logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಸಾಗರ-ನಗರದ ಈ ಪ್ರದೇಶಗಳಲ್ಲಿ ಪವರ್ ಕಟ್ ಸಾಗರ: ಬಿಹೆಚ್ ರಸ್ತೆ ಅಗಲೀಕರಣ ಕಾಮಗಾರಿಯ ಸಲುವಾಗಿ ವಿದ್ಯುತ್ ಕಂಬಗಳ ಸ್ಥಳಾಂತರ ಕಾರ್ಯದ ನಿಮಿತ್ತ, ಜ:13 ರ ನಾಳೆ ನಗರದ ಹಲವೆಡೆ ಬೆಳಗ್ಗೆ 10ರಿಂದ ಸಂಜೆ 6 ಗಂಟೆ ಯವರೆಗೆ ಈ ಕೆಳಕಂಡ ಪ್ರದೇಶ ವಿದ್ಯುತ್ ವ್ಯತ್ಯೆಯ ವಾಗಲಿದೆ ಎಂಬುದಾಗಿ ಮೆಸ್ಕಾಂ ತಿಳಿಸಿದೆ. ನೆಹರೂ ನಗರ, ಜೋಸೆಫ್ ನಗರ, ಅರಳೀಕೊಪ್ಪ, ಜನ್ನತ್ ಗಲ್ಲಿ, ಸಿಗಂದೂರು ಮಾರ್ಕೆಟ್ ರಸ್ತೆ, ಬಿಹೆಚ್ ರಸ್ತೆ, ಅಶೋಕ ರಸ್ತೆ, ಕೃಷ್ಣ ಗ್ಯಾರೇಜ್, ಎಲ್‌ಐಸಿ ಆಫೀಸ್ ಹತ್ತಿರ ವ್ಯಾಪ್ತಿಯ ಸುತ್ತ ಮುತ್ತ ಪ್ರದೇಶ ಗಳಲ್ಲಿ ಅಡಚಣೆ ಯಾಗಲಿದ್ದು ಗ್ರಾಹಕರು ಸಹಕರಿಸಲು ಕೋರಿದೆ.

2 hrs ago
user_ವಿಜಯ ಸಂಘರ್ಷ ನ್ಯೂಸ್
ವಿಜಯ ಸಂಘರ್ಷ ನ್ಯೂಸ್
Journalist Shivamogga, Karnataka•
2 hrs ago
9923e840-0dca-4c6e-8776-139621efe671

ಸಾಗರ-ನಗರದ ಈ ಪ್ರದೇಶಗಳಲ್ಲಿ ಪವರ್ ಕಟ್ ಸಾಗರ: ಬಿಹೆಚ್ ರಸ್ತೆ ಅಗಲೀಕರಣ ಕಾಮಗಾರಿಯ ಸಲುವಾಗಿ ವಿದ್ಯುತ್ ಕಂಬಗಳ ಸ್ಥಳಾಂತರ ಕಾರ್ಯದ ನಿಮಿತ್ತ, ಜ:13 ರ ನಾಳೆ ನಗರದ ಹಲವೆಡೆ ಬೆಳಗ್ಗೆ 10ರಿಂದ ಸಂಜೆ 6 ಗಂಟೆ ಯವರೆಗೆ ಈ ಕೆಳಕಂಡ ಪ್ರದೇಶ ವಿದ್ಯುತ್ ವ್ಯತ್ಯೆಯ ವಾಗಲಿದೆ ಎಂಬುದಾಗಿ ಮೆಸ್ಕಾಂ ತಿಳಿಸಿದೆ. ನೆಹರೂ ನಗರ, ಜೋಸೆಫ್ ನಗರ, ಅರಳೀಕೊಪ್ಪ, ಜನ್ನತ್ ಗಲ್ಲಿ, ಸಿಗಂದೂರು ಮಾರ್ಕೆಟ್ ರಸ್ತೆ, ಬಿಹೆಚ್ ರಸ್ತೆ, ಅಶೋಕ ರಸ್ತೆ, ಕೃಷ್ಣ ಗ್ಯಾರೇಜ್, ಎಲ್‌ಐಸಿ ಆಫೀಸ್ ಹತ್ತಿರ ವ್ಯಾಪ್ತಿಯ ಸುತ್ತ ಮುತ್ತ ಪ್ರದೇಶ ಗಳಲ್ಲಿ ಅಡಚಣೆ ಯಾಗಲಿದ್ದು ಗ್ರಾಹಕರು ಸಹಕರಿಸಲು ಕೋರಿದೆ.

More news from ಕರ್ನಾಟಕ and nearby areas
  • ಗದಗ ನ್ಯೂಸ್ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಪತ್ತೆ‌ಯಾಗಿದೆ ತಾಮ್ರದ ಚಂಬಿಗೆಯಲ್ಲಿ ಅಂದಾಜು ಒಂದು ಕೆಜಿ ನಿಧಿ ಪತ್ತೆ.ಯಾಗಿದೆ. ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಪತ್ತೆಯಾಗಿರಿವುದು ಬೆಳಕಿಗೆ ಬಂದಿದೆ. ಲಕ್ಕುಂಡಿ ವಾರ್ಡ ನಂ.4 ನಿವಾಸಿ ಗಂಗವ್ವ ಬಸವರಾಜ ರಿತ್ತಿ ಎಂಬುವರ ಮನೆ ಜಾಗದಲ್ಲಿ ಪತ್ತೆ.. ಮನೆಯ ಅಡಿಪಾಯ ಅಗೆಯುವ ಸಂದರ್ಭದಲ್ಲಿ ಸಿಕ್ಕ ನಿಧಿ. ಅಂದಾಜು 1 ಕೆಜಿ ತೂಕದ ಚಿನ್ನಾಭರಣಗಳು ಸಿಕ್ಕಿದೆ. ನಿಧಿ ನೋಡಲು‌ ಕುತೂಹಲದಿಂದ ಸಾವಿರಾರು ಸಂಖ್ಯೆಯಲ್ಲಿ ಜಮಾವಣೆ.‌ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ದುರಗೇಶ್, ಎಸ್ಪಿ ರೋಹನ್ ಜಗದೀಶ್, ಎಸಿ ಗಂಗಪ್ಪ, ತಹಶೀಲ್ದಾರ ಶ್ರೀನಿವಾಸ ಕುಲಕರ್ಣಿ. ಚಿನ್ನಾಭರಣಗಳು ಯಾರ ಕಾಲದ್ದು ಎಂದು ತನಿಖೆ.. ನಿಧಿಯನ್ನು ವಶಕ್ಕೆ ಪೋಲೀಸರು ವಶಕ್ಕೆ ಪಡೆದಿದ್ದಾರೆ..
    1
    ಗದಗ ನ್ಯೂಸ್ 
ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಪತ್ತೆ‌ಯಾಗಿದೆ
ತಾಮ್ರದ ಚಂಬಿಗೆಯಲ್ಲಿ ಅಂದಾಜು ಒಂದು ಕೆಜಿ ನಿಧಿ ಪತ್ತೆ.ಯಾಗಿದೆ.
ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಪತ್ತೆಯಾಗಿರಿವುದು ಬೆಳಕಿಗೆ ಬಂದಿದೆ.
ಲಕ್ಕುಂಡಿ ವಾರ್ಡ ನಂ.4 ನಿವಾಸಿ ಗಂಗವ್ವ ಬಸವರಾಜ ರಿತ್ತಿ ಎಂಬುವರ ಮನೆ ಜಾಗದಲ್ಲಿ ಪತ್ತೆ..
ಮನೆಯ ಅಡಿಪಾಯ ಅಗೆಯುವ ಸಂದರ್ಭದಲ್ಲಿ ಸಿಕ್ಕ ನಿಧಿ.
ಅಂದಾಜು 1 ಕೆಜಿ ತೂಕದ ಚಿನ್ನಾಭರಣಗಳು ಸಿಕ್ಕಿದೆ.
ನಿಧಿ ನೋಡಲು‌ ಕುತೂಹಲದಿಂದ ಸಾವಿರಾರು ಸಂಖ್ಯೆಯಲ್ಲಿ ಜಮಾವಣೆ.‌
ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ದುರಗೇಶ್, ಎಸ್ಪಿ ರೋಹನ್ ಜಗದೀಶ್, ಎಸಿ ಗಂಗಪ್ಪ, ತಹಶೀಲ್ದಾರ ಶ್ರೀನಿವಾಸ ಕುಲಕರ್ಣಿ.
ಚಿನ್ನಾಭರಣಗಳು ಯಾರ ಕಾಲದ್ದು ಎಂದು ತನಿಖೆ..
ನಿಧಿಯನ್ನು ವಶಕ್ಕೆ  ಪೋಲೀಸರು  ವಶಕ್ಕೆ ಪಡೆದಿದ್ದಾರೆ..
    user_ಬೆಳಗೆರೆ ನ್ಯೂಸ್
    ಬೆಳಗೆರೆ ನ್ಯೂಸ್
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    23 hrs ago
  • "ದ ದಾಪರ್ ಎಕ್ಸ್ ಪೋ" ಚಿತ್ರ ಕಲಾ ಪ್ರದರ್ಶನ ಉದಯ ಕೃಷ್ಣ ಜಿ ಮತ್ತು ನಿಯತಿ. ಯು ಭಟ್ ಬೆಂಗಳೂರು ತಂದೆ ಮತ್ತು ಮಗಳು ಜೊತೆಯಾಗಿ ನಡೆಸುವ ದ ದಾಪರ್ ಎಕ್ಸ್ ಪೋ ಎಂಬ ಚಿತ್ರಕಲಾ ಪ್ರದರ್ಶನವು ಜನವರಿ ೧೭ ರಿಂದ ೧೯ ರ ತನಕ ಮಂಗಳೂರಿನ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ನಡೆಯಲಿದೆ ಎಂದು ಖ್ಯಾತ ಚಿತ್ರ ಕಲಾವಿದ ಉದಯ ಕೃಷ್ಣ ಜಿ ತಿಳಿಸಿದ್ದಾರೆ. ಅವರು ಮಂಗಳೂರಿನ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನ ನೀಡಿದ್ರು. ಕಾರ್ಯಕ್ರಮದ ಉದ್ಘಾಟನೆಯು ಜನವರಿ ೧೭ ರಂದು ಅಪರಾಹ್ನ ೩ ಗಂಟೆಗೆ ನಡೆಯಲಿದೆ. ಉದ್ಘಾಟನೆಯನ್ನು ವಿಶ್ರಾಂತ ಪ್ರಾಂಶುಪಾಲ ಪ್ರೊ. ಜಿ ಎನ್ ಭಟ್, ಖ್ಯಾತ ಜಾದೂ ಕಲಾವಿದ ಪ್ರೊ. ಶಂಕರ್, ಖ್ಯಾತ ಚಿತ್ರ ಕಲಾವಿದರಾದ ಗಣೇಶ ಸೋಮಯಾಜಿ ನಡೆಸಲಿದ್ದಾರೆ. ಈ ಚಿತ್ರಕಲಾ ಪ್ರದರ್ಶನದಲ್ಲಿ ಪೈಂಟಿಂಗ್ ಆರ್ಟ್ , ಡ್ರಾಯಿಂಗ್ , ಫೋಟೋಗ್ರಾಫಿ , ಮಂಡಳ ಆರ್ಟ್ , ಸ್ಟ್ರಿಂಗ್ ಆರ್ಟ್ ಗಳೆಂಬ ೫ ತರದ ಚಿತ್ರಗಳ ಬೇರೆ ಬೇರೆ ಪ್ರದರ್ಶಗಳಿವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಖ್ಯಾತ ಚಿತ್ರ ಕಲಾವಿದರಾದ ಗಣೇಶ ಸೋಮಯಾಜಿ, ಕೋಟಿ ಪ್ರಸಾದ್ ಆಳ್ವ ಉಪಸ್ಥಿತರಿದ್ದರು. ವರದಿ: ಶಂಶೀರ್ ಬುಡೋಳಿ
    1
    "ದ ದಾಪರ್ ಎಕ್ಸ್ ಪೋ" ಚಿತ್ರ ಕಲಾ ಪ್ರದರ್ಶನ
ಉದಯ ಕೃಷ್ಣ ಜಿ ಮತ್ತು ನಿಯತಿ. ಯು ಭಟ್ ಬೆಂಗಳೂರು ತಂದೆ ಮತ್ತು ಮಗಳು ಜೊತೆಯಾಗಿ ನಡೆಸುವ  ದ ದಾಪರ್ ಎಕ್ಸ್ ಪೋ ಎಂಬ ಚಿತ್ರಕಲಾ ಪ್ರದರ್ಶನವು ಜನವರಿ ೧೭ ರಿಂದ ೧೯ ರ ತನಕ ಮಂಗಳೂರಿನ  ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ  ನಡೆಯಲಿದೆ  ಎಂದು ಖ್ಯಾತ ಚಿತ್ರ ಕಲಾವಿದ ಉದಯ ಕೃಷ್ಣ ಜಿ  ತಿಳಿಸಿದ್ದಾರೆ. 
ಅವರು ಮಂಗಳೂರಿನ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನ ನೀಡಿದ್ರು. ಕಾರ್ಯಕ್ರಮದ ಉದ್ಘಾಟನೆಯು ಜನವರಿ  ೧೭ ರಂದು ಅಪರಾಹ್ನ  ೩ ಗಂಟೆಗೆ ನಡೆಯಲಿದೆ. ಉದ್ಘಾಟನೆಯನ್ನು ವಿಶ್ರಾಂತ ಪ್ರಾಂಶುಪಾಲ ಪ್ರೊ. ಜಿ ಎನ್ ಭಟ್, ಖ್ಯಾತ ಜಾದೂ ಕಲಾವಿದ ಪ್ರೊ. ಶಂಕರ್, ಖ್ಯಾತ ಚಿತ್ರ ಕಲಾವಿದರಾದ ಗಣೇಶ ಸೋಮಯಾಜಿ ನಡೆಸಲಿದ್ದಾರೆ. ಈ ಚಿತ್ರಕಲಾ ಪ್ರದರ್ಶನದಲ್ಲಿ  ಪೈಂಟಿಂಗ್ ಆರ್ಟ್ ,  ಡ್ರಾಯಿಂಗ್ ,  ಫೋಟೋಗ್ರಾಫಿ ,  ಮಂಡಳ ಆರ್ಟ್  , ಸ್ಟ್ರಿಂಗ್ ಆರ್ಟ್ ಗಳೆಂಬ ೫ ತರದ ಚಿತ್ರಗಳ ಬೇರೆ ಬೇರೆ ಪ್ರದರ್ಶಗಳಿವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಖ್ಯಾತ ಚಿತ್ರ ಕಲಾವಿದರಾದ ಗಣೇಶ ಸೋಮಯಾಜಿ, ಕೋಟಿ ಪ್ರಸಾದ್ ಆಳ್ವ  ಉಪಸ್ಥಿತರಿದ್ದರು.
ವರದಿ: ಶಂಶೀರ್ ಬುಡೋಳಿ
    user_Shamsheer Budoli
    Shamsheer Budoli
    Journalist Mangaluru, Dakshina Kannada•
    3 hrs ago
  • ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕೊಂಡ್ಲಹಳ್ಳಿ ಹೊಸ ಗೊಲ್ಲರಹಟ್ಟಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ರಾಷ್ಟ್ರೀಯ ಸ್ವಾಮಿ ವಿವೇಕಾನಂದರ ಜಯಂತಿಯ ಪ್ರಯುಕ್ತ ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಯಿತು . ಇದೇ ವೇಳೆ ಗ್ರಾಮದ ಮುಖಂಡರಾದ ಕೆ ಟಿ ರಾಮಾಂಜನೇಯ ಮತ್ತು ಕುಟುಂಬದವರು ಗೊಲ್ಲರಹಟ್ಟಿಯ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಮಕ್ಕಳಿಗೆ ಉಚಿತವಾಗಿ ತಟ್ಟೆ ನೋಟಗಳನ್ನು ಕೊಡುಗೆಯಾಗಿ ನೀಡಿದರು . ಮುಖ್ಯ ಶಿಕ್ಷಕ ಕೆ ಟಿ ತಿಪ್ಪೇಶ್ ಮಾತನಾಡದೆ ಸ್ವಾಮಿ ವಿವೇಕಾನಂದರು, ಚಿಕಾಗೋದಲ್ಲಿ ಜರುಗಿದ ಸರ್ವಧರ್ಮ ಸಮ್ಮೇಳನದಲ್ಲಿ ಭಾರತದ ಹಿರಿಮೆಯನ್ನು ವಿಶ್ವ ಮಟ್ಟಕ್ಕೆ ಸಾರಿದರು ಎಂದು ತಿಳಿಸಿದರು . ಮುಖಂಡ ಕೆ ಟಿ ಸೋಮಶೇಖರ್ ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಶಿಸ್ತು ಸಂಸ್ಕಾರ ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಿ ಉತ್ಪಾದ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.. ಇದೇ ವೇಳೆ ಮುಖಂಡರಾದ ಕೆ.ಟಿ ಕರೆ ಗೌಡ ,ಕೆಎ ಮಧು ,ಬಿ ಪರಮೇಶ್ವರಪ್ಪ, ಎಸ್ಡಿಎಂಸಿ ಅಧ್ಯಕ್ಷ ಮಹಾಂತೇಶ್ ,ಉಪಾಧ್ಯಕ್ಷ ಶಿಲ್ಪ ಶ್ರೀ ,ಸದಸ್ಯರಾದ ಗುರುಸ್ವಾಮಿ, ಗಿರೀಶ್ ,ವಿರೂಪಾಕ್ಷಪ್ಪ ,ಮಂಜುಳಮ್ಮ ,ದಿನೇಶ್ ,ಉಮೇಶ್ ,ನೇತ್ರಮ್ಮ, ಗಂಗಮ್ಮ, ಎಸ್ ಮಧು ,ಕಾವ್ಯ ,ಶಿಕ್ಷಕರಾದ ತಿಪ್ಪೇಸ್ವಾಮಿ ಯೋಗೇಶ್ ,ಅನಿತಾ ಹಾಗೂ ಅಂಗನವಾಡಿ ಕಾರ್ಯಕರ್ತೆ ಕ್ಯಾತಮ್ಮ ಇತರರಿದ್ದರು
    2
    ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕೊಂಡ್ಲಹಳ್ಳಿ ಹೊಸ ಗೊಲ್ಲರಹಟ್ಟಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ರಾಷ್ಟ್ರೀಯ ಸ್ವಾಮಿ ವಿವೇಕಾನಂದರ ಜಯಂತಿಯ ಪ್ರಯುಕ್ತ ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಯಿತು .        ಇದೇ ವೇಳೆ ಗ್ರಾಮದ ಮುಖಂಡರಾದ ಕೆ ಟಿ ರಾಮಾಂಜನೇಯ ಮತ್ತು ಕುಟುಂಬದವರು ಗೊಲ್ಲರಹಟ್ಟಿಯ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಮಕ್ಕಳಿಗೆ ಉಚಿತವಾಗಿ ತಟ್ಟೆ ನೋಟಗಳನ್ನು ಕೊಡುಗೆಯಾಗಿ ನೀಡಿದರು .          ಮುಖ್ಯ ಶಿಕ್ಷಕ ಕೆ ಟಿ ತಿಪ್ಪೇಶ್ ಮಾತನಾಡದೆ ಸ್ವಾಮಿ ವಿವೇಕಾನಂದರು, ಚಿಕಾಗೋದಲ್ಲಿ ಜರುಗಿದ ಸರ್ವಧರ್ಮ ಸಮ್ಮೇಳನದಲ್ಲಿ ಭಾರತದ ಹಿರಿಮೆಯನ್ನು ವಿಶ್ವ ಮಟ್ಟಕ್ಕೆ ಸಾರಿದರು ಎಂದು ತಿಳಿಸಿದರು .     ಮುಖಂಡ ಕೆ ಟಿ ಸೋಮಶೇಖರ್ ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಶಿಸ್ತು ಸಂಸ್ಕಾರ ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಿ ಉತ್ಪಾದ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು..      ಇದೇ ವೇಳೆ ಮುಖಂಡರಾದ ಕೆ.ಟಿ ಕರೆ ಗೌಡ ,ಕೆಎ ಮಧು ,ಬಿ ಪರಮೇಶ್ವರಪ್ಪ, ಎಸ್ಡಿಎಂಸಿ ಅಧ್ಯಕ್ಷ ಮಹಾಂತೇಶ್ ,ಉಪಾಧ್ಯಕ್ಷ ಶಿಲ್ಪ ಶ್ರೀ ,ಸದಸ್ಯರಾದ ಗುರುಸ್ವಾಮಿ, ಗಿರೀಶ್ ,ವಿರೂಪಾಕ್ಷಪ್ಪ ,ಮಂಜುಳಮ್ಮ ,ದಿನೇಶ್ ,ಉಮೇಶ್ ,ನೇತ್ರಮ್ಮ, ಗಂಗಮ್ಮ, ಎಸ್ ಮಧು ,ಕಾವ್ಯ ,ಶಿಕ್ಷಕರಾದ ತಿಪ್ಪೇಸ್ವಾಮಿ ಯೋಗೇಶ್ ,ಅನಿತಾ ಹಾಗೂ ಅಂಗನವಾಡಿ ಕಾರ್ಯಕರ್ತೆ ಕ್ಯಾತಮ್ಮ ಇತರರಿದ್ದರು
    user_T.Ramachandrappa
    T.Ramachandrappa
    Journalist ಮೊಳಕಾಲ್ಮೂರು, ಚಿತ್ರದುರ್ಗ, ಕರ್ನಾಟಕ•
    5 hrs ago
  • ಸ್ಲಂ ಜನಾಂದೋಲನ ನರಸಿಂಹಮೂರ್ತಿ ಗೆ ಅಭಿನಂದಿಸಲಾಯಿತು
    1
    ಸ್ಲಂ ಜನಾಂದೋಲನ   ನರಸಿಂಹಮೂರ್ತಿ ಗೆ ಅಭಿನಂದಿಸಲಾಯಿತು
    user_Onlinetv Chinnu
    Onlinetv Chinnu
    Reporter ಹಾಸನ, ಹಾಸನ, ಕರ್ನಾಟಕ•
    9 hrs ago
  • ಅಯ್ಯಪ್ಪ ಸ್ವಾಮಿ ವೇಷದಲ್ಲಿ ಮದ್ಯಪಾನ‎⁨@citynextnews2473⁩  https://youtube.com/shorts/ySQ7PjSr6mQ?si=k1oU70EXQEupVy4r
    1
    ಅಯ್ಯಪ್ಪ ಸ್ವಾಮಿ ವೇಷದಲ್ಲಿ ಮದ್ಯಪಾನ‎⁨@citynextnews2473⁩  
https://youtube.com/shorts/ySQ7PjSr6mQ?si=k1oU70EXQEupVy4r
    user_Yusuf Bepari
    Yusuf Bepari
    Journalist ಹುಬ್ಬಳ್ಳಿ, ಧಾರವಾಡ, ಕರ್ನಾಟಕ•
    7 hrs ago
  • ಕಾರ್ಖಾನೆ ತೊಲಗಿಸಿ ಹೋರಾಟಕ್ಕೆ ಗವಿಶ್ರೀಗಳ ಬೆಂಬಲ ಸ್ಪಷ್ಟ - ಬೆಟ್ಟದೂರು ಗವಿಮಠ ಜಾತ್ರೆಯ ಮಿಠಾಯಿ ಪಳಾರ ಅಂಗಡಿಕಾರರಿಗೆ ಸನ್ಮಾನ ಕೊಪ್ಪಳ: ನಗರ, ಭಾಗ್ಯನಗರ ಮತ್ತು ೨೦ ಕ್ಕೂ ಅಧಿಕ ಹಳ್ಳಿಗಳ ಪರಿಸರ ಮಾಲಿನ್ಯಕ್ಕೆ ಕಾರಣವಾದ ದೂಳು, ವಿಷಾನಿಲ ಸೂಸುವ ಮೂಲಕ ಆರೋಗ್ಯಕ್ಕೆ ಮಾರಕವಾದ ಕಾರ್ಖಾನೆ ವಿರೋಧಿ ಹೋರಾಟ ೭೦ ನೇ ದಿನ ಪೂರೈಸಿರು. ಈ ಸಂದರ್ಭದಲ್ಲಿ ಗವಿಸಿದ್ಧೇಶ್ವರ ಜಾತ್ರೆಯಲ್ಲಿ ಹಾಕಲಾದ ಮಿಠಾಯಿ, ಪಳಾರ ಅಂಗಡಿಗಳಲ್ಲಿ ಕಾರ್ಖಾನೆ ವಿರುದ್ಧ, ಪರಿಸರ ರಕ್ಷಣೆ, ಬಲ್ಡೋಟಾ ಹಠಾವೋ ಘೋಷಣೆ ಮೂಲಕ ಜನಜಾಗೃತಿ ಮೂಡಿಸುವ ಕಾರ್ಯ ಮಾಡಿದ ಅಂಗಡಿ ಮಾಲಿಕರಿಗೆ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ, ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ಮೂಲಕ ಸನ್ಮಾನ ಮಾಡಿ ಕೃತಜ್ಞತೆ ಸಲ್ಲಿಸಿದರು. ಜಾತ್ರೆಯ ರಥಬೀದಿಯಲ್ಲಿ ಯುವತಿಯರು ಹಾಕಿದ ರಂಗೋಲಿಯಲ್ಲಿ ಕಾರ್ಖಾನೆ ವಿರೋಧಿ ಹೋರಾಟವನ್ನು ಬೆಂಬಲಿಸಿ ಹಾಕಿದ ರಂಗೋಲಿ ಮತ್ತು ಪಳಾರ, ಮಿಠಾಯಿ ಅಂಗಡಿ ಮಾಲಿಕರು ಬ್ಯಾನರ್ ನಲ್ಲಿ ಎಂ.ಎಸ್.ಪಿ.ಎಲ್ ವಿಸ್ತರಣೆ ನಿಲ್ಲಿಸಿ, ಬಲ್ಡೋಟಾ ಹಠಾವೋ ಕೊಪ್ಪಳ ಬಚಾವೋ, ಕಾರ್ಖಾನೆ ಕಳಿಸಿ ಪರಿಸರ ಉಳಿಸಿ, ಕೃಷಿ ಭೂಮಿ ಉಳಿಸಿ, ಕಾರ್ಖಾನೆ ನಿಲ್ಲಿಸಿ ಕೊಪ್ಪಳ ಉಳಿಸಿ ಎಂಬಿತ್ಯಾದಿ ಘೋಷಣೆಗಳನ್ನು ಬರೆಸುವ ಮೂಲಕ ಹೋರಾಟಕ್ಕೆ ಶಕ್ತಿ ನೀಡುವ ಜೊತೆಗೆ, ಹೋರಾಟವನ್ನು ಜನಸಮಾನ್ಯರ ಹತ್ತಿರ ತೆಗೆದುಕೊಂಡು ಹೋಗಿದ್ದಾರೆ, ಇದಕ್ಕೆ ಪ್ರೇರಣೆಯಾದ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಕಾರ್ಖಾನೆ ವಿರೋಧಿ ಹೋರಾಟದಲ್ಲಿ ಎಲ್ಲರೊಟ್ಟಿಗೆ ಇದ್ದಾರೆ, ಅವರ ಬೆಂಬಲ ಇರೋದು ಸ್ವಷ್ಟ ಎಂದು ಹೋರಾಟ ವೇದಿಕೆ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಹೇಳಿದರು. ಪ್ರತಿ ಅಂಗಡಿಯ ಮುಂದೆ ಹೋಗಿ ಅದರ ಮಾಲಿಕರಿಗೆ ಸನ್ಮಾನ ಮಾಡಿ ಜಯಘೋಷಗಳನ್ನು ಹಾಕುವ ಮೂಲಕ ಜನಜಾಗೃತಿ ಮೂಡಿಸಲಾಯಿತು. ಮಿಠಾಯಿ, ಪಳಾರ ಅಂಗಡಿ ಮಾಲೀಕರಾದ ಪ್ರದೀಪ, ಎಂ.ಡಿ. ರಫೀಕ್, ಎಂ.ಡಿ.ಜಾವೀದ್, ಎಂ.ಡಿ. ಹುಸೇನ ಮಿಠಾಯಿ, ಗುರುರಾಜ ಬಳ್ಳಾರಿ ಅವರಿಗೆ ಸನ್ಮಾನ ನೆರವೇರಿಸಿದ ತಂಡದಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಪ್ರಕಾಶಕ ಡಿ.ಎಂ.ಬಡಿಗೇರ, ಕೃಷಿ ಬೆಲೆ ಆಯೋಗ ಸದಸ್ಯರು ಡಿ.ಎಚ್. ಪೂಜಾರ, ಮಹಿಳಾ ಮುಖಂಡರಾದ ಜ್ಯೋತಿ ಎಂ. ಗೊಂಡಬಾಳ, ಕವಿಯಿತ್ರಿ ಪುಷ್ಪಲತಾ ಏಳುಬಾವಿ, ವಿದ್ಯಾ ನಾಲವಾಡ, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಎಸ್. ಬಿ. ರಾಜೂರು, ಜಿ. ಬಿ. ಪಾಟೀಲ್, ಕವಿ ಮಹೇಶ ಮನ್ನಾಪುರ, ಶರಣು ಗಡ್ಡಿ, ಪಕೀರಗೌಡ ಕಾಸನಕಂಡಿ, ನಿವೃತ್ತ ಶಿಕ್ಷಕರು ವಿರುಪಾಕ್ಷಪ್ಪ ದೊಡ್ಡಮನಿ ಪಾಲ್ಗೊಂಡರು. ೭೦ನೇ ದಿನದ ವೇದಿಕೆಯ ಧರಣ ಯಲ್ಲಿ ಹಿರಿಯ ಸಾಹಿತಿ ಎಚ್. ಎಸ್. ಪಾಟೀಲ್, ಎ. ಎಂ. ಮದರಿ, ಮಹಾಂತೇಶ ಮಲ್ಲನಗೌಡರ, ಶಿವಾನಂದಯ್ಯ ಬೀಳಗಿಮಠ, ಬಸವರಾಜ ಪೂಜಾರ, ಯಲ್ಲಪ್ಪ ಸಿದ್ದರು ಶಿವಪುರ, ಗವಿಸಿದ್ದಪ್ಪ ಎಫ್. ತೊಂಡಿಹಾಳ, ಬಸವರಾಜ್ ಸೋಮನಾಳ, ಅಂದಪ್ಪ ಹುರಳಿ, ಭೀಮಸೇನ ಕಲಕೇರಿ, ರಮೇಶ ಬೋಚನಹಳ್ಳಿ, ಮಂಜುನಾಥ ಕವಲೂರು ಪಾಲ್ಗೊಂಡರು.
    6
    ಕಾರ್ಖಾನೆ ತೊಲಗಿಸಿ ಹೋರಾಟಕ್ಕೆ ಗವಿಶ್ರೀಗಳ ಬೆಂಬಲ ಸ್ಪಷ್ಟ - ಬೆಟ್ಟದೂರು
ಗವಿಮಠ ಜಾತ್ರೆಯ ಮಿಠಾಯಿ ಪಳಾರ ಅಂಗಡಿಕಾರರಿಗೆ ಸನ್ಮಾನ
ಕೊಪ್ಪಳ: ನಗರ, ಭಾಗ್ಯನಗರ ಮತ್ತು ೨೦ ಕ್ಕೂ ಅಧಿಕ ಹಳ್ಳಿಗಳ ಪರಿಸರ ಮಾಲಿನ್ಯಕ್ಕೆ ಕಾರಣವಾದ ದೂಳು, ವಿಷಾನಿಲ ಸೂಸುವ ಮೂಲಕ ಆರೋಗ್ಯಕ್ಕೆ ಮಾರಕವಾದ ಕಾರ್ಖಾನೆ ವಿರೋಧಿ ಹೋರಾಟ ೭೦ ನೇ ದಿನ ಪೂರೈಸಿರು.
ಈ ಸಂದರ್ಭದಲ್ಲಿ ಗವಿಸಿದ್ಧೇಶ್ವರ ಜಾತ್ರೆಯಲ್ಲಿ ಹಾಕಲಾದ ಮಿಠಾಯಿ, ಪಳಾರ ಅಂಗಡಿಗಳಲ್ಲಿ ಕಾರ್ಖಾನೆ ವಿರುದ್ಧ, ಪರಿಸರ ರಕ್ಷಣೆ, ಬಲ್ಡೋಟಾ ಹಠಾವೋ ಘೋಷಣೆ ಮೂಲಕ ಜನಜಾಗೃತಿ ಮೂಡಿಸುವ ಕಾರ್ಯ ಮಾಡಿದ ಅಂಗಡಿ ಮಾಲಿಕರಿಗೆ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ, ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ಮೂಲಕ ಸನ್ಮಾನ ಮಾಡಿ ಕೃತಜ್ಞತೆ ಸಲ್ಲಿಸಿದರು.
ಜಾತ್ರೆಯ ರಥಬೀದಿಯಲ್ಲಿ ಯುವತಿಯರು ಹಾಕಿದ ರಂಗೋಲಿಯಲ್ಲಿ ಕಾರ್ಖಾನೆ ವಿರೋಧಿ ಹೋರಾಟವನ್ನು ಬೆಂಬಲಿಸಿ ಹಾಕಿದ ರಂಗೋಲಿ ಮತ್ತು ಪಳಾರ, ಮಿಠಾಯಿ ಅಂಗಡಿ ಮಾಲಿಕರು ಬ್ಯಾನರ್ ನಲ್ಲಿ ಎಂ.ಎಸ್.ಪಿ.ಎಲ್ ವಿಸ್ತರಣೆ ನಿಲ್ಲಿಸಿ, ಬಲ್ಡೋಟಾ ಹಠಾವೋ ಕೊಪ್ಪಳ ಬಚಾವೋ, ಕಾರ್ಖಾನೆ ಕಳಿಸಿ ಪರಿಸರ ಉಳಿಸಿ, ಕೃಷಿ ಭೂಮಿ ಉಳಿಸಿ, ಕಾರ್ಖಾನೆ ನಿಲ್ಲಿಸಿ ಕೊಪ್ಪಳ ಉಳಿಸಿ ಎಂಬಿತ್ಯಾದಿ ಘೋಷಣೆಗಳನ್ನು ಬರೆಸುವ ಮೂಲಕ ಹೋರಾಟಕ್ಕೆ ಶಕ್ತಿ ನೀಡುವ ಜೊತೆಗೆ, ಹೋರಾಟವನ್ನು ಜನಸಮಾನ್ಯರ ಹತ್ತಿರ ತೆಗೆದುಕೊಂಡು ಹೋಗಿದ್ದಾರೆ, ಇದಕ್ಕೆ ಪ್ರೇರಣೆಯಾದ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಕಾರ್ಖಾನೆ ವಿರೋಧಿ ಹೋರಾಟದಲ್ಲಿ ಎಲ್ಲರೊಟ್ಟಿಗೆ ಇದ್ದಾರೆ, ಅವರ ಬೆಂಬಲ ಇರೋದು ಸ್ವಷ್ಟ ಎಂದು ಹೋರಾಟ ವೇದಿಕೆ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಹೇಳಿದರು. ಪ್ರತಿ ಅಂಗಡಿಯ ಮುಂದೆ ಹೋಗಿ ಅದರ ಮಾಲಿಕರಿಗೆ ಸನ್ಮಾನ ಮಾಡಿ ಜಯಘೋಷಗಳನ್ನು ಹಾಕುವ ಮೂಲಕ ಜನಜಾಗೃತಿ ಮೂಡಿಸಲಾಯಿತು.
ಮಿಠಾಯಿ, ಪಳಾರ ಅಂಗಡಿ ಮಾಲೀಕರಾದ ಪ್ರದೀಪ, ಎಂ.ಡಿ. ರಫೀಕ್, ಎಂ.ಡಿ.ಜಾವೀದ್, ಎಂ.ಡಿ. ಹುಸೇನ ಮಿಠಾಯಿ, ಗುರುರಾಜ ಬಳ್ಳಾರಿ ಅವರಿಗೆ ಸನ್ಮಾನ ನೆರವೇರಿಸಿದ ತಂಡದಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಪ್ರಕಾಶಕ ಡಿ.ಎಂ.ಬಡಿಗೇರ, ಕೃಷಿ ಬೆಲೆ ಆಯೋಗ ಸದಸ್ಯರು ಡಿ.ಎಚ್. ಪೂಜಾರ, ಮಹಿಳಾ ಮುಖಂಡರಾದ ಜ್ಯೋತಿ ಎಂ. ಗೊಂಡಬಾಳ, ಕವಿಯಿತ್ರಿ ಪುಷ್ಪಲತಾ ಏಳುಬಾವಿ, ವಿದ್ಯಾ ನಾಲವಾಡ, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಎಸ್. ಬಿ. ರಾಜೂರು, ಜಿ. ಬಿ. ಪಾಟೀಲ್, ಕವಿ ಮಹೇಶ ಮನ್ನಾಪುರ, ಶರಣು ಗಡ್ಡಿ, ಪಕೀರಗೌಡ ಕಾಸನಕಂಡಿ, ನಿವೃತ್ತ ಶಿಕ್ಷಕರು ವಿರುಪಾಕ್ಷಪ್ಪ ದೊಡ್ಡಮನಿ ಪಾಲ್ಗೊಂಡರು. ೭೦ನೇ ದಿನದ ವೇದಿಕೆಯ ಧರಣ ಯಲ್ಲಿ ಹಿರಿಯ ಸಾಹಿತಿ ಎಚ್. ಎಸ್. ಪಾಟೀಲ್, ಎ. ಎಂ. ಮದರಿ, ಮಹಾಂತೇಶ ಮಲ್ಲನಗೌಡರ, ಶಿವಾನಂದಯ್ಯ ಬೀಳಗಿಮಠ, ಬಸವರಾಜ ಪೂಜಾರ, ಯಲ್ಲಪ್ಪ ಸಿದ್ದರು ಶಿವಪುರ, ಗವಿಸಿದ್ದಪ್ಪ ಎಫ್. ತೊಂಡಿಹಾಳ, ಬಸವರಾಜ್ ಸೋಮನಾಳ, ಅಂದಪ್ಪ ಹುರಳಿ, ಭೀಮಸೇನ ಕಲಕೇರಿ, ರಮೇಶ ಬೋಚನಹಳ್ಳಿ, ಮಂಜುನಾಥ ಕವಲೂರು ಪಾಲ್ಗೊಂಡರು.
    user_Uday Totad
    Uday Totad
    Local News Reporter ಕೊಪ್ಪಳ, ಕೊಪ್ಪಳ, ಕರ್ನಾಟಕ•
    10 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru, Karnataka•
    4 hrs ago
  • ಜನವರಿ 13 ಕ್ಕೆ ಮಂಗಳೂರು ಸುತ್ತಮುತ್ತ ಪವರ್ ಕಟ್; ಬಿಜೈನಲ್ಲಿ ಮೆಸ್ಕಾಂ‌ ಇಲಾಖೆಯ ಪ್ರಕಟಣೆ ದಿನಾಂಕ 13.01.2026 ರಂದು ಬೆಳಿಗ್ಗೆ 10.00 ರಿಂದ ಸಂಜೆ 05:00 ಗಂಟೆಯವರೆಗೆ 110/33/11ಕೆವಿ ಕುಲಶೇಖರ ಉಪಕೇಂದ್ರದಿಂದ ಹೊರಡುವ 11ಕೆವಿ ಇಂಡಸ್ಟ್ರಿಯಲ್‌ ಮತ್ತು 11ಕೆವಿ ದತ್ತನಗರ ಫೀಡರ್‌ಗಳಲ್ಲಿ ವ್ಯವಸ್ಥೆ ಸುದಾರಣೆ ಹಾಗೂ ತುರ್ತು ನಿರ್ವಹಣೆ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ, ಬಿಕರ್ನಕಟ್ಟೆ, ಕಲಾಯಿ, ಕಂಡೆಟ್ಟು, ಜಯಶ್ರೀಗೇಟ್‌, ನಾಯ್ಗರಲೇನ್‌, ದತ್ತನಗರ, ಮಲ್ಲಕುಮೇರ್‌, ಪದವು, ಶರ್ಬತ್‌ ಕಟ್ಟೆ, ಯೆಯ್ಯಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆ ಮಾಡಲಾಗುತ್ತದೆ. ವರದಿ: ಶಂಶೀರ್ ಬುಡೋಳಿ
    1
    ಜನವರಿ 13 ಕ್ಕೆ ಮಂಗಳೂರು ಸುತ್ತಮುತ್ತ ಪವರ್ ಕಟ್; ಬಿಜೈನಲ್ಲಿ ಮೆಸ್ಕಾಂ‌ ಇಲಾಖೆಯ ಪ್ರಕಟಣೆ
ದಿನಾಂಕ 13.01.2026 ರಂದು  ಬೆಳಿಗ್ಗೆ 10.00 ರಿಂದ ಸಂಜೆ 05:00  ಗಂಟೆಯವರೆಗೆ  110/33/11ಕೆವಿ ಕುಲಶೇಖರ ಉಪಕೇಂದ್ರದಿಂದ ಹೊರಡುವ 11ಕೆವಿ ಇಂಡಸ್ಟ್ರಿಯಲ್‌ ಮತ್ತು 11ಕೆವಿ ದತ್ತನಗರ ಫೀಡರ್‌ಗಳಲ್ಲಿ ವ್ಯವಸ್ಥೆ ಸುದಾರಣೆ ಹಾಗೂ ತುರ್ತು ನಿರ್ವಹಣೆ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ, ಬಿಕರ್ನಕಟ್ಟೆ, ಕಲಾಯಿ, ಕಂಡೆಟ್ಟು, ಜಯಶ್ರೀಗೇಟ್‌, ನಾಯ್ಗರಲೇನ್‌, ದತ್ತನಗರ, ಮಲ್ಲಕುಮೇರ್‌, ಪದವು, ಶರ್ಬತ್‌ ಕಟ್ಟೆ, ಯೆಯ್ಯಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆ  ಮಾಡಲಾಗುತ್ತದೆ.
ವರದಿ: ಶಂಶೀರ್ ಬುಡೋಳಿ
    user_Shamsheer Budoli
    Shamsheer Budoli
    Journalist Mangaluru, Dakshina Kannada•
    22 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.