logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಗ್ರಾಹಕರು ಬ್ಯಾಂಕಿನಲ್ಲಿರುವ ಪ್ರತಿಯೊಂದು ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಿ: ತರುನಿ ಚರಣ್ ಸಾಹು  ವಿಜಯನಗರ: ಗ್ರಾಹಕರು ಬ್ಯಾಂಕಿನಲ್ಲಿರುವ ಪ್ರತಿಯೊಂದು ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಿ ಎಂದು  ಹುಬ್ಬಳ್ಳಿ ಧಾರವಾಡ ವಲಯ ವಿಭಾಗದ ಮುಖ್ಯಸ್ಥ ತರುನಿ ಚರಣ್ ಸಾಹು ಹೇಳಿದರು. ಅವರು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದ ನಗರೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ಬಾಂಕ್ ಆಫ್ ಇಂಡಿಯಾದಿಂದ ಹಮ್ಮಿಕೊಂಡಿದ್ದ ಗ್ರಾಮ ಪಂಚಾಯತಿ ಮಟ್ಟದ ಆರ್ಥಿಕ ಯೋಜನೆಗಳ ಸ್ಯಾಚುರೇಶನ್ ಅಭಿಯಾನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈಗಾಗಲೇ ಇಡೀ ದೇಶದ್ಯಾಂತ ಕೇಂದ್ರ ಸರ್ಕಾರ ಸಾರ್ವಜನಿಕರ ಸಾಮಾಜಿಕ ಭದ್ರತೆ ದೃಷ್ಟಿಯಿಂದ ಹತ್ತು ಹಲವಾರು ಯೋಜನೆಗಳನ್ನ ಜಾರಿಗೆ ತಂದಿದೆ. ಬ್ಯಾಂಕ್ ಖಾತೆಗಳನ್ನ ಹೊಂದಿರುವ ಪ್ರತಿಯೊಬ್ಬ ಗ್ರಾಹಕರಿಗೆ ಅವರ ಜೀವನ ಭದ್ರತೆಯಿಂದ ಕೂಡಿರಲಿ ಅಂತ ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ 18 ವರ್ಷದಿಂದ 40 ವರ್ಷದ ಒಳಗಿನ ಪ್ರತಿಯೊಬ್ಬ ಭಾರತೀಯ ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಈಗಾಗಲೇ ಈ ಯೋಜನೆಯಲ್ಲಿ 7.83 ಕೋಟಿ ನೊಂದಣಿಗೊಂಡಿವೆ, ಪ್ರಧಾನ ಮಂತ್ರಿ ಸುರಾಕ್ಷಾ ಬೀಮಾ ಯೋಜನೆ ಅಡಿಯಲ್ಲಿ ನೊಂದಣಿ ಮಾಡಿಕೊಂಡ ಫಲಾನುಭವಿಗಳಿಗೆ ಮೃತ ವ್ಯಕ್ತಿಯ ಕುಟುಂಬ ಆರ್ಥಿಕ ತೊಂದರೆಗೆ ಸಿಲುಕಬಾರದು ಎಂಬ ಉದ್ದೇಶದಿಂದ 2 ಲಕ್ಷದ ವರೆಗಿನ ವಿಮೆ ಬರುತ್ತದೆ ಇಂತಹ ಸೌಲಭ್ಯಗಳನ್ನ ಬ್ಯಾಂಕ್ ನಲ್ಲಿ ಲಭ್ಯ ಇವೆ ಇದರ ಸದುಪಯೋಗವನ್ನ ಪ್ರತಿಯೊಬ್ಬರು ಬಳಸಿಕೊಳ್ಳಿ ಎಂದರು. ಇನ್ನು ಇದೇ ವೇಳೆ ಲೀಡ್ ಜಿಲ್ಲಾ ವ್ಯವಸ್ಥಾಪಕ ವಿರೇಂದ್ರ ಕುಮಾರ್ ಮಾತನಾಡಿ, ಶೇ.100% ರಲ್ಲಿ ಸಮಾರು ಶೇ.50% ರಷ್ಟು ಬ್ಯಾಂಕ್ ಖಾತೆಗಳು ಈ ಕೇವೈಸಿ ಮಾಡದೇ ಹಾಗೆ ಉಳಿದುಕೊಂಡಿವೆ ಇದರಿಂದಾಗಿ ಸರ್ಕಾರದಿಂದ ಸಿಗುವ ಸಬ್ಸಿಡಿ ಹಣ ಸೇರಿದಂತೆ ಯಾವುದೇ ಹಣ ಫಲಾನುಭವಿಗಳಿಗೆ ತಲುವುದೇ ಇಲ್ಲ ಹಾಗಾಗಿ ಪ್ರತಿಯೊಬ್ಬರೂ ಬ್ಯಾಂಕ್ ಗೆ ಹೋಗಿ ಆಧಾರ್ ಈ ಕೇವೈಸಿ ಮಾಡಿಸಿಕೊಳ್ಳಬೇಕು, ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗಿ ನಡೆಯುತ್ತವೆ, ಬ್ಯಾಂಕಿನ ಗ್ರಾಹಕರನ್ನ ಈ ಕೇವೈಸಿ ಮಾಡಲಾಗುತ್ತಿದೆ ನಿಮ್ಮ ಮೊಬೈಲ್ ಒಟಿಪಿ ತೆಗೆದುಕೊಂಡು ಹಣವನ್ನ ಆನ್ ಲೈನ್ ಮೂಲಕ ದೋಚುವ ಕೃತ್ಯಗಳು ನಡೆಯುತ್ತಿವೆ. ಆನ್ ಲೈನ್ ವಂಚನೆಗೆ ಒಳಗಾಗ ಬೇಡಿ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬೀಮಾ ಯೋಜನೆ ಅಡಿ ಈಗಾಗಲೇ 23.84 ಕೋಟಿ ನೊಂದಣಿಗೊಂಡಿವೆ ಈ ಯೋಜನೆಯಲ್ಲಿ 18 ರಿಂದ 50 ವರ್ಷದ ಒಳಗಿನ ಪ್ರತಿಯೊಬ್ಬ ಭಾರತೀಯ ನೊಂದಣಿ ಮಾಡಿಸಿಕೊಳ್ಳಬಹುದು. ಇಂತಹ ಕೇಂದ್ರ ಸರ್ಕಾರದ ಯೋಜನೆಗಳಾದ  ಜೀವಾ ವಿಮೆ, ಅಪಘಾತ ವಿಮೆ ಸೇರಿದಂತೆ ನಾನ ಯೋಜನೆಗಳು ಪ್ರತಿಯೊಬ್ಬ ನಾಗರಿಕರಿಗೆ ತಲುಪದೇ ಇರೋದು ಬೇಸರದ ವಿಷಯ ಪ್ರತಿಯೊಬ್ಬರು ನೊಂದಣಿ ಮಾಡಿಸಿಕೊಂಡು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು. ಇನ್ನು ಇದೇ ಕಾರ್ಯಕ್ರಮದಲ್ಲಿ ಎರಡು ಫಲಾನುಭವಿಗಳಿಗೆ ಅಪಘಾತದಲ್ಲಿ ಮೃತ ಪಟ್ಟ ಕುಟುಂಬಕ್ಕೆ 2 ಲಕ್ಷ ರೂ ಚೆಕ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮರಿಯಮ್ಮನಹಳ್ಳಿ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ವ್ಯವಸ್ಥಾಪಕಿ ಸುಮಾ ಸಿ ಆರ್, ಸಿಬ್ಬಂದಿಗಳಾದ ಕಲ್ಯಾಣಿ, ಹನುಮೇಶ್, ವೈಶಾಲಿ, ಶಿಲ್ಪಾ ಕೆ.ರಮೇಶ್, ರಾಜೇಶ್ ರವಿತೇಜ ರಾಘವೇಂದ್ರ, ಶ್ರೀನಿವಾಸ,ಡಣಾಪುರ ರಾಘವೇಂದ್ರ ಶೆಟ್ರು, ಸತ್ಯನಾರಾಯಣ, ಕಚಟಿ ಹುಲುಗಪ್ಪ ಈಡಿಗರ ನಾಗರಾಜಪ್ಪ, ಸೇರಿದಂತೆ ಬ್ಯಾಂಕಿನ ಗ್ರಾಹಕರು ಭಾಗವಹಿಸಿದ್ದರು. ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗಿ ನಡೆಯುತ್ತವೆ, ಬ್ಯಾಂಕಿನ ಗ್ರಾಹಕರಿಗೆ ವಂಚಕರು ಕರೆ ಮಾಡಿ ಈ ಕೇವೈಸಿ ಮಾಡಲಾಗುತ್ತಿದೆ ನಿಮ್ಮ ಮೊಬೈಲ್ ಒಟಿಪಿ ತೆಗೆದುಕೊಂಡು ಹಣವನ್ನ ಆನ್ ಲೈನ್ ಮೂಲಕ ದೋಚುವ ಕೃತ್ಯಗಳು ನಡೆಯುತ್ತಿವೆ. ಬ್ಯಾಂಕಿನವರು ಯಾವುತ್ತೂ ಕೂಡ ಒಟಿಪಿ ಪಡೆದುಕೊಳ್ಳುವುದಕ್ಕೆ ಕರೆ ಮಾಡುವುದಿಲ್ಲ ಒಂದು ವೇಳೆ ಮಾಡಿದ್ರೆ ಒಟಿಪಿ ಕೊಡಬೇಡಿ ನೀವು ಬ್ಯಾಂಕ್ ಶಾಖೆಗೆ ಭೇಟಿ ನೀಡಿ ನೀವು ಆನ್ ಲೈನ್ ವಂಚನೆಗೆ ಒಳಗಾಗ ಬೇಡಿ ಎಂದು ಎಚ್ಚರಿಕೆ ನೀಡಿದರು:- ಸುಮಾ ಸಿ ಆರ್, ವ್ಯವಸ್ಥಾಪಕಿ ಬ್ಯಾಂಕ್ ಆಫ್ ಇಂಡಿಯಾ ಶಾಖೆ ಮರಿಯಮ್ಮನಹಳ್ಳಿ.

on 17 August
user_ಎಂ.ಸೋಮೇಶ್ ಉಪ್ಪಾರ
ಎಂ.ಸೋಮೇಶ್ ಉಪ್ಪಾರ
Journalist Vijayanagar, Karnataka•
on 17 August
4357cf83-d07b-4c8b-8c26-d5d2a8223a1a

ಗ್ರಾಹಕರು ಬ್ಯಾಂಕಿನಲ್ಲಿರುವ ಪ್ರತಿಯೊಂದು ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಿ: ತರುನಿ ಚರಣ್ ಸಾಹು  ವಿಜಯನಗರ: ಗ್ರಾಹಕರು ಬ್ಯಾಂಕಿನಲ್ಲಿರುವ ಪ್ರತಿಯೊಂದು ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಿ ಎಂದು  ಹುಬ್ಬಳ್ಳಿ ಧಾರವಾಡ ವಲಯ ವಿಭಾಗದ ಮುಖ್ಯಸ್ಥ ತರುನಿ ಚರಣ್ ಸಾಹು ಹೇಳಿದರು. ಅವರು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದ ನಗರೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ಬಾಂಕ್ ಆಫ್ ಇಂಡಿಯಾದಿಂದ ಹಮ್ಮಿಕೊಂಡಿದ್ದ ಗ್ರಾಮ ಪಂಚಾಯತಿ ಮಟ್ಟದ ಆರ್ಥಿಕ ಯೋಜನೆಗಳ ಸ್ಯಾಚುರೇಶನ್ ಅಭಿಯಾನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈಗಾಗಲೇ ಇಡೀ ದೇಶದ್ಯಾಂತ ಕೇಂದ್ರ ಸರ್ಕಾರ ಸಾರ್ವಜನಿಕರ ಸಾಮಾಜಿಕ ಭದ್ರತೆ ದೃಷ್ಟಿಯಿಂದ ಹತ್ತು ಹಲವಾರು ಯೋಜನೆಗಳನ್ನ ಜಾರಿಗೆ ತಂದಿದೆ. ಬ್ಯಾಂಕ್ ಖಾತೆಗಳನ್ನ ಹೊಂದಿರುವ ಪ್ರತಿಯೊಬ್ಬ ಗ್ರಾಹಕರಿಗೆ ಅವರ ಜೀವನ ಭದ್ರತೆಯಿಂದ ಕೂಡಿರಲಿ ಅಂತ ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ 18 ವರ್ಷದಿಂದ 40 ವರ್ಷದ ಒಳಗಿನ ಪ್ರತಿಯೊಬ್ಬ ಭಾರತೀಯ ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಈಗಾಗಲೇ ಈ ಯೋಜನೆಯಲ್ಲಿ 7.83 ಕೋಟಿ ನೊಂದಣಿಗೊಂಡಿವೆ, ಪ್ರಧಾನ ಮಂತ್ರಿ ಸುರಾಕ್ಷಾ ಬೀಮಾ ಯೋಜನೆ ಅಡಿಯಲ್ಲಿ ನೊಂದಣಿ ಮಾಡಿಕೊಂಡ ಫಲಾನುಭವಿಗಳಿಗೆ ಮೃತ ವ್ಯಕ್ತಿಯ ಕುಟುಂಬ ಆರ್ಥಿಕ ತೊಂದರೆಗೆ ಸಿಲುಕಬಾರದು ಎಂಬ ಉದ್ದೇಶದಿಂದ 2 ಲಕ್ಷದ ವರೆಗಿನ ವಿಮೆ ಬರುತ್ತದೆ ಇಂತಹ ಸೌಲಭ್ಯಗಳನ್ನ ಬ್ಯಾಂಕ್ ನಲ್ಲಿ ಲಭ್ಯ ಇವೆ ಇದರ ಸದುಪಯೋಗವನ್ನ ಪ್ರತಿಯೊಬ್ಬರು ಬಳಸಿಕೊಳ್ಳಿ ಎಂದರು. ಇನ್ನು ಇದೇ ವೇಳೆ ಲೀಡ್ ಜಿಲ್ಲಾ ವ್ಯವಸ್ಥಾಪಕ ವಿರೇಂದ್ರ ಕುಮಾರ್ ಮಾತನಾಡಿ, ಶೇ.100% ರಲ್ಲಿ ಸಮಾರು ಶೇ.50% ರಷ್ಟು ಬ್ಯಾಂಕ್ ಖಾತೆಗಳು ಈ ಕೇವೈಸಿ ಮಾಡದೇ ಹಾಗೆ ಉಳಿದುಕೊಂಡಿವೆ ಇದರಿಂದಾಗಿ ಸರ್ಕಾರದಿಂದ ಸಿಗುವ ಸಬ್ಸಿಡಿ ಹಣ ಸೇರಿದಂತೆ ಯಾವುದೇ ಹಣ ಫಲಾನುಭವಿಗಳಿಗೆ ತಲುವುದೇ ಇಲ್ಲ ಹಾಗಾಗಿ ಪ್ರತಿಯೊಬ್ಬರೂ ಬ್ಯಾಂಕ್ ಗೆ ಹೋಗಿ ಆಧಾರ್ ಈ ಕೇವೈಸಿ ಮಾಡಿಸಿಕೊಳ್ಳಬೇಕು, ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗಿ ನಡೆಯುತ್ತವೆ, ಬ್ಯಾಂಕಿನ ಗ್ರಾಹಕರನ್ನ ಈ ಕೇವೈಸಿ ಮಾಡಲಾಗುತ್ತಿದೆ ನಿಮ್ಮ ಮೊಬೈಲ್ ಒಟಿಪಿ ತೆಗೆದುಕೊಂಡು ಹಣವನ್ನ ಆನ್ ಲೈನ್ ಮೂಲಕ ದೋಚುವ ಕೃತ್ಯಗಳು ನಡೆಯುತ್ತಿವೆ. ಆನ್ ಲೈನ್ ವಂಚನೆಗೆ ಒಳಗಾಗ ಬೇಡಿ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬೀಮಾ ಯೋಜನೆ ಅಡಿ ಈಗಾಗಲೇ 23.84 ಕೋಟಿ ನೊಂದಣಿಗೊಂಡಿವೆ ಈ ಯೋಜನೆಯಲ್ಲಿ 18 ರಿಂದ 50 ವರ್ಷದ ಒಳಗಿನ ಪ್ರತಿಯೊಬ್ಬ ಭಾರತೀಯ ನೊಂದಣಿ ಮಾಡಿಸಿಕೊಳ್ಳಬಹುದು. ಇಂತಹ ಕೇಂದ್ರ ಸರ್ಕಾರದ ಯೋಜನೆಗಳಾದ  ಜೀವಾ ವಿಮೆ, ಅಪಘಾತ ವಿಮೆ ಸೇರಿದಂತೆ ನಾನ ಯೋಜನೆಗಳು ಪ್ರತಿಯೊಬ್ಬ ನಾಗರಿಕರಿಗೆ ತಲುಪದೇ ಇರೋದು ಬೇಸರದ ವಿಷಯ ಪ್ರತಿಯೊಬ್ಬರು ನೊಂದಣಿ ಮಾಡಿಸಿಕೊಂಡು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು. ಇನ್ನು ಇದೇ ಕಾರ್ಯಕ್ರಮದಲ್ಲಿ ಎರಡು ಫಲಾನುಭವಿಗಳಿಗೆ ಅಪಘಾತದಲ್ಲಿ ಮೃತ ಪಟ್ಟ ಕುಟುಂಬಕ್ಕೆ 2 ಲಕ್ಷ ರೂ ಚೆಕ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮರಿಯಮ್ಮನಹಳ್ಳಿ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ವ್ಯವಸ್ಥಾಪಕಿ ಸುಮಾ ಸಿ ಆರ್, ಸಿಬ್ಬಂದಿಗಳಾದ ಕಲ್ಯಾಣಿ, ಹನುಮೇಶ್, ವೈಶಾಲಿ, ಶಿಲ್ಪಾ ಕೆ.ರಮೇಶ್, ರಾಜೇಶ್ ರವಿತೇಜ ರಾಘವೇಂದ್ರ, ಶ್ರೀನಿವಾಸ,ಡಣಾಪುರ ರಾಘವೇಂದ್ರ ಶೆಟ್ರು, ಸತ್ಯನಾರಾಯಣ, ಕಚಟಿ ಹುಲುಗಪ್ಪ ಈಡಿಗರ ನಾಗರಾಜಪ್ಪ, ಸೇರಿದಂತೆ ಬ್ಯಾಂಕಿನ ಗ್ರಾಹಕರು ಭಾಗವಹಿಸಿದ್ದರು. ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗಿ ನಡೆಯುತ್ತವೆ, ಬ್ಯಾಂಕಿನ ಗ್ರಾಹಕರಿಗೆ ವಂಚಕರು ಕರೆ ಮಾಡಿ ಈ ಕೇವೈಸಿ ಮಾಡಲಾಗುತ್ತಿದೆ ನಿಮ್ಮ ಮೊಬೈಲ್ ಒಟಿಪಿ ತೆಗೆದುಕೊಂಡು ಹಣವನ್ನ ಆನ್ ಲೈನ್ ಮೂಲಕ ದೋಚುವ ಕೃತ್ಯಗಳು ನಡೆಯುತ್ತಿವೆ. ಬ್ಯಾಂಕಿನವರು ಯಾವುತ್ತೂ ಕೂಡ ಒಟಿಪಿ ಪಡೆದುಕೊಳ್ಳುವುದಕ್ಕೆ ಕರೆ ಮಾಡುವುದಿಲ್ಲ ಒಂದು ವೇಳೆ ಮಾಡಿದ್ರೆ ಒಟಿಪಿ ಕೊಡಬೇಡಿ ನೀವು ಬ್ಯಾಂಕ್ ಶಾಖೆಗೆ ಭೇಟಿ ನೀಡಿ ನೀವು ಆನ್ ಲೈನ್ ವಂಚನೆಗೆ ಒಳಗಾಗ ಬೇಡಿ ಎಂದು ಎಚ್ಚರಿಕೆ ನೀಡಿದರು:- ಸುಮಾ ಸಿ ಆರ್, ವ್ಯವಸ್ಥಾಪಕಿ ಬ್ಯಾಂಕ್ ಆಫ್ ಇಂಡಿಯಾ ಶಾಖೆ ಮರಿಯಮ್ಮನಹಳ್ಳಿ.

More news from Bengaluru Urban and nearby areas
  • ಎಚ್ ಟಿ ಎಂ ಆಯುರ್ವೇದ ಬೆಂಗಳೂರು ಹಕೀಮ್ ನೌಷದ್ ಖಾನ್ ( ಪಾರಂಪರಿಕ )
    1
    ಎಚ್ ಟಿ ಎಂ ಆಯುರ್ವೇದ ಬೆಂಗಳೂರು
ಹಕೀಮ್ ನೌಷದ್ ಖಾನ್ ( ಪಾರಂಪರಿಕ )
    user_Naushad khan Vahab khan
    Naushad khan Vahab khan
    Ayurvedic clinic Bengaluru South, Bengaluru Urban•
    22 hrs ago
  • ಮಳವಳ್ಳಿ ಪಟ್ಟಣದಲ್ಲಿ ಸುತ್ತೂರು ಜಯಂತಿ ಆಚರಣೆಗೆ ಆರಂಭಕ್ಕೆ ಕ್ಷಣಗಣನೆ: ಮದುವಣಿಗೀತಿಯಂತೆ ಸಿಂಗಾರ ಗೊಂಡ ಪಟ್ಟಣ
    1
    ಮಳವಳ್ಳಿ ಪಟ್ಟಣದಲ್ಲಿ ಸುತ್ತೂರು ಜಯಂತಿ ಆಚರಣೆಗೆ ಆರಂಭಕ್ಕೆ ಕ್ಷಣಗಣನೆ: ಮದುವಣಿಗೀತಿಯಂತೆ ಸಿಂಗಾರ ಗೊಂಡ ಪಟ್ಟಣ
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    Journalist Malavalli, Mandya•
    5 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru, Karnataka•
    58 min ago
  • ಮಳವಳ್ಳಿ ಪಟ್ಟಣಕ್ಕೆ ಸುತ್ತೂರಿನಿಂದ ಆದಿಜಗದ್ಗರು ಶ್ರೀ ಶಿವರಾತ್ರಿ ಶಿವಯೋಗಿಗಳರವರ ಉತ್ಸವ ಮೂರ್ತಿ ಅಗಮನಕ್ಕೆ ಕ್ರಣಗಣನೆ-ಸುತತೂರಿನಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿದೇಶಿಕೇಂದ್ರ ಮಹಾಸ್ವಾಮಿಗಳಿಂದ ವಿದ್ಯುಕ್ತ ಚಾಲನೆ ಸುತ್ತೂರು ಕ್ಷೇತ್ರದಿಂದ ಮಳವಳ್ಳಿಗೆ ಅಗಮಿಸುವ ಅದಿಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿಗಳರವರ ಉತ್ಸವ ಮೂರ್ತಿಗೆ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಸ್ವಾಮಿಗಳು ಸಂಪ್ರದಾಯಬದ್ದ ಆಚರಣೆಗಳೊಂದಿಗೆ ವಿದ್ಯುಕ್ತವಾಗಿ ಸೋಮವಾರ ಬೆಳಿಗ್ಗೆ ೭.೩೦ ಗಂಟೆಯಲ್ಲಿ ಚಾಲನೆ ನೀಡಿದರು,ಸ್ವತ: ಪರಮಪೂಜ್ಯರ ನೇತೃತ್ವದಲ್ಲಿ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಸುತ್ತೂರಿನಿಂದ ಮಂಗಳವಾದ್ಯ ಜಾನಪದ ಕಲಾತಂಡಗಳ ಮೆರವಣಿಗೆಯೊಂದಿಗೆ ಮಳವಳ್ಳಿಗೆ ಟಿ.ನರಸೀಪುರದ ಮೂಲಕ ಮಳವಳ್ಳಿ ಕ್ಷೇತ್ರಕ್ಕೆ ಅಗಮಿಸಲಿದ್ದು,ಗಡಿಬಾಗದ ಚಿಕ್ಕಬಾಗಿಲು ಗ್ರಾಮದಲ್ಲಿ ತಾಲೂಕಿನ ಹರಗುರು ಚರಮೂರ್ತಿಗಳು,ಸರ್ದಭಕ್ತರು,ಜನಪ್ರತಿನಿಧಿಗಳು ವಿಶೇಷ ಪೂಜೆಯೊಂದಿಗೆ ಬರಮಾಡಿಕೊಳೂವತ್ತ ಸಿದ್ದತೆ ನಡೆಸಿದ್ದಾರೆ..ಚಿಕ್ಕಬಾಗಿಲಿನಿಂದ ಪೂರಿಗಾಲಿ,ಸರಗೂರು,ಮುಟ್ಟನಹಳ್ಳಿ,ಬಿ.ಜಿ.ಪುರ,ವಾಸುವಳ್ಳಿ,ಬೆಳಕವಾಡಿಗೆ ಅಗಮಿಸಲಿದ್ದು,ಬೆಳಕವಾಡಿ ಮಠದ ಶ್ರೀಗಳು ವಿಶೇಷ ಪೂಜೆಯೊಂದಿಗೆ ಉತ್ಸವ ಮೂರ್ತಿಯನ್ನು ಬರಮಾಡಿಕೊಳ್ಳುವರು ಇದೇ ಸಂದರ್ಭದಲ್ಲಿ ಅಗಮಿಸುವ ಭಕ್ತರಿಗೆ ಪ್ರಸಾದ ವಿನಿಯೋಗ ವ್ಯವಸ್ಥೆ ಕಲ್ಪಿಸಲಾಗಿದೆ.
    1
    ಮಳವಳ್ಳಿ ಪಟ್ಟಣಕ್ಕೆ ಸುತ್ತೂರಿನಿಂದ ಆದಿಜಗದ್ಗರು ಶ್ರೀ ಶಿವರಾತ್ರಿ ಶಿವಯೋಗಿಗಳರವರ ಉತ್ಸವ ಮೂರ್ತಿ ಅಗಮನಕ್ಕೆ ಕ್ರಣಗಣನೆ-ಸುತತೂರಿನಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿದೇಶಿಕೇಂದ್ರ ಮಹಾಸ್ವಾಮಿಗಳಿಂದ ವಿದ್ಯುಕ್ತ ಚಾಲನೆ
ಸುತ್ತೂರು ಕ್ಷೇತ್ರದಿಂದ ಮಳವಳ್ಳಿಗೆ ಅಗಮಿಸುವ ಅದಿಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿಗಳರವರ ಉತ್ಸವ ಮೂರ್ತಿಗೆ  ಪರಮಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಸ್ವಾಮಿಗಳು ಸಂಪ್ರದಾಯಬದ್ದ ಆಚರಣೆಗಳೊಂದಿಗೆ ವಿದ್ಯುಕ್ತವಾಗಿ ಸೋಮವಾರ ಬೆಳಿಗ್ಗೆ ೭.೩೦ ಗಂಟೆಯಲ್ಲಿ ಚಾಲನೆ ನೀಡಿದರು,ಸ್ವತ: ಪರಮಪೂಜ್ಯರ ನೇತೃತ್ವದಲ್ಲಿ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಸುತ್ತೂರಿನಿಂದ ಮಂಗಳವಾದ್ಯ ಜಾನಪದ ಕಲಾತಂಡಗಳ ಮೆರವಣಿಗೆಯೊಂದಿಗೆ ಮಳವಳ್ಳಿಗೆ ಟಿ.ನರಸೀಪುರದ ಮೂಲಕ ಮಳವಳ್ಳಿ ಕ್ಷೇತ್ರಕ್ಕೆ ಅಗಮಿಸಲಿದ್ದು,ಗಡಿಬಾಗದ ಚಿಕ್ಕಬಾಗಿಲು ಗ್ರಾಮದಲ್ಲಿ ತಾಲೂಕಿನ ಹರಗುರು ಚರಮೂರ್ತಿಗಳು,ಸರ್ದಭಕ್ತರು,ಜನಪ್ರತಿನಿಧಿಗಳು ವಿಶೇಷ ಪೂಜೆಯೊಂದಿಗೆ ಬರಮಾಡಿಕೊಳೂವತ್ತ ಸಿದ್ದತೆ ನಡೆಸಿದ್ದಾರೆ..ಚಿಕ್ಕಬಾಗಿಲಿನಿಂದ ಪೂರಿಗಾಲಿ,ಸರಗೂರು,ಮುಟ್ಟನಹಳ್ಳಿ,ಬಿ.ಜಿ.ಪುರ,ವಾಸುವಳ್ಳಿ,ಬೆಳಕವಾಡಿಗೆ ಅಗಮಿಸಲಿದ್ದು,ಬೆಳಕವಾಡಿ ಮಠದ ಶ್ರೀಗಳು ವಿಶೇಷ ಪೂಜೆಯೊಂದಿಗೆ ಉತ್ಸವ ಮೂರ್ತಿಯನ್ನು ಬರಮಾಡಿಕೊಳ್ಳುವರು ಇದೇ ಸಂದರ್ಭದಲ್ಲಿ  ಅಗಮಿಸುವ ಭಕ್ತರಿಗೆ ಪ್ರಸಾದ ವಿನಿಯೋಗ ವ್ಯವಸ್ಥೆ ಕಲ್ಪಿಸಲಾಗಿದೆ.
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    Journalist Malavalli, Mandya•
    11 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru, Karnataka•
    7 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru, Karnataka•
    11 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru, Karnataka•
    23 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.