Shuru
Apke Nagar Ki App…
ದಾವಣಗೆರೆ : ಜೆಡಿಎಸ್ ನಾಯಕನನ್ನು ಭೇಟಿ ಮಾಡಿದ ಬಿಜೆಪಿ ಅಭ್ಯರ್ಥಿ .ದಾವಣಗೆರೆ : ಎಸ್ಟಿ ಮೋರ್ಚಾ ಶ್ರೀನಿವಾಸ ದಾಸಕರಿಯಪ್ಪ ಟಿಕೆಟ್ ಸಿಕ್ಕ ಬಳಿಕ ಜೆಡಿಎಸ್ ನಾಯಕ, ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ನ್ನು ಸನ್ಮಾನಿಸಿದರು. ಈ ವೇಳೆ ದಕ್ಷಿಣದಲ್ಲಿ ಗೆಲ್ಲಲು ಸಹಕಾರ ನೀಡುವಂತೆ ಕೋರಿದರು
Nandheesh kumar ac
ದಾವಣಗೆರೆ : ಜೆಡಿಎಸ್ ನಾಯಕನನ್ನು ಭೇಟಿ ಮಾಡಿದ ಬಿಜೆಪಿ ಅಭ್ಯರ್ಥಿ .ದಾವಣಗೆರೆ : ಎಸ್ಟಿ ಮೋರ್ಚಾ ಶ್ರೀನಿವಾಸ ದಾಸಕರಿಯಪ್ಪ ಟಿಕೆಟ್ ಸಿಕ್ಕ ಬಳಿಕ ಜೆಡಿಎಸ್ ನಾಯಕ, ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ನ್ನು ಸನ್ಮಾನಿಸಿದರು. ಈ ವೇಳೆ ದಕ್ಷಿಣದಲ್ಲಿ ಗೆಲ್ಲಲು ಸಹಕಾರ ನೀಡುವಂತೆ ಕೋರಿದರು
More news from ಕರ್ನಾಟಕ and nearby areas
- .ದಾವಣಗೆರೆ : ಎಸ್ಟಿ ಮೋರ್ಚಾ ಶ್ರೀನಿವಾಸ ದಾಸಕರಿಯಪ್ಪ ಟಿಕೆಟ್ ಸಿಕ್ಕ ಬಳಿಕ ಜೆಡಿಎಸ್ ನಾಯಕ, ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ನ್ನು ಸನ್ಮಾನಿಸಿದರು. ಈ ವೇಳೆ ದಕ್ಷಿಣದಲ್ಲಿ ಗೆಲ್ಲಲು ಸಹಕಾರ ನೀಡುವಂತೆ ಕೋರಿದರು1
- ಹಲವು ಕಡೆ ಇಸ್ಪೀಟ್ ಅಡ್ಡೆಗಳ ಮೇಲೆ ದಾಳಿ 17 ಪ್ರಕರಣ ದಾಖಲು 58 ಜನರ ಬಂಧನ. ಚಳ್ಳಕೆರೆ: :ಯುಗಾದಿ ಹಬ್ಬದ ನೆಪದಲ್ಲಿ ಹಲವು ಕಡೆ ಗುಂಪು ಕಟ್ಟಿಕೊಂಡು ಇಸ್ಪೀಟ್ ಹಾಡುತ್ತಿದ್ದ ಅಡ್ಡಗಳ ಮೇಲೆ ಚಳ್ಳಕೆರೆ ಪೊಲೀಸರಿಂದ ದಾಳಿ ಮಾಡಲಾಗಿದ್ದು ಇಲ್ಲಿಯವರೆಗ 58 ಮಂದಿಯನ್ನ ಬಂಧಸಿ ಅವರಿ 85.390. ನಗದು ವಶಕ್ಕೆ ಪಡೆದು 58 ಜನರನ್ನ ಬಂಧಿಸಲಾಗಿದೆ. ಯುಗಾದಿ ಹಬ್ಬದ ಮೊದಲನೇ ದಿನವೇ ಕೆಲವು ಕಡೆ ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಕಟ್ಟಿಕೊಂಡು ಇಸ್ಪೀಟ್ ಹಾಡುತ್ತಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಎಸ್ ಪಿ ರಂಜತ್ ಕುಮಾರ್ ಬಂಡಾರು ಹಾಗೂ ಚಳ್ಳಕೆರೆ ಡಿವೈಎಸ್ಪಿ ಎಂಜಿ. ಸತ್ಯನಾರಾಯಣರಾವ್ ಇವರ ಮಾರ್ಗದರ್ಶನದಲ್ಲಿ ಚಳ್ಳಕೆರೆ ಪೊಲೀಸ್ ಇನ್ಸ್ಪೆಕ್ಟರ್ ಕೆ. ಕುಮಾರ್ ಇವರ ನೇತೃತ್ವದ ತಂಡ ಚಳ್ಳಕೆರೆ ತಾಲೂಕಿನ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಇಸ್ಪೀಟ್ ಅಡ್ಡೆಗಳ ಮೇಲೆ ದಾಳಿ ಮಾಡಲಾಗಿದ್ದು. ಇಲ್ಲಿಯವರೆಗೆ 85 ಜನರನ್ನ ಬಂಧಿಸಿ ಅವರಿಂದ 85,390 ರೂ ನಗದು ವರ್ಷಕ್ಕೆ ಪಡೆದು 17 ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.. ಈ ದಾಳಿ ವೇಳೆ ಪೋಲಿಸ್ ಇನ್ಸ್ಪೆಕ್ಟರ್ ಕೆ ಕುಮಾರ್, ಪಿಎಸ್ ಐ ಗಳಾದ ವಿರೇಶ ಧರಪ್ಪ ಬಳಪ ದೊಡ್ಡಮನಿ. ಪೊಲೀಸ್ ಸಿಬ್ಬಂದಿಗಳು ಇದ್ದರು..1
- ಬಾರಿ ಗಾಳಿ-ಮಳೆಗೆ ಸೂರನಹಳ್ಳಿ ಗ್ರಾಮದಲ್ಲಿ ಹಾಗಲಕಾಯಿ ಫಸಲು ನೆಲಕಚ್ಚಿ ರೈತನಿಗೆ ಅಪಾರ ನಷ್ಟ ಉಂಟಾಗಿದೆ. ಚಳ್ಳಕೆರೆ ತಾಲೂಕಿನ ಸೂರನಹಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಗಾಳಿ-ಮಳೆಯಿಂದ ರೈತ ನರಸಿಂಹಪ್ಪ ಅವರ ತೋಟದಲ್ಲಿ ಬೆಳೆದಿದ್ದ ಹಾಗಲಕಾಯಿ ಬೆಳೆ ಸಂಪೂರ್ಣವಾಗಿ ನೆಲಕಚ್ಚಿ ಅಪಾರ ನಷ್ಟ ಉಂಟಾಗಿದೆ.1
- ಶಿವಮೊಗ್ಗ: ನಗರದ ಉಷಾ ನರ್ಸಿಂಗ್ ಹೋಂ ಬಳಿ ಬ್ರೀಝಾ ಕಾರು ಮತ್ತು ಖಾಸಗಿ ಅಂಬ್ಯೂಲೆನ್ಸ್ ವಾಹನಗಳ ನಡುವೆ ಉಂಟಾದ ಡಿಕ್ಕಿಯಲ್ಲಿ ಬ್ರೀಝಾ ಕಾರು ಮೂರು ಪಲ್ಟಿ ಹೊಡೆದು ಯಥಾ ಸ್ಥಿತಿಯಲ್ಲಿ ನಿಂತ ಘಟನೆ ಇಂದು ಮದ್ಯಾಹ್ನ ನಡೆದಿದೆ. ಸೊರಬ ಕಡೆಯಿಂದ ಬಂದ ಅಂಬ್ಯೂಲೆನ್ಸ್ ವಾಹನ ಕಾಶೀಪುರದಿಂದ ಹನಸವಾಡಿಗೆ ಹೋಗುವಾಗ ಉಷಾ ನರ್ಸಿಂಗ್ ಹೋಂ ಬಳಿ ಬ್ರೀಝಾ ಕಾರಿಗೆ ಡಿಕ್ಕಿ ಹೊಡೆದಿದೆ. ಕಾಲಿನಲ್ಲಿ ಸುರೇಶ್, ದೀಪಾ (14) ಮಗು ಹಾಗೂ ಕಿಶನ್ ಎಂಬ 74 ವರ್ಷದ ವೃದ್ಧರಿದ್ದರು. ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ. ಕಾರು ಪಲ್ಟಿ ಹೊಡೆದ ಪರಿಣಾಮ ಸಣ್ಣಪುಟ್ಟ ಗಾಯಗಳಾಗಿವೆ. ಕಾರಿನ ಹಿಂದಿನ ಗ್ಲಾಸ್ ಪುಡಿ ಪುಡಿಯಾಗಿದೆ. ನಾಲ್ವರನ್ನ ಉಷಾ ನರ್ಸಿಂಗ್ ಹೋಂ ನಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದರೆ ಅಂಬ್ಯೂಲೆನ್ಸ್ ಚಾಲಕ ಸಾವಂತ್ ಗೆ ಕಾಲು ಮುರಿದಿದೆ. ತಕ್ಷಣವೇ ಮೂವರನ್ನ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪೂರ್ವ ಸಂಚಾರಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.1
- *ಯುಗಾದಿ–ರಂಜಾನ್: ಸೌಹಾರ್ದತೆಯ ಸುವರ್ಣ ಸಂಧಿ* ಭಾರತ ದೇಶದ ಸಾಂಸ್ಕೃತಿಕ ವೈವಿಧ್ಯತೆ ವಿಶ್ವದಲ್ಲೇ ಅಪರೂಪದದ್ದು. ಇಲ್ಲಿ ಹಬ್ಬಗಳು ಕೇವಲ ಆಚರಣೆಗಳಷ್ಟೇ ಅಲ್ಲ, ಅವು ಮಾನವೀಯ ಮೌಲ್ಯಗಳನ್ನು, ಪರಸ್ಪರ ಪ್ರೀತಿ ಮತ್ತು ಸೌಹಾರ್ದತೆಯನ್ನು ಪ್ರತಿಬಿಂಬಿಸುವ ಪವಿತ್ರ ಸಂದರ್ಭಗಳಾಗಿವೆ. ಈ ಸಂದರ್ಭದಲ್ಲಿ *“ಯುಗಾದಿ”ಯ ಹೊಸತನ ಮತ್ತು “ರಂಜಾನ್”ನ ಪವಿತ್ರತೆ* ಒಂದೇ ಸಮಯದಲ್ಲಿ ಆಗಮಿಸುವುದು ನಿಜಕ್ಕೂ ವಿಶೇಷವಾದ ಸಂಗತಿ. ಯುಗಾದಿ ಹೊಸ ವರ್ಷದ ಆರಂಭ. ಇದು ಹೊಸ ಕನಸುಗಳು, ಹೊಸ ನಿರೀಕ್ಷೆಗಳು ಮತ್ತು ಹೊಸ ದಾರಿಗಳ ಸಂಕೇತ. *ಬೇವು-ಬೆಲ್ಲದ* ರುಚಿಯಂತೆ ಜೀವನದ ಸುಖ-ದುಃಖಗಳನ್ನು ಸಮಬಾಳುವ ಪಾಠವನ್ನು ಇದು ನಮಗೆ ಕಲಿಸುತ್ತದೆ. ಮತ್ತೊಂದೆಡೆ *ರಂಜಾನ್ ತಿಂಗಳು ಶಾಂತಿ, ಸಹನೆ,* ನಿಯಮ ಮತ್ತು ದಾನಧರ್ಮದ ಮಹತ್ವವನ್ನು ಸಾರುತ್ತದೆ. ಉಪವಾಸದ ಮೂಲಕ ಮನಸ್ಸನ್ನು ಶುದ್ಧಗೊಳಿಸಿ, ಬಡವರ ಸಂಕಷ್ಟವನ್ನು ಅರಿಯುವ ಆತ್ಮಸಾಕ್ಷಾತ್ಕಾರವನ್ನು ನೀಡುತ್ತದೆ. ಈ ಎರಡು ಹಬ್ಬಗಳು ಒಂದೇ ಸಮಯದಲ್ಲಿ ಬಂದಾಗ, ಅದು ಕೇವಲ ಕಾಲಸಮ್ಮಿಲನವಲ್ಲ -ಅದು ಹೃದಯಗಳ ಏಕತೆಯ ಸಂಕೇತ. ಯುಗಾದಿ ನಮ್ಮ ಜೀವನದಲ್ಲಿ ಹೊಸ ಬೆಳಕನ್ನು ತರಲಿ, ರಂಜಾನ್ ನಮ್ಮ ಹೃದಯಗಳಲ್ಲಿ ಶಾಂತಿ ಮತ್ತು ಕರುಣೆಯ ದೀಪವನ್ನು ಬೆಳಗಲಿ. ಇವುಗಳು ಒಂದಾಗಿ ಬಂದಾಗ ಸಮಾಜದಲ್ಲಿ ಸೌಹಾರ್ದತೆ, ಸಹೋದರತ್ವ ಮತ್ತು ಪರಸ್ಪರ ಗೌರವದ ಸಂದೇಶವನ್ನು ಇನ್ನಷ್ಟು ಬಲಪಡಿಸುತ್ತವೆ. ಇಂತಹ ಪವಿತ್ರ ಸಂದರ್ಭದಲ್ಲಿ ನಾವು ಎಲ್ಲರೂ ಧರ್ಮ, ಜಾತಿ ಬೇಧಗಳನ್ನು ಮರೆತು, ಮಾನವೀಯತೆಯನ್ನು ಅಗ್ರಸ್ಥಾನದಲ್ಲಿ ಇಟ್ಟು ಬದುಕಬೇಕು. ನಮ್ಮ ಸುತ್ತಲಿನ ಜನರೊಂದಿಗೆ ಪ್ರೀತಿ ಹಂಚಿಕೊಂಡು, ಒಗ್ಗಟ್ಟಿನ ಜೀವನವನ್ನು ಸಾಗಿಸುವ ಸಂಕಲ್ಪ ಮಾಡೋಣ. *ಯುಗಾದಿ ಮತ್ತು ರಂಜಾನ್* ಹಬ್ಬಗಳ ಈ ಸುಸಂದರ್ಭವು ನಿಮ್ಮ ಜೀವನದಲ್ಲಿ ಶಾಂತಿ, ಸಂತೋಷ ಮತ್ತು ಸೌಹಾರ್ದತೆಯ ಶಿಖರದಂತೆ ಬೆಳೆಯಲಿ ಎಂಬ ಹಾರೈಕೆಗಳು. ಸಮಾಜಮುಖಿ ಸೇವೆಯಲ್ಲಿ *ಶ್ರೀಮತಿ ಡಾ. ಬಾನಮ್ಮ* ಅವರ ಪಾತ್ರ ವಿಜಯನಗರ ಜಿಲ್ಲೆಯ ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿರುವ *ಶ್ರೀಮತಿ ಡಾ. ಬಾನಮ್ಮ* ಅವರು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಮಹಿಳಾ ಸಬಲೀಕರಣ, ಬಡವರ ನೆರವು, ಆರೋಗ್ಯ ಜಾಗೃತಿ ಕಾರ್ಯಕ್ರಮಗಳು ಮತ್ತು ಶಿಕ್ಷಣದ ಉತ್ತೇಜನ -ಇವುಗಳ ಮೂಲಕ ಅವರು ಜನಮನ ಗೆದ್ದಿದ್ದಾರೆ. ಹಗರಿಬೊಮ್ಮನಹಳ್ಳಿ ಭಾಗದಲ್ಲಿ ಅನೇಕ ಸೇವಾ ಚಟುವಟಿಕೆಗಳನ್ನು ಕೈಗೊಂಡು, ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಅವರು ನಿಜವಾದ ಸಮಾಜ ಸೇವಕಿಯೆಂದು ಗುರುತಿಸಿಕೊಂಡಿದ್ದಾರೆ. ಅವರ ನಾಯಕತ್ವದಲ್ಲಿ ಹಲವಾರು ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ಅರಿವು ಪಡೆದು, ಆತ್ಮವಿಶ್ವಾಸದಿಂದ ಮುಂದೆ ಬರುತ್ತಿದ್ದಾರೆ. ಶುಭಾಶಯಗಳನ್ನು ಕೊರುವವರು: *ಶ್ರೀಮತಿ ಡಾ. ಬಾನಮ್ಮ* ಜಿಲ್ಲಾ ಅಧ್ಯಕ್ಷರು, ಕಾಂಗ್ರೆಸ್ ಮಹಿಳಾ ಘಟಕ, ವಿಜಯನಗರ ಜಿಲ್ಲೆ & ಸಮಾಜ ಸೇವಕರು *ಶ್ರೀಮತಿ ರೇಷ್ಮಾ ಸಿಖಂದರ್* ಪುರಸಭೆ ಸದಸ್ಯರು, ಹಗರಿಬೊಮ್ಮನಹಳ್ಳಿ ನಾಗರಾಜ್ ಕಲ್ಲಹಳ್ಳಿ ✒️1
- ಯುಗಾದಿ ಹಬ್ಬದಲ್ಲೂ ಜೂಜಾಟಕ್ಕೆ ಬ್ರೇಕ್: ಚಳ್ಳಕೆರೆಯಲ್ಲಿ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರ ದಾಳಿ ಪ್ರಕರಣ ದಾಖಲು ಯುಗಾದಿ ಹಬ್ಬದ ನೆಪದಲ್ಲಿ ಇಸ್ಪೀಟ್ (ಜೂಜಾಟ) ಆಡದಂತೆ ಜಿಲ್ಲಾ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಪ್ರಕಟಣೆ ನೀಡಿದ್ದರೂ, ಕೆಲವರು ಅದನ್ನು ಉಲ್ಲಂಘಿಸಿ ಜೂಜಾಟದಲ್ಲಿ ತೊಡಗಿದ್ದರು. ಈ ಹಿನ್ನೆಲೆಯಲ್ಲಿ ಚಳ್ಳಕೆರೆ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಇಸ್ಪೀಟ್ ಅಡ್ಡೆಗಳ ಮೇಲೆ ಪೊಲೀಸರು ವಿಶೇಷ ದಾಳಿ ನಡೆಸಿದ್ದಾರೆ. ಎಸ್ಪಿ ರಂಜಿತ್ ಕುಮಾರ್ ಬಂಡಾರ್ ಹಾಗೂ ಡಿವೈಎಸ್ಪಿ ಸತ್ಯನಾರಾಯಣರಾವ್ ಅವರ ಮಾರ್ಗದರ್ಶನದಲ್ಲಿ, ಚಳ್ಳಕೆರೆ ಠಾಣಾಧಿಕಾರಿ ಕೆ. ಕುಮಾರ್ ನೇತೃತ್ವದಲ್ಲಿ ಪಿಎಸ್ಐ ಮತ್ತು ಸಿಬ್ಬಂದಿಗಳು ಮಾರ್ಚ್ 18ರಿಂದ 19ರವರೆಗೆ ಕಾರ್ಯಾಚರಣೆ ನಡೆಸಿದರು. ದಾಳಿಯ ವೇಳೆ ಕಾನೂನುಬಾಹಿರವಾಗಿ ಜೂಜಾಟದಲ್ಲಿ ತೊಡಗಿದ್ದ 58 ಮಂದಿಯನ್ನು ಬಂಧಿಸಲಾಗಿದ್ದು, ಒಟ್ಟು 17 ಪ್ರಕರಣಗಳು ದಾಖಲಾಗಿವೆ. ಜೊತೆಗೆ ಪಣಕ್ಕಿಟ್ಟಿದ್ದ ₹85,390 ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಇಂತಹ ದಾಳಿಗಳು ಮುಂದುವರಿಯುತ್ತವೆ ಎಂದು ಠಾಣಾಧಿಕಾರಿ ಕೆ. ಕುಮಾರ್ ಎಚ್ಚರಿಕೆ ನೀಡಿದ್ದಾರೆ.1
- ತುಮಕೂರು ನಗರಕ್ಕೆ ಮುಸ್ಲಿಮರಿಗೆ ಟಿಕೆಟ್ ಕೊಡುವ ತನಕ ಬಿಜೆಪಿಗೆ ಬೆನಿಫಿಟ್ 2028 ಚುನಾವಣೆ ಹಿನ್ನೆಲೆ #onlinetv24x7 #tumkur #aicc #kpcc #dcc #ಡಿಕೆಶಿ #YouthCongress #bjp #jds #app #kjp1
- ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ಪಕ್ಷದ ಹೈಕಮಾಂಡ್ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಶ್ರೀನಿವಾಸ್ ದಾಸಕರಿಯಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ. ಈ ಕ್ಷೇತ್ರದಲ್ಲಿ ಹಲವು ಮುಖಂಡರು ಟಿಕೆಟ್ ಆಕಾಂಕ್ಷಿಗಳಾಗಿದ್ದರೂ, ಅಂತಿಮವಾಗಿ ಬಿಜೆಪಿ ವಾಲ್ಮೀಕಿ (ಎಸ್ಟಿ) ಸಮುದಾಯಕ್ಕೆ ಮಣೆ ಹಾಕಿದೆ. ಸಾಮಾಜಿಕ ಸಮೀಕರಣವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಶ್ರೀನಿವಾಸ ದಾಸಕರಿಯಪ್ಪ ತಂದೆ ದಾಸಕರಿಯಪ್ಪ ಹಮಾಲಿ ಕೆಲಸದಿಂದ ಮೇಲೆ ಬಂದಿದ್ದು, ಮೂಲ ಜನತಾಪರಿವಾರದವರು. ಈಗ ಮಗ ಶ್ರೀನಿವಾಸ ದಾಸಕರಿಯಪ್ಪ ಬಿಜೆಪಿಯಲ್ಲಿದ್ದು ಅಖಾಡಕ್ಕೆ ಇಳಿದಿದ್ದಾರೆ. ಕಾಂಗ್ರೆಸ್ನ ಭದ್ರಕೋಟೆಯಾಗಿ ಪರಿಗಣಿಸಲ್ಪಡುವ ಈ ಕ್ಷೇತ್ರದಲ್ಲಿ ಕಮಲ ಅರಳಿಸಲು ಬಿಜೆಪಿ ತಂತ್ರ ರೂಪಿಸಿದೆ. ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಹಿನ್ನೆಲೆ, ಎಸ್ಟಿ ಸಮುದಾಯದ ಅಭ್ಯರ್ಥಿಗೆ ಆದ್ಯತೆ ನೀಡಲಾಗಿದೆ. ಈ ನಿರ್ಧಾರದಿಂದ ಉಪಚುನಾವಣೆಯಲ್ಲಿ ಸ್ಪರ್ಧೆ ಮತ್ತಷ್ಟು ತೀವ್ರಗೊಳ್ಳುವ ನಿರೀಕ್ಷೆಯಿದೆ.ಅಭ್ಯರ್ಥಿ ಘೋಷಣೆ ಆಗುತ್ತಿದ್ದಂತೆಯೇ ಶ್ರೀನಿವಾಸ್ ದಾಸಕರಿಯಪ್ಪ ಅವರ ಮನೆ ಎದುರು ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಬೆಂಬಲಿಗರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿ “ಈ ಬಾರಿ ಬಿಜೆಪಿ… ಈ ಬಾರಿ ಬಿಜೆಪಿ” ಎಂದು ಘೋಷಣೆ ಕೂಗಿ ಹರ್ಷ ವ್ಯಕ್ತಪಡಿಸಿದರು. ತಂಡೋಪತಂಡವಾಗಿ ಆಗಮಿಸಿದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದು, ಮನೆ ಎದುರು ಹಬ್ಬದಂತ ವಾತಾವರಣ ಕಂಡುಬರುತ್ತಿದೆ.1