ಗುಳೇದಗುಡ್ಡ: ಹಿಂದೂ ಸಮ್ಮೇಳನದ ಅಂಗವಾಗಿ ಹಿಂದೂ ಸಮ್ಮೇಳನ ಸಂಚಾಲನ ಸಮಿತಿ ಹಾಗೂ ಪಟ್ಟಣದ ಎಲ್ಲ ಹಿಂದೂ ಸಮಾಜಗಳ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಭವ್ಯ ಶೋಭಾಯಾತ್ರೆ ಭಾನುವಾರ ನಡೆಯಿತು. ಪಟ್ಟಣದ ಬಾದಾಮಿ ನಾಕಾದ ಹತ್ತಿರ ಶ್ರೀ ಚಿಕ್ಕರೇವಣಸಿದ್ದೇಶ್ವರ ಶಿವಶರಣರ ಮಠದಿಂದ ಮಧ್ಯಾಹ್ನ ಭಾರತಮಾತೆಯ ಭಾವಚಿತ್ರದೊಂದಿಗೆ ಆರಂಭಗೊಂಡ ಬೃಹತ್ ಶೋಭಾಯಾತ್ರೆಯಲ್ಲಿ ಕರಡಿ ಮಜಲು, ಭಜನಾ ಮಂಡಳಿ, ಡೊಳ್ಳು ಕುಣಿತ, ಗೊಂಬೆಗಳು, ಬಾಜಾ ಭಜಂತ್ರಿ, ಹಲಿಗೆ ಮೇಳ ಸೇರಿದಂತೆ ವಿವಿಧ ವಾದ್ಯಮೇಳಗಳು ಶೋಭಾಯಾತ್ರೆಗೆ ಕಳೆ ನೀಡಿದ್ದವು. ಕುಂಭಹೊತ್ತ ನೂರಾರು ಮಹಿಳೆಯರು ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು. ಶೋಭಾಯಾತ್ರೆಯಲ್ಲಿ ದೇವರ, ಶರಣರು ಹಾಗೂ ಸಂತರ ಭಾವಚಿತ್ರದೊಂದಿಗೆ ವಿವಿಧ ಸಮಾಜಗಳ ಬಾಂಧವರು ಭಾಗವಹಿಸಿದ್ದರು. ಕಿತ್ತೂರು ರಾಣಿ ಚೆನ್ನಮ್ಮ, ಸ್ವಾಮಿ ವಿವೇಕಾನಂದ, ಶ್ರೀರಾಮ, ಶ್ರೀ ರಾಘವೇಂದ್ರಸ್ವಾಮಿ, ಶಿವಾಜಿ ಸೇರಿದಂತೆ ಅನೇಕ ಮಹಾತ್ಮರ ವೇಷಧರಿಸಿದ ಮಕ್ಕಳು ಶೋಭಾಯಾತ್ರೆಯಲ್ಲಿ ಗಮನಸೆಳೆದರು. ಶೋಭಾಯಾತ್ರೆಯ ಅಂಗವಾಗಿ ಪಟ್ಟಣದ ವಿವಿಧೆಡೆ ಕೇಸರಿ ದ್ವಾರಗಳು, ಕೇಸರಿ ಧ್ವಜಗಳು, ಪರಪರಿಗಳಿಂದ ಅಲಂಕರಿಸಲಾಗಿತ್ತು. ಶಿವಶರಣ ಮಠದಿಂದ ಪ್ರಾರಂಭವಾದ ಭವ್ಯ ಶೋಭಾಯಾತ್ರೆ ಪಟ್ಟಣದ ಗಚ್ಚಿನಕಟ್ಟಿ, ಚೌಬಜಾರ, ಅರಳಿಕಟ್ಟಿ, ಪುರಸಭೆ, ಪವರಾಕ್ರಾಸ್ ಮೂಲಕ ಹಾಯ್ದು ಭಂಡಾರಿ ಕಾಲೇಜಿನ ಮೈದಾನ ತಲುಪಿತು. ಶೋಭಾಯಾತ್ರೆಯ ಉದ್ದಕ್ಕೂ ಭಾರತಮಾತಾಕೀ ಜೈ, ಜೈ ಶಿವಾಜಿ, ಜೈ ಭವಾನಿ ಎಂಬ ಘೋಷಣೆಗಳು ಮೊಳಗಿದವು. ಗುರುಸಿದ್ದೇಶ್ವರ ಮಠದ ಜ.ಶ್ರೀ. ಬಸವರಾಜ ಪಟ್ಟದಾರ್ಯ ಸ್ವಾಮೀಜಿ, ಅಮರೇಶ್ವರ ಮಠದ ಡಾ. ನೀಲಕಂಠ ಶಿವಾಚಾರ್ಯ ಸ್ವಾಮೀಜಿ, ಮರಡಿಮಠದ ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿ ಶೋಭಾಯಾತ್ರೆಯ ಸಾನಿಧ್ಯ ವಹಿಸಿ, ಗೋಮಾತೆಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಶೋಭಾಯಾತ್ರೆಯಲ್ಲಿ ಹಿಂದೂ ಸಮ್ಮೇಳನ ಸಂಚಾಲನ ಸಮಿತಿ ಅಧ್ಯಕ್ಷ ಅಶೋಕ ಹೆಗಡಿ, ಸಂಪತ್ತಕುಮಾರ ರಾಠಿ, ಅಮಾತೆಪ್ಪ ಕೊಪ್ಪಳ, ಮಾಜಿ ಶಾಸಕ ರಾಜಶೇಖರ ಶೀಲವಂತ, ರಂಗಪ್ಪ ಶೇಬಿನಕಟ್ಟಿ, ಪಿ.ಎನ್. ಪವಾರ, ಸಂಗಣ್ಣ ಹುನಗುಂದ, ಸಂಜು ಕಾರಕೂನ, ವಿಠ್ಠಲ ಪತ್ತಾರ, ಶಂಕ್ರಪ್ಪ ರೂಡಗಿ, ಮಲ್ಲಿಕಾರ್ಜುನ ಶೀಲವಂತ, ಪ್ರಭು ತಟ್ಟಿಮಠ, ಭುವನೇಶ ಪೂಜಾರ, ವಿಠ್ಠಲ ಶಿರೂರು, ಮಧುಸೂದನ ರಾಂದಡ, ಮುರಗೇಶ ರಾಜನಾಳ, ಅಪ್ಪು ಧಾರವಾಡ, ಶಿವಾನಂದ ಬಾದವಾಡಗಿ, ಆದಪ್ಪ ಕಲಬುರ್ಗಿ, ಮಹೇಶ ಸೂಳೇಭಾವಿ, ಈರಣ್ಣ ಬಂಡಿ, ಶಿವಾನಂದ ಬಡಿಗೇರ, ಬಸವರಾಜ ಕುಂಬಾರ, ರವಿ ಶೇಬಿನಕಟ್ಟಿ, ಈರಣ್ಣ ಬಂಡಿವಡ್ಡರ, ಪ್ರಶಾಂತ ಜವಳಿ, ಪುರುಷೋತ್ತಮ ರಾಠಿ, ಮಹಾದೇವ ಜಗತಾಪ, ಈರಣ್ಣ ಹಳ್ಳಿ, ಸಂತೋಷ ನಾಯನೇಗಲಿ, ಗಣೇಶ ಶೀಲವಂತ, ಪ್ರಧೀಪ ಕಂಚಾಣಿ, ರಾಮಣ್ಣ ಚಂದರಗಿ, ವಿಜಯಕುಮಾರ ಬೆಟಗೇರಿ, ಫಕಿರಪ್ಪ ತಳವಾರ, ಪಟ್ಟಣದ ಎಲ್ಲ ಸಮಾಜದ ಅಧ್ಯಕ್ಷರು, ಮುಖಂಡರು, ಯುವಕ ಮಿತ್ರರು ಮಹಿಳೆಯರು ಮತ್ತಿತರರು ಇದ್ದರು.
ಗುಳೇದಗುಡ್ಡ: ಹಿಂದೂ ಸಮ್ಮೇಳನದ ಅಂಗವಾಗಿ ಹಿಂದೂ ಸಮ್ಮೇಳನ ಸಂಚಾಲನ ಸಮಿತಿ ಹಾಗೂ ಪಟ್ಟಣದ ಎಲ್ಲ ಹಿಂದೂ ಸಮಾಜಗಳ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಭವ್ಯ ಶೋಭಾಯಾತ್ರೆ ಭಾನುವಾರ ನಡೆಯಿತು. ಪಟ್ಟಣದ ಬಾದಾಮಿ ನಾಕಾದ ಹತ್ತಿರ ಶ್ರೀ ಚಿಕ್ಕರೇವಣಸಿದ್ದೇಶ್ವರ ಶಿವಶರಣರ ಮಠದಿಂದ ಮಧ್ಯಾಹ್ನ ಭಾರತಮಾತೆಯ ಭಾವಚಿತ್ರದೊಂದಿಗೆ ಆರಂಭಗೊಂಡ ಬೃಹತ್ ಶೋಭಾಯಾತ್ರೆಯಲ್ಲಿ ಕರಡಿ ಮಜಲು, ಭಜನಾ ಮಂಡಳಿ, ಡೊಳ್ಳು ಕುಣಿತ, ಗೊಂಬೆಗಳು, ಬಾಜಾ ಭಜಂತ್ರಿ, ಹಲಿಗೆ ಮೇಳ ಸೇರಿದಂತೆ ವಿವಿಧ ವಾದ್ಯಮೇಳಗಳು ಶೋಭಾಯಾತ್ರೆಗೆ ಕಳೆ ನೀಡಿದ್ದವು. ಕುಂಭಹೊತ್ತ ನೂರಾರು ಮಹಿಳೆಯರು ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು. ಶೋಭಾಯಾತ್ರೆಯಲ್ಲಿ ದೇವರ, ಶರಣರು ಹಾಗೂ ಸಂತರ ಭಾವಚಿತ್ರದೊಂದಿಗೆ ವಿವಿಧ ಸಮಾಜಗಳ ಬಾಂಧವರು ಭಾಗವಹಿಸಿದ್ದರು. ಕಿತ್ತೂರು ರಾಣಿ ಚೆನ್ನಮ್ಮ, ಸ್ವಾಮಿ ವಿವೇಕಾನಂದ, ಶ್ರೀರಾಮ, ಶ್ರೀ ರಾಘವೇಂದ್ರಸ್ವಾಮಿ, ಶಿವಾಜಿ ಸೇರಿದಂತೆ ಅನೇಕ ಮಹಾತ್ಮರ ವೇಷಧರಿಸಿದ ಮಕ್ಕಳು ಶೋಭಾಯಾತ್ರೆಯಲ್ಲಿ ಗಮನಸೆಳೆದರು. ಶೋಭಾಯಾತ್ರೆಯ ಅಂಗವಾಗಿ ಪಟ್ಟಣದ ವಿವಿಧೆಡೆ ಕೇಸರಿ ದ್ವಾರಗಳು, ಕೇಸರಿ ಧ್ವಜಗಳು, ಪರಪರಿಗಳಿಂದ ಅಲಂಕರಿಸಲಾಗಿತ್ತು. ಶಿವಶರಣ ಮಠದಿಂದ ಪ್ರಾರಂಭವಾದ ಭವ್ಯ ಶೋಭಾಯಾತ್ರೆ ಪಟ್ಟಣದ ಗಚ್ಚಿನಕಟ್ಟಿ, ಚೌಬಜಾರ, ಅರಳಿಕಟ್ಟಿ, ಪುರಸಭೆ, ಪವರಾಕ್ರಾಸ್ ಮೂಲಕ ಹಾಯ್ದು ಭಂಡಾರಿ ಕಾಲೇಜಿನ ಮೈದಾನ ತಲುಪಿತು. ಶೋಭಾಯಾತ್ರೆಯ ಉದ್ದಕ್ಕೂ ಭಾರತಮಾತಾಕೀ ಜೈ, ಜೈ ಶಿವಾಜಿ, ಜೈ ಭವಾನಿ ಎಂಬ ಘೋಷಣೆಗಳು ಮೊಳಗಿದವು. ಗುರುಸಿದ್ದೇಶ್ವರ ಮಠದ ಜ.ಶ್ರೀ. ಬಸವರಾಜ ಪಟ್ಟದಾರ್ಯ ಸ್ವಾಮೀಜಿ, ಅಮರೇಶ್ವರ ಮಠದ ಡಾ. ನೀಲಕಂಠ ಶಿವಾಚಾರ್ಯ ಸ್ವಾಮೀಜಿ, ಮರಡಿಮಠದ ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿ ಶೋಭಾಯಾತ್ರೆಯ ಸಾನಿಧ್ಯ ವಹಿಸಿ, ಗೋಮಾತೆಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಶೋಭಾಯಾತ್ರೆಯಲ್ಲಿ ಹಿಂದೂ ಸಮ್ಮೇಳನ ಸಂಚಾಲನ ಸಮಿತಿ ಅಧ್ಯಕ್ಷ ಅಶೋಕ ಹೆಗಡಿ, ಸಂಪತ್ತಕುಮಾರ ರಾಠಿ, ಅಮಾತೆಪ್ಪ ಕೊಪ್ಪಳ, ಮಾಜಿ ಶಾಸಕ ರಾಜಶೇಖರ ಶೀಲವಂತ, ರಂಗಪ್ಪ ಶೇಬಿನಕಟ್ಟಿ, ಪಿ.ಎನ್. ಪವಾರ, ಸಂಗಣ್ಣ ಹುನಗುಂದ, ಸಂಜು ಕಾರಕೂನ, ವಿಠ್ಠಲ ಪತ್ತಾರ, ಶಂಕ್ರಪ್ಪ ರೂಡಗಿ, ಮಲ್ಲಿಕಾರ್ಜುನ ಶೀಲವಂತ, ಪ್ರಭು ತಟ್ಟಿಮಠ, ಭುವನೇಶ ಪೂಜಾರ, ವಿಠ್ಠಲ ಶಿರೂರು, ಮಧುಸೂದನ ರಾಂದಡ, ಮುರಗೇಶ ರಾಜನಾಳ, ಅಪ್ಪು ಧಾರವಾಡ, ಶಿವಾನಂದ ಬಾದವಾಡಗಿ, ಆದಪ್ಪ ಕಲಬುರ್ಗಿ, ಮಹೇಶ ಸೂಳೇಭಾವಿ, ಈರಣ್ಣ ಬಂಡಿ, ಶಿವಾನಂದ ಬಡಿಗೇರ, ಬಸವರಾಜ ಕುಂಬಾರ, ರವಿ ಶೇಬಿನಕಟ್ಟಿ, ಈರಣ್ಣ ಬಂಡಿವಡ್ಡರ, ಪ್ರಶಾಂತ ಜವಳಿ, ಪುರುಷೋತ್ತಮ ರಾಠಿ, ಮಹಾದೇವ ಜಗತಾಪ, ಈರಣ್ಣ ಹಳ್ಳಿ, ಸಂತೋಷ ನಾಯನೇಗಲಿ, ಗಣೇಶ ಶೀಲವಂತ, ಪ್ರಧೀಪ ಕಂಚಾಣಿ, ರಾಮಣ್ಣ ಚಂದರಗಿ, ವಿಜಯಕುಮಾರ ಬೆಟಗೇರಿ, ಫಕಿರಪ್ಪ ತಳವಾರ, ಪಟ್ಟಣದ ಎಲ್ಲ ಸಮಾಜದ ಅಧ್ಯಕ್ಷರು, ಮುಖಂಡರು, ಯುವಕ ಮಿತ್ರರು ಮಹಿಳೆಯರು ಮತ್ತಿತರರು ಇದ್ದರು.
- ಗುಳೇದಗುಡ್ಡ: ಹಿಂದೂ ಸಮ್ಮೇಳನದ ಅಂಗವಾಗಿ ಹಿಂದೂ ಸಮ್ಮೇಳನ ಸಂಚಾಲನ ಸಮಿತಿ ಹಾಗೂ ಪಟ್ಟಣದ ಎಲ್ಲ ಹಿಂದೂ ಸಮಾಜಗಳ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಭವ್ಯ ಶೋಭಾಯಾತ್ರೆ ಭಾನುವಾರ ನಡೆಯಿತು. ಪಟ್ಟಣದ ಬಾದಾಮಿ ನಾಕಾದ ಹತ್ತಿರ ಶ್ರೀ ಚಿಕ್ಕರೇವಣಸಿದ್ದೇಶ್ವರ ಶಿವಶರಣರ ಮಠದಿಂದ ಮಧ್ಯಾಹ್ನ ಭಾರತಮಾತೆಯ ಭಾವಚಿತ್ರದೊಂದಿಗೆ ಆರಂಭಗೊಂಡ ಬೃಹತ್ ಶೋಭಾಯಾತ್ರೆಯಲ್ಲಿ ಕರಡಿ ಮಜಲು, ಭಜನಾ ಮಂಡಳಿ, ಡೊಳ್ಳು ಕುಣಿತ, ಗೊಂಬೆಗಳು, ಬಾಜಾ ಭಜಂತ್ರಿ, ಹಲಿಗೆ ಮೇಳ ಸೇರಿದಂತೆ ವಿವಿಧ ವಾದ್ಯಮೇಳಗಳು ಶೋಭಾಯಾತ್ರೆಗೆ ಕಳೆ ನೀಡಿದ್ದವು. ಕುಂಭಹೊತ್ತ ನೂರಾರು ಮಹಿಳೆಯರು ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು. ಶೋಭಾಯಾತ್ರೆಯಲ್ಲಿ ದೇವರ, ಶರಣರು ಹಾಗೂ ಸಂತರ ಭಾವಚಿತ್ರದೊಂದಿಗೆ ವಿವಿಧ ಸಮಾಜಗಳ ಬಾಂಧವರು ಭಾಗವಹಿಸಿದ್ದರು. ಕಿತ್ತೂರು ರಾಣಿ ಚೆನ್ನಮ್ಮ, ಸ್ವಾಮಿ ವಿವೇಕಾನಂದ, ಶ್ರೀರಾಮ, ಶ್ರೀ ರಾಘವೇಂದ್ರಸ್ವಾಮಿ, ಶಿವಾಜಿ ಸೇರಿದಂತೆ ಅನೇಕ ಮಹಾತ್ಮರ ವೇಷಧರಿಸಿದ ಮಕ್ಕಳು ಶೋಭಾಯಾತ್ರೆಯಲ್ಲಿ ಗಮನಸೆಳೆದರು. ಶೋಭಾಯಾತ್ರೆಯ ಅಂಗವಾಗಿ ಪಟ್ಟಣದ ವಿವಿಧೆಡೆ ಕೇಸರಿ ದ್ವಾರಗಳು, ಕೇಸರಿ ಧ್ವಜಗಳು, ಪರಪರಿಗಳಿಂದ ಅಲಂಕರಿಸಲಾಗಿತ್ತು. ಶಿವಶರಣ ಮಠದಿಂದ ಪ್ರಾರಂಭವಾದ ಭವ್ಯ ಶೋಭಾಯಾತ್ರೆ ಪಟ್ಟಣದ ಗಚ್ಚಿನಕಟ್ಟಿ, ಚೌಬಜಾರ, ಅರಳಿಕಟ್ಟಿ, ಪುರಸಭೆ, ಪವರಾಕ್ರಾಸ್ ಮೂಲಕ ಹಾಯ್ದು ಭಂಡಾರಿ ಕಾಲೇಜಿನ ಮೈದಾನ ತಲುಪಿತು. ಶೋಭಾಯಾತ್ರೆಯ ಉದ್ದಕ್ಕೂ ಭಾರತಮಾತಾಕೀ ಜೈ, ಜೈ ಶಿವಾಜಿ, ಜೈ ಭವಾನಿ ಎಂಬ ಘೋಷಣೆಗಳು ಮೊಳಗಿದವು. ಗುರುಸಿದ್ದೇಶ್ವರ ಮಠದ ಜ.ಶ್ರೀ. ಬಸವರಾಜ ಪಟ್ಟದಾರ್ಯ ಸ್ವಾಮೀಜಿ, ಅಮರೇಶ್ವರ ಮಠದ ಡಾ. ನೀಲಕಂಠ ಶಿವಾಚಾರ್ಯ ಸ್ವಾಮೀಜಿ, ಮರಡಿಮಠದ ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿ ಶೋಭಾಯಾತ್ರೆಯ ಸಾನಿಧ್ಯ ವಹಿಸಿ, ಗೋಮಾತೆಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಶೋಭಾಯಾತ್ರೆಯಲ್ಲಿ ಹಿಂದೂ ಸಮ್ಮೇಳನ ಸಂಚಾಲನ ಸಮಿತಿ ಅಧ್ಯಕ್ಷ ಅಶೋಕ ಹೆಗಡಿ, ಸಂಪತ್ತಕುಮಾರ ರಾಠಿ, ಅಮಾತೆಪ್ಪ ಕೊಪ್ಪಳ, ಮಾಜಿ ಶಾಸಕ ರಾಜಶೇಖರ ಶೀಲವಂತ, ರಂಗಪ್ಪ ಶೇಬಿನಕಟ್ಟಿ, ಪಿ.ಎನ್. ಪವಾರ, ಸಂಗಣ್ಣ ಹುನಗುಂದ, ಸಂಜು ಕಾರಕೂನ, ವಿಠ್ಠಲ ಪತ್ತಾರ, ಶಂಕ್ರಪ್ಪ ರೂಡಗಿ, ಮಲ್ಲಿಕಾರ್ಜುನ ಶೀಲವಂತ, ಪ್ರಭು ತಟ್ಟಿಮಠ, ಭುವನೇಶ ಪೂಜಾರ, ವಿಠ್ಠಲ ಶಿರೂರು, ಮಧುಸೂದನ ರಾಂದಡ, ಮುರಗೇಶ ರಾಜನಾಳ, ಅಪ್ಪು ಧಾರವಾಡ, ಶಿವಾನಂದ ಬಾದವಾಡಗಿ, ಆದಪ್ಪ ಕಲಬುರ್ಗಿ, ಮಹೇಶ ಸೂಳೇಭಾವಿ, ಈರಣ್ಣ ಬಂಡಿ, ಶಿವಾನಂದ ಬಡಿಗೇರ, ಬಸವರಾಜ ಕುಂಬಾರ, ರವಿ ಶೇಬಿನಕಟ್ಟಿ, ಈರಣ್ಣ ಬಂಡಿವಡ್ಡರ, ಪ್ರಶಾಂತ ಜವಳಿ, ಪುರುಷೋತ್ತಮ ರಾಠಿ, ಮಹಾದೇವ ಜಗತಾಪ, ಈರಣ್ಣ ಹಳ್ಳಿ, ಸಂತೋಷ ನಾಯನೇಗಲಿ, ಗಣೇಶ ಶೀಲವಂತ, ಪ್ರಧೀಪ ಕಂಚಾಣಿ, ರಾಮಣ್ಣ ಚಂದರಗಿ, ವಿಜಯಕುಮಾರ ಬೆಟಗೇರಿ, ಫಕಿರಪ್ಪ ತಳವಾರ, ಪಟ್ಟಣದ ಎಲ್ಲ ಸಮಾಜದ ಅಧ್ಯಕ್ಷರು, ಮುಖಂಡರು, ಯುವಕ ಮಿತ್ರರು ಮಹಿಳೆಯರು ಮತ್ತಿತರರು ಇದ್ದರು.1
- ಬೀಳಗಿಯಲ್ಲಿ ಗ್ಯಾಸ್ ಸಿಲಿಂಡರ್ ಅಭಾವದ ಆತಂಕ ಹೆಚ್ಚಾಗಿದೆ. ಮಧ್ಯಪ್ರಾಚ್ಯದಲ್ಲಿನ ಯುದ್ಧ ಪರಿಸ್ಥಿತಿಯಿಂದ ಅನಿಲ ಕೊರತೆ ಉಂಟಾಗಬಹುದು ಎಂಬ ವದಂತಿಗಳ ಹಿನ್ನೆಲೆ ಜನರು ಗ್ಯಾಸ್ ಏಜೆನ್ಸಿಗಳ ಮುಂದೆ ಸೇರಿ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಇಂದು ಬೆಳಗ್ಗೆಯೇ HP ಗ್ಯಾಸ್ ಏಜೆನ್ಸಿ ಮುಂದೆ ಜನರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ನಗರದಲ್ಲಿನ ಬಾಡಗಂಡಿ ರಸ್ತೆಯಲ್ಲಿರುವ ಗ್ಯಾಸ್ ಏಜೆನ್ಸಿಯ ಬಾಗಿಲು ತೆರೆಯುವ ಮೊದಲುಲೇ ಅನೇಕರು ಖಾಲಿ ಸಿಲಿಂಡರ್ಗಳನ್ನು ತಂದು ಸರದಿ ಸಾಲಿನಲ್ಲಿ ನಿಂತಿದ್ದರು. ಸರ್ವರ್ ಸಮಸ್ಯೆಯಿಂದಾಗಿ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಆಗುತ್ತಿಲ್ಲ ಎಂದು ಗ್ರಾಹಕರು ಆರೋಪಿಸಿದ್ದಾರೆ. ಇದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ. ಮುಂದೆ ಸಿಲಿಂಡರ್ ಸಿಗದಿರಬಹುದು ಎಂಬ ಭಯದಿಂದ ಹಲವರು ನೇರವಾಗಿ ಗ್ಯಾಸ್ ಏಜೆನ್ಸಿಗೆ ಬಂದು ಸಿಲಿಂಡರ್ ಕೇಳಿದ್ದಾರೆ. ಆದರೆ, ಬುಕ್ಕಿಂಗ್ ಮಾಡಿದ ಗ್ರಾಹಕರಿಗೆ ಮಾತ್ರ ಸಿಲಿಂಡರ್ ನೀಡಲಾಗುತ್ತದೆ ಎಂದು ಗ್ಯಾಸ್ ಏಜೆನ್ಸಿ ಸಿಬ್ಬಂದಿ ತಿಳಿಸಿದ್ದಾರೆ. ಇದರಿಂದ ಕೆಲ ಸಮಯ ಗ್ರಾಹಕರು ಮತ್ತು ಸಿಬ್ಬಂದಿ ನಡುವೆ ವಾಗ್ವಾದವೂ ನಡೆದಿದೆ. ತಮಗೆ ಸಿಲಿಂಡರ್ ಸಿಗದಿದ್ದಕ್ಕೆ ಆಕ್ರೋಶಗೊಂಡ ಗ್ರಾಹಕರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಪರಿಸ್ಥಿತಿ ಶಾಂತಗೊಳಿಸಲು ಏಜೆನ್ಸಿ ಸಿಬ್ಬಂದಿ ಹರಸಾಹಸ ಪಟ್ಟರು. ಒಟ್ಟಿನಲ್ಲಿ ಗ್ಯಾಸ್ ಸಿಲಿಂಡರ್ ಕುರಿತ ವದಂತಿಗಳು ಜನರಲ್ಲಿ ಆತಂಕ ಮೂಡಿಸಿದ್ದು, ಸರಿಯಾದ ಮಾಹಿತಿ ನೀಡುವಂತೆ ಜನರು ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯವೇನು? ಕಾಮೆಂಟ್ ಮಾಡಿ ತಿಳಿಸಿ. ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿ1
- ಬಾಗಲಕೋಟೆ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಯ ಶಂಕುಸ್ಥಾಪನೆ ಜೊತೆಗೆ ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಹಂತ–3ರಡಿ ಭೂಸ್ವಾಧೀನಗೊಳ್ಳುವ ಜಮೀನುಗಳಿಗೆ ಒಪ್ಪಂದದ ದರದಂತೆ ಪರಿಹಾರ ವಿತರಣೆಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ಇದು ಸಮಾಜದ ಋಣ ತೀರಿಸುವ ಕಾರ್ಯಕ್ರಮ. ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಬಲಿಷ್ಠ ಸರ್ಕಾರಕ್ಕೆ ಅವಕಾಶ ನೀಡಿದ ಜನರ ಋಣ ತೀರಿಸಲು ಸರ್ಕಾರ ಸಂಕಲ್ಪ ಮಾಡಿದೆ,” ಎಂದು ಹೇಳಿದರು. ಯುಕೆಪಿ ಮೂರನೇ ಹಂತದ ಯೋಜನೆಗೆ 15 ವರ್ಷಗಳ ಹಿಂದೆ ನ್ಯಾಯಾಲಯದ ಆದೇಶ ಬಂದಿದ್ದರೂ ಅದು ಜಾರಿಯಾಗಿರಲಿಲ್ಲ. ಭೂಸಂತ್ರಸ್ತ ರೈತರಿಗೆ ಪರಿಹಾರ ನೀಡುವಂತೆ ಸ್ಥಳೀಯರು ಒತ್ತಡ ಹಾಕಿದ ಹಿನ್ನೆಲೆಯಲ್ಲಿ ಇದೀಗ 1.33 ಲಕ್ಷ ಎಕರೆ ಜಮೀನಿಗೆ ಪರಿಹಾರ ನೀಡಲು ಸರ್ಕಾರ ತೀರ್ಮಾನಿಸಿದೆ ಎಂದು ತಿಳಿಸಿದರು.1
- ಬಾಗಲಕೋಟ ಜಿಲ್ಲೆಯ ಇಳಕಲ್ ನಗರದಲ್ಲಿ ಮಾರ್ಚ ೧೫ ರವಿವಾರ ಹಿಂದೂ ಸೇವಾ ಟ್ರಸ್ ವತಿಯಿಂದ ಏರ್ಪಡಿಸಿರುವ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಹಾಗೂ ಭವ್ಯ ಶೋಭಾಯಾತ್ರೆ ಹಿನ್ನಲೆ ನಗರದ ತುಂಬೆಲ್ಲಾ ಕೇಸರಿ ಧ್ವಜಗಳು, ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಗಳು, ಶುಭಾಶಯ ಬ್ಯಾನರ್ಗಳ ಜೋರಾಗಿವೆ. ಶಿವಾಜಿ ಜಯಂತಿ ಹಿನ್ನಲೆ ಇಳಕಲ್ಲ ನಗರ ಸಂಪೂರ್ಣ ಕೇಸರಿಯಮಯಾಗಿದೆ.1
- Post by Sharanugouda Patil1
- Post by @april14news1
- ಮಾ.15: ಅರಸೀಕೆರೆ ತಾಲೂಕು, ಜಾವಗಲ್ ಹೋಬಳಿ ಗೇರುಮರ ಗ್ರಾಮದ ಶ್ರೀ ಚನ್ನಬಸವೇಶ್ವರ ಇಂಗ್ಲಿಷ್ ಹೈಯರ್ ಪ್ರೈಮರಿ ಸ್ಕೂಲ್ ಇಲ್ಲಿ ದಿನಾಂಕ 11.03.2026ರಂದು ಅದ್ದೂರಿಯಾಗಿ ತಂದೆ ತಾಯಿಯ ಪಾದಪೂಜೆಯೊಂದಿಗೆ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಸುಮಾರು 250 ತಂದೆ ತಾಯಂದಿರಿಗೆ ಅವರ ಮಕ್ಕಳಿಂದ ಪಾದಪೂಜೆ ಮಾಡಿ, ಗುರುಗಳಿಗೆ ಹೂ ಪುಷ್ಪಗಳೊಂದಿಗೆ ವಂದನೆಯನ್ನು ಸಲ್ಲಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಕಾರ್ಯದರ್ಶಿಗಳಾದ ವಿನಯ್ ಪಾಟೀಲ್ ರವರು ವಹಿಸಿದ್ದರು. ಇಂದಿನ ದಿನಮಾನಗಳಲ್ಲಿ ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ ಎಲ್ಲವನ್ನು ಮರೆತು ಹೋಗುತ್ತಿದ್ದಾರೆಂದು ಹೇಳಿ ತಂದೆ ತಾಯಿಗಳಾದ ತಾವುಗಳು ಮಕ್ಕಳಿಗೆ ಮೊಬೈಲನ್ನು ಕೊಡದೆ ಕಥೆ ಕದಂಬರಿ, ಚಿತ್ರಕಲೆ ಇತರೆ ಚಟುವಟಿಕೆಗಳಲ್ಲಿ ತಮ್ಮ ಜೊತೆ ತೊಡಗಿಸಿಕೊಳ್ಳಬೇಕೆಂದು ಈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಅದರ ಜೊತೆ ಪಾಲಕ ಪೋಷಕರ ಜವಾಬ್ದಾರಿಗಳು ಅವರ ಪಾತ್ರಗಳು ಶಾಲೆ ಮತ್ತು ಮಗು, ಪಾಲಕ ಪೋಷಕರು ಇವರ ನಡುವಿನ ಅವಿನಾಭಾವ ಸಂಬಂಧಗಳ ಬಗ್ಗೆ ತಿಳಿಸಿಕೊಟ್ಟರು. ಪಾಲಕ ಪೋಷಕ ಸಲಹಾ ಸಮಿತಿಯ ಅಧ್ಯಕ್ಷರು ಕಾರ್ಯದರ್ಶಿಗಳು ಕೂಡ ಈ ಒಂದು ಕಾರ್ಯಕ್ರಮದಲ್ಲಿ ಉಪಸ್ಥಿಸ್ಥಿತರಿದ್ದರು. ಈ ಶಾಲೆಯ ಮುಖ್ಯೋಪಾಧ್ಯಾಯನಿ ಸರೋಜಮ್ಮ, ಶಿಕ್ಷಕಿಯರಾದ ಶುಭ, ಶೋಭಾ, ಗಗನ,ಸುಧಾ, ಸುಪ್ರಿಯಾ ಪಾಟೀಲ್ ಶಿಕ್ಷಕಿಯ ತರ ಸಿಬ್ಬಂದಿಯವರು ರಾಜಣ್ಣ, ರಂಗಸ್ವಾಮಿ ಮತ್ತು ರತ್ನಮ್ಮ ಈ ಕಾರ್ಯಕ್ರಮ ಯಶಸ್ವಿಯಾಗಲಿಕ್ಕೆ ಸಹಕಾರ ನೀಡಿದರು. ಈ ಕಾರ್ಯಕ್ರಮದ ನಿರೂಪಣೆಯನ್ನು ಶಾಲೆಯ ಶಿಕ್ಷಕಿಯರಾದ ಸುಪ್ರಿಯಾ ರವರು ಮಾಡಿದರು. ಶಾಲೆಯ ಮಕ್ಕಳು ವಚನಗಳನ್ನು ಹೇಳುವುದರೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.1
- Post by @april14news1