Shuru
Apke Nagar Ki App…
*ಭಾರತ ನಲ್ಲಿ ವೈರಲ್*
Md Aleemulla Shariff
*ಭಾರತ ನಲ್ಲಿ ವೈರಲ್*
More news from Karnataka and nearby areas
- *ಭಾರತ ನಲ್ಲಿ ವೈರಲ್*1
- ಐತಿಹಾಸಿಕ ತಲಕಾಡು ಪಟ್ಟಣದಲ್ಲಿ ನಡೆದ ಗ್ರಾಮ ದೇವತೆ ಬಂಡರಸಮ್ಮನ ಹಬ್ಬದ ಬಂಡಿ ಉತ್ಸವದ ವೇಳೆ ಸಂಭವಿಸಿದ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟಿದ್ದಾನೆ.ತಲಕಾಡು ನಿವಾಸಿ ಪ್ರವೀಣ್ (22) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ದುರ್ದೈವಿ.ನೆನ್ನೆ ನಡೆದ ಬಂಡಿ ಉತ್ಸವದ ಸಂದರ್ಭದಲ್ಲಿ ಪ್ರವೀಣ್ ಅವರು ಬಂಡಿಯನ್ನು ಓಡಿಸುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಬಂಡಿಯ ನಿಯಂತ್ರಣ ತಪ್ಪಿ ಅವರು ಕೆಳಕ್ಕೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ತೀವ್ರ ಸ್ವರೂಪದ ಗಾಯಗಳಾಗಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೆ ಇಂದು ಅವರು ಕೊನೆಯುಸಿರೆಳೆದಿದ್ದಾರೆ. ಹಬ್ಬದ ಸಂಭ್ರಮದಲ್ಲಿದ್ದ ತಲಕಾಡು ಪಟ್ಟಣದಲ್ಲಿ ಯುವಕನ ಸಾವಿನ ಸುದ್ದಿ ಕೇಳಿ ವಿಷಾದ ವ್ಯಕ್ತವಾಗಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.1
- ಅಸ್ಸಾಂಗೆ ತೆರಳುವ ಮುನ್ನ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಗುರುವಾರ ನೀಡಿದ ಪ್ರತಿಕ್ರಿಯೆ..1
- ನಂಜನಗೂಡು ತಾಲೂಕು ಹನುಮನಪುರ ಗ್ರಾಮ ಕೋಣನೂರು ಗ್ರಾಮ ಪಂಚಾತಿ ಗೆ ಸೇರಿದು ನೆಲ್ಲಿ ಹಾಕಿಸಲು ಹಲವು ಬಾರಿ ಫೋನ್ ಮಾಡಿದ್ರು ಪಿ ಡಿ ಒ ಕರೆನು ಸ್ವೀಕರಿಲಾ ಸಂಬಂಧ ಇಲಾಖೆ ಯವರು ಗಮನ ಹರಿಸಿ ಮಿನಿ ಟ್ಯಾಂಕ್ ಗೆ ನೆಲ್ಲಿ ಹಾಕಿಸಿಕೊಡಬೇಕಾಗಿ ಮನವಿ1
- ಹನೂರು: ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಮಲೆಮಾದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಕೊನೆಯ ದಿನ ಕೊಂಡೋತ್ಸವ ನಂತರ ಜಾತ್ರೆಗೆ ತೆರೆ ಬಿದ್ದಿತ್ತು. ಕೊಂಡೋತ್ಸವವು ಮಹಾಶಿವರಾತ್ರಿಯ ಪವಿತ್ರ ರಾತ್ರಿ, ಬೇಡಗಂಪಣ ಸಮುದಾಯದ ಪಾರಂಪರಿಕ ವೈಭವವು ಮತ್ತೆ ಒಂದು ಬಾರಿ ಜೀವಂತವಾಗಿ ಮೂಡಿಬಂತು. ರಾತ್ರಿ 8:30ಕ್ಕೆ ಸರದಿ ಅರ್ಚಕರು ಭಕ್ತಿಪೂರ್ಣ ಮನೋಭಾವದಿಂದ ವಿಶೇಷ ಪೂಜೆಯನ್ನು ನೆರವೇರಿಸಿದ ಕ್ಷಣದಿಂದಲೇ ದೇವಸ್ಥಾನದ ವಾತಾವರಣ ದಿವ್ಯ ಭಾವದಿಂದ ತುಂಬಿತು. ಪೂಜೆ ಬಳಿಕ ಮುದ್ದು ಮಾದಪ್ಪನ ಕೊಂಡೋತ್ಸವ ಪ್ರಾರಂಭವಾಗುತ್ತಿದ್ದಂತೆ ಭಕ್ತರ ಹೃದಯಗಳಲ್ಲಿ ಭಕ್ತಿ ಮತ್ತು ಆನಂದದ ಹೊಳೆ ಹರಿದಿತು. ಜಯಘೋಷಗಳು, ದೀಪಾಲಂಕಾರದ ಕಂಗೊಳ್ ಮತ್ತು ಭಕ್ತರ ಉತ್ಸಾಹದ ನಡುವೆ ಕೊಂಡೋತ್ಸವವು ಅದ್ದೂರಿಯಾಗಿ ನಡೆಯಿತು. ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಅವರು ಹಾಗೂ ಸಾವಿರಾರು ಭಕ್ತರು ಈ ಪುಣ್ಯ ಕ್ಷಣಗಳಿಗೆ ಸಾಕ್ಷಿಯಾಗಿ, ಮುದ್ದು ಮಾದಪ್ಪನ ದರ್ಶನದಿಂದ ಕೃಪೆಗೆ ಪಾತ್ರರಾದರು. ಈ ಕೊಂಡೋತ್ಸವವು ಕೇವಲ ಸಂಪ್ರದಾಯದ ಆಚರಣೆ ಮಾತ್ರವಲ್ಲ; ಅದು ಭಕ್ತಿ, ಸಂಸ್ಕೃತಿ ಮತ್ತು ಸಮುದಾಯದ ಐಕ್ಯತೆಯ ಜೀವಂತ ಸಂಕೇತವಾಗಿದೆ.4
- ಕೊಳ್ಳೇಗಾಲ :ಹನೂರುವಿಧಾನಸಭಾ ಕ್ಷೇತ್ರ ಬಲಗೈ ಸಮಾಜ ಒಕ್ಕೂಟದ ವತಿಯಿಂದ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿಯಲ್ಲಿ ಬಲಗೈ ಸಮಾಜಕ್ಕೆ ಅನ್ಯಾಯ ಮಾಡಿದೆ ಎಂಬ ಆರೋಪದಲ್ಲಿ ಕೊಳ್ಳೇಗಾಲ ಪಟ್ಟಣದಲ್ಲಿ ಬೃಹ ಪ್ರತಿಭಟನೆ ನಡೆಸಲಾಯಿತು ಕೊಳ್ಳೇಗಾಲ ಎಂ ಜಿ ಎಸ್ ವಿ ಮೈದಾನದಿಂದ ಹೊರಟ ಬೃಹತ್ ಮೆರವಣಿಗೆ ಡಾಕ್ಟರ್ ಪುನೀತ್ ರಾಜಕುಮಾರ್ ರಸ್ತೆ ಡಾಕ್ಟರ್ ವಿಷ್ಣುವರ್ಧನ್ ರಸ್ತೆ ಡಾಕ್ಟರ್ ರಾಜಕುಮಾರ್ ರಸ್ತೆ ಅಂಬೇಡ್ಕರ್ ರಸ್ತೆ ಅಂಬೇಡ್ಕರ್ ವೃತ್ತದ ಮೂಲಕ ಘೋಷಣೆಗಳನ್ನು ಕೂಗುತ್ತಾಮೆರವಣಿಗೆ ಕೊಳ್ಳೇಗಾಲ ತಾಲೂಕು ಕಚೇರಿಗೆ ಸೇರಿತು ಕೆಲವು ಕಾಲ ಬೃಹತ್ ಪ್ರತಿಭಟನೆ ಯಲಿ ರಸ್ತೆ ತಡೆ ನಡೆಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಖ್ಯಮಂತ್ರಿಗಳು ಸೇರಿದಂತೆಸಚಿವರು ಶಾಸಕರ ವಿರುದ್ಧ ಬಾರಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬಲಗೈ ಸಮಾಜದ ಪ್ರಮುಖರು ಮುಖಂಡರುಗಳು ಯುವಕರು ಮಹಿಳೆಯರು ವಿವಿಧ ಗ್ರಾಮಗಳಿಂದ ಬಂದಿದ್ದ ಯಜಮಾನರುಗಳು ಸಮಾಜದ ಗಣ್ಯರು ಹೋರಾಟಗಾರರು ಮಾಜಿ ಚುನಾಯಿತ ಪ್ರತಿನಿಧಿಗಳುಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.4
- ಹನೂರು: ಮಹದೇಶ್ವರಬೆಟ್ಟದಲ್ಲಿ ಬುಧವಾರ ರಾತ್ರಿ ಕೊಂಡೋತ್ಸವದೊಂದಿಗೆ ಮಹಾಶಿವರಾತ್ರಿ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ಮುಕ್ತಾಯಗೊಂಡಿತು. ಮಹಾಶಿವರಾತ್ರಿಯ ಪ್ರಯುಕ್ತ ಬೇಡಗಂಪಣರ ಸಾಂಪ್ರದಾಯಿಕ ಕ್ರಮದಂತೆ ಬೇಡಗಂಪಣ ತಂಬಡಿಗಳು (ಸರದಿ ಅರ್ಚಕರು) ರಾತ್ರಿ 8:30ಕ್ಕೆ ವಿಶೇಷ ಪೂಜೆಯನ್ನು ನೆರವೇರಿಸಿದರು. ಬಳಿಕ ಮುದ್ದು ಮಾದಪ್ಪನ ಕೊಂಡೋತ್ಸವ ಆರಂಭವಾಯಿತು. ಬೇಡಗಂಪಣರ ಕುಲಗುರುಗಳಾದ ಸಾಲೂರು ಮಠದ ಪೀಠಾಧಿಪತಿಗಳು ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳ ಸಮ್ಮುಖದಲ್ಲಿ ಕೊಂಡೋತ್ಸವ ವಿಜೃಂಭಣೆಯಿಂದ ನಡೆಯಿತು. ಸಾವಿರಾರು ಮಾದಪ್ಪನ ಭಕ್ತರು ಕೊಂಡೋತ್ಸವದ ದೃಶ್ಯವನ್ನು ಕಣ್ತುಂಬಿಕೊಂಡು ಭಕ್ತಿಭಾವದಲ್ಲಿ ತೇಲಿದರು ಹಾಗೂ ಮಾದಪ್ಪನ ಕೃಪೆಗೆ ಪಾತ್ರರಾದರು.1
- *ಭಾರತ ನಲ್ಲಿ ವೈರಲ್*1