ಐಕ್ಯತೆಯ ಜೀವಂತ ಸಂಕೇತವಾಗಿದೆ.4
- ಅಸ್ಸಾಂಗೆ ತೆರಳುವ ಮುನ್ನ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಗುರುವಾರ ನೀಡಿದ ಪ್ರತಿಕ್ರಿಯೆ..1
- *ಭಾರತ ನಲ್ಲಿ ವೈರಲ್*1
- ಹನೂರು: ಮಹದೇಶ್ವರಬೆಟ್ಟದಲ್ಲಿ ಬುಧವಾರ ರಾತ್ರಿ ಕೊಂಡೋತ್ಸವದೊಂದಿಗೆ ಮಹಾಶಿವರಾತ್ರಿ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ಮುಕ್ತಾಯಗೊಂಡಿತು. ಮಹಾಶಿವರಾತ್ರಿಯ ಪ್ರಯುಕ್ತ ಬೇಡಗಂಪಣರ ಸಾಂಪ್ರದಾಯಿಕ ಕ್ರಮದಂತೆ ಬೇಡಗಂಪಣ ತಂಬಡಿಗಳು (ಸರದಿ ಅರ್ಚಕರು) ರಾತ್ರಿ 8:30ಕ್ಕೆ ವಿಶೇಷ ಪೂಜೆಯನ್ನು ನೆರವೇರಿಸಿದರು. ಬಳಿಕ ಮುದ್ದು ಮಾದಪ್ಪನ ಕೊಂಡೋತ್ಸವ ಆರಂಭವಾಯಿತು. ಬೇಡಗಂಪಣರ ಕುಲಗುರುಗಳಾದ ಸಾಲೂರು ಮಠದ ಪೀಠಾಧಿಪತಿಗಳು ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳ ಸಮ್ಮುಖದಲ್ಲಿ ಕೊಂಡೋತ್ಸವ ವಿಜೃಂಭಣೆಯಿಂದ ನಡೆಯಿತು. ಸಾವಿರಾರು ಮಾದಪ್ಪನ ಭಕ್ತರು ಕೊಂಡೋತ್ಸವದ ದೃಶ್ಯವನ್ನು ಕಣ್ತುಂಬಿಕೊಂಡು ಭಕ್ತಿಭಾವದಲ್ಲಿ ತೇಲಿದರು ಹಾಗೂ ಮಾದಪ್ಪನ ಕೃಪೆಗೆ ಪಾತ್ರರಾದರು.1