Shuru
Apke Nagar Ki App…
ಖಮೇನಿ ಸಾವು : ಪಿರಿಯಾಪಟ್ಟದಲ್ಲಿ ಶಿಯಾ ಸಮುದಾಯದ ಮೌನ ಪ್ರತಿಭಟನೆ ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್ ಸುಪ್ರೀಂ ಲೀಡರ್ ಅಲಿ ಖಮೆನಿ ಸಾವಿನ ಸುದ್ದಿ ಹಿನ್ನೆಲೆ ಪಿರಿಯಾಪಟ್ಟಣದಲ್ಲಿ ಶಿಯಾ ಮುಸ್ಲಿಂ ಸಮುದಾಯದಿಂದ ಮೌನ ಪ್ರತಿಭಟನೆ ನಡೆಯಿತು. ಮೇಣದಬತ್ತಿ ಬೆಳಗಿ, ಕಪ್ಪು ಉಡುಗೆ ಧರಿಸಿ ಭಾವಚಿತ್ರ ಹಿಡಿದು ಮೆರವಣಿಗೆ ನಡೆಸಿದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.“ಶಾಂತಿ ಮಂತ್ರ ಹೇಳುತ್ತಾ ದ್ವಂದ್ವ ನೀತಿ ಅನುಸರಿಸಿದ್ದಾರೆ” ಎಂದು ... ಪ್ರತಿಭಟನಾಕಾರರು ಹೇಳಿದರು.ಶಿಯಾ ಸಮುದಾಯದ ಮುಖಂಡರು ಧರಣಿಯಲ್ಲಿ ಭಾಗವಹಿಸಿದ್ದರು.
Ashwini
ಖಮೇನಿ ಸಾವು : ಪಿರಿಯಾಪಟ್ಟದಲ್ಲಿ ಶಿಯಾ ಸಮುದಾಯದ ಮೌನ ಪ್ರತಿಭಟನೆ ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್ ಸುಪ್ರೀಂ ಲೀಡರ್ ಅಲಿ ಖಮೆನಿ ಸಾವಿನ ಸುದ್ದಿ ಹಿನ್ನೆಲೆ ಪಿರಿಯಾಪಟ್ಟಣದಲ್ಲಿ ಶಿಯಾ ಮುಸ್ಲಿಂ ಸಮುದಾಯದಿಂದ ಮೌನ ಪ್ರತಿಭಟನೆ ನಡೆಯಿತು. ಮೇಣದಬತ್ತಿ ಬೆಳಗಿ, ಕಪ್ಪು ಉಡುಗೆ ಧರಿಸಿ ಭಾವಚಿತ್ರ ಹಿಡಿದು ಮೆರವಣಿಗೆ ನಡೆಸಿದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.“ಶಾಂತಿ ಮಂತ್ರ ಹೇಳುತ್ತಾ ದ್ವಂದ್ವ ನೀತಿ ಅನುಸರಿಸಿದ್ದಾರೆ” ಎಂದು ... ಪ್ರತಿಭಟನಾಕಾರರು ಹೇಳಿದರು.ಶಿಯಾ ಸಮುದಾಯದ ಮುಖಂಡರು ಧರಣಿಯಲ್ಲಿ ಭಾಗವಹಿಸಿದ್ದರು.
More news from Karnataka and nearby areas
- *ಭಾರತ ನಲ್ಲಿ ವೈರಲ್*1
- ಕೇತುಗ್ರಸ್ತ ಚಂದ್ರ ಗ್ರಹಣದ ಹಿನ್ನಲೆಯಲ್ಲಿ ಮೈಸೂರಿನ ಪ್ರಸಿದ್ಧ ಚಾಮುಂಡೇಶ್ವರಿ ದೇಗುಲವನ್ನು ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಬಂದ್ ಮಾಡಲಾಗಿದೆ. ಗ್ರಹಣದ ಪರಿಣಾಮದ ಹಿನ್ನೆಲೆಯಲ್ಲಿ ದೇಗುಲದ ಮುಖ್ಯ ದ್ವಾರಕ್ಕೆ ಬೀಗ ಹಾಕಲಾಗಿದ್ದು, ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶ ನೀಡಲಾಗಿಲ್ಲ. ದೇಗುಲ ಬಂದ್ ಆಗಿರುವ ಮಾಹಿತಿ ತಿಳಿಯದೇ ಬೆಟ್ಟಕ್ಕೆ ಆಗಮಿಸಿದ್ದ ಕೆಲ ಭಕ್ತರು ನಿರಾಸೆಯಿಂದ ಹಿಂದಿರುಗಿದರು. ದೂರದ ಊರುಗಳಿಂದ ಬಂದ ಭಕ್ತರೂ ದೇವಾಲಯದ ಹೊರಗೆ ನಿಂತು ಕೈಮುಗಿದು ಪ್ರಾರ್ಥನೆ ಸಲ್ಲಿಸಿ ತೆರಳುತ್ತಿರುವ ದೃಶ್ಯ ಕಂಡುಬಂತು. ಗ್ರಹಣ ಮುಕ್ತವಾದ ಬಳಿಕ ದೇಗುಲವನ್ನು ಪುನಃ ತೆರೆಯಲಾಗುತ್ತದೆ ಎಂದು ಆಡಳಿತ ಮಂಡಳಿ ತಿಳಿಸಿದೆ.1
- ಮೈಸೂರು :- ಭಾರತದಲ್ಲಿ ಮಕ್ಕಳನ್ನು ದತ್ತು ಪಡೆಯುವ ಪ್ರಕ್ರಿಯೆ ಸಂಪೂರ್ಣವಾಗಿ ಕಾನೂನುಬದ್ಧ ಮತ್ತು ನಿಯಮಿತವಾಗಿದೆ. ದತ್ತು ಪ್ರಕ್ರಿಯೆಯನ್ನು Central Adoption Resource Authority (CARA) ನಿಯಂತ್ರಿಸುತ್ತಿದ್ದು, ಇದು Ministry of Women and Child Development ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ. ಮಕ್ಕಳ ಸುರಕ್ಷತೆ ಹಾಗೂ ಅವರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸರಕಾರ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ. ದತ್ತು ಪಡೆಯಲು ಭಾರತೀಯ ನಾಗರಿಕರು, ಎನ್ಆರ್ಐಗಳು ಹಾಗೂ ವಿದೇಶಿ ನಾಗರಿಕರು ಅರ್ಜಿ ಸಲ್ಲಿಸಬಹುದು. ಏಕಾಂಗಿಯಾಗಿ ಇರುವವರು (Single Parent) ಕೂಡ ಕೆಲವು ಷರತ್ತುಗಳೊಂದಿಗೆ ದತ್ತು ಪಡೆಯಲು ಅರ್ಹರಾಗಿರುತ್ತಾರೆ. ವಿವಾಹಿತ ದಂಪತಿಗಳು ದತ್ತು ಪಡೆಯುವ ವೇಳೆ ಇಬ್ಬರ ಸಹಮತವೂ ಕಡ್ಡಾಯವಾಗಿದೆ. ದತ್ತು ಪಡೆಯುವ ಪೋಷಕರ ಆರೋಗ್ಯ ಮತ್ತು ಆರ್ಥಿಕ ಸ್ಥಿತಿ ಸ್ಥಿರವಾಗಿರಬೇಕು. ಮಗುವಿನ ವಯಸ್ಸು ಮತ್ತು ಪೋಷಕರ ವಯಸ್ಸಿನ ನಡುವೆ ಕನಿಷ್ಠ 25 ವರ್ಷಗಳ ಅಂತರ ಇರಬೇಕು ಎಂಬ ನಿಯಮವೂ ಇದೆ. ವಯೋಮಿತಿಯ ಪ್ರಕಾರ, 0 ರಿಂದ 2 ವರ್ಷದ ಮಗುವನ್ನು ದತ್ತು ಪಡೆಯಲು ದಂಪತಿಗಳ ಒಟ್ಟು ವಯಸ್ಸು 85 ವರ್ಷ ಮೀರಬಾರದು. 2 ರಿಂದ 4 ವರ್ಷಕ್ಕೆ 90 ವರ್ಷ, 4 ರಿಂದ 8 ವರ್ಷಕ್ಕೆ 100 ವರ್ಷ ಹಾಗೂ 8 ರಿಂದ 18 ವರ್ಷದ ಮಗುವಿಗೆ 110 ವರ್ಷ ಗರಿಷ್ಠ ಮಿತಿಯಾಗಿದೆ. ದತ್ತು ಪ್ರಕ್ರಿಯೆ CARA ಪೋರ್ಟಲ್ನಲ್ಲಿ ಆನ್ಲೈನ್ ನೋಂದಣಿಯಿಂದ ಆರಂಭವಾಗುತ್ತದೆ. ಬಳಿಕ ಮಾನ್ಯತೆ ಪಡೆದ ಸಂಸ್ಥೆಯ ಮೂಲಕ ಹೋಮ್ ಸ್ಟಡಿ ವರದಿ (HSR) ಸಿದ್ಧಪಡಿಸಲಾಗುತ್ತದೆ. ಲಭ್ಯವಿರುವ ಮಕ್ಕಳ ವಿವರಗಳನ್ನು ಪೋರ್ಟಲ್ನಲ್ಲಿ ನೋಡಬಹುದು. ಮಗು ಆಯ್ಕೆ ಮಾಡಿದ ನಂತರ ಭೇಟಿ ಹಾಗೂ ಒಪ್ಪಿಗೆ ಪ್ರಕ್ರಿಯೆ ನಡೆಯುತ್ತದೆ. ಅಂತಿಮವಾಗಿ ನ್ಯಾಯಾಲಯದ ಆದೇಶದ ಮೂಲಕ ದತ್ತು ಕಾನೂನುಬದ್ಧವಾಗುತ್ತದೆ. ನಂತರವೂ ಕೆಲವು ತಿಂಗಳುಗಳ ಕಾಲ ಮೇಲ್ವಿಚಾರಣೆ ನಡೆಯುತ್ತದೆ. ಈ ಪ್ರಕ್ರಿಯೆ Juvenile Justice Act ಮತ್ತು Hindu Adoption and Maintenance Act ಅನ್ವಯ ಜಾರಿಯಲ್ಲಿದೆ. ಖಾಸಗಿ ಒಪ್ಪಂದಗಳ ಮೂಲಕ ದತ್ತು ಪಡೆಯುವುದು ಕಾನೂನುಬಾಹಿರವಾಗಿದ್ದು, ಸರಕಾರಿ ಮಾನ್ಯತೆ ಪಡೆದ ಸಂಸ್ಥೆಗಳ ಮೂಲಕವೇ ದತ್ತು ಪ್ರಕ್ರಿಯೆ ನಡೆಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾಗೂ ಮೈಸೂರು ನಲ್ಲಿ ಇರುವ ಛಾಯಾದೇವಿ ಮಕ್ಕಳ ಆಶ್ರಮ ಸರಕಾರ ಮಾನ್ಯತೆ ಪಡೆದಿದೆ ಹಾಗೂ ಈ ಸಂಸ್ಥೆ ಸ್ಪೇನ್ ದೇಶಕ್ಕೆ ಹಾಗೂ ಹೊರ ದೇಶ 6 ಮಕ್ಕಳು ದತ್ತು ನೀಡಿದ್ದಾರೆ. ಮಕ್ಕಳ ಭವಿಷ್ಯ ಸುರಕ್ಷಿತವಾಗಲು ಸರಿಯಾದ ಕಾನೂನು ಕ್ರಮಗಳನ್ನು ಅನುಸರಿಸುವುದು ಅತ್ಯಂತ ಅಗತ್ಯವಾಗದೆ1
- ಮಳವಳ್ಳಿ ಸಹಕಾರಿ ಕ್ಷೇತ್ರದ ಸೇವೆ ಪವಿತ್ರವಾದದ್ದು: ಅಧಿಕಾರದ ಗದ್ದುಗೆ ಹಿಡಿದ ಪದಾಧಿಕಾರಿಗಳು ಅದರ ಮೌಲ್ಯವನ್ನು ಎತ್ತಿ ಹಿಡಿಯಬೇಕು ಎಂದು ಮಳವಳ್ಳಿ ಪಟ್ಟಣದ ಮಾಮರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷರಾದ ಎಂ ಶಿವಕುಮಾರ್ ತಿಳಿಸಿದ್ದಾರೆ ಮಳವಳ್ಳಿ ಪಟ್ಟಣದ ಮಾಮರ ಸೌಹಾರ್ದ ಸಹಕಾರ ಸಂಘದ ಮಾರ್ಚ್ ತಿಂಗಳ ಮಾಸಿಕ ಸಭೆಯಲ್ಲಿ ಹಾಲಿ ಮಾಮರ ಸೌಹಾರ್ದ ಸಹಕಾರ ಸಂಘದ ನಿರ್ದೇಶಕರಾಗಿ ಈಗ ನೂತನವಾಗಿ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘಕ್ಕೆ ನಿರ್ದೇಶಕರಾಗಿ ಚುನಾಯಿತಗೊಂಡ ವೃಷಭಂದ್ರ ರವರಿಗೆ ಅಭಿನಂದಿಸಿ ಗೌರವಿಸಿ ಸಲಹೆ ನೀಡಿದರು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ನೀಡುವಲ್ಲಿ ಸಹಕಾರಿ ಕ್ಷೇತ್ರ ಬಹಳ ಪವಿತ್ರವಾದದ್ದು ಕೇವಲ ಅಧಿಕಾರದ ಆಸೆಗೆ ಇಲ್ಲಿಗೆ ಬರಬಾರದು ಸೇವಾ ಮನೋಭಾವ ಇದ್ದರೆ ಮಾತ್ರ ಸಹಕಾರಿ ಕ್ಷೇತ್ರ ಉದ್ದಾರವಾಗಲಿದೆ ಇಲ್ಲದಿದ್ದರೆ ಸಹಕಾರಿ ಸಂಘವನ್ನು ಬೆಳೆಸುವುದು ಕಷ್ಟಕರ ಎಂದರು. ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘ ಸಿದ್ದಗಂಗಾ ಸುತ್ತೂರು ಶ್ರೀಗಳು ಸೇರಂತಿ ಹರ ಗುರು ಚರಮೂರ್ತಿಗಳ ದಿವ್ಯ ದೃಷ್ಟಿಯ ಫಲದಿಂದ ಹಾಗೂ ತಾಲೂಕಿನ ಹಲವು ಮಹನೀಯರ ಶ್ರಮದಿಂದ 25 ವರ್ಷ ರಜತ ಸಂಭ್ರಮ ಪೂರೈಸಿದೆ ನೂತನ ಪದಾಧಿಕಾರಿಗಳು ಇನ್ನು ಹೆಚ್ಚಿನ ರೀತಿಯಲ್ಲಿ ಈ ಸಂಘವನ್ನು ಬೆಳೆಸಿ ರಾಜ್ಯಮಟ್ಟದಲ್ಲಿ ಇನ್ನು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಎಲ್ಲರೂ ಶ್ರದ್ದ ಈ ಸಂದರ್ಭದಲ್ಲಿ ಸಲಹೆ ನೀಡಿದರು. ಪ್ರಸ್ತುತ ವ್ಯವಸ್ಥೆಯಲ್ಲಿ ಒಂದು ಸಹಕಾರ ಸಂಘವನ್ನು ಬೆಳೆಸುವುದು ಮತ್ತೊಂದು ಸುಲಭವಲ್ಲ. ಬೆಳೆದಿರುವ ಸಹಕಾರ ಸಂಘವನ್ನು ಉಳಿಸಿ ಬೆಳೆಸಿ ಅಭಿವೃದ್ಧಿಪಡಿಸುವಂತೆ ಈ ಸಂದರ್ಭದಲ್ಲಿ ನೂತನ ನಿರ್ದೇಶಕರಿಗೆ ಸಲಹೆ ನೀಡಿದರು. ಮಾಮರ ಸೌಹಾರ್ದ ಸಹಕಾರಿ ಸಂಘವು ಸುತ್ತೂರು ಶ್ರೀಗಳ ಪಾದಸ್ಪರ್ಶದಿಂದ ,ಹರ ಗುರು ಚರಮೂರ್ತಿಗಳ ದಿವ್ಯ ಮಾರ್ಗದರ್ಶನದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಪ್ರಥಮ ಪಾರದರ್ಶಕ ಸಂಪೂರ್ಣ ಗಣಿತ ಸಹಕಾರ ಸಂಘವೆಂದು ಹೆಸರು ಪಡೆಯುವುದರೊಂದಿಗೆ ಸೇವಾ ಮನೋಭಾವದಿಂದ ಸದಸ್ಯರಿಗೆ ಗ್ರಾಹಕರಿಗೆ ಯಶಸ್ವಿನಿ ವಿಮೆ ಅಪಘಾತ ವಿಮೆ ವಾಹನಗಳ ವಿಮೆ ಸಾಮಾನ್ಯ ಸೇವಾ ಕೇಂದ್ರದ ಮೂಲಕ ಸರ್ಕಾರದ ಸೌಲಭ್ಯಗಳ ನೀಡಲು ಆನ್ಲೈನ್ ಅರ್ಜಿ ಸಲ್ಲಿಕೆ ವ್ಯವಹಾರದ ಸಾಲ ವಾಹನ ಖರೀದಿಗೆ ಸಾಲ ಸೇರಿದಂತೆ ಇನ್ನೂ ಹಲವು ರೀತಿಯಲ್ಲಿ ಉತ್ತಮ ಸೇವೆ ನೀಡುವಲ್ಲಿ ಕೆಲಸ ನಿರ್ವಹಿಸುತ್ತಿದೆ ಮಳವಳ್ಳಿ ತಾಲೂಕಿನ ಜನರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಅವರು ಈ ಸಂದರ್ಭದಲ್ಲಿ ಕರೆ ನೀಡಿದರು ಈ ಸಂದರ್ಭದಲ್ಲಿ ಗೌರವಾನ್ವಿತ ನಿರ್ದೇಶಕರಾದ ಡಾಕ್ಟರ್ ಪ್ರಕಾಶ್ ಅಂಗಡಿ ಮಂಟೇಸ್ವಾಮಿ ಕೆ ಪಿ ಮಹೇಶ್ ,ಶಿವಕುಮಾರ್, ಶ್ರೀಮತಿ ಕವಿತಾ ಶ್ರೀಮತಿ ಮಾನಸ ಕಾಂತರಾಜು ಮುಖ್ಯ ಕಾರ್ಯನಿರ್ವಣಾಧಿಕಾರಿ ರಮ್ಯ, ಮೆನೇಜರ್ ಪೂರ್ಣಿಮಾ, ಪಿಗ್ಮಿ ವ್ಯವಸ್ಥಾಪಕ ಸುಬ್ರಹ್ಮಣ್ಯ ಸೇರಿದಂತೆ ಎಲ್ಲಾ ನಿರ್ದೇಶಕರು ಸಿಬ್ಬಂದಿ ವರ್ಗದವರು ಸದಸ್ಯರು ಉಪಸ್ಥಿತರಿದ್ದರು1
- ಪವರ್ ಸ್ಟಾರ್ ಪುನಿತ್ ಮಡದಿ ಅಶ್ವಿನಿ ಆಗಮನ: ಬೂದುಬಾಳು ಸಮೀಪದ ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಹಾಗೂ ಡಾ.ರಾಜಕುಮಾರ್ ಅವರ ಮನೆ ದೇವರಾದ ಬೂದುಬಾಳು ಶ್ರೀ ವೆಂಕಟರಮಣಸ್ವಾಮಿ ದೇವಾಲಯಕ್ಕೆ ಅವರ ಕುಟುಂಬ ವರ್ಗದ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಆಗಮಿಸಿ ಬ್ರಹ್ಮ ರಥೋತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದುಕೊಂಡದ್ದು ವಿಶೇಷವಾಗಿತ್ತು. ದೇವಾಲಯದ ವತಿಯಿಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.3
- ಹನೂರು: ಯೋಗಿ ನಾರಾಯಣ ಕೈವಾರ ತಾತಯ್ಯ ಜಯಂತಿ ಆಚರಣೆ ಹನೂರು ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪಟ್ಟಣದ ಲೋಕೋಪಯೋಗಿ ಅತಿಥಿ ಗೃಹದಲ್ಲಿ ಯೋಗಿ ನಾರಾಯಣ ಕೈವಾರ ತಾತಯ್ಯರ ಜಯಂತಿ ಆಚರಿಸಲಾಯಿತು. ಶಾಸಕ ಎಂ.ಆರ್. ಮಂಜುನಾಥ್, ಅಧಿಕಾರಿಗಳು ಮತ್ತು ಸಮಾಜದ ಮುಖಂಡರು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಮಂಜುನಾಥ್ ಅವರು ತಾತಯ್ಯರ ಆದರ್ಶಗಳು ಪೀಳಿಗೆಗೆ ಮಾರ್ಗದರ್ಶಕವಾಗಿದ್ದು, ಗ್ರಾಮಾಂತರ ಪ್ರದೇಶಗಳಿಗೆ ಮೂಲಭೂತ ಸೌಕರ್ಯ ಮತ್ತು ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುವುದರಲ್ಲಿ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದರು.1
- ಬಿಡದಿ ರೈಲ್ವೆ ನಿಲ್ದಾಣದಲ್ಲಿ ಎರಡು ಘಂಟೆ ತಡವಾಗಿ ಬಂದ ರೈಲು, ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿ, ರೈಲ್ವೆ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ, ಸಮರ್ಪಕ ಉತ್ತರ ನೀಡದ ರೈಲ್ವೆ ಅಧಿಕಾರಿಗಳು ಪೊಲೀಸರನ್ನು ಕರೆಸಿ ಗೊಂದಲ ಉಂಟು ಮಾಡಿದ್ದಾರೆ.1
- ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್ ಸುಪ್ರೀಂ ಲೀಡರ್ ಅಲಿ ಖಮೆನಿ ಸಾವಿನ ಸುದ್ದಿ ಹಿನ್ನೆಲೆ ಪಿರಿಯಾಪಟ್ಟಣದಲ್ಲಿ ಶಿಯಾ ಮುಸ್ಲಿಂ ಸಮುದಾಯದಿಂದ ಮೌನ ಪ್ರತಿಭಟನೆ ನಡೆಯಿತು. ಮೇಣದಬತ್ತಿ ಬೆಳಗಿ, ಕಪ್ಪು ಉಡುಗೆ ಧರಿಸಿ ಭಾವಚಿತ್ರ ಹಿಡಿದು ಮೆರವಣಿಗೆ ನಡೆಸಿದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.“ಶಾಂತಿ ಮಂತ್ರ ಹೇಳುತ್ತಾ ದ್ವಂದ್ವ ನೀತಿ ಅನುಸರಿಸಿದ್ದಾರೆ” ಎಂದು ... ಪ್ರತಿಭಟನಾಕಾರರು ಹೇಳಿದರು.ಶಿಯಾ ಸಮುದಾಯದ ಮುಖಂಡರು ಧರಣಿಯಲ್ಲಿ ಭಾಗವಹಿಸಿದ್ದರು.1