Shuru
Apke Nagar Ki App…
ಖಾಸಗಿ ಬಸ್ ಡಿಕ್ಕಿ ಹೊಡೆದು ಮೃತಪಟ್ಟ ಬೈಕ್ ಸವಾರರು ತುರುವನೂರು ಬೆಳಘಟ್ಟ ರಸ್ತೆಯಲ್ಲಿ ಖಾಸಗಿ ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ನಡೆದು ಇಬ್ಬರು ಸ್ಥಳದಲ್ಲೆ ಮೃತಪಟ್ಟ ಘಟನೆ ನಡೆದಿದೆ. ಮಂಗಳವಾರ ಸಂಜೆ 6.30 ರ ವೇಳೆ ಘಟನೆ ನಡೆದಿದ್ದು ಬೈಕ್ ನಲ್ಲಿದ್ದ ಇಬ್ಬರು ಯುವಕರು ಸ್ಥಳದಲ್ಲೆ ಮೃತಪಟ್ಟಿದ್ದಾರೆ
Vinay P palekar
ಖಾಸಗಿ ಬಸ್ ಡಿಕ್ಕಿ ಹೊಡೆದು ಮೃತಪಟ್ಟ ಬೈಕ್ ಸವಾರರು ತುರುವನೂರು ಬೆಳಘಟ್ಟ ರಸ್ತೆಯಲ್ಲಿ ಖಾಸಗಿ ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ನಡೆದು ಇಬ್ಬರು ಸ್ಥಳದಲ್ಲೆ ಮೃತಪಟ್ಟ ಘಟನೆ ನಡೆದಿದೆ. ಮಂಗಳವಾರ ಸಂಜೆ 6.30 ರ ವೇಳೆ ಘಟನೆ ನಡೆದಿದ್ದು ಬೈಕ್ ನಲ್ಲಿದ್ದ ಇಬ್ಬರು ಯುವಕರು ಸ್ಥಳದಲ್ಲೆ ಮೃತಪಟ್ಟಿದ್ದಾರೆ
More news from Karnataka and nearby areas
- *ಭಾರತ ನಲ್ಲಿ ವೈರಲ್*1
- ಹಲಗೂರಿನಲ್ಲಿ ಡಿ ಎಸ್ ಪಿ ಗ್ಲೋಬಲ್ ಶಾಲಾ ವಾರ್ಷಿಕೋತ್ಸವಕ್ಕೆ ಸಬ್ ಇನ್ಸ್ಪೆಕ್ಟರ್ ಲೋಕೇಶ್ ಚಾಲನೆ ಮಳವಳ್ಳಿ ವಿದ್ಯಾರ್ಥಿಗಳಿಗೆ ವಿನಯ ಸಂಸ್ಕೃತಿ ಅಮೂಲ್ಯವಾದದ್ದು, ಡಾ.ಉಮೇಶ್ ಮಠಪತಿ. ಮಳವಳ್ಳಿ ವಿದ್ಯಾರ್ಥಿಗಳಿಗೆ ವಿದ್ಯೆ ತಿಳಿದಿರುತ್ತದೆ ಆದರೆ ವಿನಯ ನಮ್ಮ ಸಂಸ್ಕೃತಿಗಳನ್ನು ನಾವುಗಳು ತಿಳಿಸಿಕೊಡುವ ನಿಟ್ಟಿನಲ್ಲಿ ಮುಂದಾಗಬೇಕಾಗಿದೆ ಎಂದು ಖ್ಯಾತ ವೈದ್ಯಾಧಿಕಾರಿ ಉಮೇಶ್ ಮಠಪತಿ ತಿಳಿಸಿದರು. ಹಲಗೂರಿನ ಡಿ.ಎಸ್.ಪಿ. ಗ್ಲೋಬಲ್ ಸ್ಕೂಲಿನ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ, ಮನುಷ್ಯನಿಗೆ ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ಎರಡು ಅತಿ ಮುಖ್ಯ, ಯೋಗ ಮತ್ತು ವ್ಯಾಯಾಮ ದಿಂದ ಶಾರೀರಿಕ ಆರೋಗ್ಯವನ್ನು ಉತ್ತಮ ಮಾಡಿಕೊಳ್ಳಬಹುದು. ಆದರೆ ಈಗನಾವು ಎಲ್ಲವನ್ನು ಒತ್ತಡದಲ್ಲೇ ಸ್ವೀಕರಿಸುತ್ತೇವೆ ಆದ್ದರಿಂದ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ ಈಗಿನ ಮಕ್ಕಳು ಮನೆಯಹೊರಗಡೆ ಆಟಗಳನ್ನು ಆಡುವುದಿಲ್ಲ ಮೊಬೈಲ್ಗಳಲ್ಲಿ ಮುಳುಗಿರುತ್ತವೆ ಇದರಿಂದ ನಮಗೆಅವರಲ್ಲಿ ವ್ಯತಿರಿಕ್ತ ಪ್ರತಿಕ್ರಿಯೆಗಳು ಸಿಗುತ್ತಿವೆ .ಆದುದರಿಂದ ವಿದ್ಯಾರ್ಥಿಗಳ ಪೋಷಕರು ನಿಮ್ಮ ಮಕ್ಕಳನ್ನು ಜಾಗೃತಿಯಾಗಿ ನೋಡಿಕೊಳ್ಳಬೇಕು ವಿದ್ಯಾರ್ಥಿಗಳಿಗೆ ವಿದ್ಯೆ ಗೊತ್ತಿರುತ್ತದೆ ಆದರೆ ವಿನಯ ಹಾಗೂ ನಮ್ಮ ಒಳ್ಳೆಯ ಸಂಸ್ಕಾರಗಳು ತಿಳಿದಿರುವುದಿಲ್ಲ ಅದನ್ನು ಕಲಿಸುವ ನಿಟ್ಟಿನಲ್ಲಿ ನಾವುಗಳು ಮುಂದಾಗಬೇಕಾಗಿದೆ ಎಂದರು. ಸಬ್ ಇನ್ಸ್ಪೆಕ್ಟರ್ ಲೋಕೇಶ್ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವುದರ ಮುಖಾಂತರ ಚಾಲನೆ ನೀಡಿ ಮಾತನಾಡುತ್ತಾ, ನಿಮ್ಮ ಮಕ್ಕಳು ಶಾಲೆಯಲ್ಲಿ ಎಷ್ಟು ಅಂಕ ಪಡೆದಿರುತ್ತಾರೆ ಅದನ್ನು ನೋಡಿ ನೀವು ಪ್ರೋತ್ಸಾಹಿಸಿ, ಶೇಕಡ ನೂರಕ್ಕೆ ನೂರರಷ್ಟು ಅಂಕಗಳನ್ನು ಪಡೆಯಲೇಬೇಕು ಎಂಬ ಒತ್ತಡವನ್ನು ನಿಮ್ಮ ಮಕ್ಕಳ ಮೇಲೆ ಹೇರಬೇಡಿ. ನಮ್ಮ ದೇಶದಲ್ಲಿರುವ ಡಾಕ್ಟರ್ ಗಳು ಇಂಜಿನಿಯರ್ ಎಲ್ಲರೂ ನೂರಕ್ಕೆ ನೂರರಷ್ಟು ಅಂಕ ಪಡೆದವರು ಅಲ್ಲ .ಆಯಾಯ ವೃತ್ತಿಗೆ ಎಷ್ಟು ಅರ್ಹತೆ ಬೇಕು ಅಷ್ಟು ಅಂಕಗಳನ್ನು ಪಡೆಯಲು ಸಹಕರಿಸಿ. ಕೆಲವರು ಶಾಲೆಯ ಪರೀಕ್ಷೆಗಳಲ್ಲಿ ನೂರಕ್ಕೆ ನೂರು ಅಂಕ ಪಡೆದವರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಫೇಲಾಗುವ ಸಾಧ್ಯತೆ ಇದೆ. ಈಗಿನ ಕಾಲದಲ್ಲಿ 21- 22ನೇ ವಯಸ್ಸಿಗೆ ಐಎಎಸ್ ,ಐಪಿಎಸ್ ಪರೀಕ್ಷೆ ಪಾಸ್ ಮಾಡುವ ಸಾಧ್ಯತೆ ಇದೆ ಇದಕ್ಕೆ ಅವರ ಕುಟುಂಬದ ಸಹಕಾರ ಬೆಂಬಲ ಇರಬೇಕು ಎಂದರು. ಶಾಲೆಯ ಸಹ ಸಂಸ್ಥಾಪಕ, ಎಂ. ಬೇಬಿ ವಿಕ್ಟೋರಿಯಾ ಮಾತನಾಡುತ್ತಾ, ನಿಮ್ಮ ಮಕ್ಕಳಿಗೆ ಡಿಜಿಟಲ್ ಜ್ಞಾನವನ್ನು ನೀಡಬೇಕು, ಅಂದರೆ ಮೊಬೈಲ್ಗಳಲ್ಲಿ ಬರಿ ಆಟ ಆಡಿಸುವುದಲ್ಲ ರೈಲ್ವೆ ಟಿಕೆಟ್ ಬುಕ್ ಮಾಡುವುದು ಆಧಾರ ಕಾರ್ಡ್, ಪಾನ್ ಕಾರ್ಡ್, ಬಿಪಿಎಲ್ ಕಾರ್ಡುಗಳನ್ನು ಬ್ಯಾಂಕುಗಳಿಗೆ ಲಿಂಕ್ ಮಾಡುವುದು, ಮತ್ತು ಡಿಜಿಟಲ್ ಸ್ಕ್ಯಾಮ್ ಗಳ ಬಗ್ಗೆ ತಿಳುವಳಿಕೆ ಹಾಗೂ ನಿಮ್ಮ ಮಕ್ಕಳನ್ನು ಶಾರೀರಿಕವಾಗಿ ಹೆಚ್ಚು ಕ್ರಿಯಾಶೀಲರಾಗುವಂತೆ ಮನೆಯ ಹೊರಗಡೆ ಬೆಳಿಗ್ಗೆ ಸಂಜೆ ಬಿಸಿಲಿನಲ್ಲಿಆಟ ಆಡಿಸುವುದು ಮತ್ತು ಯಾವ ವಿಷಯದಲ್ಲಿ ಹೆಚ್ಚು ಆಸಕ್ತಿ ಇದೆ ಎಂಬುದನ್ನು ಗಮನಿಸಿ ಅದಕ್ಕೆ ಉತ್ತೇಜನ ನೀಡುವುದು ಇದನ್ನು ನಮ್ಮ ಶಾಲೆಯಲ್ಲಿ ಅಳವಡಿಸಿಕೊಂಡು ನಡೆಸಿಕೊಂಡು ಬರುತ್ತಿದ್ದೇವೆ, ಎಂದರು. ಕಾರ್ಯಕ್ರಮದಲ್ಲಿ ಹಲಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುಲ್ನಾಜ್ ಭಾನು, ನಿವೃತ್ತಿ ಶಿಕ್ಷಕ ಮರಿದಾಸಪ್ಪ , ಶಾಲೆಯ ಮುಖ್ಯಸ್ಥರಾದ ಡಾ. ಪ್ರಭು ದಾಸ್,ಎಂ. ಬೇಬಿ ವಿಕ್ಟೋರಿಯಾ. ಸಹ ಕಾರ್ಯದರ್ಶಿ, ಜೇಮ್ಸ್ ವಿನೀತ್, ಶಾಲೆಯ ಅಧ್ಯಕ್ಷ ಶೀಬಾ ಸುಮ್ಮಿ ಮೋಲ್. ಪ್ರಿನ್ಸಿಪಾಲ್ ಮಂಗಳಮ್ಮ, ಉಪ ಪ್ರಿನ್ಸಿಪಾಲ್ ರೇಖಾ, ಮೇಲ್ವಿಚಾರಕಿ ರಮ್ಯ, ಸಹ ಶಿಕ್ಷಕಿಯರಾದ ಸಮಪದ, ಪ್ರಮೀಳಾ ಮತ್ತು ಸಹಾಯಕರು ಸೇರಿದಂತೆ ಇತರರು ಇದ್ದರು.1
- ನೆನ್ನೆ ಮೈಸೂರಿನಲ್ಲಿ "ಬಾಯಲ್ಲಿ ಸೀಟಿ, ಕೈಯಲ್ಲಿ ಲಾಠಿ" ಹಿಡಿದು ಘರ್ಜಿಸಿದ "ಹುಲಿಯ ಹೃದಯದ ಕೆಆರ್ಎಸ್ ಸೈನಿಕರು..." #KRS #ಯುವಮಾವೇಶ 13-01-2026.1
- ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಕಳಿಯ ಗ್ರಾಮದಲ್ಲಿ ಶಾಲಾ ವಿದ್ಯಾರ್ಥಿ ಅಸಹಜವಾಗಿ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಇಂದು ಪಶ್ಚಿಮ ವಲಯ ಐ.ಜಿ.ಪಿ ಭೇಟಿ ನೀಡಿದರು. ಮೃತ ಬಾಲಕನ ಮನರಯವರೊಂದಿಗೂ ಮಾತುಕತೆ ನಡೆಸಿದರು. ಎಸ್ಪಿ ಡಾ.ಅರುಣ್ ಕೆ, ಡಿವೈಎಸ್ಪಿ ರೋಹಿನಿ ಸಿಕೆ , ಇನ್ಸ್ಪೆಕ್ಟರ್ ಸುಬ್ಬಾಪುರ್ ಮಠ, ಎಸ್ಐ ಆನಂದ್. ಎಂ ಮತ್ತು ಸಿಬ್ಬಂದಿ ಸ್ಥಳದಲ್ಲಿದ್ದರು.1
- ಮುಳಬಾಗಿಲು : ಭಾರತೀಯ ಕಿಸಾನ್ ಸಂಘದ ವತಿಯಿಂದ ಮಕರ ಸಂಕ್ರಾಂತಿ ಸ್ವಾಗತ ಹಾಗೂ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಏರ್ಪಡಿಸಲಾಗಿತ್ತು.1
- ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಯನ್ನು ರಕ್ಷಿಸಲು ಸಿಬ್ಬಂದಿಗಳಲ್ಲಿ ಶಿಸ್ತು ಹಾಗೂ ಪಾರದರ್ಶಕ ಆಡಳಿತ ನೀಡಲು ಪ್ರತಿ ಠಾಣೆಯಲ್ಲಿ ವೀಶೇಷ ಕಾರ್ಯಾಚರಣೆ ನಡೆಸಿ ಅಕ್ರಮಗಳಿಗೆ ಆಧ್ಯತೆ ಮೇಲೆ ಕಡಿವಾಣ ಹಾಕಲಾಗುತ್ತದೆ ಇದಕ್ಕೆ ಸಾರ್ವಜನಿಕರು ಸಹಕಾ ನೀಡಬೇಕೆಂದು ನೂತನ ಎಸ್ಪಿ ಅರುಣಾಂಶು ಗಿರಿ ಅವರು ಹೇಳಿದರು. ಜಿಲ್ಲೆ ವಿವಿಧ ಠಾಣೆಗಳಿಗೆ ಭೇಟಿ ನೀಡಿ ಅಪರಾಧ ಪ್ರಕರಣಗಳು, ಶಿಕ್ಷೆ ಮತ್ತು ರೂಢಿಗತ ಅಪರಾಧಗಳ ಕುರಿತು ಮಾಹಿತಿ ಪಡೆಯಲಾಗಿದೆ. ಸಿಬ್ಬಂದಿಗಳಿಗೆ ಕೆಲ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ. ಸಿಸಿಟಿವಿಗಳು ನಿರಂತರ ನಿರ್ವಹಣೆ, ಸಿಬ್ಬಂದಿಗಳಲ್ಲಿ ಶಿಸ್ತು ರೂಢಢಿಸಿಕಳ್ಳುವ ಕುರಿತು ನಿರ್ದೇಶನ ನೀಡಲಾಗಿದೆ. ರಾತ್ರಿ ಗಸ್ತು ಹಾಗೂ ಬಂದೋಬಸ್ತ್ ನಿರ್ವಹಣೆಗೆ ಸಮಸ್ಯೆಯಾಗಿದೆ. ಆದರೂ ಪಾಳೆ ಪ್ರಕಾರ ಸಿಬ್ಬಂದಿಗಳನ್ನು ನಿಯುಕ್ತಿಗೊಳಿಸಲಾಗುತ್ತದೆ. ಒತ್ತಡದಲ್ಲಿ ಸಿಬ್ಬಂದಿಗಳು ಕೆಲಸ ಮಾಡದಂತೆ ನಿಗಾವಹಿಸಲಾಗುತ್ತದೆ ಎಂದರು.1
- *ಭಾರತ ನಲ್ಲಿ ವೈರಲ್*1
- ಮಳವಳ್ಳಿ: 11 ವರ್ಷಗಳ ನಂತರ ಜ.15 ರಿಂದ ಜ. 23ರವರೆಗೆ ಕಲ್ಕುಣಿ ಗ್ರಾಮದ ಐತಿಹಾಸಿಕ ಸಪ್ತ ಮಾತೃಕಿಯರ ದೊಡ್ಡ ಜಾತ್ರಾ ಮಹೋತ್ಸವ ಮಳವಳ್ಳಿ :ತಾಲ್ಲೂಕಿನ ಕಲ್ಕುಣಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಮಹಾಶಕ್ತಿ ಮಂಚದ ಕಾಳಿಕಾಂಭ ಸಪ್ತ ಮಾತೃಕೆಯರ ದೊಡ್ಡ ಜಾತ್ರಾ ಮಹೋತ್ಸವ ಜ 15 ರಿಂದ ಜ.23 ರವರೆಗೆ ಲಕ್ಷಾಂತರ ಜನಸ್ತೋ ಮದ ನಡುವೆ ಬಹು ವಿಜೃಂಭಣೆ ಯಿಂದ ಜರುಗಲಿದೆ. ಈ ಸಂಬಂಧ ಕಲ್ಕುಣಿ ಗ್ರಾಮದ ಸೊಸೈಟಿ ಆವರಣದಲ್ಲಿ ಶ್ರೀ ಮಂಚದ ಕಾಳಿಕಾಂಭ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಎನ್ ನಂಜೇಗೌಡ ಮತ್ತು ಆಡಳಿತ ಮಂಡಳಿಯ ಸದಸ್ಯರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿ ಹಬ್ಬದ ಆಚರಣೆ ಕುರಿತ ಪ್ರಮುಖ ಅಂಶಗ ಳನ್ನು ವಿವರಿಸಿದರು . ಈ ಸಂದರ್ಭದಲ್ಲಿ ಮಾಜಿ ಟಿಎಪಿಸಿ ಎಂಎಸ್ ಅಧ್ಯಕ್ಷರು ಆದ ಕೆ ಜೆ ದೇವರಾಜು ಅವರುಗಳು ಶ್ರೀ ಮಂಚದ ಕಾಳಿಕಾಂಭ, ಶ್ರೀ ವಿಜಯನಗರೇಶ್ವರಿ, ಶ್ರೀ ಹಿರಿಯ ಮಂಚದ ಕಾಳಿಕಾಂಭ, ಶ್ರೀ ಮನೆಯಮ್ಮ, ಶ್ರೀ ಬೆಟ್ಟದ ಅರಸಮ್ಮ, ಶ್ರೀ ಕನ್ನಕಡ್ಡಯ್ಯ, ಶ್ರೀ ಮುಖದ ದೇವರು, ಶ್ರೀ ಮೂಗದೇವಮ್ಮ, ಶ್ರೀ ಪಟ್ಟಲ ದಮ್ಮ ಸೇರಿದಂತೆ ಸಪ್ತ ಮಾತೃಕೆ ಯರ ಆರಾಧನೆಯ ಐತಿಹಾಸಿಕ ಹಬ್ಬ ಇದಾಗಿದೆ ಕಲ್ಕುಣಿ, ದೊಡ್ಡೇ ಗೌಡನ ಕೊಪ್ಪಲು, ಚಿಕ್ಕಮಾಳಿಗೆ ಕೊಪ್ಪಲು, ಪುಟ್ಟೇಗೌಡನ ಕೊಪ್ಪಲು, ಚಿಕ್ಕಕಲ್ಕುಣಿ ಹಾಗೂ ಇನ್ನಿತರ ಗ್ರಾಮಸ್ಥರು ಸೇರಿ ಆಚರಿಸುವ ಬಹುಕಟ್ಟುಪಾಡು ಗಳನ್ನು ಒಳಗೊಂಡ ಬಹು ಸಾಂಪ್ರದಾಯಿಕ ಹಬ್ಬ ಇದಾಗಿದೆ ಎಂದು ತಿಳಿಸಿದರು. ಪ್ರತೀ 5 ವರ್ಷ 7 ವರ್ಷ 9 ವರ್ಷಗಳಿಗೊಮ್ಮೆ ಈ ಹಬ್ಬ ನಡೆಯುತ್ತಿತ್ತಾದರೂ ಕರೋನದಿಂದಾಗಿ 11 ವರ್ಷದ ನಂತರ ಈ ಹಬ್ಬ ನಡೆಯುತ್ತಿದೆ. ಗ್ರಾಮದ ಹೊರವಲಯದ ವೀಳ್ಯದೆಲೆ ತೋಟವೊಂದರ ಭೂಮಾಂತ ಗರ್ಭದಲ್ಲಿ ನೆಲೆಗೊಂಡಿರುವ ಶ್ರೀ ಮಂಚದ ಕಾಳಿಕಾಂಭ ಮಹಾತಾ ಯಿಯ ವಿಗ್ರಹವನ್ನು ಜನವರಿ 15 ರಂದು ಮಧ್ಯರಾತ್ರಿ ಹೊರತೆಗೆದು ನಿಶ್ಯಬ್ದ ಸ್ಥಿತಿಯಲ್ಲಿ ಕರೆ ತಂದು ದೇವಾಲಯದಲ್ಲಿ ಪ್ರತಿಷ್ಠಾಪಿಸುವು ದರೊಂದಿಗೆ ಹಬ್ಬದ ಪ್ರಮುಖ ಘಟ್ಟ ಆರಂಭವಾಗಲಿದೆ ಎಂದು ಅವರು ವಿವರಿಸಿದರು. 8 ದಿನಗಳ ಕಾಲ ದೇವತೆಯರ ಉತ್ಸವ ಹೆಬ್ಬಾರೆಗಳ ಮೆರವಣಿಗೆ ಇನ್ನಿತರ ಧಾರ್ಮಿಕ ವಿಧಿ ವಿಧಾನಗಳು ಜರುಗಲಿವೆ ಎಂದು ತಿಳಿಸಿದ ಅವರು 20 ರಂದು ಮಂಗಳವಾರ ಬಲಿ ಬೀಳುವುದರೊಂದಿ ಹಬ್ಬದ ಪ್ರಮುಖ ಅತ್ಯಾಕರ್ಷಕ ಗಟ್ಟ ಜರುಗಲಿದೆ .ಅಂದು ರಾತ್ರಿ 11.30 ರ ಸುಮಾರಿಗೆ ಮನೆಯಮ್ಮ ಲಕ್ಷ್ಮಿ ದೇವಮ್ಮ ದೇವಸ್ಥಾನದಲ್ಲಿ ಅರ್ಚಕರು ಬಲಿ ಬೀಳಲಿದ್ದು ಬಲಿಯನ್ನು ಚಾವಡಿ ಮುಂಭಾಗ ಪವಡಿಸಿರುವ ಶ್ರೀ ಮಂಚದ ಕಾಳಿಕಾಂಭ ದೇವಿಯ ಮುಂದೆ ತಂದು ಇಟ್ಟು ಮುಖದ ದೇವರು ಅದರ ಸುತ್ತ ಕುಣಿಯು ವುದು ಹಬ್ಬದ ಪ್ರಮುಖ ಹಂತವಾ ಗಿದೆ ಎಂದು ವಿವರಿಸಿದರು. ಇದಲ್ಲದೆ ಜನವರಿ 23 ರಂದು ಬೆಳಿಗ್ಗೆ ಗ್ರಾಮದ ದೊಡ್ಡ ಕೆರೆಯಲ್ಲಿ ಸಪ್ತಮಾತೃಕೆಯರ ತೆಪ್ಪೋತ್ಸವ ನಡೆಯಲಿದ್ದು ಜನವರಿ 25 ರಂದು ಮದ್ಯ ರಾತ್ರಿ ಶ್ರೀ ಮಂಚದ ಕಾಳಿಕಾಂಭ ದೇವಿಯನ್ನು ಮತ್ತೆ ಭೂಮಾಂತ ರ್ಗಕ್ಕೆ ಸೇರಿಸುವುದರೊಂದಿಗೆ ಹಬ್ಬಕ್ಕೆ ತೆರೆ ಬೀಳಲಿದೆ ಎಂದು ವಿವರಿಸಿದರು. ನಾಡಿನ ಮೂಲೆ ಮೂಲೆಗಳಿಂದ ಲಕ್ಷಾಂತರ ಜನ ಈ ಹಬ್ಬಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಯಾವುದೇ ಲೋಪವಾಗದಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಶಾಸಕ ಪಿ ಎಂ ನರೇಂದ್ರಸ್ವಾಮಿ ಈಗಾಗಲೇ ಸೂಚಿಸಿದ್ದಾರೆ ಎಂದು ದೇವರಾಜು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಮಾದನಾಯಕ, ಪರಮೇಶ್, ಮಾದೇವು, ಸೋಮಶೇಖರ್, ಚಂದನ್, ಮಲ್ಲಯ್ಯಪ್ಪ ಹಾಜರಿದ್ದರು.1
- 'ನೀ ಬಾಂಗ್ಲಾದೇಶದವನಾ' ಎಂದು ಹೇಳಿ ಜಾರ್ಖಂಡ್ ಮೂಲದ ವಲಸೆ ಕಾರ್ಮಿಕರಿಗೆ ಹಲ್ಲೆ: ಜೈ ಶ್ರೀರಾಮ್ ಹೇಳುವಂತೆ ಒತ್ತಾಯ ಕಡಲನಗರಿ ಮಂಗಳೂರಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ಭಾರತೀಯನನ್ನೇ ಬಾಂಗ್ಲಾದೇಶದವನು ಎಂದು ಹೇಳಿ ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನಿಗೆ ತಂಡವೊಂದು ಹಲ್ಲೆ ಮಾಡಿದೆ. ಅಂದಹಾಗೇ ಈ ಘಟನೆ ಮಂಗಳೂರಿನ ಕಾವೂರು ಠಾಣೆ ವ್ಯಾಪ್ತಿಯ ಕೂಳೂರು ಚರ್ಚ್ ಬಳಿ ನಡೆದಿದ್ದು ಘಟನೆ ಸಂಬಂಧಿಸಿ ನಾಲ್ವರು ಯುವಕರ ಮೇಲೆ ಕಾವೂರು ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಕೂಳೂರು ನಿವಾಸಿಗಳಾದ ಸಾಗರ್, ಧನುಷ್, ಲಾಲು ಯಾನೆ ರತೀಶ್ ದಾಸ್ ಎಂಬುವವರನ್ನು ಬಂಧಿಸಲಾಗಿದೆ. ಜಾರ್ಖಂಡ್ ಮೂಲದ ದಿಲ್ಜಾನ್ ಅನ್ಸಾರಿ ಎಂಬಾತ ಕಳೆದ 10-15 ವರ್ಷಗಳಿಂದ ಮಂಗಳೂರಿನಲ್ಲಿ ಗಾರೆ ಕೆಲಸ ಮಾಡುತ್ತಿದ್ದು ತನ್ನ ಇನ್ನೊಬ್ಬ ಗೆಳೆಯನ ಜೊತೆಗೆ ಕುಳೂರಿನಲ್ಲಿ ನೆಲೆಸಿದ್ದ. ಈತನಿಗೆ ಸ್ಥಳೀಯರಾದ ನಾಲ್ವರು ಆರೋಪಿಗಳು ಕಳೆದ 5-6 ತಿಂಗಳಿನಿಂದ “ನೀನು ಬಾಂಗ್ಲಾದೇಶದ ಪ್ರಜೆ" ಎಂದು ಹೇಳಿ ಹಲ್ಲೆ ನಡೆಸುತ್ತಿದ್ದರು. ಅಲ್ಲದೆ ಜೈ ಶ್ರೀರಾಮ್ ಕೂಗುವಂತೆ ಈ ನಾಲ್ವರು ಒತ್ತಾಯಿಸಿದರು ಎಂದು ಹಲ್ಲೆಗೊಳಗಾದ ವ್ಯಕ್ತಿ ಹೇಳಿದ್ದಾನೆ. ತಾನು ಜಾರ್ಖಂಡ್ ಮೂಲದವನೆಂದು ತಿಳಿಸಿದರೂ ಆರೋಪಿಗಳು ಕೇಳದೆ, ದಾಖಲೆಗಳನ್ನು ಒದಗಿಸುವಂತೆ ಒತ್ತಡ ಹೇರುತ್ತ ದೌರ್ಜನ್ಯ ಎಸಗಿದ್ದಾರೆ ಎಂದು ದೂರಲಾಗಿದೆ. ನಿನ್ನೆ ಭಾನುವಾರ ಸಂಜೆ ಮತ್ತೆ ದಿಲ್ಜಾನ್ ಅನ್ಸಾರಿ ಮೇಲೆ ಹಲ್ಲೆ ನಡೆಸಿದ್ದು ತಲೆಗೆ ಪೆಟ್ಟು ಬಿದ್ದು ರಕ್ತ ಬಂದಿದೆ. ಈ ವೇಳೆ, ಸ್ಥಳೀಯ ಹಿಂದೂ ಮಹಿಳೆಯರು ರಕ್ಷಿಸಿ ಹೊಡೆಯದಂತೆ ತಡೆದಿದ್ದಾರೆ. ಇನ್ನು ಈ ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕಾವೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ . 03/2026 600: 126(2), 352, 351(3), 353, 109, 118(1) 3(5) ಭಾರತೀಯ ನ್ಯಾಯ ಸಂಹಿತೆ 2023 ರಂತೆ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಮಂಗಳೂರು ಉತ್ತರ ಉಪವಿಭಾಗದ ಎ.ಸಿ.ಪಿ. ಶ್ರೀಕಾಂತ್ ಕೆ. ರವರ ಮಾರ್ಗದರ್ಶನದಂತೆ ಕಾವೂರು ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ರಾಘವೇಂದ್ರ ಎಂ. ಬೈಂದೂರು ರವರು, ಪೊಲೀಸ್ ಉಪ-ನಿರೀಕ್ಷಕರಾದ ಮಲ್ಲಿಕಾರ್ಜುನ ಬಿರಾದಾರ ಹಾಗೂ ಕಾವೂರು ಠಾಣಾ ಸಿಬ್ಬಂದಿಗಳಾದ ಎ.ಎಸ್.ಐ ಚಂದ್ರಹಾಸ್ ಸನೀಲ್ ಹೆಚ್.ಸಿ ಬಾಲಕೃಷ್ಣ ಹಾಗೂ ಸಿಬ್ಬಂದಿಗಳಾದ ರಾಘವೇಂದ್ರ, ರಿಯಾಜ್, ನಾಗರಾಜ್, ಹನುಮಂತ ರವರುಗಳೊಂದಿಗೆ ಆರೋಪಿತರನ್ನು ಪತ್ತೆಮಾಡಿ ದಸ್ತಗಿರಿ ಮಾಡಲಾಗಿದೆ.4