Shuru
Apke Nagar Ki App…
ಮುದ್ದೇಬಿಹಾಳ: ಡೆತ್ ನೋಟ ಬರೆದಿಟ್ಟು ಖಾಸಗಿ ಟ್ರಾವೆಲ್ಸ್ ಏಜೆಂಟ್ ಆತ್ಮಹತ್ಯೆಗೆ ಮುದ್ದೇಬಿಹಾಳ. ಸಾಲಗಾರರಿಗೆ ಕೊಟ್ಟಿದ್ದ ಹಣ ಮರಳಿ ಕೊಡದ ಕಾರಣಕ್ಕೆ ಮನನೊಂದು ಖಾಸಗಿ ಟ್ರಾವೆಲ್ಸ್ ಏಜೆಂಟ್ ಒಬ್ಬರು ಜಮೀನೊಂದರಲ್ಲಿ ನೇಣು ಬಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೋಮವಾರ ತಾಲೂಕಿನ ಬಿದರಕುಂದಿ ಗ್ರಾಮದ ಹತ್ತಿರ ಬೆಳಕಿಗೆ ಬಂದಿದೆ. ಮುದ್ದೇಬಿಹಾಳದಲ್ಲಿ ಎಸ್ ಆರ್ ಎಸ್ ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದ ಮೂಲತಃ ಗೋನಾಳ್ ಎಸ್ ಹೆಚ್ ಗ್ರಾಮದ ನಿವಾಸಿಯಾಗಿದ್ದ ಚೆನ್ನಯ್ಯ ಗಂಗಯ್ಯ ಹಿರೇಮಠ್ (45) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ನನ್ನ ಸಾವಿಗೆ ರವಿ ನಾಲವಡೆ ಹಾಗೂ ವೈದ್ಯನಾಥ್ ಮರಾಠೆ ಎಂಬುವರು ಕಾರಣವಾಗಿದ್ದಾರೆ ಎಂದು ನಾಲ್ಕು ಪುಟಗಳ ಡೆತ್ ನೋಟ್ ಬರೆದಿಟ್ಟಿರುವ ಚೆನ್ನಯ್ಯ ಡೆತ್ ನೋಟನ್ನು ತಮ್ಮ ಸಹೋದರನಿಗೆ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.
Sharanugouda Patil
ಮುದ್ದೇಬಿಹಾಳ: ಡೆತ್ ನೋಟ ಬರೆದಿಟ್ಟು ಖಾಸಗಿ ಟ್ರಾವೆಲ್ಸ್ ಏಜೆಂಟ್ ಆತ್ಮಹತ್ಯೆಗೆ ಮುದ್ದೇಬಿಹಾಳ. ಸಾಲಗಾರರಿಗೆ ಕೊಟ್ಟಿದ್ದ ಹಣ ಮರಳಿ ಕೊಡದ ಕಾರಣಕ್ಕೆ ಮನನೊಂದು ಖಾಸಗಿ ಟ್ರಾವೆಲ್ಸ್ ಏಜೆಂಟ್ ಒಬ್ಬರು ಜಮೀನೊಂದರಲ್ಲಿ ನೇಣು ಬಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೋಮವಾರ ತಾಲೂಕಿನ ಬಿದರಕುಂದಿ ಗ್ರಾಮದ ಹತ್ತಿರ ಬೆಳಕಿಗೆ ಬಂದಿದೆ. ಮುದ್ದೇಬಿಹಾಳದಲ್ಲಿ ಎಸ್ ಆರ್ ಎಸ್ ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದ ಮೂಲತಃ ಗೋನಾಳ್ ಎಸ್ ಹೆಚ್ ಗ್ರಾಮದ ನಿವಾಸಿಯಾಗಿದ್ದ ಚೆನ್ನಯ್ಯ ಗಂಗಯ್ಯ ಹಿರೇಮಠ್ (45) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ನನ್ನ ಸಾವಿಗೆ ರವಿ ನಾಲವಡೆ ಹಾಗೂ ವೈದ್ಯನಾಥ್ ಮರಾಠೆ ಎಂಬುವರು ಕಾರಣವಾಗಿದ್ದಾರೆ ಎಂದು ನಾಲ್ಕು ಪುಟಗಳ ಡೆತ್ ನೋಟ್ ಬರೆದಿಟ್ಟಿರುವ ಚೆನ್ನಯ್ಯ ಡೆತ್ ನೋಟನ್ನು ತಮ್ಮ ಸಹೋದರನಿಗೆ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.
More news from ಕರ್ನಾಟಕ and nearby areas
- ವಿಜಯಪುರ: ಶಿಕ್ಷಣದಿಂದ ಮಕ್ಕಳು ವಂಚಿತರಾಗಬಾರದು ನಿಶಾರ್ ಅಹ್ಮದ್ ರಾಜ್ಯದಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ನಿಸಾರ್ ಅಹಮದ್ ಅವರು ವಿಜಯಪುರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು. ಈಗಾಗಲೇ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿ, ಶಿಕ್ಷಣದಿಂದ ವಂಚಿತರಾದ ಅಲ್ಪಸಂಖ್ಯಾತ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವ ಕೆಲಸ ಮಾಡುತ್ತಿದೆ. ಕೆಪಿಎಸ್ ಮ್ಯಾಗ್ನೆಟ್ ಯೋಜನೆಯ ಮೂಲಕ ಶಾಲೆಗಳನ್ನು ಉಳಿಸಿಕೊಳ್ಳುವ ಕೆಲಸ ರಾಜ್ಯ ಸರ್ಕಾರ ಮಾಡುತ್ತದೆ ಎಂದರು.1
- ಜಾಲಹಳ್ಳಿ ಶ್ರೀ ಲಕ್ಷ್ಮಿ ರಂಗನಾಥ್ ಸ್ವಾಮಿ ಜಾತ್ರೆ ಅಂಗವಾಗಿ ಜಾಲಹಳ್ಳಿ ಯಲ್ಲಾ ಗ್ರಾಮಸ್ಥರು ಸೇರಿ ರೈತರಿಗಾಗಿ ಅನ್ನ ದಾಸೋಹ ಕಾರ್ಯಕ್ರಮ ನಡೆಸುತ್ತಿದ್ದಾರೆ1
- Post by @april14news1
- Post by Onlinetv24x71
- ಗಚ್ಚಿನ ಮಠದ ಜಾತ್ರಾ ಸಂಭ್ರಮ ಅಥಣಿಯಲ್ಲಿ ಏಳು ದಿನಗಳ ಕಾಲ ಸಂಭ್ರಮ, ಸಡಗರ | ನಿರಂತರ ಮಹಾದಾಸೋಹ. ಅಥಣಿ : ಗಚ್ಚಿನ ಮಠದ ಜಾತ್ರಾ ಮಹೋತ್ಸವವು ಏಳು ದಿನಗಳ ಕಾಲ ಸಡಗರ ಸಂಭ್ರಮದಿಂದ ಜರುಗುತ್ತದೆ. ಜಾತ್ರೆಗೆ ಬರುವ ಯಾತ್ರಿಕರಿಗೆ ಸತತ ಐದು ದಿನಗಳ ಕಾಲ ನಿರಂತರ ಮಹಾದಾಸೋಹ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಾರೆ. ಸಿದ್ಧೇಶ್ವರ ಮತ್ತು ಶಿವಯೋಗಿಗಳ ಪರಮಭಕ್ತರು, ಪಟ್ಟಣದ ವ್ಯಾಪಾರಸ್ಥರು, ಅನೇಕ ಸಮಾಜ ಸೇವಕರು ಮತ್ತು ನೌಕರರು, ಸ್ವಯಂ ಪ್ರೇರಿತವಾಗಿ ದವಸ ಧಾನ್ಯಗಳನ್ನು ಸಮರ್ಪಿಸುತ್ತಾರೆ. ಶಿವಯೋಗಿಗಳ ಮತ್ತು ಸಿದ್ಧೇಶ್ವರ ಜಾತ್ರೆಯು ಕೇವಲ ಧಾರ್ಮಿಕ ಆಚರಣೆಯಲ್ಲ, ಆಡಂಬರಕ್ಕೆ ಸೀಮಿತವಲ್ಲ. ಮಹಾ ತಪಸ್ವಿ ಮುರುಘೇಂದ್ರ ಶಿವಯೋಗಿಗಳ ಮತ್ತು ಅಥಣಿಯ ಆರಾಧ್ಯ ದೈವ ಸಿದ್ಧೇಶ್ವರ ದೇವರ ಬಗ್ಗೆ ಅನನ್ಯ ಪ್ರೀತಿ ಮತ್ತು ಪರಿಶುದ್ಧ ಭಕ್ತಿ ಮತ್ತು ಈ ನೆಲದ ಸಂಸ್ಕೃತಿಯಾಗಿದೆ. ಶಿವಯೋಗಿಗಳು ಮತ್ತು ಶ್ರೀ ಸಿದ್ಧೇಶ್ವರ ದೇವರು ನಮ್ಮ ದುಡಿಮೆಗೆ ನೀಡಿದ ಪ್ರತಿಫಲದಿಂದ ಬಂದ ಆದಾಯದಲ್ಲಿ ದಾನ ಮಾಡಿ ಧರ್ಮ ಕಾರ್ಯಕ್ಕೆ ಕೈಜೋಡಿಸುತ್ತಾರೆ. ಅನ್ನಸಂತರ್ಪಣೆಗೆ ಧನಸಹಾಯ, ದವಸ ಧಾನ್ಯಗಳನ್ನು, ತರಕಾರಿಗಳನ್ನು ನೀಡುವ ಮೂಲಕ ಭಕ್ತಿಯನ್ನು ಸಮರ್ಪಿಸುತ್ತಾರೆ. ಸದ್ಭಕ್ತರಿಂದ ಬಂದ ಈ ಕಾಣಿಕೆಯನ್ನು ಮತ್ತು ದವಸ ಧಾನ್ಯಗಳನ್ನು ಕಮಿಟಿ ಜಾತ್ರೆಗೆ ಬರುವ ಲಕ್ಷಾಂತರ ಜನರಿಗೆ ಪ್ರಸಾದವನ್ನು ಮಾಡಿ ವಿತರಿಸುತ್ತಾರೆ. ಸಿದ್ಧೇಶ್ವರ ದೇವಸ್ಥಾನ ಕಮಿಟಿಯ ಮತ್ತು ಸದ್ಭಕ್ತ ಮಂಡಳಿಯ 60ಕ್ಕೂ ಅಧಿಕ ಜನರು ಅಡುಗೆ ತಯಾರಿಸಲು, ಪ್ರಸಾದ ವಿತರಿಸುವ ಮೂಲಕ ಕಳೆದ 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಜಾತ್ರೆಯ ಸಂದರ್ಭದಲ್ಲಿ ಐದು ದಿನಗಳ ಕಾಲ ಪ್ರತಿದಿನ 25 ಸಾವಿರಕ್ಕೂ ಅಧಿಕ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗುತ್ತಿದೆ. ಜಾತ್ರೆಯಲ್ಲಿ ಕಳ್ಳರ ಕೈಚಳಕ: ಗ್ರಾಮೀಣ ಪ್ರದೇಶಗಳಲ್ಲಿ ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗಳು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿವೆ. ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮ್ಮಿಲನವಾಗಿದ್ದು, ದೇವಸ್ಥಾನಗಳ ಹಬ್ಬಗಳು, ತೇರು ಎಳೆಯುವುದು, ಭಜನೆ ಡೊಳ್ಳು ಕುಣಿತ, ನಾಟಕ ಪ್ರದರ್ಶನಗಳು, ಬಣ್ಣ ಬಣ್ಣದ ಅಂಗಡಿಗಳು ಜಾತ್ರೆಯ ಮುಖ್ಯ ಆಕರ್ಷಣೆಗಳಾಗಿವೆ. ಮಹಾತಪಸ್ವಿ ಮುರುಘೇಂದ್ರ ಶಿವಯೋಗಿಗಳ ಜಾತ್ರೆಯು ಆಕರ್ಷಣೆಯಾಗಿದೆ. ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಬಣ್ಣ ಬಣ್ಣದ ಚಿತ್ರಾನ್ನದ ತೊಟ್ಟಿಲುಗಳ ಸಂಭ್ರಮ ಎಲ್ಲರನ್ನ ಕೈಬಿಸಿ ಕರೆಯುತ್ತವೆ. ಮಹಿಳೆಯರು ಮತ್ತು ಯುವಕ, ಯುವತಿಯರು, ಆಕಾಶದ ಎತ್ತರದ ತೊಟ್ಟಿಲುಗಳಲ್ಲಿ ಕುಳಿತು ಸಂಭ್ರಮಿಸಿದರೆ, ಮಕ್ಕಳು ಹೆಲಿಕಾಪ್ಟರ್ನಂತಹ ವಾಹನಗಳಲ್ಲಿ ಕುಳಿತು ಸಂಭ್ರಮಿಸುತ್ತಿದ್ದಾರೆ. ಜಾತ್ರೆಯಲ್ಲಿ ಜನಜಂಗುಳಿ ಮಧ್ಯೆ ಕಳ್ಳರು ತಮ್ಮ ಕೈಚಳಕ ತೋರಿಸುತ್ತಿದ್ದಾರೆ. ಅಲ್ಲಲ್ಲಿ ಪೊಲೀಸ್ ಸಿಬ್ಬಂದಿ ಸರ್ಪಗಾವಲು ಇದ್ದರೂ ಮೊಬೈಲ್, ಮಹಿಳೆಯರ ಚಿನ್ನಾಭರಣಗಳು ಕಳ್ಳತನವಾಗಿರುವ ಪ್ರಕರಣಗಳು ಕಂಡು ಬಂದಿವೆ. ಜಾತ್ರೆಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸುತ್ತಿದ್ದು, ಜಾತ್ರೆಗೆ ಬರುವ ಯಾತ್ರಿಕರು ಮಹಿಳೆಯರು ವಸ್ತುಗಳ ಬಗ್ಗೆ ಜಾಗೃತಿ ವಹಿಸಬೇಕೆಂದು ಜಾತ್ರಾ ಕಮಿಟಿ ಮತ್ತು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.2
- ನಾವು ಉಣ್ಣುವ ಅನ್ನ ನಮಗೆ ಶಕ್ತಿ ನೀಡಬೇಕು, ಆದರೆ ಇಂದು ಆ ಅನ್ನವನ್ನೇ ವಿಷವಾಗಿಸುತ್ತಿದ್ದೇವೆಯೇ? ಹೌದು, ಅಧಿಕ ಇಳುವರಿಯ ಆಸೆಗೆ ಬಿದ್ದು ನಾವು ಭೂತಾಯಿಯ ಮಡಿಲಿಗೆ ರಾಸಾಯನಿಕ ಗೊಬ್ಬರ (Chemical Fertilizer) ಎಂಬ ವಿಷವನ್ನು ಸುರಿಯುತ್ತಿದ್ದೇವೆ. ಭೂಮಿ ತನ್ನ ನೈಸರ್ಗಿಕ ಶಕ್ತಿಯನ್ನು ಕಳೆದುಕೊಂಡು ಬಂಜರಾಗುತ್ತಿದೆ. ಹಾಗಾದರೆ ನಮ್ಮ ಮಣ್ಣನ್ನು ಮತ್ತೆ ಹಳೆಯ ಕಾಲದ 'ಪೈಲ್ವಾನ್' ನಂತೆ ಸದೃಢಗೊಳಿಸುವುದು ಹೇಗೆ? ಈ ಕುರಿತ ಒಂದು ಕಣ್ಣು ತೆರೆಸುವ ವರದಿ ಇಲ್ಲಿದೆ. ರಾಸಾಯನಿಕ ಗೊಬ್ಬರ - ಒಂದು ಮೌನ ಕೊಲೆಗಾರ ನಮ್ಮ ರೈತರು ಇಂದು ಯೂರಿಯಾ, ಡಿಎಪಿ (DAP) ಗಳಂತಹ ರಾಸಾಯನಿಕಗಳ ಮೇಲೆ ಅತಿಯಾಗಿ ಅವಲಂಬಿತರಾಗಿದ್ದಾರೆ. ಇದರ ಪರಿಣಾಮಗಳು ಭಯಾನಕ: ಮಣ್ಣಿನ ಜೀವಂತಿಕೆ ನಾಶ: ಮಣ್ಣಿನಲ್ಲಿರುವ ಉಪಕಾರಿ ಎರೆಹುಳುಗಳು ಮತ್ತು ಸೂಕ್ಷ್ಮಾಣು ಜೀವಿಗಳು ಸವಕಳಿಯಾಗುತ್ತಿವೆ. ಗಡಸಾದ ಭೂಮಿ: ಮಣ್ಣು ತನ್ನ ಮೃದುತ್ವವನ್ನು ಕಳೆದುಕೊಂಡು ಕಲ್ಲಿನಂತೆ ಗಟ್ಟಿಯಾಗುತ್ತಿದೆ. ವಿಷಯುಕ್ತ ಬೆಳೆ: ನಾವು ತಿನ್ನುವ ತರಕಾರಿ, ಧಾನ್ಯಗಳಲ್ಲಿ ಕೆಮಿಕಲ್ ಅಂಶಗಳು ಸೇರಿಕೊಂಡು ಕ್ಯಾನ್ಸರ್ನಂತಹ ರೋಗಗಳಿಗೆ ದಾರಿಯಾಗುತ್ತಿದೆ. 'ಪೈಲ್ವಾನ್' ಮಾಡುವುದು ಹೇಗೆ? ನಮ್ಮ ಭೂಮಿ ಮತ್ತೆ ಸತ್ವಭರಿತವಾಗಬೇಕಾದರೆ, ಅದಕ್ಕೆ ಜಿಮ್ಗೆ ಹೋಗುವ ಪೈಲ್ವಾನನಿಗೆ ನೀಡುವಂತೆ ಪೌಷ್ಟಿಕ ಆಹಾರ ನೀಡಬೇಕು.1
- ವಿಜಯಪುರ: ಲವ್ ಜಿಹಾದ್ ಮಾಡಿದವರನ್ನು ಗುಂಡಿಕ್ಕಿ ಕೊಲ್ಲಬೇಕು ಯತ್ನಾಳ ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ವರದಿಯಾಗಿದೆ. ಜಿಮ್ ಟ್ರೈನರ್ ಸಮೀರ್ ಮುಲ್ಲಾ ಮತ್ತು ಮುಫೀಸ್ ಮಿಯಾನ್ನವರ್ ಎಂಬುವರ ಮೇಲೆ ಹಿಂದೂ ಯುವತಿಯರ ಮೇಲೆ ಪ್ರೀತಿಯ ನಾಟಕವಾಡಿ ಅತ್ಯಾಚಾರ ಎಸಗಿದ ಆರೋಪದಡಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಇಂತಹ ಪ್ರಕರಣಗಳಲ್ಲಿ ಯಾವುದೇ ಕರುಣೆ ತೋರಿಸದೆ ಗುಂಡಿಕ್ಕುವ ಆದೇಶವನ್ನು ಸರ್ಕಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇದು ಕೋಮುವಾದಿ ಅಸಹನೆ ಮತ್ತು ಹಿಂದೂಗಳ ವಿರುದ್ಧದ ದ್ವೇಷಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದ್ದಾರೆ.1
- ರಾಯಚೂರು ನಲ್ಲಿ ಕರವೇಯಿಂದ ಬ್ರಹತ್ ಪ್ರತಿ ಭಟನೆ ಮಾಡಲಾಯಿತು ಹಿಂದಿ ಸಾಮ್ರಾಜ್ಯ ಶಾಹಿ ವಿರುದ್ಧ ಕರವೇ ರಣ ಕಹಳೆ ಕರ್ನಾಟಕ ವಿರೋಧಿ ರಾಜ್ಯ ಪಾಲರನ್ನು ನಮಗೆ ಬೇಡವೆಂದು ಜಿಲ್ಲಾಧಿಕಾರಿ ಗಳ ಮೂಲಕ ಕೇಂದ್ರ ಸರ್ಕಾರ ಕೆ ಮನವಿ ಸಲ್ಲಿಸಲಾಯಿತು1
- ಕೊಡಗಿನ ಕಾಡಿನಲ್ಲಿ ದಾರಿ ತಪ್ಪಿ 4 ದಿನ ಏಕಾಂಗಿಯಾಗಿ ಬದುಕಿ ಬಂದ ಕೇರಳದ ಯುವತಿ! #JB_News_Kannada1