Shuru
Apke Nagar Ki App…
ಆತ್ಮಹತ್ಯೆ ಮಾಡಿಕೊಂಡರೈತಕುಟುಂಭಕ್ಕೆ 25 ಲಕ್ಷ ಪರಿಹಾರಕ್ಕೆ ಆಗ್ರಹ ಕರ್ನಾಟಕ ಪ್ರಾಂತ ರೈತ ಸಂಘ ಆಗ್ರಹ, ಪ್ರತಿಭಟನೆ ಮಂಡ್ಯ- ಸಾಲದ ಬಾದೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಬಿ ಹಟ್ನಾ ಗ್ರಾಮದ ದಂಪತಿಗಳು ಹಾಗೂ ಪಾಂಡುಪುರ ತಾಲೂಕು ಮಂಡಿ ಬೆಟ್ಟಹಳ್ಳಿ ಗ್ರಾಮದ ಎಂ ಎಸ್ ಮಂಜುನಾಥ್ ಕುಟುಂಬಕ್ಕೆ ತಲಾ ಇಪ್ಪತ್ತೈದು ಸಾವಿರ ಪರಿಹಾರ ನೀಡುವಂತೆ ಕೋರಿ, ರಾಜ್ಯ ಸರ್ಕಾರ ರೈತರ ಎಲ್ಲಾ ಸಾಲ ಮನ್ನಾ ಮಾಡುವಂತೆ ಹಲವು ಬೇಡಿಕೆಗಳನ್ನು ಇಟ್ಟು ಇಂದು ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿತು.
Arunprasad G B
ಆತ್ಮಹತ್ಯೆ ಮಾಡಿಕೊಂಡರೈತಕುಟುಂಭಕ್ಕೆ 25 ಲಕ್ಷ ಪರಿಹಾರಕ್ಕೆ ಆಗ್ರಹ ಕರ್ನಾಟಕ ಪ್ರಾಂತ ರೈತ ಸಂಘ ಆಗ್ರಹ, ಪ್ರತಿಭಟನೆ ಮಂಡ್ಯ- ಸಾಲದ ಬಾದೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಬಿ ಹಟ್ನಾ ಗ್ರಾಮದ ದಂಪತಿಗಳು ಹಾಗೂ ಪಾಂಡುಪುರ ತಾಲೂಕು ಮಂಡಿ ಬೆಟ್ಟಹಳ್ಳಿ ಗ್ರಾಮದ ಎಂ ಎಸ್ ಮಂಜುನಾಥ್ ಕುಟುಂಬಕ್ಕೆ ತಲಾ ಇಪ್ಪತ್ತೈದು ಸಾವಿರ ಪರಿಹಾರ ನೀಡುವಂತೆ ಕೋರಿ, ರಾಜ್ಯ ಸರ್ಕಾರ ರೈತರ ಎಲ್ಲಾ ಸಾಲ ಮನ್ನಾ ಮಾಡುವಂತೆ ಹಲವು ಬೇಡಿಕೆಗಳನ್ನು ಇಟ್ಟು ಇಂದು ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿತು.
More news from ಕರ್ನಾಟಕ and nearby areas
- ಪ್ರತಿಭಟನೆಗೆ ಬಂದ ವೃದ್ದ ತಾಯಿ ನಡೆ ಯಲಾ ಗದೇ ರಸ್ತೆ ಬದಿಯಲ್ಲಿ ಕುಳಿತರು,ಪುತ್ರಶೋಕಂ ನಿರಂತರ ಮಂಡ್ಯ- ಮಗ ಸೊಸೆ ಕಳೆದು ಕೊಂಡು ಪ್ರತಿಭಟನೆಗೆ ಬಂದ ವೃದ್ದ ತಾಯಿ ನಡೆಯಲೂ ಆಗದೇ ರಸ್ತೆ ಬದಿಯಲ್ಲೆ ಕುಳಿತು ಮಗ ಸೋಸೆ ನೆನೆದು ಕಣ್ಣೀರಿಟ್ಟ ಕರಳು ಹಿಂಡುವ ಘಟನೆ ಯೊಂದಕ್ಕೆ ನಗರದ ವಿಶ್ವೇಶ್ವರಯ್ಯ ವೃತ್ತ ಇಂದು ಸಾಕ್ಷಿಯಾಯಿತು. ಮಂಡ್ಯ ತಾಲ್ಲೊಕು ಬಿ.ಹಟ್ಣ ಗ್ರಾಮದ ಪುಟ್ಟ ಸ್ವಾಮಿ ಮತ್ತು ನಾಗಮ್ಮ ಸಾಲದಬಾದೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡರು.ಆದ್ರೆ ಪುಟ್ಟಸ್ವಾಮಿಯ ವೃದ್ದತಾಯಿ ಇಂದು ರೈತ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡುವಂತೆ ಆಗ್ರಹಿಸಿ ಕಾರ್ನಾಟಕ ಪ್ರಾಂತ ರೈತ ಸಂಘ ನಡೆಸುತ್ತಿದ್ದ ಪ್ರತಿಭಟನೆಗೆ ಟೆಂಪೋದಲ್ಲಿ ಬಂದ್ರು ಆದರೆವಿಶ್ವಶ್ವರಯ್ಯ ವೃತ್ತದಿಂದ ಜಿಲ್ಲಾಧಿಕಾರಿ ಕಛೇರಿ ವರೆಗೆನಡೆ ಯಾಲಾಗದೇ ಅಲ್ಲೇ ರಸ್ತೆ ಬದಿಯಲ್ಲಿ ಕುಳಿತರು, ನಂತರ ಅಲ್ಲಿದ್ದವರ ಜೊತೆ ಮಾತನಾಡಿದ ಅವರು ತಮ್ಮ ಸೊಸೆ ನೆನೆದು ಕಣ್ಣೀರಿಟ್ಟರು ತಾವು ಕಾಪಿ ಮಾಡಿ ಕೊಟ್ಟಿದ್ದನ್ನ ಕುಡಿದ ಸೊಸೆ ಮತ್ತೆ ಜೀವಂತವಾಗಿ ಕಾಣಸೇ ಹೋದದ್ದನ್ನು ಹೇಳಿಕೊಂಡು ಗೊಳಾಡಿದರು. ಯಾವ ವಯಸ್ಸಾಗಲಿ ಪುತ್ರಶೋಕಂನಿರಂತರಂ.1
- ಮೈದುಂಬಿ ಧುಮುಕುತ್ತಿರುವ ಮಳವಳ್ಳಿ ತಾಲೂಕಿನ ಐತಿಹಾಸಿಕ ಗತ ವೈಭವ ಸಾರುವ ಗಗನಚುಕ್ಕಿ ಜಲಪಾತ ಪ್ರಕೃತಿ ಸೌಂದರ್ಯ ಸವಿಯಲು ಅರಿದು ಬರುತ್ತಿರುವ ಜನಸಾಗರ ಮೈದುಂಬಿ ದುಮುಕ್ಕುತ್ತಿರುವ ಗಗನಚುಕ್ಕಿ-ಜಲಪಾತ-ಪ್ರಕೃತಿ ಸೌಂಧರ್ಯ ಸವಿಯಲು ಹರಿದು ಬರುತ್ತಿರುವ ಜನಸಾಗರ ಮಳವಳ್ಳಿ.ತೀವ್ರ ಬರಗಾಲ ಮಳೆಯಿಲ್ಲದೆ ತತ್ತರಿಸಿ ಹೋಗಿ ನೀರಿಲ್ಲದೆ ಬಣಗುಡುತ್ತಿದ್ದ ಗತ ವೈಭವ ಸಾರುವ ತಾಲೂಕಿನ ಶಿವನಸಮುದ್ರಂನ ಗಗನಚುಕ್ಕಿ ಜಲಪಾತ ಮೈದುಂಬಿ ದುಮುಕ್ಕುತ್ತಿರುವುದು ಪ್ರಕೃತಿ ಸೌಂದರ್ಯವನ್ನು ಸವಿಯುವ ಪ್ರವಾಸಿಗರಿಗೆ ರಸದೌತಣ ನೀಡಿದೆ, ಕಾವೇರಿ ಉಗಮ ಪ್ರದೇಶಗಳಲ್ಲಿ ತೀವ್ರ ಮಳೆ ಕೆ.ಅರ್.ಎಸ್ನಿಂದ ಹೆಚ್ಚಿ ನೀರು ಬಿಡುಗಡೆ ಕಾವೇರಿ ಕಬಿನಿ ಕಪಿಲ ನದಿಗಳ ಹರಿವಿನಲ್ಲಿ ಹೆಚ್ಚಳದಿಂದ ನೀರಿನ ಬೋರ್ಗೆರೆತ ಹೆಚ್ಚಾಗಿದೆ, ಕಾವೇರಿ ಕಬಿನಿ ಮತ್ತು ಕೆ.ಆರ್.ಎಸ್ನಿಂದ ಹೆಚ್ಚಿನ ನೀರು ಬಿಟ್ಟಿರುವುದರಿಂದ ಕಾವೇರಿ ನದಿಯ ದಡಗಳು ನೀರಿನಿಂದ ಮುಳುಗಿದ್ದು ನೋಡಲು ಬರುವ ಪ್ರವಾಸಿಗರಿಗೆ ಈ ರಮಣೀಯ ದೃಶ್ಯ ಹಬ್ಬವಾಗಿದೆ. ಮೂಲ ಸೌಲಭ್ಯ :ಗಗನಚುಕ್ಕಿ ಜಲಪಾತ ನೋಡಲು ಬರುವ ಜನರಿಗೆ ಸೂಕ್ತ ಮೂಲಭೂತ ಸೌಲಭ್ಯ ಹಾಗೂ ವಾಹನ ನಿಲ್ದಾಣವಿದ್ದರೂ ನಿರ್ವಹಣೆ ಕೊರತೆಯಿದೆ. ಜನರು ವಾಹನಗಳನ್ನು ರಸ್ತೆಯ ಬದಿಯಲ್ಲಿ,ಜಮೀನುಗಳಲ್ಲಿ,ನಿಲ್ಲಿಸುವಂತಾಗಿದ್ದರಿAದ ವಾಹನಗಳು ಎಲ್ಲಿ ನೋಡಿದರೆ ಅಲ್ಲಿ ನಿಲ್ಲುತ್ತಿರುವುದರಿಂದ ಸಂಚಾರ ಸ್ಥಗಿತಗೊಂಡು ಜನರು ನೋಡಲು ಏಕೆ ಬಂದೆವೋ ಅನ್ನುವಷ್ಠು ಸಂಕಷ್ಠಕ್ಕೀಡಾಗಿದೆ. ಇದಲ್ಲದೆ ದೂರದ ಪ್ರದೇಶಗಳಿಂದ ಬರುವ ಪ್ರವಾಸಿಗರು ಗಗನಚುಕ್ಕಿ ನೋಡಲು ಬಂದು ಟ್ರಾಪಿಕ್ ಜಾಮ್ನಲ್ಲಿ ಸಿಲುಕಿ ಇತ್ತು ಹಿಂದೆ ಅಥವಾ ಮುಂದೆ ಹೋಗಲು ಆಗದೆ ಸುಮಾರು ಗಂಟೆಗಳ ಕಾಲ ರಸ್ತೆಯಲ್ಲಿ ಪರದಾಡುವಂತಾಗಿತ್ತು. ಪ್ರವಾಸಿಗರಿಗೆ ಎಚ್ಚರ: ಮೈದುಂಬಿ ಜಲಪಾತಕ್ಕೆ ಧುಮ್ಮುಕ್ಕುತ್ತಿರುವ ನೀರಿನ ದೃಶ್ಯವನ್ನು ನೋಡುವುದೆ ಪ್ರವಾಸಿಗರಿಗೆ ಆನಂದವೋ.ಆನAದ,ಆದರೆ ಈ ಸಂದರ್ಭದಲ್ಲಿ ಎಚ್ಚರವೂ ಅಗತ್ಯವಿದೆ.ಈಗಾಗಲೇ ಹಲವು ಧುರ್ಘಟನೆಗಳು ಇಲ್ಲಿ ಜರುಗಿವೆ.ಆನಂದಲ್ಲಿ ಮೈಮರತೆರ ಸಾವು ಖಚಿತ ಎನ್ನುವುದನ್ನು ಪ್ರವಾಸಿಗರು ಎಚ್ಚರ ವಹಿಸಿಬೇಕಿದೆ. ಮುನ್ನೆಚ್ಚರಿಕೆ ಕ್ರಮ ಅವಶ್ಯ: ಈಗಾಗಲೇ ಬೆಳಕವಾಡಿ ಪೋಲಿಸರು ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದ್ದರು ಸಹ ಕೆಲ ಯುವ ಪ್ರವಾಸಿಗರು ಜಲಪಾತದ ಸವಿಯನ್ನು ಸವಿಯಲು ಜಲಪಾತದ ಕೆಳಗೆಡೆ ಇಳಿಯುವುದು ಹೆಚ್ಚಾಗಿದೆ.ಇದನ್ನು ತಡೆಗಟ್ಟಿ ಪ್ರವಾಸಿಗರ ರಕ್ಷಣೆಗೆ ಜಿಲ್ಲಾಢಳಿತ ಮುನ್ನೆಚ್ಚರಿಕೆ ಕ್ರಮವಹಿಸಬೇಕಿದೆ.ಇದಲ್ಲದೆ ಪ್ರವಾದ್ಯೋಮ ಇಲಾಖೆ ಗಗನ ಚುಕ್ಕಿ ಪ್ರದೇಶವ್ನನು ಅಭಿವೃದ್ದಿ ಪಡಿಸಿದರೂ ನಿರ್ವಹಣೆ ಕೊರತೆ ಬರುವ ಪ್ರವಾಸಿಗರಿಗೆ ಸೂಕ್ತ ಸೌಲಭ್ಯಗಳ ಸಮಸ್ಯೆ ಇದೆ.ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಮೂಲಸೌಲಭ್ಯ ಕಲ್ಪಿಸಲು ಮುಂದಾಗಬೇಕಿದೆ.1
- ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರ ಬಳಿಯ ಗಗನಚುಕ್ಕಿ ಜಲಪಾತಕ್ಕೆ ಜೀವಕಳೆ, ಭೋರ್ಗೆ ರೆದು ದುಮ್ಮಿಕ್ಕುತ್ತಿರುವ ಜಲಪಾತ ಮಳವಳ್ಳಿ : ಕಳೆದ 5-6 ತಿಂಗ ಳಿಂದ ಮಳೆ ಇಲ್ಲದೆ ನದಿಯಲ್ಲಿ ನೀರು ಇಲ್ಲದೆ ಬತ್ತಿಹೋಗಿದ್ದ ಮಳವಳ್ಳಿ ತಾಲ್ಲೂಕಿನ ಶಿವನ ಸಮುದ್ರ ಬಳಿಯ ವಿಶ್ವವಿಖ್ಯಾತ ಗಗನಚುಕ್ಕಿ ಜಲಪಾತಕ್ಕೆ ಇದೀಗ ಜೀವಕಳೆ ಬಂದಿದೆ. ಕಳೆದ ಒಂದು ವಾರದಿಂದ ಕಾವೇರಿ ನದಿಯ ಉಗಮ ಸ್ಥಾನವಾದ ಕೊಡಗು ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಕೆ ಆರ್ ಎಸ್ ಹಾಗೂ ಕಬಿನಿ ಜಲಾಶಯಕ್ಕೆ ಭಾರಿ ಪ್ರಮಾಣ ದಲ್ಲಿ ನೀರು ಹರಿದು ಬರುತ್ತಿದ್ದು ಕಬಿನಿ ಜಲಾಶಯವಂತು ಭರ್ತಿ ಯಾಗುವ ಹಂತ ಮುಟ್ಟಿದೆ. ಈ ಹಿನ್ನೆಲೆಯಲ್ಲಿ ಕಬಿನಿ ಜಲಾಶಯದಿಂದ ಕಾವೇರಿ ನದಿಪಾತ್ರಕ್ಕೆ 15 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ಹರಿಯಬಿಟ್ಟಿರುವುದ ರಿಂದ ನೀರಿಲ್ಲದೆ ಒಣಗಿ ನಿಂತಿದ್ದ ಗಗನಚುಕ್ಕಿ ಜಲಪಾತ ಮತ್ತೊಮ್ಮೆ ದುಮ್ಮಿಕ್ಕಿ ಹರಿಯುತ್ತಿದ್ದು ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ. ಕಾವೇರಿ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯ ಬಿಟ್ಟಿರುವ ಹಿನ್ನಲೆಯಲ್ಲಿ ಕಳೆದ 3-4 ದಿನಗಳಿಂದಲೂ ಗಗನ ಚುಕ್ಕಿ ಜಲಪಾದಲ್ಲಿ ಮತ್ತೆ ಭೋರ್ಗೆರತ ಮೊಳಗುತ್ತಿದ್ದು ಪ್ರವಾಸಿಗರ ಕೈಬೀಸಿ ಕರೆಯುತ್ತಿದ್ದು ಈ ಮನ ಮೋಹಕ ದೃಶ್ಯವನ್ನು ಕಣ್ತುಂಬಿ ಕೊಳ್ಳಲು ಪ್ರವಾಸಿಗರ ದಂಡು ಹರಿದು ಬರತೊಡಗಿದೆ. ಸದ್ಯದಲ್ಲೆ ಕೆ ಆರ್ ಎಸ್ ಅಣೆಕಟ್ಟೆ ಸಹ ಭರ್ತಿಯಾಗುವ ಹಂತದಲ್ಲಿದ್ದು ಆಗ ಇನ್ನೂ ಭಾರಿ ಪ್ರಮಾಣದಲ್ಲಿ ಕಾವೇರಿ ನದಿಗೆ ನೀರು ಹರಿದು ಬರಲಿದ್ದು ಜಲಪಾತದ ದೃಶ್ಯ ಇನ್ನಷ್ಟು ಮನಮೋಹಕವಾಗಲಿದೆ.1
- All About,Anytime the Daydreamer will be pulling the tail of those who raises questions,which is public interest *ಭಾರತ ನಲ್ಲಿ ವೈರಲ್*1
- ಕಾಂಗ್ರೆಸ್ ಅಂಗಳದಲ್ಲಿ ತಾರಕಕ್ಕೇರಿದ ಅಸಮಾಧಾನ: ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕೈ ನಾಯಕರ ವಿರುದ್ಧ ತಿರುಗಿಬಿದ್ದ ಬೆಂಬಲಿಗರು, ಹೈಕಮಾಂಡ್ಗೆ ತಲೆನೋವಾದ ಅತೃಪ್ತರ ಬಂಡಾಯ. ಕಾಂಗ್ರೆಸ್ ಅಂಗಳದಲ್ಲಿ ತಾರಕಕ್ಕೇರಿದ ಅಸಮಾಧಾನ: ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕೈ ನಾಯಕರ ವಿರುದ್ಧ ತಿರುಗಿಬಿದ್ದ ಬೆಂಬಲಿಗರು, ಹೈಕಮಾಂಡ್ಗೆ ತಲೆನೋವಾದ ಅತೃಪ್ತರ ಬಂಡಾಯ.1
- ಸುಗ್ಗಿ ಕುಣಿತಕ್ಕೆ ಚಾಂಪಿಯನ್ ಪಟ್ಟ: ಮೈಸೂರಿನಲ್ಲಿ ಜಾನಪದ ನೃತ್ಯಗಳ ಸೊಬಗು, ಸಾಂಸ್ಕೃತಿಕ ಸಂಭ್ರಮ ಕಳೆಗಟ್ಟಿತು ಮೈಸೂರು: ಮೈಸೂರು ಬ್ಯೂಟಿಷಿಯನ್ಸ್ ವೆಲ್ಫೇರ್ ಅಸೋಸಿಯೇಷನ್ (ರಿ) ವತಿಯಿಂದ ಹೋಟೆಲ್ ಪ್ರೆಸಿಡೆಂಟ್ನಲ್ಲಿ ಆಯೋಜಿಸಿದ್ದ "ಶೈನ್ ಟುಗೆದರ್ ಮಿಡ್ ಇಯರ್ ಗೆಟ್-ಟುಗೆದರ್" ಕಾರ್ಯಕ್ರಮವು ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಅನಾವರಣಗೊಳಿಸಿದ ಅದ್ಧೂರಿ ವೇದಿಕೆಯಾಗಿತ್ತು. ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆದ ಈ ವಿಶೇಷ ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಗಳ ಸದಸ್ಯರು ಜಾನಪದ ಹಾಗೂ ಸಾಂಪ್ರದಾಯಿಕ ನೃತ್ಯಗಳ ಮೂಲಕ ಪ್ರೇಕ್ಷಕರ ಮನಸೂರೆಗೊಂಡರು. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಗುಂಪು ನೃತ್ಯ ಸ್ಪರ್ಧೆಯಲ್ಲಿ ಮೈಸೂರು ತಂಡದ "ಸುಗ್ಗಿ ಕುಣಿತ" ಪ್ರಥಮ ಸ್ಥಾನ ಪಡೆದು ವಿಜೇತರಾಗಿ ಹೊರಹೊಮ್ಮಿತು. ರೈತರ ಬದುಕು, ಕೊಯ್ಲು ಹಬ್ಬದ ಸಂಭ್ರಮ ಮತ್ತು ಗ್ರಾಮೀಣ ಸಂಸ್ಕೃತಿಯನ್ನು ಮನಮುಟ್ಟುವ ರೀತಿಯಲ್ಲಿ ಬಿಂಬಿಸಿದ ಈ ಪ್ರದರ್ಶನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಯಿತು. ಕೊಳ್ಳೇಗಾಲ ತಂಡವು "ವನ ಸಿರಿ" ಎಂಬ ಪರಿಸರ ಸಂರಕ್ಷಣೆ ಹಾಗೂ ಅರಣ್ಯದ ವೈಭವವನ್ನು ಸಾರುವ ನೃತ್ಯ ಪ್ರದರ್ಶನ ನೀಡಿ ಪ್ರಥಮ ರನ್ನರ್-ಅಪ್ ಸ್ಥಾನ ಗಳಿಸಿತು. ಮಂಡ್ಯ ತಂಡವು "ರೆಟ್ರೋ ಟು ಮೆಟ್ರೋ" ವಿಷಯಾಧಾರಿತ ನೃತ್ಯದ ಮೂಲಕ ಹಳೆಯ ಮತ್ತು ಹೊಸ ಜೀವನಶೈಲಿಯ ಬದಲಾವಣೆಗಳನ್ನು ಮನೋರಂಜನಾತ್ಮಕವಾಗಿ ಮೂಡಿಸಿ ದ್ವಿತೀಯ ರನ್ನರ್-ಅಪ್ ಪ್ರಶಸ್ತಿಗೆ ಭಾಜನವಾಯಿತು. ಇದರ ಜೊತೆಗೆ ಕರ್ನಾಟಕದ ವೈವಿಧ್ಯಮಯ ಜಾನಪದ ಕಲಾರೂಪಗಳಾದ ಡೊಳ್ಳು ಕುಣಿತ, ವೀರಗಾಸೆ, ಕಂಸಾಳೆ, ಪುಟ್ಟರಾಜ ಗವಾಯಿಗಳ ಶೈಲಿಯ ನೃತ್ಯ, ಕೋಲಾಟ, ಕರಗ, ಯಕ್ಷಗಾನ ನೃತ್ಯ, ಹುಲಿವೇಷ ಹಾಗೂ ಸುಗ್ಗಿ ಕುಣಿತ ಮೊದಲಾದ ಕಲಾ ಪರಂಪರೆಯ ವೈಭವವನ್ನು ನೆನಪಿಸುವ ಪ್ರದರ್ಶನಗಳು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದವು. ಖ್ಯಾತ ಶಾಸ್ತ್ರೀಯ ನೃತ್ಯ ಕಲಾವಿದೆಯರಾದ ಶ್ರದ್ಧಾ ಶೆಟ್ಟಿ ಹಾಗೂ ಶ್ರೀವಿದ್ಯಾ ರಾವ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿ, ನೃತ್ಯದ ಭಾವಾಭಿನಯ, ಲಯ, ಸಮನ್ವಯ, ವೇಷಭೂಷಣ ಮತ್ತು ವೇದಿಕೆ ನಿರ್ವಹಣೆ ಸೇರಿದಂತೆ ವಿವಿಧ ಅಂಶಗಳನ್ನು ಆಧರಿಸಿ ವಿಜೇತರನ್ನು ಆಯ್ಕೆ ಮಾಡಿದರು. ಇವರ ತೀರ್ಪು ಸ್ಪರ್ಧೆಗೆ ಹೆಚ್ಚಿನ ವಿಶ್ವಾಸಾರ್ಹತೆ ನೀಡಿತು. ಸಂಘದ ಅಧ್ಯಕ್ಷೆ ವೇದರೈ ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತ ತಂಡಗಳಿಗೆ ಅಭಿನಂದನೆ ಸಲ್ಲಿಸಿದರು. ಸದಸ್ಯರ ಒಗ್ಗಟ್ಟು, ಪ್ರತಿಭೆ ಮತ್ತು ಕರ್ನಾಟಕದ ಸಾಂಸ್ಕೃತಿಕ ವೈಭವವನ್ನು ಒಂದೇ ವೇದಿಕೆಯಲ್ಲಿ ಅನಾವರಣಗೊಳಿಸಿದ ಈ ಕಾರ್ಯಕ್ರಮವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿ, ಮೈಸೂರು ಬ್ಯೂಟಿಷಿಯನ್ಸ್ ವೆಲ್ಫೇರ್ ಅಸೋಸಿಯೇಷನ್ನ ವಿಶಿಷ್ಟ ಸಾಂಸ್ಕೃತಿಕ ಸಂಭ್ರಮವಾಗಿ ಯಶಸ್ವಿಯಾಗಿ ನೆರವೇರಿತು.1
- ಸಚಿವ ಸಿ. ಪುಟ್ಟರಂಗಶೆಟ್ಟಿಗೆ ತವರು ತಾಲೂಕಿನಲ್ಲಿ ಅದ್ಧೂರಿ ಸ್ವಾಗತ ಯಳಂದೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ನೂತನ ಸಚಿವರಾಗಿ ಚಾಮರಾಜನಗರ ಜಿಲ್ಲೆಯಿಂದ ಆಯ್ಕೆಗೊಂಡಿರುವ ಚಾಮರಾಜನಗರ ಶಾಸಕ ಸಿ. ಪುಟ್ಟರಂಗಶೆಟ್ಟಿರವರಿಗೆ ಅವರ ತವರು ತಾಲೂಕಾಗಿರುವ ಯಳಂದೂರು ತಾಲೂಕು ಹಾಗೂ ಸ್ವಗ್ರಾಮದ ಅವರ ಮನೆಯಲ್ಲಿ ಮಂಗಳವಾರ ಅದ್ಧೂರಿ ಸ್ವಾಗತ ಕೋರಲಾಯಿತು. ತಾಲೂಕಿಗೆ ಆಗಮಿಸಿದ ಅವರಿಗೆ ಯರಿಯೂರು ಗ್ರಾಮದ ಭಗೀರಥ ಪುತ್ಥಳಿ ಮುಂಭಾಗ, ಯಳಂದೂರು ಪಟ್ಟಣದ ಜಾಮೀಯಾ ಮಸೀದಿ, ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ ಬಳಿ ಅದ್ಧೂರಿ ಸ್ವಾಗತ ಕೋರಲಾಯಿತು. ನಂತರ ಪಟ್ಟಣದ ಬಳೇಪೇಟೆಯ ಸರ್ಕಲ್ನಲ್ಲಿ ಪಟಾಕಿ ಸಿಡಿಸಲಾಯಿತು ನಂತರ ಇವರ ಸ್ವಗ್ರಾಮದವಾಗಿ ಉಪ್ಪಿಮೋಳೆ ಗ್ರಾಮದ ಇವರ ಮನೆಯಲ್ಲಿ ಮೊಮ್ಮಗ, ಮೊಮ್ಮಗಳು ಸೇರಿದಂತೆ ಇವರ ಕುಟುಂಬಸ್ಥರು, ಬೆಲ್ಲದ ಆರತಿ ಎತ್ತಿ ಸ್ವಾಗತ ಕೋರಿದರು. ಇವರು ಗ್ರಾಮದ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು. ನಂತರ ತಾಲೂಕಿನ ವೈ.ಕೆ.ಮೋಳೆ ಗ್ರಾಮದ ದೊಡ್ಡಮ್ಮ, ಚಿಕ್ಕಮ್ಮತಾಯಿ, ಚಾಮುಂಡೇಶ್ವರಿ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಇಲ್ಲೂ ಕೂಡ ಇವರ ಅಭಿಮಾನಿಗಳ ದೊಡ್ಡ ದಂಡೇ ನೆರೆದಿತ್ತು. ಹೋದಲ್ಲೆಡೆ ಇವರಿಗೆ ಹಾರ, ತುರಾಯಿ ಹಾಕಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಇವರು, ನಮ್ಮ ಜಿಲ್ಲೆಯಲ್ಲಿ ನಾನು ಸಚಿವನಾಗಿ ಆಯ್ಕೆಯಾಗಿರುವುದು ಅತೀವ ಸಂತಸ ಮೂಡಿಸಿದೆ. ನನ್ನ ಮೇಲೆ ವಿಶ್ವಾಸವಿಟ್ಟು ಸಚಿವ ಸ್ಥಾನ ನೀಡಿದ ಪಕ್ಷದ ವರಿಷ್ಠರಿಗೆ ನಾನು ಆಭಾರಿಯಾಗಿದ್ದೇನೆ. ಪಕ್ಷ ನೀಡಿರುವ ಜವಾಬ್ದಾರಿಯನ್ನು ಅತ್ಯಂತ ಅಚ್ಚುಕಟ್ಟಾಗಿ, ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ನಮ್ಮ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹೆಚ್ಚು ಆದ್ಯತೆಯನ್ನು ನೀಡುತ್ತೇನೆ. ಇಡೀ ಜಿಲ್ಲೆಯ ಜನರು ನನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ಅನುಗುಣವಾಗಿ ನನ್ನ ಕರ್ತವ್ಯವನ್ನು ನಿರ್ವಹಿಸುತ್ತೇನೆ ಎಂದರು. ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ನಗರಸಭೆ ಮಾಜಿ ಸದಸ್ಯ ಮುಡಿಗುಂಡ ಶಾಂತರಾಜು, ಟಿಎಪಿಸಿಎಂಎಸ್ ಮಾಜಿ ಉಪಾಧ್ಯಕ್ಷ ಕುಸುಮರಾಜು, ಪುಟ್ಟರಂಗಶೆಟ್ಟಿ ಅಭಿಮಾನಿ ಬಳಗದ ಅಧ್ಯಕ್ಷ ಯರಿಯೂರು ಕಿರಣ್, ಕಾಂಗ್ರೆಸ್ ಪಕ್ಷದ ಅಸಂಘಟಿತ ಕಾರ್ಮಿಕರ ಜಿಲ್ಲಾಧ್ಯಕ್ಷ ಕೃಷ್ಣಾಪುರ ದೇವರಾಜು, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಗೌಡಹಳ್ಳಿ ರಾಜೇಶ್, ಶಾಂತಮಲ್ಲು ಸೇರಿದಂತೆ ಅನೇಕರು ಇದ್ದರು.2
- ಆತ್ಮಹತ್ಯೆ ಮಾಡಿಕೊಂಡರೈತಕುಟುಂಭಕ್ಕೆ 25 ಲಕ್ಷ ಪರಿಹಾರಕ್ಕೆ ಆಗ್ರಹ ಕರ್ನಾಟಕ ಪ್ರಾಂತ ರೈತ ಸಂಘ ಆಗ್ರಹ, ಪ್ರತಿಭಟನೆ ಮಂಡ್ಯ- ಸಾಲದ ಬಾದೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಬಿ ಹಟ್ನಾ ಗ್ರಾಮದ ದಂಪತಿಗಳು ಹಾಗೂ ಪಾಂಡುಪುರ ತಾಲೂಕು ಮಂಡಿ ಬೆಟ್ಟಹಳ್ಳಿ ಗ್ರಾಮದ ಎಂ ಎಸ್ ಮಂಜುನಾಥ್ ಕುಟುಂಬಕ್ಕೆ ತಲಾ ಇಪ್ಪತ್ತೈದು ಸಾವಿರ ಪರಿಹಾರ ನೀಡುವಂತೆ ಕೋರಿ, ರಾಜ್ಯ ಸರ್ಕಾರ ರೈತರ ಎಲ್ಲಾ ಸಾಲ ಮನ್ನಾ ಮಾಡುವಂತೆ ಹಲವು ಬೇಡಿಕೆಗಳನ್ನು ಇಟ್ಟು ಇಂದು ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿತು.1