ಬೀಳಗಿಯಲ್ಲಿ ಗ್ಯಾಸ್ ಸಿಲಿಂಡರ್ ಆತಂಕ! HP ಗ್ಯಾಸ್ ಏಜೆನ್ಸಿಗೆ ಜನರ ಮುತ್ತಿಗೆ.. ಬೀಳಗಿಯಲ್ಲಿ ಗ್ಯಾಸ್ ಸಿಲಿಂಡರ್ ಅಭಾವದ ಆತಂಕ ಹೆಚ್ಚಾಗಿದೆ. ಮಧ್ಯಪ್ರಾಚ್ಯದಲ್ಲಿನ ಯುದ್ಧ ಪರಿಸ್ಥಿತಿಯಿಂದ ಅನಿಲ ಕೊರತೆ ಉಂಟಾಗಬಹುದು ಎಂಬ ವದಂತಿಗಳ ಹಿನ್ನೆಲೆ ಜನರು ಗ್ಯಾಸ್ ಏಜೆನ್ಸಿಗಳ ಮುಂದೆ ಸೇರಿ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಇಂದು ಬೆಳಗ್ಗೆಯೇ HP ಗ್ಯಾಸ್ ಏಜೆನ್ಸಿ ಮುಂದೆ ಜನರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ನಗರದಲ್ಲಿನ ಬಾಡಗಂಡಿ ರಸ್ತೆಯಲ್ಲಿರುವ ಗ್ಯಾಸ್ ಏಜೆನ್ಸಿಯ ಬಾಗಿಲು ತೆರೆಯುವ ಮೊದಲುಲೇ ಅನೇಕರು ಖಾಲಿ ಸಿಲಿಂಡರ್ಗಳನ್ನು ತಂದು ಸರದಿ ಸಾಲಿನಲ್ಲಿ ನಿಂತಿದ್ದರು. ಸರ್ವರ್ ಸಮಸ್ಯೆಯಿಂದಾಗಿ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಆಗುತ್ತಿಲ್ಲ ಎಂದು ಗ್ರಾಹಕರು ಆರೋಪಿಸಿದ್ದಾರೆ. ಇದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ. ಮುಂದೆ ಸಿಲಿಂಡರ್ ಸಿಗದಿರಬಹುದು ಎಂಬ ಭಯದಿಂದ ಹಲವರು ನೇರವಾಗಿ ಗ್ಯಾಸ್ ಏಜೆನ್ಸಿಗೆ ಬಂದು ಸಿಲಿಂಡರ್ ಕೇಳಿದ್ದಾರೆ. ಆದರೆ, ಬುಕ್ಕಿಂಗ್ ಮಾಡಿದ ಗ್ರಾಹಕರಿಗೆ ಮಾತ್ರ ಸಿಲಿಂಡರ್ ನೀಡಲಾಗುತ್ತದೆ ಎಂದು ಗ್ಯಾಸ್ ಏಜೆನ್ಸಿ ಸಿಬ್ಬಂದಿ ತಿಳಿಸಿದ್ದಾರೆ. ಇದರಿಂದ ಕೆಲ ಸಮಯ ಗ್ರಾಹಕರು ಮತ್ತು ಸಿಬ್ಬಂದಿ ನಡುವೆ ವಾಗ್ವಾದವೂ ನಡೆದಿದೆ. ತಮಗೆ ಸಿಲಿಂಡರ್ ಸಿಗದಿದ್ದಕ್ಕೆ ಆಕ್ರೋಶಗೊಂಡ ಗ್ರಾಹಕರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಪರಿಸ್ಥಿತಿ ಶಾಂತಗೊಳಿಸಲು ಏಜೆನ್ಸಿ ಸಿಬ್ಬಂದಿ ಹರಸಾಹಸ ಪಟ್ಟರು. ಒಟ್ಟಿನಲ್ಲಿ ಗ್ಯಾಸ್ ಸಿಲಿಂಡರ್ ಕುರಿತ ವದಂತಿಗಳು ಜನರಲ್ಲಿ ಆತಂಕ ಮೂಡಿಸಿದ್ದು, ಸರಿಯಾದ ಮಾಹಿತಿ ನೀಡುವಂತೆ ಜನರು ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯವೇನು? ಕಾಮೆಂಟ್ ಮಾಡಿ ತಿಳಿಸಿ. ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿ
ಬೀಳಗಿಯಲ್ಲಿ ಗ್ಯಾಸ್ ಸಿಲಿಂಡರ್ ಆತಂಕ! HP ಗ್ಯಾಸ್ ಏಜೆನ್ಸಿಗೆ ಜನರ ಮುತ್ತಿಗೆ.. ಬೀಳಗಿಯಲ್ಲಿ ಗ್ಯಾಸ್ ಸಿಲಿಂಡರ್ ಅಭಾವದ ಆತಂಕ ಹೆಚ್ಚಾಗಿದೆ. ಮಧ್ಯಪ್ರಾಚ್ಯದಲ್ಲಿನ ಯುದ್ಧ ಪರಿಸ್ಥಿತಿಯಿಂದ ಅನಿಲ ಕೊರತೆ ಉಂಟಾಗಬಹುದು ಎಂಬ ವದಂತಿಗಳ ಹಿನ್ನೆಲೆ ಜನರು ಗ್ಯಾಸ್ ಏಜೆನ್ಸಿಗಳ ಮುಂದೆ ಸೇರಿ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಇಂದು ಬೆಳಗ್ಗೆಯೇ HP ಗ್ಯಾಸ್ ಏಜೆನ್ಸಿ ಮುಂದೆ ಜನರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ನಗರದಲ್ಲಿನ ಬಾಡಗಂಡಿ ರಸ್ತೆಯಲ್ಲಿರುವ ಗ್ಯಾಸ್ ಏಜೆನ್ಸಿಯ ಬಾಗಿಲು ತೆರೆಯುವ ಮೊದಲುಲೇ ಅನೇಕರು ಖಾಲಿ ಸಿಲಿಂಡರ್ಗಳನ್ನು ತಂದು ಸರದಿ ಸಾಲಿನಲ್ಲಿ ನಿಂತಿದ್ದರು. ಸರ್ವರ್ ಸಮಸ್ಯೆಯಿಂದಾಗಿ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಆಗುತ್ತಿಲ್ಲ ಎಂದು ಗ್ರಾಹಕರು ಆರೋಪಿಸಿದ್ದಾರೆ. ಇದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ. ಮುಂದೆ ಸಿಲಿಂಡರ್ ಸಿಗದಿರಬಹುದು ಎಂಬ ಭಯದಿಂದ ಹಲವರು ನೇರವಾಗಿ ಗ್ಯಾಸ್ ಏಜೆನ್ಸಿಗೆ ಬಂದು ಸಿಲಿಂಡರ್ ಕೇಳಿದ್ದಾರೆ. ಆದರೆ, ಬುಕ್ಕಿಂಗ್ ಮಾಡಿದ ಗ್ರಾಹಕರಿಗೆ ಮಾತ್ರ ಸಿಲಿಂಡರ್ ನೀಡಲಾಗುತ್ತದೆ ಎಂದು ಗ್ಯಾಸ್ ಏಜೆನ್ಸಿ ಸಿಬ್ಬಂದಿ ತಿಳಿಸಿದ್ದಾರೆ. ಇದರಿಂದ ಕೆಲ ಸಮಯ ಗ್ರಾಹಕರು ಮತ್ತು ಸಿಬ್ಬಂದಿ ನಡುವೆ ವಾಗ್ವಾದವೂ ನಡೆದಿದೆ. ತಮಗೆ ಸಿಲಿಂಡರ್ ಸಿಗದಿದ್ದಕ್ಕೆ ಆಕ್ರೋಶಗೊಂಡ ಗ್ರಾಹಕರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಪರಿಸ್ಥಿತಿ ಶಾಂತಗೊಳಿಸಲು ಏಜೆನ್ಸಿ ಸಿಬ್ಬಂದಿ ಹರಸಾಹಸ ಪಟ್ಟರು. ಒಟ್ಟಿನಲ್ಲಿ ಗ್ಯಾಸ್ ಸಿಲಿಂಡರ್ ಕುರಿತ ವದಂತಿಗಳು ಜನರಲ್ಲಿ ಆತಂಕ ಮೂಡಿಸಿದ್ದು, ಸರಿಯಾದ ಮಾಹಿತಿ ನೀಡುವಂತೆ ಜನರು ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯವೇನು? ಕಾಮೆಂಟ್ ಮಾಡಿ ತಿಳಿಸಿ. ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿ
- ಮಾ.15: ಅರಸೀಕೆರೆ ತಾಲೂಕು, ಜಾವಗಲ್ ಹೋಬಳಿ ಗೇರುಮರ ಗ್ರಾಮದ ಶ್ರೀ ಚನ್ನಬಸವೇಶ್ವರ ಇಂಗ್ಲಿಷ್ ಹೈಯರ್ ಪ್ರೈಮರಿ ಸ್ಕೂಲ್ ಇಲ್ಲಿ ದಿನಾಂಕ 11.03.2026ರಂದು ಅದ್ದೂರಿಯಾಗಿ ತಂದೆ ತಾಯಿಯ ಪಾದಪೂಜೆಯೊಂದಿಗೆ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಸುಮಾರು 250 ತಂದೆ ತಾಯಂದಿರಿಗೆ ಅವರ ಮಕ್ಕಳಿಂದ ಪಾದಪೂಜೆ ಮಾಡಿ, ಗುರುಗಳಿಗೆ ಹೂ ಪುಷ್ಪಗಳೊಂದಿಗೆ ವಂದನೆಯನ್ನು ಸಲ್ಲಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಕಾರ್ಯದರ್ಶಿಗಳಾದ ವಿನಯ್ ಪಾಟೀಲ್ ರವರು ವಹಿಸಿದ್ದರು. ಇಂದಿನ ದಿನಮಾನಗಳಲ್ಲಿ ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ ಎಲ್ಲವನ್ನು ಮರೆತು ಹೋಗುತ್ತಿದ್ದಾರೆಂದು ಹೇಳಿ ತಂದೆ ತಾಯಿಗಳಾದ ತಾವುಗಳು ಮಕ್ಕಳಿಗೆ ಮೊಬೈಲನ್ನು ಕೊಡದೆ ಕಥೆ ಕದಂಬರಿ, ಚಿತ್ರಕಲೆ ಇತರೆ ಚಟುವಟಿಕೆಗಳಲ್ಲಿ ತಮ್ಮ ಜೊತೆ ತೊಡಗಿಸಿಕೊಳ್ಳಬೇಕೆಂದು ಈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಅದರ ಜೊತೆ ಪಾಲಕ ಪೋಷಕರ ಜವಾಬ್ದಾರಿಗಳು ಅವರ ಪಾತ್ರಗಳು ಶಾಲೆ ಮತ್ತು ಮಗು, ಪಾಲಕ ಪೋಷಕರು ಇವರ ನಡುವಿನ ಅವಿನಾಭಾವ ಸಂಬಂಧಗಳ ಬಗ್ಗೆ ತಿಳಿಸಿಕೊಟ್ಟರು. ಪಾಲಕ ಪೋಷಕ ಸಲಹಾ ಸಮಿತಿಯ ಅಧ್ಯಕ್ಷರು ಕಾರ್ಯದರ್ಶಿಗಳು ಕೂಡ ಈ ಒಂದು ಕಾರ್ಯಕ್ರಮದಲ್ಲಿ ಉಪಸ್ಥಿಸ್ಥಿತರಿದ್ದರು. ಈ ಶಾಲೆಯ ಮುಖ್ಯೋಪಾಧ್ಯಾಯನಿ ಸರೋಜಮ್ಮ, ಶಿಕ್ಷಕಿಯರಾದ ಶುಭ, ಶೋಭಾ, ಗಗನ,ಸುಧಾ, ಸುಪ್ರಿಯಾ ಪಾಟೀಲ್ ಶಿಕ್ಷಕಿಯ ತರ ಸಿಬ್ಬಂದಿಯವರು ರಾಜಣ್ಣ, ರಂಗಸ್ವಾಮಿ ಮತ್ತು ರತ್ನಮ್ಮ ಈ ಕಾರ್ಯಕ್ರಮ ಯಶಸ್ವಿಯಾಗಲಿಕ್ಕೆ ಸಹಕಾರ ನೀಡಿದರು. ಈ ಕಾರ್ಯಕ್ರಮದ ನಿರೂಪಣೆಯನ್ನು ಶಾಲೆಯ ಶಿಕ್ಷಕಿಯರಾದ ಸುಪ್ರಿಯಾ ರವರು ಮಾಡಿದರು. ಶಾಲೆಯ ಮಕ್ಕಳು ವಚನಗಳನ್ನು ಹೇಳುವುದರೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.1
- ತುಮಕೂರು ಡ್ರಸ್ ಎಂಬ ಮಾದಕ ಮಾಫಿಯಾದಲ್ಲಿ ಮುಸ್ಲಿಂ ಯುವಕರೇ ಅತಿ ಹೆಚ್ಚು ಯಾಕೆ?!1
- ಯಾದಗಿರಿ ಜಿಲ್ಲೆಯ ಗುರಮಿಠಕಲ್ ತಾಲೂಕಿನ ಯದ್ಲಾಪುರ ಗ್ರಾಮದ ಸರ್ಕಾರಿ ಶಾಲೆಯನ್ನು ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಮುಚ್ಚಲು ಬಿಡುವುದಿಲ್ಲ ಎಂದು ಇಂದು ಶಾಲಾ ಮಕ್ಕಳೊಂದಿಗೆ ಊರಲ್ಲಿ ನಡೆದ ಪ್ರಚಾರ ಜಾಥಾ ಕೆಪಿಎಸ್ ಮ್ಯಾಗ್ನೆಟ್ ಬೇಡವೇ ಬೇಡ ನಮ್ಮೂರ ಶಾಲೆ, ನಮ್ಮ ಹಕ್ಕು ಯದ್ಲಾಪುರ, ಗುರಮಿಠಕಲ್,1
- ಸುರಪುರ ತಾಲೂಕಿನ ಸುಕ್ಷೇತ್ರ ತಿಂಥಣಿ ಸರಕಾರಿ ಪ್ರೌಢಶಾಲೆಯಲ್ಲಿ ಇಂದು ಹತ್ತನೇ ತರಗತಿ ವಿದ್ಯಾರ್ಥಿಗಳ ಬೀಳುಕೊಡಿಗೆ ಸಮಾರಂಭ ನಡೆಯಿತು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಬಸವರಾಜ್ ಗೋಗಿ ಮುಖ್ಯೋಪಾಧ್ಯಾಯರು ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಶ್ರೀಮತಿ ಮಾನಮ್ಮ ರತ್ನರಾಜ ಶಾಲಿಮನಿ ಶ್ರೀ ಬಸವರಾಜು ಕವಲ್ದಾರ್ ಎಸ್ ಡಿ ಎಂ ಸಿ ಅಧ್ಯಕ್ಷರು ಶ್ರೀ ಗಂಗಾಧರ ನಾಯಕ್ ತಿಂಥಣಿ ರಾಜ್ಯ ಕಾರ್ಯದರ್ಶಿಗಳು ವನವಾಸಿ ಕಲ್ಯಾಣ ಶ್ರೀ ರತ್ನ ರಾಜು ಶಾಲೆಮನಿ ಸಮಾಜ ಸೇವಕರು, ಸದಾಶಿವ್ ಮಂಗಿಹಾಳ ಶ್ರೀ ನಿಂಗಪ್ಪ ಹರಳಹಳ್ಳಿ ಶ್ರೀ ಲಕ್ಷ್ಮಣ ಅಂಬಿಗೇರ್ ಶ್ರೀ ಚನ್ನಬಸವ ಸ್ವಾಮಿ ಶ್ರೀ ವೀರಯ್ಯ ಸ್ವಾಮಿ ತಿಂತಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು ಶ್ರೀಮತಿ ಶಿಲ್ಪ ಶಿಕ್ಷಕಿ ಕಾರ್ಯಕ್ರಮ ನಿರೂಪಣೆ ಮಾಡಿದರು ಶ್ರೀ ಪ್ರಕಾಶ್ ಇಂಗ್ಲಿಷ್ ಶಿಕ್ಷಕರು ಸ್ವಾಗತಿಸಿದರು ಈ ಸಂದರ್ಭದಲ್ಲಿ ಹಲವಾರು ವಿದ್ಯಾರ್ಥಿಗಳು ತಮ್ಮ ಅನುಭವವನ್ನು ಹೇಳಿದರು, ನಂತರ ಶ್ರೀ ಭೀಮರಾಯ ಶಿಕ್ಷಕರು ವರದಿ ವಾಚನ ಮಾಡಿದರು ಶ್ರೀ ಗಂಗಾಧರ ನಾಯಕ್ ಸವಿಸ್ತಾರವಾಗಿ ಮಾತನಾಡಿ ವಿದ್ಯಾರ್ಥಿಗಳ ಜೀವನ ರೂಪಿಸುವ ಬಗ್ಗೆ ಮತ್ತು ಪರೀಕ್ಷೆ ಬರೆಯುವ ಬಗ್ಗೆ ಮತ್ತು ವಿದ್ಯೆ ಕಲಿಯುವ ಬಗ್ಗೆ ಹಲವಾರು ಉದಾಹರಣೆಗಳೊಂದಿಗೆ ಹೇಳಿದರು ಅಧ್ಯಕ್ಷತೆ ವಹಿಸಿದ ಶ್ರೀ ಬಸವರಾಜ್ ಗೋಗಿ ಅಧ್ಯಕ್ಷೀಯವಾಗಿ ಮಾತನಾಡಿ ತಂದೆ ಮಕ್ಕಳು ಯಾವ ರೀತಿಯಾಗಿರಬೇಕು ಗುರು ಶಿಷ್ಯರು ಯಾವ ರೀತಿಯಾಗಿ ಇರಬೇಕು ಎಂಬುದು ಜಾನಪದ ಗೀತೆಯ ಮೂಲಕ ಮನದಟ್ಟು ಮಾಡಿಸಿದರು ಮತ್ತು ಮುಂದಿನ ಜೀವನ ಸುಖಕರವಾಗಿ ಇರಲಿ ಒಳ್ಳೆಯ ಅಭ್ಯಾಸ ಮಾಡಿ ಗ್ರಾಮದ ಕೀರ್ತಿಯನ್ನು ತನ್ನಿ ಎಂದು ಹೇಳಿದರು ಕೊನೆಗೆ ಅತಿಥಿ ಶಿಕ್ಷಕರಿಗೆ ಸನ್ಮಾನಿಸಿ ಅವರ ಕಾರ್ಯ ವೈಖರಿ ಬಗ್ಗೆ ಹೇಳಿದರು ನಂತರ ಶ್ರೀ ಸುಭಾಸ್ ಸರ್ ವಂದನಾರ್ಪಣೆ ಮಾಡಿದರು1
- ಶ್ರೀ ಮರಿಯಮ್ಮ ಜಾತ್ರೆ ಮಹೋತ್ಸವ ಅದ್ದೂರಿಯಾಗಿ ಆಚರಿಸಲಾಯಿತು ಗ್ರಾಮ ದೇವತೆಯ ವಿಗ್ರಹ ಮೇರವಣಿಗೆ ಮಾಡುತ್ತಾ ಮತ್ತು ಡೋಳು ತಮಟೆ ವಾದ್ಯ ಮೂಲಕ ಗ್ರಾಮದ ಗುರು ಹಿರಿಯರ ಗ್ರಾಮ ಯುವಕರು ತುಂಬಾ ಅದ್ದೂರಿಯಾಗಿ ಆಚರಿಸಿದರು ಸುದ್ದಿಗಾರರು ಮೌನೇಶ ವೈ ಉಮಲೂಟಿ 89715494022
- All content on this blog is copyrighted and copying is not allowed without permission from the author. #Chetha #Muniswamy #gowda #Riya #YOGI #Chethana #chethanagowda #ChethanaMuniswamygowda1
- ಹೊಸಪೇಟೆ ಸುರಂಗ ಮಾರ್ಗ1
- ನೀರು ಬಾರದೆ ಭತ್ತ ಬೆಳೆ ನಾಶ ಮಳೆಯಿಲ್ಲದೆ, ನಾಲೆ ನೀರಿಲ್ಲದೆ ಭತ್ತದ ಬೆಳೆ ಒಣಗುವ ಆತಂಕದಲ್ಲಿದ್ದ ರೈತರಿಗೆ ನೀರು ಸಿಗುವ ಮುನ್ಸೂಚನೆ ನಿಟ್ಟುಸಿರು ಬಿಡುವಂತೆ ಮಾಡಿದೆ.1
- #meravaani news kannada #ಬ್ರೇಕಿಂಗ್ನ್ಯೂಸ್ #ರಾಜಕೀಯಸುದ್ದಿ #ಜನಆಕ್ರೋಶ #ಅಭಿವೃದ್ಧಿವಿಷಯ #ಸುದ್ದಿ9ಟಿವಿ #ನೇರವಾಣಿನ್ಯೂಸ್ #ತಾಜಾಸುದ್ದಿ #ಕರ್ನಾಟಕಸುದ್ದಿ #ಸರ್ಕಾರದವಿಫಲತೆ #Afzalpur #BreakingNews #KarnatakaNews #PoliticalUpdate #PublicVoice #NewsUpdate #GroundReport #LiveNews #TrendingNow #IndiaNews1