logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

8 hrs ago
user_ALTAF,❤️🙏
ALTAF,❤️🙏
ಹರಿಹರ, ದಾವಣಗೆರೆ, ಕರ್ನಾಟಕ•
8 hrs ago

More news from ಕರ್ನಾಟಕ and nearby areas
  • ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಇಂದಿಗೆ 1326ನೇ ದಿನಕ್ಕೆ ಕಾಲಿಟ್ಟಿದ್ದು, ಭಾನುವಾರ 11 ಗಂಟೆಗೆ ಕಲ್ಯಾಣ ಕರ್ನಾಟಕ ಪ್ರದೇಶದ, ಹಿಂದುಳಿದ, ಐಐಟಿಯಿಂದ ವಂಚಿತಗೊಂಡ, ಮಹತ್ವಕಾಂಕ್ಷಿ ಜಿಲ್ಲೆ ರಾಯಚೂರಿಗೆ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಮಂಜೂರು ಮಾಡಲೇಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ, ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಅಸಮಧಾನ ಹೊರಹಾಕಿದರು.
    1
    ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಇಂದಿಗೆ 1326ನೇ ದಿನಕ್ಕೆ ಕಾಲಿಟ್ಟಿದ್ದು, ಭಾನುವಾರ 11 ಗಂಟೆಗೆ ಕಲ್ಯಾಣ ಕರ್ನಾಟಕ ಪ್ರದೇಶದ, ಹಿಂದುಳಿದ, ಐಐಟಿಯಿಂದ ವಂಚಿತಗೊಂಡ, ಮಹತ್ವಕಾಂಕ್ಷಿ ಜಿಲ್ಲೆ ರಾಯಚೂರಿಗೆ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಮಂಜೂರು ಮಾಡಲೇಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ, ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಅಸಮಧಾನ ಹೊರಹಾಕಿದರು.
    user_K2 kannada News
    K2 kannada News
    Journalist ರಾಯಚೂರು, ರಾಯಚೂರು, ಕರ್ನಾಟಕ•
    22 hrs ago
  • ಶ್ರೀ ಅಯ್ಯಪ್ಪಸ್ವಾಮಿಯ 55ನೇ ವರ್ಷದ ದೀಪಾರಾಧನೆ ಹಾಗೂ ಪಲ್ಲಕ್ಕಿ ಉತ್ಸವ! ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ ವಿಶೇಷ ಪೂಜೆ! ಶಿಡ್ಲಘಟ್ಟ: ನಗರದ ಅಶೋಕ ರಸ್ತೆಯಲ್ಲಿರುವ ಶ್ರೀ ಕಾಶೀವಿಶ್ವೇಶ್ವರಸ್ವಾಮಿ ಸನ್ನಿಧಿಯಲ್ಲಿ ನೆಲೆಸಿರುವ ಶ್ರೀ ಅಯ್ಯಪ್ಪಸ್ವಾಮಿಯ 55ನೇ ವರ್ಷದ ದೀಪಾರಾಧನೆ ಹಾಗೂ ಪಲ್ಲಕ್ಕಿ ಉತ್ಸವವು ಭಕ್ತಿಭಾವದಿಂದ ಶನಿವಾರ ನಡೆಯಿತು. ಶ್ರೀ ಅಯ್ಯಪ್ಪಸ್ವಾಮಿ ಭಕ್ತಮಂಡಲಿಯ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಈ ಸಂದರ್ಭದಲ್ಲಿ ಕೆಪಿಸಿಸಿ ಸಂಯೋಜಕ ಹಾಗೂ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಮಾತನಾಡಿ, ಶಿಡ್ಲಘಟ್ಟದಲ್ಲಿ ವರ್ಷಾವರ್ಷ ನಡೆಯುವ ಅಯ್ಯಪ್ಪಸ್ವಾಮಿಯ ಪಡಿ ಪೂಜೆ ಹಾಗೂ ದೀಪಾರಾಧನೆ ಕಾರ್ಯಕ್ರಮ ಅತ್ಯಂತ ಭಕ್ತಿಪೂರ್ಣವಾಗಿ ನಡೆಯುತ್ತಿರುವುದು ಸಂತಸದ ವಿಚಾರ ಎಂದರು. ಭಗವಂತನ ಸೇವೆಗೆ ತಾವು ಕೂಡ ಕೈಜೋಡಿಸಬೇಕೆಂಬ ಸಂಕಲ್ಪದಿಂದ ಈ ಹಿಂದೆ 101 ಲೀಟರ್ ಹಾಲಿನ ಮಹಾಭಿಷೇಕದಲ್ಲಿ ಭಾಗವಹಿಸಿದ್ದೆ, ಇಂದು ಕೂಡ ಹೂವಿನ ಅಲಂಕಾರ, ಕೇರಳ ವಾದ್ಯಗಳು ಸೇರಿದಂತೆ ವಿವಿಧ ಸೇವೆಗಳಲ್ಲಿ ಪಾಲ್ಗೊಳ್ಳುವ ಭಾಗ್ಯ ದೊರೆತಿದೆ ಎಂದು ಹೇಳಿದರು. ಶಿಡ್ಲಘಟ್ಟದಿಂದ ಸಾವಿರಾರು ಅಯ್ಯಪ್ಪಸ್ವಾಮಿ ಭಕ್ತ ಮಾಲಾಧಾರಿಗಳು ಶಬರಿಮಲೆಗೆ ತೆರಳಿ ಭಗವಂತನ ದರ್ಶನ ಪಡೆಯುತ್ತಾರೆ. ಕೆಲವರು ಒಂದು ವರ್ಷ, ಕೆಲವರು ಮೂರು, ಐದು ವರ್ಷಗಳ ಮಾಲೆ ಧರಿಸಿ, ಇನ್ನೂ ಕೆಲವರು ದಶಕಗಳ ಕಾಲ ಅಯ್ಯಪ್ಪಸ್ವಾಮಿಯ ಮೇಲಿನ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ. ಅವರ ಭಕ್ತಿಗೆ ಭಗವಂತನು ಕೃಪೆ ತೋರಿಸಿ ಕೋರಿಕೆಗಳನ್ನು ನೆರವೇರಿಸುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿಯೇ ಎಂದು ರಾಜೀವ್ ಗೌಡ ಹೇಳಿದರು. ತಮ್ಮ ವೈಯಕ್ತಿಕ ಸಂಕಲ್ಪವನ್ನು ಹಂಚಿಕೊಂಡ ಅವರು, ತಾವು ಕೂಡ ಶಬರಿಮಲೆಗೆ ತೆರಳಿ ಅಯ್ಯಪ್ಪಸ್ವಾಮಿಯ ಸೇವೆ ಸಲ್ಲಿಸುವ ಉದ್ದೇಶ ಹೊಂದಿದ್ದು, ಮೂರು ವರ್ಷಗಳ ಕಾಲ ಮಾಲೆ ಧರಿಸುವ ನಿರ್ಧಾರ ಮಾಡಿಕೊಂಡಿರುವುದಾಗಿ ತಿಳಿಸಿದರು. ಜೊತೆಗೆ ಅಯ್ಯಪ್ಪಸ್ವಾಮಿಯ ಕೃಪೆಯಿಂದ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಆಗಲಿ, ರೈತಾಪಿ ವರ್ಗ ಆರ್ಥಿಕವಾಗಿ ಸದೃಢರಾಗಲಿ, ಸಣ್ಣ ವ್ಯಾಪಾರಸ್ಥರು ಹಾಗೂ ರೇಷ್ಮೆ ಉದ್ಯಮ ಮತ್ತಷ್ಟು ಬೆಳೆಯಲಿ ಎಂದು ಪ್ರಾರ್ಥಿಸಿದರು. ಶಿಡ್ಲಘಟ್ಟ ‘ರೇಷ್ಮೆ ನಗರ’ವಾಗಿ ಮತ್ತಷ್ಟು ಸಮೃದ್ಧಿಯಾಗಲಿ, ದೇವನಹಳ್ಳಿ, ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗಿಂತ ಹೆಚ್ಚು ಅಭಿವೃದ್ಧಿ ಕಾಣಲಿ. ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗಾವಕಾಶಗಳು ದೊರಕಲಿ, ಸಮಯಕ್ಕೆ ಸರಿಯಾಗಿ ಉತ್ತಮ ಮಳೆಯಾಗಿ ಬೆಳೆ ಸಮೃದ್ಧಿಯಾಗಲಿ ಎಂಬುದು ತಮ್ಮ ಕೋರಿಕೆ ಎಂದು ಅವರು ಹೇಳಿದರು. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 7 ಗಂಟೆಯಿಂದ ಕ್ಷೀರಾಭಿಷೇಕ, ರುದ್ರಾಭಿಷೇಕ, ಗಣಪತಿ ಹೋಮ, ಶ್ರೀ ಅಯ್ಯಪ್ಪಸ್ವಾಮಿ ಹೋಮ, ಭಜನೆ, ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಸಂಜೆ 5 ಗಂಟೆಗೆ ನಗರದ ಪ್ರಮುಖ ಬೀದಿಗಳಲ್ಲಿ ಬೆಳ್ಳಿಯ ರಥದಲ್ಲಿ ಮಂಗಳವಾದ್ಯ ಹಾಗೂ ಕೇರಳ ವಾದ್ಯಗಳೊಂದಿಗೆ ಶ್ರೀ ಅಯ್ಯಪ್ಪಸ್ವಾಮಿಯ ಭವ್ಯ ಪಲ್ಲಕ್ಕಿ ಮೆರವಣಿಗೆ ನಡೆಯಿತು. ವಿಶೇಷವಾಗಿ ಬೆಳಿಗ್ಗೆ 6 ಗಂಟೆಗೆ 101 ಲೀಟರ್ ಹಾಲಿನ ಮಹಾಭಿಷೇಕವನ್ನು ಆಯೋಜಿಸಲಾಗಿದ್ದು, ಭಕ್ತಾದಿಗಳು ಹಾಲು ಅಥವಾ ಹಣದ ರೂಪದಲ್ಲಿ ಸಹಕಾರ ನೀಡಿದರು. ಸನ್ನಿಧಿಯ ಎಲ್ಲಾ ಅಯ್ಯಪ್ಪಸ್ವಾಮಿಗಳು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉತ್ಸವವನ್ನು ಯಶಸ್ವಿಗೊಳಿಸಿದರು. ಈ ಸಂದರ್ಭದಲ್ಲಿ ಕಾಂಗ್ರೇಸ್ ಮುಖಂಡರಾದ ಶ್ರೀನಾಥ್, ಗಪೂರ್, ರಾಮಾಂಜಿನಪ್ಪ, ರಘು, ಆನಂದ್, ಮೂರ್ತಿ, ನರೇಂದ್ರ , ಮನುಗೌಡ, ದೇವರಾಜ್, ಶ್ರೀನಾಥ್, ಮಂಜುನಾಥ್, ಶ್ರೀನಿವಾಸ್, ಸೇರಿದಂತೆ ಶ್ರೀ ಅಯ್ಯಪ್ಪಸ್ವಾಮಿ ಭಕ್ತಮಂಡಲಿಯ ಬಸವರಾಜು ಗುರುಸ್ವಾಮಿಗಳು, ಪ್ರೇಮ್ ನಗರ ಮುನಿಯಪ್ಪ, ಮಯೂರ ಸರ್ಕಲ್ ಅರ್ಜುನ್, ದೇವರಾಜ್, ಶ್ರೀರಾಮ, ದೇಶದ ಪೇಟೆ ವೆಂಕಟೇಶಪ್ಪ, ಗಣೇಶ್ ಹಾಜರಿದ್ದರು.
    1
    ಶ್ರೀ ಅಯ್ಯಪ್ಪಸ್ವಾಮಿಯ 55ನೇ ವರ್ಷದ ದೀಪಾರಾಧನೆ ಹಾಗೂ ಪಲ್ಲಕ್ಕಿ ಉತ್ಸವ!
ಕೆಪಿಸಿಸಿ ಸಂಯೋಜಕ  ರಾಜೀವ್ ಗೌಡ ವಿಶೇಷ ಪೂಜೆ!
ಶಿಡ್ಲಘಟ್ಟ: ನಗರದ ಅಶೋಕ ರಸ್ತೆಯಲ್ಲಿರುವ ಶ್ರೀ ಕಾಶೀವಿಶ್ವೇಶ್ವರಸ್ವಾಮಿ ಸನ್ನಿಧಿಯಲ್ಲಿ ನೆಲೆಸಿರುವ ಶ್ರೀ ಅಯ್ಯಪ್ಪಸ್ವಾಮಿಯ 55ನೇ ವರ್ಷದ ದೀಪಾರಾಧನೆ ಹಾಗೂ ಪಲ್ಲಕ್ಕಿ ಉತ್ಸವವು ಭಕ್ತಿಭಾವದಿಂದ  ಶನಿವಾರ ನಡೆಯಿತು.
ಶ್ರೀ ಅಯ್ಯಪ್ಪಸ್ವಾಮಿ ಭಕ್ತಮಂಡಲಿಯ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಈ ಸಂದರ್ಭದಲ್ಲಿ ಕೆಪಿಸಿಸಿ ಸಂಯೋಜಕ ಹಾಗೂ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಮಾತನಾಡಿ, ಶಿಡ್ಲಘಟ್ಟದಲ್ಲಿ ವರ್ಷಾವರ್ಷ ನಡೆಯುವ ಅಯ್ಯಪ್ಪಸ್ವಾಮಿಯ ಪಡಿ ಪೂಜೆ ಹಾಗೂ ದೀಪಾರಾಧನೆ ಕಾರ್ಯಕ್ರಮ ಅತ್ಯಂತ ಭಕ್ತಿಪೂರ್ಣವಾಗಿ ನಡೆಯುತ್ತಿರುವುದು ಸಂತಸದ ವಿಚಾರ ಎಂದರು. ಭಗವಂತನ ಸೇವೆಗೆ ತಾವು ಕೂಡ ಕೈಜೋಡಿಸಬೇಕೆಂಬ ಸಂಕಲ್ಪದಿಂದ ಈ ಹಿಂದೆ 101 ಲೀಟರ್ ಹಾಲಿನ ಮಹಾಭಿಷೇಕದಲ್ಲಿ ಭಾಗವಹಿಸಿದ್ದೆ, ಇಂದು ಕೂಡ ಹೂವಿನ ಅಲಂಕಾರ, ಕೇರಳ ವಾದ್ಯಗಳು ಸೇರಿದಂತೆ ವಿವಿಧ ಸೇವೆಗಳಲ್ಲಿ ಪಾಲ್ಗೊಳ್ಳುವ ಭಾಗ್ಯ ದೊರೆತಿದೆ ಎಂದು ಹೇಳಿದರು.
ಶಿಡ್ಲಘಟ್ಟದಿಂದ ಸಾವಿರಾರು ಅಯ್ಯಪ್ಪಸ್ವಾಮಿ ಭಕ್ತ ಮಾಲಾಧಾರಿಗಳು ಶಬರಿಮಲೆಗೆ ತೆರಳಿ ಭಗವಂತನ ದರ್ಶನ ಪಡೆಯುತ್ತಾರೆ. ಕೆಲವರು ಒಂದು ವರ್ಷ, ಕೆಲವರು ಮೂರು, ಐದು ವರ್ಷಗಳ ಮಾಲೆ ಧರಿಸಿ, ಇನ್ನೂ ಕೆಲವರು ದಶಕಗಳ ಕಾಲ ಅಯ್ಯಪ್ಪಸ್ವಾಮಿಯ ಮೇಲಿನ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ. ಅವರ ಭಕ್ತಿಗೆ ಭಗವಂತನು ಕೃಪೆ ತೋರಿಸಿ ಕೋರಿಕೆಗಳನ್ನು ನೆರವೇರಿಸುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿಯೇ ಎಂದು ರಾಜೀವ್ ಗೌಡ ಹೇಳಿದರು.
ತಮ್ಮ ವೈಯಕ್ತಿಕ ಸಂಕಲ್ಪವನ್ನು ಹಂಚಿಕೊಂಡ ಅವರು, ತಾವು ಕೂಡ ಶಬರಿಮಲೆಗೆ ತೆರಳಿ ಅಯ್ಯಪ್ಪಸ್ವಾಮಿಯ ಸೇವೆ ಸಲ್ಲಿಸುವ ಉದ್ದೇಶ ಹೊಂದಿದ್ದು, ಮೂರು ವರ್ಷಗಳ ಕಾಲ ಮಾಲೆ ಧರಿಸುವ ನಿರ್ಧಾರ ಮಾಡಿಕೊಂಡಿರುವುದಾಗಿ ತಿಳಿಸಿದರು. ಜೊತೆಗೆ ಅಯ್ಯಪ್ಪಸ್ವಾಮಿಯ ಕೃಪೆಯಿಂದ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಆಗಲಿ, ರೈತಾಪಿ ವರ್ಗ ಆರ್ಥಿಕವಾಗಿ ಸದೃಢರಾಗಲಿ, ಸಣ್ಣ ವ್ಯಾಪಾರಸ್ಥರು ಹಾಗೂ ರೇಷ್ಮೆ ಉದ್ಯಮ ಮತ್ತಷ್ಟು ಬೆಳೆಯಲಿ ಎಂದು ಪ್ರಾರ್ಥಿಸಿದರು.
ಶಿಡ್ಲಘಟ್ಟ ‘ರೇಷ್ಮೆ ನಗರ’ವಾಗಿ ಮತ್ತಷ್ಟು ಸಮೃದ್ಧಿಯಾಗಲಿ, ದೇವನಹಳ್ಳಿ, ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗಿಂತ ಹೆಚ್ಚು ಅಭಿವೃದ್ಧಿ ಕಾಣಲಿ. ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗಾವಕಾಶಗಳು ದೊರಕಲಿ, ಸಮಯಕ್ಕೆ ಸರಿಯಾಗಿ ಉತ್ತಮ ಮಳೆಯಾಗಿ ಬೆಳೆ ಸಮೃದ್ಧಿಯಾಗಲಿ ಎಂಬುದು ತಮ್ಮ ಕೋರಿಕೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 7 ಗಂಟೆಯಿಂದ ಕ್ಷೀರಾಭಿಷೇಕ, ರುದ್ರಾಭಿಷೇಕ, ಗಣಪತಿ ಹೋಮ, ಶ್ರೀ ಅಯ್ಯಪ್ಪಸ್ವಾಮಿ ಹೋಮ, ಭಜನೆ, ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಸಂಜೆ 5 ಗಂಟೆಗೆ ನಗರದ ಪ್ರಮುಖ ಬೀದಿಗಳಲ್ಲಿ ಬೆಳ್ಳಿಯ ರಥದಲ್ಲಿ ಮಂಗಳವಾದ್ಯ ಹಾಗೂ ಕೇರಳ ವಾದ್ಯಗಳೊಂದಿಗೆ ಶ್ರೀ ಅಯ್ಯಪ್ಪಸ್ವಾಮಿಯ ಭವ್ಯ ಪಲ್ಲಕ್ಕಿ ಮೆರವಣಿಗೆ ನಡೆಯಿತು.
ವಿಶೇಷವಾಗಿ ಬೆಳಿಗ್ಗೆ 6 ಗಂಟೆಗೆ 101 ಲೀಟರ್ ಹಾಲಿನ ಮಹಾಭಿಷೇಕವನ್ನು ಆಯೋಜಿಸಲಾಗಿದ್ದು, ಭಕ್ತಾದಿಗಳು ಹಾಲು ಅಥವಾ ಹಣದ ರೂಪದಲ್ಲಿ ಸಹಕಾರ ನೀಡಿದರು. ಸನ್ನಿಧಿಯ ಎಲ್ಲಾ ಅಯ್ಯಪ್ಪಸ್ವಾಮಿಗಳು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉತ್ಸವವನ್ನು ಯಶಸ್ವಿಗೊಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೇಸ್ ಮುಖಂಡರಾದ ಶ್ರೀನಾಥ್, ಗಪೂರ್, ರಾಮಾಂಜಿನಪ್ಪ, ರಘು, ಆನಂದ್, ಮೂರ್ತಿ, ನರೇಂದ್ರ , ಮನುಗೌಡ, ದೇವರಾಜ್, ಶ್ರೀನಾಥ್, ಮಂಜುನಾಥ್, ಶ್ರೀನಿವಾಸ್, ಸೇರಿದಂತೆ ಶ್ರೀ ಅಯ್ಯಪ್ಪಸ್ವಾಮಿ ಭಕ್ತಮಂಡಲಿಯ ಬಸವರಾಜು ಗುರುಸ್ವಾಮಿಗಳು, ಪ್ರೇಮ್ ನಗರ ಮುನಿಯಪ್ಪ, ಮಯೂರ ಸರ್ಕಲ್ ಅರ್ಜುನ್, ದೇವರಾಜ್, ಶ್ರೀರಾಮ, ದೇಶದ ಪೇಟೆ ವೆಂಕಟೇಶಪ್ಪ, ಗಣೇಶ್  ಹಾಜರಿದ್ದರು.
    user_NAYAN NEWS
    NAYAN NEWS
    ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕರ್ನಾಟಕ•
    22 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru, Karnataka•
    6 hrs ago
  • Post by AAJ KI DASTAK NEWS KARNATAKA
    1
    Post by AAJ KI DASTAK NEWS KARNATAKA
    user_AAJ KI DASTAK NEWS KARNATAKA
    AAJ KI DASTAK NEWS KARNATAKA
    Journalist Mysuru, Karnataka•
    19 hrs ago
  • ಚಾಮರಾಜನಗರ ನ್ಯೂಸ್ ಹೊನ್ನೂರು ಗ್ರಾಮದಲ್ಲಿ ಶ್ರೀ ಉರರ್ಕಾತೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ, ಓಂ ಶಕ್ತಿ ಮಾಲಾಧಾರಿ ಭಕ್ತರಿಗೆ ಬೆಳಗಿನ ಉಪಹಾರ ಮತ್ತು ಪ್ರಸಾದ ವಿತರಣೆ, ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಹೊನ್ನೂರು ಬೀಚಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಶ್ರೀ ಉರರ್ಕಾತೇಶ್ವರಿ ದೇವಾಲಯದಲ್ಲಿ ಭಾನುವಾರ ಬೆಳಿಗ್ಗೆ ವಿಶೇಷ ಪೂಜೆ,ಓಂ ಶಕ್ತಿ ಮಾಲಾಧಾರಿ ಭಕ್ತರಿಗೆ ಬೆಳಗಿನ ಉಪಹಾರ ಮತ್ತು ಪ್ರಸಾದ ವಿತರಣೆ ಕಾರ್ಯಕ್ರಮವನ್ನುಶ್ರೀ ಉರರ್ಕಾತೇಶ್ವರಿ ದೇವಾಲಯದ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದು ದೇವಾಲಯದಲ್ಲಿ ಮುಂಜಾನೆಯಿಂದಲೇ ದೇವರಿಗೆ ವಿಶೇಷ ಪುಷ್ಪ ಅಲಂಕಾರ, ವಿಶೇಷ ಪೂಜೆ ಸಲ್ಲಿಸಿ ಶ್ರೀ ಓಂ ಶಕ್ತಿ ಮಾಲಾಧಾರಿ ಭಕ್ತರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ವಿಶೇಷವಾಗಿ ಭಜನೆ ಹಾಡು ಹಾಡುವ ಮೂಲಕ ಭಕ್ತಿಯಿಂದ ದೇವರ ಆಶೀರ್ವಾದ ಪಡೆದರು . ಇದೇ ಸಂದರ್ಭದಲ್ಲಿ ,ಶ್ರೀ ಓಂ ಶಕ್ತಿ ಮಾಲಾಧಾರಿ ಭಕ್ತರಿಗೆ ಬೆಳಗಿನ ಉಪಹಾರ ಮತ್ತು ಪ್ರಸಾದ ಸ್ವೀಕರಿಸಿದರು ನಂತರ ಸಾರ್ವಜನಿಕರಿಗೂ ಅನ್ನ ಸಂತರ್ಪಣೆ, ಪ್ರಸಾದ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀ ಉರರ್ಕಾತೇಶ್ವರಿ ದೇವಾಲಯದ ಟ್ರಸ್ಟ್ ನ ಅಧ್ಯಕ್ಷ ಸಿದ್ದಪ್ಪ ಸ್ವಾಮಿ ರವರು ಮಾತನಾಡಿ ನಮ್ಮ ದೇವಾಲಯದ ಟ್ರಸ್ಟ್ ವತಿಯಿಂದ ಪ್ರತಿ ವರ್ಷ ವಿಶೇಷ ಪೂಜೆ ಹಾಗೂ ವಿಶೇಷವಾಗಿ ಅಯ್ಯಪ್ಪ ಸ್ವಾಮಿ ಭಕ್ತರಿಗೆ, ಶ್ರೀ ಓಂ ಶಕ್ತಿ ಮಾಲಾಧಾರಿ ಭಕ್ತರಿಗೆ ಬೆಳಗಿನ ಉಪಹಾರ, ಅನ್ನ ಸಂತರ್ಪಣೆ, ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗುವಂತೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ, ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ ಇದರಿಂದ ಧಾರ್ಮಿಕ ನಂಬಿಕೆಗಳ ಜೊತೆಗೆ ಸಾಮಾಜಿಕ ಕಾರ್ಯಕ್ರಮ ಮಾಡಲಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀ ಉರರ್ಕಾತೇಶ್ವರಿ ದೇವಾಲಯದ ಟ್ರಸ್ಟ್ ನ ಅಧ್ಯಕ್ಷರಾದ ಸಿದ್ದಪ್ಪಸ್ವಾಮಿ, ಗುರುಲಿಂಗಯ್ಯಗ್ರಾಮ ಪಂಚಾಯತಿ ಪಂಚಾಯತ್ ಸದಸ್ಯರಾದ ಹೆಚ್. ಜಿ ನಾಗರಾಜು ಮಹದೇವಸ್ವಾಮಿ ಯಜಮಾನರಾದ ಸಿದ್ದಶೆಟ್ಟಿ : ವೆಂಕಟಶೆಟ್ಟಿ ದುಂಡಮಾದ ಶೆಟ್ಟಿ ಮಹದೇವಸ್ವಾಮಿ, ಮರ್ಲಿಂಗ,ಸಿದ್ದೇಶ ಉಮಾಶಂಕರ ಹಾಗೂಗ್ರಾಮದ ಮುಖಂಡರುಗಳು,ಶ್ರೀ ಉರರ್ಕಾತೇಶ್ವರಿ ದೇವಾಲಯದ ಟ್ರಸ್ಟ್ ನ ಪದಾಧಿಕಾರಿಗಳು ಹಾಗೂ ಶ್ರೀ ಓಂ ಶಕ್ತಿ ಮಾಲಾಧಾರಿ ಭಕ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ವರದಿ. ಎಸ್. ಪುಟ್ಟಸ್ವಾಮಿಹೊನ್ನೂರು
    4
    ಚಾಮರಾಜನಗರ ನ್ಯೂಸ್ ಹೊನ್ನೂರು ಗ್ರಾಮದಲ್ಲಿ ಶ್ರೀ ಉರರ್ಕಾತೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ, ಓಂ ಶಕ್ತಿ ಮಾಲಾಧಾರಿ ಭಕ್ತರಿಗೆ ಬೆಳಗಿನ ಉಪಹಾರ ಮತ್ತು ಪ್ರಸಾದ ವಿತರಣೆ,            ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಹೊನ್ನೂರು ಬೀಚಹಳ್ಳಿ ಗ್ರಾಮದ ಹೊರವಲಯದಲ್ಲಿರುವ  ಶ್ರೀ ಉರರ್ಕಾತೇಶ್ವರಿ ದೇವಾಲಯದಲ್ಲಿ ಭಾನುವಾರ ಬೆಳಿಗ್ಗೆ ವಿಶೇಷ ಪೂಜೆ,ಓಂ ಶಕ್ತಿ ಮಾಲಾಧಾರಿ ಭಕ್ತರಿಗೆ ಬೆಳಗಿನ ಉಪಹಾರ ಮತ್ತು ಪ್ರಸಾದ ವಿತರಣೆ ಕಾರ್ಯಕ್ರಮವನ್ನುಶ್ರೀ ಉರರ್ಕಾತೇಶ್ವರಿ ದೇವಾಲಯದ ಟ್ರಸ್ಟ್ ವತಿಯಿಂದ   ಹಮ್ಮಿಕೊಳ್ಳಲಾಗಿದ್ದು  ದೇವಾಲಯದಲ್ಲಿ ಮುಂಜಾನೆಯಿಂದಲೇ  ದೇವರಿಗೆ ವಿಶೇಷ ಪುಷ್ಪ   ಅಲಂಕಾರ, ವಿಶೇಷ ಪೂಜೆ ಸಲ್ಲಿಸಿ ಶ್ರೀ ಓಂ ಶಕ್ತಿ ಮಾಲಾಧಾರಿ ಭಕ್ತರು  ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ವಿಶೇಷವಾಗಿ ಭಜನೆ ಹಾಡು ಹಾಡುವ ಮೂಲಕ ಭಕ್ತಿಯಿಂದ ದೇವರ ಆಶೀರ್ವಾದ ಪಡೆದರು . ಇದೇ ಸಂದರ್ಭದಲ್ಲಿ ,ಶ್ರೀ ಓಂ ಶಕ್ತಿ ಮಾಲಾಧಾರಿ ಭಕ್ತರಿಗೆ ಬೆಳಗಿನ ಉಪಹಾರ ಮತ್ತು ಪ್ರಸಾದ  ಸ್ವೀಕರಿಸಿದರು ನಂತರ  ಸಾರ್ವಜನಿಕರಿಗೂ ಅನ್ನ ಸಂತರ್ಪಣೆ, ಪ್ರಸಾದ ವಿತರಣೆ ಮಾಡಲಾಯಿತು.                 ಈ ಸಂದರ್ಭದಲ್ಲಿ   ಶ್ರೀ ಉರರ್ಕಾತೇಶ್ವರಿ ದೇವಾಲಯದ ಟ್ರಸ್ಟ್ ನ ಅಧ್ಯಕ್ಷ ಸಿದ್ದಪ್ಪ ಸ್ವಾಮಿ ರವರು ಮಾತನಾಡಿ  ನಮ್ಮ ದೇವಾಲಯದ ಟ್ರಸ್ಟ್ ವತಿಯಿಂದ  ಪ್ರತಿ ವರ್ಷ ವಿಶೇಷ ಪೂಜೆ ಹಾಗೂ ವಿಶೇಷವಾಗಿ ಅಯ್ಯಪ್ಪ ಸ್ವಾಮಿ ಭಕ್ತರಿಗೆ, ಶ್ರೀ ಓಂ ಶಕ್ತಿ ಮಾಲಾಧಾರಿ ಭಕ್ತರಿಗೆ ಬೆಳಗಿನ ಉಪಹಾರ, ಅನ್ನ ಸಂತರ್ಪಣೆ, ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗುವಂತೆ  ಪ್ರತಿಭಾ ಪುರಸ್ಕಾರ ಕಾರ್ಯಕ್ರಮ, ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು  ಬರುತ್ತಿದ್ದೇವೆ ಇದರಿಂದ  ಧಾರ್ಮಿಕ ನಂಬಿಕೆಗಳ ಜೊತೆಗೆ ಸಾಮಾಜಿಕ ಕಾರ್ಯಕ್ರಮ ಮಾಡಲಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀ ಉರರ್ಕಾತೇಶ್ವರಿ ದೇವಾಲಯದ ಟ್ರಸ್ಟ್ ನ ಅಧ್ಯಕ್ಷರಾದ ಸಿದ್ದಪ್ಪಸ್ವಾಮಿ, ಗುರುಲಿಂಗಯ್ಯಗ್ರಾಮ ಪಂಚಾಯತಿ ಪಂಚಾಯತ್ ಸದಸ್ಯರಾದ ಹೆಚ್. ಜಿ ನಾಗರಾಜು ಮಹದೇವಸ್ವಾಮಿ  ಯಜಮಾನರಾದ ಸಿದ್ದಶೆಟ್ಟಿ : ವೆಂಕಟಶೆಟ್ಟಿ ದುಂಡಮಾದ ಶೆಟ್ಟಿ ಮಹದೇವಸ್ವಾಮಿ, ಮರ್ಲಿಂಗ,ಸಿದ್ದೇಶ ಉಮಾಶಂಕರ ಹಾಗೂಗ್ರಾಮದ ಮುಖಂಡರುಗಳು,ಶ್ರೀ ಉರರ್ಕಾತೇಶ್ವರಿ ದೇವಾಲಯದ ಟ್ರಸ್ಟ್ ನ  ಪದಾಧಿಕಾರಿಗಳು ಹಾಗೂ  ಶ್ರೀ ಓಂ ಶಕ್ತಿ ಮಾಲಾಧಾರಿ ಭಕ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.  ವರದಿ.                                               ಎಸ್. ಪುಟ್ಟಸ್ವಾಮಿಹೊನ್ನೂರು
    user_S.Puttaswamyhonnur
    S.Puttaswamyhonnur
    Press reporter ಯಳಂದೂರು, ಚಾಮರಾಜನಗರ, ಕರ್ನಾಟಕ•
    20 hrs ago
  • ಹನೂರು: ತೋಟದ ಮನೆಯೊಂದರಲ್ಲಿ ಸಾಕು ನಾಯಿಯನ್ನು ಚಿರತೆ ಎಳೆದೊಯ್ದ ಘಟನೆ ಹನೂರು ತಾಲೂಕಿನ ಗಂಗನದೊಡ್ಡಿ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದ್ದು, ಕಣ್ಣಾರೆ ಕಂಡ ರೈತರು ಆತಂಕಗೊಂಡಿದ್ದಾರೆ. ತಾಲೂಕಿನ ಗಂಗನದೊಡ್ಡಿ ಗ್ರಾಮದ ಮೂರ್ತಿ ಎಂಬುವವರ ತೋಟದಲ್ಲಿ ಈ ಘಟನೆ ನಡೆದಿದ್ದು, ತೋಟದ ಮಾಲೀಕರು ಹಾಗೂ ಸ್ಥಳೀಯರು ಭಯಭೀತರಾಗಿದ್ದಾರೆ. ಸೋಮವಾರ ಬೆಳಿಗ್ಗೆ ಮೂರ್ತಿ ಅವರ ತೋಟದ ಬಳಿ ಸಾಕು ನಾಯಿಯನ್ನು ಚಿರತೆ ಎಳೆದುಕೊಂಡು ಹೋಗುವುದನ್ನು ಸ್ಥಳೀಯ ರೈತರು ಕಣ್ಣಾರೆ ಕಂಡಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಆದ್ದರಿಂದ ಆದಷ್ಟು ಬೇಗ ಚಿರತೆಯನ್ನು ಸೆರೆಹಿಡಿಯಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಹನೂರು ತಾಲೂಕು ಘಟಕದ ಅಧ್ಯಕ್ಷ ಅಂಬುದ್ ಖಾನ್ ಒತ್ತಾಯಿಸಿದ್ದಾರೆ.
    1
    ಹನೂರು: ತೋಟದ ಮನೆಯೊಂದರಲ್ಲಿ ಸಾಕು ನಾಯಿಯನ್ನು ಚಿರತೆ ಎಳೆದೊಯ್ದ ಘಟನೆ ಹನೂರು ತಾಲೂಕಿನ ಗಂಗನದೊಡ್ಡಿ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದ್ದು, ಕಣ್ಣಾರೆ ಕಂಡ ರೈತರು ಆತಂಕಗೊಂಡಿದ್ದಾರೆ.
ತಾಲೂಕಿನ ಗಂಗನದೊಡ್ಡಿ ಗ್ರಾಮದ ಮೂರ್ತಿ ಎಂಬುವವರ ತೋಟದಲ್ಲಿ ಈ ಘಟನೆ ನಡೆದಿದ್ದು, ತೋಟದ ಮಾಲೀಕರು ಹಾಗೂ ಸ್ಥಳೀಯರು ಭಯಭೀತರಾಗಿದ್ದಾರೆ.
ಸೋಮವಾರ ಬೆಳಿಗ್ಗೆ ಮೂರ್ತಿ ಅವರ ತೋಟದ ಬಳಿ ಸಾಕು ನಾಯಿಯನ್ನು ಚಿರತೆ ಎಳೆದುಕೊಂಡು ಹೋಗುವುದನ್ನು ಸ್ಥಳೀಯ ರೈತರು ಕಣ್ಣಾರೆ ಕಂಡಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಆದ್ದರಿಂದ ಆದಷ್ಟು ಬೇಗ ಚಿರತೆಯನ್ನು ಸೆರೆಹಿಡಿಯಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಹನೂರು ತಾಲೂಕು ಘಟಕದ ಅಧ್ಯಕ್ಷ ಅಂಬುದ್ ಖಾನ್ ಒತ್ತಾಯಿಸಿದ್ದಾರೆ.
    user_Abhilash Gowda
    Abhilash Gowda
    Farmer ಹನೂರು, ಚಾಮರಾಜನಗರ, ಕರ್ನಾಟಕ•
    12 min ago
  • ನಮ್ಮ ಸಾಲೋಟಗಿ ಭಜಂತ್ರಿ ಸೌದತ್ತಿ ಎಲ್ಲಮ್ಮ ಪಾದಯಾತ್ರೆ ವಿಡಿಯೋ ವೈರಲ್ ಮಾಡಿ ಯಾವದೇ ಕಾರ್ಯಕ್ರಮಕ್ಕೆ ಸಂಪರ್ಕಿಸಿ 9380353710
    1
    ನಮ್ಮ ಸಾಲೋಟಗಿ ಭಜಂತ್ರಿ ಸೌದತ್ತಿ ಎಲ್ಲಮ್ಮ ಪಾದಯಾತ್ರೆ ವಿಡಿಯೋ ವೈರಲ್ ಮಾಡಿ ಯಾವದೇ ಕಾರ್ಯಕ್ರಮಕ್ಕೆ ಸಂಪರ್ಕಿಸಿ 9380353710
    user_Mareppa Bajantri
    Mareppa Bajantri
    Artist ಇಂಡಿ, ವಿಜಯಪುರ, ಕರ್ನಾಟಕ•
    20 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru, Karnataka•
    12 hrs ago
  • KARNATAKA RASHTRIYA SAMITTHI PAKSHA VISTED MANY POLICE STATIONS TODAY TO EXPRESS SUPPORT FOR THE POLICE DEPARTMENT AND ENCOURAGED ALL OFFICERS TO EMULATE MADHUKAR SHETTY SIR DEDICATION
    1
    KARNATAKA RASHTRIYA SAMITTHI PAKSHA VISTED MANY POLICE STATIONS TODAY TO EXPRESS SUPPORT FOR THE POLICE DEPARTMENT AND ENCOURAGED ALL OFFICERS TO EMULATE MADHUKAR SHETTY SIR DEDICATION
    user_AAJ KI DASTAK NEWS KARNATAKA
    AAJ KI DASTAK NEWS KARNATAKA
    Journalist Mysuru, Karnataka•
    21 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.