Shuru
Apke Nagar Ki App…
Snake rescue ಪೋಸ್ಟ್ ಮೆಟ್ರಿಕ್ ಗರ್ಲ್ಸ್ ಮೈನಾರಿಟಿ ಹಾಸ್ಟೆಲ್ ಕಳಸಾಪುರ ರೋಡ್ ಗದಗ್
ಗದಗ್ ಜಿಲ್ಲಾ ಸ್ನೇಕ್ ರಹ್ಮನ್ 8095782386
Snake rescue ಪೋಸ್ಟ್ ಮೆಟ್ರಿಕ್ ಗರ್ಲ್ಸ್ ಮೈನಾರಿಟಿ ಹಾಸ್ಟೆಲ್ ಕಳಸಾಪುರ ರೋಡ್ ಗದಗ್
More news from ಕರ್ನಾಟಕ and nearby areas
- Post by ಗದಗ್ ಜಿಲ್ಲಾ ಸ್ನೇಕ್ ರಹ್ಮನ್ 80957823861
- ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲಕರ ದೂರಿನ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಹಣ ಪಡೆದಿರುವ ಆರೋಪ ಹಿನ್ನೆಲೆಯಲ್ಲಿ ಮೂವರ ಪೊಲೀಸ್ ಸಿಬ್ಬಂದಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದರು. ಪೊಲೀಸರು ಹಣಕ್ಕಾಗಿ ಬೇಡಿಕೆ ಇಟ್ಟಿರುವ ಕುರಿತು ಸಂಪೂರ್ಣ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.1
- ಕುಷ್ಟಗಿ:- ಪಟ್ಟಣದ ತಾವರಗೇರಾ ರಸ್ತೆಯ ಮಾಹಾಂತ ಸಂಗಮ ನಗರದ ರವಿಕುಮಾರ ಮದ್ದಾನಿ ಹಿರೇಮಠ ಬಂಧುಗಳ ಮದುವೆ ಸಮಾರಂಭ ಹಾಗೂ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಅತ್ಯಂತ ಅದ್ದೂರಿಯಾಗಿ ನಾಳೆ ನೆಡೆಯಲಿದೆ. ಈ ಮದುವೆ ಸಮಾರಂಭ ರವಿಕುಮಾರ ಹಿರೇಮಠ ಇವರು ತಮ್ಮ ಮಗನ ಮದುವೆ ಸಮಾರಂಭ ಜೊತೆಗೆ ಸುಮಾರು 51 ಜೋಡಿ ಉಚಿತ ಸರ್ವ ಧರ್ಮಗಳ ಉಚಿತ ಮದುವೆ ಸಮಾರಂಭವನ್ನು ನಾಳೆ ಏರ್ಪಡಿಸಿದ್ದಾರೆ. ಈ ಮದುವೆ ಸಮಾರಂಭದಲ್ಲಿ ಉಚಿತ ವಿವಾಹ ಕಾರ್ಯಕ್ರಮ ಅತ್ಯಂತ ಅದ್ದೂರಿಯಾಗಿ ನೆಡೆಯಲಿದೆ. ಮದುವೆಗೆ ಬೇಕಾದ ಎಲ್ಲಾ ಸಕಲ ಸಿದ್ಧಂತೆಗಳನ್ನು ಮಾಡಿಕೊಂಡಿದ್ದು ಒಟ್ಟಾರೆಯಾಗಿ ಈ ಮದುವೆ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ ಈ ಉಚಿತ ಮದುವೆ ಸಮಾರಂಭದಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಜಂಗಮ ಸಮಾಜದ ಪಂಚಪೀಠ ಅಧಿಪತಿಗಳಾದ ಜಗದ್ಗುರು ಶ್ರೀ ಶ್ರೀ ರೇಣುಕಾಚಾರ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀಶೈಲ ಪೀಠದ ಮಹಾ ಸ್ವಾಮಿಗಳು ಉಜ್ಜನಿ ಪೀಠದ ಮಹಾಸ್ವಾಮಿಗಳು ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದು ಮತ್ತು ಕೊಪ್ಪಳ ಜಿಲ್ಲೆಯ ಸ್ಥಳೀಯ ಶಾಸಕರು ಕುಷ್ಟಗಿ ಪಟ್ಟಣದ ಜನತೆ ಪಾಲ್ಗೊಳ್ಳಲಿದ್ದು ಈ ಒಂದು ಮದುವೆಯಲ್ಲಿ ಸರಿ ಸುಮಾರು 20 ರಿಂದ 25 ಸಾವಿರಕ್ಕೂ ಹೆಚ್ಚು ಜನ ಸಂಖ್ಯೆ ಸೇರಲಿದೆ ಎಂದು ಬಲ್ಲ ಮೂಲಗಳು ತಿಳಿಸಿದ್ದಾರೆ.3
- ಶಿಗ್ಗಾವಿ : ಈ ಹಿಂದೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಘೋಷಿಸಿದ ಮೀಸಲಾತಿಯನ್ನು ಪುನಹ ಪರಿಶಿಷ್ಟ ಜಾತಿಗೆ ಜಾರಿ ಮಾಡಿ ಸುಗ್ರೀವಾಜ್ಞೆಯನ್ನು ಹೊರಡಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶಿಗ್ಗಾವಿ ತಾಲೂಕಾ ಪರಿಶಿಷ್ಠ ಜಾತಿಯ ವಿವಿಧ ಮುಖಂಡರಿAದ ಮನವಿ ಅರ್ಪಿಸಿ ಒತ್ತಾಯಿಲಾಯಿತು. ಇತ್ತೀಚೆಗೆ ಕರ್ನಾಟಕ ಸರ್ಕಾರವು ಒಳ ಮೀಸಲಾತಿಯನ್ನು ಜಾರಿಗೊಳಿಸಲು ಅಂತಿಮ ನಿರ್ಧಾರ ತೆಗೆದುಕೊಂಡಿದ್ದು ಇದು ಈ ಹಿಂದೆ ೨೦೨೨ ರಲ್ಲಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರದಲ್ಲಿ ಪರಿಶಿಷ್ಟ ಜಾತಿಗಳಿಗೆ ಶೇಕಡ ೧೭ರಷ್ಟು ಮೀಸಲಾತಿಯನ್ನ ಘೋಷಿಸಿ ಅದರಲ್ಲಿ ಒಳ ಮೀಸಲಾತಿಗಾಗಿ ಅನುಕೂಲ ಮಾಡಿಕೊಟ್ಟಿತ್ತು ಆದರೆ ಪ್ರಸ್ತುತ ಸರ್ಕಾರವು ೧೭% ಘೋಷಣೆ ಮಾಡಿದಂತ ಮೀಸಲಾತಿಯನ್ನು ಶೇಕಡ ೧೫% ಗೆ ಇಳಿಸಿ ಅದರಲ್ಲಿಯೇ ಅವೈಜ್ಞಾನಿಕವಾಗಿ ಒಳ ಮೀಸಲಾತಿಯನ್ನು ಜಾರಿಗೊಳಿಸುತ್ತಿದೆ ಇದರಿಂದಾಗಿ ಶೇಕಡ ಎರಡರನ್ನು ಮೀಸಲಾತಿ ಪ್ರಮಾಣವೂ ಕಡಿಮೆಯಾಗಿದ್ದರಿಂದ ಬಹಳಷ್ಟು ಅನ್ಯಾಯವಾಗುತ್ತಿದ್ದು ಪ್ರಸ್ತುತ ಕರ್ನಾಟಕವು ಒಬಿಸಿಗಳಿಗೆ ೩೨%, ಎಸ್ಸಿ ಗಳಿಗೆ ೧೫% ಮತ್ತು ಎಸ್ಟಿ ಗಳಿಗೆ ೩% ಒಟ್ಟು ೫೦% ಮೀಸಲಾತಿಯನ್ನು ಒದಗಿಸುತ್ತದೆ. ಎಸ್ಸಿ/ಎಸ್ಟಿ ಕೋಟಾವನ್ನು ಹೆಚ್ಚಿಸಲು ಕರ್ನಾಟಕಕ್ಕೆ ಇರುವ ಏಕೈಕ ಮಾರ್ಗವೆಂದರೆ ಸಂವಿಧಾನದ ಶೆಡ್ಯೂಲ್ ೯ ರ ಅಡಿಯಲ್ಲಿ ಲಭ್ಯವಿರುವ ನಿಬಂಧನೆಗಳನ್ನು ಬಳಸಿಕೊಂಡು ಮೀಸಲಾತಿಯನ್ನು ಹೆಚ್ಚಿಸುವುದು. ಶೆಡ್ಯೂಲ್ ೯ ನ್ಯಾಯಾಂಗ ಪರಿಶೀಲನೆಯಿಂದ ರಕ್ಷಿಸಲ್ಪಟ್ಟಿರುವ ಕೇಂದ್ರ ಮತ್ತು ರಾಜ್ಯ ಕಾನೂನುಗಳ ಪಟ್ಟಿಯನ್ನು ಒಳಗೊಂಡಿದೆ. ಶೆಡ್ಯೂಲ್ ೯ ರ ವ್ಯಾಪ್ತಿಯಲ್ಲಿರುವ ಹೆಚ್ಚಿನ ಕಾನೂನುಗಳು ಕೃಷಿ ಅಥವಾ ಭೂಮಿಗೆ ಸಂಬAಧಿಸಿದ್ದರೂ ಸಹ, ಮೀಸಲಾತಿಯಂತಹ ಇತರ ವಿಷಯಗಳು ಪಟ್ಟಿಯಲ್ಲಿವೆ. ಆದ್ದರಿಂದ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರದಲ್ಲಿ ಘೋಷಿಸಿದಂತಹ ಶೇಕಡ ೧೭ರ ಮೀಸಲಾತಿಯನ್ನೇ ಪುನಹ ಜಾರಿಗೊಳಿಸಿ ಒಳ ಮೀಸಲಾತಿಯನ್ನು ಜಾರಿಗೊಳಿಸಲು ಈ ಮೂಲಕ ಒತ್ತಾಯಿಸುತ್ತೇವೆ ಎಂದಿದ್ದಾರೆ. ಈ ಸಂದರ್ಭದಲ್ಲಿ ಮುಖಂಡರಾದ ಡಿ ಎಸ್ ಮಾಳಗಿ, ಮಂಜುನಾಥ ಬ್ಯಾಹಟ್ಟಿ, ಕರೆಪ್ಪ ಕಟ್ಟಿಮನಿ, ನೀಲವ್ವ ಕಾಲವಾಡ, ಅಶೋಕ ಕಾಳೆ, ರಾಮಚಂದ್ರ ಧಾರವಾಡ, ಮಲ್ಲೇಶಪ್ಪ ಧಾರವಾಡ, ಲಕ್ಷ್ಮಣ ಬ್ಯಾಹಟ್ಟಿ, ಬಿ ಎಫ್ ಕಟ್ಟಿಮನಿ, ದುರ್ಗಪ್ಪ ಪೂಜಾರ, ಚಂದ್ರಶೇಖರ ಡೊಳ್ಳೆಶ್ವರ, ಮಾಲತೇಶ ಮಾಕಾಪುರ, ಆನಂದ ಬಂಡಿವಡ್ಡರ, ಸಂತೋಷ ಕಟ್ಟಿಮನಿ ಸೇರಿದಂತೆ ಇತರ ಮುಖಂಡರು ಇದ್ದರು.1
- ಕರ್ನಾಟಕದಲ್ಲಿ 2025 ರಿಂದ 2026ರವರೆಗೆ ಪೊಲೀಸ್ ಅಧಿಕಾರಿಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳು ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ. ಲಂಚ ಪ್ರಕರಣಗಳು, PSI ನೇಮಕಾತಿ ಹಗರಣ, ನಿರ್ಲಕ್ಷ್ಯದಿಂದ ನಡೆದ ಘಟನೆಗಳು ಮತ್ತು ಅಪರಾಧಗಳಲ್ಲಿ ಪೊಲೀಸ್ ಸಿಬ್ಬಂದಿಯ ಭಾಗವಹಿಸುವಿಕೆ—ಇವುಗಳೆಲ್ಲವೂ ವ್ಯವಸ್ಥೆಯ ಮೇಲೆ ಗಂಭೀರ ಪ್ರಶ್ನೆ ಎತ್ತುತ್ತಿವೆ.1
- ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಮಾಜಿ ಸಚಿವ ಬಿ ಶ್ರೀರಾಮುಲು ಹೇಳಿಕೆ, ಕಾಂಗ್ರೆಸ್ ಪಕ್ಷದಲ್ಲಿ ದಿನದಿಂದ ದಿನಕ್ಕೆ ಬಿನ್ನಮತಗಳು ಹೆಚ್ಚಾಗುತ್ತಿವೆ. ಸಿಎಂ ಸಿದ್ದರಾಮಯ್ಯ ಅವರು ಖುರ್ಚಿ ಗಟ್ಟಿ ಮಾಡಿಕೊಳ್ಳೊಕೆ ಅಹಿಂದ ನಾಯಕ ಅಂತ ಹೇಳುತ್ತಾರೆ,ದೆಹಲಿಗೆ ಹೋಗಿ ಅಹಿಂದ ಸಮಾವೇಶ ಮಾಡುತ್ತೆವೆ ಅಂತಾರೆ. ಯಾವ ಪುರುಷಾರ್ಥಕ್ಕೆ ಅಹಿಂದ ಸಮಾವೇಶ ಮಾಡುತ್ತಾರೆ, ಸಿದ್ದರಾಮಯ್ಯ ಅವರ ಖುರ್ಚಿಗೆ ಯಾವಾಗ ಕಂಟಕ ಬರುತ್ತೊ ಆಗ ಅಹಿಂದ ಸಮಾವೇಶ ನೆನಪಾಗುತ್ತೆ, ಸಿಎಂ ಸಿದ್ದರಾಮಯ್ಯ ಏಕ ದಿನ್ಕಾ, ದೋ ದಿನ್ಕಾ ಸಿಎಂ ಆಗಿದ್ದಾರೆ. ಕಾಂಗ್ರೆಸ್ ನಾಯಕರು ದೆಹಲಿಗೆ ಹೋಗಿ ಅಹಿಂದ ಸಮಾವೇಶ ಮಾಡುತ್ತೆವೆ ಅಂತಾ ಕುಳಿತುಕೊಳ್ಳುತ್ತಾರೆ, ರಾಜ್ಯದಲ್ಲಿ ಬಿಸಿಲಿನ ತಾಪಮಾನಕ್ಕೆ ಜನ ನೀರಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ.1
- ಕೂಡ್ಲಿಗಿ : ಪರಿಹಾರ ನೀಡದ ಸಾರಿ ಗೆ ಇಲಾಖೆಯ ಕೊಪ್ಪಳ ಡಿಪೋ 2 ಬಸ್ ಗಳ ಜಪ್ತಿ3
- ಪೊಲೀಸರು ವಿದ್ಯಾರ್ಥಿ ಮೇಲೆ ಗಾಂಜಾ ವ್ಯಸನಿಯೆಂದು ಸುಳ್ಳು ಕೇಸ್ ಹಾಕಿದ ಪರಿಣಾಮ ವಿದ್ಯಾರ್ಥಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಎಬಿವಿಪಿ ಕಾರ್ಯಕರ್ತರು ಪೊಲೀಸರ ವಿರುದ್ಧ ಘೋಷಣೆ ಕೂಗುತ್ತ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ವಿದ್ಯಾರ್ಥಿಗಳ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಇದರಿಂದ ವಿದ್ಯಾರ್ಥಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣದ ಸೂಕ್ತ ತನಿಖೆ ನಡೆಸಿ ಕುಟುಂಬಸ್ಥರಿಗೆ ನ್ಯಾಯ ಒದಗಿಸಬೇಕು ಎಂದು ಪ್ರತಿಭಟನಾ ನಿರತ ಎಬಿವಿಪಿ ಕಾರ್ಯಕರ್ತರು ಆಗ್ರಹಿಸಿದರು.1