Shuru
Apke Nagar Ki App…
ಕಲಬುರಗಿ ನಗರದ ಜಗತ್ ವೃತ್ತದಲ್ಲಿ ಕರ್ತವ್ಯನಿರತ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಕಾನ್ಸ್ಟೆಬಲ್ವೊಬ್ಬರು ಸರ್ವೀಸ್ ರೈಫಲ್ನಿಂದ ಪೊಲೀಸ್ ವಾಹನದಲ್ಲೇ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾರೆ. ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಮಾವನೂರ ಗ್ರಾಮದ ಶಿವಕುಮಾರ ಶಿವಶರಣಪ್ಪ ನರಿಬೋಳಿ (32) ಮೃತರು. ಅವರಿಗೆ ಪತ್ನಿ, ಇಬ್ಬರು ಮಕ್ಕಳು ಇದ್ದಾರೆ. ನಗರದ ಜನನಿಬಿಡ ಜಗತ್ ವೃತ್ತದಲ್ಲಿ ಮಂಗಳವಾರ ಕರ್ತವ್ಯದ ಅವಧಿಯಲ್ಲೇ ರಾತ್ರಿ 9 ಗಂಟೆ ಹೊತ್ತಿಗೆ ಈ ಅವಘಡ ನಡೆದಿದ್ದು, ಘಟನೆಗೆ ಕಾರಣ ತಿಳಿದು ಬಂದಿಲ್ಲ.
Anand Kumar
ಕಲಬುರಗಿ ನಗರದ ಜಗತ್ ವೃತ್ತದಲ್ಲಿ ಕರ್ತವ್ಯನಿರತ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಕಾನ್ಸ್ಟೆಬಲ್ವೊಬ್ಬರು ಸರ್ವೀಸ್ ರೈಫಲ್ನಿಂದ ಪೊಲೀಸ್ ವಾಹನದಲ್ಲೇ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾರೆ. ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಮಾವನೂರ ಗ್ರಾಮದ ಶಿವಕುಮಾರ ಶಿವಶರಣಪ್ಪ ನರಿಬೋಳಿ (32) ಮೃತರು. ಅವರಿಗೆ ಪತ್ನಿ, ಇಬ್ಬರು ಮಕ್ಕಳು ಇದ್ದಾರೆ. ನಗರದ ಜನನಿಬಿಡ ಜಗತ್ ವೃತ್ತದಲ್ಲಿ ಮಂಗಳವಾರ ಕರ್ತವ್ಯದ ಅವಧಿಯಲ್ಲೇ ರಾತ್ರಿ 9 ಗಂಟೆ ಹೊತ್ತಿಗೆ ಈ ಅವಘಡ ನಡೆದಿದ್ದು, ಘಟನೆಗೆ ಕಾರಣ ತಿಳಿದು ಬಂದಿಲ್ಲ.
More news from ಕರ್ನಾಟಕ and nearby areas
- ಕ್ರೀಡೆಗಳಿಂದ ಮಕ್ಕಳು ದೈಹಿಕವಾಗಿ ಮಾನಸಿಕವಾಗಿ ಸದೃಢರಾಗಲು ಕ್ರೀಡೆ ಅತ್ಯಂತ ಅವಶ್ಯಕವಾಗಿದೆ. ಕ್ರೀಡೆಗಳಿಂದ ಮಕ್ಕಳು ದೈಹಿಕವಾಗಿ ಮಾನಸಿಕವಾಗಿ ಸದೃಢರಾಗಲು ಕ್ರೀಡೆ ಅತ್ಯಂತ ಅವಶ್ಯಕವಾಗಿದೆ.1
- ಅಫಜಲಪುರ: ತಾಲೂಕಿನ ಬಡದಾಳ ಗ್ರಾಮದ ಶ್ರೀಗುರು ಚನ್ನಮಲ್ಲೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಮಾತೃ-ಪಿತೃ ವಂದನಾ ಕಾರ್ಯಕ್ರಮದಲ್ಲಿ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಢಗೆ ಮಹತ್ವದ ಸಂದೇಶ ನೀಡಿದರು. "ಸಂಸ್ಕಾರವಿಲ್ಲದ ಶಿಕ್ಷಣ ಅಪೂರ್ಣ. ಮಕ್ಕಳಲ್ಲಿ ಜ್ಞಾನದ ಜೊತೆಗೆ ಶಿಸ್ತು, ವಿನಯ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಇಂದು ಅಪರಾಧಗಳ ಹೆಚ್ಚಳಕ್ಕೆ ಮಾನವೀಯ ಮೌಲ್ಯಗಳ ಕುಸಿತವೇ ಪ್ರಮುಖ ಕಾರಣವಾಗಿದೆ. ಪ್ರತಿಯೊಂದು ಮನೆಯೂ ಮಕ್ಕಳಿಗೆ ಸಂಸ್ಕಾರ ಕಲಿಸುವ ಕೇಂದ್ರವಾಗಬೇಕು" ಎಂದು ಅವರು ಹೇಳಿದರು. ದಿವ್ಯ ಸಾನ್ನಿಧ್ಯ ವಹಿಸಿದ್ದ ಡಾ. ಅಭಿನವ ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು, "ಮಾತೃ-ಪಿತೃ ವಂದನೆ ಒಂದು ದಿನದ ಆಚರಣೆಯಾಗದೆ ಜೀವನಪರ್ಯಂತ ಪಾಲಿಸಬೇಕಾದ ಸಂಸ್ಕಾರವಾಗಬೇಕು" ಎಂದು ತಿಳಿಸಿದರು. ಅಫಜಲಪುರ: ತಾಲೂಕಿನ ಬಡದಾಳ ಗ್ರಾಮದ ಶ್ರೀಗುರು ಚನ್ನಮಲ್ಲೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಮಾತೃ-ಪಿತೃ ವಂದನಾ ಕಾರ್ಯಕ್ರಮದಲ್ಲಿ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಢಗೆ ಮಹತ್ವದ ಸಂದೇಶ ನೀಡಿದರು. "ಸಂಸ್ಕಾರವಿಲ್ಲದ ಶಿಕ್ಷಣ ಅಪೂರ್ಣ. ಮಕ್ಕಳಲ್ಲಿ ಜ್ಞಾನದ ಜೊತೆಗೆ ಶಿಸ್ತು, ವಿನಯ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಇಂದು ಅಪರಾಧಗಳ ಹೆಚ್ಚಳಕ್ಕೆ ಮಾನವೀಯ ಮೌಲ್ಯಗಳ ಕುಸಿತವೇ ಪ್ರಮುಖ ಕಾರಣವಾಗಿದೆ. ಪ್ರತಿಯೊಂದು ಮನೆಯೂ ಮಕ್ಕಳಿಗೆ ಸಂಸ್ಕಾರ ಕಲಿಸುವ ಕೇಂದ್ರವಾಗಬೇಕು" ಎಂದು ಅವರು ಹೇಳಿದರು. ದಿವ್ಯ ಸಾನ್ನಿಧ್ಯ ವಹಿಸಿದ್ದ ಡಾ. ಅಭಿನವ ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು, "ಮಾತೃ-ಪಿತೃ ವಂದನೆ ಒಂದು ದಿನದ ಆಚರಣೆಯಾಗದೆ ಜೀವನಪರ್ಯಂತ ಪಾಲಿಸಬೇಕಾದ ಸಂಸ್ಕಾರವಾಗಬೇಕು" ಎಂದು ತಿಳಿಸಿದರು.1
- ಹಕ್ಕುಪತ್ರಕ್ಕಾಗಿ ಬಡ ಕುಟುಂಬಗಳ ಹೋರಾಟ: ಶಾಸಕರಿಗೆ ಮನವಿ ಸಲ್ಲಿಕೆ1
- ರಾಜ್ಯಾಧ್ಯಕ್ಷ ಹಣಮಂತ ಯಾಳಸಂಗಿ ನೇತೃತ್ವದಲ್ಲಿ ಚಿಂಚೋಳಿ ತಾಲೂಕು ದಲಿತ ಸೇನೆ ಪದಾಧಿಕಾರಿಗಳ ನೇಮಕ ರಾಜ್ಯಾಧ್ಯಕ್ಷ ಹಣಮಂತ ಯಾಳಸಂಗಿ ನೇತೃತ್ವದಲ್ಲಿ ಚಿಂಚೋಳಿ ತಾಲೂಕು ದಲಿತ ಸೇನೆ ಪದಾಧಿಕಾರಿಗಳ ನೇಮಕ1
- ಕಲಬುರಗಿ ಜಿಲ್ಲೆ, ಜೇವರ್ಗಿಯ ಜನರ, ನನ್ನ ತಂದೆ-ತಾಯಿ ಮತ್ತು ಕುಟುಂಬದ ಹಿರಿಯರ ಹಾಗೂ ದೇವರ ಆಶೀರ್ವಾದದಿಂದ ರಾಜಭವನದಲ್ಲಿ ದೇವರ ಹೆಸರಿನಲ್ಲಿ, ಕಾಯಾ-ವಾಚಾ-ಮನಸಾ ರಾಜ್ಯ ಸರ್ಕಾರದ ಸಂಪುಟ ಸಚಿವನಾಗಿ ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ್ದೇನೆ. ಈ ಮಹತ್ವದ ಕ್ಷಣದಲ್ಲಿ ನನ್ನನ್ನು ಮೂರು ಬಾರಿ ಕೈ ಹಿಡಿದು ವಿಧಾನಸಭೆಗೆ ಕಳುಹಿಸಿ, ನನ್ನನ್ನು ಬೆಳೆಸಿದ ಜೇವರ್ಗಿಯ ಪ್ರತಿಯೊಬ್ಬ ಮತದಾರರ, ಪ್ರತಿಯೊಂದು ಮನೆಯ, ಪ್ರತಿಯೊಂದು ಹೃದಯದ ಆಶೀರ್ವಾದದ ಫಲವೇ ಇಂದಿನ ಈ ಯಶಸ್ಸು. ನಿಮ್ಮ ಈ ಅಪಾರ ಪ್ರೀತಿಯ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ, ಪ್ರಾಮಾಣಿಕ ಸೇವೆಯ ಮೂಲಕ ನಿಮ್ಮೆಲ್ಲರಿಗೂ ಕೃತಜ್ಞತೆ ಸಲ್ಲಿಸಬಯಸುತ್ತೇನೆ. ಈ ಯಶಸ್ಸಿನ ಹಾದಿಯಲ್ಲಿ ನನ್ನನ್ನು ಇಲ್ಲಿಯವರೆಗೆ ಕೈಹಿಡಿದು ನಡೆಸಿದ ರಾಷ್ಟ್ರೀಯ ನಾಯಕರಿಗೆ, ಕಾಂಗ್ರೆಸ್ ಪಕ್ಷದ ಸಂಘಟನಾ ಚೇತನರಿಗೆ, ನನ್ನ ಶ್ರದ್ಧೆಯ ನಮನಗಳು. ನಮ್ಮ ಕುಟುಂಬದ ಹಿರಿಯರಾದ, ಎಐಸಿಸಿ ಅಧ್ಯಕ್ಷರು, ಪೂಜ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನ ಮತ್ತು ಆಶೀರ್ವಾದವೇ ನನಗೆ ಶ್ರೀರಕ್ಷೆ, ನಮ್ಮ ಹೈಕಮಾಂಡ್ ನಾಯಕರಿಗೆ ಮತ್ತು ರಾಜ್ಯದ ಮುಖಂಡರಿಗೆ ನನ್ನ ಹೃದಯಪೂರ್ವಕ ಕೃತಜ್ಞತೆಗಳು. ಈ ಶುಭ ಸಂದರ್ಭದಲ್ಲಿ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ ನನ್ನ ಪೂಜ್ಯ ತಂದೆಯವರಾದ ದಿವಂಗತ ಶ್ರೀ ಎನ್. ಧರ್ಮಸಿಂಗ್ ಅವರ ನೆನಪು ನನ್ನನ್ನು ಭಾವನಾತ್ಮಕಗೊಳಿಸುತ್ತಿದೆ. ಅವರ ಆದರ್ಶಗಳೇ ನನ್ನ ಬದುಕಿನ ದಾರಿದೀಪ. ನನ್ನ ತಾಯಿಯವರ ಆಶೀರ್ವಾದ ಮತ್ತು ನನ್ನ ಕುಟುಂಬದ ಹಿರಿಯರ ಪ್ರೋತ್ಸಾಹವೇ ನನ್ನ ಯಶಸ್ಸಿನ ಅಡಿಪಾಯ. ಹಗಲಿರುಳು ನನಗಾಗಿ ಶ್ರಮಿಸಿದ ಪಕ್ಷದ ಪ್ರತಿಯೊಬ್ಬ ಸಾಮಾನ್ಯ ಕಾರ್ಯಕರ್ತನೇ ನನ್ನ ನಿಜವಾದ ಶಕ್ತಿ. ನಿಮ್ಮ ನಂಬಿಕೆಗೆ ಎಂದಿಗೂ ಚ್ಯುತಿ ಬಾರದಂತೆ, ನಿಮ್ಮ ಧ್ವನಿಯಾಗಿ, ಈ ನಾಡಿನ ನಿಸ್ವಾರ್ಥ ಸೇವಕನಾಗಿ ಸದಾ ಶ್ರಮಿಸುತ್ತೇನೆ. ಎಂದೆಂದಿಗೂ ನಿಮ್ಮವನಾಗಿರುತ್ತೇನೆ.1
- ಕನ್ನಡ ಸಾಹಿತ್ಯ ಗೆಳೆಯರ ಬಳಗದ ವತಿಯಿಂದ, ಹಿರಿಯ ಶಿಕ್ಷಣ ತಜ್ಞ ಹೆಚ್.ಟಿ. ಕುಲಕರ್ಣಿ ಗುರುಗಳಿಗೆ ನುಡಿನಮನ ಕಾರ್ಯಕ್ರಮ1
- 📍ವಿಜಯಪುರ | ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಗೊಂದಲ..? ಅಭ್ಯರ್ಥಿಗಳ ಆಕ್ರೋಶ, ನ್ಯಾಯಕ್ಕಾಗಿ ಪ್ರತಿಭಟನೆ | 📍ವಿಜಯಪುರ | ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಗೊಂದಲ..? ಅಭ್ಯರ್ಥಿಗಳ ಆಕ್ರೋಶ, ನ್ಯಾಯಕ್ಕಾಗಿ ಪ್ರತಿಭಟನೆ |1