Shuru
Apke Nagar Ki App…
ಮಳವಳ್ಳಿ ಪಟ್ಟಣದ ಮಾಮರ ಸೌಹಾರ್ದ ಸಹಕಾರ ಸಂಘದ ಸಾಮಾನ್ಯ ಸೇವಾ ಕೇಂದ್ರದ ಡಿಜಿಟಲ್ ಈ ಸ್ಟಾಂಪಿಂಗ್ ಸೇವಾ ಕೇಂದ್ರಕ್ಕೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀಯುತ ಎಸ್ ಇ ಗಂಗಾಧರಸ್ವಾಮಿ ಚಾಲನೆ ಮಳವಳ್ಳಿ ಪಟ್ಟಣದಲ್ಲಿ ಶ್ರೀ ಮಾಮರ ಸೌಹಾರ್ದ ಸಹಕಾರ ಸಂಘ ಬಸವ ಜಯಂತಿ ಅಂಗವಾಗಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಮಾನ್ಯ ಸೇವಾ ಕೇಂದ್ರದ ಡಿಜಿಟಲ್ E-STAMPING ಸೇವೆಗೆ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧಿಕಾರಿಗಳಾದ ಎಸ್ ಇ ಗಂಗಾಧರಸ್ವಾಮಿ ಚಾಲನೆ ನೀಡಿ ಮಾತನಾಡಿದರು.
ಮಾಗನೂರು ಎಂ ಶಿವಕುಮಾರ್
ಮಳವಳ್ಳಿ ಪಟ್ಟಣದ ಮಾಮರ ಸೌಹಾರ್ದ ಸಹಕಾರ ಸಂಘದ ಸಾಮಾನ್ಯ ಸೇವಾ ಕೇಂದ್ರದ ಡಿಜಿಟಲ್ ಈ ಸ್ಟಾಂಪಿಂಗ್ ಸೇವಾ ಕೇಂದ್ರಕ್ಕೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀಯುತ ಎಸ್ ಇ ಗಂಗಾಧರಸ್ವಾಮಿ ಚಾಲನೆ ಮಳವಳ್ಳಿ ಪಟ್ಟಣದಲ್ಲಿ ಶ್ರೀ ಮಾಮರ ಸೌಹಾರ್ದ ಸಹಕಾರ ಸಂಘ ಬಸವ ಜಯಂತಿ ಅಂಗವಾಗಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಮಾನ್ಯ ಸೇವಾ ಕೇಂದ್ರದ ಡಿಜಿಟಲ್ E-STAMPING ಸೇವೆಗೆ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧಿಕಾರಿಗಳಾದ ಎಸ್ ಇ ಗಂಗಾಧರಸ್ವಾಮಿ ಚಾಲನೆ ನೀಡಿ ಮಾತನಾಡಿದರು.
More news from ಕರ್ನಾಟಕ and nearby areas
- ಮಳವಳ್ಳಿ ಪಟ್ಟಣದಲ್ಲಿ ಶ್ರೀ ಮಾಮರ ಸೌಹಾರ್ದ ಸಹಕಾರ ಸಂಘ ಬಸವ ಜಯಂತಿ ಅಂಗವಾಗಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಮಾನ್ಯ ಸೇವಾ ಕೇಂದ್ರದ ಡಿಜಿಟಲ್ E-STAMPING ಸೇವೆಗೆ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧಿಕಾರಿಗಳಾದ ಎಸ್ ಇ ಗಂಗಾಧರಸ್ವಾಮಿ ಚಾಲನೆ ನೀಡಿ ಮಾತನಾಡಿದರು.1
- ಹನೂರು: ಸರ್ಕಾರಿ ಶಾಲೆಯ ವಿದ್ಯಾರ್ಥಿಯೊಬ್ಬ ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಎಲ್ಲರಿಗೂ ಮಾದರಿಯಾಗಿದ್ದಾನೆ ಎಂದು ಶಾಸಕ ಎಂ.ಆರ್. ಮಂಜುನಾಥ್ ಅಭಿಪ್ರಾಯಪಟ್ಟರು. ತಾಲೂಕಿನ ಕೆಂಪಯ್ಯನಹಟ್ಟಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಶಬರಿ 618 ಅಂಕಗಳನ್ನು ಪಡೆದು ತಾಲೂಕು ಟಾಪರ್ ಆಗಿರುವ ಹಿನ್ನೆಲೆಯಲ್ಲಿ ಶಾಲೆಗೆ ಭೇಟಿ ನೀಡಿದ ಶಾಸಕರು, ವಿದ್ಯಾರ್ಥಿಯನ್ನು ಸನ್ಮಾನಿಸಿ ಮಾತನಾಡಿದರು. ವಿದ್ಯಾರ್ಥಿಗಳು ಛಲ, ಹಠ ಮತ್ತು ಸ್ಪಷ್ಟ ಗುರಿಯನ್ನು ಹೊಂದಿ ಓದಿದರೆ ಯಶಸ್ಸು ಸಾಧಿಸಲು ಸಾಧ್ಯ ಎಂದು ತಿಳಿಸಿದ ಅವರು, “ಭರವಸೆಯ ಬೆಳಕು” ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ನೀಡಿದ ಮಾರ್ಗದರ್ಶನ ಇದೀಗ ಫಲ ನೀಡುತ್ತಿರುವುದು ಸಂತಸದ ಸಂಗತಿ ಎಂದರು. ಶಬರಿ ಮುಂದಿನ ದಿನಗಳಲ್ಲಿ ಉತ್ತಮ ಶಿಕ್ಷಣ ಪಡೆದು ಸರ್ಕಾರಿ ಸೇವೆಗೆ ಸೇರಬೇಕು ಎಂದು ಆಶಿಸಿದರು.1
- *ಭಾರತ ನಲ್ಲಿ ವೈರಲ್*1
- ಹನೂರು: ಇತ್ತೀಚೆಗೆ ಪ್ರಕಟವಾದ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ ಕೆಂಪಯ್ಯನಟ್ಟಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಶಬರಿಯನ್ನು ಹನೂರು ಕ್ಷೇತ್ರದ ಶಾಸಕ ಎಂ.ಆರ್. ಮಂಜುನಾಥ್ ಅವರು ಸಿಹಿ ತಿನಿಸಿ, ಅಭಿನಂದಿಸಿದರು. ಹನೂರು ಶೈಕ್ಷಣಿಕ ವಲಯದ ಕೆಂಪಯ್ಯನಟ್ಟಿ ಗ್ರಾಮದ ನಿವಾಸಿಗಳಾದ ಶರವಣ ಹಾಗೂ ಕನಕವಲ್ಲಿ ದಂಪತಿಯ ಪುತ್ರ ಶಬರಿ, ಒಟ್ಟು 625 ಅಂಕಗಳಿಗೆ 618 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಯಲ್ಲೇ ಅಗ್ರಸ್ಥಾನ ಗಳಿಸಿ ತಾಲೂಕಿಗೆ ಹೆಮ್ಮೆ ತಂದಿದ್ದಾನೆ. ವಿದ್ಯಾರ್ಥಿಯ ಈ ಅದ್ಭುತ ಸಾಧನೆಯನ್ನು ಮೆಚ್ಚಿದ ಶಾಸಕರು, ಖುದ್ದಾಗಿ ಗ್ರಾಮಕ್ಕೆ ಭೇಟಿ ನೀಡಿ ವಿದ್ಯಾರ್ಥಿ ಮತ್ತು ಪೋಷಕರಿಗೆ ಶುಭ ಕೋರಿದರು. ಶಿಕ್ಷಣ ಇಲಾಖೆ ಹಾಗೂ ಶಿಕ್ಷಕರ ಶ್ರಮಕ್ಕೆ ಮೆಚ್ಚುಗೆ ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಂ.ಆರ್. ಮಂಜುನಾಥ್, "ಹನೂರು ಶೈಕ್ಷಣಿಕ ವಲಯವು ಈ ಬಾರಿ ಶೇ. 96.1 ರಷ್ಟು ಅತ್ಯುತ್ತಮ ಫಲಿತಾಂಶ ದಾಖಲಿಸಿದೆ. ಇಂತಹ ಸಾಧನೆಗೆ ಇಲ್ಲಿನ ಶಿಕ್ಷಣಾಧಿಕಾರಿಗಳು ಹಾಗೂ ಶಿಕ್ಷಕರ ಪರಿಶ್ರಮವೇ ಮುಖ್ಯ ಕಾರಣ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುವಂತಾಗಬೇಕು. ಶಬರಿಯಂತಹ ಪ್ರತಿಭಾವಂತರು ಉತ್ತಮವಾಗಿ ವ್ಯಾಸಂಗ ಮಾಡಿ ಭವಿಷ್ಯದಲ್ಲಿ ತಾಲೂಕಿಗೆ ಹಾಗೂ ರಾಜ್ಯಕ್ಕೆ ಕೀರ್ತಿ ತರಲಿ," ಎಂದು ಆಶಿಸಿದರು. 'ಭರವಸೆ ಬೆಳಕು' ಕಾರ್ಯಕ್ರಮವೇ ನನಗೆ ಸ್ಫೂರ್ತಿ: ಶಬರಿ ತನ್ನ ಯಶಸ್ಸಿನ ಕುರಿತು ಮಾತನಾಡಿದ ವಿದ್ಯಾರ್ಥಿ ಶಬರಿ, "ಶಾಸಕರು ಹಮ್ಮಿಕೊಂಡಿದ್ದ 'ಭರವಸೆ ಬೆಳಕು' ಕಾರ್ಯಕ್ರಮ ನನ್ನಲ್ಲಿ ಹೆಚ್ಚಿನ ಉತ್ಸಾಹ ತುಂಬಿತು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಹೆಚ್ಚು ಸಾಧನೆ ಮಾಡಬೇಕು ಎಂದು ಅವರು ಹೇಳಿದ ಮಾತುಗಳು ನನಗೆ ಸ್ಫೂರ್ತಿ ನೀಡಿದವು," ಎಂದು ಕೃತಜ್ಞತೆ ಸಲ್ಲಿಸಿದನು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು: ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ವೆಂಕಟೇಶ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಕೆಂಪರಾಜು, ಎಸ್ಎಸ್ಎಲ್ಸಿ ನೋಡಲ್ ಅಧಿಕಾರಿ ಅಶೋಕ್ ಆರ್., ಶಿಕ್ಷಣ ಸಂಯೋಜಕ ಮಹೇಶ, ಚಿನ್ನಪಯ್ಯ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಚಂದ್ರಶೇಖರಯ್ಯ, ಖಜಾಂಚಿ ಪ್ರದೀಪ್, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಶಿವಶಂಕರ್ ನಾಯಕ್, ಕಾರ್ಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣೇಗೌಡ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಶಿವಮಲ್ಲು, ಪರಿಶಿಷ್ಟ ನೌಕರ ಸಂಘದ ಅಧ್ಯಕ್ಷ ಮಾದೇಶ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ವರದಿ ಉಸ್ಮಾನ್ ಖಾನ್4
- STATEMENT BY ABDUL KHADER SHAHID SOCIAL ACTIVIST STATEMENT RELATED TO #kvnews DAVANGERA BY ELECTION,ULAMA'S,CONGRESS1
- *ಇ-ಕೋರ್ಟ್ಗಳ ಮೊಬೈಲ್ ಆಪ್ ನವೀಕರಣ ಕುರಿತು ಮಹತ್ವದ ಸೂಚನೆ* ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು ದಿನಾಂಕ 21.04.2026 ರಂದು ಇ-ಮೇಲ್ ಮೂಲಕ ನೀಡಿದ ನಿರ್ದೇಶನದನ್ವಯ, e-Courts Mobile App Version 4.0 ಅನ್ನು 05.05.2026 ರಂದು ಬಿಡುಗಡೆಗೊಳಿಸಲು ನಿಗದಿಪಡಿಸಲಾಗಿದೆ. ಮಾನ್ಯ ಹೈಕೋರ್ಟ್ ನಿರ್ದೇಶನ ಪ್ರಕಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ದಕ್ಷಿಣ ಕನ್ನಡ, ಮಂಗಳೂರು ಇವರ ಕಚೇರಿಯಿಂದ ದಿನಾಂಕ: 22.04.2026 ರಂದು ಜ್ಞಾಪನಾ ಪತ್ರ ಸಂಖ್ಯೆ: 5107/2026 ಅನ್ನು ಹೊರಡಿಸಲಾಗಿದೆ. ಈ ಸಂಬಂಧ, ಇ-ಕೋರ್ಟ್ಗಳ ಮೊಬೈಲ್ ಆಪ್ ಬಳಸುತ್ತಿರುವ ಎಲ್ಲಾ ವಕೀಲರು ಹಾಗೂ ಇತರೆ ಬಳಕೆದಾರರು, ಪ್ರಸ್ತುತ ಆಪ್ನಲ್ಲಿರುವ “Export” ಆಯ್ಕೆಯನ್ನು ಬಳಸಿ ತಮ್ಮಲ್ಲಿ ಉಳಿಸಿಕೊಂಡಿರುವ ಪ್ರಕರಣಗಳ ಮಾಹಿತಿಯ ಬ್ಯಾಕಪ್ ಪ್ರತಿಯನ್ನು ಕಡ್ಡಾಯವಾಗಿ ತೆಗೆದುಕೊಂಡಿರಬೇಕು. ಇದರಿಂದ ಈಗಿರುವ ಮಾಹಿತಿಯ ನಷ್ಟವನ್ನು ತಪ್ಪಿಸಬಹುದು. ನಂತರ ನವೀಕರಿಸಿದ ಆಪ್ ಅನ್ನು ಸ್ಥಾಪಿಸಿದ ಬಳಿಕ “Import” ಆಯ್ಕೆಯನ್ನು ಬಳಸಿ ಆ ಮಾಹಿತಿಯನ್ನು ಮರು ಸ್ಥಾಪಿಸಬಹುದು. ಆಪ್ ನವೀಕರಣದಿಂದ ಸಂಗ್ರಹಿತ ಮಾಹಿತಿಗೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಯಾವುದೇ ಅಸೌಕರ್ಯ ಅಥವಾ ಮಾಹಿತಿಯ ನಷ್ಟವನ್ನು ತಪ್ಪಿಸಲು ಎಲ್ಲಾ ಬಳಕೆದಾರರು 05.05.2026 ರೊಳಗಾಗಿ ಬ್ಯಾಕಪ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗಿದೆ. ಮೇಲ್ಕಂಡ ವಿಷಯವನ್ನು ಪರಿಗಣಿಸಿ, ಈ ಮಾಹಿತಿಯನ್ನು ಎಲ್ಲಾ ವಕೀಲರಿಗೆ ತಲುಪುವಂತೆ ಪ್ರಸಾರ ಮಾಡುವುದರೊಂದಿಗೆ, ಹೆಚ್ಚಿನ ಜಾಗೃತಿಗಾಗಿ ಅದನ್ನು ಬಾರ್ ಅಸೋಸಿಯೇಷನ್ನ ಸೂಚನಾ ಫಲಕದಲ್ಲಿ ಪ್ರದರ್ಶಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ವಿನಂತಿಸಲಾಗಿದೆ. ಇದನ್ನು ಅತ್ಯಂತ ತುರ್ತು ಮತ್ತು ಮಹತ್ವದ ವಿಷಯ ಎಂದು ಪರಿಗಣಿಸಬೇಕು ಎಂದು ಜ್ಞಾಪನಾ ಪತ್ರದಲ್ಲಿ ಸೂಚಿಸಲಾಗಿದೆ.1
- ಹನೂರು ಪಟ್ಟಣದ ಲೋಕಪಯೋಗಿ ಇಲಾಖೆ ವಸತಿಗೃಹದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಭಗೀರಥ ಮಹರ್ಷಿ ಜಯಂತಿ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು . ಭಗಿರಥ ಮಹರ್ಷಿ ಧರೆಗೆ ಗಂಗೆಯನ್ನು ತರಲು ಮಹಾ ಮಹಾಶಿವನೆ ಮಹರ್ಷಿಗಳ ತಪೋಶಕ್ತಿಗೆ ಮೆಚ್ಚಿ ಪ್ರತ್ಯಕ್ಷವಾಗಿ ಧರೆಗೆ ಗಂಗೆಯನ್ನು ಹರಿಸಿದರು ಹೀಗಾಗಿ ಮಹೇಶ್ ಜಯಂತಿ ಆಚರಣೆಯನ್ನು ತಾಲೂಕು ಆಡಳಿತ ಸಮಿತಿ ವತಿಯಿಂದ ಆಚರಿಸಲಾಗುತ್ತಿದೆ ಹೀಗಾಗಿ ಮುಂದಿನ ದಿನಗಳಲ್ಲಿ ವಿಜ್ರಮಣೆಯಿಂದ ಆಚರಣೆ ಮಾಡಲು ಸಂಪೂರ್ಣ ಸಹಕಾರ ನೀಡಲಾಗುವುದು ಹೀಗಾಗಿ ದೇಶಾದ್ಯಂತ ಇಂದು ಸರಳವಾಗಿ ನಡೆಯುತ್ತಿರುವ ಜಯಂತಿ ಆಚರಣೆ ಉತ್ತಮವಾದದ್ದು . ಎಂದರು ಕ್ಷೇತ್ರದಲ್ಲಿ ಮಳೆ ಇಲ್ಲದೆ ಕೆರೆಕಟ್ಟೆಗಳು ಕಾಲುವೆಗಳು ಬರಿದಾಗಿತ್ತು ಸಕಲ ಜೀವರಾಶಿಗಳಿಗೂ ನೀರಿನ ಸಮಸ್ಯೆ ಉಂಟಾಗಿರುವುದರಿಂದ ಮುಂದಿನ ನಾಲ್ಕೈದು ತಿಂಗಳ ಒಳಗಡೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಗ್ರಾಮಗಳಿಗೆ ಕಲ್ಪಿಸಲಾಗುತ್ತದೆ ಕ್ಷೇತ್ರದಲ್ಲಿ ಅವಶ್ಯಕತೆ ಇರುವ ಕಡೆ ಈಗಾಗಲೇ ನೀರಿನ ವ್ಯವಸ್ಥೆಗೆ ಸಕಲ ರೀತಿಯಲ್ಲಿ ಅಧಿಕಾರಿಗಳಿಗೆ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಲಾಗಿದೆ ಎಂದರು . ಮುಂದಿನ ದಿನಗಳಲ್ಲಿ ಭಗಿರಥ ಮಹರ್ಷಿ ಜಯಂತಿ ಆಚರಣೆಯನ್ನು ವಿಜ್ರಮಣೆಯಿಂದ ಮಾಡಲು ಸಕಲ ರೀತಿಯಲ್ಲಿಯೂ ಸಹಕಾರ ನೀಡಲಾಗುವುದು ಹೀಗಾಗಿ ಕ್ಷೇತ್ರದಲ್ಲಿ ರೈತಾಪಿ ವರ್ಗದವರೇ ಹೆಚ್ಚಾಗಿರುವುದಿಂದ ಕುಡಿಯುವ ನೀರಿನ ಸಮಸ್ಯೆ ಮತ್ತು ನೀರಾವರಿಗೆ ಸಮಸ್ಯೆ ಉಂಟಾಗಿದೆ ರಾಮನಗುಡ್ಡ ಕೆರೆಗೆ ನೀರು ಹರಿಸಿದ ಪರಿಣಾಮ ಆ ಭಾಗದಲ್ಲಿ ಇದ್ದಂತ ನೀರಿನ ಸಮಸ್ಯೆ ನೀಗಿದಂತಾಗಿದೆ ಉಳಿದಂತಹ ಕ್ಷೇತ್ರದ ವಿವಿಧ ಭಾಗಗಳಿಗೂ ನೀರಾವರಿ ಯೋಜನೆಯನ್ನು ಕಲ್ಪಿಸಲು ಅಂತಹ ಹಂತವಾಗಿ ಕ್ರಮ ಕೈಗೊಳ್ಳಲಾಗಿದೆ ಜನತೆ ಸಂಪೂರ್ಣವಾಗಿ ಸಹಕಾರ ನೀಡಬೇಕು ಎಂದರು . ಇದೆ ಸಮಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಹೇಶ್,ಪಟ್ಟಣ ಪಂಚಾಯಿತಿ ಮುಖ್ಯಧಿಕಾರಿ ರೇಖಾ, ಪಟ್ಟಣ ಪಂ ಇಂಜಿನಿಯರ್ ನಾಗರಾಜ್, ಆರಕ್ಷಕ ನಿರೀಕ್ಷಕರಾದ ಸಾಹೇಬ್ ಗೌಡ, ಅಗ್ನಿಶಾಮಕ ಠಾಣಾಧಿಕಾರಿಗಳಾದ ಮಹೇಶ್,ಸಮುದಾಯದ ಮುಖಂಡರುಗಳಾದ ಡಿ ಪಿ ಗೋವಿಂದ ನಿಂಗಶೆಟ್ಟಿ, ಮಾಜಿ ಗ್ರಾಮ ಅಧ್ಯಕ್ಷರುಗಳಾದ ನಾಗೇಶ್, ರಂಗಸ್ವಾಮಿ,ಶೆಟ್ಟಿ, ಅಜ್ಜೀಪುರ ಮಹಾದೇವ, ಮಂಜು, ಮರೀಶೆಟ್ಟಿ, ನಂಜುಂಡಸ್ವಾಮಿ, ಉಮಾಶಂಕರ್,ಸೀನ,ಹಾಗೂ ಇನ್ನಿತರರು ಇದ್ದರು..4
- ಮಳವಳ್ಳಿ ಕ್ಷೇತ್ರದ ಶಾಸಕರು ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾದ ಪಿ ಎಂ.ನರೇAದ್ರಸ್ವಾಮಿಯವರಿAದ ಪುತ್ರಿಯ ಮದುವೆಗೆ ಪ್ರೀತಿಯ ಅಮಂತ್ರಣ- • ಏ.೨೫ ಮತ್ತು ಏ.೨೬ ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ದಿ ರಾಯಲ್ ತ್ರಿಪುರವಾಸಿನಿಯಲ್ಲಿ ಅದ್ದೂರಿ ಮದುವೆ ಕಾರ್ಯಕ್ರಮ • ಸರ್ವರಿಗೂ ಅಹ್ವಾನ ನೀಡಿದ ಶಾಸಕರಾದ ಪಿ.ಎಂ.ನರೇAದ್ರಸ್ವಾಮಿಯವರು-ಬನ್ನಿ ನಾವು ಹೋಗೋಣ ನವ -ದಂಪತಿಗಳಿಗೆ ಅರ್ಶೀವಧಿಸೋಣ1