ಜನಗಣತಿ ಕಾರ್ಯಕ್ಕೆ ಸಹಕರಿಸಿ’ ಬಾಗೇಪಲ್ಲಿ:-ದೇಶದ ಜನಗಣತಿ ಕಾರ್ಯಕ್ಕೆ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು’ ಎಂದು ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ .ಎಂ. ಮನವಿ ಮಾಡಿದರು. ಪಟ್ಟಣ ಪುರಸಭೆ ಕಛೇರಿಯಲ್ಲಿ ಆಯೋಜಿಸಿದ್ದ ಜನಗಣತಿ ಕಾರ್ಯಾಗಾರದಲ್ಲಿ, ಜನಗಣತಿಗಾಗಿ ನೇಮಕಗೊಂಡ ಮೇಲ್ವೀಚಾರಕರಿಗೆ ಸೇವಾಭಾವ ಪ್ರತಿಜ್ಞಾವಿಧಿಭೋಧಿಸಿ ಮಾತನಾಡಿದ ಅವರು, ‘ತಾಲ್ಲೂಕಿನಲ್ಲಿ ಒಟ್ಟು 23 ವಾರ್ಡ್ಗಳಿಗೆ 52 ಬ್ಲಾಕ್ಗಳಿದ್ದು, 52 ಮಂದಿ ಗಣತಿದಾರರು ಹಾಗೂ 9 ಮಂದಿ ಮೇಲ್ವೀಚಾರಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ’ ಎಂದು ತಿಳಿಸಿದರು. ‘ಏಪ್ರಿಲ್ 1ರಿಂದ 15ರವರೆಗೆ ಸ್ವಯಂ ಗಣತಿಗೆ ಅವಕಾಶ ಕಲ್ಪಿಸಲಾಗಿದ್ದು, ಏಪ್ರಿಲ್ 16ರಿಂದ ಮೇ 15ರವರೆಗೆ ಮನೆ, ಮನೆಗೆ ತೆರಳಿ ಗಣತಿ ಕಾರ್ಯ ನಡೆಯಲಿದೆ’ ಎಂದು ತಿಳಿಸಿದರು. ಏ.16 ರಿಂದ ಮೇ 15 ರವರೆಗೆ ನಿಗದಿಪಡಿಸಲಾದ ಕ್ಷೇತ್ರ ಮಾಹಿತಿಗಳ ಸಂಗ್ರಹಣೆಗಾಗಿ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಗಣತಿ ಕಾರ್ಯ ಕೈಗೊಳ್ಳಲಿದ್ದಾರೆ. ಮೊದಲ ಹಂತದ ನಂತರ ಜನಸಂಖ್ಯಾ ಗಣತಿಯ ಪ್ರಕ್ರಿಯೆ ಆರಂಭವಾಗಲಿದೆ. ಜನಗಣತಿಯಿಂದ ದೊರೆಯುವ ದತ್ತಾಂಶವು ಸರ್ಕಾರದ ಜನಕಲ್ಯಾಣ ಯೋಜನೆಗಳ ರೂಪಿಸುವಿಕೆಗೆ ಪೂರಕವಾಗಿರುತ್ತದೆ. ಆದ್ದರಿಂದ, ಎಲ್ಲಾ ನಾಗರಿಕರು ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.
ಜನಗಣತಿ ಕಾರ್ಯಕ್ಕೆ ಸಹಕರಿಸಿ’ ಬಾಗೇಪಲ್ಲಿ:-ದೇಶದ ಜನಗಣತಿ ಕಾರ್ಯಕ್ಕೆ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು’ ಎಂದು ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ .ಎಂ. ಮನವಿ ಮಾಡಿದರು. ಪಟ್ಟಣ ಪುರಸಭೆ ಕಛೇರಿಯಲ್ಲಿ ಆಯೋಜಿಸಿದ್ದ ಜನಗಣತಿ ಕಾರ್ಯಾಗಾರದಲ್ಲಿ, ಜನಗಣತಿಗಾಗಿ ನೇಮಕಗೊಂಡ ಮೇಲ್ವೀಚಾರಕರಿಗೆ ಸೇವಾಭಾವ ಪ್ರತಿಜ್ಞಾವಿಧಿಭೋಧಿಸಿ ಮಾತನಾಡಿದ ಅವರು, ‘ತಾಲ್ಲೂಕಿನಲ್ಲಿ ಒಟ್ಟು 23 ವಾರ್ಡ್ಗಳಿಗೆ 52 ಬ್ಲಾಕ್ಗಳಿದ್ದು, 52 ಮಂದಿ ಗಣತಿದಾರರು ಹಾಗೂ 9 ಮಂದಿ ಮೇಲ್ವೀಚಾರಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ’ ಎಂದು ತಿಳಿಸಿದರು. ‘ಏಪ್ರಿಲ್ 1ರಿಂದ 15ರವರೆಗೆ ಸ್ವಯಂ ಗಣತಿಗೆ ಅವಕಾಶ ಕಲ್ಪಿಸಲಾಗಿದ್ದು, ಏಪ್ರಿಲ್ 16ರಿಂದ ಮೇ 15ರವರೆಗೆ ಮನೆ, ಮನೆಗೆ ತೆರಳಿ ಗಣತಿ ಕಾರ್ಯ ನಡೆಯಲಿದೆ’ ಎಂದು ತಿಳಿಸಿದರು. ಏ.16 ರಿಂದ ಮೇ 15 ರವರೆಗೆ ನಿಗದಿಪಡಿಸಲಾದ ಕ್ಷೇತ್ರ ಮಾಹಿತಿಗಳ ಸಂಗ್ರಹಣೆಗಾಗಿ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಗಣತಿ ಕಾರ್ಯ ಕೈಗೊಳ್ಳಲಿದ್ದಾರೆ. ಮೊದಲ ಹಂತದ ನಂತರ ಜನಸಂಖ್ಯಾ ಗಣತಿಯ ಪ್ರಕ್ರಿಯೆ ಆರಂಭವಾಗಲಿದೆ. ಜನಗಣತಿಯಿಂದ ದೊರೆಯುವ ದತ್ತಾಂಶವು ಸರ್ಕಾರದ ಜನಕಲ್ಯಾಣ ಯೋಜನೆಗಳ ರೂಪಿಸುವಿಕೆಗೆ ಪೂರಕವಾಗಿರುತ್ತದೆ. ಆದ್ದರಿಂದ, ಎಲ್ಲಾ ನಾಗರಿಕರು ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.
- Post by Venu Gopal1
- ಭೀಕರ ದುರಂತದಲ್ಲಿ ಹೆಂಡತಿ ಮಗ ಸಾ** ಹಣೆ ಚಚ್ಚಿಕೊಂಡು ಕಣ್ಣೀರಿಟ್ಟ ಪತಿ1
- Post by Chand Pasha1
- KOLAR KI.AWAAZ KOUSAR NEWS1
- ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ವಿಧಾನ ಪರಿಷತ್ ಶಾಸಕರಾದ ಮಾನ್ಯ ಶ್ರೀ *ಎಂ.ಎಲ್.ಅನಿಲ್ ಕುಮಾರ್* ರವರು ಈ ಕೋಲಾರ ತಾಲ್ಲೂಕು ಕಾಮಧೇನಹಳ್ಳಿ ಗ್ರಾಮದಲ್ಲಿ ಕಾಮಧೇನು ಕ್ರಿಕೆಟರ್ಸ್ ವತಿಯಿಂದ ಆಯೋಜಿಸಿದ್ದ ಪಂಚಾಯಿತಿ ಕ್ರಿಕೆಟ್ ಟೂರ್ನಮೆಂಟ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು ವೈ. ಶಿವಕುಮಾರ್, ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯರು ಗೋಪಾಲಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮುರುಳಿ, ಯಲವಾರ ರಾಜಕುಮಾರ್, ಖಾದ್ರಿಪುರ ಬಾಬು, ಸೀಪೂರು ದೇವರಾಜ್ ಮತ್ತು ಮುನಿಶಾಮಿ ರೆಡ್ಡಿ, ವಿಧ್ಯಾ ಮಂಜುನಾಥ್, ಮಂಜುನಾಥ್, ವಕೀಲರು ಮಂಜುನಾಥ್, ಮಾರ್ಜೇನಹಳ್ಳಿ ರವಿ, ಚಿನ್ನಾಪುರ ನಾರಾಯಣಸ್ವಾಮಿ, ಹಾಗೂ ಇತರೆ ಮುಖಂಡರು ಉಪಸ್ಥಿತರಿದ್ದರು.1
- Post by ಮಂಜುನಾಥ್ ಎಚ್ ಎಮ್3
- ಈ ವ್ಯಕ್ತಿಗೆ ಎಲ್ಲಿದ್ದೀನಿ ಎನ್ನುವಂತಹ ಜ್ಞಾನ ಇದೆಯೇ? ಯುವತಿಯ ಪಕ್ಕದಲ್ಲಿ ಪ್ಯಾಂಟ್ ತೆಗೆದು ಅಸಭ್ಯ ವರ್ತನೆ!?1
- ಆನೇಕಲ್ : ದಶಕಗಳ ಹಿಂದೆ ರಾಜ್ಯದ ಕಾಡುಗಳಿಂದ ನಾಶವಾಗಿದ್ದ ‘ಶಿವಂಗಿ’ (ಚೀತಾ)ಗಳು ಮತ್ತೆ ಕರ್ನಾಟಕದ ಮಣ್ಣಿಗೆ ಮರಳಿ ಕಾಲಿಟ್ಟಿದೆ. ದಕ್ಷಿಣ ಆಫ್ರಿಕಾದಿಂದ ತರಿಸಲಾದ ನಾಲ್ಕು ಚೀತಾಗಳು ಶನಿವಾರ ಮಧ್ಯರಾತ್ರಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ಆಗಮಿಸಿದ್ದು, ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರು ಸ್ವತಃ ವಿಮಾನ ನಿಲ್ದಾಣದ ಕಾರ್ಗೋ ವಿಭಾಗಕ್ಕೆ ಭೇಟಿ ನೀಡಿ ಚೀತಾಗಳನ್ನು ಸ್ವಾಗತಿಸಿದರು. ನಂತರ ಈ ಚೀತಾಗಳನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸಾಗಿಸಲಾಯಿತು. ಈ ವಿದೇಶಿ ಅತಿಥಿಗಳಾದ ಚೀತಾಗಳನ್ನು ಮುಂದಿನ 30 ದಿನಗಳ ಕಾಲ ಕಡ್ಡಾಯ ಕ್ವಾರಂಟೈನ್ನಲ್ಲಿ ಇಡಲಾಗುತ್ತದೆ. ಹೊಸ ಹವಾಮಾನ ಮತ್ತು ಪರಿಸರಕ್ಕೆ ಹೊಂದಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದ್ದು, ಪ್ರಾಣಿಗಳ ಆರೋಗ್ಯದ ಮೇಲೆ ತೀವ್ರ ನಿಗಾ ಇಡಲಾಗುತ್ತಿದೆ. ತಜ್ಞರ ಮಾರ್ಗದರ್ಶನದಲ್ಲಿ ನಿರ್ದಿಷ್ಟ ಆಹಾರ ಕ್ರಮವನ್ನು ಅನುಸರಿಸಲಾಗುತ್ತಿದ್ದು, ಯಾವುದೇ ಸೋಂಕು ಅಥವಾ ಆರೋಗ್ಯ ಸಮಸ್ಯೆ ಉಂಟಾಗದಂತೆ ವಿಶೇಷ ಎಚ್ಚರಿಕೆ ವಹಿಸಲಾಗಿದೆ. ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ್ ಪನ್ವಾರ್ ಅವರಿಗೆ ಚೀತಾಗಳ ಸಂಪೂರ್ಣ ಸುರಕ್ಷತಾ ಜವಾಬ್ದಾರಿ ವಹಿಸಲಾಗಿದೆ. ಈ ಕುರಿತು ಮಾತನಾಡಿದ ಸಚಿವ ಖಂಡ್ರೆ, ಒಂದು ಕಾಲದಲ್ಲಿ ನಮ್ಮ ಕಾಡುಗಳಲ್ಲಿ ವಿಪುಲವಾಗಿದ್ದ ಶಿವಂಗಿಗಳು ಇಂದು ಸಂಪೂರ್ಣವಾಗಿ ಅಳಿದು ಹೋಗಿವೆ. ಇವುಗಳನ್ನು ಮತ್ತೆ ಪರಿಚಯಿಸಿ ಸಂರಕ್ಷಣೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.1
- ಡಿಸಿಎಂ ಡಿ ಕೆ ಶಿವಕುಮಾರ್ ಅವರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಐಪಿಎಲ್ ಟಿ-20 ಕ್ರಿಕೆಟ್ ಪಂದ್ಯವನ್ನು ಶನಿವಾರ ವೀಕ್ಷಿಸಿದರು.1