Shuru
Apke Nagar Ki App…
ಹನೂರು: ಕೊಳ್ಳೇಗಾಲ ರಸ್ತೆಯಲ್ಲಿ ಕೆಎಸ್ಆರ್ಟಿಸಿ ಬಸ್ ಮತ್ತು ಕಾರು ನಡುವೆ ಅಪಘಾತ – ಕಾರಿನ ಚಾಲಕ ಗಂಭೀರ ಗಾಯ ಹನೂರು: ಕೊಳ್ಳೇಗಾಲ ರಸ್ತೆಯಲ್ಲಿ ಕೆಎಸ್ಆರ್ಟಿಸಿ ಬಸ್ ಮತ್ತು ಕಾರು ನಡುವೆ ಅಪಘಾತ – ಕಾರಿನ ಚಾಲಕ ಗಂಭೀರ ಗಾಯ ಹನೂರು ಪಟ್ಟಣದ ಕೊಳ್ಳೇಗಾಲ ಮುಖ್ಯ ರಸ್ತೆಯಲ್ಲಿ ಕೆಎಸ್ಆರ್ಟಿಸಿ ಬಸ್ ಮತ್ತು ಕಾರು ನಡುವೆ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಮಂಗಲ ಗ್ರಾಮದ ದೊರೆ (33) ಗಂಭೀರ ಗಾಯಗೊಂಡಿದ್ದು, ಸ್ಥಳೀಯರು ಆಂಬುಲೆನ್ಸ್ ಮೂಲಕ ಕೊಳ್ಳೇಗಾಲ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಬಸ್ನಲ್ಲಿ ಪ್ರಯಾಣಿಸುತ್ತಿದ್ದವರು ಅಪಘಾತದಲ್ಲಿ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. ಹನೂರು ಪೊಲೀಸ್ ಇನ್ಸಪೆಕ್ಟರ್ ಆನಂದ್ ಮೂರ್ತಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾ
ಹನೂರು ನ್ಯೂಸ್ ಅಡ್ಡ
ಹನೂರು: ಕೊಳ್ಳೇಗಾಲ ರಸ್ತೆಯಲ್ಲಿ ಕೆಎಸ್ಆರ್ಟಿಸಿ ಬಸ್ ಮತ್ತು ಕಾರು ನಡುವೆ ಅಪಘಾತ – ಕಾರಿನ ಚಾಲಕ ಗಂಭೀರ ಗಾಯ ಹನೂರು: ಕೊಳ್ಳೇಗಾಲ ರಸ್ತೆಯಲ್ಲಿ ಕೆಎಸ್ಆರ್ಟಿಸಿ ಬಸ್ ಮತ್ತು ಕಾರು ನಡುವೆ ಅಪಘಾತ – ಕಾರಿನ ಚಾಲಕ ಗಂಭೀರ ಗಾಯ ಹನೂರು ಪಟ್ಟಣದ ಕೊಳ್ಳೇಗಾಲ ಮುಖ್ಯ ರಸ್ತೆಯಲ್ಲಿ ಕೆಎಸ್ಆರ್ಟಿಸಿ ಬಸ್ ಮತ್ತು ಕಾರು ನಡುವೆ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಮಂಗಲ ಗ್ರಾಮದ ದೊರೆ (33) ಗಂಭೀರ ಗಾಯಗೊಂಡಿದ್ದು, ಸ್ಥಳೀಯರು ಆಂಬುಲೆನ್ಸ್ ಮೂಲಕ ಕೊಳ್ಳೇಗಾಲ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಬಸ್ನಲ್ಲಿ ಪ್ರಯಾಣಿಸುತ್ತಿದ್ದವರು ಅಪಘಾತದಲ್ಲಿ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. ಹನೂರು ಪೊಲೀಸ್ ಇನ್ಸಪೆಕ್ಟರ್ ಆನಂದ್ ಮೂರ್ತಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾ
More news from ಕರ್ನಾಟಕ and nearby areas
- ಹನೂರು :ತಾಲೂಕಿನ ಚಿಕ್ಕ ತಿರುಪತಿ ಎಂದೇ ಖ್ಯಾತಿ ಪಡೆದಿರುವ ಬೂದೂಬಾಳು ಗುಡಿಹಟ್ಟಿ ವೆಂಕಟರಮಣಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಬೆಳಿಗ್ಗೆ 10:30 ರಲ್ಲಿ ವಿಜೃಂಭಣೆ ಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ಜರುಗಿತು. ಶ್ರೀ ವೆಂಕಟರಮಣ ಸ್ವಾಮಿಗೆ ಬೆಳ್ಳಿಗ್ಗೆ ಯಿಂದ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಶೇಷ ಪೂಜೆ ನೆರವೇರಿಸಿ ವೆಂಕಟರಮಣ ಸ್ವಾಮಿಯ ಮೂರ್ತಿಯನ್ನ ಸತ್ತಿಗೆ, ಸೂರಿಪಾನಿ ಹಾಗೂ ಮಂಗಳ ವಾದ್ಯದೊಂದಿಗೆ ದೇಗುಲದ ಸುತ್ತ ಪ್ರದಕ್ಷಿಣೆ ತೇರಿನಲ್ಲಿ ಕೂರಿಸಿ ತೇರಿನ ಮೇಲೆ( ಬಾನಂಗಳದಲ್ಲಿ ಗರುಡ ಪ್ರದಕ್ಷಿಣೆ ಹಾಕಿದ )ನಂತರ ರಥೋತ್ಸವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿತು. ವೇಳೆ ಭಕ್ತರು ಗೋವಿಂದಾ ಗೋವಿಂದಾ ಜಯಘೋಷವನ್ನು ಮೊಳಗಿಸಿ, ದವಸ ದಾನ್ಯ, ಹಣ್ಣು ಕಾಯಿ ಎಸೆದು ಭಕ್ತಿ ಭಾವ ಮೆರೆದರು. ಭಕ್ತರು ಸರದಿ ಸಾಲಿನಲ್ಲಿ ತೆರಳಿ ಹಣ್ಣು ಕಾಯಿ ನೀಡಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದು ಪುನೀತರಾದರು. ಶಾಸಕ ಎಂ ಆರ್ ಮಂಜುನಾಥ್ ರವರು ರಥೋತ್ಸವಕ್ಕೆ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದು, ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಬಿಗಿ ಬಂದೋಬಸ್ತ್:ಜಾತ್ರೇಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹನೂರು ಠಾಣಾ ಇನ್ಸ್ಪೆಕ್ಟರ್ ಆನಂದ್ ಮೂರ್ತಿ, ರಾಮಾಪುರ ಠಾಣಾ ಇನ್ಸ್ಪೆಕ್ಟರ್ ಚಿಕ್ಕರಾಜಶೇಟ್ಟಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಧಾರಮಾಧಿಕಾರಿ ಕೃಷ್ಣ ಪ್ಪ ಸ್ವಾಮಿಯಾರ್, , ಆದಿತ್ಯ ಸ್ವಾಮಿಯಾರ್,ತಹಸೀಲ್ದಾರ್ ಚೈತ್ರ,,ಕೊಳ್ಳೇಗಾಲ ಇ ಓ ಗುರುಶಾಂತಪ್ಪ, ಮಂಜುನಾಥ್ ಸ್ವಾಮಿಯಾರ್,ಮಧುಸೂಧನ್ ಸ್ವಾಮಿಯಾರ್,ಸೇರಿದಂತೆ ತಾಲೂಕಿನ ವಿವಿಧ ಕಡೆಗಳಿಂದ ಭಕ್ತರು ಹೆಚ್ಚಿನ ಸಂಖ್ಯೆ ಯಲ್ಲಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡರು. ಭಕ್ತರಿಂದ ಮಜ್ಜಿಗೆ ಪಾನಕ ಉಪಹಾರ ಗಳನ್ನು ವಿತರಣೆ ಮಾಡಿದ್ದು ವಿಶೇಷ ವಾಗಿ ಕಂಡು ಬಂದಿತು. ಇಂದು ಚಂದ್ರ ಗ್ರಹಣ ಇರುವುದರಿಂದ ಸಾಂಜೆ 4 ರ ವೇಳೆಗೆ ದೇವಾಲಯದ ಮುಚ್ಚುತ್ತದೆ ಎಂದು ದೇವಲಾಯದ ಮುಖ್ಯ ಸಿಬ್ಬಂದಿ ನವೀನ್ ತಿಳಿಸಿದರು.4
- ಬರ್ತ್ ಡೇ ಅಂದ್ರೆ ಪಾರ್ಟಿ,ಗುಂಡು ತುಂಡು ಮೋಜಿಮಸ್ತಿಯಲ್ಲಿ ಮುಳುಗುವ ಇಂದಿನ ಜನಾಂಗಕ್ಕೆ ಮೈಸೂರಿನ ಅರಿವು ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ಕಶ್ಯಪ್ ಮಾದರಿಯಾಗಿದ್ದಾರೆ.ರಸ್ತೆ ಉಬ್ಬುಗಳಿಗೆ ಸ್ವಂತ ಹಣದಿಂದ ಬಣ್ಣ ಬಳಿದು ಸರಳವಾಗಿ ಅರ್ಥಪೂರ್ಣವಾಗಿ ತಮ್ಮ ಜನ್ಮದಿನಾಚರಣೆ ಆಚರಿಸಿಕೊಂಡಿದ್ದಾರೆ.ಸಮಾಜಸೇವಕನ ಬರ್ತ್ ಡೇ ಆಚರಣೆ ಇತರರಿಗೆ ಮಾದರಿಯಾಗಿದೆ.ಕಳೆದ ವರ್ಷ ಶ್ರೀಕಾಂತ್ ಕಶ್ಯಪ್ ರವರು ತಮ್ಮ ಬರ್ತ್ ಡೇ ದಿನ ಚಾಮುಂಡಿಬೆಟ್ಟಕ್ಕೆ ತಮ್ಮ ವಾಹನದಲ್ಲಿ ತೆರಳುವಾಗ ಚಾಮುಂಡಿಪುರಂ ವೃತ್ತದ ಬಳಿ ಇರುವ ಹಂಪ್ ನಲ್ಲಿ ಆಯತಪ್ಪಿ ಬಿದ್ದು ಗಾಯಗೊಂಡಿದ್ದರು.ಈ ವರ್ಷ ತಮ್ಮ ಜನ್ಮದಿನಾಚರಣೆಯಂದು ಅದೇ ಹಂಪ್ ಗೆ ಬಣ್ಣ ಬಳಿದು ಸಾರ್ವಜನಿಕರಿಗೆ ಉಪಯೋಗವಾಗುವಂತೆ ಅರ್ಥಪೂರ್ಣವಾಗಿ ತಮ್ಮ ಸ್ನೇಹಿತರ ಜೊತೆ ಆಚರಿಸಿಕೊಂಡಿದ್ದಾರೆ.ಜನ್ಮದಿನಾಚರಣೆಗಳಂದು ಮೋಜು ಮಸ್ತಿ ಮಾಡುವ ಬದಲು ಇಂತಹ ಉಪಯೋಗಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಶ್ರೀಕಾಂತ್ ಕಶ್ಯಪ್ ಇತರರಿಗೆ ಮಾದರಿಯಾಗಿದ್ದಾರೆ.... ಈ ಸಂದರ್ಭದಲ್ಲಿ ಇವರಿಗೆ ಸಹಕರಿಸಿದ ಮಾಜಿನಗರ ಪಾಲಿಕಾ ಸದಸ್ಯರಾದ ಜಗದೀಶ್, ದೂರ ರಾಜಣ್ಣ, ಅಪೂರ್ವ ಸುರೇಶ್, ಜತ್ತಿ ಪ್ರಸಾದ್, ಸಂದೀಪ್ ಹಾಗೂ ಇನ್ನಿತರರು1
- ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್ ಸುಪ್ರೀಂ ಲೀಡರ್ ಅಲಿ ಖಮೆನಿ ಸಾವಿನ ಸುದ್ದಿ ಹಿನ್ನೆಲೆ ಪಿರಿಯಾಪಟ್ಟಣದಲ್ಲಿ ಶಿಯಾ ಮುಸ್ಲಿಂ ಸಮುದಾಯದಿಂದ ಮೌನ ಪ್ರತಿಭಟನೆ ನಡೆಯಿತು. ಮೇಣದಬತ್ತಿ ಬೆಳಗಿ, ಕಪ್ಪು ಉಡುಗೆ ಧರಿಸಿ ಭಾವಚಿತ್ರ ಹಿಡಿದು ಮೆರವಣಿಗೆ ನಡೆಸಿದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.“ಶಾಂತಿ ಮಂತ್ರ ಹೇಳುತ್ತಾ ದ್ವಂದ್ವ ನೀತಿ ಅನುಸರಿಸಿದ್ದಾರೆ” ಎಂದು ... ಪ್ರತಿಭಟನಾಕಾರರು ಹೇಳಿದರು.ಶಿಯಾ ಸಮುದಾಯದ ಮುಖಂಡರು ಧರಣಿಯಲ್ಲಿ ಭಾಗವಹಿಸಿದ್ದರು.1
- *ಭಾರತ ನಲ್ಲಿ ವೈರಲ್*1
- ಬಿಡದಿ ರೈಲ್ವೆ ನಿಲ್ದಾಣದಲ್ಲಿ ಎರಡು ಘಂಟೆ ತಡವಾಗಿ ಬಂದ ರೈಲು, ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿ, ರೈಲ್ವೆ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ, ಸಮರ್ಪಕ ಉತ್ತರ ನೀಡದ ರೈಲ್ವೆ ಅಧಿಕಾರಿಗಳು ಪೊಲೀಸರನ್ನು ಕರೆಸಿ ಗೊಂದಲ ಉಂಟು ಮಾಡಿದ್ದಾರೆ.1
- ಬೆಂಗಳೂರು: ಸುಬ್ರಮಣ್ಯನಗರದ ಗಾಯತ್ರಿನಗರದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಗುತ್ತಿಗೆದಾರ ರಮೇಶ್ ಬಾಬು ಅವರ ಪತ್ನಿ ಸವಿತಾ (53) ಸಾವನ್ನಪ್ಪಿದ್ದಾರೆ. ರಮೇಶ್ ಬಾಬು, ಅವರ ತಾಯಿ ಸಣ್ಣಮ್ಮ ಹಾಗೂ ಪುತ್ರ ಗಂಭೀರವಾಗಿ ಗಾಯಗೊಂಡಿದ್ದು, ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ಕು ಅಂತಸ್ತಿನ ಮನೆಯ 3ನೇ ಮಹಡಿಯ ಅಡುಗೆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ಪ್ರಜ್ಞೆ ತಪ್ಪಿದ್ದ ಮೂವರನ್ನು ರಕ್ಷಿಸಿದ್ದಾರೆ. ಮಲ್ಲೇಶ್ವರಂ ಎಸಿಪಿ ವೇಣುಗೋಪಾಲ್ ಹಾಗೂ ಸುಬ್ರಮಣ್ಯನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.1
- ದೇವರಾಜ್ ಅರಸು ರಸ್ತೆಯಲ್ಲಿ ಕಾಲಜ್ಞಾನಿ ಕೈವಾರ ತಾತಯ್ಯ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾಜಿ ಸಂಸದರಾದ ಪ್ರತಾಪ್ ಸಿಂಹ ರವರಿಗೆ ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಹೋಳಿ ಬಣ್ಣ ಬಳೆದು ಹೋಳಿ ಹಬ್ಬದ ಶುಭಾಶಯ ಕೋರಿದರು1
- *ಭಾರತ ನಲ್ಲಿ ವೈರಲ್*1
- ಕಾನೂನಿಗೆ ಹೆದರಿ ಓಡಿ ಹೋಗಿರುವ ಮುತ್ಯಾನ ಬೆಂಬಲಕ್ಕೆ ನಿಂತ ಸಚಿವ ಶರಣಗೌಡ ಪಾಟೀಲ್ ದರ್ಶನಾಪುರ, ಮುತ್ಯನದ್ದು ತಪ್ಪಿಲ್ಲ, ಅದನ್ನು ದೇಶಕ್ಕೆ ತೋರಿಸಿದ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳದ್ದು ತಪ್ಪು ಎಂದು ಹೇಳಿದ್ದಾರೆ1